Tag: sister

  • ಮಕ್ಕಳಾಗದ ಕೊರಗು – 58ರ ಮಹಿಳೆ ಆತ್ಮಹತ್ಯೆ

    ಮಕ್ಕಳಾಗದ ಕೊರಗು – 58ರ ಮಹಿಳೆ ಆತ್ಮಹತ್ಯೆ

    ಚಿಕ್ಕಮಗಳೂರು: ಮಕ್ಕಳಾಗಿಲ್ಲ ಎಂದು ಮನನೊಂದು 58 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬಿಳುವಾಲ ಗ್ರಾಮದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನ 58 ವರ್ಷದ ಮಲ್ಲಿಗಮ್ಮ ಎಂದು ಗುರುತಿಸಲಾಗಿದೆ. ಮೃತ ಮಲ್ಲಿಗಮ್ಮ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹುಂಡಿಗನಾಳು ಗ್ರಾಮದ ಮಹಾದೇವಪ್ಪ ಎಂಬವರೊಂದಿಗೆ ಸುಮಾರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಮಕ್ಕಳಾಗಿರಲಿಲ್ಲ. ಮಕ್ಕಳಾಗದ ಹಿನ್ನೆಲೆಯಲ್ಲಿ ದಂಪತಿ ನಡುವೆ ಆಗಾಗ ವೈವಾಹಿಕ ಜೀವನದಲ್ಲಿ ಬಿರುಕು ಕಂಡಿತ್ತು. ಜಗಳ ಕೂಡ ನಡೆಯುತ್ತಿತ್ತು. ಒಂದೆಡೆ ಮಕ್ಕಳಾಗಿಲ್ಲ. ಮತ್ತೊಂದೆಡೆ ಗಂಡನ ಜೊತೆ ಜಗಳದಿಂದ ಮನನೊಂದು ಮಲ್ಲಿಗಮ್ಮ ಕಳೆದ ನಾಲ್ಕು ವರ್ಷಗಳಿಂದ ಬಿಳುವಾಲ ಗ್ರಾಮದ ತಂಗಿ ಮನೆಗೆ ಬಂದು ವಾಸವಿದ್ದರು.

    ಗುರುವಾರ ಗ್ರಾಮದ ಸಮೀಪವಿರುವ ಗುಡ್ಡೆಕಲ್ಲು ಹತ್ತಿರ ಬಟ್ಟೆ ತೊಳೆಯಲು ಹೋಗಿದ್ದ ಮಲ್ಲಿಗಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಮಲ್ಲಿಗಮ್ಮನ ತಂಗಿ ಮಗ ಶಿವರಾಜ್‍ಕುಮಾರ್ ಕಡೂರು ಠಾಣೆಗೆ ದೂರು ನೀಡಿದ್ದಾರೆ. ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕೊರೊನಾ ಇಲ್ಲ ಅಂದವರ ಕಪಾಳಕ್ಕೆ ಹೊಡೆಯಿರಿ: ನಟಿ ಸುನೇತ್ರಾ ಪಂಡಿತ್

    ಕೊರೊನಾ ಇಲ್ಲ ಅಂದವರ ಕಪಾಳಕ್ಕೆ ಹೊಡೆಯಿರಿ: ನಟಿ ಸುನೇತ್ರಾ ಪಂಡಿತ್

    – ಮಾಧ್ಯಮದಲ್ಲಿ ಬರುತ್ತಿರುವುದು ಸುಳ್ಳಲ್ಲ

    ಬೆಂಗಳೂರು: ಯಾರು ಕೊರೊನಾ ಇಲ್ಲ ಅಂತ ಬೇಜಬ್ದಾರಿತನ ತೋರಿಸುತ್ತಾರೋ ಅವರ ಕಪಾಳಕ್ಕೆ ಹೊಡೆಯಿರಿ ಅಂತ ನಟಿ ಸುನೇತ್ರಾ ಪಂಡಿತ್ ಹೇಳಿದ್ದಾರೆ.

    ಸುಮ್ಮನಳ್ಳಿ ಚಿತಾಗಾರ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಕ್ಕ ಕೋವಿಡ್ ನಿಂದ ಸತ್ತೋದ್ಳು. ಒಂದು ದಿನ ಕೇರ್‍ಲೆಸ್ ಹಾಗೂ ಮಿಸ್ ಗೈಡ್ ಆಗಿದ್ದಕ್ಕೆ ಅಂತ ಹೇಳೋಕೆ ನಾನು ಬಯಸಲ್ಲ. ಆದರೆ ಅದೂ ಒಂದು ಕಾರಣ ಎಂದು ಹೇಳಿದರು.

    ನಮ್ಮ ಅಕ್ಕ ಹೊರಟೋದ್ಳು. ಅವಳಿಗೆ ಮಕ್ಕಳಿದ್ದಾರೆ, ಆ ಮಕ್ಕಳು ಏನ್ ಮಾಡ್ಬೇಕು. ಈ ರೀತಿಯ ಪರಿಸ್ಥಿತಿ ಯಾರಿಗೂ ಬರಬಾರದು. ಕೊರೊನಾ ಇಲ್ಲ ಅಂತ ಹೇಳೋರಿಗೆ ಕಪಾಳಕ್ಕೆ ಹೊಡೆಯಿರಿ. ಯಾರು ಯಾರಿಗೆ ಕೊರೊನಾ ಅನುಭವ ಆಗಿದೆಯೋ ಅವರಿಗೆ ಗೊತ್ತು ಅದರ ಕಷ್ಟ. ಬೇಜವಾಬ್ದಾರಿತನವೇ ಬಹುಮುಖ್ಯ ಸಮಸ್ಯೆ ಅಂತ ಗರಂ ಆದರು.

    ಡಯಾಬಿಟಿಸ್ ಯಾರಿಗೆ ಇಲ್ಲ ಹೇಳಿ, ಪ್ರತಿಯೊಬ್ಬರಿಗೂ ಇದೆ. ಅದು ಎಲ್ಲರಿಗೂ ಗೊತ್ತಿರುವ ಸತ್ಯ. ದಯವಿಟ್ಟು ಬಿಬಿಎಂಪಿ ಒಂದು ಬೆಡ್ ಅಲರ್ಟ್ ಮಾಡುವಾಗ ಐಸಿಯು ಇರೋ ಆಸ್ಪತ್ರೆಗೆ ಅಲರ್ಟ್ ಮಾಡಿ ಎಂದು ಕಣ್ಣೀರಾಕುತ್ತಾ ಮನವಿ ಮಾಡಿಕೊಂಡರು.

    ಈವಾಗ ನನ್ನ ಅಕ್ಕ ಮೃತಪಟ್ಟಳು ಅಂತ ಹೇಳ್ತಿಲ್ಲ. ಒಬ್ಬ ಸಾಮಾನ್ಯ ನಾಗರಿಕಳಾಗಿ ಕೇಳಿಕೊಳ್ಳುತ್ತಿದ್ದೇನೆ. ನಾಯಕರು ಹಾಗೂ ಸರ್ಕಾರ ಎಲ್ಲರಿಗೂ ಒತ್ತಡ ಇದೆ ಎಂದು ಗೊತ್ತು. ಕೆಲಸ ಇಲ್ಲದೆ ಒದ್ದಾಡುತ್ತಿರುವ ಪ್ರತಿಯೊಬ್ಬ ಮನುಷ್ಯನಿಗೂ ಪ್ರೆಶರ್ ಇದೆ. ಮೀಡಿಯಾದವರಿಗೂ ಪ್ರೆಶರ್ ಇದೆ. ಎಷ್ಟು ಕಷ್ಟಪಟ್ಟು ಅವರು ಇದನ್ನೆಲ್ಲ ಕವರ್ ಮಾಡ್ಬೇಕು. ಕಷ್ಟಪಟ್ಟು ನ್ಯೂಸ್ ಮಾಡಬೇಕು. ಎಲ್ಲಾ ಗೊತ್ತು. ಆದರೂ ನಮ್ಮ ಜೀವನ ನಮ್ಮ ಕೈಯಲ್ಲಿದೆ ಎಂದು ತಿಳಿಸಿದರು.

  • ಹಾಡಹಗಲೇ ನಡುರಸ್ತೆಯಲ್ಲಿ ಸಹೋದರಿಯನ್ನು 10 ಬಾರಿ ಇರಿದು ಕೊಂದ..!

    ಹಾಡಹಗಲೇ ನಡುರಸ್ತೆಯಲ್ಲಿ ಸಹೋದರಿಯನ್ನು 10 ಬಾರಿ ಇರಿದು ಕೊಂದ..!

    – ಕೊಲೆಗೈದು ಯಾರಿಗೂ ಹೆದರಲ್ಲ ಎಂದ ಆರೋಪಿ
    – ಸ್ಥಳದಲ್ಲೇ ಇದ್ದು ಪೊಲೀಸರಿಗೆ ಶರಣಾದ

    ಗಾಂಧಿನಗರ: ಹಾಡಹಗಲೇ ನಡುರಸ್ತೆಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಸಹೋದರ 8-10 ಬಾರಿ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ರಾಜ್‍ಕೋಟ್ ನ ಮುಂದ್ರಾ ಪಟ್ಟಣದಲ್ಲಿ ನಡೆದಿದೆ.

    ಗಂಭೀರ ಗಾಯಗೊಂಡಿರುವ ಮಹಿಳೆಯೊಬ್ಬರು ಆಕೆಯ ಮನೆ ಮುಂದೆ ಜೋರಾಗಿ ಕಿರುಚಾಡುತ್ತಿರುವುದನ್ನು ಸ್ಥಳೀಯ ನಿವಾಸಿಗಳು ನೋಡಿದ್ದಾರೆ. ಆಕೆಯ ಬಟ್ಟೆ ರಕ್ತಸಿಕ್ತವಾಗಿತ್ತು. ಆದರೆ ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿತ ನೆರೆಹೊರೆಯವರಿಗೆ ಆಘಾತವೂ ಆಗಿದೆ.

