Tag: Shraddha Srinath

  • ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ಸ್ಯಾಂಡಲ್‌ವುಡ್‌ನ `ಯೂ ಟರ್ನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಶ್ರದ್ಧಾ ಶ್ರೀನಾಥ್ ರಾತ್ರೋ ರಾತ್ರಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌ವೊಂದನ್ನ ಕೊಟ್ಟಿದ್ದಾರೆ. ಈಗ ಹೆಲೋ ಗುಡ್ ಬೈ ಅಂತಾ ಟ್ವೀಟರ್‌ನಲ್ಲಿ ಶ್ರದ್ಧಾ ಪೋಸ್ಟ್ ಮಾಡಿದ್ದು, ಇದೀಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

    `ಯೂ ಟರ್ನ್’, `ಆಪರೇಷನ್ ಅಲಮೇಲಮ್ಮ’, `ರುಸ್ತುಂ’ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ ನಟಿ ಶ್ರದ್ಧಾ ಶ್ರೀನಾಥ್, ಸದ್ಯ ತೆಲುಗು, ತಮಿಳು, ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋ ನಟಿ ಈಗ ರಾತ್ರೋ ರಾತ್ರಿ ದಿಢೀರ್ ಅಂತಾ ಬ್ಯಾಕ್‌ & ವೈಟ್‌ ಫೋಟೋ ಶೇರ್‌ ಮಾಡಿ ʻಹೆಲೋ ಗುಡ್ ಬೈʼ ಅಂತಾ ಟ್ವೀಟ್ ಮಾಡಿ, ಪೋಸ್ಟ್ ಮಾಡಿರೋದು ಶ್ರದ್ಧಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ:ನಟ ಜೈಜಗದೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಬ್ಯೂಟಿ ಜತೆ ಪ್ರತಿಭೆಯಿರೋ ಮಹಾನ್ ನಟಿ ಶ್ರದ್ಧಾ, ಸ್ಟಾರ್‌ಗಳ ಜತೆಗೆ ತೆರೆಹಂಚಿಕೊಳ್ತಿದ್ದಾರೆ. ಚಿತ್ರರಂಗದಲ್ಲಿ ಒಳ್ಳೆಯ ಏಳಿಗೆ ಇರುವಾಗ ಬೈ ಅಂತಾ ಪೋಸ್ಟ್ ಮಾಡಿದ್ಯಾಕೆ, ವಯಕ್ತಿಕ ಜೀವನದಲ್ಲಿ ಏನಾದ್ರೂ ಸಮಸ್ಯೆ ಇದ್ಯಾ, ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ರಾ ಅಥವಾ ಸಾಮಾಜಿಕ ಜಾಲತಾಣಕ್ಕೆ ಬೈ ಹೇಳಿದ್ರಾ ಎಂದೆಲ್ಲಾ ನಟಿ ಶ್ರದ್ಧಾ ಕುರಿತು ಸಾಕಷ್ಟು ಚರ್ಚೆ ಆಗುತ್ತಿದೆ. ಈ ಎಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ ಕಾದುನೋಡಬೇಕಿದೆ.

  • ಬದಲಾಗಲಿದೆ ಸತೀಶ್ ನೀನಾಸಂ ನಟನೆಯ `ಗೋದ್ರಾ’ ಟೈಟಲ್!

    ಬದಲಾಗಲಿದೆ ಸತೀಶ್ ನೀನಾಸಂ ನಟನೆಯ `ಗೋದ್ರಾ’ ಟೈಟಲ್!

    ನ್ನಡ ಸಿನಿಮಾರಂಗದಲ್ಲಿ ಮನೋಜ್ಞ ನಟನೆ ಮತ್ತು ವಿಶಿಷ್ಠ ವ್ಯಕ್ತಿತ್ವದಿಂದ ಮನೆಮಾತಾಗಿರೋ ಸತೀಶ್ ನೀನಾಸಂ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಆದರೆ ಈಗ ಸತೀಶ್ ನಟನೆಯ ʻಗೋದ್ರಾʼ ಚಿತ್ರ ಟೈಟಲ್ ಚೇಂಜ್ ಆಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ `ಗೋದ್ರಾ’ ಚಿತ್ರಕ್ಕೆ ಕೆ.ಎಸ್ ನಂದೀಶ್ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ರಿಲೀಸ್ ರೆಡಿಯಿದ್ದು, ಇದೀಗ ಚಿತ್ರದ ಟೈಟಲ್‌ ಬದಲಾವಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಈ ಹಿಂದೆಯೇ 2020ರಲ್ಲೇ ಟೈಟಲ್ ಕೈಬಿಡುವಂತೆ ಹೇಳಿತ್ತು ಸೆನ್ಸಾರ್ ಮಂಡಳಿ.

    ಈ ಹಿಂದೆ 2002ರಲ್ಲಿ ದೇಶದೆಲ್ಲಡೆ ಸದ್ದು ಮಾಡಿದ್ದ ಗೋದ್ರಾ ಹತ್ಯಾಕಾಂಡ ಸಂಚಲನ ಮೂಡಿಸಿತ್ತು. ಆದರೆ ಇದಕ್ಕೂ ಚಿತ್ರ ಕಥೆಗೂ ಯಾವುದೇ ಸಂಬಂಧವಿಲ್ಲ ಅಂತಾ ಚಿತ್ರತಂಡ ಸ್ಪಷ್ಟಪಡಿಸಿದೆ. ಈ ಹಿನ್ನಲೆ ಸೆನ್ಸಾರ್ ಮಂಡಳಿ 2020ರಲ್ಲೇ ಟೈಟಲ್ ಕೈಬಿಡುವಂತೆ ಹೇಳಿತ್ತು. ಅದನ್ನು ಚಿತ್ರತಂಡವು ಒಪ್ಪಿಕೊಂಡಿದ್ದು, ಚಿತ್ರಕ್ಕೆ ಪೂರಕವಾದ ಹೆಸರನ್ನೇ ಹುಡುಕುತ್ತಿದೆ. ರಿಲೀಸ್‌ಗೂ ಮುಂಚೆನೇ ಟೈಟಲ್ ಬದಲಾವಣೆಯೊಂದಿಗೆ ಸತೀಶ್ ನೀನಾಸಂ ನಟನೆಯ ಚಿತ್ರ ಬರಲಿದೆ. ಇದನ್ನೂ ಓದಿ: ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಸಮಂತಾ

    ಭಿನ್ನ ಕಥೆ ಜತೆ ಬರುತ್ತಿರೋ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್‌ರನ್ನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

  • ಸಿನಿಮಾರಂಗ ಬಿಟ್ಟು ಕೃಷಿಯತ್ತ ಮುಖ ಮಾಡಿದ್ರಾ ಸ್ಟಾರ್ ನಟಿ ಸಾಯಿ ಪಲ್ಲವಿ?

