Tag: Siddaganga Shri

  • ಬೆಳಗ್ಗೆ 2.15 ರಿಂದ ರಾತ್ರಿ 11 ಗಂಟೆ – ನಡೆದಾಡುವ ದೇವರ ದಿನಚರಿ ವಿಸ್ಮಯ

    ಬೆಳಗ್ಗೆ 2.15 ರಿಂದ ರಾತ್ರಿ 11 ಗಂಟೆ – ನಡೆದಾಡುವ ದೇವರ ದಿನಚರಿ ವಿಸ್ಮಯ

    ಕಲ ಜೀವಗಳಿಗೂ ಲೇಸನ್ನು ಬಯಸುವ ಶಿವಕಾರುಣ್ಯ ಸ್ವರೂಪರಾದ ಶ್ರೀಗಳ ಬದುಕಿನಷ್ಟೇ ಅವರ ದಿನಚರಿಯೂ ವಿಸ್ಮಯ. ಶ್ರೀಗಳ ಪಾಲಿಗೆ ವಿರಾಮವೆಂದ್ರೆ “ಒಂದು ಕಾರ್ಯವನ್ನು ಮುಗಿಸಿ ಇನ್ನೊಂದು ಕಾರ್ಯದಲ್ಲಿ ತೊಡುಗುವುದು” ಎನ್ನುವ ವ್ಯಾಖ್ಯನ ನೀಡುತ್ತಾರೆ. ಕಾಯಕಯೋಗಿಯ ದಿನಚರಿ ಆರಂಭವಾಗುವುದು ಬೆಳಗಿನ ಜಾವ 2.15ಕ್ಕೆ. ನಾವೆಲ್ಲ 2.15ಕ್ಕೆ ನಿದ್ದೆಯಲ್ಲಿದ್ದರೆ ಗುರುಗಳು ಎದ್ದು ತಮ್ಮ ಕೆಲಸ ಆರಂಭಿಸುತ್ತಿದ್ದರು.

    ಮಧ್ಯರಾತ್ರಿ ಕಳೆದ ನಂತರ 2.15ಕ್ಕೆ ಏಳುತ್ತಾರೆ. ಅಧ್ಯಯನ ಕೊಂಚ ಕಾಲ, ಅನಂತರ ಶೌಚಾದಿ ನಿತ್ಯಕರ್ಮಗಳನ್ನು ಮುಗಿಸಿ 3.30ರ ವೇಳೆಗೆ ಪೂಜಾಗೃಹ ಪ್ರವೇಶ. ಕೊಂಚ ಕಾಲ ಏಕಾಂತ ಧ್ಯಾನ, ಯಾರಿಗೂ ಪ್ರವೇಶವಿಲ್ಲ. ಅನಂತರ ಅರ್ಚನಾದಿಗಳ ಆರಂಭ. ವೇದಮಂತ್ರಗಳ, ಶರಣರ ವಚನ, ಕೈವಲ್ಯದ ಹಾಡುಗಳು ಭಕ್ತಿಗೀತೆಗಳನ್ನು ಹಾಡುತ್ತಾರೆ. ಹತ್ತಾರು ಭಕ್ತರ ಮದ್ಯೆ ಗುರು ಲಿಂಗ ಜಂಗಮಾಚರಣೆ ಶುರುವಾಗುತ್ತೆ. ಮಾತು ಮನಗಳು ಮೂಕವಾಗುವ ಅನುಭಾವದ ಪವಿತ್ರ ಜಗತ್ತು ಅಲ್ಲಿ ಸೃಷ್ಟಿಯಾಗಿ ಬಿಡುತ್ತೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಇಷ್ಟಲಿಂಗಾರ್ಚನೆಯ ನಂತರ ಪ್ರಸಾದ ಸ್ವೀಕಾರ. ಪ್ರಸಾದ ವಿತರಣೆಯ ಸಂದರ್ಭದಲ್ಲಿ ತುಂಬುಕಂಠದ ಅನುಭಾವದ ಹಾಡುಗಳು ಅಲ್ಲಿ ಮೊಳಗುತ್ತದೆ. ಶ್ರೀಗಳೇ ಈ ಹಾಡು ಹಾಡುತ್ತಾರೆ. ಇದನ್ನು ಕೇಳುವುದೊಂದೆ ಅವಿಸ್ಮರಣೀಯ. ತದನಂತರ ಮಿತಾಹಾರ ಸೇವನೆ. ಒಂದಿಷ್ಟು ಹಣ್ಣು, ಅದು ಒಂದೆರಡು ತೊಳೆ ಅಷ್ಟೇ.

    5.30ಕ್ಕೆ ಪೂಜಾಗೃಹದಿಂದ ಕಾಯಕದತ್ತ ಗಮನ. ಕಾರ್ಯಲಾಯಕ್ಕೆ ಆಗಮನ. ಮುಂಜಾನೆಯ ಪ್ರಾರ್ಥನಾ ಸಭೆ. ಸಾಮೂಹಿಕವಾಗಿ ವಿದ್ಯಾರ್ಥಿಗಳ ಪ್ರಾರ್ಥನೆಯಲ್ಲಿ ಶ್ರೀಗಳು ಉಪಸ್ಥಿತಿ. ತದನಂತ್ರ ವಿದ್ಯಾರ್ಥಿಗಳಿಗೆ ಹಿತವಚನ ಭೋಧನೆ. ಬಳಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಜೊತೆ ಹೊಲ ಗದ್ದೆಗಳಿಗೆ ಭೇಟಿ ಕೊಡುವ ಶ್ರೀಗಳು ಹೊಲದಲ್ಲಿ ಬೆಳೆಯುವ ಬೆಳೆಯ ಬಗ್ಗೆ ಅಷ್ಟೇ ಆಸ್ಥೆ ವಹಿಸುತ್ತಾರೆ. ಇದಕ್ಕಾಗಿಯೇ ಶ್ರೀಗಳನ್ನು ಧರೆಗಿಳಿದ ಭಗವಂತ ಅಂತಾ ಕರೆಯೋದು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಶ್ರೀಗಳು ಎಂದಿಗೂ ವಿರಮಿಸಿದವರಲ್ಲ. ಭಕ್ತರಿಗೆ ಸದಾ ದರ್ಶನ ನೀಡುತ್ತಾ, ವಿದ್ಯಾರ್ಥಿಗಳ ಜೊತೆ ಸಂವಾದ ಮಾಡುತ್ತಾ ಇಡೀ ಮಠದ ತುಂಬೆಲ್ಲ ಓಡಾಡುತ್ತಿದ್ದರೆ ಮಠದಲ್ಲಿ ಏನೋ ಚೈತನ್ಯ. ಇವರ ಲವಲವಿಕೆಯ ನೋಡಿ ಅಲಸ್ಯದಿಂದ ಮೂಲೆಸೇರಿದವರು ಎದ್ದು ಕುಳತು ಕೆಲ್ಸ ಮಾಡುವಂತಹ ದೈವಿಕ ಶಕ್ತಿ ಶ್ರೀಗಳಲ್ಲಿತ್ತು.

