Tag: siddaganga hospital

  • ಸಿದ್ದಗಂಗಾ ಆಸ್ಪತ್ರೆಯಿಂದ ಶ್ರೀಗಳ ಹೆಲ್ತ್ ಬುಲೆಟಿನ್ ಬಿಡುಗಡೆ

    ಸಿದ್ದಗಂಗಾ ಆಸ್ಪತ್ರೆಯಿಂದ ಶ್ರೀಗಳ ಹೆಲ್ತ್ ಬುಲೆಟಿನ್ ಬಿಡುಗಡೆ

    ತುಮಕೂರು: ಸಿದ್ದಗಂಗಾ ಆಸ್ಪತ್ರೆಯ ವೈದ್ಯ ಡಾ. ಪರಮೇಶ್ ಇಂದು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಪರಮೇಶ್, ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಎಡ ಶ್ವಾಸಕೋಶದಿಂದ 250 ಎಂ.ಎಲ್ ಹಾಗೂ ಬಲ ಶ್ವಾಸಕೋಶದಿಂದ 400 ಎಂ.ಎಲ್ ನೀರನ್ನು ಹೊರಕ್ಕೆ ತೆಗೆಯಲಾಗಿದೆ. ಅಲ್ಲದೆ ಶ್ರೀಗಳ ದೇಹದಲ್ಲಿನ ಪ್ರೋಟೀನ್ ಅಂಶ ಕೂಡಾ 2.6 ಗ್ರಾಂ ನಿಂದ 3 ಗ್ರಾಂ ಗೆ ಏರಿಕೆಯಾಗಿದೆ ಎಂದು ತಿಳಿಸಿದರು.

    ಶನಿವಾರ ರಾತ್ರಿ ಶ್ರೀಗಳಿಗೆ ಲೋ ಬಿಪಿಯಾಗಿದ್ದು, ಡಾ.ರೇಲಾ ಹಾಗೂ ಡಾ.ರವೀಂದ್ರರ ಮಾರ್ಗದರ್ಶನದಂತೆ ಚಿಕಿತ್ಸೆ ನೀಡಲಾಗಿತ್ತು. ಈಗ ರಕ್ತದೊತ್ತಡ ಸ್ಥಿರವಾಗಿದೆ. ಆದರೆ ಶ್ವಾಸಕೋಶದ ಸೋಂಕು ನಿನ್ನೆ ತನಕ ಪ್ರತಿದಿನ ಕಡಿಮೆಯಾಗುತಿತ್ತು. ಆದರೆ ಇಂದು ಕಡಿಮೆಯಾಗಿಲ್ಲ. ನಿನ್ನೆ ಎಷ್ಟಿತ್ತೋ ಅಷ್ಟೆ ಇದೆ. ಹಾಗಾಗಿ ಮತ್ತೆ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಡಾ. ಪರಮೇಶ್ ಸ್ಪಷ್ಟಪಡಿಸಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ಡಾ.ಸುಬ್ರಾ ಅವರ ಸಲಹೆಯಂತೆ ಶ್ರೀಗಳಿಗೆ ಆಂಟಿಬಯೋಟಿಕ್ ಬದಲಾವಣೆ ಮಾಡಲಾಗಿತ್ತು. ಇನ್ನೂ ನಾಲ್ಕು ದಿನಗಳ ಕಾಲ ಆಂಟಿಬಯೋಟಿಕ್ ನೀಡಲಾಗುತ್ತೆ ಆಗ ಸೋಂಕು ಕಡಿಮೆಯಾಗುತ್ತಾ ಅಂತ ಕಾದು ನೋಡಬೇಕಿದೆ. ಸಂಜೆ ವೇಳೆಗೆ ಬಿಜಿಎಸ್ ಗ್ಲೋಬಲ್ ವೈದ್ಯ ಡಾ.ರವೀಂದ್ರ ಸಿದ್ದಗಂಗಾ ಆಸ್ಪತ್ರೆಗೆ ಆಗಮಿಸುತ್ತಾರೆ ಎಂದು ಡಾ.ಪರಮೇಶ್ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜಿಎಸ್ ಆಸ್ಪತ್ರೆಯಿಂದ ಸಿದ್ದಗಂಗಾ ಶ್ರೀ ಡಿಸ್ಚಾರ್ಜ್ – 1 ವಾರ ಭಕ್ತರಿಗೆ ದರ್ಶನವಿಲ್ಲ

    ಬಿಜಿಎಸ್ ಆಸ್ಪತ್ರೆಯಿಂದ ಸಿದ್ದಗಂಗಾ ಶ್ರೀ ಡಿಸ್ಚಾರ್ಜ್ – 1 ವಾರ ಭಕ್ತರಿಗೆ ದರ್ಶನವಿಲ್ಲ

    ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ತ್ರಿವಿಧ ದಾಸೋಹಿ ಶ್ರೀ ಸಿದ್ದಗಂಗಾ ಶ್ರೀಗಳು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಪಿತ್ತಕೋಶ ಮತ್ತು ಪಿತ್ತನಾಳದಲ್ಲಿ ಸೋಂಕು ಉಂಟಾದ ಹಿನ್ನೆಲೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದೂ ಕೂಡಾ ಶ್ರೀಗಳಿಗೆ ಚಿಕಿತ್ಸೆ ನೀಡಿ ಶ್ರೀಗಳ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಿದ್ದಾರೆ.

    ಭಾನುವಾರ ಸ್ಟಂಟ್ ಅಳವಡಿಕೆ ವೇಳೆ ಶ್ರೀಗಳಿಗೆ ಅನಸ್ತೇಶಿಯ ನೀಡಲಾಗಿತ್ತು. ಇಂದು ಅದರ ರಿಪೋರ್ಟ್ ಬಂದ ಬಳಿಕ ಯಾವುದೇ ತೊಂದರೆ ಇಲ್ಲ ಎಂದು ತಿಳಿದ ಮೇಲೆ ಡಿಸ್ಚಾರ್ಜ್ ಮಾಡಿದ್ದಾರೆ. ಇಂದು ಮಧ್ಯಾಹ್ನ ತುಮಕೂರಿನ ಹಳೆ ಮಠಕ್ಕೆ ತೆರಳಿದ ಶ್ರೀಗಳು ಪರಿಚಾರಕರ ನೆರವಿನಿಂದ ನಡೆದುಕೊಂಡು ಹೋದ್ರು. ಮುಂದಿನ ಒಂದು ವಾರಗಳ ಕಾಲ ಶ್ರೀಗಳು ಹಳೆ ಮಠದಲ್ಲೇ ವಿಶ್ರಾಂತಿ ಪಡೆಯಲಿದ್ದು, ಭಕ್ತರಿಗೆ ದರ್ಶನ ಸಿಗೋದಿಲ್ಲ ಅಂತಾ ಶ್ರೀಗಳ ಉಸ್ತುವಾರಿ ವೈದ್ಯ ಡಾ.ಪರಮೇಶ್ ಮಾಹಿತಿ ನೀಡಿದ್ದಾರೆ.

    ಸದ್ಯ ಶ್ರೀಗಳ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡಿದ್ದು 4 ಮೆಟಲ್ ಹಾಗೂ 7 ಪ್ಲಾಸ್ಟಿಕ್ ಸ್ಟಂಟ್ ಗಳು ಶ್ರೀಗಳ ದೇಹದಲ್ಲಿವೆ. ಸಿದ್ದಗಂಗಾ ಆಸ್ಪತ್ರೆಯ ವೈದ್ಯರು 24 ಗಂಟೆಗಳ ಆರೈಕೆ ಮಾಡಲಿದ್ದಾರೆ ಅಂತಾ ಅವರು ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv