Tag: Siddhalinga Swamiji

  • ನಿರಾಣಿ ಅವರಿಗೆ ಸಿಎಂ ಆಗುವ ಯೋಗ್ಯತೆ ಇದೆ : ಸಿದ್ದಲಿಂಗ ಸ್ವಾಮೀಜಿ

    ನಿರಾಣಿ ಅವರಿಗೆ ಸಿಎಂ ಆಗುವ ಯೋಗ್ಯತೆ ಇದೆ : ಸಿದ್ದಲಿಂಗ ಸ್ವಾಮೀಜಿ

    ಬಾಗಲಕೋಟೆ: ನಮ್ಮ ಮುರುಗೇಶ್ ನಿರಾಣಿ ಒಳ್ಳೆ ಮನುಷ್ಯ. ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸಿಎಂ ರೇಸ್ ನಲ್ಲಿ ಅವರು ಇದ್ದಾರಾ ಗೊತ್ತಿಲ್ಲ, ಆದರೆ ಮುರುಗೇಶ್ ನಿರಾಣಿ ಅವರಿಗೆ ಸಿಎಂ ಆಗುವ ಯೋಗ್ಯತೆ ಇದೆ ಎಂದು ಹರಿಹರ ಪಂಚಮಸಾಲಿ ಪೀಠದ ಮಾಜಿ ಪೀಠಾಧಿಪತಿ ಸಿದ್ದಲಿಂಗೇಶ್ವರ ಸ್ವಾಮೀಜಿ ಪರೋಕ್ಷವಾಗಿ ಸಚಿವ ಮುರಗೇಶ್ ನಿರಾಣಿ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ಸಭೆಯಲ್ಲಿ ಮಾತನಾಡಿದ ಅವರು, ಸಿಎಂ ರೇಸ್ ನಲ್ಲಿ ನಿರಾಣಿ ಅವರ ಹೆಸರಿದ್ದರೆ, ಖುಷಿ ಪಡೋಣ, ನಾನು ಸಂತೋಷ ಪಡುತ್ತೇನೆ. ನಿಮ್ಮಂತೆ ನಾನು ನಗುತ್ತೇನೆ. ಸಿಎಂ ಆದರೆ ಪೇಡ ಹಂಚೋಣ, ನಮ್ಮ ಭಾಗದ ಮನುಷ್ಯ ಆಗ್ತಾನೆ ಅಂತ ಸಿಹಿ ಹಂಚೋಣ. ಆಗದಿದ್ದರೂ ಹೆಸರು ಹೇಳುತ್ತಾರೆ ಅಂದರೆ ಮುಂದೆ ಒಂದಲ್ಲ ದಿನ ಆಗೇ ಆಗುತ್ತಾರೆ ಎಂದು ಪರೋಕ್ಷವಾಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಇಡೀ ರಾಜ್ಯವನ್ನು ನಿಭಾಯಿಸುವ ಶಕ್ತಿ ನಿರಾಣಿ ಅವರಿಗಿದೆ. ಅವರಂತೆ ಉತ್ತರ ಕರ್ನಾಟಕದಲ್ಲಿ ಅನೇಕ ರಾಜಕಾರಣಿಗಳಿಗೆ ಆ ಯೋಗ್ಯತೆ ಇದೆ. ನಿರಾಣಿ ಸಿಎಂ ಆದರೆ ನಮ್ಮಷ್ಟು ಸಂತೋಷ ಪಡುವವರು ಬೇರೆ ಯಾರು ಇಲ್ಲ ಎನ್ನುವ ಮೂಲಕ ಸಿದ್ದಲಿಂಗ ಸ್ವಾಮೀಜಿ ಮುರಗೇಶ್ ನಿರಾಣಿ ಅವರಿಗೆ ಸಿಎಂ ಸ್ಥಾನ ನೀಡಬೇಕೆಂದು ಪರೋಕ್ಷವಾಗಿ ಹೇಳಿದ್ದಾರೆ. ಇದನ್ನೂ ಓದಿ: ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಅಭಿಮಾನಿ

  • ಬೆಳಕಿನ ಹಬ್ಬದ ಸಂದರ್ಭದಲ್ಲಿ ಮಕ್ಕಳ ಬಾಳಿಗೆ ಬೆಳಕು ನೀಡ್ತಿದ್ದೀರಿ: ಸಿದ್ದಗಂಗಾ ಸ್ವಾಮೀಜಿ

    ಬೆಳಕಿನ ಹಬ್ಬದ ಸಂದರ್ಭದಲ್ಲಿ ಮಕ್ಕಳ ಬಾಳಿಗೆ ಬೆಳಕು ನೀಡ್ತಿದ್ದೀರಿ: ಸಿದ್ದಗಂಗಾ ಸ್ವಾಮೀಜಿ

    ಬೆಂಗಳೂರು: ಬೆಳಕಿನ ಹಬ್ಬದ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳ ಬಾಳಿಗೆ ‘ಜ್ಞಾನದೀವಿಗೆ’ ಅಭಿಯಾನದ ಮೂಲಕ ಬೆಳಕು ನೀಡುತ್ತಿದ್ದೀರಿ ಎಂದು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