    ಗುರುಗಳ ದಿನಚರಿ
    ಬೆಳಗಿನ ಜಾವ 2:15 ಕ್ಕೆ ನಿದ್ದೆಯಿಂದ ಎಚ್ಚರ
    2:15 – 2:45 ಶರಣ ಸಂತರ ತತ್ವ ಪಠಣ
    2:45 – 3:00 ಸ್ನಾನಾದಿ ನಿತ್ಯವಿಧಿ
    3:00 – 5:30 ಶಿವಪೂಜೆ ಲಘುಪ್ರಸಾದ ಸ್ವೀಕಾರ
    5:30 – 6: 00 ಸಾಮೂಹಿಕ ಪ್ರಾರ್ಥನೆ
    6:15 – 7:10 ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮತ್ತು ಸಂಸ್ಕೃತ ಪಾಠ ಭೋಧನೆ
    7.10 – 7:40 ದಿನಪತ್ರಿಕೆ ಓದುವ ಹವ್ಯಾಸ
    8:40 – 9:00 ಟಪಾಲು ಪರಿಶೀಲನೆ
    9:00 – 9:10 ಪ್ರಸಾದ ವಸ್ತು ಪರಿಶೀಲನೆ
    9:10 – 9:30 ಶ್ರೀ ಕ್ಷೇತ್ರದ ಕಾರ್ಯವೀಕ್ಷಣೆ
    9:30 – 10:30 ಶ್ರೀಗಳಿಂದ ಪತ್ರಗಳಿಗೆ ಉತ್ತರ
    10:30 – 10:45 ವಿದ್ಯಾರ್ಥಿಗಳ ಊಟದ ವ್ಯವಸ್ಥೆ ಪರಿಶೀಲನೆ
    10:45 – 12:00 ಭಕ್ತಾದಿಗಳಿಗೆ ಸಂದರ್ಶನ
    12:00 – 1:00 ಯಂತ್ರಧಾರಣೆ
    1:00 – 2:30 ಭಕ್ತಾದಿಗಳಿಗೆ ಸಂದರ್ಶನ
    2:30 – 3:30 ಪೂಜೆ ಮತ್ತು ಪ್ರಸಾದ ಸ್ವೀಕಾರ
    3:30 – 5:30 ಸಂಸ್ಥೆಗಳ ಕಾರ್ಯಚಟುವಟಿಕೆ ಪರಿಶೀಲನೆ
    5:30 – 5:45 ಪ್ರಸಾದ ಸಿದ್ದತೆ ಪರಿಶೀಲನೆ
    5:45 – 6:30 ಗದ್ದೆ ತೋಟಗಳ ಪರಿಶೀಲನೆ
    6:30 – 7:00 ವಿದ್ಯಾರ್ಥಿಗಳೊಂದಿಗೆ ಸಾಮೂಹಿಕ ಪ್ರಾರ್ಥನೆ
    7:00 – 7:15 ವಿದ್ಯಾರ್ಥಿಗಳಿಗೆ ಆರ್ಶೀವಚನ
    7:15 – 7:45 ಭಕ್ತಾದಿಗಳ ಸಂದರ್ಶನ
    7:45 – 8:00 ಪ್ರಸಾದ ನಿಲಯ ವ್ಯವಸ್ಥೆಯ ವೀಕ್ಷಣೆ
    8:00 – 8:30 ಕಾರ್ಯಾಲಯ ವ್ಯವಹಾರ
    8:30 – 8:45 ಶರಣರ ತತ್ವಪಠಣ
    8:45 – 9:00 ಸ್ನಾನ
    9:00 – 10:00 ಪೂಜೆ, ಲಘು ಪ್ರಸಾದ
    10:00 – 10:30 – ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಯ ಮೇಲ್ವಿಚಾರಣೆ
    10:30 – 10:45 ದಿನಚರಿ ಬರೆಯುವುದು
    11 ಗಂಟೆಗೆ – ನಿದ್ರೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳ ಬಗ್ಗೆ ಬಾಲ್ಯದಲ್ಲಿಯೇ ಇಂಟರೆಸ್ಟಿಂಗ್ ಭವಿಷ್ಯ ನುಡಿದಿದ್ದ ಹಸ್ತಸಾಮುದ್ರಿಕ ಸನ್ಯಾಸಿ!

    ಶ್ರೀಗಳ ಬಗ್ಗೆ ಬಾಲ್ಯದಲ್ಲಿಯೇ ಇಂಟರೆಸ್ಟಿಂಗ್ ಭವಿಷ್ಯ ನುಡಿದಿದ್ದ ಹಸ್ತಸಾಮುದ್ರಿಕ ಸನ್ಯಾಸಿ!

    ಶ್ರೀಗಳಿಗೆ ನಾಲ್ಕು ವರ್ಷವಿರುವಾಗಲೇ ಅವರ ಮನೆಗೆ ಹಸ್ತ ಸಾಮುದ್ರಿಕ ಸನ್ಯಾಸಿಯೊಬ್ಬರು ಆಗಮಿಸಿದ್ದರಂತೆ. ಇವರ ಮನೆಯ ಕಟ್ಟೆಯಲ್ಲಿ ಕೂತಿದ್ದ ಸನ್ಯಾಸಿಗೆ ಶಿವಣ್ಣದ ಬಾಲ್ಯದ ತೇಜೋ ವಿಶೇಷತೆಯನ್ನು ಕಂಡು ಸಂತೋಷಗೊಂಡಿದ್ದರು.