    ಸಾರ್ವಜನಿಕರ ಮುಂದೆಯೇ ಸಹೋದರ ಸಹೋದರಿಯ ಹಿಂದೆಯೇ ಓಡಿ ಆಕೆ ಸಾಯುವವರೆಗೆ ಅಂದರೆ ಸುಮಾರು 8-10 ಬಾರಿ ಚಾಕುವಿನಿಂದ ಇರಿದಿದ್ದಾನೆ.

    22 ವರ್ಷದ ಸಹೋದರಿ ರೀನಾಳನ್ನು ಕೊಲೆ ಮಾಡಿದ ಬಳಿಕವೂ ಆರೋಪಿ ಪ್ರೇಮ್‍ಸಂಗ್ ಅಲ್ಲಿಂದ ಕದಲಿಲ್ಲ. ಸಹೋದರಿಯ ಶವದ ಸುತ್ತಮುತ್ತ ಓಡಾಡುತ್ತಿದ್ದನು. ಅಲ್ಲದೆ ನಾನು ನನ್ನ ಸಹೋದರಿಯನ್ನು ಕೊಲೆ ಮಾಡಿದ್ದೇನೆ. ಆದರೆ ನಾನು ಯಾರಿಗೂ ಹೆದರೋ ಮಗನಲ್ಲ ಎಂದು ಜೋರಾಗಿ ಕಿರುಚುತ್ತಾ ಆ ಕಡೆ ಈ ಕಡೆ ಓಡಾಡಿದ್ದಾನೆ.

    ಈ ವೇಳೆ ಸ್ಥಳೀಯರು ಎಲ್ಲೂ ಹೋಗಬೇಡ ಪೊಲೀಸ್ ಬರೋವರೆಗೂ ಅಲ್ಲೇ ಇರು ಎಂದು ಹೇಳಿದ್ದಾರೆ. ಅದಕ್ಕೂ ಪ್ರೇಮ್‍ಸಂಗ್ ಒಪ್ಪಿಕೊಂಡಿದ್ದು, ಸ್ಥಳದಿಂದ ಎಲ್ಲೂ ಹೋಗಿಲ್ಲ. ಕೊನೆಗೆ ಪೊಲೀಸರ ಮುಂದೆ ಶರಣಾಗಿದ್ದಾನೆ.

    ಪ್ರೇಮ್ ಸಂಗ್ ನನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ, ರೀನಾಳಿಗೆ ಬೇರೆಯೊಬ್ಬನ ಜೊತೆ ಸಂಬಂಧವಿತ್ತು ಎಂದು ತಿಳಿಸಿದ್ದಾನೆ. ಪ್ರೇಮ್ ಸಂಗ್ ತನ್ನ ಸಹೋದರಿಯನ್ನು ಚುಚ್ಚಿ ಚುಚ್ಚಿ ಕೊಲೆ ಮಾಡಿದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಕೆಲ ವರ್ಷಗಳಿಂದ ರೀನಾ ಆಕೆಯ ಪತಿಯಿಂದ ದೂರವಾಗಿದ್ದಳು. ಆ ಬಳಿಕದಿಂದ ಆಕೆ ಮಾರುತಿ ನಗರದಲ್ಲಿ ಭವನ್ ಜೋಗಿ ಎಂಬಾತನೊಂದಿಗೆ ವಾಸವಾಗಿದ್ದಳು. 2014ರಲ್ಲಿ ರೀನಾಳ ತಂದೆಯನ್ನು ಜೋಗಿ ಕೊಲೆ ಮಾಡಿದ್ದು, ಖುಲಾಸೆಗೊಂಡಿದ್ದನು ಎಂದು ಹಿರಿಯ ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಹೋದರಿಯ ಗುಣನಡೆತೆಯ ಬಗ್ಗೆ ಇತರರು ಮಾತನಾಡುತ್ತಿಒರುವುದು ಪ್ರೇಮ್ ಸಿಂಗ್ ಕೋಪೋದ್ರಿಕ್ತನಾಗಲು ಕಾರಣವಾಗಿತ್ತು. ಇದೇ ಕಾರಣದಿಂದ ಪ್ರೇಮ್ ಸಿಂಗ್, ರೀನಾಳನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಕೊಲೆಗೆ ಬಳಸಿದ್ದ ಮಾರಕಾಸ್ತ್ರದ ಸಹಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಈ ಕೊಲೆಗೆ ಯಾರಾದರೂ ಪ್ರೇರಣೆಯಾಗಿದ್ದಾರಾ ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ತಂಗಿಯ ಪತಿಯನ್ನು ಹತ್ಯೆಗೈದು ಠಾಣೆಗೆ ರುಂಡ ತಂದ ಅಣ್ಣ

    ತಂಗಿಯ ಪತಿಯನ್ನು ಹತ್ಯೆಗೈದು ಠಾಣೆಗೆ ರುಂಡ ತಂದ ಅಣ್ಣ

    ಭೂಪಾಲ್: ಓಡಿ ಹೋಗಿ ಮದುವೆಯಾದ ಸಹೋದರಿ ಕುರಿತಾಗಿ ಕೋಪಗೊಂಡ ಅಣ್ಣ ಆಕೆಯ ಪತಿಯ ರುಂಡ ಕತ್ತರಿಸಿ ಠಾಣೆಗೆ ತಂದು ಶರಣಾಗಿರುವ ಘಟನೆ ಮಧ್ಯಪ್ರದೇಶದ ಜಬುಲ್ಪುರದಲ್ಲಿ ನಡೆದಿದೆ.

