Tag: singer

  • ವೈರಲ್ ಆಯ್ತು ರಾಬರ್ಟ್ `ಕಣ್ಣೇ ಅದಿರಿಂದಿ’ ಹಾಡು – ಮಂಗ್ಲಿ ಧ್ವನಿಗೆ ಕನ್ನಡಿಗರು ಬೌಲ್ಡ್

    ವೈರಲ್ ಆಯ್ತು ರಾಬರ್ಟ್ `ಕಣ್ಣೇ ಅದಿರಿಂದಿ’ ಹಾಡು – ಮಂಗ್ಲಿ ಧ್ವನಿಗೆ ಕನ್ನಡಿಗರು ಬೌಲ್ಡ್

    ಬೆಂಗಳೂರು: ರಾಬರ್ಟ್ ಸಿನಿಮಾದ `ಕಣ್ಣು ಹೊಡಿಯಾಕ’ ಹಾಡಿನ ತೆಲುಗು ವರ್ಷನ್ `ಕಣ್ಣೇ ಅದಿರಿಂದಿ’ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಹೈದ್ರಾಬಾದ್‍ನಲ್ಲಿ ರಾಬರ್ಟ್ ಪ್ರೀ ರಿಲೀಸ್ ಇವೆಂಟ್‍ನಲ್ಲಿ ಅಕ್ಷರಶಃ ಮ್ಯಾಜಿಕ್ ಕ್ರಿಯೇಟ್ ಮಾಡಿದ ಧ್ವನಿ ಈಗ ದೇಶವ್ಯಾಪಿ ಕ್ರಶ್ ಆಗಿದೆ. ಆ ಧ್ವನಿಯ ಗಾಯಕಿ ಮಂಗ್ಲಿ ಅವರದ್ದು, ರಾತ್ರೋರಾತ್ರಿ ಕರ್ನಾಟಕದ ಕ್ರಶ್ ಆಗಿರುವ `ಕಣ್ಣೇ ಅದಿರಿಂದಿ’ ಗಾಯಕಿ, ಕಪ್ಪು ಸುಂದರಿ ಮಂಗ್ಲಿಗೆ ಕ್ಲೀನ್‍ಬೋಲ್ಡ್ ಆಗಿದ್ದಾರೆ.

    ಇದೇ ಧ್ವನಿ ಈಗ ಕೋಟಿ ಕೋಟಿ ಮೊಬೈಲ್‍ಗಳ ಖಾಯಂ ಸ್ಟೇಟಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಶೇರ್ ಆಗುತ್ತಿದೆ. ಈಗಾಗಲೇ ಮಂಗ್ಲಿ ಯಾರು ಎಂದು ತಿಳದುಕೊಳ್ಳಲು ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ.

    ಈ ಹಾಡು ಹಾಡಿದ ಗಾಯಕಿ ಹಾಡು, ನಟನೆ, ನೃತ್ಯ ನಿರೂಪಣೆಯಲ್ಲಿ ಮಂಗ್ಲಿ ಆಂಧ್ರದದಲ್ಲಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲೂ ಅನೇಕ ಕಾರ್ಯಕ್ರಮಗಳನ್ನ ಮಾಡಿದ್ದಾರೆ. ಬಂಜಾರಾ ಸಮುದಾಯದ ಮಂಗ್ಲಿ ಶಾಲಾ ದಿನಗಳಲ್ಲೇ ಹಾಡನ್ನು ಹಾಡಿ ಸೈ ಎನಿಸಿಕೊಂಡಿದ್ದರು. ಆರಂಭದಲ್ಲಿ ಆಲ್ಬಂಗಳಲ್ಲಿ ಹಾಡೋಕೆ ಶುರು ಮಾಡಿ ಮುಂದೆ ಲೈವ್ ಪರ್ಫಾಮನ್ಸ್, ಆಂಕರಿಂಗ್, ಡಾನ್ಸ್ ಮಾಡುತ್ತಾ ಫೇಮಸ್ ಆಗಿದ್ದಾರೆ.


    ಕೃಷ್ಣವರ್ಣದ ಈ ಸುಂದರಿ ಮುಖದ ಮೇಲೆ ಹೊಳೆಯುವ ಬೊಟ್ಟು, ಎಲ್ಲಾ ಸೇರಿ ಮಂಗ್ಲಿಗೆ ನೆಟ್ಟಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಪ್ರತೀ ಸೀಸನ್‍ಲ್ಲಿ ಒಂದೊಂದು ಕ್ರಶ್ ಹುಟ್ಟುಕೊಳ್ಳುತ್ತೆ ಅಂತಾರಲ್ಲ, ಹಾಗೆ ಸದ್ಯಕ್ಕೆ ಭಾರತದ ಕ್ರಶ್ ಆಗಿದ್ದಾರೆ ಗಾಯಕಿ ಮಂಗ್ಲಿ.

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ಫೇಮಸ್ ಗಾಯಕಿ ಶ್ರೇಯಾ ಘೋಷಾಲ್

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಫೇಮಸ್ ಗಾಯಕಿ ಶ್ರೇಯಾ ಘೋಷಾಲ್

    – ಬೇಬಿ ಶ್ರೇಯಾದಿತ್ಯ ನಿರೀಕ್ಷೆಯಲ್ಲಿದ್ದೀವಿ ಅಂದ್ರು ಸಿಂಗರ್

    ಮುಂಬೈ: ತಮ್ಮ ಸುಮಧುರವಾದ ಕಂಠದಿಂದ ಎಲ್ಲರ ಮನವನ್ನು ಗೆದ್ದಿರುವ ಬಾಲಿವುಡ್‍ನ ಅತ್ಯಂತ ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

    ಹೌದು. ಶ್ರೇಯಾ ಘೋಷಾಲ್ ತಮ್ಮ ಮೊದಲ ಮಗುವನ್ನು ನಿರೀಕ್ಷೆಯಲ್ಲಿದ್ದಾರೆ. ಶ್ರೇಯಾ ತಾವು ತಾಯಿ ಆಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಬೇಬಿ ಶ್ರೇಯಾದಿತ್ಯ ನಿರೀಕ್ಷೆಯಲ್ಲಿದ್ದೇವೆ. ಶಿಲಾದಿತ್ಯ ಮತ್ತು ನಾನು ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ರೋಮಾಂಚನಗೊಂಡಿದ್ದೇವೆ. ನಮ್ಮ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ನಾವು ಸಿದ್ಧರಾಗಿರುವಾಗ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳು ಬೇಕು ಎಂದು ಬರೆದುಕೊಂಡು ಬೇಬಿ ಬಂಪ್ ಫೋಟೋವನ್ನು  ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸೂಪರ್ ಹಿಟ್ ಗೀತೆಗಳಿಗೆ ದನಿಯಾಗಿರುವ ಶ್ರೇಯಾ ಘೋಷಾಲ್ ಗುಡ್ ನ್ಯೂಸ್ ನೀಡಿದ್ದಾರೆ. ಶ್ರೇಯಾ ಘೋಷಾಲ್ ಗರ್ಭಿಣಿ ಆಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶ್ರೇಯಾ ಘೋಷಾಲ್-ಶಿಲಾದಿತ್ಯ ದಂಪತಿ ಎಷ್ಟು ತಿಂಗಳ ಗರ್ಭಿಣಿ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ ಶ್ರೇಯಾ ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