    ಬಳಿಕ ಶಿವಣ್ಣನ ಕೈಯನ್ನು ನೋಡಿ, “ಸ್ವಾಮಿ ಇಷ್ಟೊಂದು ಶುಭಲಕ್ಷಣದ ಕೈಯನ್ನು ನಾನು ನೋಡೇ ಇಲ್ಲ”, ಇವನೊಬ್ಬ ಮಹಾಭಾಗ್ಯವಂತ, ಅನ್ನದಾನಿ, ನಾಡೆಲ್ಲ ಇವರಿಂದಲೇ ಬೆಳಗುವುದು, ಇವರು ಕಾಲಜ್ಞಾನಿ. ನಿಮ್ಮ ಕೈಗೆ ಸಿಗುವವನಲ್ಲ, ಲೋಕದ ಸ್ವತ್ತು” ಎಂದು ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಸನ್ಯಾಸಿಯ ಭವಿಷ್ಯವನ್ನು ಮನೆ ಅವರು ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ದಿನದಿಂದ ದಿನಕ್ಕೆ ಬಾಲಕ ಶಿವಯೋಗಿಯಾಗಿ ಬದಲಾಗುತ್ತಾ ಕೊನೆಗೆ ಶಿವಕುಮಾರ ಸ್ವಾಮೀಜಿಯಾಗಿ ಸಿದ್ದಗಂಗಾ ಮಠದ ಅಧಿಕಾರ ಸ್ವೀಕರಿಸಿ ನಡೆದಾಡುವ ದೇವರಾಗಿದ್ದು ಇತಿಹಾಸ.

    ಕುದುರೆ ಸವಾರಿ: ಕುದುರೆ ಸವಾರಿಯನ್ನು ಅತ್ಯಂತ ಪ್ರೀತಿಸುತ್ತಿದ್ದ ಸಿದ್ದಗಂಗಾ ಶ್ರೀ ಅವರ ಬಾಲ್ಯದ ಬದುಕು ಎಲ್ಲರಂತೆ ತುಂಟಾಟದಿಂದಲೇ ಕೂಡಿತ್ತು. ತಂದೆ ಇಲ್ಲದ ವೇಳೆಯಂತೂ ಕುದುರೆಯನ್ನು ಬಿಚ್ಚಿಕೊಂಡು ಹೋಗಿ ಧೂಳೆಬ್ಬಿಸುವಂತೆ ಕುದುರೆ ಸವಾರಿ ಮಾಡುತ್ತಿದ್ದರಂತೆ. ಸಿದ್ದಗಂಗಾ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಶಿವಕುಮಾರ ಸ್ವಾಮೀಜಿಗಳು ಭಕ್ತರ ಮನೆಗೆ ಕುದುರೆ ಮೂಲಕ ಸಂಚರಿಸಿ ಭೇಟಿ ನೀಡುತ್ತಿದ್ದರು. ಇದನ್ನೂ ಓದಿ: ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಹಲಸಿನ ಹಣ್ಣನ್ನು ಇಷ್ಟಪಡುತ್ತಿದ್ದ ಶ್ರೀಗಳು ಯಾವಾಗಲೂ ಹಣ್ಣಿನ ಮರವೇರಿ ಹಣ್ಣನ್ನು ಕೊಯ್ದು ತಿನ್ನುತ್ತಿದ್ದರಂತೆ. ವೀರಾಪುರದ ಊರಿನಲ್ಲಿ ಯಾವ ಮರದಲ್ಲಿ ಹಣ್ಣು ಬಿಟ್ರೂ ಮೊದಲ ಪಾಲು ಶ್ರೀಗಳಿಗೆ ಮೀಸಲಾಗಿತ್ತು. ಬಾಲ್ಯದಲ್ಲಿಯೇ ದಾಸೋಹದ ಬಗ್ಗೆ ಅಪರಿಮಿತ ಆಸ್ಥೆ ಇಟ್ಟುಕೊಂಡಿದ್ದ ಶ್ರೀಗಳು ಹಣ್ಣನ್ನು ಇಡೀ ಊರಿನ ಹುಡುಗರಿಗೆ ಹಂಚಿಯೇ ತಿನ್ನುತ್ತಿದ್ದರು.

    ಬಾಲ್ಯದಲ್ಲಿ ತಾಯಿ ನಿಧನ: ನಾಲ್ಕನೇ ತರಗತಿ ಓದುತ್ತಿದ್ದ ಶ್ರೀಗಳ ಬದುಕಿಗೆ ದೊಡ್ಡ ಅಘಾತವಾಗಿದ್ದು, ಎದೆಗವುಚಿಕೊಂಡು ಬದುಕಿನ ಅಷ್ಟು ಸಂಸ್ಕಾರ ಧಾರೆಯೆರೆದ ತಾಯಿಯನ್ನು ಕಳೆದುಕೊಂಡಾಗ. ಸಣ್ಣ ವಯಸಿನಲ್ಲಿ ತಾಯಿಯನ್ನು ಕಳೆದುಕೊಂಡು ತೀರಾ ಅಘಾತ ಅನುಭವಿಸಿದ್ದ ಶ್ರೀಗಳು ತಮ್ಮನ್ನೇ ತಾವೇ ಸಮಾಧಾನ ಪಡಿಸಿಕೊಂಡು ಅಕ್ಕನಲ್ಲಿಯೇ ತಾಯಿಯ ಪ್ರೀತಿಯನ್ನು ಕಂಡ್ರು. ಮುಂದೆ ಬದುಕಿನಲ್ಲಿ ಅದೆಷ್ಟೋ ಅನಾಥ ಜೀವಗಳಿಗೆ ಗುರುಗಳು ತಾಯಿ ಪ್ರೀತಿಯನ್ನು ಮೊಗೆ ಮೊಗೆದು ಕೊಟ್ಟರು. ಹಸಿದ ಹೊಟ್ಟೆಗೆ ಅಮ್ಮನಂತೆ ಊಟ ಬಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಸಿದ್ದಗಂಗಾ ಶ್ರೀಗಳಿಗಾಗಿ ವಿಮಾನದಲ್ಲಿಯೇ ಕುಳಿತು ಕವನ ಬರೆದ ಅಬ್ದುಲ್ ಕಲಾಂ!

