Tag: shobha karandalje

  • ಕೋವಿಡ್ ವೇಳೆ ಜನರ ಜೀವ ರಕ್ಷಣೆಗೆ ಮೋದಿಯವ್ರು ಹಗಲು-ರಾತ್ರಿ ಪ್ರಯತ್ನ ಮಾಡಿದ್ದಾರೆ: ಶೋಭಾ ಕರಂದ್ಲಾಜೆ

    ಕೋವಿಡ್ ವೇಳೆ ಜನರ ಜೀವ ರಕ್ಷಣೆಗೆ ಮೋದಿಯವ್ರು ಹಗಲು-ರಾತ್ರಿ ಪ್ರಯತ್ನ ಮಾಡಿದ್ದಾರೆ: ಶೋಭಾ ಕರಂದ್ಲಾಜೆ

    ಹಾಸನ: ಕೊರೊನಾದಂತಹ ಮಹಾಮಾರಿ ಸಂದರ್ಭದಲ್ಲಿ ಜನರ ಜೀವ ರಕ್ಷಣೆಗೆ ಮೋದಿಯವರು ಹಗಲು ರಾತ್ರಿ ಪ್ರಯತ್ನ ಮಾಡಿದ್ದಾರೆ. ಕರ್ನಾಟಕದ ಜನ ಬಿಜೆಪಿ ಜೊತೆಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಕಾಂಗ್ರೆಸ್ ಸಮೀಕ್ಷೆ ಬಗ್ಗೆ ವ್ಯಂಗ್ಯವಾಡಿದ ಅವರು, ಪೆನ್ನು ಅವರದ್ದೇ, ಪೇಪರ್ ಕೂಡ ಅವರದ್ದೇ. ಅವರು 120 ಬರೆದುಕೊಳ್ಳಬಹುದು. 150, 180 ಕೂಡ ಬರೆದುಕೊಳ್ಳಬಹುದು ಎಂದರು. ಇದನ್ನೂ ಓದಿ: ಕಾಳಿ ಕೈಲಿ ಸಿಗರೇಟು, ಮತ್ತೊಂದು ಕೈಯಲ್ಲಿ ಎಲ್ಜಿಬಿಟಿಕ್ಯೂ ಧ್ವಜ : ಭುಗಿಲೆದ್ದ ಆಕ್ರೋಶ

    ಕಾಂಗ್ರೆಸ್‍ಗೆ ಮುಂದಿನ ಚುನಾವಣೆಯಲ್ಲಿ 120+ ಸ್ಥಾನಗಳು ಬರಲಿವೆ ಎಂಬ ಕಾಂಗ್ರೆಸ್ ಸಮೀಕ್ಷೆ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ಅವರು, ಇವತ್ತು ದೇಶ ಮೋದಿ ಕಡೆ ನೊಡುತ್ತಿದೆ. ದೇಶ ಬಿಜೆಪಿ ಕಡೆ ನೋಡುತ್ತಿದೆ. ಈ ದೇಶದಲ್ಲಿ ಅಭಿವೃದ್ಧಿ ಸಾಧನೆ, ದೇಶದ ರಕ್ಷಣೆ ವಿಚಾರ, ಭ್ರಷ್ಟಾಚಾರ ರಹಿತವಾಗಿ ಬಿಜೆಪಿ ಆಡಳಿತ ನೀಡಿದೆ. ಹಾಗಾಗಿ ಜನರು ಮೋದಿ ಕಡೆಗೆ ನೋಡುತ್ತಿದ್ದಾರೆ ಎಂದರು.

    ಕೊರೊನಾದಂತಹ ಮಹಾಮಾರಿ ಸಂದರ್ಭದಲ್ಲಿ ಜನರ ಜೀವ ರಕ್ಷಣೆಗೆ ಮೋದಿಯವರು ಹಗಲು ರಾತ್ರಿ ಪ್ರಯತ್ನ ಮಾಡಿದ್ದಾರೆ. ಕರ್ನಾಟಕದ ಜನ ಬಿಜೆಪಿ ಜೊತೆಗಿದ್ದಾರೆ. ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿ ಇದ್ದಾರೆ. ಅವರ ನಾಯಕರ ನಡುವೆಯೇ ಕಾದಟ ಇದೆ. ಹಾಗಾಗಿ ಒಬ್ಬರು 120 ಅಂತಾರೆ, ಇನ್ನೊಬ್ಬರು 150 ಸ್ಥಾನ ಅಂತಾರೆ ಎಂದು ಲೇವಡಿ ಮಾಡಿದ್ರು.

