Tag: Shiroor Mutt

  • ಬಾಲ ಸನ್ಯಾಸತ್ವ ರಿಟ್ ಅರ್ಜಿ ವಜಾ – ಪಟಾಕಿ ಸಿಡಿಸಿ, ಸಿಹಿ ಹಂಚಿದ ಸೋದೆ ಮಠದ ಭಕ್ತರು

    ಬಾಲ ಸನ್ಯಾಸತ್ವ ರಿಟ್ ಅರ್ಜಿ ವಜಾ – ಪಟಾಕಿ ಸಿಡಿಸಿ, ಸಿಹಿ ಹಂಚಿದ ಸೋದೆ ಮಠದ ಭಕ್ತರು

    ಉಡುಪಿ: ಶೀರೂರು ಮಠಕ್ಕೆ ನೂತನ ಪೀಠಾಧಿಕಾರಿ ಆಯ್ಕೆ ವಿರುದ್ಧ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಕೋರ್ಟ್ ಆದೇಶ ಬಂದ ಹಿನ್ನೆಲೆಯಲ್ಲಿ ಶೀರೂರು ಮತ್ತು ಸೋದೆ ಮಠದ ಭಕ್ತರು ರಥಬೀದಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿದ್ದಾರೆ.

    ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಸ್ವಾಮೀಜಿ ಬಾಲವಟುವನ್ನು ಆಯ್ಕೆ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ ಚಟುಚಟಿಕೆ ಎಂದು ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ವೃಂದಾವನಸ್ಥ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಪಾದರು ಸಹೋದರ ಲಾತವ್ಯ ಆಚಾರ್ಯ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸೋದೆ ಮಠದ ನಡೆ ಮತ್ತು ವಾದವನ್ನು ಪುರಸ್ಕರಿಸಿದೆ. ಇದನ್ನೂ ಓದಿ: ಶಿರೂರು ಮಠದ ಪೀಠಾಧಿಪತಿಯಾಗಿ ಉಡುಪಿ ವಿದ್ಯೋದಯ ಶಾಲೆಯ ಅನಿರುದ್ಧ್ ಆಯ್ಕೆ

    ಅರ್ಜಿ ವಜಾವಾದ ಹಿನ್ನೆಲೆಯಲ್ಲಿ ಉಡುಪಿ ರಥಬೀದಿಯ ಶಿರೂರು ಮಠದ ಮುಂಭಾಗದಲ್ಲಿ ಮಠದ ಭಕ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಸೋದೆ ಮಠಾಧೀಶರಿಗೆ ಜೈಕಾರ ಕೂಗಿದರು. ಸೋದೆ ಮಠದ ಪರವಾಗಿ ರತ್ನಕುಮಾರ್ ಮಾತನಾಡಿ, ಕಳೆದ ಮೇ ತಿಂಗಳಲ್ಲಿ ಸೋದೆ ಸ್ವಾಮೀಜಿಯವರು ಶೀರೂರು ಮಠಕ್ಕೆ ಸನ್ಯಾಸತ್ವ ದೀಕ್ಷೆಯನ್ನು ಕೊಟ್ಟಿದ್ದರು. ವೇದ ವರ್ಧನ ತೀರ್ಥ ಸ್ವಾಮೀಜಿ ಎಂದು ನಾಮಕರಣ ಮಾಡಿ ಪಟ್ಟಾಭಿಷೇಕ ಮಾಡಿದ್ದರು. ದಾಖಲಾದ ರಿಟ್ ಅರ್ಜಿ ವಜಾ ಆಗಿದೆ. ಬಾಲ ಸನ್ಯಾಸ ಮತ್ತು ಸೋದೆ ಸ್ವಾಮೀಜಿ ಕೊಟ್ಟ ಸನ್ಯಾಸತ್ವವನ್ನು ಹೈಕೋರ್ಟ್ ಎತ್ತಿಹಿಡಿದಿದೆ ಎಂದರು.