    ಸಿದ್ದಗಂಗಾ ಶ್ರೀಗಳ 99ನೇ ಜನ್ಮದಿನೋತ್ಸವಕ್ಕೆ ಗುರುವಂದನಾ ಕಾರ್ಯಕ್ರಮ ನಡೆದಿತ್ತು. ಮಾನವ ಮಾನವ ಸಂಬಂಧಗಳೇ ನುಚ್ಚು ನೂರಾಗುತ್ತಿರುವ ನಿರಾಸೆಯ ಸನ್ನಿವೇಶದಲ್ಲಿ ಮಾನವ ಸೇವೆಯೇ ಮಹಾದೇವನ ಸೇವೆ ಎಂದು ಭಾವಿಸಿ ನೂರು ದಾಟಿರುವ ವಯಸಿನಲ್ಲಿಯೂ ಆಯಾಸ ಎನ್ನದೇ ದುಡಿಯುತ್ತಿರುವ ಇಂತಹ ಲೋಕ ಜಂಗಮನಿಗಿಲ್ಲದೇ ಮತ್ಯಾರಿಗೆ ಗುರುವಂದನೆ ಸಲ್ಲಬೇಕು ಅಂತಾ ಹೇಳಿಕೊಂಡು ಈ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಅಂದಿನ ರಾಷ್ಟ್ರಪತಿ ಆಗಿದ್ದ ಎಪಿಜೆ ಅಬ್ದುಲ್ ಕಲಾಂ ಆಗಮಿಸಿದ್ದರು.

    ವಿಮಾನದಲ್ಲಿ ಪ್ರಯಾಣಿಸುವಾಗಲೇ ಕಲಾಂ ಶ್ರೀಗಳಿಗೆ ಕವನವೊಂದನ್ನು ಬರೆದರು. ಡಾ ಎಪಿಜೆ ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಸುತ್ತೂರು ಶ್ರೀಗಳಿಗೆ ಫೋನ್ ಮಾಡಿ, ಸಾಹೇಬ್ರು ಸಿದ್ದಗಂಗಾ ಶ್ರೀಗಳ ಬಗ್ಗೆ ಕವಿತೆ ಬರೆಯುತ್ತಾರೆ. ಅದನ್ನು ಫ್ಯಾಕ್ಸ್ ಮಾಡಲಾಗುವುದು. ತಕ್ಷಣಕ್ಕೆ ಅದನ್ನ ಕನ್ನಡಕ್ಕೆ ತರ್ಜುಮೆ ಮಾಡಿಸಿ ಗುರುವಂದನೆ ಕಾರ್ಯಕ್ರಮದಲ್ಲಿ ಹಾಡಿಸಲು ಸಾಧ್ಯವೇ ಎಂದು ಕೇಳಿದರು.

    ಕಲಾಂ ಬರೆದ ಕವಿತೆಯನ್ನು ಗೊ.ರು ಚನ್ನಬಸಪ್ಪ ಅವರು ಕನ್ನಡಕ್ಕೆ ತರ್ಜುಮೆ ಮಾಡುತ್ತಾರೆ. ಅಂದು ಗುರುವಂದನಾ ಕಾರ್ಯಕ್ರಮದಲ್ಲಿ ಸುಶ್ರಾವ್ಯವಾಗಿ ಇದನ್ನು ಹಾಡಲಾಗುತ್ತದೆ. ಕಲಾಂ ತನ್ನ ಸ್ಫೂರ್ತಿಯ ಸೆಲೆಯನ್ನು ಕಣ್ತುಂಬಿಸಿಕೊಂಡು ಕವನವನ್ನು ಅರ್ಪಿಸಿ ಖುಷಿಪಟ್ರಂತೆ.

    ಕಲಾಂ ಬರೆದ ಕವಿತೆ:
    ನೀವು ನಿಮ್ಮೆದುರಿಗೆ ನೋಡಿ ಒಬ್ಬ ರಸಋಷಿ
    ಸುಂದರ ಅನುಭಾವದ ಹಾರೈಕೆ ಹೊತ್ತ ಯೋಗಋಷಿ
    ಅನುದಿನವೂ ಭಗವಂತ ನಿಮಗೆ ಕರುಣಿಸಿದ ಈ ಯೋಗಿ
    ಬೆಲೆಯುಳ್ಳ ಜೀವನದ ವೈಢೂರ್ಯವಾಗಿ

    ತಪದ ಬದುಕಿನ ಅಮೂಲ್ಯ ಹಾರವಾಗಿ
    ಮೂವತ್ತಾರು ಸಾವಿರ ವಜ್ರಗಳ ಸಂಯೋಗಿ
    ಮಾನವೀಯತೆಯೇ ಈ ಋಷಿಯ ಸಂದೇಶ
    ಓ ನನ್ನ ನಾಗರೀಕ ಬಂಧುಗಳೇ
    ಕೊಡುವಲ್ಲಿ ಪಡೆಯಿರಿ ನೆಮ್ಮದಿಯ ದೇಹಾತ್ಮಗಳಲ್ಲಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿನ್ನೆಗಿಂತಲೂ ಚೇತರಿಕೆ – ಕಣ್ಣು ತೆರೆದು ಭಕ್ತರನ್ನು ಆಶೀರ್ವಾದಿಸಿದ ನಡೆದಾಡುವ ದೇವರು!

    ನಿನ್ನೆಗಿಂತಲೂ ಚೇತರಿಕೆ – ಕಣ್ಣು ತೆರೆದು ಭಕ್ತರನ್ನು ಆಶೀರ್ವಾದಿಸಿದ ನಡೆದಾಡುವ ದೇವರು!

