Tag: shirooru sree

  • ಲಿವರ್ ವೈಫಲ್ಯ, ಹೊಟ್ಟೆಯಲ್ಲಿತ್ತು ಲೀಟರ್ ಗಟ್ಟಲೆ ರಕ್ತ – ಶಿರೂರು ಶ್ರೀಗಳ ಸಾವಿನ ಸಂಬಂಧ ವಿಧಿವಿಜ್ಞಾನ ವರದಿ

    ಲಿವರ್ ವೈಫಲ್ಯ, ಹೊಟ್ಟೆಯಲ್ಲಿತ್ತು ಲೀಟರ್ ಗಟ್ಟಲೆ ರಕ್ತ – ಶಿರೂರು ಶ್ರೀಗಳ ಸಾವಿನ ಸಂಬಂಧ ವಿಧಿವಿಜ್ಞಾನ ವರದಿ

    ಉಡುಪಿ: ಇಲ್ಲಿನ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಷಪ್ರಾಶನದಿಂದ ಸಾವನ್ನಪ್ಪಿಲ್ಲ. ಅವರು ಲಿವರ್ ವೈಫಲ್ಯದಿಂದ ಮೃತಪಟ್ಟಿದ್ದಾರೆ ಅಂತ ಎಫ್ ಎಸ್ ಎಲ್ ರಿಪೋರ್ಟ್ ನಲ್ಲಿ ವರದಿಯಾಗಿದೆ.

    ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಕೆಎಂಸಿ ಜಂಟಿಯಾಗಿ ನೀಡಿದ ವರದಿಯಲ್ಲಿ ಈ ಅಂಶ ಸಾಬೀತಾಗಿದೆ. ಕೆಎಂಸಿ ವೈದ್ಯರಿಂದ ಪೊಲೀಸ್ ಇಲಾಖೆಗೆ ಎಫ್‍ಎಸ್ ಎಲ್ ವರದಿ ಹಸ್ತಾಂತರವಾಗಿದೆ. ಲಿವರ್ ವೈಫಲ್ಯ, ಅನ್ನನಾಳದಲ್ಲಾದ ರಂಧ್ರಗಳು, ಹೊಟ್ಟೆಯಲ್ಲಿ ತೀವ್ರ ರಕ್ತಸ್ರಾವದಿಂದಾಗಿ ಸಾವು ಸಂಭವಿಸಿದೆ ಎಂದು ಎಫ್ ಎಸ್ ಎಲ್ ವರದಿಯಲ್ಲಿ ತಿಳಿಸಿದೆ.

    ಸ್ವಾಮೀಜಿಯ ಅನ್ನನಾಳದಲ್ಲಿ ಹಲವು ರಂಧ್ರಗಳಾಗಿದ್ದವು. ಎರಡೂ ಕಿಡ್ನಿಗಳು ವೈಫಲ್ಯವಾಗಿತ್ತು. ಹೊಟ್ಟೆಗೆ ನಾಲ್ಕೈದು ಲೀಟರ್ ರಕ್ತ ಸೇರಿಕೊಂಡಿತ್ತಂತೆ. ಇದನ್ನೇ ವೈದ್ಯರು ವಿಷಕಾರಿ ಅಂಶವೆಂದು ಹೇಳಿರಬಹುದು ಎಂದು ಶಂಕಿಸಲಾಗಿದೆ. ಆಗಸ್ಟ್ 21 ರಂದು ಪೊಲೀಸರಿಗೆ ಎಫ್‍ಎಸ್‍ಎಲ್ ವರದಿ ಸಿಕ್ಕಿತ್ತು.

    ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ತಯಾರಿಸಿದ್ದ ವರದಿ ಮೇಲೆ ಪೊಲೀಸರು ಎರಡು ಬಾರಿ 10ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ದರು. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕ ನಂತರ ಎಸ್ ಪಿ ಮರಣೋತ್ತರ ಪರೀಕ್ಷಾ ವರದಿಯನ್ನು ಕುಂದಾಪುರ ಎಸಿಗೆ ಹಸ್ತಾಂತರಿಸಿದ್ದಾರೆ. ಅಸಹಜ ಸಾವಿನ ಎಲ್ಲಾ ಕಡತಗಳು ಸಹಾಯಕ ಆಯುಕ್ತರ ಬಳಿ ಇದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲು ಎಸ್ ಪಿ ಲಕ್ಷ್ಮಣ ನಿಂಬರ್ಗಿ ಮತ್ತು ಕೆಎಂಸಿ ಮಣಿಪಾಲ ವೈದ್ಯರು ನಿರಾಕರಿಸಿದ್ದಾರೆ.

    ಶಿರೂರು ಶ್ರೀ ಸಾವಿಗೆ ಕಾರಣವೇನು?:
    ವಿಷಪ್ರಾಶನದಿಂದ ಶಿರೂರು ಸ್ವಾಮೀಜಿ ಸತ್ತಿಲ್ಲ ಅಂತ ಎಫ್ ಎಸ್ ಎಲ್ ವರದಿಯಲ್ಲಿ ಉಲ್ಲೇಖವಾಗಿದೆ. ಕ್ರೋನಿಕ್ ಲಿವರ್ ಸಿರಾಸಿಸ್ ನಿಂದ ಶಿರೂರು ಶ್ರೀ ಸಾವು ಎಂಬೂದು ವರದಿಯ ಪ್ರಮುಖ ಅಂಶ. ಸ್ವಾಮೀಜಿಗೆ ಬಹು ಅಂಗಾಂಗ ವೈಫಲ್ಯವಾಗಿತ್ತು. ಇದರಿಂದಾಗಿ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ.

    ಸ್ವಾಮೀಜಿಯ ಎರಡು ಕಿಡ್ನಿಗಳು ತನ್ನ ಕಾರ್ಯ ನಿರ್ವಹಣೆ ಮಾಡುತ್ತಿರಲಿಲ್ಲ. ಗಂಟಲಿನಿಂದ ಹೊಟ್ಟೆ ತನಕ ಸ್ವಾಮೀಜಿ ಅನ್ನನಾಳದಲ್ಲಿ ಐದಾರು ಕಡೆ ತೂತು ಬಿದ್ದಿತ್ತು. ರಕ್ತನಾಳ ಸಿಡಿದು ನೇರವಾಗಿ ಹೊಟ್ಟೆಗೆ ರಕ್ತ ಸೇರಿಕೊಂಡಿದ್ದರಿಂದ ರಕ್ತ ವಾಂತಿ ಆಗಿತ್ತು. ಸ್ವಾಮೀಜಿ ತಿಂದ ಅನ್ನಾಹಾರ, ಪಾನೀಯ ಅನ್ನನಾಳದ ಮೂಲಕ ಹೊಟ್ಟೆಗೆ ಹೋಗುತ್ತಿರಲಿಲ್ಲ.

    ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದ ಶಿರೂರು ಸ್ವಾಮೀಜಿ, ರಕ್ತ ವಾಂತಿ, ರಕ್ತ ಭೇದಿಯಿಂದ ಜುಲೈ 17ಕ್ಕೆ ಸ್ವಾಮೀಜಿ ಕೆಎಂಸಿ ಆಸ್ಪತ್ರೆ ಸೇರಿದ್ದರು. ಮದ್ಯ ವ್ಯಸನ, ಡ್ರಗ್ಸ್ ಸೇವನೆ, ನಿರಾಹಾರದಿಂದ ಕಿಡ್ನಿ ಫೈಲ್ ಸಾಧ್ಯತೆಯಾಗಿದೆ. ಈ ಎಲ್ಲಾ ಕಾರಣಗಳಿಂದ ಸ್ವಾಮೀಜಿಯ ಸಾವು ಆಗಿದೆ ಅಂತ ವರದಿಯಲ್ಲಿ ಉಲ್ಲೇಖವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿರೂರು ಶ್ರೀಗಳ ಆರಾಧನಾ ಕಾರ್ಯಕ್ರಮ ಮುಂದೂಡಿಕೆ