    ಶಿವರಾಮ್ ಶುಕ್ಲಾ ಅಲಿಯಾಸ್ ಧೀರಜ್ ಬಂಧಿತ ಆರೋಪಿಯಾಗಿದ್ದಾನೆ. ಮೃತನನ್ನು ವಿಜೇತ್ ಕಶ್ಯಪ್(32) ಎಂದು ಗುರುತಿಲಾಗಿದೆ. ಸಹೋದರಿ ಪ್ರೀತಿಸಿ ಮದುವೆಯಾಗಿದ್ದಾಳೆ ಎಂದು ಕೊಂಪಗೊಂಡ ಸಹೋದರ ಆಕೆಯ ಪತಿಯನ್ನು ಕೊಲೆ ಮಾಡಿದ್ದಾನೆ.

    ವಿಜೇತ್ ಕಶ್ಯಪ್ ಕಳೆದ ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದರು. ಮದುವೆಯಾಗಿ ಮನೆಗೆ ಮರಳಿ ಬಂದಿದ್ದರು. ಈ ವೇಳೆ ಕುಪಿತಗೊಂಡು ಈ ಕೃತ್ಯ ಎಸಗಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ತಿಲ್ವಾರಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸತೀಶ್ ಪಟೇಲ್ ತಿಳಿಸಿದ್ದಾರೆ.

    ಹೊಲದಲ್ಲಿ ಬಿದ್ದಿದ್ದ ರುಂಡ ವಿಲ್ಲದ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದೆ. ಇದು ಕೊಲೆಯೇ ಅಥವಾ ಆತ್ಮಹತ್ಯೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯವರ ವಿರುದ್ಧವಾಗಿ ಪ್ರೀತಿಸಿ ಮದುವೆಯಾಗಿ ಯುವತಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

  • ತಂಗಿಯನ್ನು ಪ್ರೀತಿಸಿದ್ದಕ್ಕೆ ಕತ್ತು ಕೂಯ್ದು ಕೊಂದ

    ತಂಗಿಯನ್ನು ಪ್ರೀತಿಸಿದ್ದಕ್ಕೆ ಕತ್ತು ಕೂಯ್ದು ಕೊಂದ

    ಭೋಪಾಲ್: ತಂಗಿಯನ್ನು ಪ್ರೀತಿಸಿದ ಕಾರಣಕ್ಕೆ ಗೆಳೆಯನ ಕತ್ತು ಕೂಯ್ದು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಕಿಶನ್ ನಿಹಾನಾ(22) ಎಂದು ಗುರುತಿಸಲಾಗಿದೆ. ಯುವಕನ ಮೃತದೇಹ ರಕ್ತದ ಮಡುವಿನಲ್ಲಿ ಪೊಲೀಸರಿಗೆ ಪತ್ತೆಯಾಗಿದ್ದು, ಯುವಕನನ್ನು ಆರೋಪಿ ಕತ್ತು ಕೂಯ್ದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಈ ಘಟನೆಯು ಲುಸಾಡಿಯಾ ಪೊಲೀಸ್ ಠಾಣೆಯ ನಿರಂಜಂಜಪುರದಲ್ಲಿ ಜರುಗಿದೆ.

    ಈ ಕುರಿತಂತೆ ತನಿಖೆ ವೇಳೆ, ಮೃತ ಯುವಕನ ಕುಟುಂಬಸ್ಥರು, 2 ದಿನಗಳ ಹಿಂದೆ ಕಿಶನ್ ಸ್ನೇಹಿತ ಅನಿಲ್ ಪಾಂಚಲ್ ಎಂಬಾತ ಕರೆ ಮಾಡಿದ್ದನು. ಆತನನ್ನು ಭೇಟಿ ಮಾಡಲು ಹೋದ ಕಿಶನ್ ಮಧ್ಯರಾತ್ರಿಯಾದರೂ ಮನೆಗೆ ಹಿಂದಿರುಗದಿದ್ದಾಗ, ಗಾಬರಿಗೊಂಡು ಮನೆಯವರು ದೂರು ದಾಖಲಿಸಿದರು. ಅಲ್ಲದೆ ಕಿಶನ್ ಕಾಣೆಯಾದಗನಿಂದ ಅನಿಲ್ ಹಾಗೂ ಆತನ ಕುಟುಂಬಸ್ಥರು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಮಧ್ಯೆ ದಾರಿಹೋಕರೊಬ್ಬರು ಮೃತದೇಹ ಪತ್ತೆಯಾಗಿರುವ ವಿಚಾರವಾಗಿ ಪೊಲೀಸರಿಗೆ ತಡ ರಾತ್ರಿ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ದೇಹವನ್ನು ಕಿಶನ್ ಎಂದು ಗುರುತಿಸಿ ಎಂವಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಿದರು.

    ಘಟನೆ ವಿಚಾರವಾಗಿ ಮಾತನಾಡಿದ ಪೊಲೀಸರು, ಕಿಶನ್ ಸ್ನೇಹಿತ ಅನಿಲ್ ಪಂಚಲ್ ಸಹೋದರಿಯನ್ನು ಪ್ರೀತಿಸುತ್ತಿದ್ದನು. ಈ ವಿಚಾರ ತಿಳಿದ ಅನಿಲ್ ನಿರ್ಜನ ಪ್ರದೇಶಕ್ಕೆ ಕಿಶನ್‍ನನ್ನು ಕರೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಘಟನೆ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶೀಘ್ರವೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗುತ್ತದೆ ಎಂದು ಹೇಳಿದರು.

  • ಐಸ್‍ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ – ಮಗ, ಸಹೋದರಿ ಸಾವು

    ಐಸ್‍ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ – ಮಗ, ಸಹೋದರಿ ಸಾವು

    ತಿರುವನಂತಪುರ: ಆತ್ಮಹತ್ಯೆ ಮಾಡಿಕೊಳ್ಳಲೆಂದು ತಾಯಿ ತಂದಿಟ್ಟಿದ್ದ ಐಸ್‍ಕ್ರೀಂ ಸೇವಿಸಿ ಆಕೆಯ ಮಗ ಹಾಗೂ ಸಹೋದರಿ ಮೃತಪಟ್ಟ ವಿಲಕ್ಷಣ ಘಟನೆ ಕಾಸರಗೋಡಿನ ಕಾಂಞಗಾಡ್ ನಲ್ಲಿ ನಡೆದಿದೆ.

    ಮೃತ ದುರ್ದೈವಿಗಳನ್ನು ಅದ್ವೈತ್(5) ಹಾಗೂ ದೃಶ್ಯ(19) ಎಂದು ಗುರುತಿಸಲಾಗಿದೆ. ಫೆ.11 ರಂದು ವರ್ಷಾ(25) ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಅಂತೆಯೇ ಅದಕ್ಕಾಗಿಯೇ ತಂದಿದ್ದ ಐಸ್‍ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿ ಸ್ವಲ್ಪ ತಿಂದು ಉಳಿದಿದ್ದನ್ನು ಅಲ್ಲಿಯೇ ಟೇಬಲ್ ಮೇಲಿಟ್ಟು ಸ್ನಾನಕ್ಕೆ ತೆರಳಿದ್ದಳು. ಈ ವೇಳೆ ಅದನ್ನು ನೋಡಿದ ಅದ್ವೈತ್ ಹಾಗೂ ದೃಶ್ಯ ತಮಗಾಗಿ ಇಟ್ಟಿದ್ದೆಂದು ಐಸ್‍ಕ್ರೀಂ ಸೇವಿಸಿದ್ದಾರೆ. ಬಳಿಕ ಎಲ್ಲರೂ ಒಟ್ಟಿಗೆ ಕೂತು ಬಿರಿಯಾನಿ ತಿಂದು ಮಲಗಿದ್ದರು.

    ಇತ್ತ ಮಲಗಿದ ಸ್ವಲ್ಪ ಸಮಯದ ನಂತರ ಅದ್ವೈತ್ ಹಾಗೂ ದೃಶ್ಯ ವಾಂತಿ ಮಾಡಲು ಶುರು ಮಾಡಿದ್ದರು. ಕೂಡಲೇ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಫೆ.12ರಂದು ಮುಂಜಾನೆ ಅದ್ವೈತ್ ಮೃತಪಟ್ಟರೆ, ಫೆ.24ರಂದು ದೃಶ್ಯ ಸಾವನ್ನಪ್ಪಿದ್ದಳು. ಮೊದಲು ಬಿರಿಯಾನಿ ತಿಂದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಅಂದುಕೊಂಡಿದ್ದರು. ಆಧರೆ ಮರಣೋತ್ತರ ಪರೀಕ್ಷೆಯ ವೇಳೆ ಇಲಿ ಪಾಷಾಣ ತಿಂದಿರುವ ವಿಚಾರ ಬೆಳಕಿಗೆ ಬಂದಿದೆ.

    ವಿಷಮಿಶ್ರಿತ ಐಸ್ ಕ್ರೀಂ ಅನ್ನು ವರ್ಷಾ ಹೆಚ್ಚು ತಿಂದಿರಲಿಲ್ಲ. ಹೀಗಾಗಿ ಆಕೆಗೆ ಏನೂ ಅಪಾಯ ಸಂಭವಿಸಿಲ್ಲ. ಇತ್ತ ಮಗ ಹಾಗೂ ಸಹೋದರಿ ಅನಾರೋಗ್ಯಕ್ಕೀಡಾದರೂ ವರ್ಷಾ ಈ ವಿಚಾರ ಬಹಿರಂಗಪಡಿಸಿರಲಿಲ್ಲ. ಆದರೆ ಸಹೋದರಿಯ ಮರಣೋತ್ತರ ಪರೀಕ್ಷೆಯ ವೇಳೆ ಇಲಿ ಪಾಷಾಣ ವಿಚಾರ ಬೆಳಕಿಗೆ ಬಂದ ನಂತರ ತಾನು ಐಸ್ ಕ್ರೀಂ ನಲ್ಲಿ ಇಲಿಪಾಷಾಣ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.