  • ಶಿರೂರು ಮೂಲಮಠಕ್ಕೆ ತಾತ್ಕಾಲಿಕ ವ್ಯವಸ್ಥಾಪಕರ ನೇಮಕ

    ಶಿರೂರು ಮೂಲಮಠಕ್ಕೆ ತಾತ್ಕಾಲಿಕ ವ್ಯವಸ್ಥಾಪಕರ ನೇಮಕ

    ಉಡುಪಿ: ಆಡಳಿತ ಮಂಡಳಿ ಮತ್ತು ಹೊಸ ಉತ್ತರಾಧಿಕಾರಿ ನೇಮಕವಾಗುವವರೆಗೆ ಶಿರೂರು ಮಠಕ್ಕೆ ವ್ಯವಸ್ಥಾಪಕರ ನೇಮಕವಾಗಿದೆ.

    ಶಿರೂರು ಮೂಲಮಠಕ್ಕೆ ತಾತ್ಕಾಲಿಕ ವ್ಯವಸ್ಥಾಪಕರಾಗಿ ಸುಬ್ರಹ್ಮಣ್ಯ ಭಟ್ ಗೆ ಜವಾಬ್ದಾರಿ ನೀಡಲಾಗಿದೆ. ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥರು ಉಸ್ತುವಾರಿ ನೇಮಕವಾಗಿದೆ. ಮಠದ ತೋಟ, ಚಿನ್ನಾಭರಣ, ನೋಡಿಕೊಳ್ಳಲು ಈ ಉಸ್ತುವಾರಿಗೆ ಅಧಿಕಾರ ಕೊಡಲಾಗಿದೆ.

    ತನಿಖೆ ಹಿನ್ನೆಲೆಯಲ್ಲಿ ಪೊಲೀಸ್ ಸುಪರ್ದಿಯಲ್ಲಿರುವ ಮೂಲ ಮಠದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಆದ್ದರಿಂದ ಮಠದೊಳಗೆ ಯಾರಿಗೂ ಪ್ರವೇಶಕ್ಕೆ ಅವಕಾಶ ಕೊಡಲಾಗುತ್ತಿಲ್ಲ. ಶಿರೂರು ಮಠದ ಆಸ್ತಿಪಾಸ್ತಿ ಸೋದೆ ಮಠ ಸುಪರ್ದಿಗೆ ಪಡೆದಿಲ್ಲ. ತನಿಖೆ ಮುಗಿಯುವ ತನಕ ವ್ಯವಸ್ಥಾಪಕರಿಗೆ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಸೋದೆ ಮಠದ ಮೂಲಗಳು ತಿಳಿಸಿವೆ.

  • ಶಿರೂರು ಮಠದ ಆವರಣದಲ್ಲಿರೋ ಬಾವಿಯಲ್ಲಿ ಮದ್ಯದ ಬಾಟಲಿ ಪತ್ತೆ!

    ಶಿರೂರು ಮಠದ ಆವರಣದಲ್ಲಿರೋ ಬಾವಿಯಲ್ಲಿ ಮದ್ಯದ ಬಾಟಲಿ ಪತ್ತೆ!

    ಉಡುಪಿ: ಇಲ್ಲಿನ ಶಿರೂರು ಮಠದ ಆವರಣದಲ್ಲಿರುವ ಬಾವಿಯಲ್ಲಿ ಮದ್ಯದ ಬಾಟಲ್ ಪತ್ತೆಯಾಗಿದ್ದು, ಇದೀಗ ತನಿಖೆ ಚುರುಕುಗೊಂಡಿದೆ.

    ಶಿರೂರು ಶ್ರೀಗಳ ಅನುಮನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದೆ. ಈ ವೇಳೆ ಜಗದೀಶ್ ಪೂಜಾರಿ ಎಂಬವರು ಶಿರೂರು ಮಠ ಮತ್ತು ಕೃಷ್ಣಮಠದ ಪಕ್ಕದಲ್ಲಿರುವ ಬಾವಿಯಲ್ಲಿ ಮದ್ಯದ ಬಾಟಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಶಿರೂರು ಮಠದ ಬಾವಿಯಲ್ಲಿ ಪೊಲೀಸರು ಹುಡುಕಾಟ ನಡೆಸಿದ ವೇಳೆ ಮದ್ಯದ ಬಾಟಲ್ ಇರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಉಡುಪಿ ಶಿರೂರು ಮಠದ ಸಿಸಿಟಿವಿ ಡಿವಿಆರ್ ನಾಪತ್ತೆ!