    ಶಿರೂರು ಶ್ರೀಗಳ ಆರಾಧನಾ ಕಾರ್ಯಕ್ರಮ ಮುಂದೂಡಿಕೆ

    ಉಡುಪಿ: ಈ ಹಿಂದೆ ಜುಲೈ 31 ಕ್ಕೆ ಶ್ರೀಗಳ ಆರಾಧನಾ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಪೊಲೀಸರು ತನಿಖೆ ಪೂರ್ಣಗೂಳ್ಳದ ಕಾರಣ ಶಿರೂರು ಮೂಲಮಠ ಪೊಲೀಸ್ ಸುಪರ್ದಿಯಲ್ಲಿ ಇದ್ದಿದರಿಂದ ಕಾರ್ಯಕ್ರಮವನ್ನು ಮುಂದೂಡಿದ್ದಾರೆ.

    ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಶಿರೂರು ಲಕ್ಷ್ಮೀವರ ತೀರ್ಥರು ವೃಂದಾವನಸ್ಥರಾಗಿ 13 ನೇ ದಿನಕ್ಕೆ ಆರಾಧನೆ ನಡೆಯಬೇಕು. ಆದ್ರೆ ಪೊಲೀಸ್ ತನಿಖೆ ಪೂರ್ಣಗೊಳ್ಳದ ಕಾರಣ ಆರಾಧನಾ ಪ್ರಕ್ರಿಯೆ ಜುಲೈ 31 ಕ್ಕೆ ನಡೆಯುತ್ತಿಲ್ಲ. ಶಿರೂರು ಮೂಲಮಠ ಪೊಲೀಸ್ ಸುಪರ್ಧಿಯಲ್ಲಿದ್ದು, ದ್ವಂದ್ವ ಮಠಾಧೀಶ ಸೋದೆ ಶ್ರೀ ವಿಶ್ವವಲ್ಲಭರು ಆರಾಧನೆ ನಡೆಸಲು ಪೊಲೀಸರಲ್ಲಿ ಅವಕಾಶ ಕೇಳಿದ್ದರು. ತನಿಖೆ ಪೂರ್ಣಗೊಳ್ಳದ ಮತ್ತು ಎಫ್ ಎಸ್ ಎಲ್ ವರದಿ ಬಾರದ ಕಾರಣ ಪೊಲೀಸರು ಮೂಲಮಠದಲ್ಲಿ ಆರಾಧನೆ ನಡೆಸಲು ಅವಕಾಶ ನೀಡಿಲ್ಲ.

    ಆರಾಧನೆ ನಡೆದರೆ ಸಾವಿರಾರು ಮಂದಿ ಭಕ್ತರು ಮಠಕ್ಕೆ ಬರಬೇಕಾಗುತ್ತದೆ. ಪೂಜೆ ಪುನಸ್ಕಾರ, ಅನ್ನದಾನ ನಡೆಯುತ್ತದೆ. ಈ ಎಲ್ಲಾ ಪ್ರಕ್ರಿಯೆಯಿಂದ ಸಾಕ್ಷ್ಯ ನಾಶವಾಗಿ, ತನಿಖೆಗೆ ಹಿನ್ನಡೆಯಾಗಬಹುದು. ಹಾಗಾಗಿ ಪೊಲೀಸರು ಆರಾಧನೆಗೆ ಅವಕಾಶ ಕೊಟ್ಟಿಲ್ಲ ಎಂದು ಹೇಳಲಾಗಿದೆ. ತನಿಖೆ ಸಂಪೂರ್ಣ ಆದ ಮೇಲೆ ಎಫ್ ಎಸ್ ಎಲ್ ವರದಿ ಬಂದ ನಂತರ ಒಳ್ಳೆಯ ದಿನ ಗೊತ್ತುಪಡಿಸಿ ಆರಾಧನೆ ಪ್ರಕ್ರಿಯೆ ಮಾಡುವುದಾಗಿ ಸೋದೆ ಸ್ವಾಮೀಜಿಗಳು ಹೇಳಿದ್ದಾರೆ.

  • ಶಿರೂರು ಶ್ರಿಗಳ ದೇಹದಲ್ಲಿ ವಿಷಕಾರಕ ಅಂಶ ಪತ್ತೆ- ಸಮಗ್ರ ತನಿಖೆಗೆ ಕೇಮಾರು ಶ್ರೀ ಆಗ್ರಹ

    ಶಿರೂರು ಶ್ರಿಗಳ ದೇಹದಲ್ಲಿ ವಿಷಕಾರಕ ಅಂಶ ಪತ್ತೆ- ಸಮಗ್ರ ತನಿಖೆಗೆ ಕೇಮಾರು ಶ್ರೀ ಆಗ್ರಹ

    ಉಡುಪಿ: ಇಲ್ಲಿನ ಶಿರೂರು ಮಠದ ಲಕ್ಷ್ಮಿವರ ತೀರ್ಥ ಸ್ವಾಮೀಜಿಯವರ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಕೇಮಾರು ಮಠಾಧೀಶ ಶ್ರೀಈಶ ವಿಠಲದಾಸ ಸ್ವಾಮೀಜಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವೇಳೆ ಫುಡ್ ಪಾಯಿಸನ್ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಮಠದಲ್ಲಿ ಎಲ್ಲರು ಊಟ ಮಾಡಿದ್ದಾರೆ. ಆದ್ರೆ ಸ್ವಾಮೀಜಿಯೊಬ್ಬರಿಗೆ ಮಾತ್ರ ಯಾಕೆ ಫುಡ್ ಪಾಯಿಸನ್ ಆಗ್ಬೇಕು ಅಂತ ಪ್ರಶ್ನಿಸಿದ್ರು. ಹಾಗೇ ಆಗೋದಾದ್ರೆ ಎಲ್ಲರೂ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಬೇಕಿತ್ತು. ಹೀಗಾಗಿ ಒಂದು ವೇಳೆ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ರು.

    ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಇದೆ ಅಂತ ಡಾಕ್ಟರ್ ಹೇಳಿದ್ದಾರೆ. ಆದ್ರೆ ಅದರ ಬಗ್ಗೆ ಸಮಗ್ರ ತನಿಖೆ ನಡೆಸಲಿ. ವೈದ್ಯರು ಬರೀ ಹೇಳಿದ್ರೆ ಸಾಲದು ಆ ಬಗ್ಗೆ ವರದಿ ಕೊಡಲಿ. ಅಲ್ಲದೇ ಪೊಲೀಸರು ಕೂಡ ಸಮಗ್ರ ತನಿಖೆ ನಡೆಸಬೇಕಿದೆ. ಹಾಗೆಯೇ ಸರ್ಕಾರ ಕೂಡಲೇ ಮಧ್ಯಪ್ರವೇಶಿಸದಿದ್ದರೆ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗುತ್ತದೆ ಅಂತ ಅವರು ಸರ್ಕಾರವನ್ನು ಆಗ್ರಹಿಸಿದರು.

    ಈಗಾಗಲೇ ಸಿಎಂ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದೇವೆ. ಆದ್ರೆ ಸಿಎಂ ಅವರು ಐಜಿಗೆ ಹೇಳಿ ಅದನ್ನು ಸರಿಮಾಡುತ್ತೇನೆ ಅಂದಿದ್ದಾರೆಂಬ ಮಾಹಿತಿ ಇದೆ. ಆದ್ರೆ ಈ ಬಗ್ಗೆ ಸ್ಪಷ್ಟತೆ ಇಲ್ಲ ಅಂದ್ರು. ಆದ್ರೆ ಇಲ್ಲಿಯವರೆಗೂ ಯಾವುದು ಸರಿಯಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಧ್ಯಪ್ರವೇಶಿಸಿ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಲಿ. ಈ ಮೂಲಕ ಗೊಂದಲಗಳನ್ನು ಪರಿಹಾರ ಮಾಡಲಿ ಅಂತ ಆಗ್ರಹಿಸಿದ್ರು.

    ನಾಲ್ಕೈದು ದಿನದ ಹಿಂದೆಯಷ್ಟೇ ಸ್ವಾಮೀಜಿಗಳ ಜೊತೆ ಮಾತನಾಡಿದ್ದೇನೆ. ನನಗೆ ನನ್ನ ದೇವರು ಬೇಕು. ಹೀಗಾಗಿ ನಾನು ಕಾನೂನಾತ್ಮಕ ಹೋರಾಟ ಮಾಡುತ್ತೇನೆ. ಹೀಗಾಗಿ ಅವರು ಪಟ್ಟದ ದೇವರು ಸಿಕ್ಕಿಲ್ಲ ಅಂತ ಬಿಕ್ಕಿ ಬಿಕ್ಕಿ ಅಳುತ್ತಾ ಇದ್ದರು. ಆವಾಗ ನಾನು ಕಾನೂನಾತ್ಮಕ ರೀತಿಯಲ್ಲಿ ಹೋರಾಟ ಮಾಡುವ. ಅದರ ಬಗ್ಗೆ ನೀವು ಯಾವುದೇ ರೀತಿಯಲ್ಲಿ ಟೆನ್ಶನ್ ತೆಗೆದುಕೊಳ್ಳಬೇಡಿ ಅಂತ ಹೇಳಿದ್ದೆ. ಇದೇ ವೇಳೆ ನಾನು ಸಾಯುವುದಿಲ್ಲ. 71 ವರ್ಷ ಬದುಕುತ್ತೇನೆ. ನಂಗೇನೂ ತೊಂದ್ರೆ ಇಲ್ಲ ಅಂತಾನೂ ಹೇಳಿದ್ದರು. ಹೀಗಾಗಿ ಆರೋಗ್ಯದಲ್ಲಿದ್ದವರು ತಕ್ಷಣವೇ ಮೃತಪಟ್ಟಿರುವುದು ಭಕ್ತಾಧಿಗಳಿಗೆ ಗೊಂದಲು ಉಂಟಾಗಿದೆ ಅಂತ ಹೇಳಿದ್ರು.

    ನನ್ನ ಜೊತೆ ಮಾತಾಡಿದ ಮರುದಿನವೇ ವನಮಹೋತ್ಸವ ಆಚರಿಸಿಕೊಂಡು ಅತ್ಯಂತ ಲವಲವಿಕೆಯಿಂದಲೇ ಇದ್ದರು. ಒತ್ತಡದಲ್ಲಿದ್ದರು ಆದ್ರೆ ಸಾಯುವಂತಹ ಅನಾರೋಗ್ಯ ಏನೂ ಅವರಿಗೆ ಇರಲಿಲ್ಲ ಅಂದ್ರು. ಒಟ್ಟಿನಲ್ಲಿ ಬಡವರ ಪರ ಇದ್ದವರು, ಕಲಾಪೋಷಕರನ್ನು ಪೋಷಿಸಿದ ಒಬ್ಬೊಳ್ಳೆಯ ಸ್ವಾಮೀಜಿ, ಜಾತಿ ಮತದ ಎಲ್ಲೆಯನ್ನು ಮೀರಿ ಎಲ್ಲರನ್ನು ಪ್ರೀತಿಸುತ್ತಿದ್ದರು ಅಂದ್ರು.