    ಒಟ್ಟಿನಲ್ಲಿ ತಾನು ಆತ್ಮಹತ್ಯೆಗೆ ಮಾಡಿಕೊಳ್ಳಲು ನಿರ್ಧರಿಸಿ ಮಗ ಹಾಗೀ ಸಹೋದರಿ ಪ್ರಾಣ ಬಿಟ್ಟಿದ್ದಾರೆ. ಆದರೆ ವರ್ಷಾ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸದ್ಯ ವರ್ಷಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಅಕ್ಕನ ಜೊತೆಗೆ ಜಗಳ ತೆಗೆದ ಬಾವನ ಹತ್ಯೆಗೈದ ಬಾಮೈದ

    ಅಕ್ಕನ ಜೊತೆಗೆ ಜಗಳ ತೆಗೆದ ಬಾವನ ಹತ್ಯೆಗೈದ ಬಾಮೈದ

    ಬೆಂಗಳೂರು: ಅಕ್ಕನ ಜೊತೆ ಜಗಳ ತೆಗೆದ ಭಾವನನ್ನ ಭೀಕರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರಿನ ನಂದಿನಿ ಬಡಾವಣೆಯ ಕಂಠೀರವ ನಗರ ರಸ್ತೆಯಲ್ಲಿ ನಡೆದಿದೆ.

    ಅಜೀಮ್ ಉಲ್ಲಾ ಕೊಲೆಯಾದ ವ್ಯಕ್ತಿ. ಅಜೀಮ್ ಪತ್ನಿಯೊಂದಿಗೆ ನಂದಿನಿ ಬಡಾವಣೆಯಲ್ಲಿ ವಾಸವಾಗಿದ್ದನು. ಆದ್ರೆ ಪದೇ ಪದೇ ಪತ್ನಿ ಜೊತೆ ಅಜೀಮ್ ಜಗಳ ಮಾಡಿಕೊಳ್ಳುತ್ತಿದ್ದನು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಕನ ಕಷ್ಟ ನೋಡದ ತಮ್ಮ ಖಾದರ್ ಭಾನುವಾರ ರಾತ್ರಿ ಬಾವನನ್ನು ಕೊಲೆಗೈದಿದ್ದಾನೆ. ಕೊಲೆಯ ಬಳಿಕ ಖಾದರ್ ಪರಾರಿಯಾಗಿದ್ದಾನೆ.

    ನಡೆದಿದ್ದು ಏನು?: ಸಂಜೆ ಐದು ಗಂಟೆಗೆ ಮನೆಗೆ ಬಂದ ಅಜೀಮ್ ಪತ್ನಿ ಜೊತೆ ಜಗಳ ಮಾಡಲು ಆರಂಭಿಸಿದ್ದನು. ಜಗಳದ ವಿಷಯ ತಿಳಿದ ಖಾದರ್ ಕೂಲಿ ನಗರದಿಂದ ಗೆಳೆಯರ ಜೊತೆ ಅಕ್ಕನ ಮನೆಗೆ ಬಂದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ರಾತ್ರಿ ಸುಮಾರು 11.30ಕ್ಕೆ ಕಲ್ಲಿನಿಂದ ಅಜೀಮ್ ತಲೆಯನ್ನ ಜಜ್ಜಿ ಖಾದರ್ ಕೊಲೆ ಮಾಡಿದ್ದಾನೆ.

    ಸಾರ್ವಜನಿಕರು ಕೊಲೆಯ ವಿಷಯವನ್ನು ನಂದಿನಿ ಲೇಔಟ್ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನ ಆಸ್ಪತ್ರೆಗೆ ರವಾನಿಸಿದ್ದು, ಎಸ್ಕೇಪ್ ಆಗಿರುವ ಖಾದರ್ ಬಂಧನಕ್ಕೆ ಬಲೆ ಬೀಸಿದ್ದಾರೆ.