    ಕೂಡಲೇ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ, ಬಾವಿಯಲ್ಲಿದ್ದ ಕೆಲವು ವಸ್ತುಗಳನ್ನು ಕೊಕ್ಕೆಯೊಂದರ ಮೂಲಕ ಮೇಲೆತ್ತಿ ಕೊಂಡೊಯ್ದಿದ್ದಾರೆ. ಸಂಗ್ರಹಿಸಿದ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಭದ್ರತೆಗೊಳಿಸಿ ರವಾನೆ ಮಾಡಲಾಗಿದೆ.

    ಇನ್ನು ಸೋಮವಾರವಷ್ಟೇ ಮಠದ ಮುಂಭಾಗದಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿದೆ ಎನ್ನಲಾಗುತ್ತಿತ್ತು. ಆದ್ರೆ ಇದೀಗ ಸಿ.ಸಿ ಕ್ಯಾಮರಾದ ಡಿ.ವಿ.ಆರ್ ಪತ್ತೆಯಾಗಿದೆ ಅಂತ ಹೇಳಲಾಗುತ್ತಿದ್ದು, ಆದ್ರೆ ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಇದನ್ನೂ ಓದಿ: ಶಿರೂರು ಮೂಲ ಮಠದಲ್ಲಿ ಸಿಕ್ಕಿದ್ದು ಪಾಯ್ಸನ್ ಅಲ್ಲ, ಜ್ಯೂಸ್ ಬಾಟಲ್!

  • ಉಡುಪಿ ಶಿರೂರು ಮಠದ ಸಿಸಿಟಿವಿ ಡಿವಿಆರ್ ನಾಪತ್ತೆ!

    ಉಡುಪಿ ಶಿರೂರು ಮಠದ ಸಿಸಿಟಿವಿ ಡಿವಿಆರ್ ನಾಪತ್ತೆ!

    ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಬಳಿಕ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಮಠದ ಡಿವಿಆರ್ ನಾಪತ್ತೆಯಾಗಿದೆ.

    ಸ್ವಾಮೀಜಿಗಳ ಅಸಹಜ ಸಾವಿನ ಕುರಿತಂತೆ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಈ ವೇಳೆ ಸಿಸಿಟಿವಿ ವಿಡಿಯೋಗಳನ್ನು ಸೇವ್ ಮಾಡುತ್ತಿದ್ದ ಡಿವಿಆರ್ ಇದೀಗ ಮೂಲ ಮಠದಿಂದ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಶಿರೂರು ಮೂಲಮಠದಿಂದ ಕೆಲ ವಸ್ತುಗಳು ಕೂಡ ಕಾಣೆಯಾಗಿವೆ.

    ಶಿರೂರು ಮೂಲ ಮಠದ ಪ್ರವೇಶ ದ್ವಾರದಲ್ಲೇ ಒಂದು ಸಿಸಿಟಿವಿ ಇತ್ತು. ಇದರಲ್ಲಿ ಮಠಕ್ಕೆ ಬರುವ ಎಲ್ಲಾ ಭಕ್ತರ ಬಗ್ಗೆ ದಾಖಲಾಗುತ್ತಿತ್ತು. ಯಾಕಂದ್ರೆ ಇದೊಂದು ದಾರಿಯ ಮೂಲಕವೇ ಭಕ್ತರು ಮಠ ಪ್ರವೇಶವಾಗಬೇಕಿತ್ತು. ಹೀಗಾಗಿ ಪೊಲೀಸರು ಇದೊಂದೇ ಸಾಕ್ಷಿ ಅಂತ ಪೊಲೀಸರು ನಂಬಿದ್ದರು. ತನಿಖೆಯ ಆರಂಭದಲ್ಲಿಯೇ ಪೊಲೀಸರು ಡಿವಿಆರ್ ಸಿಗುತ್ತೋ ಇಲ್ಲವೋ ಎಂಬ ಗೊಂದಲದಲ್ಲಿದ್ದರು. ಅಲ್ಲದೇ ಡಿವಿಆರ್ ಅನ್ನು ಸ್ವತಃ ಸ್ವಾಮೀಜಿಯವರೇ ಬೇರೆ ಮಠಕ್ಕೆ ಶಿಫ್ಟ್ ಮಾಡಿದ್ದಾರೆಯೋ ಎನ್ನುವುದರ ಬಗ್ಗೆ ತನಿಖೆ ನಡೆದಿತ್ತು. ಆದ್ರೆ ಎಲ್ಲಿ ಹುಡುಕಾಡಿದ್ರೂ ಡಿವಿಆರ್ ಮಾತ್ರ ಕಾಣಿಸುತ್ತಿಲ್ಲ.

    ಸ್ವಾಮೀಜಿಯವರು ಆಸ್ಪತ್ರೆಗೆ ದಾಖಲಾದ ದಿನವೇ ಯಾರೋ ಮಠಕ್ಕೆ ಬಂದು ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಆದ್ರೆ ಏನೆಲ್ಲ ವಸ್ತುಗಳನ್ನು ಹಾಗೂ ಯಾರು ತೆಗೆದುಕೊಂಡು ಹೋಗಿದ್ದಾರೆಂಬ ಬಗ್ಗೆ ದಾಖಲೆಗಳು ಈ ಸಿಸಿಟಿವಿಯಲ್ಲಿ ಸಿಗಬೇಕಿತ್ತು. ಆದ್ರೆ ಡಿವಿಆರ್ ಅನ್ನೇ ತೆಗೆದುಕೊಂಡು ಹೋಗಿದ್ರೆ ಎಲ್ಲಾ ದಾಖಲೆಗಳು ನಾಪತ್ತೆ ಆಗಿರೋ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಆ ದಿನ ಮಠಕ್ಕೆ ಬಂದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಮೂರು ತಿಂಗಳ ಹಿಂದೆ ಮಠದಲ್ಲಿ ಹಸುವಿನ ಕಳ್ಳತನವಾಗಿತ್ತು. ಆ ಸಂದರ್ಭದಲ್ಲಿ ಸಿಸಿಟಿವಿಯಲ್ಲಿ ದೃಶ್ಯಗಳು ಲಭ್ಯವಾಗಿದ್ದು, ಅದನ್ನು ಸ್ವತಃ ಸ್ವಾಮೀಜಿಗಳೇ ಮಧ್ಯಮಗಳಿಗೆ ನೀಡಿದ್ದರು. ಹೀಗಾಗಿ ಅಂದಿ ಇದ್ದ ಡಿವಿಆರ್ ಆ ನಂತ್ರ ಏನಾಗಿದೆ ಎಂಬುದೇ ಇದೀಗ ಪ್ರಶ್ನೆಯಾಗಿದೆ.

  • ಉಡುಪಿಯಲ್ಲಿ ತಪ್ತಮುದ್ರಾಧಾರಣೆ – ಭಕ್ತರಿಗೆ ಇಂದು ಮತ್ತೆ ನೆನಪಾದ್ರು ಶಿರೂರು ಶ್ರೀ

    ಉಡುಪಿಯಲ್ಲಿ ತಪ್ತಮುದ್ರಾಧಾರಣೆ – ಭಕ್ತರಿಗೆ ಇಂದು ಮತ್ತೆ ನೆನಪಾದ್ರು ಶಿರೂರು ಶ್ರೀ

    ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ದೈಹಿಕವಾಗಿ ಎಲ್ಲರ ನಡುವೆ ಇಲ್ಲದಿದ್ದರೂ ಅವರ ನೆನಪುಗಳು ಮಾತ್ರ ಹಾಗೇ ಉಳಿದುಕೊಂಡಿದೆ. ಈ ಪೈಕಿ ತಪ್ತ ಮುದ್ರಾಧಾರಣೆಯೂ ಒಂದು. ಕಾರಣ ಇಂದು ತಪ್ತ ಮುದ್ರಾಧಾರಣೆ.

    ಮುದ್ರಾಧಾರಣೆ ಅಂದ ತಕ್ಷಣ ಉಡುಪಿಲ್ಲಿರುವ ಶ್ರೀಕೃಷ್ಣ ಭಕ್ತರಿಗೆ ಮೊದಲು ನೆನಪಾಗೋದು ಶಿರೂರು ಸ್ವಾಮೀಜಿ. ಎಲ್ಲಾ ಮಠಗಳಿಗಿಂತ ಮೊದಲು ಶಿರೂರು ಮಠದಲ್ಲಿ ಮುದ್ರಾಧಾರಣೆ ಶುರುವಾಗುತ್ತಿತ್ತು. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವವರಿಗೆ ಸಮಸ್ಯೆಯಾಗಬಾರದು ಅಂತ ಶಿರೂರು ಸ್ವಾಮೀಜಿ ಬೇರೆ ಮಠಗಳಿಗಿಂತ ಮೊದಲೇ ಮುದ್ರಾಧಾರಣೆ ಶುರುಮಾಡುತ್ತಿದ್ದರು. ಈ ಬಾರಿ ತಪ್ತಮುದ್ರಾಧಾರಣೆ ಮತ್ತೆ ಬಂದಿದೆ. ಆದ್ರೆ ಶಿರೂರು ಶ್ರೀ ನೆನಪು ಮಾತ್ರ.

    ತಪ್ತ ಮುದ್ರಾಧಾರಣೆಯಂದು ಜನಜಂಗುಳಿಯಿಂದ ತುಂಬಿಕೊಳ್ಳುತ್ತಿದ್ದ ಶಿರೂರು ಮಠ ಈ ಬಾರಿ ತಣ್ಣಗಿದೆ. ಪೊಲೀಸರು ಮಠವನ್ನು ಸುಪರ್ಧಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಶಿರೂರು ಶ್ರೀಗಳ ಭಕ್ತರು, ಅಭಿಮಾನಿಗಳಿಗೆ ಈ ದಿನ ಬಹಳ ಕಾಡಲಿದೆ.

    ಇಲ್ಲಿನ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢವಾಗಿ ಮೃತಪಟ್ಟು ಐದು ದಿನಗಳು ಕಳೆದಿದೆ. ಪ್ರಕರಣ ತನಿಖೆ ಇನ್ನೂ ತನಿಖೆ ಹಂತದಲ್ಲಿದೆ.

  • ಶಿರೂರು ಶ್ರೀ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!

    ಶಿರೂರು ಶ್ರೀ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!

    ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದೆ.

    ಶಿರೂರು ಶ್ರೀಗೆ ಭೂ ಮಾಫಿಯಾ ಜೊತೆ ಸಂಪರ್ಕ ಇದೆ ಎನ್ನಲಾಗುತ್ತಿದ್ದು, ಈ ಕುರಿತು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಯುತ್ತಿದೆ. ಮಠ ಸಂಘರ್ಷ, ಭೂ ವ್ಯವಹಾರ, ಅನೈತಿಕ ಸಂಬಂಧದ ವಿಚಾರದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ತನಿಖೆಗೆ ಉಡುಪಿ ಎಸ್ ಪಿ 5 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಇದನ್ನೂ ಓದಿ: ಊಟ ನೀಡ್ತಿದ್ದ ಮಹಿಳೆ ಮೈ ಮೇಲೆ ಶಿರೂರು ಶ್ರೀಗಳ ಆಭರಣಗಳು

    ಉಡುಪಿಯಲ್ಲಿರುವ ಪ್ರಮುಖ ಉದ್ಯಮಿ ಹಾಗೂ ಬಿಲ್ಡರ್ ಗಳ ತನಿಖೆ ನಡೆಸಲಾಗುತ್ತಿದೆ. ಇದರ ಜೊತೆಗೆ ಸ್ವಾಮೀಜಿಗೆ 26 ಕೋಟಿ ರೂ. ವಂಚನೆ ನಡೆದಿದೆ ಅನ್ನೋ ವಿಡಿಯೋ ಮತ್ತು ಆಡಿಯೋ ವೈರಲ್ ಆಗಿದ್ದು, ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಸ್ವಾಮೀಜಿಗಳ ರಿಯಲ್ ಎಸ್ಟೇಟ್ ಉದ್ಯಮ ಪಾಲುದಾರರ ತೀವ್ರ ವಿಚಾರಣೆ ಆರಂಭವಾಗಿದೆ. ಇದನ್ನೂ ಓದಿ: ಶಿರೂರು ಶ್ರೀಗೆ ಇಬ್ಬರು ಉದ್ಯಮಿಗಳಿಂದ ಮೋಸ- ಬರೋಬ್ಬರಿ 26 ಕೋಟಿ ರೂ. ದೋಖಾ

