Tag: Siddaganga Sri

  • ಲವಲವಿಕೆಯಿಂದ ಇದ್ದಾರೆ ನಡೆದಾಡುವ ದೇವರು – ಡಿಕೆಶಿ ಜೊತೆಗಿನ ಸಂಭಾಷಣೆ ವಿಡಿಯೋ ವೈರಲ್

    ಲವಲವಿಕೆಯಿಂದ ಇದ್ದಾರೆ ನಡೆದಾಡುವ ದೇವರು – ಡಿಕೆಶಿ ಜೊತೆಗಿನ ಸಂಭಾಷಣೆ ವಿಡಿಯೋ ವೈರಲ್

    ಚೆನ್ನೈ: ನಗರದ ರೇಲಾ ಆಸ್ಪತ್ರೆಯಲ್ಲಿರುವ ನಡೆದಾಡುವ ದೇವರು, ಸಿದ್ದಗಂಗಾ ಶ್ರೀಗಳು ಕ್ಷೇಮವಾಗಿದ್ದು, ಲವಲವಿಕೆಯಿಂದ ಇದ್ದಾರೆ.

    ಶನಿವಾರ ಸಿದ್ದಗಂಗಾ ಶ್ರೀಗಳನ್ನ ವೈದ್ಯಕೀಯ ಶಿಕ್ಷಣ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಶ್ರೀಗಳು ಮತ್ತು ಡಿಕೆಶಿ ಸಂಭಾಷಣೆಯ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಶ್ರೀಗಳು ಮತ್ತು ಸಚಿವರ ನಡುವಿನ ಸಂಭಾಷಣೆ:

    ಡಿಕೆಶಿ: ನೋವಿದಿಯಾ ಇನ್ನೂ..?
    ಸಿದ್ದಗಂಗಾ ಶ್ರೀಗಳು : ಇಲ್ಲ, ಭುಜ ಎತ್ತಿದಿದರೆ ನೋವಾಗುತ್ತೆ.
    ಡಿಕೆಶಿ: ಓ. ಗೊತ್ತಾಯಿತು ಗೊತ್ತಾಯಿತು ಶಿವ ಕಾಪಾಡುತ್ತಾನೆ ಬನ್ನಿ.
    ಸಿದ್ದಗಂಗಾ ಶ್ರೀಗಳು: ಎದ್ದು ಕುಳಿತುಕೊಳ್ಳಬೇಕು.
    ಡಿಕೆಶಿ: ಇರಿ ಇರಿ ಇವತ್ತೊಂದಿನ ಇರಿ ನಾಳೆ ನಾಡಿದ್ರಲ್ಲಿ ಅವರೇ ನಿಮ್ಮನ್ನ ಎದ್ದು ಕೂಡಿಸುತ್ತಾರೆ ಇವತ್ತು ಬೇಡ ನಾಳೆ ಎದ್ದು ಕೂಡಿಸುತ್ತಾರೆ.
    ಸಿದ್ದಗಂಗೆ ಶ್ರೀ: ಇವತ್ತು ಬೇಡ್ವಾ..
    ಡಿಕೆಶಿ: ಬೇಡ ಇವತ್ತು ಬೇಡ ನಾಳೆ ಡಾಕ್ಟರ್ ನಿಮ್ಮನ್ನ ಕೂರಿಸುತ್ತೇನೆ ಅಂತ ಹೇಳಿದ್ದಾರೆ. ಅವರು ಕುಳಿತುಕೊಳ್ಳಬೇಕು, ಕುಳಿತುಕೊಳ್ಳಬೇಕು ಅಂತಾರೆ..
    ಸಿದ್ದಗಂಗಾ ಶ್ರೀ: ನನಗೆ ಎದ್ದು ಕುಳಿತುಕೊಳ್ಳಬೇಕು ಅಂತಾ ಅನ್ನಿಸುತ್ತಿದೆ.
    ಡಿಕೆಶಿ: ಇವತ್ತು ಒಂದು ದಿನ ಇದ್ದು ಬಿಡಿ, ನಾಳೆ ನಿಮ್ಮನ್ನ ಎದ್ದು ಕೂಡಿಸುತ್ತಾರೆ.
    ಲವಲವಿಕೆಯಿಂದ ಇದ್ದಾರೆ ನಡೆದಾಡುವ ದೇವರು – ಡಿಕೆಶಿ ಜೊತೆಗಿನ ಸಂಭಾಷಣೆ ವಿಡಿಯೋ ವೈರಲ್ ನೀವು ಹೇಗೆ ಬಂದ್ರಿ.
    ಡಿಕೆಶಿ : ನಾನು ವಿಮಾನದಲ್ಲೇ ಬಂದೆ.
    ಸಿದ್ದಗಂಗಾ ಶ್ರೀ: ಇಲ್ಲಿರೋರೆಲ್ಲ ಯಾರು
    ಡಿಕೆಶಿ : ಇಲ್ಲಿಯವರೇ ಆಸ್ಪತ್ರೆಯವರೇ, ಆಸ್ಪತ್ರೆಗೆ ಯಾರನ್ನು ಸಹ ಬಿಡುವುದಿಲ್ಲ. ನಾನು ಯಾರನ್ನೂ ಬಿಡಬೇಡಿ ಬೇಡ ಅಂತ ಹೇಳಿದ್ದಿನಿ. ನೀವು ಇನ್ನೂ ಹತ್ತಾರು ವರ್ಷ ಹೀಗೆ ಇರಿ. ನಮ್ಮ ಆಯಸ್ಸೆಲ್ಲ ನಿಮಗೆ ಸಿಗಲಿ..

    ಶ್ರೀಗಳಿಗೆ ಪದೇ ಪದೇ ಆರೋಗ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಬೇಕು ಎಂದು ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶನಿವಾರ ಡಾ. ಮೊಹಮ್ಮದ್ ರೇಲಾ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಸತತ 2 ಗಂಟೆಗಳ ಕಾಲ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ. ಯಾರು ಆತಂಕ ಪಡೋದು ಬೇಡ. ಶಸ್ತ್ರಚಿಕಿತ್ಸೆ ನಂತರ ಕೆಲದಿನಗಳ ಕಾಲ ಶ್ರೀಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸ್ಪಷ್ಟಪಡಿಸಿದ್ದರು.

