Tag: siddu nyamagowda

  • ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಇನ್ನಿಲ್ಲ

    ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಇನ್ನಿಲ್ಲ

    -ಬಾಗಲಕೋಟೆ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವು

    ಬಾಗಲಕೋಟೆ: ಇಂದು ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಇಹಲೋಕ ತ್ಯಜಿಸಿದ್ದಾರೆ.

    ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಬಳಿ ನಸುಕಿನ ಜಾವ 4.30ರ ಸುಮಾರಿಗೆ ಎದುರಿನಿಂದ ಬಂದ ಲಾರಿ ತಪ್ಪಿಸಲು ಹೋಗಿ ರಸ್ತೆ ಬದಿಯ ಪೂಲ್‍ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಸಿದ್ದುನ್ಯಾಮಗೌಡ ಸೇರಿ ಐವರು ಗಂಭೀರವಾಗಿ ಗಾಯಗೊಂಡಿದ್ರು. ಕೂಡಲೇ ಎಲ್ಲರನ್ನು ನಗರದ ಕೆರೂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಶಾಸಕ 70 ವರ್ಷದ ಸಿದ್ದುನ್ಯಾಮಗೌಡ ಎದೆಗೆ ಗಂಭೀರ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ರು. ಸಂಪುಟದಲ್ಲಿ ಸ್ಥಾನ ಪಡೆಯೋ ಸಲುವಾಗಿ ಲಾಬಿ ನಡೆಸಲು ದೆಹಲಿಗೆ ತೆರಳಿದ್ದ ಶಾಸಕ ಸಿದ್ದು ನ್ಯಾಮ ಗೌಡ, ಕಳೆದ ರಾತ್ರಿ ಗೋವಾಗೆ ವಿಮಾನದಲ್ಲಿ ಬಂದು ರಸ್ತೆ ಮಾರ್ಗವಾಗಿ ಜಮಖಂಡಿಗೆ ಮರಳುತ್ತಿದ್ರು. ದೆಹಲಿಯ ನಿಜಾಮುದ್ದಿನ್ ಔಲಿಯಾ ದರ್ಗಾಕ್ಕೆ ಹೋಗಿದ್ದ ಮೌಲಾನಾ ರಿಜ್ವಿ ಮತ್ತು ಅಬ್ದುಲ್ ರಶೀದ್‍ರನ್ನ ಶಾಸಕರಾದ ಸಿದ್ದು ನ್ಯಾಮಗೌಡ ತಮ್ಮದೇ ಕಾರಿನಲ್ಲಿ ಕೂರಿಸಿಕೊಂಡು ಜಮಖಂಡಿಗೆ ಮರಳುತ್ತಿದ್ರು. ಇವರಿಬ್ರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಅಪಘಾತದಲ್ಲಿ ಚಾಲಕ ಪರಮಾನಂದ್ ಅಂಬಿ ಮತ್ತು ಅನ್ವರ್ ಮೊಮಿನ್ ಕೂಡ ಗಾಯಗೊಂಡಿದ್ದು, ಅವರಿಗೂ ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ಇದೀಗ ಶಾಸಕ ಸಿದ್ದುನ್ಯಾಮಗೌಡ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಲಾಗ್ತಿದೆ. ಶಾಸಕರ ಪುತ್ರ ಆನಂದ್ ನ್ಯಾಮಗೌಡ ಸೇರಿದಂತೆ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

     

  • ರೈತನ ಹೆಸ್ರಲ್ಲಿ ಸಾಲ ಪಡೆದು ಮೋಸ- ಶಾಸಕ ಸಿದ್ದು ನ್ಯಾಮಗೌಡರ ಜಮಖಂಡಿ ಶುಗರ್ಸ್‍ನಿಂದ ಅಕ್ರಮ

    ರೈತನ ಹೆಸ್ರಲ್ಲಿ ಸಾಲ ಪಡೆದು ಮೋಸ- ಶಾಸಕ ಸಿದ್ದು ನ್ಯಾಮಗೌಡರ ಜಮಖಂಡಿ ಶುಗರ್ಸ್‍ನಿಂದ ಅಕ್ರಮ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡರ ಕಾರ್ಖಾನೆ ರೈತರೊಬ್ಬರಿಗೆ ನಾಮ ಹಾಕಿರೋದು ಗೊತ್ತಾಗಿದೆ.

    ಬ್ಯಾಂಕ್ ಅಕೌಂಟ್ ಮಾಡಿಕೊಡ್ತೀವಿ ಅಂತ ರೈತನಿಂದ ದಾಖಲೆ ಪಡೆದು ರೈತನ ಹೆಸರಲ್ಲೇ ಸಾಲ ತೆಗೆದುಕೊಂಡಿದ್ದಾರೆ. ತಮ್ಮ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಕಬ್ಬಿನ ಬಾಕಿ ಹಣ ನೀಡದೆ ಶಾಸಕರು ಸತಾಯಿಸುತ್ತಿದ್ದು, ರೈತನಿಗೆ ಗೊತ್ತಾಗದಂತೆ ಲಕ್ಷಾಂತರ ರೂಪಾಯಿ ಸಾಲ ಪಡೆಯಲಾಗಿದೆ. ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರಿಗೆ ಸೇರಿದ ಜಮಖಂಡಿ ಶುಗರ್ಸ್ ಕಾರ್ಖಾನೆ ಈ ರೀತಿ ರೈತನಿಗೆ ಮಕ್ಮಲ್ ಟೋಪಿ ಹಾಕಿದೆ.

    2012-13ರಲ್ಲಿ ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ನಿವಾಸಿ ಪರಗೌಡ ಶೇಗುಣಶಿ ಹೆಸರಿನಲ್ಲಿ 10 ಲಕ್ಷ 95 ಸಾವಿರದ 63 ರೂಪಾಯಿ ಸಾಲ ಪಡೆಯಲಾಗಿದೆ. ಎರಡು ದಿನದ ಹಿಂದೆ ಬೆಳೆ ಸಾಲ ಪಡೆಯಲು ಸಿಂಡಿಕೇಟ್ ಬ್ಯಾಂಕ್‍ಗೆ ಹೋದಾಗ ಪರಗೌಡ ಅವರ ಹೆಸರಲ್ಲಿ ಸಾಲ ಇರುವ ವಿಷಯ ಗೊತ್ತಾಗಿದೆ. ಓರ್ವ ಶಾಸಕರಿಗೆ ಸೇರಿದ ಫ್ಯಾಕ್ಟರಿಯಿಂದಲೇ ಇಂತಹ ವಂಚನೆಯಾಗಿದೆ ಅಂದ್ರೆ ಬೇರೆಯವರ ಮಾಲೀಕತ್ವದ ಕಂಪನಿಗಳಲ್ಲಿ ಕಥೆ ಏನು ಅನ್ನೋದು ಪ್ರಶ್ನೆಯಾಗಿದೆ.