  • ದಿವಂಗತ ತಂದೆಯನ್ನ ತಂಗಿ ಮದ್ವೆಗೆ ಕರೆ ತಂದ ಅಕ್ಕ

    ದಿವಂಗತ ತಂದೆಯನ್ನ ತಂಗಿ ಮದ್ವೆಗೆ ಕರೆ ತಂದ ಅಕ್ಕ

    – ಅಕ್ಕನಿಂದ ವಧುವಿನ ಮೊಗದಲ್ಲಿ ಮಂದಹಾಸ
    – ನವದಂಪತಿಗೆ ತಂದೆಯ ಆರ್ಶೀವಾದ

    ಚೆನ್ನೈ: ತಂದೆ ಇಲ್ಲದ ನೋವಿನಲ್ಲಿದ್ದ ವಧುವಿನ ಮೊಗದಲ್ಲಿ ಮಂದಹಾಸ ಮೂಡುವಂತೆ ಅಕ್ಕ ಮಾಡಿದ ಪ್ಲಾನ್ ನೋಡಿ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಧನರಾಗಿದ್ದ ತಂದೆಯ ಅನುಪಸ್ಥಿತಿ ಮದುವೆ ಮನೆಯಲ್ಲಿ ಎದ್ದು ಕಾಣುತ್ತಿತ್ತು. ಸಂಭ್ರಮದಲ್ಲಿಯೂ ವಧು ಸೇರದಂತೆ ಕುಟುಂಬಸ್ಥರು ದುಃಖದಲ್ಲಿದ್ದರು. ವಧುವಿನ ಅಕ್ಕ ಮಾಡಿದ ಪ್ಲಾನ್ ನಿಂದಾಗಿ ಮದುವೆ ಸಂಭ್ರಮದಿಂದ ನಡೆದಿದ್ದು, ಸಂತೋಷದಿಂದ ಕುಟುಂಬಸ್ಥರ ಕಣ್ಣಾಲಿಗಳು ತೇವಗೊಂಡಿದ್ದವು.

    ತಮಿಳುನಾಡಿನ ಪುದುಕೊಟ್ಟಾಯಿಯಲ್ಲಿ ಈ ಮದುವೆ ನಡೆದಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಲಕ್ಷ್ಮಿಪ್ರಭಾ ತಮ್ಮ ತಂದೆಯ ಪುತ್ಥಳಿಯನ್ನ ಸೋದರಿ ಭುವನೇಶ್ವರಿ ಮದುವೆಯಲ್ಲಿ ಕಾಣಿಕೆಯಾಗಿ ನೀಡಿದ್ದಾರೆ. ಲಕ್ಷ್ಮಿ ಪ್ರಭಾ ಮೂರ್ತಿಗಾಗಿ ಸುಮಾರು 6 ಲಕ್ಷ ರೂ. ಖರ್ಚು ಮಾಡಿದ್ದಾರೆ.

    ಮೂರ್ತಿಯ ಬೆಲೆ ಹೆಚ್ಚಿರಬಹುದು. ಆದ್ರೆ ಮದುವೆ ದಿನ ತಂಗಿ ಖುಷಿಯಾಗಿರೋದು ನನಗೆ ಮುಖ್ಯವಾಗಿತ್ತು. ಆಕೆಯ ಸಂತೋಷದಿಂದ ಹಣ ನನಗೆ ಮುಖ್ಯ ಅಲ್ಲ. ಮದುವೆ ದಿನ ತಂದೆ ನಮ್ಮ ಜೊತೆಯಲ್ಲಿದ್ದ ವಿಶೇಷ ಅನುಭವ ನಮಗೆ ಸಿಕ್ತು. ನಂತರ ನವದಂಪತಿ ತಂದೆಯ ಆರ್ಶೀವಾದ ಸಹ ಪಡೆದುಕೊಂಡರು ಎಂದು ಲಕ್ಷ್ಮಿಪ್ರಭಾ ಹೇಳುತ್ತಾರೆ.

  • ಯೂಟರ್ನ್ ತೆಗೆದುಕೊಳ್ಳುವ ವೇಳೆ ಅಪಘಾತ- ಅಣ್ಣ, ತಂಗಿ ದುರ್ಮರಣ

    ಯೂಟರ್ನ್ ತೆಗೆದುಕೊಳ್ಳುವ ವೇಳೆ ಅಪಘಾತ- ಅಣ್ಣ, ತಂಗಿ ದುರ್ಮರಣ

    ತಲ್ಲಹಸ್ಸಿ(ಫ್ಲೋರಿಡಾ): ಅಣ್ಣ-ತಂಗಿ ಇಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಫ್ಲೋರಿಡಾ ಹೆದ್ದಾರಿಯಲ್ಲಿ ನಡೆದಿದೆ.

    ಮೃತರನ್ನು ಡೊಮಿನಿಕ್ ಮಿಲಿಸ್ (21) ಮತ್ತು ಡ್ಯಾನಿಕಾ ಮಿಲಿಸ್(18) ಎಂದು ಗುರುತಿಸಲಾಗಿದೆ. ಇವರು ವಿಸ್ ಓಮ್ರೊದ ನಿವಾಸಿಗಳಾಗಿದ್ದಾರೆ.

    ಅಣ್ಣ- ತಂಗಿ ಇಬ್ಬರು ಇಂಟನ್ರ್ಯಾಷನಲ್ ಸ್ಪೀಡ್‍ವೇನಲ್ಲಿ ಕ್ರಿಸ್‍ಮಸ್ ದೀಪಗಳನ್ನು ನೋಡಿ ಮನೆಗೆ ಬರುತ್ತಿದ್ದರು. ಸಂಜೆ 7 ಗಂಟೆ ಸುಮಾರಿಗೆ ಡೇಟೋನಾ ಬೀಚ್ ಬಳಿ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬನು ಯು-ಟರ್ನ್ ತೆಗೆದುಕೊಳ್ಳಲು ಹೋಗಿದ್ದಾನೆ. ಈ ವೇಳೆ ಅಣ್ಣ- ತಂಗಿ ಇರುವ ವಾಹನಕ್ಕೆ ಡಿಕ್ಕಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ಡೊಮಿನಿಕ್ ಮಿಲಿಸ್ ಕಾರಿನ ಚಕ್ರದಡಿಯಲ್ಲಿ ಸಿಕ್ಕಿ ಕೊಂಡು ಪ್ರಾಣ ಬಿಟ್ಟಿದ್ದಾನೆ. ತಂಗಿ ಡ್ಯಾನಿಕಾ ಮಿಲಿಸ್‍ಗೆ ರಕ್ತ ಸಾವ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಅಪಘಾತದಲ್ಲಿ ಅಣ್ಣ-ತಂಗಿ ಜೊತೆಗೆ ಇದ್ದ ಇಬ್ಬರು ಸೋದರಸಂಬಂಧಿಗಳಿಗೂ ಸಣ್ಣ ಪುಟ್ಟ ಗಾಯಗಳಾಗಿವೆ ಇವರನ್ನು ಆಸ್ಪತ್ರೆಗೆ ದಾಖಲಾಗಿದೆ.