    ಶ್ರೀಗಳ ಆರೋಗ್ಯದ ಕುರಿತು ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ. ರವೀಂದ್ರ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದು, ಶ್ರೀಗಳಿಗೆ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯಕ್ಕೆ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಭಕ್ತರು ಯಾವುದೇ ಆತಂಕ ಪಡಬೇಕಿಲ್ಲ. ಶಸ್ತ್ರಚಿಕಿತ್ಸೆ ನಂತರ ಸ್ವಾಮೀಜಿಗಳನ್ನ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಮೂರು ದಿನಗಳವರೆಗೂ ಐಸಿಯುನಲ್ಲೇ ಇರಬೇಕಾಗಿದೆ. ಸ್ವಾಮೀಜಿಗಳನ್ನ ಸದ್ಯ ಯಾರು ಭೇಟಿ ಮಾಡುವ ಹಾಗಿಲ್ಲ, ಅವರು ವಿಶ್ರಾಂತಿ ಪಡೆಯಬೇಕಿದೆ ಎಂದು ಮಾಹಿತಿ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳು ನನ್ನನ್ನು ಮಾತನಾಡಿಸಿದ್ರು : ಸಚಿವ ಡಿಕೆಶಿ

    ಶ್ರೀಗಳು ನನ್ನನ್ನು ಮಾತನಾಡಿಸಿದ್ರು : ಸಚಿವ ಡಿಕೆಶಿ

    ಚೆನ್ನೈ: ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದು, ನನ್ನನ್ನು ಮಾತನಾಡಿಸಿದರು ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಚೆನ್ನೈನ ರೇಲಾ ಆಸ್ಪತ್ರೆಗೆ ಸಿದ್ದಗಂಗಾ ಶ್ರೀಗಳ ಭೇಟಿ ಬಳಿಕ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಆಸ್ಪತ್ರೆಯ ಆಡಳಿತ ಮಂಡಳಿ ತುಂಬಾ ಶಿಸ್ತಿನಿಂದ ನಡೆದುಕೊಳ್ಳುತ್ತಿದ್ದು, ಯಾರನ್ನು ಒಳಗೆ ಬಿಡುವುದಿಲ್ಲ. ಆದರೆ ನಾನು ಮಂತ್ರಿ ಎಂಬ ಕಾರಣಕ್ಕೆ ಮಾತ್ರ ಭೇಟಿ ಮಾಡಲು ಅವಕಾಶ ನೀಡಿದರು. ಶೀಘ್ರವೇ ಶ್ರೀಗಳು ಆಸ್ಪತ್ರೆಯಿಂದ ನಡೆದುಕೊಂಡು ಹೊರಬರುತ್ತಾರೆ. ಇಲ್ಲಿನ ಆಸ್ಪತ್ರೆ ನೋಡಿದರೆ ಖುಷಿ ಆಗುತ್ತೆ. ಅಲ್ಲದೇ ಆಡಳಿತ ವ್ಯವಸ್ಥೆ, ಚಿಕಿತ್ಸಾ ವಿಧಾನ ಎಲ್ಲವೂ ಚೆನ್ನಾಗಿದೆ. ಭಕ್ತಾದಿಗಳು ಆಸ್ಪತ್ರೆ ಬಳಿ ಬಂದು ವೈದ್ಯರಿಗೆ ತೊಂದರೆ ನೀಡುವುದು ಬೇಡ ಎಂದು ಮನವಿ ಮಾಡಿದರು.

    ರೇಲಾ ಆಸ್ಪತ್ರೆ ಅತ್ಯುತ್ತಮವಾಗಿದ್ದು, ಭಾರತದಲ್ಲೇ ಉತ್ತಮವಾದ ಆಸ್ಪತ್ರೆ ಎಂಬ ಹೆಗ್ಗಳಿಕೆ ಇದೆ. ಇಲ್ಲಿ 150 ಐಸಿಯೂ ಕೊಠಡಿಗಳಿದ್ದು, ಉತ್ತಮ ನುರಿತ ವೈದ್ಯರಿದ್ದಾರೆ. ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವನಾಗಿ ಹೇಳುತ್ತಿದ್ದು, ನಮ್ಮಲ್ಲಿ ಇಂತಹ ಆಸ್ಪತ್ರೆ ಇಲ್ಲ. ಈ ರೀತಿ ಆಸ್ಪತ್ರೆ ನಮ್ಮಲ್ಲಿ ಆಗುವ ನಂಬಿಕೆಯೂ ಇಲ್ಲ. ಐದು ದಿನದ ನವಜಾತ ಶಿಶುವಿನಿಂದ 111 ವರ್ಷದ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

    ಶ್ರೀಗಳ ಆರೋಗ್ಯದ ಕುರಿತು ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ. ರವೀಂದ್ರ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದು, ಶ್ರೀಗಳಿಗೆ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯಕ್ಕೆ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಭಕ್ತರು ಯಾವುದೇ ಆತಂಕ ಪಡಬೇಕಿಲ್ಲ. ಶಸ್ತ್ರಚಿಕಿತ್ಸೆ ನಂತರ ಸ್ವಾಮೀಜಿಗಳನ್ನ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಮೂರು ದಿನಗಳವರೆಗೂ ಐಸಿಯುನಲ್ಲೇ ಇರಬೇಕಾಗಿದೆ. ಸ್ವಾಮೀಜಿಗಳನ್ನ ಸದ್ಯ ಯಾರು ಭೇಟಿ ಮಾಡುವ ಆಗಿಲ್ಲ, ಅವರು ವಿಶ್ರಾಂತಿ ಪಡೆಯಬೇಕಿದೆ ಎಂದು ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚೆನ್ನೈನಲ್ಲಿಂದು ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ – ರಾತ್ರಿ ಪ್ರಸಾದ ಸೇವಿಸಿ, ವಾಕಿಂಗ್ ಮಾಡಿದ್ರು ನಡೆದಾಡುವ ದೇವ್ರು

    ಚೆನ್ನೈನಲ್ಲಿಂದು ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ – ರಾತ್ರಿ ಪ್ರಸಾದ ಸೇವಿಸಿ, ವಾಕಿಂಗ್ ಮಾಡಿದ್ರು ನಡೆದಾಡುವ ದೇವ್ರು

    ಚೆನ್ನೈ: ಪಿತ್ತಕೋಶದ ಸೋಂಕಿನಿಂದ ಬಳಲುತ್ತಿರುವ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಇಂದು ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ವಿವಿಧ ಬಗೆಯ ಚಿಕಿತ್ಸೆ ನಡೆಯಲಿದೆ.