    ತುಮಕೂರು: ಅನಾರೋಗ್ಯದಿಂದ ಬಳಲುತ್ತಿರುವ ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿಯವರು ತಮ್ಮನ್ನು ನೋಡಲು ಆಗಮಿಸಿದ ಭಕ್ತರನ್ನು ಕಣ್ಣು ತೆರೆದು ನೋಡಿ ಆಶೀರ್ವಾದಿಸಿದ್ದಾರೆ.

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇಂದು ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದಾರೆ. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿದ್ದು, ಅವರ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ.

    ಶ್ರೀಗಳ ಆರೋಗ್ಯದಲ್ಲಿ ನಿನ್ನೆಗಿಂತಲೂ ಇಂದು ಚೇತರಿಕೆ ಕಂಡುಬಂದಿದ್ದು, ಸ್ವಯಂ ಉಸಿರಾಟ ಮುಂದುವರಿಸಿದ್ದಾರೆ. ಶ್ರೀಗಳು ದಿನದಿಂದ ದಿನಕ್ಕೆ ಉತ್ತಮವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಲ್ಲದೇ ಎಂದಿನಂತೆ ಇಂದು ಕೂಡ ಶ್ರೀಗಳನ್ನು ನೋಡಲು ಮಠಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.

    ಸದ್ಯ ಸಿದ್ದಗಂಗಾ ಮಠದಲ್ಲೇ ಶ್ರೀಗಳಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದ್ದು, ಎಂದಿನಂತೆ ರಕ್ತ ಪರೀಕ್ಷೆ, ಬಿ.ಪಿ. ಪಲ್ಸ್‌ಗಳ  ತಪಾಸಣೆಯನ್ನು ವೈದ್ಯರು ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಡಿಯೂರಪ್ಪನವರೇ ಸಿಹಿ ಸುದ್ದಿ ಎಲ್ಲಿದೆ ಹೇಳ್ರೀ  – ಬಂಡೆಪ್ಪ ಕಾಶೆಂಪೂರ ವ್ಯಂಗ್ಯ

    ಯಡಿಯೂರಪ್ಪನವರೇ ಸಿಹಿ ಸುದ್ದಿ ಎಲ್ಲಿದೆ ಹೇಳ್ರೀ – ಬಂಡೆಪ್ಪ ಕಾಶೆಂಪೂರ ವ್ಯಂಗ್ಯ

    ಬೀದರ್: ಸಿಹಿ ಸುದ್ದಿ ಎಲ್ಲಿದೆ ಹೇಳ್ರೀ ಯಡಿಯೂರಪ್ಪನವರೇ? ಆ ಸಿಹಿಯನ್ನು ಕರ್ನಾಟಕ ಅಥವಾ ದೆಹಲಿಯಿಂದ ತರುತ್ತೀರೋ ಇಲ್ಲಾ ವಿದೇಶದಿಂದ ಬರಬೇಕೇ ಎಂದು ಪ್ರಶ್ನಿಸಿ ಬಂಡೆಪ್ಪ ಕಾಶೆಂಪೂರ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ರಂಗಮಂದಿರದಲ್ಲಿ ನಡೆದ ಬಡವರ ಬಂಧು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಈಗಾಗಲೇ ಬಿಜೆಪಿಯ ಎಲ್ಲಾ ಬಾಂಬ್‍ಗಳು ಠುಸ್ಸಾಗಿದ್ದು, ಎಲ್ಲಾ ಅತೃಪ್ತ ಶಾಸಕರು ವಾಪಸ್ ಪಕ್ಷಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಅಥವಾ ಜೆಡಿಎಸ್‍ನ ಸಿಂಗಲ್ ಎಂಎಲ್‍ಎಗಳು ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿ ಈ ಆಟಕ್ಕೆ ರಾಜ್ಯದ ಜನ ಮುಂದೆ ತಕ್ಕ ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದರು.

    ಸಿಹಿ ಸುದ್ದಿ ಕೊಡುತ್ತೇವೆ ಎಂದು ಬಾಯಿ ಮಾತಿಗೆ ಹೇಳ್ತಾರೆ. ಯಡಿಯೂರಪ್ಪನವರೇ ಎಲ್ಲಿದೆ ಸಿಹಿ ಸುದ್ದಿ? ಕರ್ನಾಟಕದಲ್ಲಿ ಇದೆಯೇ? ದೆಹಲಿಯಲ್ಲಿ ಇದೆಯೋ? ಇಲ್ಲಾ ವಿದೇಶದಿಂದ ಬರಬೇಕೇ? ಇದೆಲ್ಲ ಬಿಜೆಪಿ ಅವರು ಜನರ ದಿಕ್ಕು ತಪ್ಪಿಸಲು ಮಾಡುತ್ತಿದ್ದಾರೆ. ಅವರ ಆಟ ನಡಿಯುವುದಿಲ್ಲ ಎಂದರು.

    ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಶ್ರೀಗಳ ಆರೋಗ್ಯ ಬೇಗ ಚೇತರಿಕೆಯಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನಾನು ಕೂಡ ಹೋಗಿ ಶ್ರೀಗಳ ದರ್ಶನ ಪಡೆಯುವೆ. ಕರ್ನಾಟಕಕ್ಕೆ ನಡೆದಾಡುವ ದೇವರ ಕೊಡುಗೆ ಅಪಾರ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪವಾಡ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ನಡೆದಾಡುವ ದೇವರು

    ಪವಾಡ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ನಡೆದಾಡುವ ದೇವರು

    ತುಮಕೂರು: ಅನಾರೋಗ್ಯದಿಂದ ಬಳಲುತ್ತಿರುವ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ಸಿದ್ದಗಂಗಾ ಮಠದಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತಿದ್ದು, ಪವಾಡ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರ ತಂಡ ತಿಳಿಸಿದೆ.