    ಅವರಲ್ಲಿ ಇರುವ ಗುಂಪುಗಾರಿಕೆಯನ್ನು ಬೇರೆ ಕಡೆ ತಿರುಗಿಸಲು ರಾಜಕೀಯ ಹೇಳಿಕೆ ಕೊಡುತ್ತಿದ್ದಾರೆ. ಆದರೆ ರಾಜ್ಯದ ಜನರ ಜೊತೆ ನಾವಿದ್ದೇವೆ. ಜನ ಕೂಡ ನಮ್ಮ ಜೊತೆ ಇದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಕೊಲೆ, ಗುಪ್ತಚರ ಇಲಾಖೆ ಏನ್ ಮಾಡ್ತಿದೆ?- ಶೋಭಾ ಪ್ರಶ್ನೆ

    ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಕೊಲೆ, ಗುಪ್ತಚರ ಇಲಾಖೆ ಏನ್ ಮಾಡ್ತಿದೆ?- ಶೋಭಾ ಪ್ರಶ್ನೆ

    ಬೆಂಗಳೂರು: ಕರಾವಳಿಯಲ್ಲಿ ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿಯೇ ಕೊಲೆಗಳು ನಡೆಯುತ್ತಿವೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

    ಮಂಗಳೂರಿನ ಇಲಿಯಾಸ್ ಕೊಲೆ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾರನ್ನು ಹತ್ಯೆ ಮಾಡ್ತಾರೋ ಗೊತ್ತಿಲ್ಲ. ಸರ್ಕಾರಕ್ಕೆ ಇಷ್ಟೆಲ್ಲ ಆಗುತ್ತಿದ್ರೂ, ಅವರ ಹತ್ತಿರವೇ ಗುಪ್ತಚರ ಇಲಾಖೆ ಇದ್ದರೂ ಏನೂ ಮಾಡ್ತಿಲ್ಲ. ಕೂಡಲೇ ಅಪರಾಧಿಗಳನ್ನು ಬಂಧಿಸಬೇಕು ಅಂತ ಆಗ್ರಹಿಸಿದ್ರು. ಇದನ್ನೂ ಓದಿ: ಸಚಿವ ಖಾದರ್ ಜೊತೆ ಕಾಣಿಸಿಕೊಂಡಿದ್ದ ಇಲಿಯಾಸ್ ನ ಬರ್ಬರ ಹತ್ಯೆ

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿ ಹಿಂದೂ-ಮುಸ್ಲಿಂ ಮಧ್ಯೆ ಜಗಳ ಹಚ್ಚುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಸರ್ಕಾರದ ಪ್ರಾಯೋಜಕತ್ವದಲ್ಲಿ ರಾಜ್ಯದಲ್ಲಿ ಕೊಲೆಗಳು ನಡೆಯುತ್ತಿವೆ ಅಂತ ಆರೋಪಿಸಿದ ಅವರು, ಹಿಂದೂಗಳನ್ನು ಮುಸಲ್ಮಾನರು ಕೊಲೆ ಮಾಡಬೇಕು. ಮುಸಲ್ಮಾನರನ್ನು ಹಿಂದೂಗಳು ಕೊಲೆ ಮಾಡಬೇಕು ಅನ್ನೋ ಕುಮ್ಮಕ್ಕನ್ನು ರಾಜ್ಯ ಸರ್ಕಾರ ಕೊಡುತ್ತಿದೆ. ಅಪರಾಧಿಗಳನ್ನು ಬಂಧಿಸುವಂತಹ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಅದರ ಬದಲಾಗಿ ಉಗ್ರವಾದಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಅಂದ್ರು. ಇದನ್ನೂ ಓದಿ: `ಟಾರ್ಗೆಟ್’ ಇಲಿಯಾಸ್ ಕೊಲೆ ಬಗ್ಗೆ ಸಚಿವ ಖಾದರ್ ಹೀಗಂದ್ರು

    ಮುಸಲ್ಮಾನರಲ್ಲಿ ಕೆಲವೇ ಜನ ಉಗ್ರವಾದಿಗಳು, ಜಿಹಾದಿಗಳು ಹಾಗೂ ಪಿಎಫ್‍ಐ ಸಂಘಟನೆ ಜೊತೆ ಇದ್ದಾರೆ. ಇಂತಹವರಿಗೆ ಪ್ರೇರಣೆ ನೀಡಿ ಒಡೆದು ಆಳುವಂತಹ ನೀತಿಯನ್ನು ಮಾಡಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸಂಘರ್ಷವನ್ನು ಉಂಟುಮಾಡುವಂತಹ ವ್ಯವಸ್ಥಿತ ಷಡ್ಯಂತ್ರದ ಫಲವಾಗಿ ಇಂತಹ ಘಟನೆಗಳು ನಡೆಯುತ್ತಿದೆ ಅಂತ ಕಿಡಿಕಾರಿದ್ರು.

