Tag: Shivanagouda Nayak

  • ಶಾಸಕ ಶಿವನಗೌಡ ನಾಯಕ್‍ರಿಂದ ಜೆಡಿಎಸ್ ಅಭ್ಯರ್ಥಿಗೆ ಜೀವ ಬೆದರಿಕೆ: ಎಸ್‍ಪಿಗೆ ದೂರು

    ಶಾಸಕ ಶಿವನಗೌಡ ನಾಯಕ್‍ರಿಂದ ಜೆಡಿಎಸ್ ಅಭ್ಯರ್ಥಿಗೆ ಜೀವ ಬೆದರಿಕೆ: ಎಸ್‍ಪಿಗೆ ದೂರು

    ರಾಯಚೂರು:  ಬಿಜೆಪಿ (BJP) ಶಾಸಕ ಶಿವನಗೌಡ ನಾಯಕ್‍ರಿಂದ (Shivanagouda Naik) ನನಗೆ ಜೀವ ಬೆದರಿಕೆ ಇದೆ ಎಂದು ದೇವದುರ್ಗದ (Devadurga) ಜೆಡಿಎಸ್ ನಿಯೋಜಿತ ಅಭ್ಯರ್ಥಿ ಕರೆಮ್ಮ ನಾಯಕ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

    ಜೆಡಿಎಸ್‍ನಿಂದ (JDS) ಆಯೋಜಿಸಿದ್ದ ಬಂಜಾರ ಸಮಾವೇಶ ಯಶಸ್ವಿಯಾದ ಹಿನ್ನೆಲೆ ಶಿವನಗೌಡ ನಾಯಕ್ ಹಿಂಬಾಲಕರು ಹಲ್ಲೆಗೆ ಯತ್ನಿಸಿದ್ದಾರೆ ಅಂತ ಆರೋಪಿಸಿದ್ದಾರೆ. ಕರೆಮ್ಮ ನಾಯಕ್ ಹಾಗೂ ಅವರ ಮಗಳು ಗೌತಮಿ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದ್ದು, ಘಟನೆಯಲ್ಲಿ ಕಾರ್ಯಕರ್ತ ಶಿವಪ್ಪಗೆ ಗಾಯಗಳಾಗಿವೆ. ಈ ಹಿನ್ನೆಲೆ ಈಗಾಗಲೇ ದೇವದುರ್ಗ ಪೊಲೀಸ್ ಠಾಣೆಯಲ್ಲಿ 10 ಜನರ ಮೇಲೆ ದೂರು ದಾಖಲಾಗಿದೆ. ಪ್ರಕರಣ ದಾಖಲಾಗಿದ್ದರು ಕ್ರಮ ಕೈಗೊಳ್ಳದ ಹಿನ್ನೆಲೆ ಪೊಲೀಸರ ವಿರುದ್ಧ ಎಸ್‍ಪಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಸ್ತೆಗುಂಡಿಗಳಿಂದಾದ ಸಾವನ್ನು ಸರ್ಕಾರಿ ಕೊಲೆ ಎಂದು ಪರಿಗಣಿಸಿ ಅಧಿಕಾರಿಗಳು, ಸಚಿವರನ್ನು ಆರೋಪಿಗಳನ್ನಾಗಿಸಿ: ಕಾಂಗ್ರೆಸ್

    ನವೆಂಬರ್ 4ಕ್ಕೆ ಪ್ರಜಾಪ್ರಭುತ್ವ ಉಳಿಸಿ, ಗುಂಡಾಗಿರಿ ತೊಲಗಿಸಿ ಸ್ಲೋಗನ್ ಅಡಿಯಲ್ಲಿ ಶಿವನಗೌಡ ನಾಯಕ್ ವಿರುದ್ಧ ದೇವದುರ್ಗದಲ್ಲಿ ಬೃಹತ್ ಹೋರಾಟ ನಡೆಸಲು ಜೆಡಿಎಸ್ ಸಜ್ಜಾಗಿದೆ. ಜೆಡಿಎಸ್ ವರಿಷ್ಠರು ಸಹ ಹೋರಾಟದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಶಿವನಗೌಡ ನಾಯಕ್ ಮಟ್ಕಾ ಆಡಿಸುವುದು, ಅಕ್ರಮ ಮರಳು ಸಾಗಾಟವನ್ನು ನೇರವಾಗಿಯೇ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಬಗ್ಗೆ ಹಗುರವಾಗಿ ಮಾತನಾಡುವ ಶಿವನಗೌಡಗೆ ಅಂತ್ಯ ಕಾಲ ಬಂದಿದೆ ಅಂತ ದೇವದುರ್ಗ ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾಲ್ಕು ಎಕರೆ ಜಮೀನಿದ್ದ ಶಿವನಗೌಡ ನಾಯಕ ಇವತ್ತು 1,000 – 1,500 ಕೋಟಿ ಒಡೆಯನಾಗಿದ್ದಾರೆ. ತಾಕತ್ತಿದ್ದರೆ ಶಿವನಗೌಡ ನಾಯಕ್ ಈ ಬಾರಿ ದೇವದುರ್ಗ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ. ಅವರೇ ಸವಾಲು ಹಾಕಿರುವಂತೆ ಅವರ ಒಂಟಿ ಮೀಸೆ ನೋಡುವುದಕ್ಕೆ ದೇವದುರ್ಗದ ಜನ ತುದಿಗಾಲಲ್ಲಿ ನಿಂತಿದ್ದಾರೆ ಅಂತ ಬುಡ್ಡನಗೌಡ ಹೇಳಿದ್ದಾರೆ. ಇದನ್ನೂ ಓದಿ: ನ.1ರಿಂದ ಕಾರಿನಲ್ಲಿ ಪ್ರಯಾಣಿಸೋ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ

    Live Tv
    [brid partner=56869869 player=32851 video=960834 autoplay=true]

  • ಹುಳುಬಿದ್ದ ಆಹಾರ ಕಿಟ್ ಹಂಚಿಕೆ – ಶಾಸಕ ಶಿವನಗೌಡ ನಾಯಕ್ ಮೇಲೆ ಆರೋಪ

    ಹುಳುಬಿದ್ದ ಆಹಾರ ಕಿಟ್ ಹಂಚಿಕೆ – ಶಾಸಕ ಶಿವನಗೌಡ ನಾಯಕ್ ಮೇಲೆ ಆರೋಪ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ಶಾಸಕ ಶಿವನಗೌಡ ನಾಯಕ್ ವಿತರಿಸಿದ ಆಹಾರ ಕಿಟ್‍ನಲ್ಲಿ ಹುಳು, ನುಸಿ ಪತ್ತೆಯಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಲಾಕ್ ಡೌನ್ ಸಂದರ್ಭದಲ್ಲಿ ಹಟ್ಟಿ ಚಿನ್ನದಗಣಿ ಕಂಪನಿ ಬಡವರಿಗೆ ವಿತರಿಸಲು ನೀಡಿದ್ದ ಫುಡ್ ಕಿಟ್‍ಗಳನ್ನ ಹಂಚಲಾಗಿದ್ದು ಇದರಲ್ಲಿ ಹುಳು ಪತ್ತೆಯಾಗಿವೆ.

    ತಹಶೀಲ್ದಾರರ ಮುಖಾಂತರ ಬಡವರಿಗೆ ಹಂಚಿಕೆ ಮಾಡಲು ಕೊಟ್ಡಿದ್ದ 2 ಸಾವಿರ ಫುಡ್ ಕಿಟ್‍ನನ್ನು ಲಾಕ್ ಡೌನ್ ಸಂದರ್ಭದಲ್ಲಿ ವಿತರಿಸದೇ ಶನಿವಾ ಸ್ವತಃ ದೇವದುರ್ಗ ಶಾಸಕ ಶಿವನಗೌಡ ನಾಯಕ್ ವಿತರಿಸಿದ್ದರು. ಶಾಸಕ ಶಿವನಗೌಡ ವಿತರಿಸಿದ ಫುಡ್ ಕಿಟ್‍ಗಳಲ್ಲಿ ಹುಳು, ನುಸಿ ಪತ್ತೆಯಾಗಿದ್ದು, ಧಾನ್ಯಗಳು ಉಂಡೆಯಾಗಿದ್ದು ಬಳಸಲು ಯೋಗ್ಯವಾಗಿಲ್ಲದ್ದಾಗಿದೆ.

    ಹಾಳಾಗಿರುವ ಪದಾರ್ಥಗಳನ್ನು ವಿತರಣೆ ಮಾಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಆಹಾರ ಕಿಟ್‍ನ್ನು ಮನೆಗೆ ತಂದು ನೋಡಿದಾಗ ಹಾಳಾದ ಪದಾರ್ಥಗಳನ್ನ ಕಂಡು ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.