     

    View this post on Instagram

     

    A post shared by shreyaghoshal (@shreyaghoshal)

    2015ರ ಫೆಬ್ರವರಿ ತಿಂಗಳಲ್ಲಿ ಸಾಂಪ್ರದಾಯಿಕ ಬಂಗಾಳಿ ಶೈಲಿಯಲ್ಲಿ ಶ್ರೇಯಾ ಮತ್ತು ಶಿಲಾದಿತ್ಯ ವಿವಾಹ ಮಹೋತ್ಸವ ನಡೆಯಿತು. ಇವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮದುವೆಗೂ ಮುನ್ನ ಹತ್ತು ವರ್ಷಗಳ ಕಾಲ ಶ್ರೇಯಾ ಮತ್ತು ಶಿಲಾದಿತ್ಯ ಪ್ರೀತಿಸಿದ್ದರು. ಇದೀಗ ಮದುವೆಯಾಗಿ 6 ವರ್ಷಗಳ ಬಳಿಕ ತಾಯಿ ಆಗುವ ಮೂಲಕ ಶ್ರೇಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

  • ಪರಾರಿಯಾಗಿದ್ದ ನಟ, ಗಾಯಕ ದೀಪ್ ಸಿಧು ಕೊನೆಗೂ ಬಂಧನ

    ಪರಾರಿಯಾಗಿದ್ದ ನಟ, ಗಾಯಕ ದೀಪ್ ಸಿಧು ಕೊನೆಗೂ ಬಂಧನ

    ನವದೆಹಲಿ: ರೈತರ ಟ್ರ್ಯಾಕ್ಟರ್  ರ‍್ಯಾಲಿ ವೇಳೆ ಹಿಂಸಾಚಾರ ಮತ್ತು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜ ಹಾರಿಸಿದ ಸಂಬಂಧ ದೆಹಲಿಯ ವಿಶೇಷ ಪೊಲೀಸ್ ತಂಡ ನಟ, ಗಾಯಕ ದೀಪ್ ಸಿಧುನನ್ನು ಬಂಧಿಸಿದ್ದಾರೆ.

    ಜನವರಿ 26 ರ ದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ರ‍್ಯಾಲಿ  ವೇಳೆ ಕೆಂಪು ಕೋಟೆಯ ಮೇಲೆ ಖಾಸಗಿ ಧ್ವಜ ಹಾರಿಸಲು ಸಿಧು ಸಹಕರಿಸಿದ್ದನು. ಅಷ್ಟೇ ಅಲ್ಲದೇ ಅಲ್ಲಿಂದಲೇ ಫೇಸ್‍ಬುಕ್ ಲೈವ್ ಮಾಡಿದ್ದ. ಸಿಧುನಿಂದಲೇ ಪ್ರತಿಭಟನೆ ಹಾದಿ ತಪ್ಪಿತು ಎಂದು ರೈತ ಮುಖಂಡರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಧು ಬಂಧನವಾಗಿದೆ.

    ಪ್ರಮುಖ ಆರೋಪಿಯಾಗಿರುವ ದೀಪ್ ಸಿಧು ತಲೆ ಮರೆಸಿಕೊಂಡಿದ್ದನು. ಈ ಹಿನ್ನೆಲೆ ಸಿಧು ಗಾಹೂ ಇತರೆ ಮೂವರು ಆರೋಪಿಗಳ ಕುರಿತಾಗಿ ಮಾಹಿತಿ ನೀಡಿದರೆ 1 ಲಕ್ಷ ರೂಪಾಯಿ ನೀಡುವುದಾಗಿ ಪೊಲೀಸರು ಬಹುಮಾನ ಪ್ರಕಟಿಸಿದ್ದರು. ಸಿಧುನ ಹುಡುಕಾಟದಲ್ಲಿರುವ ಪೊಲೀಸರಿಗೆ ಸಿಧು ತನ್ನ ಗೆಳತಿಯ ಫೋನ್ ಬಳಕೆ ಮಾಡುತ್ತಿದ್ದಾನೆ ಎಂದು ಸುಳಿವು ಸಿಕ್ಕಿದೆ. ಈ ಕುರಿತಾಗಿ ಮಾಹಿತಿ ಪಡೆದ ಪೊಲೀಸ್ ತಂಡ ಸಿಧು ಇದ್ದ ಸ್ಥಳವನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರೆ.

    ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ರೈತ ಪ್ರತಿಭಟನೆಗೆ ನನ್ನನ್ನೇ ಸಮರ್ಪಿಸಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇನು. ಆದರೆ ಗಣರಾಜ್ಯೋತ್ಸವದ ಗಲಭೆ ನಂತರ ರೈತ ಸಂಘಟನೆಗಳು, ರೈತ ಮುಖಂಡರು ನನ್ನನ್ನು ಕಡೆಗಳಿಸುತ್ತಿದ್ದಾರೆ. ನಾನು ಪಂಜಾಬ್ ಜನರಿಗಾಗಿ ಧ್ವನಿ ಎತ್ತಿದೆ. ಕೆಂಪು ಕೋಟೆಯಲ್ಲಿ ಹಲವು ಗಾಯಕರು, ನಾಯಕರು ಸೇರಿದಂತೆ 5 ಲಕ್ಷಕ್ಕೂ ಹೆಚ್ಚು ಜನರು ಇದ್ದರು. ಆದರೆ ನನ್ನನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನೋಡುತ್ತಿದ್ದಾರೆ. ನಾನೀಗ ಬಿಹಾರದ ಕಾರ್ಮಿಕರೊಂದಿಗೆ ಇದ್ದೇನೆ ಎಂದು ಫೇಸ್‍ಬುಕ್ ವೀಡಿಯೋದಲ್ಲಿ ಕಣ್ಣೀರು ಹಾಕಿದ್ದ.

  • ನನ್ನೊಳಗೊಬ್ಬ ಹುಡುಗನಿದ್ದ- ಲಿಂಗ ಪರಿವರ್ತನೆಗೊಳಗಾದ ಗಾಯಕಿ

    ನನ್ನೊಳಗೊಬ್ಬ ಹುಡುಗನಿದ್ದ- ಲಿಂಗ ಪರಿವರ್ತನೆಗೊಳಗಾದ ಗಾಯಕಿ

    – ಅವಳು, ಅವನಾಗಿ ಬದಲಾದ ಕಥೆ ಹೇಳಿದ ಸಿಂಗರ್

    ಅಹಮಾದಾಬಾದ್: ಗುಜರಾತಿನ ಗಾಯಕಿ ಲಿಂಗ ಪರಿವರ್ತನೆಗೊಳಗಾಗಿದ್ದು, ಅವಳು ಅವನಾಗಿ ಬದಲಾದ ಕಥೆಯನ್ನ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಭಜನೆ ಗಾಯಕಿ ಅಮಿತಾ ಇದೀಗ ಆದಿತ್ಯನಾಗಿ ಬದಲಾಗಿದ್ದಾರೆ.

    ಹೆಣ್ಣು ಮಗುವಾಗಿ ಹುಟ್ಟಿದ್ದ ಅಮಿತಾ ಕಾಲೇಜಿನ ದಿನಗಳ ವರೆಗೂ ಎಲ್ಲ ಹುಡುಗಿಯರಂತೆ ಇದ್ದರು. ಹಾವ-ಭಾವ, ಬಟ್ಟೆ ಧರಿಸುವಿಕೆ, ನಡವಳಿಕೆ ಹುಡುಗಿಯರಂತಿದ್ದರು. ಗುಜರಾತಿನ ಅಮರೇಲಿ ಜಿಲ್ಲೆಯ ಮೋಟಾ ಮುಂಜಿಯಾಸಾರ್ ಗ್ರಾಮದ ನಿವಾಸಿಯಾಗಿದ್ದು, ತಮ್ಮ ಭಜನೆ ಹಾಡುಗಳಿಂದ ಸ್ಥಳೀಯ ಮಟ್ಟದಲ್ಲಿ ಅಮಿತಾ ಗುರುತಿಸಿಕೊಂಡಿದ್ದರು. ಕಾಲೇಜಿನ ದಿನಗಳಲ್ಲಿ ತಮ್ಮಲ್ಲಾದ ಕೆಲ ಬದಲಾವಣೆಯಿಂದ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ.

    1994 ಜನವರಿ 31 ರಂದು ಜನಿಸಿದ ಅಮಿತಾ ಬಗಸಾರ್ ವ್ಯಾಪ್ತಿಯ ಪುಟ್ಟ ಗ್ರಾಮದಲ್ಲಿ ಜನಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಡುಗಿಯಾಗಿಯೇ ಪೂರ್ಣಗೊಳಿಸಿದ ಅಮಿತಾ ತಮ್ಮ ಹಾಡುಗಳಿಂದ ಸ್ಥಳೀಯವಾಗಿ ಗುರುತಿಸಿಕೊಂಡಿದ್ದರು. ಕಾಲೇಜು ದಿನಗಳಲ್ಲಿ ನಾನು ಹುಟ್ಟಿನಿಂದ ಹುಡುಗಿ ಆಗಿರಬಹುದು. ಆದರೆ ನನ್ನೊಳಗೊಬ್ಬ ಹುಡುಗ ಇರೋದು ನನ್ನ ಅರಿವಿಗೆ ಬಂತು ಎಂದು ಆದಿತ್ಯನಾಗಿ ಬದಲಾದ ಅಮಿತಾ ಹೇಳುತ್ತಾರೆ.

    ಪೋಷಕರ ಬೆಂಬಲ: ಲಿಂಗ ಪರಿವರ್ತನೆಗೆ ಮುಂದಾದ ಅಮಿತಾಳ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದಾರೆ. ಪೋಷಕರ ಅನುಮತಿ ಮೇರೆಗೆ ಅಮಿತಾ ದೆಹಲಿ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಯ ಒಂದು ವರ್ಷದ ಬಳಿಕ ಅಮಿತಾ ಸಂಪೂರ್ಣವಾಗಿ ತಮ್ಮನ್ನ ಆದಿತ್ಯ ಪಟೇಲ್ ಆಗಿ ಬದಲಿಸಿಕೊಂಡು ಎಲ್ಲರಂತೆ ಜೀವನ ನಡೆಸುತ್ತಿದ್ದಾರೆ.

    ಸಮಾಜದಲ್ಲಿ ಕೆಲವು ಟೀಕೆಗಳನ್ನು ಎದುರಿಸಬೇಕು ಎಂಬುವುದು ನನಗೆ ಗೊತ್ತು. ಸಮಾಜ ಸಹ ನಮ್ಮಂತಹವರನ್ನ ತಾರತಮ್ಯದಿಂದ ನೋಡುವುದನ್ನ ಬಿಡಬೇಕು. ನಮ್ಮನ್ನ ಎಲ್ಲರಂತೆ ಕಾಣಬೇಕಿದೆ. ಲಿಂಗ ಬದಲಾವಣೆಗೆ ಒಳಗಾಗುವರಿಗೆ ಪೋಷಕರು ಬೆಂಬಲ ಬೇಕು ಎಂದು ಆದಿತ್ಯಾ ಹೇಳುತ್ತಾರೆ.

  • ನನ್ನ ದೇಹ ನನ್ನಿಷ್ಟ, ಅದನ್ನು ಕೇಳೋಕೆ ನೀನ್ಯಾರು?- ನೆಟ್ಟಿಗನಿಗೆ ಗಾಯಕಿ ತರಾಟೆ

    ನನ್ನ ದೇಹ ನನ್ನಿಷ್ಟ, ಅದನ್ನು ಕೇಳೋಕೆ ನೀನ್ಯಾರು?- ನೆಟ್ಟಿಗನಿಗೆ ಗಾಯಕಿ ತರಾಟೆ

    ಮುಂಬೈ: ಬಾಲಿವುಡ್ ಗಾಯಕಿ ಸೋನಾ ಮೋಹಪತ್ರಾ ಅವರು ಡ್ರೆಸ್ ಬಗ್ಗೆ ಕಾಮೆಂಟ್ ಮಾಡಿ ನೆಟ್ಟಿಗನ ಚಳಿ ಬಿಡಿಸಿದ ಘಟನೆಯೊಂದು ನಡೆದಿದೆ.