    ಶ್ರೀಗಳಿಗೆ ಸಿದ್ದಗಂಗಾ ಮಠದಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದ್ದು, ಉಸಿರಾಟದ ತೊಂದರೆ ಇರೋದ್ರಿಂದ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಡಾ. ರೇಲಾ, ಬಿಜಿಎಸ್ ಆಸ್ಪತ್ರೆ ವೈದ್ಯರು ಹಾಗೂ ಸಿದ್ದಗಂಗಾ ಆಸ್ಪತ್ರೆ ವೈದ್ಯರು ಶ್ರೀಗಳಿಗೆ ನಿರಂತರ ಚಿಕಿತ್ಸೆ ನೀಡುತ್ತಿದ್ದಾರೆ. ಇಂದು ಕೂಡ ವಿವಿಧ ಗಣ್ಯರು ರಾಜಕೀಯ ಮುಖಂಡರು ಶ್ರೀಗಳ ಭೇಟಿಗೆ ಆಗಮಿಸಿದ್ದಾರೆ. ಡಿಸಿಎಂ ಪರಮೇಶ್ವರ್, ಬಿ.ಎಸ್ ಯಡಿಯೂರಪ್ಪ ಸೇರಿದಂತೆ ವಿವಿಧ ರಾಜಕೀಯ ಪ್ರಮುಖರು ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದಾರೆ. ಎಂದಿನಂತೆ ಮಠದ ಸುತ್ತಲೂ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ.

    ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್  ಮಾತನಾಡಿ, ಶ್ರೀಗಳ ಆರೋಗ್ಯದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಉಸಿರಾಟದ ಸಮಸ್ಯೆ ಹಾಗೆ ಇದೆ. ಶ್ವಾಸಕೋಶದ ಸೋಂಕು, ಕಫದ ಸಮಸ್ಯೆ ಕಡಿಮೆಯಾಗಿದೆ. ಬೆಳಗಿನ ಜಾವ ರಕ್ತ ಪರೀಕ್ಷೆ ಮಾಡಲಾಗಿದ್ದು, ಎಲ್ಲವು ಸರಿಯಾಗಿದೆ. ನಿನ್ನೆ ರಾತ್ರಿ ಶ್ರೀಗಳ ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಹಾಗಾಗಿ ಆತಂಕಗೊಂಡಿದ್ದೇವು. ಸದ್ಯ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. 2-3 ಗಂಟೆ ನಿದ್ರೆಯಲ್ಲಿ ಇರುತ್ತಾರೆ. ಬಳಿಕ ಆಗ ಆಗಾಗ ಕಣ್ಣು ಬಿಟ್ಟು ನೋಡುತ್ತಿದ್ದಾರೆ. ಇಷ್ಟಲಿಂಗ ಪೂಜೆಯನ್ನು ಶ್ರೀಗಳಿಗೆ ಮಾಡಲಾಗುತ್ತಿಲ್ಲ, ಆದ್ರೆ ಕಿರಿಯ ಶ್ರೀಗಳು ಅವರ ಎದುರಲ್ಲೆ ಪೂಜೆ ಮಾಡಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸಿದ್ದಗಂಗಾ ಶ್ರೀಗಳ ಆರೋಗ್ಯ ವೈದ್ಯ ಲೋಕಕ್ಕೂ ಅಚ್ಚರಿ ಮೂಡಿಸುತ್ತಿದೆ. ಶ್ರೀಗಳು ಪವಾಡ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತಿದ್ದಾರೆ ಎಂದು ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡುವ ವೈದ್ಯರ ತಂಡ ವರದಿಯಲ್ಲಿ ಉಲ್ಲೇಖಿಸಿದ. “He has always Proved us wrong ” ಎಂದು ವೈದ್ಯರು ವರದಿಯಲ್ಲಿ ಒಕ್ಕಣೆ ಬರೆದಿದ್ದಾರೆ. ಈ ವಯಸ್ಸಿನಲ್ಲೂ ಎಲ್ಲಾ ರೀತಿಯ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಕ್ಕೆ ಖುದ್ದು ವೈದ್ಯರೇ ಚಕಿತಗೊಂಡಿದ್ದಾರೆ ಅಂತ ಬಿಜಿಎಸ್ ಹಾಗೂ ಸಿದ್ದಗಂಗಾ ಆಸ್ಪತ್ರೆ ವೈದ್ಯರ ತಂಡ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಕ್ತರಿಗೆ ದರ್ಶನ ಕೊಟ್ಟ ನಡೆದಾಡುವ ದೇವರು

    ಭಕ್ತರಿಗೆ ದರ್ಶನ ಕೊಟ್ಟ ನಡೆದಾಡುವ ದೇವರು

    ತುಮಕೂರು: ಇಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಗಂಗಾ ಶ್ರೀಗಳು ಬುಧವಾರ ಬೆಳಗಿನ ಜಾವ ಮಠಕ್ಕೆ ವಾಪಾಸಾಗಿದ್ದರು. ಬುಧವಾರ ಮಠದ ವಿದ್ಯಾರ್ಥಿಗಳಿಗೆ ಹಾಗೂ ಭಕ್ತರಿಗೆ ತಮ್ಮ ದರ್ಶನ ಪಡೆಯುವ ಭಾಗ್ಯವನ್ನು ಕಲ್ಪಿಸಿಕೊಟ್ಟಿದ್ದರು.

    ಬಹುದಿನಗಳ ಬಳಿಕ ಮಠಕ್ಕೆ ಮರಳಿರುವ ನಡೆದಾಡುವ ದೇವರ ಆಶೀರ್ವಾದವನ್ನು ವಿದ್ಯಾರ್ಥಿಗಳು ಪಡೆಯುತ್ತಿದ್ದು, ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳಿಗೆ ರಾತ್ರಿ 10 ಗಂಟೆಯಿಂದಲೇ ಕಿರಿಯ ಶ್ರೀಗಳು ಅನುವು ಮಾಡಿಕೊಟ್ಟಿದ್ದರು.

