Tag: Shreya Ghoshal

  • ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಯೋಧರಿಗೆ ಗೀತನಮನ!

    ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಯೋಧರಿಗೆ ಗೀತನಮನ!

    – ಮೈನವಿರೇಳಿಸಿದ ದೇಶಭಕ್ತಿ ಗೀತಗಾಯನ, ರೋಮಾಂಚಕ ಏರ್‌ಶೋ

    ಮುಂಬೈ: 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಯಶಸ್ವಿಯಾಗಿ ನೆರವೇರಿದೆ. ಇಂದು ಪಂಜಾಬ್‌ ಕಿಂಗ್ಸ್‌ ಮತ್ತು ಆರ್‌ಸಿಬಿ ನಡುವಿನ ಫೈನಲ್‌ ಪಂದ್ಯ ಮುಕ್ತಾಯದೊಂದಿಗೆ ಈ ಆವೃತ್ತಿಗೆ ತೆರೆ ಬೀಳಲಿದೆ. ಇಂದು ಫೈನಲ್‌ ಪಂದ್ಯಕ್ಕೂ ಮುನ್ನ ನಡೆಯುತ್ತಿರುವ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲಾಯಿತು.

    ಇಂದಿನ ಫೈನಲ್‌ ಪಂದ್ಯವನ್ನು ಭಾರತೀಯ ಸೇನೆಗೆ ಅರ್ಪಿಸಲು ಬಿಸಿಸಿಐ ನಿರ್ಧಾರ ಕೈಗೊಂಡಿತ್ತು. ಅದಕ್ಕಾಗಿ ಪಂದ್ಯ ಆರಂಭಕ್ಕೂ ಮುನ್ನ ಮೂರು ಸೇನೆಗಳಿಗೆ ಗೌರವ ಸಲ್ಲಿಸಲಾಯಿತು. ದೇಶಭಕ್ತಿ ನೃತ್ಯಗಳು, ಶಂಕರ್‌ ಮಹಾದೇವನ್‌, ಶ್ರೇಯಾ ಘೋಷಾಲ್ ತಂಡದಿಂದ ದೇಶಭಕ್ತಿ ಗೀತೆಗಳ ನಮನ ಸಲ್ಲಿಸಲಾಯಿತು. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

    45 ನಿಮಿಷಗಳ ಈ ಸಮಾರಂಭದಲ್ಲಿ ಖ್ಯಾತ ಹಿನ್ನೆಲೆ ಗಾಯಕರ ದೇಶಭಕ್ತಿ ಗೀತೆಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಮೈ ನವಿರೇಳುವಂತೆ ಮಾಡಿದವು. ಜೈ ಹೋ, ವಂದೇ ಮಾತರಂ, ಹೇ ವತನ್‌ ಮೇರೆವತನ್‌ ಮೊದಲಾದ ಗೀತೆಗಳಿಗೆ ಅಭಿಮಾನಿಗಳು ತಲೆದೂಗಿದರು. ಅಲ್ಲದೇ ರಾಷ್ಟ್ರಧ್ವಜ ಹಾರಿಸುತ್ತಾ.. ಎದ್ದು ನಿಂತು ಗೌರವ ಸಲ್ಲಿಸಿದರು. ಇದೇ ವೇಳೆ ವಾಯುಪಡೆಯಿಂದ ಏರ್‌ ಶೋ ಕೂಡ ನಡೆಯಿತು. ದೇಶದ ಅತಿದೊಡ್ಡ ಕ್ರೀಡಾಂಗಣದ ಮೇಲೆ ವಾಯುಪಡೆಯ ವಿಮಾನಗಳ ಸಾಹಸ ದೃಶ್ಯಗಳು ಅಭಿಮಾನಿಗಳನ್ನು ರೋಮಾಂಚನಗೊಳಿಸಿತು. ಇದನ್ನೂ ಓದಿ: ಗೆದ್ದು ಬಾ ಆರ್‌ಸಿಬಿ – ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

    ಸೇನೆಗೆ ಸಮರ್ಪಿಸಲು ಕಾರಣವೂ ಇದೆ.
    ಕಳೆದ ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನ ಹತ್ಯೆಗೈಯಲಾಗಿತ್ತು. ಇದಕ್ಕೆ ʻಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ಮೂಲಕ ಭಾರತ (India) ಪ್ರತೀಕಾರ ತೀರಿಸಿಕೊಂಡಿತ್ತು. ಅಲ್ಲದೇ ಪಾಕಿಸ್ತಾನದ ದಾಳಿಗಳನ್ನ ವಿಫಲಗೊಳಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರತೀಕಾರ ಸಮರ ಜೋರಾಗುತ್ತಿದ್ದಂತೆ ಐಪಿಎಲ್‌ ಪಂದ್ಯಗಳನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಭಾರತ ಮತ್ತು ಪಾಕ್ ‌ನಡುವೆ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ ಮೇ 17ರಿಂದ ಟೂರ್ನಿ ಪುನರಾರಂಭಗೊಳಿಸಲಾಯಿತು. ಹೀಗಾಗಿ ಭಾರತೀಯ ಸೇನೆಯ ಈ ಶೌರ್ಯ, ಸಾಹಸಕ್ಕೆ ಗೌರವ ಸಲ್ಲಿಸುವ ಸಲುವಾಗಿ ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲು ಬಿಸಿಸಿಐ ನಿರ್ಧರಿಸಿತು.

    ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮೂರು ಸೇನಾಪಡೆಗಳ ಮುಖ್ಯಸ್ಥರಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ, ನೇವಿ ಮುಖ್ಯಸ್ಥ ಅಡ್ಮಿರಲ್‌ ದಿನೇಶ್‌ ಕೆ ತ್ರಿಪಾಠಿ, ಏರ್‌ಚೀಫ್‌ ಮಾರ್ಷಲ್‌ ಅಮರ್‌ ಪ್ರೀತ್‌ ಸಿಂಗ್‌ ಅವರನ್ನ ವೇದಿಕೆಗೆ‌ ಸೇನಾ ಗೌರವದೊಂದಿಗೆ ಆಹ್ವಾನಿಸಲಾಯಿತು. ಬಳಿಕ ಸೇನೆಗೆ ಗೌರವಾರ್ಥವಾಗಿ ಮಿಲಿಟರಿ ಬ್ಯಾಂಡ್‌ ಪ್ರದರ್ಶನ ನಡೆಯಿತು. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

  • IPL 2025 ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಏನೆಲ್ಲಾ ವಿಶೇಷತೆ ಇರಲಿದೆ?

    IPL 2025 ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಏನೆಲ್ಲಾ ವಿಶೇಷತೆ ಇರಲಿದೆ?

    ಮುಂಬೈ: 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಫೈನಲ್‌ ಪಂದ್ಯವನ್ನು ಭಾರತೀಯ ಸೇನೆಗೆ ಅರ್ಪಿಸಲು ಬಿಸಿಸಿಐ (BCCI) ನಿರ್ಧರಿಸಿದೆ. ಜೂನ್‌ 3ರಂದು ಫೈನಲ್‌ ಪಂದ್ಯಕ್ಕೂ ಮುನ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಹತ್ತು ಹಲವು ವಿಶೇಷತೆಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

    ಸಮಾರೋಪದಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ?
    ಜೂನ್‌ 3ರಂದು ನಡೆಯಲಿರುವ ಐಪಿಎಲ್‌ ಫೈನಲ್‌ ಪಂದ್ಯದ ಸಮಾರೋಪದಲ್ಲಿ ʻಆಪರೇಷನ್ ಸಿಂಧೂರʼ (Operation Sindoor) ವಿಜಯೋತ್ಸವ ಆಚರಿಸಲಾಗುತ್ತದೆ. ಸುಮಾರು 45 ನಿಮಿಷಗಳ ಕಾಲ ಸಮಾರಂಭ ನಡೆಯಲಿದೆ. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮೂರು ಸೇನಾಪಡೆಗಳ ಮುಖ್ಯಸ್ಥರಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ, ನೇವಿ ಮುಖ್ಯಸ್ಥ ಅಡ್ಮಿರಲ್‌ ದಿನೇಶ್‌ ಕೆ ತ್ರಿಪಾಠಿ, ಏರ್‌ಚೀಫ್‌ ಮಾರ್ಷಲ್‌ ಅಮರ್‌ ಪ್ರೀತ್‌ ಸಿಂಗ್‌ ಅವರನ್ನ ವೇದಿಕೆಗೆ‌ ಸೇನಾ ಗೌರವದೊಂದಿಗೆ ಆಹ್ವಾನಿಸಲಾಗುತ್ತದೆ. ಬಳಿಕ ಸೇನೆಗ ಗೌರವಾರ್ಥವಾಗಿ ಮಿಲಿಟರಿ ಬ್ಯಾಂಡ್‌ ಪ್ರದರ್ಶನ ಇರಲಿದೆ.

    ಇದಾದ ಬಳಿಕ ಖ್ಯಾತ ಹಿನ್ನೆಲೆ ಗಾಯಕರಾದ ಶಂಕರ್‌ ಮಹಾದೇವನ್‌ (Shankar mahadevan) ಹಾಗೂ ಶ್ರೇಯಾ ಘೋಷಾಲ್ (Shreya ghoshal) ಅವರಿಂದ ದೇಶಭಕ್ತಿ ಗೀತಗಾಯನ ಕಾರ್ಯಕ್ರಮ ಇರಲಿದೆ. ಜೊತೆಗೆ ಕಲಾ ತಂಡದಿಂದ ದೇಶಭಕ್ತಿ ನೃತ್ಯ ಕಾರ್ಯಕ್ರಮ ನಡೆಸಿಕೊಡಲಾಗುತ್ತದೆ. ಇದಾದ ಬಳಿಕ ಫೈನಲ್‌ ಪಂದ್ಯ ಆರಂಭವಾಗಲಿದೆ. ಫೈನಲ್‌ ಪಂದ್ಯ ಆರಂಭಕ್ಕೂ ಮುನ್ನ ಆಟಗಾರರು ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಿದ್ದಾರೆ.

    ಏನಾಗಿತ್ತು?
    ಕಳೆದ ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನ ಹತ್ಯೆಗೈಯಲಾಗಿತ್ತು. ಇದಕ್ಕೆ ʻಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು. ಈ ವೇಳೆ ಪಾಕಿಸ್ತಾನ ಸಹ ಪ್ರತಿದಾಳಿ ನಡೆಸಿತ್ತು, ಆದ್ರೆ ಭಾರತದ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆಯಿಂದ ಆ ದಾಳಿಗಳು ವಿಫಲವಾದವು. ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರತೀಕಾರ ಸಮರ ಜೋರಾಗುತ್ತಿದ್ದಂತೆ ಐಪಿಎಲ್‌ ಪಂದ್ಯಗಳನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಭಾರತ ಮತ್ತು ಪಾಕ್ ‌ನಡುವೆ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆ ಮೇ 17ರಿಂದ ಟೂರ್ನಿ ಪುನರಾರಂಭಗೊಳಿಸಲಾಯಿತು.

    ಭಾರತೀಯ ಸೇನೆಯ ಈ ಕಾರ್ಯವನ್ನು ಗೌರವಿಸುವ ಸಲುವಾಗಿ ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲು ನಿರ್ಧರಿಸಿದೆ.

    ನಮ್ಮ ಸಶಸ್ತ್ರ ಪಡೆಗಳ ಶೌರ್ಯ, ಸಾಹಸ ಮತ್ತು ನಿಸ್ವಾರ್ಥ ಸೇವೆಯನ್ನು ಬಿಸಿಸಿಐ ಗೌರವಿಸುತ್ತದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಅವರ ವೀರೋಚಿತ ಪ್ರಯತ್ನಗಳು ರಾಷ್ಟ್ರವನ್ನು ರಕ್ಷಿಸುತ್ತಿವೆ. ಇದರ ಗೌರವಾರ್ಥವಾಗಿ, ಐಪಿಎಲ್​ ಫೈನಲ್ ಪಂದ್ಯವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಮತ್ತು ನಮ್ಮ ವೀರ ಯೋಧರನ್ನು ಗೌರವಿಸಲು ನಾವು ನಿರ್ಧರಿಸಿದ್ದೇವೆ. ಅದಕ್ಕಾಗಿ ಸಮಾರೋಪಕ್ಕೆ ಬಿಸಿಸಿಐ ಮೂರು ಸೇನೆಗಳ ಮುಖ್ಯಸ್ಥರನ್ನು ಆಹ್ವಾನಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಐಪಿಎಲ್ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಮಿಲಿಟರಿ ಬ್ಯಾಂಡ್‌ನ ಪ್ರದರ್ಶನವೂ ನಡೆಯಲಿದೆ ತಿಳಿದು ಬಂದಿದೆ.

    ಐಪಿಎಲ್‌ ಪ್ಲೇ ಆಫ್‌ ವೇಳಾಪಟ್ಟಿ ಹೀಗಿದೆ…
    ಮೇ 29: ಮೊದಲ ಕ್ವಾಲಿಫೈಯರ್ ಪಂದ್ಯ (ಪಂಜಾಬ್ ಕಿಂಗ್ಸ್ vs ತಂಡ 2), ಮುಲ್ಲನ್‌ಪುರ್ (ಚಂಡೀಗಢ್), ಸಂಜೆ 7:30
    ಮೇ 30: ಎಲಿಮಿನೇಟರ್ ಪಂದ್ಯ (ತಂಡ 3 vs ತಂಡ 4), ಮುಲ್ಲನ್‌ಪುರ್ (ಚಂಡೀಗಢ್), ಸಂಜೆ 7:30
    ಜೂನ್ 1: ದ್ವಿತೀಯ ಕ್ವಾಲಿಫೈಯರ್ ಪಂದ್ಯ (ಸೋತವರು Q1 vs ಎಲಿಮಿನೇಟರ್ ವಿನ್ನರ್), ಅಹಮದಾಬಾದ್, ಸಂಜೆ 7:30
    ಜೂನ್ 3: ಫೈನಲ್ (ವಿಜೇತ Q1 vs ವಿಜೇತ Q2), ಅಹಮದಾಬಾದ್, ಸಂಜೆ 7:30

  • Photo Gallery | IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಬಳ್ಳಿಯಂತೆ ಬಳುಕಿದ ದಿಶಾ!

    Photo Gallery | IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಬಳ್ಳಿಯಂತೆ ಬಳುಕಿದ ದಿಶಾ!

    ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಗೆ ವರ್ಣರಂಜಿತ ಚಾಲನೆ ಸಿಕ್ಕಿದೆ. ಮೆಲೊಡಿ ಕ್ವೀನ್‌ ಶ್ರೇಯಾ ಘೋಷಾಲ್‌ (Shreya Ghoshal) ಹಾಡು, ದಿಶಾ ಪಟಾನಿ (Disha Patani) ಡಾನ್ಸು, ಕಿಂಗ್‌ – ಖಾನ್‌ರ (Shah Rukh Khan And Virat) ಕುಣಿತ ಹೀಗೆ ಹಲವು ವಿಶೇಷತೆಗಳಿಂದ ಕೂಡಿದ್ದ ಕಾರ್ಯಕ್ರಮ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಈ ಅದ್ಭುತ ಕ್ಷಣಗಳ ಒಂದಿಷ್ಟು ಚಿತ್ರಗಳು ಇಲ್ಲಿವೆ…

     

  • IPL 2025ಕ್ಕೆ ಗ್ರ್ಯಾಂಡ್‌ ವೆಲ್‌ಕಮ್‌ – ಶಾರುಖ್‌ ಮಾತು, ಶ್ರೇಯಾ ಹಾಡು, ದಿಶಾ ಡ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ

    IPL 2025ಕ್ಕೆ ಗ್ರ್ಯಾಂಡ್‌ ವೆಲ್‌ಕಮ್‌ – ಶಾರುಖ್‌ ಮಾತು, ಶ್ರೇಯಾ ಹಾಡು, ದಿಶಾ ಡ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ

    – ಮ್ಯೂಸಿಕ್‌ ಸೌಂಡ್‌ಗೆ ಮಂಕಾದ ಶ್ರೇಯಾ ಘೋಷಾಲ್‌ ಮಧುರ ಧ್ವನಿ
    – ಅಭಿಮಾನಿಗಳ ಮನಗೆದ್ದ ಶಾರುಖ್‌, ಕೊಹ್ಲಿ ನೃತ್ಯ

    ಕೋಲ್ಕತ್ತಾ: ಇಲ್ಲಿನ ಈಡನ್‌ ಗಾರ್ಡನ್ಸ್‌ನಲ್ಲಿ ಐಪಿಎಲ್‌ 2025ಕ್ಕೆ (IPL 2025) ಗ್ರ್ಯಾಂಡ್‌ ವೆಲ್‌ಕಮ್‌ ಸಿಕ್ಕಿದೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅದ್ಭುತ ಭಾಷಣದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಸುಮಧುರ ಧ್ವನಿಯಿಂದ ಅಭಿಮಾನಿಗಳನ್ನು ಮೋಡಿ ಮಾಡಿದರು. ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಅದ್ಭುತ ನೃತ್ಯದಿಂದ ಅಭಿಮಾನಿಗಳ ಹೃದಯಕ್ಕೆ ಲಗ್ಗೆಯಿಟ್ಟರು. ಪಂಜಾಬಿ ಗಾಯಕ ಕರಣ್ ಔಜ್ಲಾ ಗಾಯನದ ಮೂಲಕ ಗಮನ ಸೆಳೆದರು.

    ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅದ್ಭುತ ಭಾಷಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಗಾಯಕಿ ಶ್ರೇಯಾ ಘೋಷಾಲ್‌ ತನ್ನ ಮಧುರ ಕಂಠದಿಂದ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟರು. ಶ್ರೇಯಾ ಅವರ ಮೆಲೋಡಿ ಗಾಯನಕ್ಕೆ ಫ್ಯಾನ್ಸ್‌ ಫಿದಾ ಆದರು.

    ಶ್ರೇಯಾ ಘೋಷಾಲ್ ಅವರ ಪ್ರದರ್ಶನದ ನಂತರ ಬಾಲಿವುಡ್ ನಟಿ ದಿಶಾ ಪಟಾನಿ ಮನಮೋಹಕ ನೃತ್ಯದ ಮೂಲಕ ಗಮನ ಸೆಳೆದರು. ಬೆಳ್ಳಿ ಉಡುಪಿನಲ್ಲಿ ಕಂಗೊಳಿಸಿದ ದಿಶಾ ತಮ್ಮ ಹಾಟ್‌ ನೃತ್ಯದ ಮೂಲಕ ವೇದಿಕೆಯನ್ನು ರಂಗೇರಿಸಿದರು.

    ಶ್ರೇಯಾ ಘೋಷಾಲ್‌ ಅವರು ‘ವಂದೇ ಮಾತರಂ’, ‘ಮೇರೆ ಧೋಲ್ನಾ’, ‘ಕರ್ ಹರ್ ಮೈದಾನ್ ಫತೇ’, ‘ಘೂಮರ್’ ಹಾಡಿದಾಗ ಅಭಿಮಾನಿಗಳು ಸಹ ಜೊತೆಯಲ್ಲಿ ಹಾಡುತ್ತಾರೆ. ಪುಷ್ಪಾ 2 ಸಿನಿಮಾದ ಫೇಮಸ್ ‘ಸಾಮಿ ಸಾಮಿ’ ಹಾಡು ಕೇಳುತ್ತಿದ್ದಂತೆ ಫ್ಯಾನ್ಸ್‌ ರೋಮಾಂಚಿತರಾಗಿ ಕೂಗುತ್ತಾರೆ. ಈ ಹಾಡಿನ ಸಂದರ್ಭದಲ್ಲಿ ವಾದನಗಳ ಶಬ್ಧಕ್ಕೆ ಶ್ರೇಯಾ ಮಧುರ ಧ್ವನಿ ಸರಿಯಾಗಿ ಕೇಳುವುದಿಲ್ಲ. ಇದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಯಿತು.

    ಶಾರೂಖ್‌ ಜೊತೆ ಹೆಜ್ಜೆ ಹಾಕಿದ ವಿರಾಟ್
    ಶಾರುಖ್ ರಿಂಕು ಸಿಂಗ್ ಮತ್ತು ವಿರಾಟ್ ಕೊಹ್ಲಿಯನ್ನು ವೇದಿಕೆಯ ಮೇಲೆ ಕರೆದು ಇಬ್ಬರೊಂದಿಗೆ ಹಾಡುಗಳಿಗೆ ನೃತ್ಯ ಮಾಡಿದರು. ವಿರಾಟ್ ಮತ್ತು ಶಾರುಖ್ ‘ಜೂಮ್ ಜೋ ಪಠಾಣ್’ ಹಾಡಿಗೆ ಒಟ್ಟಿಗೆ ನೃತ್ಯ ಮಾಡಿದ್ದು, ವೇದಿಕೆಗೆ ಮತ್ತಷ್ಟು ರಂಗು ನೀಡಿತು.

  • ಶ್ರೇಯಾ ಘೋಷಾಲ್ ಎಕ್ಸ್‌ ಅಕೌಂಟ್ ಹ್ಯಾಕ್: ಲಿಂಕ್‌ ಕ್ಲಿಕ್‌ ಮಾಡದಂತೆ ಫ್ಯಾನ್ಸ್‌ಗೆ ಗಾಯಕಿ ಎಚ್ಚರಿಕೆ

    ಶ್ರೇಯಾ ಘೋಷಾಲ್ ಎಕ್ಸ್‌ ಅಕೌಂಟ್ ಹ್ಯಾಕ್: ಲಿಂಕ್‌ ಕ್ಲಿಕ್‌ ಮಾಡದಂತೆ ಫ್ಯಾನ್ಸ್‌ಗೆ ಗಾಯಕಿ ಎಚ್ಚರಿಕೆ

    ನ್ನಡ ಹಾಡುಗಳನ್ನು ಹಾಡಿ ಸೈ ಎನಿಸಿಕೊಂಡಿರುವ ಬಹುಭಾಷಾ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಎಕ್ಸ್ ಖಾತೆ ಹ್ಯಾಕ್‌ (Hack) ಆಗಿದೆ. ಈ ಕುರಿತು ಇನ್ಸ್ಟಾಗ್ರಾಂ ಖಾತೆಯಲ್ಲಿ ಫ್ಯಾನ್ಸ್‌ಗೆ ತಿಳಿಸಿದ್ದಾರೆ. ತಮ್ಮ ಖಾತೆಯಲ್ಲಿ ಕಾಣಿಸುವ ಯಾವುದೇ ರೀತಿಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಅಭಿಮಾನಿಗಳಿಗೆ ಗಾಯಕಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ತಂಗಿ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಕಾಮೆಂಟ್: ಹೀಗ್ಯಾಕಂದ್ರು ಶ್ರೀವಲ್ಲಿ?

    ಗಾಯಕಿಯ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ, ನನ್ನ ಎಲ್ಲಾ ಸ್ನೇಹಿತರಿಗೆ ಮತ್ತು ಅಭಿಮಾನಿಗಳಿಗೆ ನಮಸ್ಕಾರ, ಫೆ.13ರಂದು ನನ್ನ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ನಿರಂತರವಾಗಿ ಪ್ರಯತ್ನ ಮಾಡಿದರೂ ಕೂಡ ನನ್ನ ಖಾತೆಯನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ. ಎಕ್ಸ್ ತಂಡದಿಂದ ಕೂಡ ಯಾವುದೇ ಸಹಕಾರ ಸಿಗುತ್ತಿಲ್ಲ. ಲಾಗಿನ್ ಕೂಡ ಆಗಲು ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ಆ ಖಾತೆಯನ್ನು ಡಿಲೀಟ್ ಮಾಡೋಣವೆಂದರೆ ಅದು ಕೂಡ ಸಾಧ್ಯವಾಗುತ್ತಿಲ್ಲ ಎಂದು ಎಕ್ಸ್ ಖಾತೆ ಹ್ಯಾಕ್ ಆಗಿರುವ ಸಮಸ್ಯೆ ತೋಡಿಕೊಂಡಿದ್ದಾರೆ.

     

    View this post on Instagram

     

    A post shared by shreyaghoshal (@shreyaghoshal)

    ತಮ್ಮ ಎಕ್ಸ್ ಖಾತೆಯ ಟೈಮ್‌ಲೈನ್‌ನಲ್ಲಿ ಕಾಣಿಸುವ ಯಾವುದೇ ರೀತಿಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಫ್ಯಾನ್ಸ್‌ಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಆ ಲಿಂಕ್‌ಗಳು ಸ್ಕ್ಯಾಮ್ ಆಗಿರಬಹುದು, ಕ್ಲಿಕ್ ಮಾಡುವುದರಿಂದ ನಿಮಗೂ ನಷ್ಟ ಆಗಬಹುದು ಎಂದು ಗಾಯಕಿ ಬರೆದುಕೊಂಡಿದ್ದಾರೆ. ಮತ್ತೆ ತಮ್ಮ ಖಾತೆಯು ಮರಳಿ ಪಡೆಯುವಲ್ಲಿ ಸಫಲರಾದರೆ ನಾನೇ ಲೈವ್ ಬಂದು ನನ್ನ ಅಕೌಂಟ್ ಮರಳಿ ಪಡೆದಿರುವ ವಿಚಾರವನ್ನು ಹೇಳುತ್ತೇನೆ. ಅಲ್ಲಿಯವರೆಗೂ ಯಾವ ಸುದ್ದಿಯನ್ನು ಕೂಡ ನಂಬಬೇಡಿ ಎಂದು ಶ್ರೇಯಾ ಘೋಷಾಲ್ ಮನವಿ ಮಾಡಿದ್ದಾರೆ.

    ಅಂದಹಾಗೆ, ಒಂದು ಮಳೆಬಿಲ್ಲು, ಗಮನವ ಸೆಳೆಯುವ, ಉಸಿರೇ ಉಸಿರೇ, ನೀನೇ ಮೊದಲು ನೀನೇ ಕೊನೆ ಹೀಗೆ ಕನ್ನಡದ ಸಾಕಷ್ಟು ಹಾಡುಗಳನ್ನು ಹಾಡಿ ಮನರಂಜಿಸಿದ್ದಾರೆ. ಹಿಂದಿ, ಕನ್ನಡ, ತೆಲುಗು, ಹೀಗೆ ಹಲವು ಭಾಷೆಗಳಲ್ಲಿ ಶ್ರೇಯಾ ಘೋಷಾಲ್ ಹಾಡಿದ್ದಾರೆ.

  • ಮೈಸೂರಲ್ಲಿ ಯುವದಸರಾಗೆ ಅದ್ಧೂರಿ ಚಾಲನೆ – ಶ್ರೇಯಾ ಘೋಷಾಲ್ ಹಾಡಿಗೆ ಹುಚ್ಚೆದ್ದು ಕುಣಿದ ಯುವಜನ

    ಮೈಸೂರಲ್ಲಿ ಯುವದಸರಾಗೆ ಅದ್ಧೂರಿ ಚಾಲನೆ – ಶ್ರೇಯಾ ಘೋಷಾಲ್ ಹಾಡಿಗೆ ಹುಚ್ಚೆದ್ದು ಕುಣಿದ ಯುವಜನ

    ಮೈಸೂರು: ದಸರಾ ಮಹೋತ್ಸವದ ಅಂತವಾಗಿ ನಡೆದ ಯುವ ದಸರಾ (Yuva dasara) ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅದ್ಧೂರಿ ಚಾಲನೆ ನೀಡಿದರು. ಮೊದಲ ದಿನವೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಹಾಡಿಮ ಮೂಲಕ ಮೋಡಿ ಮಾಡಿದರು. ಮಳೆ ಭೀತಿ ನಡುವೆಯೂ ಯುವ ಸಮೂಹ ಹುಚ್ಚೆದ್ದು ಕುಣಿಯುತ್ತಿತ್ತು.

    ಮಹಾರಾಜು ಕಾಲೇಜು ಮೈದಾನದ ಬಳಿ ಟ್ರಾಫಿಕ್ ದಟ್ಟಣೆ ನಿವಾರಿಸಲು ಇದೇ ಮೊದಲ ಬಾರಿಗೆ ಮೈಸೂರಿನ ಉತ್ತನಹಳ್ಳಿ ಸಮೀಪ ಯುವ ದಸರಾ ಆಯೋಜಿಸಲಾಗಿದೆ. ಇದನ್ನೂ ಓದಿ: ಖ್ಯಾತ ಕೋರಿಯೋಗ್ರಾಫರ್ ಜಾನಿ ಮಾಸ್ಟರ್‌ಗೆ ಕೇಂದ್ರ ಸರ್ಕಾರ ಬಿಗ್ ಶಾಕ್ – ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರದ್ದು

    ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಲ್ ಅವರ ʻಸುನ್ ರಹಾ ಹೇನʼ ಗೀತೆಯ ಮೂಲಕ ಕಾರ್ಯಕ್ರಮ ಆರಂಭಿಸಿದರು. ಯುವ ದಸರಾ ಕಾರ್ಯಕ್ರಮದ ಮೊದಲ ದಿನ ದರ್ಶನ್‌ ನಟನೆಯ ʻಚಕ್ರವರ್ತಿʼ ಚಿತ್ರದ ʻಒಂದು ಮಳೆ ಬಿಲ್ಲುʼ, ಕೊಟ್ಟಿಗೊಬ್ಬ-2 ಚಿತ್ರದ ʻಸಾಲುತಿಲ್ಲವೇ ಸಾಲುತಿಲ್ಲವೇʼ, ಸಂಜು ವೆಡ್ಸ್ ಗೀತಾ ಚಿತ್ರದ ʻಗಗನವೇ ಬಾಗಿʼ ಗೀತೆ ಹಾಡುವ ಮೂಲಕ ಯುವಜನರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇದನ್ನೂ ಓದಿ: BBK 11: ಬಿಗ್ ಬಾಸ್ ಮನೆಯಿಂದ ಯಮುನಾ ಔಟ್

  • ಮೆಲೋಡಿ ಕ್ವೀನ್‍ನನ್ನು ಭೇಟಿಯಾದ ಶರ್ಮಿಳಾ

    ಮೆಲೋಡಿ ಕ್ವೀನ್‍ನನ್ನು ಭೇಟಿಯಾದ ಶರ್ಮಿಳಾ

    ಚಂದನವನದ ನಟಿ ಶರ್ಮಿಳಾ ಮಾಂಡ್ರೆ ಸಿನಿಮಾದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದು, ತಮ್ಮದೇ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಶರ್ಮಿಳಾ ನಿರ್ಮಾಪಕಿಯಾಗಿದ್ದಾರೆ. ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಈ ನಟಿ ಮೆಲೋಡಿ ಕ್ವೀನ್ ಶ್ರೇಯಾಘೋಷಲ್ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಶರ್ಮಿಳಾ ಟ್ವಿಟ್ಟರ್‌ನಲ್ಲಿ, ಶ್ರೇಯಾಘೋಷಲ್ ಅವರನ್ನು ಭೇಟಿಯಾಗಿದ್ದು ಸಂತೋಷವಾಗುತ್ತಿದೆ. ಲಂಡನ್‍ನಲ್ಲಿ ಅವರು ಲೈವ್ ಪ್ರದರ್ಶನವಾಗಬೇಕಿತ್ತು. ಇದಕ್ಕೂ ಮುನ್ನ ನಾನು ಅವರನ್ನು ಭೇಟಿ ಮಾಡಿದ್ದೇನೆ. ಅತ್ಯಂತ ಸುಂದರವಾದ ಧ್ವನಿಯ ವಿನಮ್ರ ವ್ಯಕ್ತಿ ಎಂದು ಹೊಗಳಿದ್ದಾರೆ. ಅಲ್ಲದೇ ನನ್ನ ಮೊದಲ ಚಿತ್ರ ‘ಸಜನಿ’ ಸಿನಿಮಾದಲ್ಲಿ ಅವರು ಹಾಡೊಂದನ್ನು ಆಡಿರುವುದು ನನಗೆ ನೆನಪಾಯಿತು ಎಂದು ಬರೆದು ಲಿಂಕ್ ಹಾಕಿದ್ದಾರೆ. ಇದನ್ನೂ ಓದಿ: ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ಪ್ರಸ್ತುತ ಶರ್ಮಿಳಾ ಮಾಂಡ್ರೆ ಕನ್ನಡದ ‘ದಸರಾ’ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇದೇ ಟೈಟಲ್ ತೆಲುಗು ಸಿನಿಮಾಗೂ ಇಡಲಾಗಿತ್ತು. ಇದರಿಂದ ನಮ್ಮ ಸಿನಿಮಾಗೆ ತೊಂದರೆಯಾಗುವುದೆಂದು ಬೇಸರಗೊಂಡ ಶರ್ಮಿಳಾ ನ್ಯಾಯಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿ ಸುದ್ದಿಯಾಗಿದ್ದರು. ಈಗ ಮೆಲೋಡಿ ಕ್ವೀನ್ ಭೇಟಿಯಾಗುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಶರ್ಮಿಳಾ ಸಿನಿಮಾಗಿಂತ ಹೆಚ್ಚು ಪ್ರೊಡಕ್ಷನ್ ಕಡೆ ಹೆಚ್ಚು ಗಮನಕೊಡುತ್ತಿದ್ದಾರೆ. ಆದರೆ ಇವರ ಮೊದಲ ನಿರ್ಮಾಣದಲ್ಲಿ ಕೆಲವು ಗೊಂದಲಗಳು ನಿರ್ಮಾಣವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿದ್ದಾರೆ.

    ಶ್ರೇಯಾ ಘೋಷಲ್ ಚಂದನವನ ಸೇರಿದಂತೆ ಉತ್ತರ ಮತ್ತು ದಕ್ಷಿಣ ಸಿನಿಮಾಗಳಲ್ಲಿ ನಮ್ಮ ಮಧುರ ಧ್ವನಿಯ ಮೂಲಕ ಎಲ್ಲರನ್ನು ಮೋಡಿ ಮಾಡಿದ್ದಾರೆ. ಶ್ರೇಯಾಘೋಷಲ್ ಧ್ವನಿಗೆ ಲಕ್ಷಾಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲ ಸಿನಿರಂಗದಲ್ಲಿಯೂ ಶ್ರೇಯಾಘೋಷಲ್ ಬಹುಬೇಡಿಕೆಯ ಸಿಂಗರ್ ಆಗಿದ್ದಾರೆ. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

  • ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದೇ – ಅಭಿಮಾನಿಗಳಲ್ಲಿ ಶ್ರೇಯಾ ಪ್ರಶ್ನೆ

    ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದೇ – ಅಭಿಮಾನಿಗಳಲ್ಲಿ ಶ್ರೇಯಾ ಪ್ರಶ್ನೆ

    ನವದೆಹಲಿ: ಹತ್ತು ವರ್ಷಗಳ ಹಿಂದೆ ನಾವೆಲ್ಲಾ ಮಕ್ಕಳಾಗಿದ್ದೆವು. ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದಾ ಎಂದು ಶ್ರೇಯಾ ಘೋಷಾಲ್ ಅಭಿಮಾನಿಗಳಲ್ಲಿ ಪ್ರಶ್ನಿಸಿದ್ದಾರೆ.

    ಗಾಯಕಿ ಶ್ರೇಯಾ ಘೋಷಾಲ್ ಅವರ ಹಳೆಯ ಟ್ವೀಟ್ ಒಂದು ಇತ್ತೀಚೆಗೆ ವೈರಲ್ ಆದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟ್ಟರ್ ಸಂಸ್ಥೆಯ ಹೊಸ ಸಿಇಒ ಪರಾಗ್ ಅಗರ್ವಾಲ್ ಅವರೊಂದಿಗೆ ಹಂಚಿಕೊಂಡಿದ್ದ ಪೋಸ್ಟ್ ಇತ್ತೀಚೆಗೆ ವೈರಲ್ ಆಗುತ್ತಿದ್ದು, ಶ್ರೆಯಾ ನಾವು ಆ ಸಮಯದಲ್ಲಿ ಮಕ್ಕಳಾಗಿದ್ದೆವು ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದ ಸರ್ಕಾರಿ ನೌಕರರು, ವಕೀಲರಿಗೆ 1 ರೂ.ಗೆ ಸಿಗಲಿದೆ ಮನೆ

    ಹೊಸ ಟ್ವಿಟ್ಟರ್ ಸಿಇಒ ಪರಾಗ್ ಅಗರ್ವಾಲ್ ಅವರೊಂದಿಗೆ ಶ್ರೇಯಾ ಅವರ ಸಂಬಂಧವನ್ನು ನೆಟ್ಟಿಗರು ಅಗೆದು ಹಾಕುತ್ತಿರುವ ಹಿನ್ನೆಲೆಯಲ್ಲಿ ಗಾಯಕಿ ಸ್ಪಷ್ಟನೆ ನೀಡಿದ್ದಾರೆ. 2010ರಲ್ಲಿ ಮೈಕ್ರೋಬ್ಲಾಗಿಂಗ್ ಸೈಟ್ ಹುಟ್ಟಿಕೊಂಡಾಗ ನಾವು ಕೇವಲ ಮಕ್ಕಳು ಎಂದು ಟ್ವೀಟ್ ಮಾಡಿದ್ದಾರೆ.

    ಅರೇ.. ನೀವೆಲ್ಲಾ ಹಳೆಯ ಟ್ವೀಟ್‍ಗಳನ್ನು ತೆಗೆಯುತ್ತಿದ್ದೀರಾ! ಆಗಷ್ಟೇ ಟ್ವಿಟ್ಟರ್ ಹುಟ್ಟಿಕೊಂಡಿತ್ತು. ಹತ್ತು ವರ್ಷಗಳ ಹಿಂದೆ ನಾವೆಲ್ಲಾ ಮಕ್ಕಳಾಗಿದ್ದೆವು. ಸ್ನೇಹಿತರು ಒಬ್ಬರಿಗೊಬ್ಬರು ಟ್ವೀಟ್ ಮಾಡಬಾರದಾ? ಇದೆಂಥಾ ಟೈಂ ಪಾಸ್ ನಡೆಯುತ್ತಿದೆ (ಅರೆ ಯಾರ್ ತುಮ್ ಲೋಗ್ ಕಿತ್ನಾ ಬಚ್ಪನ್ ಕಾ ಟ್ವೀಟ್ಸ್ ನಿಕಾಲ್ ರಹೇ ಹೋ! ಟ್ವಿಟ್ಟರ್ ಹ್ಯಾಡ್ ಜಸ್ಟ್ ಲಾಂಚ್ಡ್. 10 ಇಯರ್ಸ್ ಪೆಹೆಲೆ! ವೀ ವೇರ್ ಕಿಡ್ಸ್! ದೋಸ್ತ್ ಏಕ್ ದೂಸ್ರೆ ಕೊ ಟ್ವೀಟ್ ನಹಿ ಕರ್‍ತೆ ಕ್ಯಾ? ಕ್ಯಾ ಟೈಮ್ ಪಾಸ್ ಚಲ್ ರಹಾ ಹೆ ಯಹಾ) ಎಂಬ ತಮಾಷೆಯಾಡಿದ್ದಾರೆ.

    ಸೋಮವಾರ ಟ್ವಿಟ್ಟರ್ ಸಿಇಒ ಆಗಿ ನೇಮಕವಾಗಿದ್ದಕ್ಕೆ ಸ್ನೇಹಿತ ಪರಾಗ್ ಅಗರ್ವಾಲ್ ಅವರನ್ನು ಶ್ರೇಯಾ ಅಭಿನಂದಿಸಿದ್ದರು. ಇದಾದ ಬಳಿಕ ಇವರಿಬ್ಬರು ಸ್ನೇಹಿತರು ಎಂಬ ವಿಚಾರದ ಜೊತೆ ಹಳೇಯ ಟ್ವೀಟ್‍ಗಳು ವೈರಲ್ ಆಗಿದ್ದವು.ಇದಾದ ಒಂದು ದಿನದ ಬಳಿಕ ಶ್ರೇಯಾ ಪ್ರತಿಕ್ರಿಯೆ ನೀಡಿದ್ದಾರೆ.

    ನೆಟ್ಟಿಗರು ಶ್ರೇಯಾ ಅವರ ಹಳೆಯ ಟ್ವೀಟ್‍ಗಳನ್ನು ಹುಡುಕುವ ಮೂಲಕ ಅವರಿಬ್ಬರ ನಡುವಿನ ಗೆಳೆತನವನ್ನು ಕಂಡುಕೊಂಡಿದ್ದಾರೆ. 2010ರ ಒಂದು ಟ್ವೀಟ್‍ನಲ್ಲಿ ಶ್ರೇಯಾ ಪರಾಗ್ ಅವರನ್ನು ಬಚ್ಪನ್ ಕಾ ದೋಸ್ತ್ (ಬಾಲ್ಯದ ಗೆಳೆಯ) ಎಂದು ಕರೆದಿದ್ದರು. ಇದನ್ನೂ ಓದಿ: ಫೇಮಸ್ ಆಯ್ತು ಅಗರವಾಲ್ ಮೀಮ್ಸ್

    ಪರಾಗ್ ಅಗರ್ವಾಲ್ ಸೋಮವಾರ ಟ್ವಿಟ್ಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಶ್ರೇಯಾ, ಅವರ ಪತಿ ಶಿಲಾದಿತ್ಯ, ಪರಾಗ್ ಅಗರ್ವಾಲ್, ಅವರ ಪತ್ನಿ ವಿನೀತ ಒಟ್ಟಿಗೆ ಸುತ್ತಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.

  • 6 ತಿಂಗಳ ಬಳಿಕ ಮಗನನ್ನು ಪರಿಚಯಿಸಿದ ಶ್ರೇಯಾ ಘೋಷಾಲ್

    6 ತಿಂಗಳ ಬಳಿಕ ಮಗನನ್ನು ಪರಿಚಯಿಸಿದ ಶ್ರೇಯಾ ಘೋಷಾಲ್

    ಮುಂಬೈ: ಬಾಲಿವುಡ್ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ 6 ತಿಂಗಳ ಬಳಿಕ ತಮ್ಮ ಮುದ್ದಿನ ಮಗ ದೇವ್ಯಾನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

    ತಮ್ಮ ಮಧುರವಾದ ಕಂಠದಿಂದಲೇ ಎಲ್ಲರ ಮನ ಗೆದ್ದಿರುವ ಶ್ರೇಯಾ ಘೋಷಲ್ ಪುತ್ರ ದೇವ್‍ಯಾನ್‍ಗೆ 5 ತಿಂಗಳು ತುಂಬಿದ್ದು 6ನೇ ತಿಂಗಳಿಗೆ ಕಾಲಿಟ್ಟಿದ್ದಾನೆ. ಈ ಹಿನ್ನೆಲೆ ಶ್ರೇಯಾ ಘೋಷಾಲ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಗನ ಕ್ಯೂಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಶ್ರೇಯಾ ದೇವ್‍ಯಾನ್ ತೋಳಿನಲ್ಲಿ ಎತ್ತಿಕೊಂಡಿದ್ದರೆ, ದೇವ್ಯಾನ್ ಕ್ಯೂಟ್ ಆಗಿ ಸ್ಮೈಲ್ ಮಾಡುತ್ತಾ ಫೋಟೋಗೆ ಪೋಸ್ ನೀಡಿದ್ದಾನೆ. ಇದನ್ನೂ ಓದಿ: ಮದುವೆ ಫೋಟೋ ಜೊತೆಗೆ ಭಾವನಾತ್ಮಕ ಸಾಲು ಬರೆದು ಶೇರ್ ಮಾಡಿ ಶಿಲ್ಪಾ ಶೆಟ್ಟಿ

    Shreya Ghoshal

    ಫೋಟೋ ಜೊತೆಗೆ, ಎಲ್ಲರಿಗೂ ಹಾಯ್, ನಾನು ದೇವ್‍ಯಾನ್, ನನಗೀಗ 6 ತಿಂಗಳು. ಪ್ರಸ್ತುತ ನನ್ನ ಸುತ್ತಲಿರುವ ಪ್ರಪಂಚವನ್ನು ಅನ್ವೇಷಿಸುವಲ್ಲಿ ನಾನು ಬ್ಯುಸಿಯಾಗಿದ್ದೇನೆ. ನನ್ನ ನೆಚ್ಚಿನ ಹಾಡಗಳನ್ನು ಕೇಳುತ್ತಿದ್ದೇನೆ, ಎಲ್ಲಾ ರೀತಿಯ ಚಿತ್ರಗಳಿರುವ ಪುಸ್ತಕಗಳನ್ನು ಓದುತ್ತಿದ್ದೇನೆ. ಸಿಲ್ಲಿ ಜೋಕ್‍ಗಳಿಗೆ ಜೋರಾಗಿ ನಗುತ್ತಿರುತ್ತೇನೆ ಮತ್ತು ನನ್ನ ತಾಯಿಯೊಂದಿಗೆ ಸಂಭಾಷಣೆ ನಡೆಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದಕ್ಕಾಗಿ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಮಗನ ಪರವಾಗಿ ಶ್ರೇಯಾ ಘೋಷಾಲ್ ಬರೆದುಕೊಂಡಿದ್ದಾರೆ.

    ಶ್ರೇಯಾ ಘೋಷಾಲ್ ಉದ್ಯಮಿ ಶೀಲಾದಿತ್ಯ ಮುಖೋಪಾಧ್ಯಯ ಜೊತೆ ಆರು ವರ್ಷಗಳ ಹಿಂದೆ ಸಪ್ತಪದಿ ತುಳಿದಿದ್ದರು. ಇದೀಗ 2021ರ ಮೇ ತಿಂಗಳಿಗೆ ಶ್ರೇಯಾ ಘೋಷಾಲ್ ಅವರಿಗೆ ದೇವ್ಯಾನ್ ಜನಿಸಿದ. ಇದನ್ನೂ ಓದಿ: ‘ಅಮೃತ ಅಪಾರ್ಟ್‌ಮೆಂಟ್ಸ್’ನಲ್ಲೊಂದು ಮರ್ಡರ್ ಮಿಸ್ಟ್ರಿ ಕಥೆ ಹೇಳ ಹೊರಟ ಗುರುರಾಜ್ ಕುಲಕರ್ಣಿ

     

    View this post on Instagram

     

    A post shared by shreyaghoshal (@shreyaghoshal)

    ಪ್ಯಾರಿಸ್ ಪ್ರಣಯ ಸಿನಿಮಾದ ಮೂಲಕ ಶ್ರೇಯಾ ಘೋಷಾಲ್ ಕನ್ನಡ ಸಿನಿಪ್ರಿಯರಿಗೆ ಪರಿಚಯವಾದರು. ಮುಂಗಾರು ಮಳೆ ಸೇರಿದಂತೆ ಇಲ್ಲಿಯವರೆಗೂ ಕನ್ನಡದ ಹಲವಾರು ಸಿನಿಮಾದಲ್ಲಿ ಶ್ರೇಯಾ ಘೋಷಾಲ್ ಹಾಡಿದ್ದು, ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳು ಸೇರಿದಂತೆ ಇತರೆ ಭಾಷೆಗಳ ಸಿನಿಮಾಗಳಲ್ಲೂ ಹಾಡು ಹಾಡಿದ್ದಾರೆ.

  • ಹೆಸರಿಟ್ಟು ಮುದ್ದು ಮಗನನ್ನು ಪರಿಚಯಿಸಿದ ಗಾಯಕಿ ಶ್ರೇಯಾ ಘೋಷಾಲ್

    ಹೆಸರಿಟ್ಟು ಮುದ್ದು ಮಗನನ್ನು ಪರಿಚಯಿಸಿದ ಗಾಯಕಿ ಶ್ರೇಯಾ ಘೋಷಾಲ್

    ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿರುವುದು ತಿಳಿದ ವಿಚಾರ. ಇದೀಗ ಮೊದಲ ಬಾರಿಗೆ ತಮ್ಮ ಅಭಿಮಾನಿಗಳಿಗೆ ಮುದ್ದು ಮಗುವನ್ನು ತೋರಿಸಿದ್ದು, ‘ದೇವ್ಯಾನ್’ ಎಂದು ಪರಿಚಯಿಸಿದ್ದಾರೆ. ಅಲ್ಲದೆ ಕನಸಿನಂತೆ ಭಾಸವಾಗುತ್ತಿದೆ, ಬ್ಯೂಟಿಫುಲ್ ಗಿಫ್ಟ್ ಎಂದು ಹೇಳಿಕೊಂಡಿದ್ದಾರೆ.

     

    View this post on Instagram

     

    A post shared by shreyaghoshal (@shreyaghoshal)

    ಪತಿ ಶಿಲಾದಿತ್ಯ ಹಾಗೂ ತಾವು ಮಗುವನ್ನು ಹಿಡಿದಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಚಿತ್ರದಲ್ಲಿ ಮಗುವಿನ ಮುಖವನ್ನು ಮಾತ್ರ ತೋರಿಸಲಾಗಿಲ್ಲ. ಈ ಕುರಿತು ಭಾವನಾತ್ಮಕ ಸಾಲುಗಳನ್ನು ಬರೆದಿರುವ ಶ್ರೇಯಾ, ‘ದೇವ್ಯಾನ್ ಮುಖ್ಯೋಪಾಧ್ಯಾಯ’ನನ್ನು ಪರಿಚಯಿಸುತ್ತಿದ್ದೇನೆ. ಇವನು ಮೇ 22ರಂದು ಜನಿಸಿದ್ದು, ನಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದ್ದಾನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೀಮಂತ ಫೋಟೋ ಹಂಚಿಕೊಂಡ ಶ್ರೇಯಾ ಘೋಷಾಲ್

    ಅವನು ಹುಟ್ಟಿದ ತಕ್ಷಣ ಮೊದಲ ನೋಟದಲ್ಲೇ ನಮ್ಮ ಹೃದಯವನ್ನು ಪ್ರೀತಿಯಿಂದ ತುಂಬಿದ. ತಂದೆ, ತಾಯಿ ಮಾತ್ರ ಇದನ್ನು ಅನುಭವಿಸಲು ಸಾಧ್ಯ. ಶುದ್ಧ, ನಿಯಂತ್ರಿಸಲಾಗದ ಅಗಾಧ ಪ್ರೀತಿ, ಇನ್ನೂ ನಮಗೆ ಕನಸಿನಂತೆ ಭಾಸವಾಗುತ್ತಿದೆ. ಈ ಸುಂದರವಾದ ಜೀವನದ ಉಡುಗೊರೆಗೆ ನಾನು ಹಾಗೂ ಶಿಲಾದಿತ್ಯ ಕೃತಜ್ಞರಾಗಿದ್ದೇವೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಮೇ 22ರಂದು ಶ್ರೇಯಾ ಘೋಷಾಲ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಕುರಿತು ಸಹ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ದೇವರು ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ. ಇಂತಹ ಭಾವನೆಯನ್ನು ಹಿಂದೆಂದೂ ಅನುಭವಿಸಿರಲಿಲ್ಲ. ನಮ್ಮ ಕುಟುಂಬಸ್ಥರೂ ಸೇರಿದಂತೆ ಶೀಲಾದಿತ್ಯ ಹಾಗೂ ನಾನು ತುಂಬಾ ಸಂತೋಷಗೊಂಡಿದ್ದೇವೆ. ಬೆಲೆ ಕಟ್ಟಲಾಗದ ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು ಎಂದು ಶ್ರೇಯಾ ಘೋಷಾಲ್ ಬರೆದುಕೊಂಡಿದ್ದರು. ಮಾರ್ಚ್ 4ರಂದು ಶ್ರೇಯಾ ಪ್ರೆಗ್ನೆನ್ಸಿ ಅನೌನ್ಸ್ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದ್ದರು.