    ಸಿನಿಮಾರಂಗ ಬಿಟ್ಟು ಕೃಷಿಯತ್ತ ಮುಖ ಮಾಡಿದ್ರಾ ಸ್ಟಾರ್ ನಟಿ ಸಾಯಿ ಪಲ್ಲವಿ?

    ಟಾಲಿವುಡ್ ಸೂಪರ್ ಡ್ಯಾನ್ಸರ್, ಸ್ಟಾರ್ ನಟಿ ಸಾಯಿ ಪಲ್ಲವಿ ಇತ್ತೀಚೆಗೆ ಬಣ್ಣದ ಲೋಕದಿಂದ ದೂರ ಉಳಿಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅದಕ್ಕೆ ಪೂರಕ ಎನ್ನುವಂತೆ ಅವರು ಕೂಡ ಹೊಸದಾಗಿ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ.

    ಟಾಲಿವುಡ್ ಅಂಗಳದಲ್ಲಿ ಸಾಯಿ ಪಲ್ಲವಿ ಸಿನಿಮಾ ರಂಗದಿಂದ ದೂರವಾಗುತ್ತಿದ್ದಾರೆ ಎನ್ನುವ ಸುದ್ದಿ ದಟ್ಟವಾದರೂ, ಈ ಕುರಿತು ಸಾಯಿ ಪಲ್ಲವಿ ಮಾತ್ರ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅದರ ಜೊತೆಗೆ ಯಾವುದೇ ಹೊಸ ಸಿನಿಮಾಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿಲ್ಲ. ಸಿನಿಮಾಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಸಾಯಿ ಪಲ್ಲವಿ ಕೃಷಿ ಮಾಡುವುದರಲ್ಲಿ ಫುಲ್ ಬ್ಯುಸಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿಆ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ರಾಕಿಭಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು

     

    View this post on Instagram

     

    A post shared by Sai Pallavi (@saipallavi.senthamarai)

    ಸಾಯಿ ಪಲ್ಲವಿ ಇನ್‌ಸ್ಟಾಗ್ರಾಮ್‌ನಲ್ಲಿ, ಹೊಲದಲ್ಲಿ ಕೆಲಸ ಮಾಡುವವರ ಜೊತೆ ಕುಳಿತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ನಂತರ ಮತ್ತೊಂದು ಫೋಟೋದಲ್ಲಿ ಸಾಯಿ ಕ್ಯಾರೆಟ್ ಕಿತ್ತುಕೊಂಡಿರುವುದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಸಿಂಪಲ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋ ನೋಡಿದ ಯು ಟರ್ನ್ ಬೆಡಗಿ ಶ್ರದ್ಧಾಶ್ರೀನಾಥ್, ನಿಮ್ಮ ರೀತಿ ಯಾರು ಇಲ್ಲ ಎಂದು ಕಾಂಮೆಟ್ ಮಾಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಭಿಮಾನಿಗಳು ಇವರ ಸರಳತೆ ಕಂಡು ಡೌನ್ ಟು ಅರ್ಥ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಈ ನಟಿ ‘ಶ್ಯಾಮ್ ಸಿಂಗ ರಾಯ್’ ನಂತರ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದೆ ಇರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದರೆ ಈ ಕುರಿತು ಸಾಯಿಪಲ್ಲವಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ ಇದನ್ನೂ ಓದಿ: ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

  • ಬುಲೆಟ್ ಓಡಿಸಲು ಹೋಗಿ ಬಿದ್ದ ಯೂ ಟರ್ನ್ ಬೆಡಗಿ

    ಬುಲೆಟ್ ಓಡಿಸಲು ಹೋಗಿ ಬಿದ್ದ ಯೂ ಟರ್ನ್ ಬೆಡಗಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರದ್ಧಾ ಶ್ರೀನಾಥ್ ಯೂ ಟರ್ನ್ ಸಿನಿಮಾ ಮೂಲಕ ಚಿರ ಪರಿಚಿತರಾಗಿದ್ದು, ಇದೀಗ ಸ್ಯಾಂಡಲ್‍ವುಡ್ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಇದೀಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

    ಯೂಟರ್ನ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರದ್ಧಾ ಸ್ರೀನಾಥ್, ಮೊದಲ ಸಿನಿಮಾ ಮೂಲಕವೇ ಮೋಡಿ ಮಾಡಿದರು. ಹೀಗಾಗಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಿನಿಂದಲೂ ಆಫರ್ ಗಳು ಬರಲು ಪ್ರಾರಂಭಿಸಿದವು. ಇದೀಗ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ತೆಲುಗು ಚಿತ್ರ ಕೃಷ್ಣ ಆ್ಯಂಡ್ ಹಿಸ್ ಲೀಲಾ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ಓಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಬಿಡುಗಡೆ ಮಾಡಲಾಗಿದ್ದು, ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಬರುತ್ತಿದೆ. ಸದ್ಯ ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಸಮಯ ಕಳೆಯುತ್ತಿದ್ದು, ಬುಲೆಟ್ ಮೇಲಿಂದ ಬಿದ್ದಿರುವ ಹಳೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಶೂಟಿಂಗ್ ಸಮಯದಲ್ಲಿ ಬೈಕ್ ರೈಡ್ ಮಾಡಲು ಹೋಗಿ ಬಿದ್ದಿರುವ Pವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿರುವ ಅವರು, ಭಾರತೀಯ ಚಿತ್ರರಂಗದಲ್ಲಿ ಬೋಲ್ಡ್ ಕ್ಯಾರೆಕ್ಟರ್ ಹೊಂದಿರುವ ಮಹಿಳಾ ನಟಿಯಾಗಿ ಬೈಕ್ ರೈಡ್ ಮಾಡುವ ಒಂದು ಶಾಟ್ ಹೊಂದಿರದಿದ್ದರೆ ಹೇಗೆ? ಇದು ಜೂನ್ 2017ರಂದು ನಂದಿ ಬೆಟ್ಟದಲ್ಲಿ ಶೂಟಿಂಗ್ ಮಾಡುತ್ತಿದ್ದ ಸಂದರ್ಭದ ವಿಡಿಯೋ. ಮೋಡಕವಿದ ವಾತಾವರಣವಿತ್ತು. ಅಲ್ಲದೆ ರಸ್ತೆ ಒದ್ದೆಯಾಗಿತ್ತು. ಈ ವೇಳೆ ರವಿ ಅವರು ನನ್ನ ಬಳಿ ಬಂದು ಸಹಜವಾಗಿ ನಿಮಗೆ ಬೈಕ್ ರೈಡ್ ಮಾಡಲು ಬರುತ್ತಾ ಎಂದು ಕೇಳಿದರು. ಆಗ ನಾನು ನೇರವಾಗಿ ಉತ್ತರಿಸಿ ಇಲ್ಲ ಎಂದೆ, ಆದರೆ ನಾನು ಪ್ರಯತ್ನಿಸುತ್ತೇನೆ ಎಂದು ಉತ್ತರಿಸಿದೆ.

