Tag: Sikh pilgrims

  • ಧಾರ್ಮಿಕ ಆಚರಣೆ – ಸಿಖ್‌ ಯಾತ್ರಾರ್ಥಿಗಳಿಗೆ 163 ವೀಸಾ ನೀಡಿದ ಪಾಕಿಸ್ತಾನ

    ಧಾರ್ಮಿಕ ಆಚರಣೆ – ಸಿಖ್‌ ಯಾತ್ರಾರ್ಥಿಗಳಿಗೆ 163 ವೀಸಾ ನೀಡಿದ ಪಾಕಿಸ್ತಾನ

    ಇಸ್ಲಾಮಾಬಾದ್‌: ಇದೇ ಜೂನ್‌ 8ರಿಂದ 17ರವರೆಗೆ ನಡೆಯಲಿರುವ ವಾರ್ಷಿಕ ಉತ್ಸವದ ಹಿನ್ನೆಲೆಯಲ್ಲಿ ಸಿಖ್‌ ಯಾತ್ರಾರ್ಥಿಗಳಿಗೆ ಪಾಕಿಸ್ತಾನ 163 ವೀಸಾಗಳನ್ನು ನೀಡಿದೆ.

    ಗುರು ಅರ್ಜನ್ ದೇವ್ ಅವರ ಹುತಾತ್ಮ ದಿನದ ಮುನ್ನಾದಿನದಂದು ಪಾಕಿಸ್ತಾನದ ಹೈಕಮಿಷನ್ ಈ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಸತ್ಯೇಂದ್ರ ಜೈನ್ ಸಹಚರರ ಮನೆ ಮೇಲೆ ಇಡಿ ದಾಳಿ – ನೋಟಿನ ಕಂತೆಗಳನ್ನೇ ಬಳಸಿ `ED’ ವಿನ್ಯಾಸ

    ಈ ಕುರಿತು ಮಾತನಾಡಿದ ಅಫ್ತಾಬ್ ಹಸನ್ ಖಾನ್, ಯಾತ್ರಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಯಾತ್ರೆ ಮೂಲಕ ತಮ್ಮ ಮನದಾಸೆ ಪೂರೈಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

    1974 ರ ಧಾರ್ಮಿಕ ದೇಗುಲಗಳಿಗೆ ಭೇಟಿ ನೀಡುವ ಪಾಕಿಸ್ತಾನ-ಭಾರತ ಮಾರ್ಗಸೂಚಿಯಡಿ ವೀಸಾ ವಿತರಿಸಲಾಗುವುದು. ಪ್ರತಿ ವರ್ಷ ಭಾರತದಿಂದ ಹೆಚ್ಚಿನ ಸಂಖ್ಯೆಯ ಸಿಖ್‌ ಯಾತ್ರಿಗಳು ಧಾರ್ಮಿಕ ಹಬ್ಬಗಳ ಆಚರಣೆ ಹಾಗೂ ಸ್ಥಳ ವೀಕ್ಷಿಸಲು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ. ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರ – ತಮಿಳುನಾಡಿನಿಂದ ಮತ್ತೆ ತಕರಾರು

    ಯಾತ್ರಾರ್ಥಿಗಳು ಪಂಜಾ ಸಾಹಿಬ್, ನಂಕಾನಾ ಸಾಹಿಬ್ ಮತ್ತು ಕರ್ತಾರ್ಪುರ್ ಸಾಹಿಬ್‌ಗೆ ಹೋಗುತ್ತಾರೆ. ಅವರು ಜೂನ್ 8 ರಂದು ಪಾಕಿಸ್ತಾನ ತಲುಪಿ ನಂತರ ಜೂನ್ 17 ರಂದು ಭಾರತಕ್ಕೆ ಹಿಂತಿರುಗುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಬಸ್ಸಿಗೆ ಡಿಕ್ಕಿ ಹೊಡೆದ ರೈಲು- 19 ಮಂದಿ ಸಿಖ್ ಯಾತ್ರಿಕರು ದುರ್ಮರಣ

    ಬಸ್ಸಿಗೆ ಡಿಕ್ಕಿ ಹೊಡೆದ ರೈಲು- 19 ಮಂದಿ ಸಿಖ್ ಯಾತ್ರಿಕರು ದುರ್ಮರಣ

    ಇಸ್ಲಾಮಾಬಾದ್: ಚಲಿಸುತ್ತಿದ್ದ ಬಸ್ಸಿಗೆ ರೈಲೊಂದು ಡಿಕ್ಕಿ ಹೊಡೆದಿದ್ದು, 19 ಜನ ಸಿಖ್ ಯಾತ್ರಿಕರು ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಪಾಕಿಸ್ತಾನದ ಪಂಜಾಬ್‍ನ ಶೇಖುಪುರ ಜಿಲ್ಲೆಯಲ್ಲಿ ಶುಕ್ರವಾರ ಸಿಖ್ ಯಾಂತ್ರಿಕರು ಪ್ರಯಾಣಿಸುತ್ತಿದ್ದ ಬಸ್‍ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 19 ಸಿಖ್ ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಯಾಂತ್ರಿಕರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

    ಫಾರೂಕಾಬಾದ್ ರೈಲ್ವೆ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ. ರೈಲು ಕರಾಚಿಯಿಂದ ಲಾಹೋರ್‍ಗೆ ಹೋಗುತ್ತಿತ್ತು. ಈ ವೇಳೆ ರಸ್ತೆ ಕ್ರಾಸಿಂಗ್ ಮಾಡುವಾಗ ತಡೆಗೋಡೆ ಇಲ್ಲದ ಕಾರಣ ಬಸ್ಸು ರೈಲಿಗೆ ಅಡ್ಡ ಬಂದಿದೆ. ಈ ವೇಳೆ ರೈಲು ಬಸ್ಸಿಗೆ ಡಿಕ್ಕಿ ಹೊಡೆದು ಬಸ್ಸು ಜಖಂ ಆಗಿದೆ. ವರದಿಯ ಪ್ರಕಾರ ಸಿಖ್ ಯಾತ್ರಿಕರು ನಂಕನಾ ಪ್ರದೇಶದಿಂದ ಸಾಹಿಬ್‍ಗೆ ಹಿಂದಿರುಗುತ್ತಿದ್ದರು ಎಂದು ಹೇಳಲಾಗಿದೆ.

    ಅಪಘಾತದಲ್ಲಿ ಸಾವನ್ನಪ್ಪಿದವ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಗೊಂಡ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಂಜಾಬ್ ಪ್ರಾಂತ್ಯದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.