Tag: Shruthi Naidu

  • ‘ಒಲವಿನ ನಿಲ್ದಾಣ’ದ ಮೂಲಕ ಮತ್ತೆ ಟಿವಿ ಪರದೆಗೆ ಮರಳಿದ ಆದಿ ಲೋಕೇಶ್

    ‘ಒಲವಿನ ನಿಲ್ದಾಣ’ದ ಮೂಲಕ ಮತ್ತೆ ಟಿವಿ ಪರದೆಗೆ ಮರಳಿದ ಆದಿ ಲೋಕೇಶ್

    ನ್ನಡದ ಸಿನಿಮಾರಂಗದಲ್ಲಿ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದ ಆದಿ ಲೋಕೇಶ್ (Adi Lokesh) ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮತ್ತೆ ಟಿವಿ ಪರದೆಗೆ ಖಡಕ್ ವಿಲನ್ ಆದಿ ಲೋಕೇಶ್ ಅವರು ಮರಳಿದಿದ್ದಾರೆ. ಇದನ್ನೂ ಓದಿ:ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ

    ‘ಪೂಜಾರಿ’ (Poojari) ಸಿನಿಮಾದಲ್ಲಿ ನೀತುಗೆ ನಾಯಕನಾಗಿ ಆದಿ ಲೋಕೇಶ್ ನಟಿಸಿದ್ದರು. ಆದರೆ ಹೀರೋಗಿಂತ ಖಳನಟನ ಪಾತ್ರಗಳು ಅವರ ಕೈ ಹಿಡಿದಿತ್ತು. ಕನ್ನಡದ ಸಾಕಷ್ಟು ಸ್ಟಾರ್ ನಟರಿಗೆ ವಿಲನ್ ಆಗಿ ಆದಿ ಲೋಕೇಶ್ ಅಬ್ಬರಿಸಿದ್ದರು. ಕೊರೋನಾ ಬಳಿಕ ಗರುಡ, ಚಾಂಪಿಯನ್‌, ಪ್ರಭುತ್ವ, ಸೇರಿದಂತೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಮಿಂಚಿದ್ದರು. ಈಗ ‘ಒಲವಿನ ನಿಲ್ದಾಣ’ (Olavina Nildana) ಸೀರಿಯಲ್ ಮೂಲಕ ಪವಿತ್ರಾ ಲೋಕೇಶ್‌ ಸಹೋದರ, ಆದಿ ಟಿವಿ ಪರದೆಗೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಬಿಗ್‌ ಬಾಸ್‌ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ.

    ಸಿನಿಮಾದಲ್ಲಿ ಒಳ್ಳೆಯ ಅವಕಾಶವಿದ್ದರೂ ಈ ಸೀರಿಯಲ್‌ ಒಪ್ಪಿಕೊಂಡಿಡ್ಯಾಕೆ ಅಂತಾ ಆದಿ ಲೋಕೇಶ್‌ ಪಬ್ಲಿಕ್‌ ಟಿವಿ ಡಿಜಿಟಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶ್ರುತಿ ನಾಯ್ಡು ಅವರು ನನ್ನ ಒಳ್ಳೆಯ ಸ್ನೇಹಿತೆ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಲು ಹೇಳಿದಾಗ ಖುಷಿಯಿಂದ ಒಪ್ಪಿಕೊಂಡೆ, ನನ್ನ ಪಾತ್ರ ಕೂಡ ಚೆನ್ನಾಗಿದೆ. ಡಿಫರೆಂಟ್‌ ಎಂದು ಎನಿಸಿದಕ್ಕೆ ಈ ಪಾತ್ರ ಮಾಡಲು ಒಪ್ಪಿಕೊಂಡೆ. ಶ್ರುತಿ ನಾಯ್ಡು ಅವರ ತಂಡ ಅದ್ಭುತವಾಗಿ ಕೆಲಸ ಮಾಡ್ತಿದ್ದಾರೆ. ಈ ಸೀರಿಯಲ್‌ನ ನನ್ನ ಮೊದಲ ಪ್ರೋಮೋ ನೋಡಿ ತುಂಬಾ ಇಷ್ಟ ಆಯ್ತು. ಯಾವುದೇ ಸಿನಿಮಾಗೂ ಕಮ್ಮಿ ಇಲ್ಲದಂತೆ ಕೆಲಸ ಮಾಡಿ ತೋರಿಸಿದ್ದಾರೆ. ಅದರಲ್ಲಿ ಅವರ ಶ್ರಮ ಕಾಣ್ತಿದೆ ಎಂದು ಆದಿ ಲೋಕೇಶ್‌ ಹೇಳಿದ್ದಾರೆ. ಇದರಲ್ಲಿ ನನ್ನ ವಿಶೇಷ ಪಾತ್ರ, ಸೀರಿಯಲ್‌ ನೋಡಿ ನಿಮಗೆ ಅಚ್ಚರಿ ಮೂಡಿಸುತ್ತೆ. ತುಂಬಾ ಟ್ವಿಸ್ಟ್‌ ಇದೆ ಎಂದು ಆದಿ ಲೋಕೇಶ್‌ ಹೇಳಿದ್ದಾರೆ.

    ಶ್ರುತಿ ನಾಯ್ಡು (Shruti Naidu) ನಿರ್ಮಾಣದ ಸೀರಿಯಲ್ ‘ಒಲವಿನ ನಿಲ್ದಾಣ’ವು 300 ಎಪಿಸೋಡ್‌ಗಳನ್ನ ಪೂರೈಸಿದೆ. ತಾರಿಣಿ- ಸಿದ್ಧಾಂತ್ ಕಥೆ ಫ್ಯಾನ್ಸ್ ಖುಷಿ ಕೊಟ್ಟಿದೆ. ಈ ಕಥೆಯಲ್ಲಿ ಹೊಸ ಟ್ವಿಸ್ಟ್ ಕೊಡೊದಕ್ಕೆ ಆದಿ ಲೋಕೇಶ್ ಎಂಟ್ರಿಯಾಗಿದೆ. ಪ್ರೋಮೋ ಕೂಡ ರಿವೀಲ್ ಆಗಿದೆ. ಖಡಕ್ ಆಗಿ ಆದಿ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ. ಸೀರಿಯಲ್ ಪ್ರೋಮೊಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ನಟ ಆದಿ ರೋಲ್ ಜುಲೈ 20ರ ಸಂಜೆ 6ಕ್ಕೆ ಪ್ರಸಾರವಾಗಲಿದೆ.

    ಈ ಸೀರಿಯಲ್‌ನಲ್ಲಿ ವಿಶೇಷ ಪಾತ್ರದಲ್ಲಿ ಆದಿ ಲೋಕೇಶ್ ನಟಿಸುತ್ತಿದ್ದಾರೆ. ತಾರಿಣಿ- ಸಿದ್ಧಾಂತ್ ಬದುಕಿನಲ್ಲಿ ಏನೆಲ್ಲಾ ಟ್ವಿಸ್ಟ್ ಇರಲಿದೆ ಕಾದು ನೋಡಬೇಕಿದೆ. ಒಲವಿನ ನಿಲ್ದಾಣದಲ್ಲಿ ಅಮಿತಾ ಕುಲಾಲ್, ಅಕ್ಷಯ್ ನಾಯಕ್, ಮಂಡ್ಯ ರಮೇಶ್, ಅಶೋಕ್, ಪ್ರಥಮ ಪ್ರಸಾದ್ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿರುತೆರೆಯಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದ ಶೃತಿ ನಾಯ್ಡು ಸ್ಯಾಂಡಲ್ ವುಡ್‍ಗೆ ಎಂಟ್ರಿ!

    ಕಿರುತೆರೆಯಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದ ಶೃತಿ ನಾಯ್ಡು ಸ್ಯಾಂಡಲ್ ವುಡ್‍ಗೆ ಎಂಟ್ರಿ!

    ಬೆಂಗಳೂರು: ಕಿರುತೆರೆಯಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದ ನಿರ್ಮಾಪಕಿ ಶೃತಿ ನಾಯ್ಡು ಇದೀಗ ಸ್ಯಾಂಡಲ್ ವುಡ್ ನಿರ್ಮಾಪಕಿಯಾಗಿದ್ದಾರೆ.

    ಪತಿ ರಮೇಶ್ ಆ್ಯಕ್ಷನ್ ಕಟ್ ಹೇಳುತ್ತಿರೋ ಚಿತ್ರಕ್ಕೆ ಶೃತಿ ನಾಯ್ಡು ಹಣ ಹೂಡುತ್ತಿದ್ದಾರೆ. ಶೃತಿ ನಾಯ್ಡು ಪತಿ ರಮೇಶ್ ಗಗನ ಇಂದ್ರ ನಿರ್ದೇಶನದಲ್ಲಿ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ಮೂಡಿ ಬರಲಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನವರಸ ನಾಯಕ ಜಗ್ಗೇಶ್ ಹಾಗೂ ಮಧುಬಾಲಾ ಅಭಿನಯಿಸುತ್ತಿದ್ದಾರೆ.

    ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಪ್ರೀಮಿಯರ್ ಕಾರ್ ಜೊತೆಗೆ ಫೋಟೋಶೂಟ್ ಮಾಡಲಾಗಿದ್ದು, ಮಹೇಂದ್ರ ಸಿಂಹ ಫೋಟೋಗ್ರಫಿಯಲ್ಲಿ ಜಗ್ಗೇಶ್ ಹಾಗೂ ಕಿರುತೆರೆ ನಟ ಪ್ರಮೋದ್ ಸಖತ್ ಪೋಸ್ ನೀಡಿದ್ದಾರೆ. ಸದ್ಯ ಏ. 18 ಕ್ಕೆ ಚಿತ್ರಕ್ಕೆ ಮೂಹೂರ್ತ ಫಿಕ್ಸ್ ಮಾಡಲಾಗಿದೆ.