     

    View this post on Instagram

     

    Are you even a bold female character in an Indian film if you don’t have at least one bike riding shot? ???? It was June 2017 and we were shooting at Nandi Hills. It was an overcast day and the roads were wet. @raviperepu casually comes up to me and asks me if I know how to ride a bike and my answer was straight. “No”, I said to him “but I’ll figure it out”. And then I took out the bike for a spin, armed with the knowledge of how gear shift works and the act of balancing a two wheeler that I learnt when I was 8 years old. It was the first time I ever rode a bike and I didn’t think it was very difficult. I was relieved because I didn’t want the shots to be compromised. And then during the course of the day, this happened. Prashanth my assistant then was candidly recording. Please mind the expletives lol. Everyone rushed to help me when I fell, but deep down everyone was concerned about the bike getting scratched. Lol. Why are royal Enfields so heavy dude. #KrishnaAndHisLeela #StuffTheyDontShowYou #SatyaSatOnABikeSatyaHadAGreatFall #SabChangaHai

    A post shared by Shraddha Srinath (@shraddhasrinath) on

    ನಂತರ ಬೈಕ್ ತೆಗೆದುಕೊಂಡೆ, ಬೈಕ್ ಗಿಯರ್ ಬದಲಿಸುವ ಕುರಿತು ನನಗೆ ತಿಳಿದಿತ್ತು. 8 ವರ್ಷದವಳಿದ್ದಾಗಲೇ ದ್ವಿಚಕ್ರ ವಾಹನ ಬ್ಯಾಲೆನ್ಸ್ ಮಾಡುವುದನ್ನು ಕಲಿತಿದ್ದೆ. ಆದರೆ ಅದೇ ಮೊದಲ ಬಾರಿಗೆ ಬೈಕ್ ಸವಾರಿ ಮಾಡಿದ್ದೆ. ಇಷ್ಟೊಂದು ಕಷ್ಟವಿರುತ್ತದೆ ಎಂದುಕೊಂಡಿರಲಿಲ್ಲ. ಹಾಗೆ ಬೈಕ್ ಹತ್ತಿ ಚಲಾಯಿಸಿದೆ. ಈ ವೇಳೆ ಬಿದ್ದೆ, ನಮ್ಮ ಅಸಿಸ್ಟೆಂಟ್ ಪ್ರಶಾಂತ್ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಅಲ್ಲದೆ ನಾನು ಬೀಳುತ್ತಿದ್ದಂತೆ ಎಲ್ಲರೂ ಬಂದು ನನಗೆ ಸಹಾಯ ಮಾಡಿದರು. ಆದರೆ ಬೈಕ್ ಸ್ಕ್ಯ್ರಾಚ್ ಆಗಿರುವ ಬಗ್ಗೆ ಎಲ್ಲರೂ ಕಳವಳ ವ್ಯಕ್ತಪಡಿಸಿದರು. ರಾಯಲ್ ಎನ್ಫೀಲ್ಡ್ ಬೈಕ್‍ಗಳು ಯಾಕೆ ಹೆಚ್ಚು ತೂಕ ಇರುತ್ತವೆ ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.

    ಪೋಸ್ಟ್ ನಲ್ಲಿರುವ ಸಾಲುಗಳನ್ನು ಓದದೆ, ಶ್ರದ್ಧಾ ಈಗ ಬುಲೆಟ್ ಓಡಿಸಿದ್ದಾರೆ ಎಂದುಕೊಂಡು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಉತ್ತರಿಸಿರುವ ಶ್ರದ್ಧಾ, ನನಗೆ ತಮಾಷೆ ಎನ್ನಿಸಿದ್ದಕ್ಕೆ ಬೈಕ್‍ಂದ ಬಿದ್ದಿರುವ ವಿಡಿಯೋ ಪೋಸ್ಟ್ ಮಾಡಿದೆ. ಬೈಕ್ ಓಡಿಸಲು ಪ್ರಯತ್ನಿಸುತ್ತಿದ್ದ ಹಾಗೆ ಬಿದ್ದೆ. ಇದೇನು ದೊಡ್ಡ ವಿಷಯವೇನಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಮಗೇನು ಬೇಕು ಅದನ್ನು ಶೇರ್ ಮಾಡಿಕೊಳ್ಳುತ್ತೇವೆ. ವಾಸ್ತವಕ್ಕೆ ಹತ್ತಿರವಿಲ್ಲದ ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ರಿಯಲ್ ಆಗಿರುವ ವಿಷಯಗಳನ್ನೇ ಹಂಚಿಕೊಳ್ಳಲು ಇಚ್ಚಿಸುತ್ತೇನೆ ಹಾಗೂ ನಿಮ್ಮೊಂದಿಗೆ ಡೀಪ್ ಸಂದರ್ಶನ ಮಾಡಲು ಇಷ್ಟ ಪಡುತ್ತೇನೆ. ನೀವೆಲ್ಲರೂ ತೋರಿಸಿದ ಪ್ರೀತಿಗೆ ನಾನು ಆಭಾರಿ. ಮೂರು ವರ್ಷಗಳ ಹಿಂದಿನ ಈ ವಿಡಿಯೋ ನಿಮಗೆ ನಗು ತರಿಸಿರುವುದಕ್ಕೆ ನನಗೆ ಖುಷಿಯಾಗಿದೆ ಎಂದು ಹೇಳಿದ್ದಾರೆ.

    ಶ್ರದ್ಧಾ ಶ್ರೀನಾಥ್ ಕೈಯ್ಯಲ್ಲಿ ಸಾಕಷ್ಟು ಸಿನಿಮಾಗಳಿದ್ದು, ಕೃಷ್ಣ ಅಂಡ್ ಹಿಸ್ ಲೀಲಾ ತೆಲುಗು ಸಿನಿಮಾ ಒಟಿಟಿಯಲ್ಲಿ ಜೂನ್ 24ರಂದು ಬಿಡುಗಡೆಯಾಗಿದೆ. ಜೊತೆಗೆ ತಮಿಳಿನ ಮಾರಾ, ಚಕ್ರ ಸಿನಿಮಾ ಸೇರಿದ್ದಂತೆ ಕನ್ನಡದಲ್ಲಿ ಗೋದ್ರ, ಫ್ಯಾಂಟಮ್, ರುದ್ರಪ್ರಯಾಗ ಸಿನಿಮಾಗಳಲ್ಲಿ ಶ್ರದ್ಧಾ ಬ್ಯುಸಿಯಾಗಿದ್ದಾರೆ.

  • ಋತುಚಕ್ರದ ಬಗ್ಗೆ ಶ್ರದ್ಧಾ ಶ್ರೀನಾಥ್ ಬೋಲ್ಡ್ ಹೇಳಿಕೆ

    ಋತುಚಕ್ರದ ಬಗ್ಗೆ ಶ್ರದ್ಧಾ ಶ್ರೀನಾಥ್ ಬೋಲ್ಡ್ ಹೇಳಿಕೆ

    – ಋತುಚಕ್ರ ಆದಾಗ ಪೂಜೆಯಲ್ಲಿ ಪಾಲ್ಗೊಂಡಿದ್ದೆ

    ಬೆಂಗಳೂರು: ಸಾಮಾನ್ಯವಾಗಿ ಅನೇಕ ಮಹಿಳೆಯರು ಋತುಚಕ್ರದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಸ್ಯಾಂಡಲ್‍ವುಡ್ ನಟಿ ಶ್ರದ್ಧಾ ಶ್ರೀನಾಥ್ ಈ ಬಗ್ಗೆ ಬೋಲ್ಡ್ ಆಗಿ ಮಾತನಾಡಿದ್ದಾರೆ.

    ನಟಿ ಶ್ರದ್ಧಾ ಶ್ರೀನಾಥ್ ಸಾಮಾಜಿಕ ಜಾಲತಾಣದಲ್ಲಿ ಋತುಚಕ್ರದ ಬಗ್ಗೆ ಬೋಲ್ಡ್ ಹೇಳಿಕೆಯೊಂದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಶ್ರದ್ಧಾ 14ನೇ ವಯಸ್ಸಿನಲ್ಲಿಯೇ ಸ್ತ್ರೀವಾದಿಯಾದ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಬಹಿರಂಗವಾಗಿ ಬರೆದುಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    “ಆಗ ನನಗೆ 14 ವರ್ಷ ವಯಸ್ಸು. ಈ ವೇಳೆ ನಮ್ಮ ಮನೆಯಲ್ಲಿ ದೇವರ ಪೂಜೆಯಲ್ಲಿ ನಡೆಯುತ್ತಿತ್ತು. ಆ ಪೂಜೆಯಲ್ಲಿ ನಾನು ಪಾಲ್ಗೊಂಡಿದ್ದೆ. ಆದರೆ ಆಗಲೇ ನನಗೆ ಪೀರಿಯಡ್ಸ್ ಆಯಿತು. ಆಗ ಅಮ್ಮ ನನ್ನ ಜೊತೆಯಲ್ಲಿ ಇರಲಿಲ್ಲ. ಆದ್ದರಿಂದ ನಾನು ನನ್ನ ಪಕ್ಕದಲ್ಲಿದ್ದ ಚಿಕ್ಕಮ್ಮನಿಗೆ ಈ ವಿಚಾರವನ್ನು ತಿಳಿಸಿದೆ. ಯಾಕೆಂದರೆ ನಾನು ಆ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಕೂಡ ಧರಿಸಿರಲಿಲ್ಲ” ಎಂದು ಅನೇಕ ವರ್ಷಗಳ ಹಿಂದೆ ನಡೆದಿದ್ದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

    ಈ ವೇಳೆ ಪಕ್ಕದಲ್ಲೇ ಇನ್ನೊಬ್ಬ ಒಳ್ಳೆಯ ಮಹಿಳೆ ಕುಳಿತಿದ್ದರು. ನಾನು ಚಿಂತೆಯಿಂದ ಚಿಕ್ಕಮ್ಮನಿಗೆ ಹೇಳಿದ ಮಾತನ್ನು ಅವರು ಕೇಳಿಸಿಕೊಂಡಿದ್ದರು. ಆಗ ಮಹಿಳೆ ನನ್ನ ಕಡೆ ನೋಡಿ ಧೈರ್ಯದಿಂದ ನಗುತ್ತಾ “ಪರವಾಗಿಲ್ಲ ಚಿನ್ನ, ದೇವರು ಕ್ಷಮಿಸುತ್ತಾರೆ. ಪೂಜೆ ಸಂದರ್ಭದಲ್ಲಿ ಋತುಚಕ್ರ ಆಗಿದ್ದಕ್ಕೆ ನೀನು ಚಿಂತಿಸಬೇಡ” ಎಂದು ಹೇಳಿದರು. ಆ ದಿನವೇ ನಾನು ಮಹಿಳಾವಾದಿ ಆದೆ. ಅಲ್ಲದೇ ಪೀರಿಯಡ್ಸ್ ಬಗ್ಗೆ ತಪ್ಪು ಕಲ್ಪನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿದೆ. ಆಗ ನನಗೆ 14ರ ಪ್ರಾಯ ಎಂದು ಶ್ರದ್ಧಾ ಶ್ರೀನಾಥ್ ಬರೆದುಕೊಂಡಿದ್ದಾರೆ.