    ತಕ್ಷಣ ಕೊಲೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕು. ಹಾಗೆಯೇ ಇನ್ನುಳಿದ 3 ತಿಂಗಳಾದ್ರೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಹೊರಬೇಕು ಅಂತ ಸರ್ಕಾರಕ್ಕೆ ಆಗ್ರಹಿಸಿದ್ರು.

    https://www.youtube.com/watch?v=vmgH5FDGx6Y

    https://www.youtube.com/watch?v=pnLn279DzSc

  • ಶೋಭಾ ಮಾಡ್ತಿರೋದು ಪಕ್ಕಾ ವೋಟ್ ಪಾಲಿಟಿಕ್ಸ್: ಸಂಸದೆ ವಿರುದ್ಧ ಖಾದರ್ ಗರಂ

    ಶೋಭಾ ಮಾಡ್ತಿರೋದು ಪಕ್ಕಾ ವೋಟ್ ಪಾಲಿಟಿಕ್ಸ್: ಸಂಸದೆ ವಿರುದ್ಧ ಖಾದರ್ ಗರಂ

    ಬೆಂಗಳೂರು: ಇಲ್ಲಿಯವರೆಗೆ ರಾಜ್ಯ ಮಟ್ಟದಲ್ಲಿ ಅವರ ಮಾನ ಹೋಗಿತ್ತು. ಇದೀಗ ತಪ್ಪು ಪತ್ರ ಬರೆದು ರಾಷ್ಟ್ರ ಮಟ್ಟದಲ್ಲಿ ಶೋಭಾ ಕರಂದ್ಲಾಜೆ ಮಯಾ9ದೆ ಹೋಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಯುಟಿ ಖಾದರ್ ಹೇಳಿದ್ದಾರೆ.

    ಸಂಸದೆ ಶೋಭಾ ಕರಂದ್ಲಾಜೆ ಕಳುಹಿಸಿರುವ ಪತ್ರ ಪಕ್ಕಾ ಪೊಲಿಟಿಕಲ್ ಗಿಮಿಕ್ ಆಗಿದ್ದು, ಈ ಪತ್ರ ನೋಡಿದರೇನೆ ಅವರ ಮನಸ್ಥಿತಿ ಅನ್ನೋದು ಗೊತ್ತಾಗುತ್ತದೆ. ಇವೆಲ್ಲಾ ಓಟಿಗಾಗಿ ಮಾಡುತ್ತಿರುವ ಕೆಲಸ ಎಂದು ಅವರು ಹೇಳಿದರು.

    ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 23 ಹಿಂದುಗಳ ಹತ್ಯೆಯಾಗಿದೆ ಎಂದು ಆರೋಪಿಸಿ ಕೇಂದ್ರಕ್ಕೆ ಶೋಭಾ ಕರಂದ್ಲಾಜೆ ಕಳುಹಿಸಿರುವ ಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸತ್ತವರನ್ನು ಬದುಕಿಸ್ತಾರೆ, ಬದುಕಿದವರನ್ನು ಪತ್ರದಲ್ಲೇ ಸಾಯಿಸುತ್ತಾರೆ ಎಂದು ಗರಂ ಆಗಿ ಉತ್ತರಿಸಿದರು.

    ಅವರ ಪತ್ರದಲ್ಲಿ ವಿನಾಯಕ ಬಳಿಗಾ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ ಹತ್ಯೆಯಾಗಿದ್ದಾರೆ. ಆದ್ರೆ ಅವರ ಹೆಸರು ಸೇರಿಸಿಲ್ಲ. ಯಾಕೆ ಅವರು ದಕ್ಷಿಣ ಕನ್ನಡದವರು ಅಲ್ವಾ ಎಂದು ಪ್ರಶ್ನಿಸಿದರು.

    ಇದನ್ನೂ ಓದಿ: ಬದುಕಿದ್ದವರನ್ನು ಕೊಲೆ ಮಾಡಲಾಗಿದೆ ಎಂದು ಕೇಂದ್ರಕ್ಕೆ ಸುಳ್ಳು ವರದಿ ಕೊಟ್ಟ ಶೋಭಾ!