    ಹೌದು. ‘ಐ ನೆವರ್ ಆಸ್ಕ್ ಫಾರ್ ಇಟ್’ ಎಂಬ ಟ್ವಿಟ್ಟರ್ ಅಭಿಯಾನವೊಂದಕ್ಕೆ ಕೈ ಜೋಡಿಸಿರುವ ಸೋನಾ, ತಮ್ಮ ಕಾಲೇಜು ದಿನಗಳಲ್ಲಿ ಚುಡಾಯಿಸುವ ಹಾಗೂ ಲೈಂಗಿಕ ಕಿರುಕುಳ ಎದುರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಟ್ರೋಲ್ ಮಾಡಿದ ನೆಟ್ಟಿಗನಿಗೆ ಗಾಯಕಿ ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

    ಟ್ವೀಟ್‍ನಲ್ಲೇನಿದೆ..?
    ನಾನು ಬಿಟೆಕ್ ಎಂಜಿನಿಯರಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಒಂದು ಬಾರಿ ಮೈಕ್ರೊಪ್ರೊಸೆಸ್ಸರ್ ಲ್ಯಾಬ್ ಕಡೆ ಹೋಗುತ್ತಿದ್ದೆ. ಆ ದಿನ ನಾನು ತುಂಬಾನೇ ಸಡಿಲವಾದ ಹಸಿರು ಬಣ್ಣದ ಖಾದಿ ಕುರ್ತಾ ಧರಿಸಿದ್ದೆ. ನನ್ನ ನೋಡಿದ ಸೀನಿಯರ್ ಗಳು ಶಿಳ್ಳೆ ಹೊಡೆದು ನನ್ನ ಒಳಬಟ್ಟೆಯ ಸೈಜ್ ಬಗ್ಗೆ ಜೋರಾಗಿ ಮಾತನಾಡುತ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ನನ್ನ ಹಿತೈಷಿಯೊಬ್ಬರು, ನಾನು ದೇಹದ ಎಲ್ಲಾ ಭಾಗ ಮುಚ್ಚುವಂತೆ ದುಪ್ಪಟ್ಟ ಧರಿಸಿಲ್ವಾ ಎಂದು ಪ್ರಶ್ನಿಸುವ ಮೂಲಕ ನನ್ನ ಮೇಲೆ ರೇಗಾಡಿ ಹೋದರು ಎಂದು ಸೋನಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ, ನಟಿ ಸೋನಮ್ ಕಪೂರ್ ಹಾಗೂ ಗಾಯಕಿ ಚಿನ್ಮಯಿ ಹಾಗೂ ಇತರೆ ಕೆಲವು ಮಂದಿಗೆ ಟ್ಯಾಗ್ ಮಾಡಿ ನಿಮ್ಮ ಅನುಭವವನ್ನು ಹಂಚಿಕೊಳ್ಳಿ ಎಂದಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂದರ್ಭದಲ್ಲಿ ನೀವು ಯಾವ ಬಟ್ಟೆ ಧರಿಸಿದ್ರಿ ಎಂಬುದನ್ನು ನೆನಪು ಮಾಡಿಕೊಂಡು ವಿಕ್ಟಿಮ್ ಬ್ಲೇಮಿಂಗ್ ಗಮನಕ್ಕೆ ತನ್ನಿ ಎಂದಿದ್ದಾರೆ.

    ಸೋನಾ ಟ್ವೀಟ್ ಗೆ ಕಿಡಿಕಾರಿದ ನೆಟ್ಟಿಗರು ಒಂದರಮೇಲೊಂದರಂತೆ ಕಾಮೆಂಟ್ ಗಳನ್ನು ಮಾಡಲು ಆರಂಭಿಸಿದ್ದಾರೆ. ಈ ವೇಳೆ ಟ್ವಿಟ್ಟರ್ ಬಳಕೆದಾರನೊಬ್ಬ, ನೀವು ಇಷ್ಟೆಲ್ಲಾ ಯೋಚನೆ ಮಾಡುವುದಾದರೆ ಎದೆ ಸೀಳು ಕಾಣುವಂತೆ ಯಾಕೆ ಫೋಟೋಶೂಟ್ ಮಾಡಿಸ್ತೀರಿ?. ನಿಮ್ಮ ಫೋಟೋಗಳಲ್ಲೇ ನೀವು ಎಲ್ಲವನ್ನೂ ಎಕ್ಸ್ ಪೋಸ್ ಮಾಡುತ್ತೀರಿ ಅಂದ ಮೇಲೆ ಯಾಕೆ ನಾಟಕ ಮಾಡೋದು ಎಂದು ಕಿಡಿಕಾರಿದ್ದಾನೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಸೋನಾ, ನನ್ನ ದೇಹ ನನ್ನಿಷ್ಟ ಮಿಸ್ಟರ್ ಜೇ. ಅದನ್ನು ಕೇಳೋಕೆ ನೀನ್ಯಾರು?, ನನಗೇನಿಷ್ಟವೋ ಅದನ್ನೇ ನಾನು ಮಾಡುತ್ತೇನೆ ಎಂದು ಖಡಕ್ಕಾಗಿ ತಿಳಿಸಿದ್ದಾರೆ. ಸೋನಾ ಅವರ ಈ ಪ್ರತಿಕ್ರಿಯೆಗೆ ಕೆಲವರು ಪರವಾದ್ರೆ ಇನ್ನು ಕೆಲವರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೇಹಾ ಕಕ್ಕರ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೇಹಾ ಕಕ್ಕರ್

    ನವದೆಹಲಿ: ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಇಂದು ಗೆಳೆಯ ರೋಹನ್ ಪ್ರೀತ್ ಸಿಂಗ್ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೆಹಲಿಯ ಆನಂದ್ ಕಾರಜ್ ನಲ್ಲಿ ನಡೆದ ಮದುವೆಯಲ್ಲಿ ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.

    ಕಳೆದ ಕೆಲ ದಿನಗಳಿಂದ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಸಂಭ್ರಮದ ವಿಡಿಯೋ ವತ್ತು ಫೋಟೋಗಳನ್ನ ಶೇರ್ ಮಾಡಿಕೊಳ್ಳಲಾರಂಭಿಸಿದ್ದರು. ಮದುವೆ ಬಳಿಕ ನೇಹಾ ಪತಿ ರೋಹನ್ ಜೊತೆ ಪಂಜಾಬ್ ಗೆ ತೆರಳಲಿದ್ದಾರೆ. ಪಂಜಾಬ್ ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಆಯೋಜಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

    20 ದಿನಗಳ ಹಿಂದೆಯೇ ನೇಹಾ ಮತ್ತು ರೋಹನ್ ಮದುವೆಯ ಸುದ್ದಿಗಳು ಹರಿದಾಡಿದ್ದವು. ಅಕ್ಟೋಬರ್ 24ರಂದು ಇಬ್ಬರ ಮದುವೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅಕ್ಟೋಬರ್ 9ರಂದು ನೇಹಾ ಕಕ್ಕರ್, ಸೋಶಿಯಲ್ ಮೀಡಿಯಾದಲ್ಲಿ ಗೆಳೆಯ ರೋಹನ್ ಜೊತೆ ಮದುವೆ ಆಗುತ್ತಿರುವ ವಿಷಯ ರಿವೀಲ್ ಮಾಡಿದ್ದರು. ರೋಹನ್ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿದ್ದ ನೇಹಾ, ನೀನು ನನ್ನವನು ಎಂದು ಬರೆದುಕೊಂಡಿದ್ದರು. ನೇಹಾ ಪೋಸ್ಟ್ ಗೆ ರಿಪ್ಲೈ ನೀಡಿದ್ದ ರೋಹನ್, ಬಾಬು ಐ ಲವ್ ಯು ಸೋ ಮಚ್ ಮೈ ಲವ್. ಹೌದು ನಾನು ನಿನ್ನವನು ಮಾತ್ರ. ನೀನು ನನ್ನ ಜೀವ ಎಂದು ರೊಮ್ಯಾಂಟಿಕ್ ಆಗಿ ಪ್ರೇಮ ವಿಷಯ ತಿಳಿಸಿದ್ದರು.

    ಕೆಲ ತಿಂಗಳ ಹಿಂದೆ ರೋಹನ್ ಮತ್ತು ನೇಹಾ ಪರಿಚಯವಾಗಿತ್ತು. ಆಜಾ ಚಲಾ ವ್ಯಾಹ ಕರವಾಯೇಂ ಹಾಡಿನ ಸಂದರ್ಭದಲ್ಲಿ ಇಬ್ಬರ ಪರಿಚಯವಾಗಿತ್ತು. ಪರಿಚಯ ಕೆಲವೇ ದಿನಗಳಲ್ಲಿ ಪ್ರೇಮದ ಪುಟ ತೆರೆದು ಮದುವೆ ಎಂಬ ಹಸ್ತಾಕ್ಷರ ಇಬ್ಬರ ಬಾಳಲ್ಲಿ ಮುದ್ರಣಗೊಂಡಿದೆ.

    2019ರ ಇಂಡಿಯನ್ ರೈಸಿಂಗ್ ಸ್ಟಾರ್ ಮೂರನೇ ಸೀಸನ್ ನಲ್ಲಿ ರೋಹನ್ ಪ್ರೀತ್ ಸಿಂಗ್ ಸ್ಪರ್ಧಿಯಾಗಿದ್ದರು. ಇದರ ಜೊತೆ ಮುಜ್‍ಸೇ ಶಾದಿ ಕರೋಗೆ ರಿಯಾಲಿಟಿ ಶೋನಲ್ಲಿ ರೋಹನ್ ಕಾಣಿಸಿಕೊಂಡಿದ್ದರು.

  • ರಾತ್ರೋರಾತ್ರಿ ಸ್ಟಾರ್ ಆಗಿದ್ದ ರಾನು ಮೊಂಡಲ್ ಬದುಕಿನಲ್ಲಿ ಮತ್ತೆ ಕತ್ತಲು

    ರಾತ್ರೋರಾತ್ರಿ ಸ್ಟಾರ್ ಆಗಿದ್ದ ರಾನು ಮೊಂಡಲ್ ಬದುಕಿನಲ್ಲಿ ಮತ್ತೆ ಕತ್ತಲು

    ಮುಂಬೈ: ರೈಲ್ವೇ ಪ್ಲಾಟ್‍ಫಾರಂನಲ್ಲಿ ಕುಳಿತು ‘ಏಕ್ ಪ್ಯಾರ್ ಕಾ ನಗ್ಮಾ’ ಎಂದು ಹಾಡು ಹೇಳಿ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಗಾಯಕಿ ರಾನು ಮೊಂಡಲ್ ಬದುಕಲ್ಲಿ ಮತ್ತೆ ಕತ್ತಲು ಆವರಿಸಿದೆ.

    ಸೋಶಿಯಲ್ ಮೀಡಿಯಾದ ಮಿಂಚಿನ ಚಮತ್ಕಾರದಿಂದ ಬಾಲಿವುಡ್ ಸಿನಿಮಾದ ಹಾಡಿಗೆ ರಾನು ಮೊಂಡಲ್ ಧ್ವನಿಯಾಗಿದ್ದನ್ನು ಕಂಡು ದೇಶದ ಜನತೆ ನಿಬ್ಬೆರಗಾಗಿದ್ದರು. ಪ್ಲಾಟ್‍ಫಾರಂನಲ್ಲಿ ಹಾಡು ಹೇಳುತ್ತಾ ಜೀವನ ನಡೆಸುತ್ತಿದ್ದ ರಾನು ಮೊಂಡಲ್ ಬದುಕನ್ನು ಒಂದು ಹಾಡು ಮುಗಿಲೆತ್ತರಕ್ಕೆ ಕರೆದೊಯಯ್ಯುದಿತ್ತು. ಗಾಯಕಿಯ ಧ್ವನಿಗೆ ಫಿದಾ ಆಗಿದ್ದ ಸಂಗೀತ ನಿರ್ದೇಶಕ ಹಿಮೇಶ್ ರೆಶ್ಮಿಯಾ ಅವಕಾಶ ನೀಡಿದ್ದರು. ರಾನು ಮೊಂಡಲ್ ಹಾಡಿದ್ದ ಮೊದಲ ಹಾಡು ‘ತೇರಿ ಮೇರಿ ಕಹಾನಿ’ ಸೂಪರ್ ಹಿಟ್ ಆಗಿತ್ತು. ಎಲ್ಲರ ರಿಂಗ್ ಟೋನ್ ಗಳಾಗಿ ರಾನು ಮೊಂಡಲ್ ಹಾಡು ಬದಲಾಗಿತ್ತು.  ಇದನ್ನೂ ಓದಿ: ರಾನು ಮೊಂಡಲ್‍ಗೆ ಅವಕಾಶ ನೀಡಿದ್ದೇಕೆ – ಹಿಮೇಶ್ ಸ್ಪಷ್ಟನೆ

    ಅನಂತರ ರಾನು ಖಾಸಗಿ ವಾಹಿನಿಯ ಸಿಂಗಿಂಗ್ ರಿಯಾಲಿಟಿ ಶೋಗೆ ಅತಿಥಿಯಾಗಿ ಸಹ ಆಗಮಿಸಿದ್ದರು. ಹೀಗೆ ಬಾಲಿವುಡ್ ಸಭೆ ಸಮಾರಂಭಗಳಲ್ಲಿಯೂ ರಾನು ಮೊಂಡಲ್ ಕಾಣಿಸಿಕೊಳ್ಳಲಾರಂಭಿಸಿದ್ದರು. ಹಲವು ರಾಜ್ಯಗಳಲ್ಲಿ ರಾನು ಸಂಗೀತ ಕಾರ್ಯಕ್ರಮ ನೀಡಿದ್ದರು. ಇಷ್ಟೆಲ್ಲ ಖ್ಯಾತನಾಮವಾದ ಬಳಿಕ ಇದೀಗ ರಾನು ಮೊಂಡಲ್ ಬದುಕಲ್ಲಿ ಮತ್ತೆ ಅಂಧಕಾರದ ಛಾಯೆ ಕಾಣಿಸಿಕೊಂಡಿದೆ. ಇದನ್ನೂ ಓದಿ: ಮತ್ತೆ ರಾನು ವರ್ತನೆ ನೋಡಿ ನೆಟ್ಟಿಗರು ಗರಂ: ವಿಡಿಯೋ ವೈರಲ್