    ಜ್ಞಾನ ದೀವಿಗೆ ಕಾರ್ಯಕ್ರಮದ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತುಂಬಾ ಉತ್ತಮ ಕಾರ್ಯ, ಈ ಹಿಂದೆ ನೆರೆ ಹಾವಳಿ ಬಂದಾಗ ನೀವೂ ಯಾವ ರೀತಿ ಸಹಾಯ ಮಾಡಿದ್ದೀರೋ, ಅದೇ ರೀತಿ ಜನ ಸಹ ಸ್ಪಂದಿಸಿದರು. ಇದೀಗ ಜ್ಞಾನ ದೀವಿಗೆ ಮೂಲಕ ವಿದ್ಯಾರ್ಥಿಗಳ ಬದುಕಿಗೆ ಕೊಡುಗೆ ನೀಡುತ್ತಿದ್ದೀರಿ. ಕಳೆದ ಎಂಟು ತಿಂಗಳಿಂದ ಶಾಲೆ ತರಗತಿ ಇಲ್ಲದೆ ಮಕ್ಕಳು ವಂಚಿತರಾಗಿದ್ದರು. ಈ ಸಂದರ್ಭದಲ್ಲಿ ಪರಿಸ್ಥಿತಿ ಮನಗಂಡು ನೀವು ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಟ್ಯಾಬ್ ವಿತರಣೆ ಮಾಡುತ್ತಿರುವುದು ತುಂಬಾ ಶ್ಲಾಘನೀಯ ಎಂದರು. ಇದನ್ನೂ ಓದಿ: ರಂಗನಾಥ್ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ: ಸಿಎಂ

    ಅನೇಕ ಮಕ್ಕಳು ಶಿಕ್ಷಣದಿಂದ ಲಕ್ಷಾಂತರ ಮಕ್ಕಳು ವಂಚಿತರಾಗಿದ್ದರು. ಅವರ ಬದುಕಿಗೆ ನೀವೂ ಬೆಳಕಾಗುತ್ತಿದ್ದೀರಿ. ಈ ಮೂಲಕ ಬೆಳಕಿನ ಹಬ್ಬದ ಸಂದರ್ಭದಲ್ಲಿ ಅವರ ಬದುಕಿಗೆ ಬೆಳಕನ್ನು ನೀಡುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಜ್ಞಾನದೀವಿಗೆ’ ಸದಾ ಉರಿಯುತ್ತಿರಬೇಕು. ಆದರೆ ಕಳೆದ ಎಂಟು ತಿಂಗಳಿಂದ ಅದು ಆರುವ ಹಂತ ತಲುಪಿತ್ತು. ಅದು ಆರದಿರುವ ಹಾಗೆ ಉರಿಸುವಂತಹ ಕೆಲಸ ಮಾಡುತ್ತಿದ್ದೀರಿ, ಉರಿಯುವಂತೆ ಮಾಡಿದ್ದೀರಿ. ನಾವು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ. ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ‘ಜ್ಞಾನದೀವಿಗೆ’ ಕಾರ್ಯಕ್ರಮಕ್ಕೆ ಚಾಲನೆ

    ಎಲ್ಲ ಇಲಾಖೆಗಳಿಂತ ಶಿಕ್ಷಣ ಇಲಾಖೆ ತುಂಬಾ ಅನಿಶ್ಚಿತತೆಯಲ್ಲಿದೆ. ಯಾವಾಗ ಶಾಲೆ ಆರಂಭಿಸಬೇಕು, ಮಕ್ಕಳಿಗೆ ಏನು ಮಾಡಬೇಕು ಎಂಬ ದುಗುಡ ಶಿಕ್ಷಣ ಸಚಿವರಲ್ಲಿದೆ. ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳನ್ನು ಆರಂಭಿಸಲಾಗಿದೆ. ಅಲ್ಲಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸೋಂಕು ತಗುಲಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಯಾವ ರೀತಿ ಮಾಡಬೇಕೆಂಬ ಸವಾಲು ಕಾಡುತ್ತಿದೆ. ಅಲ್ಲದೆ ಅಧ್ಯಯನ ಯೋಗ್ಯವಾಗಿದೆ. ನಮ್ಮ ಶಿಕ್ಷಣ ಸಚಿವರು ಸಹ ತುಂಬಾ ಶ್ರಮಪಡುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ರೀತಿಯೇ ಇದಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಷ್ಟದಲ್ಲಿದ್ದವರಿಗೆ ಅವರಿಗೆ ಅವರು ಸಹಾಯ ಮಾಡುತ್ತಿದ್ದಾರೆ. ಇಂದೂ ಸಹ ಪಬ್ಲಿಕ್ ಟಿವಿ ಜೊತೆಗೆ ಕೈ ಜೋಡಿಸಿ, ಮಕ್ಕಳಿಗೆ ಟ್ಯಾಬ್ ಮುಟ್ಟಿಸಲು ಸಾಥ್ ನೀಡಿರುವುದು ಸಂತಸದ ವಿಷಯ. ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ ಎಂದು ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

