Tag: shobhakarandlaje

  • ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ- ಶೋಭಾ ವಿರುದ್ಧ ಸ್ವಪಕ್ಷಿಯರೇ ಸಮರ

    ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ- ಶೋಭಾ ವಿರುದ್ಧ ಸ್ವಪಕ್ಷಿಯರೇ ಸಮರ

    – ಟಿಕೆಟ್ ತಪ್ಪಿಸಲು ಸಿಟಿ ರವಿ ಯತ್ನ

    ಚಿಕ್ಕಮಗಳೂರು: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಚಾರ್ಮ್ ಬೆಳೆಸಿಕೊಳ್ತಿರೋ ಶೋಭಾ ಕರಂದ್ಲಾಜೆಯ ರಾಜಕೀಯ ಭವಿಷ್ಯವನ್ನ ಬಿಜೆಪಿಗರೇ ಮುಗಿಸೋಕೆ ಸ್ಕೆಚ್ ಹಾಕಿರುವಂತಿದೆ. ಬಿಎಸ್‍ವೈ ಬೆಂಬಗಲಿಗರೆಂದು ಗುರುತಿಸಿಕೊಳ್ಳದ ಸಿ.ಟಿ.ರವಿ, ರಘುಪತಿ ಭಟ್ ಹಾಗೂ ಸುನಿಲ್ ಕುಮಾರ್ ಆಂತರಿಕವಾಗಿ ಜಯಪ್ರಕಾಶ್ ಹೆಗ್ಡೆ ಬೆನ್ನಿಗೆ ನಿಂತಿದ್ದಾರೆ. ಕಾಫಿನಾಡ ಬಿಜೆಪಿ ಮುಖಂಡರು, ನಗರಸಭೆ ಹಾಗೂ ಜಿಪಂ ಸದಸ್ಯರನ್ನ ಮುಂದೆ ಬಿಟ್ಟು ಸಿ.ಟಿ ರವಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋಕೆ ಸ್ಕೆಚ್ ಹಾಕಿದ್ದಾರಾ ಎಂಬ ಅನುಮಾನ ದಟ್ಟವಾಗಿದೆ.

    ಬಿಜೆಪಿ ಎಂಪಿ ಮತ್ತು ಶಾಸಕರ ನಡುವೆಯೇ ಲೋಕಸಮರದ ಟಿಕೆಟ್‍ಗಾಗಿ ಆಂತರಿಕ ಕಲಹ ಏರ್ಪಟ್ಟಂತಿದೆ. ಗೋ ಬ್ಯಾಕ್ ಶೋಭಕ್ಕ ಚಳವಳಿ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಲೋಕಸಮರದಲ್ಲಿ ಶೋಭಾ ಹೆಸರನ್ನು ತೆರೆಮರೆಗೆ ಸರಿಸಲು ಸ್ವಪಕ್ಷೀಯರೇ ಯತ್ನಿಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ರಾಜ್ಯ ಮತು ರಾಷ್ಟ್ರ ರಾಜಕಾರಣದಲ್ಲೂ ಸಕ್ರಿಯರಾಗಿರುವ ಸಂಸದೆ ಶೋಭಾ ಕರಂದ್ಲಾಜೆಗೆ ಈ ಬಾರಿ ಎಂಪಿ ಟಿಕೆಟ್ ತಪ್ಪಿಸಲು ಒಳಗೊಳಗೆ ಹುನ್ನಾರ ನಡೆಸುತ್ತಿದ್ದಾರೆ ಎಂಬುದಾಗಿ ಮೂಲಗಳಿಂದ ಮಾಹಿತಿ ಲಭಿಸಿದೆ.

    ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ಅತ್ಯಾಪ್ತರೇ ಶೋಭರಿಗೆ ಟಿಕೆಟ್ ಬೇಡ ಎನ್ನುತ್ತಿದ್ದಾರೆ. ಇದರ ಹಿಂದೆ ಸಿ.ಟಿ ರವಿಯೇ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದು ರಾಜ್ಯ, ಜಿಲ್ಲೆಯ ನಾಯಕತ್ವದ ಸ್ಥಾನವನ್ನು ಗಟ್ಟಿ ಮಾಡಿಕೊಂಡು ಶೋಭಾ ರಾಜಕೀಯ ಜೀವನವನ್ನು ಮುಗಿಸೋಕೆ ಪ್ಲಾನ್ ಮಾಡ್ತಿದ್ದಾರಾ ಎಂಬ ಅನುಮಾನ ಮೂಡಿದೆ ಎಂದು ಬಿಜೆಪಿ ನಗರಸಭೆ ಸದಸ್ಯ ರಾಜಶೇಖರ್ ತಿಳಿಸಿದ್ದಾರೆ.