    ಕೊರೊನಾ ಮತ್ತು ಲಾಕ್‍ಡೌನ್ ನಿಂದಾಗಿ ರಾನು ಮೊಂಡಲ್ ಕಾರ್ಯಕ್ರಮಗಳಿಲ್ಲದೇ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಮುಂಬೈನ ಸಂಬಂಧಿಯೊಬ್ಬರ ಮನೆಯಲ್ಲಿರುವ ರಾನು ಮೊಂಡಲ್ ಲಾಕ್‍ಡೌನ್ ಮುಂಚೆ ಗಳಿಸಿದ ಹಣದಲ್ಲಿಯೇ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಉದ್ಯೋಗಕ್ಕಾಗಿ ಮುಂಬೈಗೆ ಬಂದ ನೆಲೆಸಿದ್ರೂ ರಾನು ಕೈ ಮಾತ್ರ ಖಾಲಿಯಾಗಿದೆ. ಇದ್ದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ

    ಈ ಹಿಂದೆ ರಾನು ಕಾನ್ಪುರದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ರಾನು ಹಾಕಿದ್ದ ಹೆವಿ ಮೇಕಪ್ ಫೋಟೋಗಳು ಟ್ರೋಲ್ ಆಗಿದ್ದವು. ಟ್ರೋಲ್ ಬಳಿಕ ರಾನು ಮೊಂಡಲ್ ಗೆ ಮೇಕಪ್ ಮಾಡಿದ್ದ ಮೇಕ್‍ಓವರ್ ಆರ್ಟಿಸ್ಟ್ ಅಸಲಿ ಫೋಟೋಗಳನ್ನು ರಿವೀಲ್ ಮಾಡುವ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು. 2019ರ ಮೈಸೂರು ದಸರಾಗೆ ರಾನು ಮೊಂಡಲ್ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದ್ರೆ ಅನಾರೋಗ್ಯ ಹಿನ್ನೆಲೆ ರಾನು ಮೊಂಡಲ್ ಅವರ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ರದ್ದಾಗಿದ್ದರಿಂದ ಮೈಸೂರು ಜನತೆಯಲ್ಲಿ ಕ್ಷಮೆ ಕೇಳಿದ್ದರು. ಇದನ್ನೂ ಓದಿ: ಸಿಂಗಿಂಗ್, ಕ್ಯಾಟ್‍ವಾಕ್ ನಂತ್ರ ರೇಡಿಯೋ ಸ್ಟೇಷನ್‌ನಲ್ಲಿ ರಾನು ಮೊಂಡಲ್: ವಿಡಿಯೋ

  • ಮೊಟ್ಟ ಮೊದಲು ಅವಕಾಶ ಕೊಡಿಸಿದ್ದು ಜಾನಕಮ್ಮ

    ಮೊಟ್ಟ ಮೊದಲು ಅವಕಾಶ ಕೊಡಿಸಿದ್ದು ಜಾನಕಮ್ಮ

    ಬಾಲು ಆಗಲು ಕಾರಣ ಯಾರು ಗೊತ್ತೆ?

    ಖ್ಯಾತ ಗಾಯಕ ಎಸ್‍ಪಿ ಬಾಲಸುಬ್ರಮಣ್ಯಂ ಅವರನ್ನು ಗಾನ ಗಂಧರ್ವ, ಗಾನ ಗಾರುಡಿಗ ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಖ್ಯಾತ ಗಾಯಕಿ ಎಸ್.ಜಾನಕಿ ಅಲಿಯಾಸ್ ಎಲ್ಲರ ಪ್ರೀತಿಯ ಜಾನಕಮ್ಮ ಮೊಟ್ಟ ಮೊದಲ ಬಾರಿಗೆ ಅಷ್ಟು ಉದ್ದದ ಹೆಸರನ್ನು ಬಾಲು ಎಂದು ಮಾಡಿದ್ದರು. ಪ್ಲೇ ಬ್ಯಾಕ್ ಸಿಂಗರ್ ಆಗಿ ಮೊದಲ ಹೆಜ್ಜೆಯಿಡಲೂ ಜಾನಕಮ್ಮ ಕಾರಣ. ಅವರಿಂದಲೇ ಇಂದು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಬಾಲು ಅನೇಕ ಸಾರಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಸಂಗೀತವನ್ನೇ ಉಸಿರಾಗಿಸಿದ್ದ ಎಸ್‍ಪಿಬಿಗೆ ಆಸ್ಪತ್ರೆಯಲ್ಲಿ ನಡೆದಿತ್ತು ಸಂಗೀತ ಥೆರಪಿ

    ಅಪ್ಪನ ಮಾತಿನಂತೆ ಬಾಲು ಸಂಗೀತರಾಗನಾಗಬೇಕು, ಸಿನಿಮಾಕ್ಕಾಗಿ ಹಾಡಬೇಕು, ಆ ಮೂಲಕ ಅಪ್ಪ ಅಮ್ಮನಿಗೆ ಸಹಾಯ ಮಾಡಬೇಕು. ಜೊತೆಗೆ ನನ್ನ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹಠ ಹಿಡಿದಿದ್ದರು. ಅದು ಅಷ್ಟು ಸುಲಭ ಆಗಿರಲಿಲ್ಲ ಅನ್ನೋದು ಕೆಲವೇ ತಿಂಗಳಲ್ಲಿ ಗೊತ್ತಾಯಿತು. ಆದರೂ ಹಿಡಿದ ಹಠವನ್ನು ಬಿಡಲಿಲ್ಲ. ಕಾಲೇಜುಗಳಲ್ಲಿ ಹಲವಾರು ಸಿಂಗಿಂಗ್ ಕಾಂಪಿಟೇಶನ್‍ಗಳಲ್ಲಿ ಹಾಡಿದರು. ಅನೇಕ ಬಹುಮಾನಗಳನ್ನು ಪಡೆದರು. ಆಗ ಒಂದು ದಿನ ಜಾನಕಮ್ಮ ಅದೇ ಒಂದು ಸ್ಪರ್ಧೆಗೆ ಬಂದಿದ್ದರು. ಈ ವೇಳೆ ಬಾಲು ಅವರೊಳಗಿದ್ದ ಪ್ರತಿಭೆಯನ್ನು ಗುರುತು ಹಿಡಿದು, ಬೆನ್ನು ತಟ್ಟಿದ್ದರು.