  • ಕೊರೊನಾ ವಾರಿಯರ್ಸ್‍ಗಳ ಪಾದ ತೊಳೆದ ಶಾಸಕ – ಪಾದ ಪೂಜೆಗೆ ಸಿದ್ದಲಿಂಗ ಶ್ರೀಗಳು ಸಾನಿದ್ಯ

    ಕೊರೊನಾ ವಾರಿಯರ್ಸ್‍ಗಳ ಪಾದ ತೊಳೆದ ಶಾಸಕ – ಪಾದ ಪೂಜೆಗೆ ಸಿದ್ದಲಿಂಗ ಶ್ರೀಗಳು ಸಾನಿದ್ಯ

    ತುಮಕೂರು: ಕೊರೊನಾ ಸೋಂಕಿಗೆ ಸಿಲುಕಿ ದೇಶವೇ ನಲುಗಿ ಹೋಗಿದೆ. ಇಂಥಾ ಸಮಯದಲ್ಲಿ ಗಂಡ, ಮನೆ, ಮಕ್ಕಳನ್ನ ಬಿಟ್ಟು ಮನೆ ಮನೆಗೆ ತೆರಳಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನರ್ಸ್‍ಗಳು ಶ್ರಮಿಸುತ್ತಿದ್ದಾರೆ. ಈ ಕೊರೊನಾ ವಾರಿಯರ್ಸ್‍ಗಳ ಪಾದ ತೊಳೆದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಕೃತಜ್ಞತೆ ಸಲ್ಲಿಸಿದ್ದಾರೆ.

    ಸಿದ್ದಗಂಗಾ ಶ್ರೀಗಳ ದಿವ್ಯ ಸಾನ್ನಿದ್ಯದೊಂದಿಗೆ ನೂರಾರು ಕೊರೊನಾ ವಾರಿಯರ್ಸ್‍ಗಳಿಗೆ ತುಮಕೂರಿನ ಕೈದಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾದ ಪೂಜೆ ನೆರವೇರಿಸಿ ಶಾಸಕ ಗೌರಿಶಂಕರ್ ಅಭಿನಂದನೆ ಸಲ್ಲಿಸಿದ್ದಾರೆ. ಸ್ವತಃ ಶಾಸಕ ಗೌರಿಶಂಕರ್ ಅವರೇ ಅಂಗನವಾಡಿ ಕಾರ್ಯಕರ್ತೆಯರ ಕಾಲು ತೊಳೆದು, ಅರಿಶಿನ-ಕುಂಕುಮ, ಹೂಗಳನ್ನ ಹಾಕಿ ಸತ್ಕರಿಸಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ಗೌರಿಶಂಕರ್, ನನ್ನ ಜೀವನ ಇರೋವರೆಗೂ ನಿಮ್ಮ ಸೇವೆಗೆ ಸಿದ್ಧ. ಯಾರಿಗೆ ಏನೇ ಸಮಸ್ಯೆಯಿದ್ದರೂ ನನ್ನ ಬಳಿ ಹೇಳಿಕೊಳ್ಳಿ. ಕೊರೊನಾದಿಂದ ಯಾರಿಗೂ ಸಾವು ಬರದಿರಲಿ ಎಂದು ಆಶಿಸಿದರು.