    ಶ್ರದ್ಧಾ ಶ್ರೀನಾಥ್ ಈ ಬಗ್ಗೆ ಧೈರ್ಯವಾಗಿ ಮಾತನಾಡಿದ್ದಕ್ಕೆ ಅನೇಕರು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಶ್ರದ್ಧಾ ‘ಯು ಟರ್ನ್’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಖ್ಯಾತಿ ಪಡೆದುಕೊಂಡಿದ್ದು, ನಂತರ ತೆಲುಗು, ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ಸದ್ಯಕ್ಕೆ ನಟ ಸತೀಶ್ ನೀನಾಸಂ ಜೊತೆ ‘ಗೋದ್ರಾ’ ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

    https://www.instagram.com/p/CAzYujDlk6l/?utm_source=ig_embed

  • ಅಲ್ಲಿ ರೌಡಿ ಬೇಬಿ, ಇಲ್ಲಿ ಪೊಲೀಸ್ ಬೇಬಿ!

    ಅಲ್ಲಿ ರೌಡಿ ಬೇಬಿ, ಇಲ್ಲಿ ಪೊಲೀಸ್ ಬೇಬಿ!

    ತಮಿಳಿನ ಮಾರಿ-2 ಚಿತ್ರದ ರೌಡಿ ಬೇಬಿ ಹಾಡು ಸೃಷ್ಟಿಸಿರುವ ಸಂಚಲನವೇನು ಸಣ್ಣ ಮಟ್ಟದ್ದಲ್ಲ. ರಾಜ್ಯ ಭಾಷೆಗಳ ಗಡಿರೇಖೆ ಮೀರಿಕೊಂಡು ಈ ಹಾಡು ಎಲ್ಲ ಪ್ರೇಕ್ಷಕರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ದಾಖಲೆ ಮಟ್ಟದ ವೀಕ್ಷಣೆಗೂ ಈ ಹಾಡು ಭಾಜನವಾಗಿದೆ. ಇದೀಗ ಕನ್ನಡದಲ್ಲಿಯೂ ಅದೇ ಧಾಟಿಯದ್ದೊಂದು ಹಾಡು ತಯಾರಾಗಿ ನಿಂತಿದೆ. ಇಂದು ಮೇ 14ರ ಮಂಗಳವಾರ ರುಸ್ತುಂ ಚಿತ್ರದ ಪೊಲೀಸ್ ಬೇಬಿ ಎಂಬ ಹಾಡು ಬಿಡುಗಡೆಯಾಗಲಿದೆ.

    ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ರುಸ್ತುಂ ಚಿತ್ರವೀಗ ಪ್ರೇಕ್ಷಕರ ಆಸಕ್ತಿಯ ಕೇಂದ್ರ ಬಿಂದು. ಯಾಕೆಂದರೆ ಈ ಸಿನಿಮಾ ಶಿವಣ್ಣನ ವೃತ್ತಿ ಜೀವನದಲ್ಲಿಯೇ ಮೈಲಿಗಲ್ಲಾಗುವಂಥಾ ಹೂರಣ ಹೊಂದಿದೆಯೆಂಬ ಮಾತು ಎಲ್ಲೆಡೆ ಕೇಳಿ ಬರಲಾರಂಭಿಸಿದೆ. ಸೂಪರ್ ಕಾಪ್ ಆಗಿ ಅಬ್ಬರಿಸಿರೋ ಶಿವಣ್ಣನ ಫೋಟೋಗಳು ಈಗಾಗಲೇ ಟ್ರೆಂಡ್ ಸೆಟ್ ಮಾಡಿವೆ.

    ಇನ್ನೇನು ಬಿಡುಗಡೆಗೆ ಅಣಿಗೊಳ್ಳುತ್ತಿರುವ ಈ ಚಿತ್ರದ ವಿಶೇಷವಾದ ಹಾಡೊಂದನ್ನು ಸಿದ್ಧಗೊಳಿಸಲಾಗಿದೆ. ಪೊಲೀಸ್ ಬೇಬಿ ಎಂಬ ಈ ಹಾಡು ತಮಿಳಿನ ರೌಡಿ ಬೇಬಿ ಸಾಂಗಿನ ಧಾಟಿಯಲ್ಲಿಯೇ ಇರಲಿದೆಯಂತೆ. ತಮಿಳಿನಲ್ಲಿ ರೌಡಿ ಬೇಬಿ ಹಾಡು ಸಾಹಿತ್ಯ, ಟಪ್ಪಾಂಗುಚ್ಚಿ ಶೈಲಿಯ ಸಂಗೀತ ಮತ್ತು ಎಂಥವರನ್ನೂ ಎದ್ದು ಕುಣಿಯುವಂತೆ ಮಾಡುವಂಥಾ ಕೊರಿಯೋಗ್ರಫಿ ಮೂಲಕವೇ ಪ್ರಸಿದ್ಧಿ ಪಡೆದಿತ್ತು.

    ರುಸ್ತುಂ ಚಿತ್ರದ ರೌಡಿ ಬೇಬಿ ಹಾಡನ್ನೂ ಕೂಡಾ ಇಂಥಾದ್ದೇ ಸಮ್ಮೋಹಕ ಶೈಲಿಯಲ್ಲಿ ರೂಪಿಸಲಾಗಿದೆಯಂತೆ. ಹೇಳಿಕೇಳಿ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಡೋದರಲ್ಲಿ ಎತ್ತಿದ ಕೈ. ಅವರಿಲ್ಲಿ ಯುವಕರೂ ನಾಚುವಂಥಾ ಸ್ಟೆಪ್ಸ್ ಹಾಕಿದ್ದಾರಂತೆ. ಇವರಿಗೆ ಶ್ರದ್ಧಾ ಶ್ರೀನಾಥ್ ಕೂಡಾ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ಇಂದೇ ಪ್ರೇಕ್ಷಕರನ್ನು ತಲುಪಲಿದೆ.

  • ಸಮಂತಾ ಸ್ಥಾನ ಆಕ್ರಮಿಸಿಕೊಂಡರಾ ಕನ್ನಡತಿ ಶ್ರದ್ಧಾ?