    ಶೋಭಾ ರಾಷ್ಟ್ರ ಮತ್ತು ರಾಜ್ಯ ನಾಯಕಿ ಆದರೆ ಅವರನ್ನು ಭೇಟಿಯೇ ಮಾಡೋಕಾಗಲ್ಲ. ಸಂಸದರ ಕಚೇರಿಯಲ್ಲೂ ಸಿಗಲ್ಲ. ಸಿಕ್ಕರೂ ಮಾತಾಡಿಸಲ್ಲ. ಒಂದೂ ಸಭೆ ನಡೆಸಿಲ್ಲ. ಹೀಗಾಗಿ ಶೋಭಾರಿಗೆ ಟಿಕೆಟ್ ಬೇಡವೆಂದು ಕಾಫಿನಾಡಿನ ಜನ ಹೇಳುತ್ತಿದ್ದಾರೆ. ಜೊತೆಗೆ ಸ್ಥಳೀಯರಿಗೆ ಟಿಕೆಟ್ ಕೊಡಿ ಅಂತ ಜಯಪ್ರಕಾಶ್ ಹೆಗ್ಡೆ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಈ ಮಧ್ಯೆ ಆರ್.ಎಸ್.ಎಸ್ ಮುಖಂಡ ನಾಗೇಶ್ ಅಂಗೀರಸ ಶೋಭಾ ಡಮ್ಮಿ ಕ್ಯಾಂಡಿಡೇಟ್ ಎಂದು ವ್ಯಂಗ್ಯವಾಡಿದ್ದಾರೆ.

    ಇತ್ತ ಶೋಭಾಗೆ ಟಿಕೆಟ್ ಕೊಡಿಸಲು ಬಿಎಸ್‍ವೈ ಕಸರತ್ತು ನಡೆಸುತ್ತಿದ್ದರೆ, ಅತ್ತ ಬಿಎಸ್‍ವೈ ಬೆಂಬಲಿರೆಂದು ಗುರುತಿಸಿಕೊಳ್ಳದ ಸಿ.ಟಿ ರವಿ, ಸುನಿಲ್ ಕುಮಾರ್ ಹಾಗೂ ರಘುಪತಿ ಭಟ್ ಒಳಗೊಳಗೆ ಜಯಪ್ರಕಾಶ್ ಹೆಗ್ಡೆ ಬೆನ್ನಿಗೆ ನಿಂತಿದ್ದಾರೆ. ಒಂದು ವೇಳೆ ಶೋಭಾಗೆ ಟಿಕೆಟ್ ತಪ್ಪಿದ್ರೆ ಬಿಎಸ್‍ವೈ ಬೆಂಬಲಿಗ ಶಾಸಕರಾದ ಮೂಡಿಗೆರೆ ಕುಮಾರಸ್ವಾಮಿ, ತರೀಕೆರೆ ಸುರೇಶ್, ಕಡೂರಿನ ಬೆಳ್ಳಿ ಪ್ರಕಾಶ್ ಏನ್ ಮಾಡ್ತಾರೆ ಎಂಬುದನ್ನು ಕಾದುನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೆಹಲಿಯಲ್ಲಿ ಡಬಲ್ ಬೆಡ್‍ರೂಂ ಫ್ಲ್ಯಾಟ್ ಇರೋದು ನಿಜ- ಡಿಕೆಶಿ

    ದೆಹಲಿಯಲ್ಲಿ ಡಬಲ್ ಬೆಡ್‍ರೂಂ ಫ್ಲ್ಯಾಟ್ ಇರೋದು ನಿಜ- ಡಿಕೆಶಿ

    ಬೆಂಗಳೂರು: ನನಗೆ ಐಟಿಯಿಂದ ಯಾವ ನೋಟಿಸು ಬಂದಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಲ್ಲಿ ಯಾರ ದುಡ್ಡು ಸಿಕ್ಕಿದ್ಯೋ ನನಗೆ ಗೊತ್ತಿಲ್ಲ ಅಂತ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಹೆಲಿಯಲ್ಲಿ ನನ್ನದು ಡಬಲ್ ಬೆಡ್ ರೂಂ ನ ಒಂದು ಸಣ್ಣ ಫ್ಲ್ಯಾಟ್ ಇದೆ. ಈಗ ಇನ್ನೊಂದು ಫ್ಲಾಟ್ ತಗೆದುಕೊಂಡಿದ್ದೇನೆ. ಅದು ರಿನೋವೇಶನ್ ಆಗ್ತಿದೆ. ಅದು ಬಿಟ್ರೆ ಬೇರೆ ಫ್ಲಾಟ್ ದುಡ್ಡು ಯಾವ್ದು ನನಗೆ ಗೊತ್ತಿಲ್ಲ ಅಂತ ಅವರು ಸ್ಪಷ್ಟಪಡಿಸಿದ್ರು.

    ನೀವುಗಳೇ ಜೈಲು, ಕಂಬಿ ಎಲ್ಲಾ ಚಿತ್ರ ಹಾಕಿ ತೋರಿಸುತ್ತಿದ್ದೀರಾ? ನೀವು ಅದರಿಂದ ಖುಷಿ ಆಗಿದ್ದೀರಲ್ಲ ಖುಷಿಯಾಗಿರಿ. ಜನರನ್ನ ಖುಷಿ ಪಡಿಸುವ ಕೆಲಸ ನಿಮ್ಮದು ಅದನ್ನು ನೀವು ಮಾಡಿ ಅಂದ್ರು.


    ಕಂಪ್ಲೆಂಟ್ ಕಾಪಿ ಸಿಕ್ಕಿಲ್ಲಾ. ನನಗೆ ಇದುವರೆಗೆ ಕೋರ್ಟ್ ಸಮನ್ಸ್ ನೀಡಿಲ್ಲ. ನನಗೆ ಈ ವಿಚಾರದ ಕುರಿತು ಏನು ತಿಳಿದಿಲ್ಲ. ಒಮ್ಮೆ ಕಂಪ್ಲೆಂಟ್ ಕಾಪಿ ಮತ್ತು ಸಮನ್ಸ್ ದೊರೆತ ನಂತ್ರ ನನ್ನ ವಕೀಲರು ನೋಡ್ತಾರೆ. ನಂತ್ರ ಅದರ ಬಗ್ಗೆ ಮಾತನಾಡುತ್ತೆನೆ. ಈಗ ಸೂಕ್ತ ಸಮಯವಲ್ಲ. ಎಲ್ಲದಕ್ಕೂ ಉತ್ತರ ಸಿಗತ್ತೆ ಆ ಶುಭ ಗಳಿಗೆಗಾಗಿ ಕಾಯಬೇಕು ಅಂದ್ರು. ಇದನ್ನೂ ಓದಿ:  ಐಟಿ ದಾಳಿಗೆ ಒಳಗಾಗಿರೋ ಡಿಕೆಶಿಗೆ ಹೊಸ ಸಂಕಷ್ಟ!

    ಕರಂದ್ಲಾಜೆಗೆ ತಿರುಗೇಟು:
    ಇದೇ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಅವರ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾನು ಯಾರ ಬಗ್ಗೆನು ಮಾತನಾಡುವುದಿಲ್ಲ. ಎಲ್ಲದಕ್ಕು ಸಮಯ ಬರುತ್ತೆ ಅವಾಗ ಉತ್ತರ ನೀಡ್ತೇನೆ. ಕಾನೂನು ಇದೆ ತನಿಖೆ ನಡೆಯಲಿ ಅಂತ ತಿರುಗೇಟು ನಿಡಿದ್ರು.

    ಯಾರ ಯಾರ ವ್ಯವಹಾರ ಎಲ್ಲಿ ಏನು? ಯಾವ ಉದ್ಯಮಿ ಬಳಿ ಎನ್ನೊದು ಎಲ್ಲಾ ನನಗೆ ಗೊತ್ತಿದೆ? ಯಾವ ಉದ್ಯಮಿ? ಯಾವ ಹೋಟೆಲ್ ಮಾಲೀಕ ಎಲ್ಲಾ ಗೊತ್ತಿದೆ. ಎಲ್ಲವನ್ನು ಹೇಳುತ್ತೇನೆ ಅದಕ್ಕೂ ಶುಭಗಳಿಗೆ ಶುಭ ಮುಹೂರ್ತ ಬರಲಿ ಅಂದ್ರು.

    https://www.youtube.com/watch?v=_RZ6Q8bo-44