    ಈ ಅಪರೂಪದ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು. ಸಿದ್ಧಲಿಂಗ ಸ್ವಾಮೀಜಿಗೆ ಪಾದ ಪೂಜೆ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀಗಳು ಹಾಗೂ ಶಾಸಕರು ಜೊತೆಯಾಗಿ ಅಂಗನಾವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪೊಲೀಸರು, ವೈದ್ಯರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

    ಈ ಬಗ್ಗೆ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಗೌರಿಶಂಕರ್ ಕುಟುಂಬ ಜನರ ಸೇವೆಗಾಗಿಯೇ ಹುಟ್ಟಿದೆ. ಅವರ ಸೇವೆಯಲ್ಲಿ ಎಲ್ಲೂ ಯಾವ ಸ್ವಾರ್ಥವಿಲ್ಲ. ಇವರ ತಂದೆ ಚೆನ್ನಿಗಪ್ಪ ಅವರು ಶ್ರೀ ಮಠಕ್ಕೆ ಮೊದಲಿನಿಂದಲೂ ಭಕ್ತರು, ಅವರ ಪುತ್ರನಾಗಿ ಅವರ ಹಾದಿಯಲ್ಲೇ ನಡೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ದಲಿತ ಸಂಸದರನ್ನು ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ: ಸಿದ್ದಲಿಂಗ ಸ್ವಾಮೀಜಿ

    ದಲಿತ ಸಂಸದರನ್ನು ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ: ಸಿದ್ದಲಿಂಗ ಸ್ವಾಮೀಜಿ

    ತುಮಕೂರು: ಸಂಸದ ನಾರಾಯಣಸ್ವಾಮಿ ಅವರನ್ನು ಗೊಲ್ಲರಹಟ್ಟಿಗೆ ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.

    ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ದಲಿತ ಸಂಸದರನ್ನು ಗೊಲ್ಲರಹಟ್ಟಿಗೆ ನಿಷೇಧ ಮಾಡಿದ್ದು, ಶೋಚನೀಯ ಹಾಗೂ ದುಃಖನೀಯ ಸಂಗತಿ ಎಂದು ಹೇಳಿದ್ದಾರೆ. ಇಂತಹ ಆಧುನಿಕ ಕಾಲದಲ್ಲೂ ಇಂತಹ ಅನಿಷ್ಟ ಪದ್ಧತಿ ಜೀವಂತವಾಗಿ ಇರುವುದು ಖಂಡನೀಯ. ಇದನ್ನು ಹೋಗಲಾಡಿಸುವ ಚಿಂತನೆ ಮಾಡಬೇಕಿದೆ ಎಂದರು.

    ಗಾಂಧಿಜೀಯ ಕನಸಿನ ಭಾರತ ಹಾಗೂ ಬಸವಣ್ಣ ಅವರ ಸಮಾಜದ ಆದರ್ಶ ನಮ್ಮಲ್ಲಿರಬೇಕು. ಒಬ್ಬ ಸಂಸದರಿಗೆ ಈ ಸ್ಥಿತಿ ಬಂದರೆ ಜನ ಸಾಮಾನ್ಯರ ಸ್ಥಿತಿ ಹೇಗಿರಬೇಡ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆ ವೇಳೆ ಸಂಸದರು ನಡೆದುಕೊಂಡ ರೀತಿ ಉತ್ತಮ. ನಾರಾಯಸ್ವಾಮಿ ಅವರ ಹೃದಯ ಶ್ರೀಮಂತಿಕೆ ಮೆಚ್ಚುವಂತದ್ದು, ಮುಂದಿನ ದಿನಗಳಲ್ಲಿ ಗೊಲ್ಲರಹಟ್ಟಿಯ ಜನರ ಮನಪರಿವರ್ತನೆಗೆ, ಅಭಿವೃದ್ಧಿಗೆ ಪಣತೊಡುತ್ತೇನೆ ಅಂದ ನಾರಾಯಣಸ್ವಾಮಿ ಅವರ ಕಾಳಜಿ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದ್ದಾರೆ. ಇದನ್ನು ಓದಿ: ದಲಿತ ಸಂಸದರಿಗೆ ಗ್ರಾಮಕ್ಕೆ ಬರದಂತೆ ತಡೆದ ಗ್ರಾಮಸ್ಥರು

    ಮಠ-ಮಾನ್ಯಗಳು ಹಾಗೂ ಸಂಘ ಸಂಸ್ಥೆಗಳು ಕೂಡ ಮುಂದೆ ಬಂದು ಈ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಇದೇ ವೇಳೆ ಯಾವುದೇ ನಾಯಕರು ಆರೋಪದ ಮೇಲೆ ಬಂಧನವಾದಾಗ ಆಯಾ ಸಮುದಾಯಗಳ ಪರ ನಿಂತು ಪ್ರತಿಭಟನೆ ನಡೆಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ದೇಶದ ಪ್ರತಿಯೊಬ್ಬ ಪ್ರಜೆನೂ ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನವನ್ನು ಗೌರವಿಸಬೇಕು. ಕಾನೂನು ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಕಾನೂನು ಇಲ್ಲ. ಎಲ್ಲರೂ ಕಾನೂನಿಗೆ ತಲೆ ಬಾಗಬೇಕು ಎಂದು ಪ್ರತಿಕ್ರಿಯಿಸಿದರು.