Tag: Singers

  • ನಿನ್ನೆ ಸರಸ್ವತಿ ಪೂಜೆ, ಇಂದು ತಾನು ಆಶೀರ್ವಾದ ನೀಡಿದ ತಾಯಿಯನ್ನು ತನ್ನ ಬಳಿಗೆ ಕರೆದೊಯ್ದಿದ್ದಾಳೆ

    ನಿನ್ನೆ ಸರಸ್ವತಿ ಪೂಜೆ, ಇಂದು ತಾನು ಆಶೀರ್ವಾದ ನೀಡಿದ ತಾಯಿಯನ್ನು ತನ್ನ ಬಳಿಗೆ ಕರೆದೊಯ್ದಿದ್ದಾಳೆ

    ನವದೆಹಲಿ: ಭಾರತದ ಅತ್ಯುನ್ನತ ಗೌರವ ಭಾರತ ರತ್ನ ಪ್ರಶಸ್ತಿ ಪುರಸ್ಕೃತೆ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರು ಇಂದು ನಿಧನರಾದರು. ಅವರ ನಿಧನಕ್ಕೆ ಸಂಗೀತ ಕ್ಷೇತ್ರದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

    ಲತಾ ಮಂಗೇಶ್ಕರ್‌ ಅವರೊಂದಿಗೆ ಹಲವಾರು ಬಾರಿ ಕೆಲಸ ಮಾಡಿದ ಸಂಗೀತ ಸಂಯೋಜಕ, ಗಾಯಕ ಎ.ಆರ್‌.ರೆಹಮಾನ್‌, ಗಾನ ಕೋಗಿಲೆಯೊಂದಿಗಿನ ಫೋಟೋ ಹಂಚಿಕೊಂಡು ಸಂತಾಪದ ನುಡಿಗಳನ್ನಾಡಿದ್ದಾರೆ. ಪ್ರೀತಿ, ಗೌರವ, ಪ್ರಾರ್ಥನೆಗಳು ಎಂದು ರೆಹಮಾನ್‌ ಟ್ವೀಟ್‌ ಮಾಡಿ ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರನ್ನು ಸಚಿನ್ ತೆಂಡೂಲ್ಕರ್ ಏನೆಂದು ಕರೆಯುತ್ತಿದ್ದರು ಗೊತ್ತಾ?

     

    View this post on Instagram

     

    A post shared by shreyaghoshal (@shreyaghoshal)

    ಲತಾ ಮಂಗೇಶ್ಕರ್‌ ಅವರ ಕಪ್ಪು-ಬಿಳುಪಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಗಾಯಕಿ ಶ್ರೇಯಾ ಘೋಷಾಲ್, ʼಮನಸ್ಸಿಗೆ ಘಾಸಿಯಾಯಿತು. ನಿನ್ನೆ ಸರಸ್ವತಿ ಪೂಜೆ. ಇಂದು ತಾಯಿ ತನ್ನ ಆಶೀರ್ವಾದವನ್ನು ತನ್ನೊಂದಿಗೆ ಕರೆದೊಯ್ದಿದ್ದಾಳೆ. ಅದೇಕೋ ಇಂದು ಪಕ್ಷಿಗಳು, ಮರಗಳು, ಗಾಳಿ ಕೂಡ ಮೌನವಾಗಿದೆ ಎನಿಸುತ್ತಿದೆ. ಸ್ವರ ಕೋಗಿಲೆ ಭಾರತ ರತ್ನ ಲತಾ ಮಂಗೇಶ್ಕರ್‌ ಜೀ ನಿಮ್ಮ ದೈವಿಕ ಧ್ವನಿಯು ಶಾಶ್ವತವಾಗಿ ಪ್ರತಿಧ್ವನಿಸುತ್ತದೆ. ಶಾಂತಿಯಿಂದ ವಿಶ್ರಾಂತಿ ಪಡೆಯಿರಿ. ಓಂ ಶಾಂತಿʼ ವಿಷಾದ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Adnan Sami (@adnansamiworld)

