Tag: Siddaramautsava

  • ಬೆಳ್ಳಿತೆರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್

    ಬೆಳ್ಳಿತೆರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಯೋಪಿಕ್

    ಇಂದು ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಆಚರಿಸಲು ಇಡೀ ಕರ್ನಾಟಕವೇ ದಾವಣಗೆರೆಯಲ್ಲಿ ನೆರೆದಿದೆ. ಈ ಸಂದರ್ಭದಲ್ಲಿ ತೆಲಂಗಾಣದ ಉದ್ಯಮಿ ಶ್ರೀಧರ್ ರಾವ್ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ನೀಡಿದ್ದು, ಅವರ ಬಯೋಪಿಕ್ ಅನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರಂತೆ.

    ಈ ಕುರಿತು ವಿಷಯ ಹಂಚಿಕೊಳ್ಳಲು ಪತ್ರಿಕಾಗೋಷ್ಠಿ ಕರೆದಿದ್ದ ಶ್ರೀಧರ್ ರಾವ್, ‘ಸಿದ್ದರಾಮಯ್ಯನವರ ಅನುಪತಿ ಪಡೆದುಕೊಂಡೇ ಸಿನಿಮಾ ಮಾಡಲಾಗುವುದು. ಇದು ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಇದೊಂದು ದೊಡ್ಡ ಬಜೆಟ್ ಸಿನಿಮಾವಾಗಿದದ್ದು, ಅವರ ಜೀವನ, ರಾಜಕೀಯ ಪ್ರವೇಶ, ಮುಖ್ಯಮಂತ್ರಿಯಾದಾಗಿನ ಸಾಧನೆ ಸೇರಿದಂತೆ ಹತ್ತು ಹಲವು ವಿಷಯಗಳು ಈ ಸಿನಿಮಾದಲ್ಲಿ ಇರಲಿವೆ. ಇದನ್ನೂ ಓದಿ:ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಯ್ತು ‘ವಿಜಯಾನಂದ’ ಟ್ರೈಲರ್

    ಸಿದ್ದರಾಮಯ್ಯನವರು ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಅಪಾರ. ಹಾಗಾಗಿಯೇ ಸಿನಿಮಾ ರಂಗವು ಅವರನ್ನು ವಿಭಿನ್ನ ರೀತಿಯಲ್ಲಿ ಸ್ಮರಿಸುತ್ತಿದೆ. ಈಗಾಗಲೇ ಸಿದ್ದರಾಮೋತ್ಸವದಲ್ಲಿ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಹಂಸಲೇಖ ಕೂಡ ಒಂದು ಹಾಡನ್ನು ಸಿದ್ದರಾಮಯ್ಯನವರಿಗೆ ಅರ್ಪಿಸಿದ್ದಾರೆ. ಇದೀಗ ಅವರ ಕುರಿತಾಗಿಯೇ ಸಿನಿಮಾ ಮಾಡಲು ಶ್ರೀಧರ್ ಮುಂದಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವದಲ್ಲಿ ರಾಹುಲ್ ಪಾಲ್ಗೊಳ್ತಾರೆ, `ಸರಿಯಾಗಿ ನಡ್ಕೊಳಿ’ – ಕೆಪಿಸಿಸಿಗೆ ಹೈಕಮಾಂಡ್ ವಾರ್ನಿಂಗ್

    ಸಿದ್ದರಾಮೋತ್ಸವದಲ್ಲಿ ರಾಹುಲ್ ಪಾಲ್ಗೊಳ್ತಾರೆ, `ಸರಿಯಾಗಿ ನಡ್ಕೊಳಿ’ – ಕೆಪಿಸಿಸಿಗೆ ಹೈಕಮಾಂಡ್ ವಾರ್ನಿಂಗ್

    ಬೆಂಗಳೂರು: ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವದ ವೇದಿಕೆ ಕಾರ್ಯಕ್ರಮದ ರೂಪುರೇಷೆ ಎಐಸಿಸಿ ಸೂಚನೆಯಂತೆ ನಡೆಯುವ ಸಾಧ್ಯತೆ ಇದೆ.

    SIDDARAMAIAH

    ರಾಹುಲ್ ಗಾಂಧಿ ಭಾಗವಹಿಸುವ ಸಮಾವೇಶದಲ್ಲಿ ಹೈಕಮಾಂಡ್‍ಗೆ ಆಗಲಿ ಪಕ್ಷಕ್ಕಾಗಲಿ ಮುಜುಗರ ಆಗದಂತೆ ನೋಡಿಕೊಳ್ಳಲು ಸ್ವತಃ ಎಐಸಿಸಿಯೇ ಒಂದಷ್ಟು ಸೂಚನೆಗಳನ್ನು ಅಮೃತ ಮಹೋತ್ಸವ ಸಮಿತಿಗೆ ನೀಡಿದೆ ಎನ್ನಲಾಗುತ್ತಿದೆ. ಏನಿರಬೇಕು? ಏನಿರಬಾರದು ಎಂಬ ಮೌಖಿಕ ಸಂದೇಶ ರವಾನಿಸಿದೆ. ಸಿದ್ದರಾಮಯ್ಯ ಸಿಎಂ, ಅವರನ್ನು ಕೈ ಹಿಡಿಯಿರಿ, ಅವರ ಕೈ ಬಲಪಡಿಸಿ, ಮುಂದೆ ಅವರಿಗೆ ಅವಕಾಶ ಇದೆ. ಈ ರೀತಿಯ ಮಾತು, ನಡವಳಿಕೆ ಇದ್ಯಾವುದಕ್ಕೂ ವೇದಿಕೆ ಮೇಲೆ ಅವಕಾಶ ಇಲ್ಲ. ಓನ್ಲಿ ಪಾರ್ಟಿ… ನಾಟ್ ಎ ಪರ್ಸನ್ ಎಂಬ ಸಂದೇಶ ರವಾನಿಸಲು ಎಐಸಿಸಿ ಸೂಚಿಸಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ನಾಳೆಯಿಂದ ದುಬಾರಿ ದುನಿಯಾ – ಮೀನು, ಮಾಂಸ, ಗೋಧಿ ಸೇರಿ ಎಲ್ಲವೂ ಕಾಸ್ಟ್ಲಿ

    ಅಭಿಮಾನಿಗಳು, ಬೆಂಬಲಿಗರು ಸಹಾ ಮುಜುಗರ ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ವತಃ ಸಿದ್ದರಾಮಯ್ಯ ಹೆಗಲಿಗೆ ಹೊರಿಸಲಾಗಿದೆ. ಹೀಗೆ ಮುಂದಿನ ರಾಜಕೀಯ ಬೆಳವಣಿಗೆಯ ಯಾವುದೇ ಮಾತು ಅಥವಾ ಸನ್ನಿವೇಶ ಎದುರಾಗದಂತೆ ಕಾರ್ಯಕ್ರಮ ನಿರ್ವಹಿಸುವಂತೆ ಎಐಸಿಸಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ತಡೆಗೋಡೆ ಕುಸಿತ : ಮಡಿಕೇರಿ- ಮಂಗಳೂರು ರಸ್ತೆ ಸಂಚಾರ ಬಂದ್‌

    Live Tv
    [brid partner=56869869 player=32851 video=960834 autoplay=true]