    ಈ ಬಗ್ಗೆ ಚರ್ಚೆ ಮಾಡಿರುವ ವೈದ್ಯರು ಇಂದು ಬೆಳಗ್ಗೆ 8.30ಕ್ಕೆ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ. ಮೊದಲನೆಯದಾಗಿ ಅಲ್ಟ್ರಾ ಲೆಪ್ಟೋಸ್ಕೋಪ್, ಎರಡನೆಯದಾಗಿ ಎಂಡೋಸ್ಕೋಪಿ ಈ ಎರಡು ಆಗದೆ ಇದ್ದ ಪಕ್ಷದಲ್ಲಿ ಸರ್ಜರಿ ಮಾಡಬೇಕಾಗುತ್ತೆ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ.

    ಅಕಸ್ಮಾತ್ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿರ್ವಾಯತೆ ಸೃಷ್ಟಿಯಾದರೆ ಡಾ.ರೇಲಾ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಶುಕ್ರವಾರ ರಾತ್ರಿ ಪ್ರಸಾದ ಸೇವಿಸಿದ ಶ್ರೀಗಳು ವಾಕಿಂಗ್ ಮಾಡಿದ್ದರು. ಸುತ್ತೂರು ಶ್ರೀಗಳು ಚೆನ್ನೈನ ರೇಲಾ ಆಸ್ಪತ್ರೆಗೆ ತೆರಳಿ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.

    ಶುಕ್ರವಾರ ಶ್ರೀಗಳನ್ನು ತುಮಕೂರಿನ ಸಿದ್ದಗಂಗಾ ಮಠದಿಂದ ರಸ್ತೆಮಾರ್ಗವಾಗಿ ಬೆಂಗಳೂರಿನ ಹೆಚ್‍ಎ ಎಲ್ ವಿಮಾನ ನಿಲ್ದಾಣಕ್ಕೆ ಹೋಗಿದ್ದು, ಬಳಿಕ ಬೆಂಗಳೂರಿನಿಂದ ಏರ್ ಅಂಬುಲೆನ್ಸ್ ಮೂಲಕ ಚೆನ್ನೈಗೆ ಕರೆದೊಯ್ಯಲಾಗಿದೆ. ವಿಶೇಷ ಏರ್ ಅಂಬುಲೆನ್ಸ್ ಮೂಲಕ ಚೆನ್ನೈನಲ್ಲಿರುವ ಪ್ರತಿಷ್ಠಿತ ರೆಲಾ ವೈದ್ಯಕೀಯ ಸಂಸ್ಥೆಗೆ ಹೋಗಿದ್ದಾರೆ. ಸ್ವಾಮೀಜಿಗಳಿಗೆ ಈಗಾಗಲೇ 5 ಸ್ಟಂಟ್ ಅಳವಡಿಸಲಾಗಿದ್ದು, ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಚೆನ್ನೈನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಶ್ರೀಗಳಿಗೆ ಭಾರತದ ಖ್ಯಾತ ಲಿವರ್ ಸ್ಪೆಷಲಿಸ್ಟ್ ಡಾ. ಮೊಹಮ್ಮದ್ ರೇಲಾ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚೆನ್ನೈಗೆ ಬಂದಿಳಿದ ಸಿದ್ದಗಂಗಾ ಶ್ರೀ – ನಿತ್ಯ ಪೂಜೆಗೆ ಆಸ್ಪತ್ರೆಯಲ್ಲೇ ವಿಶೇಷ ವ್ಯವಸ್ಥೆ

    ಚೆನ್ನೈಗೆ ಬಂದಿಳಿದ ಸಿದ್ದಗಂಗಾ ಶ್ರೀ – ನಿತ್ಯ ಪೂಜೆಗೆ ಆಸ್ಪತ್ರೆಯಲ್ಲೇ ವಿಶೇಷ ವ್ಯವಸ್ಥೆ

    ಚೆನ್ನೈ: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಶ್ರೀ ಸಿದ್ದಗಂಗಾ ಶ್ರೀ ಏರ್ ಅಂಬುಲೆನ್ಸ್ ಮೂಲಕ ಚೆನ್ನೈಗೆ ಬಂದಿಳಿದಿದ್ದಾರೆ.

    ತುಮಕೂರಿನ ಸಿದ್ದಗಂಗಾ ಮಠದಿಂದ ಬೆನ್ಜ್ ಕಾರಲ್ಲಿ ಹೆಚ್‍ಎಎಲ್ ಏರ್ ಪೋರ್ಟ್ ತಲುಪಿದ್ದ ಶ್ರೀಗಳನ್ನು ಅಲ್ಲಿಂದ ಏರ್ ಅಂಬುಲೆನ್ಸ್ ಮೂಲಕ ಚೆನ್ನೈನಲ್ಲಿರುವ ಪ್ರತಿಷ್ಠಿತ ರೆಲಾ ವೈದ್ಯಕೀಯ ಸಂಸ್ಥೆಗೆ ಕರೆದುಕೊಂಡು ಬರಲಾಗಿದೆ. ಚೆನ್ನೈ ಏರ್ ಪೋರ್ಟ್ ನಿಂದ ರೇಲಾ ಆಸ್ಪತ್ರೆಗೆ ಸೇರಿದ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