    ಸಮಂತಾ ಸ್ಥಾನ ಆಕ್ರಮಿಸಿಕೊಂಡರಾ ಕನ್ನಡತಿ ಶ್ರದ್ಧಾ?

    ನ್ನಡ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದುಕೊಂಡ ನಟಿಯರು ಪರಭಾಷೆಗಳಿಗೆ ಹೋದ ಸುದ್ದಿಗಳು ಆಗಾಗ ಹೊರ ಬೀಳುತ್ತಲೇ ಇರುತ್ತವೆ. ಆದರೆ ಹಾಗೆ ಬೇರೆ ಭಾಷೆಗಳಿಗೆ ಹೋಗಿ ನೆಲೆ ನಿಂತು ಆ ಮೂಲಕವೇ ಸುದ್ದಿ ಮಾಡುವವರು ಕೊಂಚ ವಿರಳ. ಇದೀಗ ಕನ್ನಡದಲ್ಲಿ ಪ್ರತಿಭಾವಂತ ನಟಿಯಾಗಿ ಹೆಸರು ಮಾಡಿರೋ ಶ್ರದ್ಧಾ ಶ್ರೀನಾಥ್ ಆ ವಿರಳರ ಸಾಲಿಗೆ ಸೇರಿಕೊಂಡಂಥಾ ಸುದ್ದಿಯೊಂದು ಹರಿದಾಡಲು ಶುರುವಿಟ್ಟಿದೆ!

    ಶ್ರದ್ಧಾ ಶ್ರೀನಾಥ್ ಇದೀಗ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ. ಶ್ರದ್ಧಾ ನಾಯಕಿಯಾಗಿ ಅಭಿನಯಿಸಿದ್ದ ಜೆರ್ಸಿ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರಲ್ಲಿನ ಪಾತ್ರ, ನಟನೆ ಕಂಡು ತೆಲುಗು ಪ್ರೇಕ್ಷಕರೂ ಶ್ರದ್ಧಾ ಅವರನ್ನು ಮೆಚ್ಚಿ ಒಪ್ಪಿಕೊಂಡಿದ್ದಾರೆ.

    ಹೀಗೆ ಜೆರ್ಸಿ ಚಿತ್ರ ಗೆಲುವಿನತ್ತ ನಾಗಾಲೋಟ ಆರಂಭಿಸಿರುವ ಘಳಿಗೆಯಲ್ಲಿಯೇ ಶ್ರದ್ಧಾ ತೆಲುಗಿನಲ್ಲಿ ಮತ್ತಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಈಗ ಹರಿದಾಡುತ್ತಿರೋ ಸುದ್ದಿಯೊಂದನ್ನು ಆಧರಿಸಿ ಹೇಳೋದಾದರೆ ಶ್ರದ್ಧಾ ವಿಶಾಲ್ ನಟನೆಯ ಚಿತ್ರವೊಂದಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶಾಲ್ ಈ ಹಿಂದೆ ಅಭಿಮನ್ಯುಡು ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಅಭಿಮನ್ಯುಡು ಎಂಬ ಆ ಚಿತ್ರ ಹಿಟ್ ಆಗಿತ್ತು.

    ಇದೀಗ ಆ ಚಿತ್ರದ ಎರಡನೇ ಭಾಗಕ್ಕೆ ತಯಾರಿ ಆರಂಭವಾಗಿದೆ. ಮೊದಲ ಭಾಗದಲ್ಲಿ ವಿಶಾಲ್ ಗೆ ಜೋಡಿಯಾಗಿ ಸಮಂತಾ ನಟಿಸಿದ್ದರು. ಆದರೆ ಈಗ ಶ್ರದ್ಧಾ ಸಮಂತಾ ಜಾಗವನ್ನು ಆವರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಶ್ರದ್ಧಾ ಸಮಂತಾ ವಿರುದ್ಧ ಅದೇನೋ ಮಾತಾಡಿದ್ದಾರೆಂದು ಅಭಿಮಾನಿಗಳು ಕೆಂಡ ಕಾರಿದ್ದರು. ಈಗ ನೋಡಿದರೆ ಸಮಂತಾ ಸ್ಥಾನವನ್ನೇ ಶ್ರದ್ಧಾ ಆವರಿಸಿಕೊಂಡಿದ್ದಾರೆ.

    ಒಟ್ಟಾರೆಯಾಗಿ ಶ್ರದ್ಧಾ ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಏಕಕಾಲದಲ್ಲಿಯೇ ಬ್ಯುಸಿಯಾಗಿದ್ದಾರೆ. ಅವರು ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಅದಾಗಲೇ ಕನ್ನಡದಲ್ಲಿ ಮತ್ತೊಂದಷ್ಟು ಅವಕಾಶಗಳನ್ನು ಪಡೆದುಕೊಂಡಿರೋ ಶ್ರದ್ಧಾ ತೆಲುಗಿನಲ್ಲಿಯೂ ಬಿಡುವಿಲ್ಲದಂತಾಗಿದ್ದಾರೆ.

  • ಬಾಲಿವುಡ್‍ಗೆ ಹಾರಿದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್!

    ಬಾಲಿವುಡ್‍ಗೆ ಹಾರಿದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್!

    ಬೆಂಗಳೂರು: ಸ್ಯಾಂಡಲ್‍ವುಡ್ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಬಾಲಿವುಡ್ ಹಾರಿದ್ದಾರೆ. ಕನ್ನಡದಲ್ಲಿ ಯೂ-ಟರ್ನ್, ಊರ್ವಿ, ಅಪರೇಶನ್ ಅಲಮೇಲಮ್ಮ ಚಿತ್ರದಲ್ಲಿ ನಟಿಸಿ ತಮಿಳು ಚಿತ್ರರಂಗದಲ್ಲಿ ಮಿಂಚಿ ಈಗ ಬಾಲಿವುಡ್‍ಗೆ ಹಾರಿದ್ದಾರೆ.

    ಶ್ರದ್ಧಾ ಶ್ರೀನಾಥ್ ಈಗಾಗಲ್ಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿ ಸೈ ಎನ್ನಿಸಿಕೊಂಡಿದ್ದಾರೆ. ಆದರೆ ಈಗ ಬಾಲಿವುಡ್ ಸ್ಟಾರ್ ನಿರ್ದೇಶಕ ತಿಗ್ಮಾಂಶು ದುಲಿಯಾ ಅವರ ಚಿತ್ರಕ್ಕೆ ನಾಯಕಿಯಾಗಿ ನಟಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.

