ಮೈಸೂರು: 13ನೇ ಚುನಾವಣೆ ನನ್ನ ಕೊನೆಯ ಚುನಾವಣೆ. ಹಾಗಂತ ದುಃಖ ಅನ್ನೋದು ನನ್ನ ಡಿಕ್ಷನರಿಯಿಲ್ಲಿಲ್ಲ ಎಂದು ನಂಜನಗೂಡು ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.
ಫಲಿತಾಂಶದ ಬಳಿಕ ಮೈಸೂರಿನ ತಮ್ಮ ನಿವಾಸಲ್ಲಿ ಕರೆದ ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಇದು ಅನಿರೀಕ್ಷಿತ ಫಲಿತಾಂಶ. ಮೂರು ದಿನದವರೆಗೂ ಎಲ್ಲ ಸಮೀಕ್ಷೆ ನನಗೆ ಗೆಲುವು ಅಂತಿತ್ತು, ಈಗ ಸೋಲಾಗಿದೆ. ಇದು ಜನರ ತೀರ್ಪು, ಒಪ್ಪಲೇಬೇಕು. ಇದನ್ನ ಕಾಂಗ್ರೆಸ್ ಸಾಧನೆ, ವರ್ಚಸ್ಸು ಅಂತಿದ್ದಾರೆ. ಆದ್ರೆ ಉಪಚುನಾವಣೆ ಯಾಕೆ ಬಂತು ಎಂದು ನೋಡಬೇಕು. ಸಂಪುಟ ಪನಾರಚನೆ ಮಾಡುವಾಗ 14 ಮಂತ್ರಿಗಳನ್ನ ಕೈಬಿಟ್ರು. ಪರಿಣಾಮಕಾರಿ ಸರ್ಕಾರ ಬೇಕು ಎಂದು ಕೈಬಿಟ್ರು. ಆಗ ಅವರನ್ನ ನೀವು ಪರಿಣಾಮಕಾರಿ ಮಂತ್ರಿಮಂಡಲ ಮಾಡಿದ್ದೀರಾ? ಎಂದು ಕೇಳಿದೆ. ಆದ್ರೆ ಉತ್ತರ ಕೊಡಲಿಲ್ಲ. ರಾಜೀನಾಮೆ ಕೊಡೋದು ಬಹಳ ಕಡಿಮೆ, ನಾನು ರಾಜೀನಾಮೆ ನೀಡಿದೆ. ನನ್ನ ರಾಜಕೀಯ ಜೀವನದಲ್ಲಿ ಯಾರಿಗೂ ತಲೆಬಾಗದೆ ಪ್ರಾಮಾಣಿಕವಾಗಿ ನಡೆದುಕೊಂಡು ಬಂದಿದ್ದೇನೆ ಅಂದ್ರು.
ನಾನು ಸ್ವಾಭಿಮಾನದ ಕಿಚ್ಚನ್ನ ರಾಜಕೀಯದಲ್ಲಿ ಹಚ್ಚಿದ್ದೇನೆ. 13 ನೇ ಚುನಾವಣೆ ನನ್ನ ಕೊನೆಯ ಚುನಾವಣೆ. ಚುನಾವಣೆಗಳು ನನಗೆ ಸಾಕಾಗಿದೆ. ದುಃಖವೆಂಬುದು ನನ್ನ ಡಿಕ್ಷನರಿಯಲ್ಲಿ ಇಲ್ಲ. ಸ್ವಾಭಿಮಾನದ ಸಂದೇಶವನ್ನ ಇಡೀ ರಾಜ್ಯದ ರಾಜಕೀಯಕ್ಕೆ ನೀಡಿದ್ದೇನೆ ಅಂತ ಹೇಳಿದ್ರು.
ನನ್ನ ಮನೆ ಬಾಗಿಲಿಗೆ ಬಂದಿದ್ದನ್ನ ಮರೆತುಬಿಟ್ರ: ಸುದ್ಧಿಗೋಷ್ಠಿಯುದ್ದಕ್ಕೂ ಸಿಎಂ ವಿರುದ್ಧ ಟೀಕಾಪ್ರಹಾರ ನಡೆಸಿದ ಶ್ರೀನಿವಾಸ್ ಪ್ರಸಾದ್, ಸಿದ್ದರಾಮಯ್ಯನವರೇ ನಾನು ನಿಮಗೆ ಸಹಾಯ ಮಾಡಲಿಲ್ಲವೇ? ಸೋನಿಯಾಗಾಂಧಿಯವರೇ ಸ್ವತಃ ಹೇಳಿ ಕಳುಹಿಸಿದ್ರು ಸಿದ್ದರಾಮಯ್ಯ ಅವರಿಗೆ ಸಪೋರ್ಟ್ ಮಾಡಿ ಅಂತಾ. ನನ್ನ ಮನೆ ಬಾಗಿಲಿಗೆ ಬಂದಿದ್ದನ್ನ ಮರೆತುಬಿಟ್ರ ಸಿದ್ದರಾಮಯ್ಯ? ನಾನು ನಿರ್ವಹಿಸಿದ ಇಲಾಖೆಯಲ್ಲಿ ಏನು ಆಪಾದನೆ ಇದೆ ಹೇಳಿ. ನನ್ನ ಇಲಾಖೆಯಲ್ಲಿ ಏನು ಮಾಡಿದ್ದೇನೆ ಎಂದು ನಾನು ಚರ್ಚೆಗೆ ಸಿದ್ಧ. ನೀವು ಸಿದ್ಧರಿದ್ದರೆ ಚರ್ಚೆಗೆ ಬನ್ನಿ ಅಂತ ಸವಾಲು ಹಾಕಿದ್ರು. ಸಿದ್ಧರಾಮಯ್ಯ ನನಗೋ ಸ್ವಾರ್ಥವೂ ನಿನಗೋ? ತನ್ನ ಮಗನನ್ನ ಮಂತ್ರಿ ಮಾಡಿದ ಖರ್ಗೆ ಸ್ವಾರ್ಥಿಯೋ, ನಾನು ಸ್ವಾರ್ಥಿಯೋ? ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರದಲ್ಲಿ ದಾಖಲೆ ಮಾಡಿದ್ರು: ಈ ಉಪ ಚುನಾವಣೆ ಕರ್ನಾಟಕದಲ್ಲಿ ನಡೆದ ಎಲ್ಲ ಉಪಚುನಾವಣೆಗಿಂತ ವಿಶೇಷವಾದದ್ದು. ನನಗೆ ಬಹಳ ಸಂತೋಷ, ನಾನು ಸ್ವಾಭಿಮಾನ ನಿರ್ಧಾರ ತೆಗೆದುಕೊಂಡೆ. ಹೌದು ಸ್ವಾಭಿಮಾನಕ್ಕೆ ಸೋಲಾಗಿದೆ, ಆದ್ರೆ ಜನ ಸ್ವಾಭಿಮಾನ ಮೆಚ್ಚಿದ್ದಾರೆ. ಸರ್ಕಾರ ಮೂರು ದಿನಗಳಿಂದ ಯಾವ ವಾಮಮಾರ್ಗ ಅನಿಸರಿಸಿತು, ಕೆಂಪಯ್ಯ ಯಾವ ರೀತಿ ದುರ್ಬಳಕೆ ಮಾಡಿಕೊಂಡಿದ್ದಾರೆ, ಯಾವ ರೀತಿ ಹಣ ಹಂಚಿಕೆ ಮಾಡಿದ್ದಾರೆ ಎಲ್ಲರಿಗೂ ಗೊತ್ತು. ಆದ್ರೆ ಮತದಾನದ ಪಾವಿತ್ರ್ಯತೆ ಹಾಳು ಮಾಡಿದ್ರು. ಗೆದ್ದಿದ್ದಾರೆ ನಿಜ, ಆದ್ರೆ ಯಾವ ರೀತಿ ಗೆದ್ದರು. ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ದಾಖಲೆ ಮಾಡಿದ್ರು. ಸ್ವಾಭಿಮಾನದ ಸಂದೇಶವನ್ನ ಇಡೀ ರಾಜ್ಯದ ರಾಜಕೀಯಕ್ಕೆ ನೀಡಿದ್ದೇನೆ. ಆಮಿಷಕ್ಕೆ ಒಳಗಾಗದೇ ಮತ ನೀಡಿದವರಿಗೆ ಧನ್ಯವಾದ ಅಂತ ಶ್ರೀನಿವಾಸ್ ಪ್ರಸಾದ್ ಹೇಳಿದ್ರು.
ನಂಜನಗೂಡು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ 21334 ಮತಗಳಿಂದ ಜಯಗಳಿಸಿದ್ದಾರೆ. ಕಳಲೆ ಕೇಶವಮೂರ್ತಿ ಅವರಿಗೆ 86,212 ಮತಗಳು ಸಿಕ್ಕಿದ್ದರೆ ಬಿಜೆಪಿಯ ವಿ.ಶ್ರೀನಿವಾಸ್ ಪ್ರಸಾದ್ಗೆ 64,878 ಮತಗಳು ಲಭಿಸಿವೆ. 1,665 ನೋಟ ಮತಗಳು ಬಿದ್ದಿವೆ.