    ಸಿದ್ದಗಂಗಾ ಶ್ರೀಗಳಿಗೆ ಇಂದು ರಾತ್ರಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ನಾಳೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ. ಶ್ರೀಗಳ ನಿತ್ಯದ ಪೂಜೆಗಾಗಿ ಆಸ್ಪತ್ರೆಯಲ್ಲೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಶಿಷ್ಯ ವೃಂದದವರು ಪೂಜಾ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳೊಂದಿಗೆ ಈಗಾಗಲೇ ಚೆನ್ನೈನ ಆಸ್ಪತ್ರೆಗೆ ಬಂದಿದ್ದಾರೆ. ಸ್ವಾಮೀಜಿಗೆ ಈಗಾಗಲೇ 5 ಸ್ಟಂಟ್ ಅಳವಡಿಸಲಾಗಿದ್ದು, ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಚೆನ್ನೈನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಇದನ್ನೂ ಓದಿ: ಗಿನ್ನೆಸ್ ದಾಖಲೆ ಮಾಡಿದ ವೈದ್ಯರಿಂದ ಇಂದು ಶ್ರೀಗಳಿಗೆ ಚಿಕಿತ್ಸೆ

    ಐಸಿಎಟಿ (ಇಂಟರ್ ನ್ಯಾಷನಲ್ ಕ್ರಿಟಿಕಲ್ ಕೇರ್ ಏರ್ ಟ್ರಾನ್ಸ್ ಫರ್ ಟೀಮ್) ಸಂಸ್ಥೆಗೆ ಸೇರಿದ ಏರ್ ಅಂಬುಲೆನ್ಸ್ ನಲ್ಲಿ ಸಿದ್ದಗಂಗಾ ಶ್ರೀಗಳನ್ನು ಚೆನ್ನೈಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಸೇರಿದಂತೆ ಒಟ್ಟು 7 ಮಂದಿ ಪ್ರಯಾಣಿಸಬಹುದಾದ ಈ ಏರ್ ಅಂಬುಲೆನ್ಸ್ ನಲ್ಲಿ ಐಸಿಯು ಯುನಿಟ್ ಇರುತ್ತದೆ. ಡಾಕ್ಟರ್ ಶಾಲಿನಿ ನಲ್ವಾಡ್ ಮತ್ತು ರಾಹುಲ್ ಸಿಂಗ್ ನೇತೃತ್ವದ ಐಸಿಎಟಿಯನ್ನ ಏರ್ ಅಂಬುಲೆನ್ಸ್ ಸೇವೆಗಾಗಿ ಗುರುವಾರ ಸಂಪರ್ಕಿಸಲಾಗಿತ್ತು.

    https://www.youtube.com/watch?v=aO1mVgHf5ww

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಿನತ್ತ ಸಿದ್ದಗಂಗಾ ಶ್ರೀಗಳು- ಏರ್ ಅಂಬುಲೆನ್ಸ್ ನಲ್ಲಿ ಚೆನ್ನೈಗೆ ಶಿಫ್ಟ್

    ಬೆಂಗ್ಳೂರಿನತ್ತ ಸಿದ್ದಗಂಗಾ ಶ್ರೀಗಳು- ಏರ್ ಅಂಬುಲೆನ್ಸ್ ನಲ್ಲಿ ಚೆನ್ನೈಗೆ ಶಿಫ್ಟ್

    ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಾಯುಷಿ ಶ್ರೀ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಆಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇಂದು ಶ್ರೀಗಳನ್ನು ಚೆನ್ನೈಗೆ ಶಿಫ್ಟ್ ಮಾಡಲಾಗುತ್ತಿದೆ.

    ಹೀಗಾಗಿ ಶ್ರೀಗಳನ್ನು ತುಮಕೂರಿನ ಸಿದ್ದಗಂಗಾ ಮಠದಿಂದ ರಸ್ತೆಮಾರ್ಗವಾಗಿ ಬೆಂಗಳೂರಿನ ಹೆಚ್‍ಎ ಎಲ್ ವಿಮಾನ ನಿಲ್ದಾಣಕ್ಕೆ ಕರೆತರಲಾಗುತ್ತಿದೆ. ಬೆಂಗಳೂರಿನಿಂದ ಏರ್ ಅಂಬುಲೆನ್ಸ್ ಮೂಲಕ ಚೆನ್ನೈಗೆ ಕರೆದೊಯ್ಯಲಾಗುತ್ತಿದೆ. ವಿಶೇಷ ಏರ್ ಅಂಬುಲೆನ್ಸ್ ಮೂಲಕ ಚೆನ್ನೈನಲ್ಲಿರುವ ಪ್ರತಿಷ್ಠಿತ ರೆಲಾ ವೈದ್ಯಕೀಯ ಸಂಸ್ಥೆಗೆ ಕರೆದೊಯ್ಯಲಾಗುತ್ತದೆ.

    ಚೆನ್ನೈ ಏರ್ ಪೋರ್ಟ್ ನಿಂದ ಆಸ್ಪತ್ರೆಗೆ 10 ನಿಮಿಷವಿದೆ. ಐಸಿಎಟಿ ಸಂಸ್ಥೆಗೆ ಸೇರಿದ ಏರ್ ಅಂಬುಲೆನ್ಸ್ ನಲ್ಲಿ ಐಸಿಯು ಸೌಲಭ್ಯವಿದೆ. ಅಲ್ಲದೇ ಇದರಲ್ಲಿ ವೈದ್ಯರು ಸೇರಿ 7 ಮಂದಿ ಪ್ರಯಾಣಿಸಬಹುದಾಗಿದೆ.

    ಸ್ವಾಮೀಜಿಗಳಿಗೆ ಈಗಾಗ್ಲೇ 5 ಸ್ಟಂಟ್ ಅಳವಡಿಸಲಾಗಿದ್ದು, ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಚೆನ್ನೈನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಶ್ರೀಗಳಿಗೆ ಭಾರತದ ಖ್ಯಾತ ಲಿವರ್ ಸ್ಪೆಷಲಿಸ್ಟ್ ಡಾ. ಮೊಹಮ್ಮದ್ ರೇಲಾ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಿನ್ನೆಸ್ ದಾಖಲೆ ಮಾಡಿದ ವೈದ್ಯರಿಂದ ಇಂದು ಶ್ರೀಗಳಿಗೆ ಚಿಕಿತ್ಸೆ

    ಗಿನ್ನೆಸ್ ದಾಖಲೆ ಮಾಡಿದ ವೈದ್ಯರಿಂದ ಇಂದು ಶ್ರೀಗಳಿಗೆ ಚಿಕಿತ್ಸೆ

    – ಐದು ದಿನದ ಕಂದಮ್ಮನಿಂದ ಶತಾಯುಷಿ ಶ್ರೀಗಳವರೆಗೆ..!
    – ಬೆಂಗಳೂರಲ್ಲೂ ಕೆಲಸ ಮಾಡಿದ್ದರು ಡಾ.ಮೊಹಮ್ಮದ್ ರೇಲಾ

    – ಪವಿತ್ರ ಕಡ್ತಲ

    ಬೆಂಗಳೂರು: ಲಿವರ್ (ಯಕೃತ್) ಕಸಿ ಶಸ್ತ್ರಚಿಕಿತ್ಸೆಯಲ್ಲಿ ಗಿನ್ನೆಸ್ ದಾಖಲೆ ಬರೆದಿರುವ ಡಾ.ಮೊಹಮ್ಮದ್ ರೇಲಾ ಅವರು ಇಂದು ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಚಿಕಿತ್ಸೆ ನೀಡಲಿದ್ದಾರೆ. ಗುರುವಾರ ರಾತ್ರಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ ಚೆನ್ನೈನ ಖ್ಯಾತ ಅರಿವಳಿಕೆ ತಜ್ಞ ಎಲ್.ಎನ್.ಕುಮಾರ್ ಅವರು ಸಿದ್ದಗಂಗಾ ಶ್ರೀಗಳಿಗೆ ಆಪರೇಷನ್ ಮಾಡಬಹುದು ಎಂದು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಶ್ರೀಗಳನ್ನು ಇಂದು ಚೆನ್ನೈಗೆ ಕರೆದೊಯ್ಯಲು ನಿರ್ಧರಿಸಲಾಗಿದೆ.

    ಚೆನ್ನೈನಲ್ಲಿ ಶ್ರೀಗಳಿಗೆ ರೇಲಾ ಇನ್ಸ್ ಟಿಟ್ಯೂಟ್ ಮತ್ತು ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ. ಈ ಆಸ್ಪತ್ರೆಯ ವೈದ್ಯ ಡಾ.ಮೊಹಮ್ಮದ್ ರೇಲಾ ಅವರು ಲಿವರ್ ತಜ್ಞರಾಗಿದ್ದಾರೆ. ಅವರು 5 ದಿನದ ಹಸುಗೂಸಿಗೂ ಲಿವರ್ ಕಸಿ ಮಾಡುವ ಮೂಲಕ ಗಿನ್ನೆಸ್ ರೆಕಾರ್ಡ್ ಗೆ ಭಾಜನರಾಗಿದ್ದಾರೆ.

    ಡಾ.ಮೊಹಮ್ಮದ್ ರೇಲಾ ಭಾರತ ದೇಶ ಮಾತ್ರವಲ್ಲದೇ ಜಗತ್ತಿನ ಬೆಸ್ಟ್ ಡಾಕ್ಟರ್ ಅನ್ನಿಸಿಕೊಂಡವರು. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಯಕೃತಿನ ಕಸಿಯನ್ನು ಮಾಡಿದ್ದಾರೆ. ಅವರೇ ಶತಾಯುಷಿಗಳಾದ ಸಿದ್ದಗಂಗಾ ಶ್ರೀಗಳಿಗೆ ಇಂದು ಚಿಕಿತ್ಸೆ ನೀಡಲಿದ್ದಾರೆ ಎನ್ನುವುದೂ ವಿಶೇಷ.

    ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ವಿಲಾಸ್ ರಾವ್ ದೇಶ್ ಮುಖ್, ತಮಿಳುನಾಡು ಸಿಎಂ ಜಯಲಲಿತಾ ಆಪ್ತೆಯಾಗಿದ್ದ ಶಶಿಕಲಾ ಪತಿ ನಟರಾಜ್ ಅವರಿಗೂ ಮಹಮ್ಮದ್ ರೇಲಾ ಅವರೇ ಚಿಕಿತ್ಸೆ ನೀಡಿದ್ದರು.

    5 ದಿನದ ಹಸುಗೂಸು ಈಗ 21 ವರ್ಷದ ಯುವತಿ!:
    ಹುಟ್ಟಿದ ಐದು ದಿನಕ್ಕೇ ಲಿವರ್ ಕಸಿ ಮಾಡಿಸಿಕೊಂಡಿದ್ದ ಆ ಮುದ್ದು ಪೋರಿ ಬೇವನ್ ಈಗ 21 ವರ್ಷ ಯುವತಿ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಬೇವಾನ್ ಮತ್ತು ಡಾ.ಮೊಹಮ್ಮದ್ ರೇಲಾ ಅವರು ಲಂಡನ್ ನ ಕಿಂಗ್ಸ್ ಕಾಲೇಜಿನಲ್ಲಿ ಭೇಟಿಯಾಗಿದ್ದರು. “ಅಂದು 20 ವರ್ಷ ಹಿಂದೆ ಆಪರೇಷನ್ ಮಾಡಿದಾಗ ನನ್ನಲ್ಲಿ ಗಿನ್ನೆಸ್ ದಾಖಲೆ ಮಾಡುವ ಯಾವ ಉದ್ದೇಶವೂ ಇರಲಿಲ್ಲ. ಅದಾಗಲೇ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದ ಆ ದಂಪತಿಯ ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇ ಬೇಕು ಅಂತ ಲಿವರ್ ಕಸಿಮಾಡಿದೆವು. ಆದರೆ ಅದು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗುತ್ತದೆ ಎಂದು ಆಮೇಲೆ ಗೊತ್ತಾಯಿತು” ಎಂದು ಡಾ.ರೇಲಾ ಅವರು ಬೇವಾನ್‍ಳನ್ನು ನೋಡುತ್ತಾ ಹೇಳಿದ್ದರು.

