Tag: Shivalingegowda

  • ಬಿಜೆಪಿ ಬಣ್ಣ ಬಯಲಾಗುತ್ತೆಂದು ನಮ್ಮನ್ನು ಹೋಟೆಲ್ ಒಳಗೆ ಬಿಟ್ಟಿಲ್ಲ: ಶಿವಲಿಂಗೇಗೌಡ

    ಬಿಜೆಪಿ ಬಣ್ಣ ಬಯಲಾಗುತ್ತೆಂದು ನಮ್ಮನ್ನು ಹೋಟೆಲ್ ಒಳಗೆ ಬಿಟ್ಟಿಲ್ಲ: ಶಿವಲಿಂಗೇಗೌಡ

    ಮುಂಬೈ: ಸಚಿವ ಡಿ.ಕೆ ಶಿವಕುಮಾರ್, ಜಿಟಿ ದೇವೇಗೌಡ ಹಾಗೂ ಬಾಲಕೃಷ್ಣ ಅವರ ಜೊತೆ ನನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾವು ಹೋಟೆಲ್ ಒಳಗೆ ಹೋದರೆ ಬಿಜೆಪಿ ಅವರ ಬಣ್ಣ ಬಯಲಾಗುತ್ತೆ ಎಂದು ನಮ್ಮನ್ನು ಒಳಗೆ ಬಿಟ್ಟಿಲ್ಲವೆಂದು ಶಾಸಕ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದ್ದಾರೆ.

    ಪೊಲೀಸರ ವಶದಲ್ಲಿರುವ ಶಿವಲಿಂಗೇಗೌಡ ಅವರು ಫೋನ್‍ನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಚಿವ ಡಿ.ಕೆ ಶಿವಕುಮಾರ್, ಜಿಟಿ ದೇವೇಗೌಡ ಹಾಗೂ ಬಾಲಕೃಷ್ಣ ಅವರ ಜೊತೆ ನನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಕೆಶಿ ಅವರನ್ನು ಮುಂದೆ ಕಾರಿನಲ್ಲಿ ಕರೆದೊಯ್ದಿದ್ದಾರೆ. ನಮ್ಮನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದಾರೆ. ಇದೆಲ್ಲಾ ಬಿಜೆಪಿ ಷಡ್ಯಂತ್ರ ಎಂದು ಕಿಡಿಕಾರಿದರು. ಇದನ್ನೂ ಓದಿ:ಪೊಲೀಸ್ ವಶಕ್ಕೆ ಡಿ.ಕೆ ಶಿವಕುಮಾರ್

    ನಿಜ ಹೇಳುತ್ತಿದ್ದೇನೆ ನಾವು ಇಂದು ಇಲ್ಲಿಗೆ ಬಂದಿದ್ದು ನಮಗೆ ದೊರೆತ ಮಾಹಿತಿಯಿಂದ. ನಮ್ಮ ಶಾಸಕರು ಬಿಜೆಪಿ ವಶದಲ್ಲಿದ್ದಾರೆ, ಆರ್ ಅಶೋಕ್ ಹಾಗೂ ಮಾಜಿ ಮೇಯರ್ ನಮ್ಮವರನ್ನು ಭೇಟಿಯಾಗಿದ್ದಾರೆ. ಹೋಟೆಲ್‍ನಲ್ಲಿ ಬಿಜೆಪಿ ನಾಯಕರು ನಮ್ಮವರನ್ನು ಬಲವಂತವಾಗಿ ಇಟ್ಟಿದ್ದಾರೆ ಎನ್ನುವ ಮಾಹಿತಿ ಬಂದಿತ್ತು. ಈ ಬಗ್ಗೆ ತಿಳಿದು ನಾವು ಶಾಸಕರ ಮನವೊಲಿಸಲು ಡಿ.ಕೆ.ಶಿ ಅವರ ಜೊತೆ ಇಲ್ಲಿ ಬಂದೆವು. ನಾವು ಬಂದಿಲ್ಲ ಎಂದರೆ ಮನವೊಳಿಸಲು ಯಾರು ಬಂದಿಲ್ಲ ಎಂದು ಅತೃಪ್ತ ಶಾಸಕರು ಹೇಳುತ್ತಾರೆ. ಹಾಗೆಯೇ ಕೆಲ ಶಾಸಕರು ಫೋನ್ ಮಾಡಿ ಹಿರಿಯ ನಾಯಕರು ಬಂದು ಅತೃಪ್ತರ ಬಳಿ ಮಾತನಾಡಿ ಎಂದಿದ್ದರು. ಹೀಗಾಗಿ ನಾವು ಬಂದೆವು ಎಂದು ತಿಳಿಸಿದರು.

    ನಾವು ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದರು ನಮ್ಮನ್ನು ಒಳಗೆ ಬಿಟ್ಟಿಲ್ಲ. ಮಹಾರಾಷ್ಟ್ರ ಹಾಗೂ ಕರ್ನಾಟಕ ಬಿಜೆಪಿ ನಾಯಕರು ಹೋಟೆಲ್ ಒಳಗೆ ಇದ್ದಾರೆ. ಇದು ಬಿಜೆಪಿ ಷಡ್ಯಂತ್ರ. ಈ ವಿಚಾರ ಎಲ್ಲರಿಗೂ ಗೊತ್ತು ಎಂದು ವಾಗ್ದಾಳಿ ನಡೆಸಿದರು.