    ಕಾಲೇಜುಗಳಲ್ಲಿ ಹಾಡುತ್ತಿದ್ದ ಬಾಲು ಅವರಿಗೆ ಮೊಟ್ಟ ಮೊದಲು ಪ್ಲೇ ಬ್ಯಾಕ್ ಸಿಂಗರ್ ಆಗಿ ಎಂದು ಹೇಳಿದ್ದೇ ಜಾನಕಮ್ಮ. ಅಲ್ಲಿವರೆಗೆ ಅದರ ಬಗ್ಗೆ ಕನಸನ್ನೂ ಬಾಲು ಕಂಡಿರಲಿಲ್ಲ. ಎಲ್ಲಿಯ ಸಿನಿಮಾ ಎಲ್ಲಿಯ ನಾನು? ನಂಗ್ಯಾರು ಅವಕಾಶ ಕೊಡುತ್ತಾರೆ? ಯಾರನ್ನು ಹೋಗಿ ಕೇಳಬೇಕು? ಹೀಗೆ ಪ್ರಶ್ನೆಗಳನ್ನು ಇಟ್ಟುಕೊಂಡು ಸುಮ್ಮನೆ ಕುಳಿತಿದ್ದರು. ಆಗ ಜಾನಕಮ್ಮನವರೇ ಶಿಫಾರಸ್ಸು ಮಾಡಿದರು. ಹಲವಾರು ಪರಿಚಿತ ನಿರ್ದೇಶಕರ ಬಳಿ ಬಾಲು ಅವರನ್ನು ಕಳಿಸಿದರು.

    ಆಗ ಎಲ್ಲಾ ನಿರ್ದೇಶಕರು ಹೇಳಿದ್ದು ಒಂದೇ ಮಾತು. ನಿನ್ನ ವಯಸ್ಸು ಚಿಕ್ಕದು, ಓದು ಮುಗಿಸಿಕೊಂಡು ಬಾ. ಆಮೇಲೆ ಅವಕಾಶ ಕೊಡುತ್ತೇವೆ ಎಂದಿದ್ದು. ಆಗ ಬಾಲು ವಯಸ್ಸು ಕೇವಲ ಹದಿನೇಳು ವರ್ಷ ಅಷ್ಟೇ. ಕೊನೆಗೂ ಹದಿನೇಳು ವರ್ಷ ಮುಗಿಯಿತು. ಆದರೆ ಓದು ಅರ್ಧಂಬರ್ಧ ಆಯಿತು. ಕೊನೆಗೆ ಅಪ್ಪನ ಮಾತಿನಂತೆ ಸಂಗೀತದಲ್ಲೇ ಸಾಧನೆ ಮುಂದುವರಿಸಲು ನಿರ್ಧರಿಸಿದರು. 1966 ಆಗಸ್ಟ್ ತಿಂಗಳಲ್ಲಿ ಮೊಟ್ಟ ಮೊದಲ ಬಾರಿಗೆ ಅವರಿಗೆ ಹಿನ್ನೆಲೆ ಗಾಯಕನಾಗಿ ಹಾಡಲು ಅವಕಾಶ ದೊರೆಯಿತು. ಅಂದಿನಿಂದ ಅವರು ಹಿಂದೆ ತಿರುಗಿ ನೋಡಲಿಲ್ಲ. ಏಳು ಬೀಳುಗಳ ಜೊತೆಗೆ ಒಂದೊಂದೇ ಹಾಡಿನಿಂದ ಬೆಳೆಯುತ್ತಾ ಹೋದರು. ಕೊನೆಗೆ ಜಾನಕಮ್ಮನವರ ಜೊತೆಯೇ ನೂರಾರು ಹಾಡುಗಳನ್ನು ಹಾಡಿದರು. ಅವೆಲ್ಲಾ ಸೂಪರ್ ಹಿಟ್ ಆದವು.

  • ಮುಂದಿನ ಜನ್ಮದಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡ್ತೀನಿ ಅಂದಿದ್ರು ಗಾನ ಗಂಧರ್ವ

    ಮುಂದಿನ ಜನ್ಮದಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡ್ತೀನಿ ಅಂದಿದ್ರು ಗಾನ ಗಂಧರ್ವ

    ಕ್ಷಿಣ ಭಾರತದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡ ಅಂದರೆ ಅದೇನೋ ಪ್ರೀತಿ. ಮುಂದಿನ ಜನ್ಮದಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡುತ್ತೇನೆ ಎಂದು ಅನೇಕ ಬಾರಿ ಹೇಳಿದ್ದರು. ಇದನ್ನೂ ಓದಿ: ಬಾಲ್ಯದಲ್ಲಿ ಸಂಗೀತ ಕಲಿಯದಿದ್ರೂ ಗೆದ್ದ ಎಸ್‍ಪಿಬಿ – ತಂದೆಯೇ ಪ್ರೇರಣೆ

    ಒಂದು ದಶಕಗಳ ಕಾಲ ಎದೆತುಂಬಿ ಹಾಡುವೆನು ಕಾರ್ಯಕ್ರಮವನ್ನು ನಡೆಸಿಕೊಂಡವುದರ ಜೊತೆಗೆ ಬೇರೆ ಭಾಷೆಗಳಲ್ಲಿ ಕೂಡ ಸಂಗೀತದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ತಾವೇ ತೀರ್ಪುಗಾರರಾಗಿ ಹತ್ತು ಹಲವು ಸಂಗೀತದ ಶೋಗಳಲ್ಲಿ ಕುಳಿತಿದ್ದರು. ಈ ವೇಳೆ ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಂಗೀತದ ಸರಿ-ತಪ್ಪುಗಳನ್ನು ತಿದ್ದಿದ್ದಾರೆ. ಈ ಮೂಲಕ ಸಂಗೀತದ ಎಸ್.ಪಿ.ಬಾಲಸುಬ್ರಹ್ಮಣ್ಯಂ ರಾಯಭಾರಿಯಾಗಿ ಮೆರೆದಿದ್ದಾರೆ.ಇದನ್ನೂ ಓದಿ:  ನನ್ನ ಅಪ್ಪನನ್ನು ಬಿಟ್ಟು ಬಿಡಿ – ಐದರ ಬಾಲಕನ ಕಣ್ಣೀರ ಅಭಿನಯಕ್ಕೆ ಚಪ್ಪಾಳೆ ಮೇಲೆ ಚಪ್ಪಾಳೆ

    ಆಂಧ್ರದಲ್ಲಿ ಹುಟ್ಟಿ ಬೆಳೆದರೂ, ನಾನು ಹಿನ್ನೆಲೆ ಗಾಯಕನಾಗಿ ಹಾಡಿನ ಎರಡನೇ ಹಾಡೇ ಕನ್ನಡದಲ್ಲಿ. ಅಲ್ಲಿಂದ ಪ್ರಾರಂಭವಾದ ಈ ಪಯಣ ಇಲ್ಲಿಯವರೆಗೂ ಬಂದಿದೆ. ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ನನಗೆ ಬೇರೆ ಯಾರಿಂದಲೂ ಸಿಕ್ಕಿಲ್ಲ. ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡುತ್ತೇನೆ ಎಂದು ಎಸ್.ಪಿ.ಬಿ ಸಾಕಷ್ಟು ಬಾರಿ ಹೇಳಿದ್ದರು.

    ಬಾಲಸುಬ್ರಹ್ಮಣ್ಯಂ ಅವರು 2018ರಲ್ಲಿ ತೆರೆಕಂಡ ‘ದೇವದಾಸ್’ಚಿತ್ರದಲ್ಲಿ ನಟಿಸಿದ್ದರು. 1969ರಿಂದ ಇಲ್ಲಿಯವರೆಗೆ ಹಲವು ಭಕ್ತಿ ಪ್ರಧಾನ ಸಾಮಾಜಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಒಂದೇ ದಿನ 17 ಗೀತೆಗಳಿಗೆ ಧ್ವನಿ ನೀಡಿದ್ದರು. ಕನ್ನಡ ಮಾತ್ರವಲ್ಲದೇ ಒಂದೇ ದಿನದಲ್ಲಿ ತಮಿಳು ಹಾಗೂ ತೆಲುಗಿನ 19 ಗೀತೆಗಳನ್ನು ರೆಕಾರ್ಡ್ ಮಾಡಿದ್ದರು. ಎಸ್.ಪಿ.ಬಿ ನಿರ್ವಹಣೆಯಲ್ಲಿ ಮೂಡಿಬರುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಇಂದಿಗೂ ಜನ ಮರೆತಿಲ್ಲ.

    ಗಾಯನ ಮಾತ್ರವಲ್ಲದೇ ಅನೇಕ ನಟರಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿ ನೀಡಿದ್ದಾರೆ. ಎಲ್ಲಾ ಭಾಷೆಯಲ್ಲೂ ದೊಡ್ಡ ದೊಡ್ಡ ನಟರಿಗೆ ವಾಸ್ ಕೊಟ್ಟಿದ್ದಾರೆ. ಕಮಲ್ ಹಾಸನ್, ರಜಿನಿಕಾಂತ್, ವಿಷ್ಣುವರ್ಧನ್, ಸಲ್ಮಾನ್ ಖಾನ್, ಕೆ.ಭಾರ್ಗವ್ ರಾಜ್, ಮೊಹನ್, ಅನಿಲ್ ಕಪೂರ್, ಗಿರೀಶ್ ಕಾರ್ನಡ್, ಜಮಿನಿ ಗಣೇಶನ್, ಅರ್ಜುನ್ ಸರ್ಜಾ, ನಾಗೇಶ್, ಕಾರ್ತಿಕ್, ರಾಘುವೀರನ್‍ಗೆ ಬೇರೆ ಬೇರೆ ಭಾಷೆಗಳಿಗೆ ವಾಯ್ಸ್ ಕೊಟ್ಟಿದ್ದಾರೆ.

  • ಬಾಲ್ಯದಲ್ಲಿ ಸಂಗೀತ ಕಲಿಯದಿದ್ರೂ ಗೆದ್ದ ಎಸ್‍ಪಿಬಿ – ತಂದೆಯೇ ಪ್ರೇರಣೆ

    ಬಾಲ್ಯದಲ್ಲಿ ಸಂಗೀತ ಕಲಿಯದಿದ್ರೂ ಗೆದ್ದ ಎಸ್‍ಪಿಬಿ – ತಂದೆಯೇ ಪ್ರೇರಣೆ

    ಕ್ಷಿಣ ಭಾರತದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಟರಷ್ಟೆ ಬೇಡಿಕೆ ಹೊಂದಿದ್ದರು. ಬಾಲ್ಯದಲ್ಲಿ ಸಂಗೀತ ಕಲಿಯದಿದ್ದರೂ ತಂದೆಯ ಪ್ರೇರಣೆಯಿಂದ ಇಂದು ಗಾನ ಗಂಧರ್ವರಾಗಿದ್ದರು. ತಮ್ಮ ಸುಮಧುರ ಹಾಡುಗಳಿಂದಲೇ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿಯಲ್ಲಿ ಬಹುಬೇಡಿಕೆಯ ಗಾಯಕರಾಗಿದ್ದಾರೆ. ಇವರು ಸುಮಾರು 50,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇದನ್ನೂ ಓದಿ: ಡಾ.ರಾಜ್‍ಕುಮಾರ್ ಅಂದರೆ ಬಾಲುಗೆ ಜೀವಜ್ಜೀವ ಪ್ರೇಮ

    ಬಾಲ್ಯ-ವಿದ್ಯಾಭ್ಯಾಸ:
    ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮೂಲ ಹೆಸರು ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕೊನೇಟಮ್ಮ ಪೇಟಾದಲ್ಲಿ 1946ರ ಜೂನ್ 4ರಂದು ಜನಿಸಿದ್ದರು. ಇವರ ತಂದೆ ಎಸ್.ಪಿ.ಸಾಂಬ ಮೂರ್ತಿ ಹರಿಕಥೆ ಕಲಾವಿದರಾಗಿದ್ದು, ತಾಯಿ ಶಾಕುಂತಲಮ್ಮ. ಇವರ ತಾಯಿ 2019ರಲ್ಲಿ ತೀರಿಕೊಂಡಿದ್ದರು. ಇವರಿಗೆ ಇಬ್ಬರು ಸಹೋದರರು, ಎಸ್.ಪಿ.ಶೈಲಜಾ ಸೇರಿದಂತೆ ಐದು ಸಹೋದರಿಯರಿದ್ದರು.

    ಎಸ್‍ಪಿಬಿ ಚೆನ್ನೈನ ಜೆ.ಎನ್‍ ಯೂಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಕಾಲೇಜ್‍ನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಹಾಡುಗಳು ಸ್ಪರ್ಧೆಗಳಲ್ಲಿ ಭಾಗವಹಿ, ಮೊದಲ ಪ್ರಶಸ್ತಿ ಗೆದಿದ್ದರು. ತೆಲುಗು ಸಾಂಸ್ಕೃತಿಕ ಸಂಗೀತ ಸ್ಪರ್ಧೆ 1964ರಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದಿದ್ದರು. ಹರಿಕಥೆ ಹೇಳುತ್ತಿದ್ದ ತಂದೆ ಅವರೇ ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತನ್ನಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆಗಿದ್ದರು.

    ಪ್ರಶಸ್ತಿ ಗೌರವಗಳು-ಪುರಸ್ಕಾರಗಳು
    ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಸಂದಿದೆ. ಅಲ್ಲದೇ 25 ಭಾರಿ ಆಂಧ್ರ ಪ್ರದೇಶ ಸರ್ಕಾರದಿಂದ ನಂದಿ ಪ್ರಶಸ್ತಿ ನೀಡಲಾಗಿದೆ. ನಾಲ್ಕು ಭಾಷೆಗಳಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಗಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜೊತೆಗೆ ಹಲವು ವಿಶ್ವ ವಿದ್ಯಾನಿಲಯಗಳಿಂದ ಡಾಕ್ಟರೇಟ್ ಕೂಡ ಪಡೆದುಕೊಂಡಿದ್ದಾರೆ.