    ಇದೇ ವೇಳೆ ಮಾತನಾಡಿದ್ದ ಬೇವಾನ್, ಮೊಹಮ್ಮದ್ ಡಾಕ್ಟರ್ ಇಲ್ಲದಿದ್ದರೆ ನಾನು ಇಂದು ಇರುತ್ತಿರಲಿಲ್ಲ ಎಂದು ಹೇಳಿ ಭಾವುಕರಾಗಿ ವೈದ್ಯರಿಗೆ ಥ್ಯಾಂಕ್ಸ್ ಹೇಳಿದ್ದರು.

    ಡಾ.ಮೊಹಮ್ಮದ್ ರೇಲಾ ಯಾರು?:
    ಮೊಹಮ್ಮದ್ ರೇಲಾ ಅವರು ಲಿವರ್ ತಜ್ಞರು. ಸುಮಾರು 30 ವರ್ಷದಿಂದ ಲಿವರ್ ಕಸಿ ಮಾಡುತ್ತಿದ್ದಾರೆ. 2009ರಲ್ಲಿ ಗ್ಲೋಬಲ್ ಗ್ಲೆನ್ ಈಗಲ್ಸ್ ಹೆಲ್ತ್ ಸಿಟಿಯಲ್ಲಿ ಲಿವರ್ ಕಾಯಿಲೆ ಮತ್ತು ಕಸಿ ಕೇಂದ್ರವನ್ನು ಆರಂಭಿಸಿದರು. ಜೊತೆಗೆ ಲಂಡನ್ ನ ಕಿಂಗ್ಸ್ ಕಾಲೇಜ್ ಹಾಸ್ಪಿಟಲ್‍ನ ಲಿವರ್ ಕಸಿ ಸರ್ಜರಿ ವಿಭಾಗದ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಗ್ಲೋಬಲ್ ಗ್ಲೆನ್ ಈಗಲ್ ಸಂಸ್ಥೆಯನ್ನು ಬಿಟ್ಟು ಹೊರಬಂದ ಡಾ.ಮೊಹಮ್ಮದ್ ರೇಲಾ ಅವರು ಡಾ. ರೇಲಾ ಇನ್ಸ್ ಟಿಟ್ಯೂಟ್ & ಮೆಡಿಕಲ್ ಸೆಂಟರ್ ಆರಂಭಿಸಿದರು. ಇದುವರೆಗೆ ಡಾ.ರೇಲಾ ಸುಮಾರು 4,000ಕ್ಕೂ ಹೆಚ್ಚು ಲಿವರ್ ಕಸಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಅವರು ಬೆಂಗಳೂರಿನಲ್ಲೂ ಕಾರ್ಯ ನಿರ್ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖ್ಯಾತ ವೈದ್ಯ ಮೊಹಮ್ಮದ್ ರೇಲಾರಿಂದ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ

    ಖ್ಯಾತ ವೈದ್ಯ ಮೊಹಮ್ಮದ್ ರೇಲಾರಿಂದ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ

    – ವರ್ಷಕ್ಕೆ 250ಕ್ಕೂ ಹೆಚ್ಚು ಯಶಸ್ವಿ ಶಸ್ತ್ರ ಚಿಕಿತ್ಸೆ

    ಬೆಂಗಳೂರು/ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಚೆನ್ನೈನ ರೇಲಾ ಇನ್ಸ್ ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್ ಗೆ   ಕರೆದೊಯ್ಯಲಿದ್ದಾರೆ.

    ಸಿದ್ದಗಂಗಾ ಶ್ರೀಗಳು ಕ್ಷೇಮವಾಗಿದ್ದಾರೆ. ಆದ್ರೆ 6 ಸ್ಟಂಟ್ ಅಳವಡಿಸಿರೋದ್ರಿಂದ ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಆದ ಕಾರಣ ಇಂದು ಬೆಳಗ್ಗೆ ಚೆನ್ನೈಗೆ ಕರೆದೊಯ್ಯಲಾಗುತ್ತಿದ್ದು, ಅಲ್ಲಿ ಶ್ರೀಗಳಿಗೆ ಭಾರತದ ಖ್ಯಾತ ಲಿವರ್ ಸ್ಪೆಷಲಿಸ್ಟ್ ಡಾ. ಮೊಹಮ್ಮದ್ ರೇಲಾ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಚಿಕಿತ್ಸೆ

    ರೇಲಾ ಯಾರು..?
    ಡಾ. ಮೊಹಮ್ಮದ್ ರೇಲಾ ಭಾರತ ಖ್ಯಾತ ಲಿವರ್ ಸರ್ಜನ್ ನಲ್ಲಿ ಕೂಡ ಒಬ್ಬರು. ಲಂಡನ್‍ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯ ತಜ್ಞ ವೈದ್ಯರಾಗಿದ್ದ ಮೊಹಮ್ಮದ್ ರೇಲಾ,  5 ದಿನದ ಹಸಿಗೂಸಿಗೆ ಲಿವರ್ ಕಸಿ ಮಾಡೋದ್ರ ಮೂಲಕ ಗಿನ್ನಿಸ್ ಬುಕ್‍ನಲ್ಲಿ ರೆಕಾರ್ಡ್ ಮಾಡಿದ್ರು. ಇದೂವರೆಗೂ 4 ಸಾವಿರ ಲಿವರ್ ಕಸಿ ಮಾಡಿರೋ ಖ್ಯಾತಿ ಇವರದ್ದಾಗಿದೆ. ವರ್ಷಕ್ಕೆ 250ಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿರೋ ಹೆಗ್ಗಳಿಕೆಗೆ ಡಾ.ಮೊಹಮ್ಮದ್ ಪಾತ್ರರಾಗಿದ್ದಾರೆ.