    ಸಂಗೀತ ಸಂಯೋಜಕ, ಗಾಯಕ ಅದ್ನಾನ್‌ ಸಾಮಿ, ʻಸಂಗೀತ ಲೋಕ ಇಂದು ಅನಾಥವಾಗಿದೆ. ನಮ್ಮ ಕೋಗಿಲೆ ಹಾರಿಹೋಗಿದೆ. ನಾವು ಕತ್ತಲೆಯಲ್ಲಿ ಧ್ವನಿಯಿಲ್ಲದೇ ಬಿದ್ದಿದ್ದೇವೆ. ನಾವು ಅವರನ್ನು ಕಳೆದುಕೊಂಡಿದ್ದೇವೆ. ಆದರೂ ನಾವು ಅವರ ಜೀವಿತಾವಧಿಯಲ್ಲಿ ಇದ್ದೆವು. ಅವರು ಉಸಿರಾಡಿದ ಗಾಳಿಯನ್ನು ನಾವು ಉಸಿರಾಡುತ್ತಿರುವುದು ನಮ್ಮ ಸೌಭಾಗ್ಯ. ಧನ್ಯವಾದಗಳು ಪ್ರಿಯ ದೀದಿʼ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್‌ಲಾಲ್‌ ನೆಹರೂ

     

    View this post on Instagram

     

    A post shared by Shaan Mukherji (@singer_shaan)

    ಲತಾ ಮಂಗೇಶ್ಕರ್‌ ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ಗಾಯಕ ಸುರೇಶ್‌ ವಾಡ್ಕರ್‌, ನಮ್ಮ ತಾಯಿ ಸರಸ್ವತಿ ತನ್ನ ಲೋಕಕ್ಕೆ ಮರಳಿದರು. ಅವರ ಧ್ವನಿಯ ಮೂಲಕ ನಮ್ಮೊಂದಿಗೆ ಶಾಶ್ವತವಾಗಿ ಇರುತ್ತಾರೆ ಎಂದು ಗಾಯಕ ಸುರೇಶ್‌ ವಾಡ್ಕರ್‌ ಸಂತಾಪ ಸೂಚಿಸಿದ್ದಾರೆ.

    ಮಂಗೇಶ್ಕರ್‌ ಅವರ ಫೋಟೋವನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿರುವ ಗಾಯಕಿ ಲಿಸಾ ಮಿಶ್ರಾ, ನನ್ನ ಬಾಲ್ಯದ ಮನೆಯ ಪ್ರತಿಯೊಂದು ಕೋಣೆಯಲ್ಲೂ ನನ್ನ ತಾಯಿ, ಲತಾ ಜೀ ಅವರ ಹಾಡುಗಳನ್ನು ಹಾಡಿದ್ದ ನೆನಪುಗಳಿವೆ. ಆ ಹಾಡುಗಳು ನನ್ನನ್ನು ಹಾಡುವಂತೆ ಮಾಡಿದವು. ಅವರ ಧ್ವನಿ ನನಗೆ ಸಿಕ್ಕಿತು ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

    ಲತಾ ಮಂಗೇಶ್ಕರ್‌ ಅವರಂತೆ ಇರಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗಾಯಕ ನೇಹಾ ಕಕ್ಕರ್‌ ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

  • ಐದು ಭಾಷೆ, 65 ಸಿಂಗರ್ಸ್, ಒಂದು ಹಾಡು – ಲಹರಿ ಸಂಸ್ಥೆಯಿಂದ ವಿಶೇಷ ಗೀತೆ ಬಿಡುಗಡೆ

    ಐದು ಭಾಷೆ, 65 ಸಿಂಗರ್ಸ್, ಒಂದು ಹಾಡು – ಲಹರಿ ಸಂಸ್ಥೆಯಿಂದ ವಿಶೇಷ ಗೀತೆ ಬಿಡುಗಡೆ

    – ಕನ್ನಡಿಗರು ಎಂದೆಂದಿಗೂ ಭಾರತಕ್ಕಾಗಿ ನಿಲ್ಲುವೆವು

    ಬೆಂಗಳೂರು: ಲಹರಿ ಸಂಸ್ಥೆಯಿಂದ ಸ್ವಾತಂತ್ರ ದಿನಾಚರಣೆಗೆ ವಿಶೇಷವಾದ ‘ಒಟ್ಟಿಗೆ ಒಂದಾಗಿ..’ ಎಂಬ ಹಾಡೊಂದನ್ನು ಇಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗಿದೆ.

    ಈ ಹಾಡನ್ನು ಸುಮಾರು 65 ಸಿಂಗರ್‍ಗಳು ಹಾಡಿದ್ದು, 5 ಭಾಷೆಯಲ್ಲಿ ಈ ಹಾಡು ಮೂಡಿ ಬಂದಿದೆ. ಈ ಹಾಡು ಕನ್ನಡ, ಹಿಂದಿ, ತಮಿಳು, ತೆಲಗು ಹಾಗೂ ಮಲಯಾಳಂ ಭಾಷೆಯಲ್ಲಿ ಹಾಡಲಾಗಿದೆ. ಈ ಹಾಡು ಲಹರಿ ಯುಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಹಾಡು ಭಾರತದವರಾದ ನಾವು ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದೆ.

    ಈ ಹಾಡನ್ನು ರಾಕಿಂಗ್ ಸ್ಟಾರ್ ಯಶ್, ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್, ನಟ ರಾಮ್‍ಚರಣ್ ಮತ್ತು ಮಾಲಿಯಾಳಂ ನಟ ಮೋಹನ್ ಲಾಲ್ ಬಿಡುಗಡೆ ಮಾಡಿದ್ದಾರೆ. ಕನ್ನಡದ ಹೆಸರಾಂತ ಸಿಂಗರ್‍ಗಳಾದ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಸೇರಿದಂತೆ ಹಲವಾರು ಗಾಯಕ ಮತ್ತು ಗಾಯಕಿಯರು ದನಿಗೂಡಿಸಿದ್ದಾರೆ. ದಿಗ್ಗಜ ಗಾಯಕ ಎಸ್‍ಪಿ ಬಾಲಸುಬ್ರಮಣ್ಯಂ ಅವರು ಮೊದಲ ಸಾಲನ್ನು ಹಾಡಿದ್ದಾರೆ. ಜೊತೆಗೆ ಬೇರೆ ಬೇರೆ ಭಾಷೆಯ ಹಲವಾರು ಯುವ ಮತ್ತು ಹಿರಿಯ ಗಾಯಕರು ಈ ಹಾಡಿಗೆ ದನಿಯಾಗಿದ್ದಾರೆ.

    ಈ ಹಾಡನ್ನು ಇಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಿಡುಗಡೆ ಮಾಡಿದ್ದು, ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್, ಯುನೈಟೆಡ್ ಸಿಂಗರ್ಸ್ ಚಾರಿಟೇಬಲ್ ಟ್ರಸ್ಟ್ ಒಂದು ದೊಡ್ಡ ಕಾರಣಕ್ಕಾಗಿ ಈ ಹಾಡನ್ನು ಮಾಡಿದೆ. ಈ ಕಷ್ಟದ ಸಮಯದಲ್ಲಿ ಅನೇಕ ಅದ್ಭುತ 65 ಗಾಯಕರು ಸೇರಿ ಈ ಒಟ್ಟಿಗೆ ಒಂದಾಗಿ ಎಂಬ ಹಾಡನ್ನು ತಯಾರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿ ಹಾಡಿನ ಯುಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.

    ರಾಮ್‍ಚರಣ್ ಅವರು ಕೂಡ ಟ್ವೀಟ್ ಮಾಡಿದ್ದು, ಈ ಕಷ್ಟದ ಸಮಯದಲ್ಲಿ ಏಕತೆಯನ್ನು ತೋರಿಸುವ ‘ಒಟ್ಟಿಗೆ ಒಂದಾಗಿ..’ ಎಂಬ ಹಾಡನ್ನು ಬಿಡುಗಡೆ ಮಾಡುತ್ತಿರುವುದು ಸಂತೋಷವಾಗಿದೆ. 65 ಗಾಯಕರು ಒಟ್ಟಾಗಿ ಇದನ್ನು ಒಂದು ಪ್ರಮುಖ ಕಾರಣಕ್ಕಾಗಿ ಹಾಡಿದ್ದಾರೆ ಎಂದಿದ್ದಾರೆ. ಎ.ಆರ್ ರೆಹಮಾನ್ ಮತ್ತು ಮೋಹನ್ ಲಾಲ್ ಕೂಡ ಟ್ವೀಟ್ ಮಾಡಿದ್ದು, ಈ ಹಾಡನ್ನು ಬಿಡುಗಡೆ ಮಾಡಿದಕ್ಕೆ ಸಂತೋಷವಾಗಿದೆ. ಒಂದು ಒಳ್ಳೆಯ ಕಾರಣಕ್ಕೆ 65 ಜನ ಗಾಯಕರು ಈ ಹಾಡನ್ನು ಹಾಡಿದ್ದಾರೆ ಎಂದಿದ್ದಾರೆ.

  • ಗದಗ್ ನಲ್ಲಿ ಸಾಮೂಹಿಕ ವಿವಾಹ: ಸರಿಗಮಪ ಸಿಂಗರ್ಸ್ ನಿಂದ ಅದ್ಭುತ ಕಾರ್ಯಕ್ರಮ

    ಗದಗ್ ನಲ್ಲಿ ಸಾಮೂಹಿಕ ವಿವಾಹ: ಸರಿಗಮಪ ಸಿಂಗರ್ಸ್ ನಿಂದ ಅದ್ಭುತ ಕಾರ್ಯಕ್ರಮ

    ಗದಗ: ಬಿಜೆಪಿ ಸಂಸದ ಶ್ರೀರಾಮುಲು ಅಭಿಮಾನಿ ಬಳಗದಿಂದ ನಗರದಲ್ಲಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ಇದರ ಪೂರ್ವಭಾವಿಯಾಗಿ ನಗರದ ವಿದ್ಯಾದಾನ ಮೈದಾನದಲ್ಲಿ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

    ಹಾಸ್ಯ ಬ್ರಹ್ಮ ಎಂದೇ ಖ್ಯಾತಿಯಾದ ಗಂಗಾವತಿ ಪ್ರಾಣೇಶ್, ನರಸಿಂಹ ಜ್ಯೋಷಿ, ಮಹಾಮನಿ ಅವರಿಂದ ಹಾಸ್ಯದ ಹೊನಲನ್ನೇ ಹರಿಸಿದರು. ನಂತರ ಸರಿಗಮಪ ಹಾಡುಗಾರರಾದ ಸುಹಾನಾ, ಶ್ರೀರಾಮ ಕಾಸರ್, ಮೆಹಬೂಬ್, ಪರಶುರಾಮ್, ಭಾವನಾ ಬೇಂದ್ರೆ, ಪ್ರಣತಿ ಎ.ಎಸ್, ಲಹರಿ ಅವರ ಅದ್ಭುತವಾದ ಹಾಡುಗಳು ಎಲ್ಲರನ್ನ ಮೈ ಮರೆಯುವಂತೆ ಮಾಡಿತು.

    ಸರಿಗಮಪ ಹಾಡುಗಾರರ ಹಾಡಿಗೆ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಯೇ ಸುರಿಸಿದರು. ಮಂಗಳೂರು ಹೆಜ್ಜೆನಾದ ತಂಡದ ಡ್ಯಾರ್ನ್ಸ್ ಗೆ ಕೆಕೆ, ಸಿಳ್ಳೆ, ಚಪ್ಪಾಳೆ ಮೂಲಕ ಎಲ್ಲರನ್ನು ಮೈನಮಿರೆಳಿಸುವಂತೆ ಮಾಡುವ ಮೂಲಕ ಅದ್ಭುತ ನೃತ್ಯ ಪ್ರದರ್ಶನ ಮಾಡಿ ತೋರಿಸಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಬಿ.ಶ್ರೀರಾಮುಲು, ಜನಾರ್ದನ ರೆಡ್ಡಿ ಹಾಗೂ ಅಭಿಮಾನಿ ಬಳಗದವರು ಪಾಲ್ಗೊಂಡು ಸನ್ಮಾನಿಸಿದರು.