    ಸಿದ್ದಗಂಗಾ ಶ್ರೀಗಳ ಆರೋಗ್ಯ ಹಿನ್ನೆಲೆ ಮಧ್ಯರಾತ್ರಿ ಎರಡು ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಶ್ರೀಗಳು ದರ್ಶನ ನೀಡಿದ್ದಾರೆ. ಈ ವೇಳೆ ಸಾರ್ವಜನಿಕರು ಸಹ ವಿದ್ಯಾರ್ಥಿಗಳೊಂದಿಗೆ ಸ್ವಾಮೀಜಿಯ ದರ್ಶನವನ್ನು ಪಡೆದಿದ್ದಾರೆ. ಹಳೆಯ ಮಠದ ಕೊಠಡಿಯೊಂದರಲ್ಲಿ ಶ್ರೀಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಡಾ. ರೇಲಾ ಹಾಗೂ ಸಿದ್ದಗಂಗಾ ಆಸ್ಪತ್ರೆಯ ವೈದ್ಯರ ತಂಡದಿಂದ ಶ್ರೀಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇಂದು ಸಾಹ ಸುಮಾರು 5:30 ಗಂಟೆಯಿಂದಲೇ ವಿದ್ಯಾರ್ಥಿಗಳು ಮತ್ತೆ ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ.

    ತುಂಬಾ ದಿನಗಳ ಬಳಿಕ ಮಠಕ್ಕೆ ಮರಳಿರುವ ಸಿದ್ದಗಂಗಾ ಶ್ರೀಗಳನ್ನು ನೋಡಲು ಭಕ್ತ ಸಾಗರವೇ ಸಿದ್ದಗಂಗಾ ಮಠದತ್ತ ಹರಿದು ಬಂದಿದೆ. ಅಲ್ಲದೆ ಶ್ರೀಗಳ ಆರೋಗ್ಯವನ್ನು ವಿಚಾರಿಸಲು ರಾಜಕೀಯ ನಾಯಕರು ಕೂಡ ಮಠಕ್ಕೆ ಆಗಮಿಸಿದ್ದು, ಶ್ರೀಗಳ ಆರ್ಶಿವಾದ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಠಕ್ಕೆ ಭೇಟಿ ನೀಡಿ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಎಚ್‍ಡಿಡಿ

    ಮಠಕ್ಕೆ ಭೇಟಿ ನೀಡಿ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಎಚ್‍ಡಿಡಿ

    ತುಮಕೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈ ಡ್ರಾಮದ ನಡುವೆಯೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.

    ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗುರುಗಳಿಗೆ 111 ವರ್ಷವಾಗಿದೆ. ಈ ವಯಸ್ಸಿನಲ್ಲಿ ಸ್ವಾಭಾವಿಕವಾಗಿ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. 89 ವರ್ಷಗಳಿಂದ ಅವರು ಸಿದ್ದಗಂಗಾ ಪೀಠದಲ್ಲಿ ಸೇವೆ ಸಲ್ಲಿಸಿದ್ದಾರೆ. ಲಕ್ಷಾಂತರ ಮಕ್ಕಳಿಗೆ ವಿದ್ಯೆ ಹಾಗೂ ಅನ್ನ ದಾಸೋಹ ಮಾಡಿ ಪ್ರಪಂಚದೆಲ್ಲೆಡೆ ಹೆಸರುವಾಸಿಯಾಗಿದ್ದಾರೆ. ಹಲವಾರು ರೀತಿ ಧಾರ್ಮಿಕ ಉಪನ್ಯಾಸ ಮಾಡಿದ್ದಾರೆ ಎಂದು ನಡೆದಾಡುವ ದೇವರ ಕೆಲಸವನ್ನು ಶ್ಲಾಘಿಸಿದರು. ಇದನ್ನೂ ಓದಿ: ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಕಿರಿಯ ಶ್ರೀಗಳು

    ಶ್ರೀಗಳು ಇಷ್ಟೊಂದು ಅದ್ಭುತವಾಗಿ ಕೆಲಸ ಮಾಡಲು ಅವರಿಗೆ ದೈವದ ಅನುಗ್ರಹವಿದೆ. ಹಾಗಾಗಿ ಅವರು ನಡೆದಾಡುವ ದೇವರು ಎನ್ನುವ ಬಿರುದಿಗೆ ಭಾಜನರಾಗಿದ್ದಾರೆ. ಆರೋಗ್ಯದಲ್ಲಿ ಏರುಪೇರಾದರೂ ಭಗವಂತನ ಅನುಗ್ರಹದಿಂದ ಜಯಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.

    ಉತ್ತರಾಯಣ ಪುಣ್ಯಕಾಲ ಶುರುವಾಗಿದೆ ಇನ್ನು 6 ತಿಂಗಳ ಕಾಲ ಇದೆ ಪುಣ್ಯ ಕಾಲ ಇರುತ್ತದೆ. ನಾವು ಹಲವಾರು ಬಾರಿ ಶ್ರೀಗಳ ಜೊತೆ ಕುಳಿತು ಊಟ ಮಾಡಿದ್ದೇವೆ. ಅದು ನನ್ನ ಪುಣ್ಯ. ಈ ಪುಣ್ಯಕಾಲದಲ್ಲಿ ನಡೆದಾಡುವ ದೇವರ ದರ್ಶನ ಮಾಡಲು ಬಂದಿದ್ದು ದರ್ಶನ ಸಿಕ್ಕಿದೆ. ಭಗವಂತ ಯಾವಾಗ ತೀರ್ಮಾನ ಮಾಡುತ್ತಾನೋ ನಮಗೆ ಗೊತ್ತಿಲ್ಲ. ಇನ್ನೂ ಶ್ರೀಗಳಿಗೆ ಉಸಿರಾಡುವ ಶಕ್ತಿ ಇದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಶ್ರೀಗಳ ಬಿಪಿ ಶುಗರ್ ಎಲ್ಲವೂ ಸರಿಯಾಗಿದೆ ಅಂತ ದೇವೇಗೌಡರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸದ್ಯ ಮಠದ ಕಡೆ ಬರಲ್ಲ ನಡೆದಾಡುವ ದೇವರು

    ಸದ್ಯ ಮಠದ ಕಡೆ ಬರಲ್ಲ ನಡೆದಾಡುವ ದೇವರು

    ತುಮಕೂರು: ಸಿದ್ದಗಂಗಾ ಶ್ರೀಗಳಿಗೆ ತೀವ್ರವಾಗಿ ನಿಶ್ಯಕ್ತಿ ಕಾಡುತ್ತಿರುವ ಪರಿಣಾಮ ಅವರಿಗೆ ಉಸಿರಾಡಲು ತೊಂದರೆಯಾಗುತ್ತಿದೆ ಆದ್ದರಿಂದ ಶ್ರೀಗಳ ಆರೋಗ್ಯ ಸುಧಾರಿಸುವವರೆಗೆ ಮಠಕ್ಕೆ ಶಿಫ್ಟ್ ಮಾಡಲ್ಲ ಅಂತ ಡಾ. ಪರಮೇಶ್ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶ್ರೀಗಳಿಗೆ ನಿಶಕ್ತಿ ಕಾಡುತ್ತಿದೆ. ಹಾಗಾಗಿ ಉಸಿರಾಡಲು ಕಷ್ಟ ಪಡುತ್ತಿದ್ದಾರೆ. ಕೇವಲ ಅರ್ಧಗಂಟೆಕಾಲ ಅಷ್ಟೇ ಶ್ರೀಗಳು ಸಹಜವಾಗಿ ಉಸಿರಾಡುತ್ತಿದ್ದಾರೆ. ಬಳಿಕ ಪುನಃ ವೆಂಟಿಲೇಟರ್ ಅಳವಡಿಸಬೇಕಾಗುತ್ತದೆ ಎಂದು ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಶ್ರೀಗಳ ಶ್ವಾಸಕೋಶದ ಸೋಂಕು ಸಂಪೂರ್ಣ ಕಡಿಮೆಯಾಗಿದ್ದು, ಶ್ವಾಸಕೋಶದ ನೀರು ನಿನ್ನೆ ತೆಗೆದಿದ್ದೇವೆ. ಶ್ರೀಗಳ ದೇಹದಲ್ಲಿ ಪ್ರೋಟೀನ್ ಅಂಶವೂ 2.9 ಮಿಲಿ ಗ್ರಾಮ್‍ಗೆ ಏರಿಕೆಯಾಗಿದೆ. ನಿಶ್ಯಕ್ತಿ ಹೊರತುಪಡಿಸಿದರೆ ಬೇರೆ ಯಾವುದೇ ಏರುಪೇರು ಇಲ್ಲ. ಆದ್ರೆ ಸದ್ಯ ಸಿದ್ದಗಂಗಾ ಶ್ರೀಗಳನ್ನು ಮಠಕ್ಕೆ ಶಿಫ್ಟ್ ಮಾಡುವ ಯಾವುದೇ ಆಲೋಚನೆ ಇಲ್ಲ. ಕಿರಿಯ ಶ್ರೀಗಳ ಮಾರ್ಗದರ್ಶನದಂತೆ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಡಾ. ಪರಮೇಶ್ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸನ್ನೆ ಮೂಲಕ ಮಾತನಾಡುತ್ತಿದ್ದಾರೆ ನಡೆದಾಡುವ ದೇವರು

    ಸನ್ನೆ ಮೂಲಕ ಮಾತನಾಡುತ್ತಿದ್ದಾರೆ ನಡೆದಾಡುವ ದೇವರು

    ತುಮಕೂರು: ನಡೆದಾಡುವ ದೇವರು ಎಂದೇ ಹೆಸರುವಾಸಿಯಾಗಿರುವ ಸಿದ್ದಗಂಗಾ ಶ್ರೀಗಳ ಆರೋಗ್ಯದ ಕುರಿತು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಅವರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಂಡುಬರುತ್ತಿಲ್ಲ. ಮತ್ತೆ ಅವರ ಶ್ವಾಸಕೋಶದ ಎರಡೂ ಭಾಗದಲ್ಲಿ ನೀರು ತುಂಬಿಕೊಂಡಿದೆ. ಈಗಾಗಲೇ ದೇಹದಿಂದ ನೀರನ್ನು ಹೊರಕ್ಕೆ ತೆಗೆಯಲಾಗಿದೆ. ಸದ್ಯ ಶ್ರೀಗಳು ಸನ್ನೆ ಮೂಲಕವೇ ಮಾತನಾಡುತ್ತಿದ್ದು, ಕಣ್ಣು ಬಿಟ್ಟು ನೋಡುತ್ತಿದ್ದಾರೆ. ಮಲಗಿದಲ್ಲಿಯೇ ಶ್ರೀಗಳು ಅವರ ಕೈಕಾಲುಗಳ ಚಲನವಲನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಶ್ರೀಗಳ ಆರೋಗ್ಯದಲ್ಲಿ ಮತ್ತೆ ಏರುಪೇರು ಆಗಿರುವುದರಿಂದ ಅವರಿಗೆ ದ್ರವರೂಪದ ಆಹಾರವನ್ನು ನೀಡಲಾಗುತ್ತಿದೆ. ಅವರಿಗೆ ಎಂದಿನಂತೆ ಪೂಜೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಶ್ರೀಗಳಿಗೆ ಅಳವಡಿಸಿರುವ ಕೃತಕ ಉಸಿರಾಟದ ಸಾಧನ ತೆರವುಗೊಳಿಸಿ ಸಹಜ ಉಸಿರಾಟಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಎರಡು ಗಂಟೆಗಳ ಕಾಲ ಸಹಜ ಉಸಿರಾಟದ ನಂತರ ಮತ್ತೆ ತೊಂದರೆಯಾದಾಗ ಕೃತಕ ಉಸಿರಾಟ ಸಾಧನ ಅಳವಡಿಸುತ್ತಿದ್ದೇವೆ. ನಿನ್ನೆ ಶ್ರೀಗಳ ದೇಹದಲ್ಲಿ ಪ್ರೋಟೀನ್ ಅಂಶವು 3.1 ಇತ್ತು. ಆದ್ರೆ ಇಂದು ಪ್ರೋಟೀನ್ ಅಂಶ 2.6 ಮಿಲಿಗ್ರಾಮ್‍ಗೆ ಇಳಿಕೆಯಾಗಿದೆ ಎಂದು ಶ್ರೀಗಳ ಆರೋಗ್ಯದ ಕುರಿತು ಡಾ. ಪರಮೇಶ್ ಮಾಹಿತಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv