ಮನೆಯಲ್ಲಿ ಕಠಿಣ ಸ್ಪರ್ಧೆ ಏರ್ಪಡುತ್ತಿದೆ. ಫಿನಾಲೆಗೆ ಬರಬೇಕು ಎನ್ನುವ ಕಾರಣಕ್ಕೆ ಸ್ಪರ್ಧಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಹೀಗಿರುವಾಗ ಬಿಗ್ಬಾಸ್ ಶುಭಾ ಪೂಂಜಾಗೆ ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ.

ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ಗೆ ನಾನಾ ನೀನಾ ಹೆಸರಿನ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಅಡಿಯಲ್ಲಿ ಸಾಕಷ್ಟು ಟಾಸ್ಕ್ಗಳನ್ನು ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಐದು ಸದಸ್ಯರು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆಯಾದರು. ದಿವ್ಯಾ ಉರುಡುಗ ಕ್ಯಾಪ್ಟನ್ ಕೂಡ ಆದರು.
ಆದರೆ, ಶುಭಾ ಒಟ್ಟಾರೆ ಟಾಸ್ಕ್ನಲ್ಲಿ ಕೊನೆಯಲ್ಲಿ ಉಳಿದುಕೊಂಡಿದ್ದಾರೆ. ಕಡಿಮೆಅಂಕವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ, ಬಿಗ್ಬಾಸ್ ಈ ವಿಚಾರದಲ್ಲಿ ಶುಭಾಗೆ ಶಾಕ್ ನೀಡಿದ್ದಾರೆ ಬಿಗ್ಬಾಸ್. ಶುಭಾ ನೀವು ಕಡಿಮೆ ಅಂಕ ಪಡೆದು ಕೊನೆಯ ಸ್ಥಾನದಲ್ಲಿದ್ದೀರಿ. ಹೀಗಾಗಿ, ಈ ವಾರ ಎಲಿಮಿನೇಷ್ನಿಂದ ಸೇವ್ ಆದರೂ ನೀವು ಕಡಿಮೆ ಅಂಕ ಹೊಂದಿದ್ದರಿಂದ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆಗುತ್ತೀರಿ ಎಂದರು ಬಿಗ್ ಬಾಸ್ ಹೇಳಿದ್ದಾರೆ.
ಶುಭಾ ಪೂಂಜಾ ಬಂದ ದಿನದಿಂದಲೂ ತಮ್ಮದೇ ಸ್ಟೈಲ್ನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕೆಲವೊಮ್ಮೆ ಅವರು ಮಕ್ಕಳಂತೆ ವರ್ತಿಸಿ, ಬಿಗ್ಬಾಸ್ ಜೊತೆಗೆ ಹಟ ಮಾಡಿರುವ ಉದಾಹರಣೆಗಳು ಇವೆ. ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಮನೆಯಲ್ಲಿ ಅವರಿಗೆ ವೈರಿಗಳಿಲ್ಲ. ಎಲ್ಲರ ಜತೆಯೂ ಅವರು ಹೊಂದಿಕೊಂಡು ಹೋಗುತ್ತಿದ್ದಾರೆ. ಆದರೆ, ಫಿನಾಲೆ ಸಮೀಪವಾಗುತ್ತಿದ್ದಂತೆಯೇ ಇದು ಸಹಾಯಕ್ಕೆ ಬರುತ್ತಿಲ್ಲ. ಅವರು ಟಾಸ್ಕ್ನಲ್ಲಿ ಡಲ್ ಆಗಿರುವುದು ಅವರು ಮುಂದಿನ ಆಟಕ್ಕೆ ತೊಂದರೆಯಾವ ಎಲ್ಲಾ ಲಕ್ಷಣಗಳಿವೆ.
ಕಳೆದ ವಾರ ದಿವ್ಯಾ ಉರುಡುಗ ಕೈಗೆ ಪೆಟ್ಟಾಗಿತ್ತು. ಹೀಗಾಗಿ, ಈ ವಾರ ಅವರಿಗೆ ಆಡೋದು ಬಹಳ ಕಷ್ಟವಾಗಿತ್ತು. ಆದರೆ, ಇದೆಲ್ಲವನ್ನೂ ಮೀರಿ ದಿವ್ಯಾ ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಅಷ್ಟೇ ಅಲ್ಲ, ಎಲ್ಲಾ ಸ್ಟ್ರಾಂಗ್ ಕಂಟೆಸ್ಟೆಂಟ್ಗಳ ಎದುರು ನಿಂತು ಗೆದ್ದಿದ್ದಾರೆ. ಕ್ಯಾಪ್ಟನ್ ಆಗಿರುವುದರಿಂದ ಮುಂದಿನ ವಾರ ನಾಮಿನೇಟ್ ಆಗುವುದಿಲ್ಲ, ಹೀಗಾಗಿ ಅವರು ಬಿಗ್ಬಾಸ್ ಫಿನಾಲೆಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತಿದೆ.

















ಬಳಿಕ ಶುಭ, ನಾನು ನಿನ್ನನ್ನು ಇದೇ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ನಿಮ್ಮ ಮನೆಯಲ್ಲಿ ದಿವ್ಯಾ ಉರುಡಗರನ್ನು ಮದುವೆಯಾಗ್ತೀನಿ ಎಂದರೆ ಒಪ್ಪಿಕೊಳ್ಳುತ್ತಾರಾ ಎಂದು ಅರವಿಂದ್ಗೆ ಕೇಳುತ್ತಾರೆ. ಆಗ ಅರವಿಂದ್ ನಮ್ಮ ಮನೆಯಲ್ಲಿ ನಾನು ಇಷ್ಟಪಡುವುದನ್ನೇ ಅವರು ಬಯಸುತ್ತಾರೆ ಒಪ್ಪಿಕೊಳ್ಳುತ್ತಾರೆ. ನಿನ್ನೆ ಪ್ರಶಾಂತ್ ಅವರು ಕೂಡ ಕೇಳಿದಾಗ, ಹೌದು ಇಲ್ಲಿ ಇರುವವರಲ್ಲಿ ನನಗೆ ಹೊಂದಿಕೊಳ್ಳುವವರು ಎಂದರೆ ದಿವ್ಯಾ, ಇಲ್ಲಿರುವವರಲ್ಲಿ ನಾನು ಬಹಳ ಇಷ್ಟ ಪಡುವ ವ್ಯಕ್ತಿಯೂ ದಿವ್ಯಾ. ಅವಳು ಮಾಡುವ ಕೆಲಸ, ಅವಳು ಇರುವ ರೀತಿ ಎಲ್ಲವೂ ಸರಿಯಾಗಿದೆ. ಅವಳು ನೋಡಲು ಕ್ಯೂಟ್ ಆಗಿ ಕೂಡ ಇದ್ದಾಳೆ. ಮುಂದಿನ ಬಗ್ಗೆ ನಾನು ಇಲ್ಲಿ ಮಾತನಾಡಲು ಆಗುವುದಿಲ್ಲ. ಒಬ್ಬರು ಹೇಗೆ ಏನು ಎಂದು 25 ದಿನಗಳಲ್ಲಿ ನಿರ್ಧರಿಸಲು ಆಗುವುದಿಲ್ಲ. ಹಾಗಾಗಿ ಈಗಲೇ ಅದರ ಬಗ್ಗೆ ಮಾಡನಾಡುವುದು ತಪ್ಪು ಎಂದು ಹೇಳುತ್ತಾರೆ.