    ಈ ಅಪಘಾತದಲ್ಲಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿರುವ ವ್ಯಕ್ತಿ ರದ್ದುಪಡಿಸಿದ ಪರವಾನಗಿಯೊಂದಿಗೆ ಚಾಲನೆ ಮಾಡುತ್ತಿದ್ದ. ಈತ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ‘ಈತ ನನ್ನ ಗಂಡ’ – 4 ಮಕ್ಕಳ ತಂದೆಗಾಗಿ ಸಹೋದರಿಯರ ಕಿತ್ತಾಟ

    ‘ಈತ ನನ್ನ ಗಂಡ’ – 4 ಮಕ್ಕಳ ತಂದೆಗಾಗಿ ಸಹೋದರಿಯರ ಕಿತ್ತಾಟ

    ಡೆಹ್ರಾಡೂನ್: ಇಬ್ಬರು ಸಹೋದರಿಯರು ಒಬ್ಬ ಪುರುಷನನ್ನು ತನ್ನ ಗಂಡ ಎಂದು ಹೇಳಿಕೊಂಡು ಜಗಳವಾಡಿರುವ ಘಟನೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ವಿವಾಹೇತರ ವ್ಯಕ್ತಿ ತನ್ನ ಹೆಂಡತಿಯ ಸೋದರಸಂಬಂಧಿ ಸಹೋದರಿಯೊಂದಿಗೆ ಮದುವೆಯಾಗಿದ್ದಾನೆ. ನಂತರ, ಇಬ್ಬರು ಸಹೋದರಿಯರು ಅವರು ತಮ್ಮ ಪತಿ ಎಂದು ಹೇಳಿಕೊಂಡು ಜಗಳವಾಡಿದ್ದಾರೆ.

    ಪಶ್ಚಿಮ ಅಂಬರ್ ತಲಾಬ್ ನಿವಾಸಿಯಾದ ಮಹಿಳೆ 10 ವರ್ಷಗಳ ಹಿಂದೆ ಮೀರತ್‍ನ ಮಾವನಾ ಪಟ್ಟಣದ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಈತ ತನ್ನ ಹೆಂಡತಿ ಸೋದರ ಸಂಬಂಧಿ ಸಹೋದರಿಯೊಂದಿಗೆ ವಿವಾಹೇತರ ಸಂಬಂಧದಲ್ಲಿದ್ದನು. ಈ ವಿಚಾರವಾಗಿ ದಂಪತಿಗಳ ನಡುವೆ ವಾಗ್ವಾದ ನಡೆದ ನಂತರ ಈತ ತನ್ನ ಪತ್ನಿ ಮತ್ತು ಹೆತ್ತವರೊಂದಿಗೆ ವಾಸಿಸುತ್ತಿದ್ದನು. ಆದರೆ ನಾಲ್ಕು ತಿಂಗಳ ಹಿಂದೆ, ಈ ವ್ಯಕ್ತಿ ತನ್ನ ಹೆಂಡತಿಯ ಸಹೋದರಿಯೊಂದಿಗೆ ಮೀರತ್‍ಗೆ ಬಂದು ವಾಸವಾಗಿದ್ದನು. ನಾಪತ್ತೆಯಾಗಿರುವ ಪತಿಯ ಕುರಿತಾಗಿ ಪತ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು.

    ಮಹಿಳೆಯ ಒಂದು ದಿನ ರೂರ್ಕಿಯಾ ರೋಡ್ವೇಸ್ ನಿಲ್ದಾಣದಲ್ಲಿ ತನ್ನ ಪತಿ ಮತ್ತು ಸಹೋದರಿ ಒಟ್ಟಿಗೆ ಇರುವುದನ್ನು ನೋಡಿದ್ದಾಳೆ. ಮಹಿಳೆ ಪತಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾಳೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಠಾಣೆಯಲ್ಲಿ ವಿಚಾರಣೆ ಮಾಡುವ ವೇಳೆಯಲ್ಲಿ ಸಹೋದರಿಯರಿಬ್ಬರು ತನ್ನ ಪತಿ ಎಂದು ಹೇಳಿಕೊಂಡಿದ್ದಾರೆ. ಇಬ್ಬರು ಪೊಲೀಸರ ಎದುರೆ ಜಗಳವನ್ನು ಆರಂಭಿಸಿದ್ದಾರೆ. ಮೀರತ್ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.