    ಶ್ರದ್ಧಾ ತಮ್ಮ ಬಾಲಿವುಡ್‍ನ ಮೊದಲ ಸಿನಿಮಾವನ್ನು ಶಿವರಾತ್ರಿ ದಿನದಂದು ಒಪ್ಪಿಕೊಂಡಿದ್ದಾರೆ. ನನಗೆ ತುಂಬಾನೇ ಖುಷಿಯಾಗುತ್ತಿದೆ. ಬಾಲಿವುಡ್ ಚಿತ್ರರಂಗದಿಂದ ನನಗೆ ಅವಕಾಶ ಸಿಕ್ಕಿದ್ದು ನನಗೆ ನಂಬಲಿಕ್ಕೆ ಸಾಧ್ಯವಿಲ್ಲ. ಸೌತ್ ಸಿನಿರಂಗ ಒಂದೇ ಚಿತ್ರರಂಗ ಇದ್ದ ಹಾಗೆ. ನಮ್ಮ ಅಭಿನಯ ನೋಡಿ ಅವರಿಗೆ ಇಷ್ಟವಾದರೆ ಅವರು ತಮ್ಮ ಸಿನಿಮಾದಲ್ಲಿ ನಾಯಕಿ ಆಗಲು ಅವಕಾಶ ನೀಡುತ್ತಾರೆ. ಆದರೆ ಬಾಲಿವುಡ್ ಆಗಿಲ್ಲ ಎಂದು ಶ್ರದ್ಧಾ ಶ್ರೀನಾಥ್ ತಿಳಿಸಿದ್ದಾರೆ.

    ನಿರ್ದೇಶಕರ ಹತ್ತಿರ ಯಾರೋ ಒಬ್ಬರು ಶ್ರದ್ಧಾ ಅವರ ಹೆಸರನ್ನು ಸೂಚಿಸಿದ್ದರು. ಆಗ ನಿರ್ದೇಶಕ ಶ್ರದ್ಧಾ ಅವರನ್ನು ಕರೆಸಿ ಆಡಿಶನ್ ನಡೆಸಿದ್ದರು. ನಾನು ಆಡಿಶನ್ ಕೊಟ್ಟ ಮೇಲೆ ಅವರು ನನ್ನನ್ನು ನಾಯಕಿಯಾಗಿ ಒಪ್ಪಿಕೊಂಡರು. ನಂತರ ‘ಮಿಲನ್ ಟಾಕೀಸ್’ ಚಿತ್ರಕ್ಕೆ ನಾಯಕಿಯಾಗಲೂ ನನ್ನಿಂದ ಸಹಿ ಹಾಕಿಸಿಕೊಂಡರು ಎಂದು ಶ್ರದ್ಧಾ ಹೇಳಿದ್ದಾರೆ.

    ಈ ಚಿತ್ರದ ಹೆಸರು ‘ಮಿಲನ್ ಟಾಕೀಸ್’ ಆಗಿದ್ದು, ಈ ಚಿತ್ರಕ್ಕೆ ನಾಯಕನಟನ್ನಾಗಿ ಬಾಲಿವುಡ್, ಹಾಲಿವುಡ್ ಖ್ಯಾತಿಯ ಅಲಿ ಫೈಜಲ್ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು ನಡೆಯಲಿದ್ದು, ಉತ್ತರ ಪ್ರದೇಶದ ಲಕ್ನೋ, ಮಥುರಾದಲ್ಲಿ ಚಿತ್ರೀಕರಣ ನಡೆಯಲಿದೆ.

  • ಒಂದೇ ಗಂಟೆಯಲ್ಲಿ ಹರಾಜಾದ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ

    ಒಂದೇ ಗಂಟೆಯಲ್ಲಿ ಹರಾಜಾದ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಫಸ್ಟ್ ಟೈಂ ನಾಯಕಿಯರೆಲ್ಲ ಒಟ್ಟಿಗೆ ಸೇರಿ ತಮ್ಮ ಬಟ್ಟೆಗಳನ್ನ ಹರಾಜು ಮಾಡುವ ಕಾರ್ಯಕ್ರಮ ಆಯೋಜಿಸಿ ಅದರಿಂದ ಬಂದ ಹಣವನ್ನು ಉತ್ತಮ ಕಾರ್ಯಕ್ಕಾಗಿ ವಿನಿಯೋಗಿಸುವ ಕಾರ್ಯಕ್ರಮಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

    `ದಿ ವ್ಯಾನಿಟಿ ಟ್ರಂಕ್ ಸೇಲ್’ ಹೆಸರಿನಲ್ಲಿ ಸ್ಯಾಂಡಲ್‍ವುಡ್ ನಾಯಕಿಯರ ಬೆಲೆ ಬಾಳುವ ಉಡುಗೆಗಳು ಹರಾಜು ಮಾಡಲಾಯಿತು. ಇಂದು ಬೆಳಗ್ಗೆ 12 ಗಂಟೆಯಿಂದ ಸಂಜೆ 5 ಗಂಟೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಬಿ ಹೈವ್ ನಲ್ಲಿ ಹರಾಜು ಪ್ರಕ್ರಿಯೆ ನಡೆಸುವ ಯೋಜನೆ ರೂಪಿಸಲಾಗಿತ್ತು. ಆದರೆ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದಂತೆ ಕೇವಲ ಒಂದು ಗಂಟೆಯಲ್ಲಿ ಎಲ್ಲ ಬಟ್ಟೆಗಳು ಮಾರಾಟವಾಗಿದೆ. ಕೇವಲ ಒಂದು ಗಂಟೆಯಲ್ಲಿ ಸುಮಾರು 80 ಸಾವಿರ ಹಣ ಕಲೆಕ್ಷನ್ ಆಗಿದೆ.

    ಶೃತಿ ಹರಿಹರನ್ ಐಡಿಯಾ: ನಟಿ ಶೃತಿ ಹರಿಹರನ್ ಅವರು ಒಮ್ಮೆ ವಾರ್ಡ್ ರೋಬ್ ತೆರೆದು ಬಟ್ಟೆಗಳ ರಾಶಿ ನೋಡಿದಾಗ ಈ ಡ್ರೆಸ್ ಗಳನ್ನು ಏನು ಮಾಡುವುದು ಎಂದು ಆಲೋಚಿಸಿದಾಗ ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಹುದಲ್ಲ ಎನ್ನುವ ಯೋಚನೆ ಹೊಳೆಯಿತಂತೆ. ಈ ಯೋಚನೆಯನ್ನು ಇತರೆ ನಟಿಯರ ಜೊತೆ ಹಂಚಿಕೊಂಡಾಗ ಅವರು ಸಾಥ್ ನೀಡಿದ್ದು, ಈಗ ಯೋಚನೆ ಕಾರ್ಯರೂಪಕ್ಕೆ ಬಂದಿದೆ.

    ಎನ್‍ಜಿಒಗೆ ಹಣ: ಶೃತಿ ಹರಿಹರನ್ ಯೋಚನೆಯಿಂದಾಗಿ “ದಿ ವ್ಯಾನಿಟಿ ಟ್ರಂಕ್ ಸೇಲ್’ನ ರೂಪ ಪಡೆದಿದ್ದು, ನಟಿಯರು ತಮ್ಮಲ್ಲಿರುವ ಬಟ್ಟೆ ಹಾಗೂ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಎಲ್ಲ ವಸ್ತುಗಳಿಗೂ ಕಡಿಮೆ ಬೆಲೆಯನ್ನೇ ನಿಗದಿಸಿದ್ದು, ಮಾರಾಟದಿಂದ ಬರುವ ಹಣ ಸರ್ಕಾರೇತರ ಸಂಸ್ಥೆಯಾದ ಜೆ.ಪಿ. ಫೌಂಡೇಶನ್ ಮತ್ತು ಆದ್ಯಾ ಫೌಂಡೇಶನ್ ಹೋಗುತ್ತದೆ.

    ಯಾರೆಲ್ಲ ಕೈಜೋಡಿಸಿದ್ದರು?: ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಸಂಯುಕ್ತಾ ಹೆಗ್ಡೆ, ಸಂಯುಕ್ತಾ ಹೊರ್ನಾಡ, ಸೋನು ಗೌಡ, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ಮೇಘನಾ ರಾಜ್, ಮೇಘನಾ ಗಾಂವ್ಕರ್, ನೀತು ಶೆಟ್ಟಿ, ಸಚಿನಾ ಹೆಗ್ಗಾರ್, ಶಾನ್ವಿ ಶ್ರೀವಾತ್ಸ, ಸಂಗೀತಾ ಭಟ್, ಪ್ರಜ್ಞಾ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.

  • ಶಕ್ತಿ, ಯುಕ್ತಿ, ಭಕ್ತಿಯ ‘ಉರ್ವಿ’ ಟ್ರೇಲರ್ ರಿಲೀಸ್ – ಭೇಷ್ ಅಂದ್ರು ಕಿಚ್ಚ ಸುದೀಪ್

    ಬೆಂಗಳೂರು: ಬಹುನಿರೀಕ್ಷಿತ ಮಹಿಳಾ ಪ್ರಧಾನ ಚಿತ್ರ ‘ಉರ್ವಿ’ ಟ್ರೇಲರ್ ಬಿಡುಗಡೆಯಾಗಿದೆ. ನಟ ಯಶ್ ಹಾಗೂ ರಾಧಿಕಾ ಪಂಡಿತ್ ಗುರುವಾರ ರಾತ್ರಿ ಟ್ರೇಲರ್ ಬಿಡುಗಡೆಗೊಳಿಸಿದರು.

    ಸ್ಟಾರ್ ನಟಿಯರಾದ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಭವಾನಿ ಪ್ರಕಾಶ್, ಜಾನ್ವಿ ಜ್ಯೋತಿ, ಮಧುಕರ್, ಪ್ರಭು ಮುಂಡ್ಕೂರು ಹಾಗೂ ವಾಸುಕಿ ವೈಭವ್ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇವರ ಜೊತೆಯಲ್ಲಿ ಅಚ್ಯುತ ಕುಮಾರ್ ಅವರೂ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

    ಪ್ರದೀಪ್ ವರ್ಮಾ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು ಚಿತ್ರದ ಟ್ರೇಲರ್ ಭಾರೀ ಕ್ಯೂರಿಯಾಸಿಟಿ ಹುಟ್ಟು ಹಾಕಿಸಿದೆ ಎನ್ನುವುದಂತೂ ಸುಳ್ಳಲ್ಲ. ಮನೋಜ್ ಜಾರ್ಜ್ ಚಿತ್ರಕ್ಕೆ ಸಂಗೀತ ನೀಡಿದರೆ ತಿಳಿ ಪ್ರೇಮ ಎಂಬ ಹಾಡನ್ನು ಖ್ಯಾತ ಗಾಯಕಿ ಕೆ.ಎಸ್.ಚಿತ್ರಾ ಹಾಡಿದ್ದಾರೆ. ವಿಭಿನ್ನವಾದ ಪೋಸ್ಟರ್, ಹಾಡುಗಳಿಂದಲೇ ಉರ್ವಿ ಈಗಾಗಲೇ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

    ಉರ್ವಿ ಚಿತ್ರದ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ ಫೇಸ್‍ಬುಕ್‍ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ತಾವು ಮಾಡುವ ಚಿತ್ರದ ಬಗ್ಗೆ ಹೆಮ್ಮೆ ಇರುತ್ತದೆ. ಉರ್ವಿ ಎನ್ನುವುದು ನಮ್ಮ ಮಗು. ಇದು ನಿಮಗಿಷ್ಟವಾದರೆ ನಮಗೆ ತಿಳಿಸಿ ಎಂದು ಅವರು ಫೇಸ್‍ಬುಕ್ ವಾಲ್‍ನಲ್ಲಿ ಬರೆದುಕೊಂಡಿದ್ದಾರೆ.

    ಇನ್ನು ಚಿತ್ರದ ಟ್ರೇಲರ್ ನೋಡಿದ ಕಿಚ್ಚ ಸುದೀಪ್, ಪವನ್ ಒಡೆಯರ್ ಮೆಚ್ಚುಗೆಯ ಮಾತನ್ನಾಡಿ ಚಿತ್ರ ತಂಡದ ಬೆನ್ನು ತಟ್ಟಿದ್ದಾರೆ.