    ಸ್ವಾಮೀಜಿಗಳ ಬಳಿ ನೂರಾರು ಎಕರೆ ಜಮೀನು ಇದೆ. ಸುಮಾರು 30 ಕೋಟಿ ರೂ. ವೆಚ್ಚದ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಕಾರ್ಯದಲ್ಲಿವೆ. ಈ ವಿಚಾರದಲ್ಲಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮುಂಬೈ ಮೂಲದ ಉದ್ಯಮಿಯೊಬ್ಬರ ಜೊತೆ ಈ ಕಾಂಪ್ಲೆಕ್ಸ್ ನಿರ್ಮಾಣ ಮತ್ತು ಸೇಲ್ ಬಗ್ಗೆ ಸಾಕಷ್ಟು ಚರ್ಚೆಗಳು, ಜಟಾಪಟಿ ನಡೆದಿತ್ತು ಅನ್ನೋ ಮಾತುಗಳು ಕೂಡ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿಯೂ ಕೂಡ ಪೊಲೀಸರು ಈಗಾಗಲೇ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನಕ್ಕೆ ಟ್ವಿಸ್ಟ್!

    ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅಸ್ವಸ್ಥರಾಗಿದ್ದ ಶ್ರೀಗಳು ಗುರುವಾರ ಬೆಳಗ್ಗೆ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಳಿಕ ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇದಕ್ಕೆ ಪೂರಕವಾಗಿರುವಂತೆ ಕೆಎಂಸಿ ಆಸ್ಪತ್ರೆಯ ವೈದ್ಯರೂ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದೆ ಅಂದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

    ದೂರು ದಾಖಲಿಸಿಕೊಂಡಿರೋ ಪೊಲೀಸರು ಶ್ರೀಗಳಿಗೆ ದಿನಾಲೂ ಫಲಾಹಾರ ತರುತ್ತಿದ್ದ ಮಹಿಳೆಯನ್ನು ಉಡುಪಿ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.  ಇನ್ನು ಶ್ರೀಗಳ ಸಾವಿನ ಸಂಬಂಧ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿಸಿದ್ದ ಅವರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯರನ್ನು ಕೂಡಾ ವಿಚಾರಣೆ ನಡೆಸಲಾಗಿದೆ.

  • ಶಿರೂರು ಶ್ರೀ, ರಮ್ಯಾ ಶೆಟ್ಟಿಯ ನಡುವಿನ ಸಂಬಂಧವೇನು? ಮಠದ ಮಾಜಿ ಮ್ಯಾನೇಜರ್ ಸ್ಫೋಟಕ ಹೇಳಿಕೆ

    ಶಿರೂರು ಶ್ರೀ, ರಮ್ಯಾ ಶೆಟ್ಟಿಯ ನಡುವಿನ ಸಂಬಂಧವೇನು? ಮಠದ ಮಾಜಿ ಮ್ಯಾನೇಜರ್ ಸ್ಫೋಟಕ ಹೇಳಿಕೆ

    ಹಾಸನ: ಶಿರೂರು ಮಠದ ಲಕ್ಷ್ಮೀವರ ಸ್ವಾಮೀಜಿಗಳ ನಿಧನಕ್ಕೆ ಸಂಬಂಧಿಸಿದಂತೆ ಕ್ಷಣ ಕ್ಷಣಕ್ಕೂ ಸ್ಫೋಟಕ ವಿಚಾರಗಳು ಹೊರ ಬರುತ್ತಿವೆ. ಶಿರೂರು ಶ್ರೀಗಳದ್ದು ಕೊಲೆಯಾಗಿದೆ ಅಂತಾದ್ರೆ ಅದಕ್ಕೆ ಕಾರಣ ರಮ್ಯಾ ಶೆಟ್ಟಿ ಎಂದು ಮಠದ ಮಾಜಿ ಮ್ಯಾನೇಜರ್ ಸುನಿಲ್ ಕುಮಾರ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

    ಶ್ರೀಗಳಿಗೆ ಮತ್ತು ಮಠಕ್ಕೆ ಸೇರಿದಂತೆ ತರಕಾರಿ, ಆಹಾರ ಪದಾರ್ಥಗಳನ್ನು ರಮ್ಯಾ ತರುತ್ತಿದ್ದರು. ರಮ್ಯಾ ಮಠದ ಭಕ್ತೆಯಾಗಿದ್ದರೆ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಹೋಗಬೇಕಿತ್ತು. ರಮ್ಯಾ ಸ್ವಾಮೀಜಿ ಬಳಿ ಒಬ್ಬಂಟಿಯಾಗಿ ರಾತ್ರಿ ವೇಳೆ ಮಠದಲ್ಲಿ ಇರುತ್ತಿದ್ದರು. ಸ್ವಾಮೀಜಿಗಳ ಕೋಣೆಗೆ ಯಾರು ಹೋಗುತ್ತಿರಲಿಲ್ಲ, ಆದ್ರೆ ರಮ್ಯಾ ಹೋಗ್ತಿದ್ರು. ಮಠಕ್ಕೆ ಸೇರಿದ ನಂತರ ರಮ್ಯಾ ಮೈತುಂಬ ಬಂಗಾರ, ಕಾರು ಸೇರಿ 2 ಮನೆ ಸೇರಿ ಆಸ್ತಿ ಹೆಚ್ಚಾಯಿತು ಎಂದು ಆರೋಪಿಸಿದರು.

    ರಮ್ಯಾ ಶೆಟ್ಟಿ ಮಠಕ್ಕೆ ಬರೋ ಮುನ್ನ ಎಲ್ಲವೂ ಚೆನ್ನಾಗಿತ್ತು. ಒಂಬತ್ತು ವರ್ಷ ನಾನು ಮತ್ತು ನನ್ನ ಕುಟುಂಬದಲ್ಲಿಯೇ ವಾಸವಾಗಿದ್ದೇವು. ಸ್ವಾಮೀಜಿಗಳು ಎಲ್ಲರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಆದ್ರೆ ರಮ್ಯಾ ಶೆಟ್ಟಿ ಆಗಮನದ ಬಳಿಕ ಮಠದ ವಾತಾವರಣವೇ ಬದಲಾಯಿತು. ಕೆಲವೇ ದಿನಗಳಲ್ಲಿಯೇ ಇಡೀ ಮಠವನ್ನೇ ರಮ್ಯಾ ತನ್ನ ಸ್ವಾಧೀನಕ್ಕೆ ಪಡೆದುಕೊಂಡಳು. ಮಠದ ಬ್ಯಾಂಕ್ ವ್ಯವಹಾರ ಸೇರಿದಂತೆ ಎಲ್ಲ ಕೆಲಸಗಳನ್ನು ರಮ್ಯಾ ನೋಡಿಕೊಳ್ಳುತ್ತಿದ್ದಳು. ರಮ್ಯಾ ಸೂಚಿಸಿದವರನ್ನೆ ಮಠದ ಕಾರ್ಯಗಳಿಗೆ ನೇಮಿಸಿಕೊಳ್ಳಲಾಗುತ್ತಿತ್ತು ರಹಸ್ಯ ವಿಚಾರಗಳನ್ನು ಸುನಿಲ್ ವಿವರಿಸಿದರು.

    ಶಿಶೂರು ಸ್ವಾಮೀಜಿ ಆರೋಗ್ಯವಾಗಿದ್ದರು, ಉತ್ತಮ ಯೋಗ ಹಾಗೂ ಈಜು ಪಟುವಾಗಿದ್ದರು. 55ನೇ ವಯಸ್ಸಿನಲ್ಲಿ ಸ್ವಾಮೀಜಿಗಳು ಸಾವನ್ನಪ್ಪಿದ್ದಾರೆ ಎಂದರೆ ಅದಕ್ಕೆ ರಮ್ಯಾ ಕಾರಣ. ಮಠದಲ್ಲಿ ಸ್ವಾಮೀಜಿಗಳಿಗಿಂತ ರಮ್ಯಾ ಮಾತು ನಡೆಯುತ್ತಿತ್ತು. ರಮ್ಯಾ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಪೆÇಲೀಸ್ ಗೆ ದೂರು ನೀಡಿ ಕಿರುಕುಳ ನೀಡಿ ಮಠದಿಂದ ಹೊರ ಹಾಕಿದಳು. ಮಠದಲ್ಲಿರುವ ಸಿಸಿ ಟಿವಿ ಪರೀಕ್ಷಿಸಿದರೆ ಸತ್ಯಾಂಶ ತಿಳಿಯಲಿದೆ. ರಮ್ಯಾ ವಿರುದ್ಧ ಉಡುಪಿ ಜನ ಹೋರಾಟ ಮಾಡಬೇಕು. ಆಕೆಯ ವಿರುದ್ಧ ಕಾನೂನು ಕ್ರಮ ಆಗಬೇಕು. ಸೂಕ್ತ ತನಿಖೆ ನಡೆಸಿ ರಮ್ಯಾ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸುನಿಲ್ ಆಗ್ರಹಿಸಿದರು.