    ಮೂಲತಃ ತಮಿಳುನಾಡಿನ ಮೂಲದವರಾದ ಡಾ. ಮೊಹಮ್ಮದ್ ರೇಲಾ ಹಲವು ಸಾಧನೆಗಳನ್ನು ಮಾಡಿದ್ದಾರೆ. ಈಗ ಶ್ರೀಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ಇದನ್ನೂ ಓದಿ: ನಂಗೆ ಎಷ್ಟು ವಯಸ್ಸು- 111 ಅಂದಾಗ, ಬಹಳಾಯ್ತು ಅಂದ್ರು ನಡೆದಾಡೋ ದೇವ್ರು

    ಸಿಎಂ ಸೂಚನೆ:
    ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಜನರಿಗೆ ಆತಂಕ ಬೇಡ, ಆರೋಗ್ಯ ಸ್ಥಿರವಾಗಿದೆ ಅಂತ ಶೃಂಗೇರಿಯಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಶ್ರೀಗಳಿಗೆ ಬಿಟ್ಟು-ಬಿಟ್ಟು ಸ್ವಲ್ಪ ಜ್ವರ ಬರ್ತಿದೆ, ಅವರ ಆರೋಗ್ಯದ ಸಂಬಂದ ಪಿನ್ ಟು ಪಿನ್ ಮಾಹಿತಿ ತರಿಸಿಕೊಳ್ತಿದ್ದೇನೆ. ಮಠದ ಕಿರಿಯ ಸ್ವಾಮೀಜಿ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚಿನ ಚಿಕಿತ್ಸೆ ಅನಿವಾರ್ಯತೆ ಇದ್ರೆ ಆಸ್ಪತ್ರೆ ದಾಖಲು ಮಾಡಲು ಹೇಳಿದ್ದೇನೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರಕ್ಕೆ ಸೂಚಿಸಿದ್ದೇನೆ. ಯಾರೂ ಗಾಬರಿಪಡೋ ಅಗತ್ಯವಿಲ್ಲ ಅವರು ನಮ್ಮೊಂದಿಗೆ ಇನ್ನೂ ಇರಬೇಕೆಂದು ಶಾರದಾಂಬೆಗೆ ಬೇಡಿಕೊಳ್ತೇನೆ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ- ಬಿಜಿಎಸ್ ವೈದ್ಯರಿಂದ ಸ್ಪಷ್ಟನೆ

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ- ಬಿಜಿಎಸ್ ವೈದ್ಯರಿಂದ ಸ್ಪಷ್ಟನೆ

    ಬೆಂಗಳೂರು: ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಬಿಜಿಎಸ್ ಆಸ್ಪತ್ರೆಯ ವೈದ್ಯರ ತಂಡ ಸ್ಪಷ್ಟಪಡಿಸಿದೆ.

    ಶ್ರೀಗಳು ಶನಿವಾರ ತಮ್ಮ ಆರೋಗ್ಯ ತಪಾಸಣೆಗಾಗಿ ಬೆಂಗಳೂರಿನ ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದರು. 6 ತಿಂಗಳ ನಂತರ ಶ್ರೀಗಳು ಜನರಲ್ ಚೆಕಪ್‍ಗೆ ಬಂದು ದಾಖಲಾಗಿದ್ದರು.

    ಡಾ. ರವೀಂದ್ರ ತಂಡ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿ ಏನೂ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಇಂದು ಬೆಳಗ್ಗೆ 5.30ರ ಸುಮಾರಿಗೆ ಎದ್ದಿರುವ ಶ್ರೀಗಳು, ಎಂದಿನಂತೆ ಲವಲವಿಕೆಯಿಂದ ಪೂಜೆ ಮಾಡಿದ್ದಾರೆ. ಮಧ್ಯಾಹ್ನದ ವೇಳೆಗೆ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ.

    ಶ್ರೀಗಳ ಜೊತೆ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಕಣ್ಣೂರು ಸ್ವಾಮೀಜಿ ಆಗಮಿಸಿದ್ದು, ವೈದ್ಯಕೀಯ ವರದಿ ಬಳಿಕ ವೈದ್ಯರ ಸಲಹೆ ಮೇರೆಗೆ ಮಠಕ್ಕೆ ವಾಪಸ್ ಕರೆ ತರಲಾಗುವುದು ಎಂದು ನಿನ್ನೆ ಮಾಧ್ಯಮಗಳಿಗೆ ತಿಳಿಸಿದ್ದರು.

    ಪೊಲೀಸ್ ಬೆಂಗಾವಲಿನಲ್ಲಿ ಶ್ರೀಗಳನ್ನು ಕೆಂಗೇರಿ ಬಿಜಿಎಸ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಕಳೆದ ಜೂನ್ ನಲ್ಲಿ 5 ಸ್ಟಂಟ್ ಗಳನ್ನು ಅಳವಡಿಸಲಾಗಿತ್ತು. ಬಳಿಕ 3 ಸ್ಟಂಟ್ ಅಳವಡಿಸಲಾಗಿತ್ತು. ಇದರಿಂದ 6 ತಿಂಗಳಿಗೆ ಒಮ್ಮೆ ತಪಾಸಣೆಗೆ ನಡೆಸಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದರು. ಹೀಗಾಗಿ ನಿನ್ನೆ ಮಧ್ಯಾಹ್ನ 3 ಗಂಟೆಗೆ ತುಮಕೂರಿನಿಂದ ಹೊರಟ ಶ್ರೀಗಳು ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಆಸ್ಪತ್ರೆಯ ಒಳಗೆ ತೆರಳಲು ವೀಲ್ಹ್ ಚೇರ್ ನಲ್ಲಿ ಕುಳಿತುಕೊಳ್ಳಲು ನಿರಾಕರಿಸಿ ತಾವೇ ನಡೆದುಕೊಂಡು ತೆರಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 111ರ ಸಂಭ್ರಮದಲ್ಲಿ ಸಿದ್ದಗಂಗಾ ಶ್ರೀ- ಮೋದಿ, ಅಮಿತ್ ಶಾ ಕನ್ನಡದಲ್ಲೇ ವಿಶ್

    111ರ ಸಂಭ್ರಮದಲ್ಲಿ ಸಿದ್ದಗಂಗಾ ಶ್ರೀ- ಮೋದಿ, ಅಮಿತ್ ಶಾ ಕನ್ನಡದಲ್ಲೇ ವಿಶ್

    ಬೆಂಗಳೂರು: ನಡೆದಾಡುವ ದೇವರು, ತ್ರಿವಿಧ(ಅನ್ನ, ಅಕ್ಷರ, ಜ್ಞಾನ)ದಾಸೋಹಿ, ಕಲಿಯುಗದ ಚೈತನ್ಯ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಇಂದು 111ನೇ ವರ್ಷಕ್ಕೆ ಕಾಲಿಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕನ್ನಡದಲ್ಲೇ ಶುಭಕೋರಿದ್ದಾರೆ.

    `ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಸುದೀರ್ಘ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ಸದಾ ಪ್ರಾರ್ಥಿಸುತ್ತೇನೆ. ತಮ್ಮ ಸಾನ್ನಿಧ್ಯದಿಂದ ಭಕ್ತರನ್ನು ಅನುಗ್ರಹಿಸುತ್ತಾ, ಸಮಾಜಕ್ಕೆ ಅವರ ಮಾರ್ಗದರ್ಶನ ನಿರಂತರವಾಗಿರಲಿ ಅಂತ ಪ್ರಧಾನಿಯವರು ಶುಭಾಶಯ ತಿಳಿಸಿದ್ದಾರೆ.

    ತುಮಕೂರಿನ ಶ್ರೀ ಸಿದ್ದಗಂಗಾ ಮಠ ಭಾರತ ದೇಶದ ಹಿರಿಮೆಯಾಗಿದೆ. ಸಮಾಜಕ್ಕೆ ಶಕ್ತಿ ತುಂಬುತ್ತಾ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಸಿದ್ದಗಂಗಾ ಮಠ ಮುಂಚೂಣಿಯಲ್ಲಿದೆ. ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದಿರುವುದು ನನ್ನ ಸೌಭಾಗ್ಯ ಎಂದು ನಾನು ಭಾವಿಸಿದ್ದೇನೆ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮದಿನದಂದು ಇಡೀ ದೇಶವೇ ಅವರಿಗೆ ಶುಭಾಶಯಗಳನ್ನು ಸಲ್ಲಿಸುತ್ತಿದೆ. ದೇಶದ ಅತ್ಯಂತ ವಂದನೀಯ ಮತ್ತು ಪೂಜನೀಯ ಗುರುಗಳಲ್ಲಿ ಪೂಜ್ಯ ಶ್ರೀಗಳು ಒಬ್ಬರಾಗಿದ್ದಾರೆ. ಅವರ ಅತ್ಯುತ್ತಮ ಸೇವಾಕಾರ್ಯಗಳು ತಲೆಮಾರುಗಳನ್ನು ತಲುಪಿದೆ ” ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕೂಡ ಸ್ವಾಮೀಜಿಯವರಿಗೆ ವಿಶ್ ಮಾಡಿದ್ದು, `ನಡೆದಾಡುವ ದೇವರು, ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳಿಗೆ 111ನೇ ಜನ್ಮದಿನದಂದು ನಾಡಿನ ಜನತೆಯ ಪರವಾಗಿ ಪ್ರಣಾಮಗಳು. ಅವರ ಮಾರ್ಗದರ್ಶನ ಸಮಾಜಕ್ಕೆ ಅತ್ಯಗತ್ಯ, ಶ್ರೀಗಳಿಗೆ ದೀರ್ಘಾಯುಷ್ಯ ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

     

  • ಸಿದ್ದಗಂಗಾ ಶ್ರೀಗಳನ್ನು ಭೇಟಿಯಾದ ಸಚಿವ ಎಂ.ಬಿ.ಪಾಟೀಲ್- ಭೇಟಿಯ ನಂತರ ಹೇಳಿದ್ದು ಹೀಗೆ

    ಸಿದ್ದಗಂಗಾ ಶ್ರೀಗಳನ್ನು ಭೇಟಿಯಾದ ಸಚಿವ ಎಂ.ಬಿ.ಪಾಟೀಲ್- ಭೇಟಿಯ ನಂತರ ಹೇಳಿದ್ದು ಹೀಗೆ

    ತುಮಕೂರು: ಸಚಿವ ಎಂ.ಬಿ.ಪಾಟೀಲ್ ಇಂದು ಮತ್ತೊಮ್ಮೆ ಸಿದ್ದಗಂಗಾ ಶ್ರೀಗಳನ್ನು ಭೇಟಿಯಾದರು. ಎಲ್ಲವೂ ಒಳ್ಳೆಯದಾಗುತ್ತದೆ. ಬುದ್ದಿಗಳು ಹೇಳಿದಂತೆ ಎಲ್ಲವೂ ನಡೆಯಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಇತ್ತೀಚಿಗೆ ನಡೆದ ಬೆಳವಣಿಗೆಯಿಂದ ನನಗೆ ಯಾವುದೇ ಬೇಜಾರಾಗಿಲ್ಲ. ಸಿದ್ದಗಂಗಾ ಶ್ರೀಗಳು ನಮ್ಮ ಪಾಲಿನ ದೇವರು. ಅವರು ಆಧುನಿಕ ಬಸವಣ್ಣ ಈಗ ಎಲ್ಲಾ ವಿವಾದ ಅಂತ್ಯಗೊಂಡಿದೆ. ಶ್ರೀಗಳು ನನಗೆ ಏನೂ ಹೇಳಿಲ್ಲ, ಆಶೀರ್ವಾದ ಮಾಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

    ಶಂಕರ್ ಬಿದರಿ ಜೊತೆಗೆ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಯಾವುದೇ ವಿವಾದಗಳಿಲ್ಲಾ, ಎಲ್ಲಾ ವಿವಾದಗಳು ಅಂತ್ಯಗೊಂಡಿವೆ. ವಿವಾದಗಳಿಂದ ನನಗೆ ಯಾವುದೇ ರೀತಿಯಲ್ಲಿ ಬೇಜಾರಾಗಿಲ್ಲಾ. ನಾವು ಮಠಕ್ಕೆ ಬಂದಿದ್ದೇವೆ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಎಲ್ಲವೂ ಒಳ್ಳೆಯದಾಗಲಿದೆ. ಎಲ್ಲಾ ಶ್ರೀಗಳು ಹೇಳಿದಂತೆ ಆಗಲಿದೆ ಎಂದು ತಿಳಿಸಿದರು.