  • ಹೇಮಾವತಿ ನಾಲೆಗೆ ಡೈನಾಮೈಟ್ ಇಡ್ತೀನಿ, ತಾಕತ್ತಿದ್ರೆ ತಡೆಯಿರಿ: ಶಿವಲಿಂಗೇಗೌಡ

    ಹೇಮಾವತಿ ನಾಲೆಗೆ ಡೈನಾಮೈಟ್ ಇಡ್ತೀನಿ, ತಾಕತ್ತಿದ್ರೆ ತಡೆಯಿರಿ: ಶಿವಲಿಂಗೇಗೌಡ

    ತುಮಕೂರು: ಹೇಮಾವತಿ ನಾಲೆಗೆ ಡೈನಾಮೈಟ್ ಇಡುತ್ತೇನೆ. ತಾಕತ್ತಿದ್ದರೆ ತಡೆಯಿರಿ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹೇಮಾವತಿ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಶಿವಲಿಂಗೇಗೌಡ ಅವರು, ಅರಸೀಕೆರೆ ತಾಲೂಕಿನಲ್ಲಿ ಒಂದಿಂಚು ಮಳೆಯಾಗಿಲ್ಲ. ನಮ್ಮ ತಾಲೂಕಿನ ಕೆರೆಗಳು ತುಂಬುತ್ತಿಲ್ಲ. ಇದಕ್ಕೆ ಲಿಫ್ಟ್ ಇರಿಗೇಷನ್ ಯಾಕೆ ಬೇಕು. ಹೀಗೆ ಆದರೆ ನಾಲೆಗೆ ಡೈನಾಮೈಟ್ ಇಡ್ತೀನಿ. ಅದೇನ್ ಮಾಡ್ಕೊಳ್ತಿರೋ ಮಾಡ್ಕೊಳ್ಳಿ. ಅದೇನಾಗುತ್ತೋ ನೋಡೇ ಬಿಡೋಣ. ಕೇಸ್ ಆಗುತ್ತಾ ಆಗಲಿ, ಡೈನಾಮೈಟ್ ಇಟ್ಟೇ ಇಡ್ತೀನಿ ಎಂದು ತಿಪಟೂರು ಮೂಲಕ ಅರಸೀಕೆರೆಗೆ ಹರಿಯಬೇಕಾದ ನೀರು ಸಮರ್ಪಕವಾಗಿ ಹರಿಸದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಭೆ ನಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಂತರ ಕೆಲವು ಕಡೆ ನೀರು ಬಿಡದೇ ಹೊಡೆದಾಡುತ್ತಿದ್ದಾರೆ. ನಮಗೆ ನೀರು ಕೊಡುತ್ತಿಲ್ಲ ಇದರಿಂದ ಜನರು ರೊಚ್ಚಿಗೆದ್ದಿದ್ದಾರೆ. ತಿಪಟೂರು ಭಾಗದಲ್ಲಿ ಆರು ಕೆರೆ ನೀರು ಹೋಗಬೇಕು. ತಿಪಟೂರು ಜಾಗದ ನಾಲ್ಕು-ಐದು ಹಳ್ಳಿಯವರು ನೀರು ನೀಡುತ್ತಿದ್ದಂತೆ ಪೈಪನ್ನು ಒಡೆದುಹಾಕುತ್ತಾರೆ. ಮೂರು ನಾಲ್ಕು ವರ್ಷಗಳಿಂದ ಇದೇ ರೀತಿಯ ಕೆಲಸಗಳು ನಡೆಯುತ್ತಿವೆ. ಈ ಬಾರಿ ಅತಿ ಹೆಚ್ಚಾಗಿ ಮಾಡುತ್ತಿದ್ದಾರೆ. ಅದರಿಂದ ನಾವು ರಕ್ಷಣೆ ಕೊಡಿ ಎಂದು ಕೇಳಿ ಆಗಿದೆ. ಜನರು ರೊಚ್ಚಿಗೆದ್ದು ನಾವೇ ತಡೆಹಿಡಿಯುತ್ತವೆ ಎಂದು ಬರುತ್ತಾರೆ. ಆದರೂ ನಾವು ಶಾಂತಿಯಿಂದ ಇದ್ದೇವೆ. ಹೀಗಾಗಿ ನಾನು ಸಭೆಯಲ್ಲಿ ಆಕ್ರೋಶದ ಮಾತನ್ನು ಆಡಿದ್ದೇನೆ ಎಂದು ತಿಳಿಸಿದರು.

    ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಚಿವ ರೇವಣ್ಣ, ಎಸ್.ಆರ್ ಶ್ರೀನಿವಾಸ್, ಸಿಎಎಸ್ ಪುಟ್ಟರಾಜು ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv