Tag: shiradi

  • ಬೆಂಗಳೂರು | ಶಿರಡಿ ಸಾಯಿಬಾಬಾರ ಮೂಲ ಪಾದುಕೆ ದರ್ಶನಕ್ಕೆ ಮುಗಿಬಿದ್ದ ಭಕ್ತಸಾಗರ – ಇಂದು ಕೊನೇ ದಿನ

    ಬೆಂಗಳೂರು | ಶಿರಡಿ ಸಾಯಿಬಾಬಾರ ಮೂಲ ಪಾದುಕೆ ದರ್ಶನಕ್ಕೆ ಮುಗಿಬಿದ್ದ ಭಕ್ತಸಾಗರ – ಇಂದು ಕೊನೇ ದಿನ

    ಬೆಂಗಳೂರು: ಇದೇ ಮೊದಲ ಬಾರಿಗೆ ಸಾಯಿಬಾಬಾರ ಮೂಲ ಪಾದುಕೆಗಳು ಬೆಂಗಳೂರಿನ (Bengaluru) ಸಾಯಿ ಮಂದಿರಕ್ಕೆ ಬಂದಿವೆ. ಈ ಪಾದುಕೆಯ ಆಶೀರ್ವಾದಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದು, ಇಂದು ದರ್ಶನಕ್ಕೆ ಕೊನೆಯ ದಿನವಾಗಿದೆ. ಈ ಪಾದುಕೆಯ ಮಹತ್ವ, ವಿಶೇಷದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

    ಶಿರಡಿ (Shiradi) ಸಂಸ್ಥಾನದ ಮೂಲ ಪಾದುಕೆಯನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಭಕ್ತರಿಗಾಗಿ ದರ್ಶನಕ್ಕೆ ಇಡಲಾಗಿದೆ. ಮಲ್ಲೇಶ್ವರಂನ (Malleshwaram) ಸಾಯಿ ಮಂದಿರದಲ್ಲಿ ಮೂಲ ಪಾದುಕೆಯನ್ನು ಇಟ್ಟಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದರ್ಶನ ಪಡೆದಿದ್ದಾರೆ.ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ CET ಪರೀಕ್ಷೆಗೆ ಅವಕಾಶ ಕೊಡದ ಸಿಬ್ಬಂದಿ; ಬ್ರಾಹ್ಮಣ ಸಂಘಟನೆಗಳಿಂದ ಆಕ್ರೋಶ

    ಶಿರಡಿ ಸಾಯಿ ಬಾಬಾರ ಮೂಲ ಪಾದುಕೆ ಕೇವಲ ಮೂರು ಕಡೆಗಳಲ್ಲಿ ಮಾತ್ರ ಇದೆ. ಒಂದು ಸಂಸ್ಥಾನದಲ್ಲಿ, ಒಂದು ಮ್ಯೂಸಿಯಂನಲ್ಲಿ ಹಾಗೂ ಮೂರನೇಯದು ಬೆಂಗಳೂರಿನ ಸಾಯಿ ಮಂದಿರಲ್ಲಿದೆ. ಅಪರೂಪದಲ್ಲಿ ಅಪರೂಪಕ್ಕೆ ಸಿಗುವ ಈ ಮೂಲ ಪಾದುಕೆಯ ದರ್ಶನಕ್ಕೆ ಜನ ಮುಗಿಬಿದ್ದಿದ್ದಾರೆ. ಶಿರಡಿಯಿಂದ ಬಂದಿರುವ ಅರ್ಚಕರ ತಂಡವೇ ಮಧ್ಯಾಹ್ನ 12 ಗಂಟೆಗೆ ಶಿರಡಿ ಆರತಿ, ಸಂಜೆ ಆರೂವರೆಗೆ ದೂಪಾರ್ಥಿ ಪೂಜೆ ಮಾಡುತ್ತಾರೆ. ಗುರುವಾರದಿಂದ ಭಕ್ತರಿಗೆ ಅವಕಾಶ ಕಲ್ಪಿಸಿದ್ದು, ಇಂದು ಕೊನೆಯ ದಿನವಾಗಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಇರಲಿದೆ.

    ಏ.16ನೇ ತಾರೀಖಿಗೆ ಮೂಲ ಪಾದುಕೆ ಬೆಂಗಳೂರಿಗೆ ಬಂದಿದೆ. ಮಲ್ಲೇಶ್ವರಂ 18ನೇ ಅಡ್ಡರಸ್ತೆಯಿಂದ ಸಾಯಿ ಮಂದಿರಕ್ಕೆ ಮೆರವಣಿಗೆ ಮೂಲಕ ಪಾದುಕೆಯನ್ನು ಸಾಯಿ ಸನ್ನಿದಿಗೆ ತಂದು ಇಡಲಾಗಿದೆ. ಈ ಪಾದುಕೆಯನ್ನು ಕೆಲವೇ ಕೆಲವು ಸಾಯಿ ಮಂದಿರಗಳಲ್ಲಿ ಭಕ್ತರ ದರ್ಶನಕ್ಕೆ ಕಳುಹಿಸಿ ಕೊಡುವ ಧಾರ್ಮಿಕ ಪದ್ಧತಿ ಇದೆ. ಅದರಂತೆ ಈ ಬಾರಿ ಮಲ್ಲೇಶ್ವರಂನ ಸಾಯಿ ಮಂದಿರಕ್ಕೆ ಪಾದುಕೆ ಬಂದಿದ್ದು, ಭಕ್ತರು ಸಾಯಿ ಬಾಬಾರ ಕೃಪೆಗೆ ಪಾತ್ರರಾಗಿದ್ದಾರೆ.ಇದನ್ನೂ ಓದಿ: ಗರ್ಭಧರಿಸಿದ್ದ ಗೋವಿನ ಹತ್ಯೆಗೈದು ದುರುಳರ ವಿಕೃತಿ

  • ಸಕಲೇಶಪುರದಲ್ಲಿ ಗುಡ್ಡ ಕುಸಿತ, ಮಂಗ್ಳೂರು ಹೆದ್ದಾರಿ ಬಂದ್ – ಮಡಿಕೇರಿಯಿಂದ ತೆರಳುವಂತೆ ಮನವಿ

    ಸಕಲೇಶಪುರದಲ್ಲಿ ಗುಡ್ಡ ಕುಸಿತ, ಮಂಗ್ಳೂರು ಹೆದ್ದಾರಿ ಬಂದ್ – ಮಡಿಕೇರಿಯಿಂದ ತೆರಳುವಂತೆ ಮನವಿ

    ಹಾಸನ: ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕಲೇಶಪುರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿತವಾಗಿದ್ದು ಸಂಚಾರ ಬಂದ್ ಆಗಿದೆ. ಪರಿಣಾಮ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸವಾರರು ಪರದಾಡುತ್ತಿದ್ದಾರೆ.

    ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಕಲೇಶಪುರ ತಾಲೂಕಿನ ಎತ್ತಿನಹಳ್ಳದಲ್ಲಿ ರಸ್ತೆಮೇಲೆ ಮಣ್ಣಿನ ರಾಶಿ ಬಿದ್ದಿದೆ. ಹೀಗಾಗಿ ಮಡಿಕೇರಿ ಮಾರ್ಗದ ಮೂಲಕ ಮಂಗಳೂರಿಗೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

    ಮಂಗಳೂರಿಗೆ ತೆರಳೋ ವಾಹನ ಮಾಲೀಕರು ಮಡಿಕೇರಿ ಮಾರ್ಗದ ಮೂಲಕ ತೆರಳಲು ಸೂಚನೆ ನೀಡಲಾಗಿದೆ. ಯಾಕೆಂದರೆ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಮಾಡಲು ಸಾಕಷ್ಟು ಸಮಯ ಬೇಕು. ಈ ಹಿನ್ನೆಲೆಯಲ್ಲಿ ಬದಲಿ ಮಾರ್ಗದಲ್ಲಿ ಸಂಚರಿಸಲು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.

    ಇತ್ತ ಚಾರ್ಮಾಡಿ ಘಾಟಿಯಲ್ಲೂ ಗುಡ್ಡ ಕುಸಿತವಾಗಿದ್ದು ಇಲ್ಲೂ ಸಂಚಾರವನ್ನು ಬಂದ್ ಮಾಡಲಾಗಿದೆ. ಕಳೆದ ವರ್ಷ ಬಿದ್ದ ಭಾರೀ ಮಳೆಗೆ ಮಡಿಕೇರಿ ಸುಳ್ಯ ಮಧ್ಯೆ ಇರುವ ಸಂಪಾಜೆ ಘಾಟಿಯ ರಸ್ತೆ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಹಲವು ತಿಂಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಈ ಬಾರಿಯ ಮಳೆಗೆ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಮರಳಿನ ದಿಬ್ಬಗಳು ಕೊಚ್ಚಿಕೊಂಡು ಹೋಗಿವೆ.

  • ಸಮಾಧಿಸ್ಥರಾಗಿ 100 ವರ್ಷ: ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದ ಮೋದಿ

    ಸಮಾಧಿಸ್ಥರಾಗಿ 100 ವರ್ಷ: ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದ ಮೋದಿ

    ಮುಂಬೈ: ಸಾಯಿಬಾಬಾರು ಸಮಾಧಿಸ್ಥರಾಗಿ ಇಂದಿಗೆ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿರಡಿಗೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಶುಕ್ರವಾರಕ್ಕೆ ಶಿರಡಿ ಸಾಯಿಬಾಬಾರ ಸಮಾಧಿಸ್ಥರಾಗಿ ನೂರು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರು ವಿಶೇಷ ಪೂಜೆ ನೆರವೇರಿಸಿದರು.

    ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದ ಬಳಿಕ, ಸಾಯಿಬಾಬಾ ಸಮಾಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಈ ‌ವೇಳೆ ಸಾಯಿಬಾಬಾರವರ ಬೆಳ್ಳಿಯ ನಾಣ್ಯಗಳನ್ನು ಸಹ ಬಿಡುಗಡೆಗೊಳಿಸಿದರು.

    ದೇವಾಲಯದ ಭೇಟಿಗೂ ಮುನ್ನ ಪ್ರಧಾನಿ ಆವಾಸ್ ಗ್ರಾಮೀಣ ಯೋಜನೆಯ ಫಲಾನುಭವಿಗಳಿಗೆ ಸಾರ್ವಜನಿಕ ಸಮಾರಂಭದಲ್ಲಿ ಮನೆಯ ಕೀಲಿ ಕೈಗಳನ್ನು ವಿತರಿಸಿದ್ದರು. ಇದಲ್ಲದೇ 29 ಜಿಲ್ಲೆಗಳ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದವನ್ನು ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತೀಯ ರೈಲ್ವೇಯಿಂದ ದೇವಸ್ಥಾನಗಳಿಗೆ ವಿಶೇಷ ಪ್ಯಾಕೇಜ್! ಟೆಕೆಟ್ ಎಷ್ಟು?

    ಭಾರತೀಯ ರೈಲ್ವೇಯಿಂದ ದೇವಸ್ಥಾನಗಳಿಗೆ ವಿಶೇಷ ಪ್ಯಾಕೇಜ್! ಟೆಕೆಟ್ ಎಷ್ಟು?

    ಬೆಂಗಳೂರು: ಪ್ರಸಿದ್ಧ ದೇವಸ್ಥಾನಗಳಿಗೆ ಭಾರತೀಯ ರೈಲ್ವೇ ಹತ್ತು ದಿನಗಳ ವಿಶೇಷ ಪ್ಯಾಕೇಜ್ ಪ್ರವಾಸ ಪ್ರಾರಂಭಿಸಿದ್ದು, ಕಡಿಮೆ ದರದಲ್ಲಿ ಮೂರು ರಾಜ್ಯಗಳ ವಿವಿಧ ದೇವಸ್ಥಾನ ಹಾಗೂ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಬಹುದು.

    ಸೆಪ್ಟೆಂಬರ್ 15ರಂದು ಬೆಂಗಳೂರಿನಿಂದ ಪ್ರವಾಸ ಪ್ರಾರಂಭವಾಗಲಿದ್ದು ಒಬ್ಬರಿಗೆ 10,820 ರೂ. ಟಿಕೆಟ್ ದರವನ್ನು ನಿಗದಿಪಡಿಸಿದೆ.

    ಯಾವ ಸ್ಥಳಕ್ಕೆ ಪ್ರವಾಸ?
    ಬೆಂಗಳೂರಿನಿಂದ ಹೊರಟ ರೈಲು ಮಧ್ಯಪ್ರದೇಶದ ಮಹಾಕಾಳೇಶ್ವರ, ಓಂಕಾರೇಶ್ವರ, ರಾಜಸ್ಥಾನದ ಜೈಪುರ, ಪುಷ್ಕರ, ಮಹಾರಾಷ್ಟ್ರದ ತ್ರಿಯಂಬಕೇಶ್ವರ, ಪಂಢರಾಪುರ ಮತ್ತು ಶಿರಿಡಿಗೆ ಕರೆದೊಯ್ಯಲಾಗುವುದು ಎಂದು ಐಆರ್‌ಸಿಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ವಿಶೇಷ ಸೂಚನೆ:
    ಪ್ರಯಾಣಿಕರಿಗೆ ತಿಂಡಿಯ ವ್ಯವಸ್ಥೆಯನ್ನು ಕೂಡಾ ಐಆರ್‌ಸಿಟಿಸಿ ನಿರ್ವಹಿಸಲಿದೆ. ಆದರೆ ಕೇವಲ ಸಸ್ಯಾಹಾರ ತಿನಿಸುಗಳನ್ನು ಮಾತ್ರ. ಪ್ರತಿದಿನ ಒಂದು ಲೀಟರ್ ನೀರು ಮತ್ತು ಎರಡು ಬಾರಿ ಕಾಫಿ ಅಥವಾ ಟೀ ಒದಗಿಸಲಾಗುತ್ತದೆ. ನಿಲ್ದಾಣಗಳಿಂದ ದೇವಸ್ಥಾನಗಳಿಗೆ ಹೋಗಲು ರೈಲ್ವೆ ನಿಗಮ ಪ್ರಯಾಣಿಕರಿಗೆ ಟ್ಯಾಕ್ಸಿ ವ್ಯವಸ್ಥೆ ಕೂಡಾ ಇದೆ.

    ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಬುಕ್ ಆಗಿಲ್ಲ. ಒಂದು ವೇಳೆ ಮುಂದಿನ ಕೆಲವು ದಿನಗಳಲ್ಲಿ ಸಂಖ್ಯೆ ಏರಿಕೆಯಾದರೆ ಮೈಸೂರು ರೈಲು ನಿಲ್ದಾಣದಿಂದಲೇ ಪ್ರಯಾಣ ಪ್ರಾರಂಭಿಸಲಾಗುವುದು. ಇಲ್ಲದಿದ್ದರೆ ಹಾಸನದಿಂದ ಪ್ರಯಾಣ ಪ್ರಾರಂಭವಾಗಲಿದೆ ಎಂದು ಐಆರ್‌ಸಿಟಿಸಿ ಅಧಿಕಾರಿ ಇಮ್ರಾನ್ ಅಹ್ಮದ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿರಾಡಿಘಾಟ್ ರಸ್ತೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದ್ರೂ ಸಂಚಾರ ಮುಕ್ತ ಅನುಮಾನ!

    ಶಿರಾಡಿಘಾಟ್ ರಸ್ತೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದ್ರೂ ಸಂಚಾರ ಮುಕ್ತ ಅನುಮಾನ!

    ಹಾಸನ: ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್‍ನ 2ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದರೂ ನಿಗದಿತ ಸಮಯಕ್ಕೆ ಸಂಚಾರ ಮುಕ್ತವಾಗುವುದು ಅನುಮಾನವಾಗಿದೆ.

    ಕಾಮಗಾರಿಗೆ ಮಳೆ ಭೀತಿ ಎದುರಾಗಿದ್ದು, ಜೂನ್ 1ರಿಂದ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕಿತ್ತು. ಆದ್ರೆ 26 ಕಿಲೋಮೀಟರ್ ಕಾಮಗಾರಿ ಬಾಕಿಯಿದ್ದು, ಜೂನ್ ಕೊನೆವರೆಗೂ ಸಂಚಾರ ಮುಕ್ತವಾಗುವುದಿಲ್ಲ. ಕಾಮಗಾರಿಯಲ್ಲಿ ಜಿಯೋ ಟೆಕ್ಸ್ ಟೈಲ್ ತಂತ್ರಜ್ಞಾನ ಅಳವಡಿಸಲಾಗಿದ್ದು, 20 ವರ್ಷಗಳವರೆಗೆ ರಸ್ತೆ ಹಾಳಾಗುವುದಿಲ್ಲ ಎನ್ನಲಾಗಿದೆ.

    2ನೇ ಹಂತದ ಕಾಂಕ್ರೀಟ್ ಕಾಮಗಾರಿ ಪೂರ್ಣಕ್ಕೆ ಮಳೆಯ ಅಡ್ಡಿ ಎದುರಾಗಿದೆ. ಕಳೆದ ಜನವರಿ 20ರಿಂದ ಈ ಮಾರ್ಗದ ಸಂಚಾರ ಬಂದ್ ಮಾಡಿ, 74 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಿಸಲಾಗಿತ್ತು. ಒಟ್ಟು 12.38 ಕಿಮೀ ಉದ್ದದ ಕಾಮಗಾರಿಯಲ್ಲಿ ಈಗಾಗಲೇ 11.2 ಕಿಮೀ ಉದ್ದದ ಕೆಲಸ ಮುಗಿದಿದೆ. ಉಳಿದ ಕಾಮಗಾರಿ ಪೂರ್ಣಕ್ಕೆ ಮಳೆ ಅಡ್ಡಿಯಾಗಿದೆ. ಬಾಕಿ ಕಾಂಕ್ರೀಟ್ ಕಾಮಗಾರಿ ಮುಗಿಯಲು ಕನಿಷ್ಠ 1 ವಾರ ಕಾಲಾವಕಾಶ ಬೇಕಿದೆ. ಅದಾದ ನಂತರ ಕ್ಯೂರಿಂಗ್ ಆಗಲು 15 ದಿನ ಬೇಕಿದೆ. ಆದರೆ ಇಷ್ಟು ಕೆಲಸ ಮುಗಿಸಲು ವರುಣದೇವ ಬಿಡುವು ನೀಡದ ಕಾರಣ, ಜೂನ್ 1 ರಿಂದ ಶಿರಾಡಿಘಾಟ್ ರಸ್ತೆ ಸಂಚಾರಕ್ಕೆ ಮುಕ್ತವಾಗುವುದು ಅನುಮಾನವಾಗಿದ್ದು, ಜೂನ್ ಅಂತ್ಯದವರೆಗೂ ಕಾಯಲೇಬೇಕಿದೆ.

    ಕಳೆದ 3 ವರ್ಷಗಳ ಹಿಂದೊಮ್ಮೆ ಮತ್ತು ಕಳೆದ ಜನವರಿಯಿಂದ ರಸ್ತೆ ಮುಚ್ಚಿರುವುದರಿಂದ ವ್ಯಾಪಾರ ವಹಿವಾಟು ಇಲ್ಲದೇ ರಸ್ತೆ ಬದಿ ವ್ಯಾಪಾರಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಹಾಗೆಯೇ ಧರ್ಮಸ್ಥಳ, ಸುಬ್ರಹಣ್ಯ ಮೊದಲಾದ ಕಡೆಗೆ ಹೋಗುವವರು ಸುತ್ತಿ ಬಳಸಿ ಸಾಕಷ್ಟು ಹೈರಾಣಾಗಿದ್ದು, ಆದಷ್ಟು ಬೇಗ ಕೆಲಸ ಮುಗಿಯಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

    ಈಗಾಗಲೇ 13.62 ಕಿಮೀ ಉದ್ದದ ಮೊದಲ ಹಂತದ ಕಾಮಗಾರಿ 2015ರಲ್ಲೇ ಮುಗಿದಿದ್ದು, 2ನೇ ಹಂತದ ಕಾಮಗಾರಿಯೂ ಆದಷ್ಟು ಶೀಘ್ರ ಪೂರ್ಣಗೊಂಡರೆ ಒಳಿತು. ಯಾಕಂದ್ರೆ ಈ ಮೊದಲು ಜೋರು ಮಳೆ ಬಂದಾಗ ರಸ್ತೆ ಗುಂಡಿಬಿದ್ದು, ಧರ್ಮಸ್ಥಳ-ಮಂಗಳೂರು ಕಡೆಗೆ ಹೋಗುವ ಮಂದಿ ಅನುಭವಿಸುತ್ತಿದ್ದ ಸಂಚಾರ ಕಿರಿಕಿರಿ ತಪ್ಪಲಿದೆ ಅನ್ನೋದು ಪ್ರಯಾಣಿಕರ ಆಶಾಭಾವವಾಗಿದೆ.

  • ರಾಹುಲ್ ಕ್ಷಮೆಗೆ ಪಟ್ಟು ಹಿಡಿದ ಶಿರಡಿ ಸಾಯಿಬಾಬಾ ಟ್ರಸ್ಟ್

    ರಾಹುಲ್ ಕ್ಷಮೆಗೆ ಪಟ್ಟು ಹಿಡಿದ ಶಿರಡಿ ಸಾಯಿಬಾಬಾ ಟ್ರಸ್ಟ್

    ಮುಂಬೈ: ಕೇಂದ್ರ ರೈಲ್ವೆ ಮತ್ತು ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ಅವರ ಕುರಿತಾಗಿ “ಶಿರಡಿಯ ಪವಾಡಗಳಿಗೆ ಮಿತಿಯಿಲ್ಲ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿರುವುದು ವಿವಾದಕ್ಕೆ ಗ್ರಾಸವಾಗಿದೆ.

    ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಶಿರಡಿಯನ್ನು ಎಳೆದು ತರುವುದು ನೋವಿನ ಸಂಗತಿ. ದೇಶ ವಿದೇಶಗಳಲ್ಲಿನ ಸಾವಿರಾರು ಶಿರಡಿ ಭಕ್ತರ ಭಾವನೆಗೆ ನೋವುಂಟು ಮಾಡಿದೆ. ಭಕ್ತರ ಪರವಾಗಿ ಇದನ್ನು ಖಂಡಿಸುತ್ತೇವೆ. ಈ ಕುರಿತು ಭಕ್ತರಲ್ಲಿ ಕ್ಷಮೆಯಾಚಿಸುವಂತೆ ರಾಹುಲ್ ಗಾಂಧಿ ಅವರನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಸುರೇಶ್ ಹವಾರ್ ಅವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

    ಶಿರಡಿಯ ಪಾವಿತ್ರತೆಯನ್ನು ಗೋಯಲ್ ಅವರು ಹಾಳುಮಾಡುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ ಅಷ್ಟೇ ಎಂದು ರಾಹುಲ್ ಅವರ ಹೇಳಿಕೆಯನ್ನು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ ಸಮರ್ಥಿಸಿಕೊಂಡಿದ್ದಾರೆ. ಜನರ ಹಣವನ್ನು ಲೂಟಿ ಮಾಡಲು ಶಿರಡಿ ಹೆಸರನ್ನು ಗೋಯಲ್ ಅವರು ತಮ್ಮ ಸಂಸ್ಥೆಗಳಿಗೆ ಬಳಸಿದ್ದಾರೆ ಎಂದು ದೂರಿದ್ದಾರೆ.

    ಶಿರಡಿ ಹೆಸರನ್ನು ಯಾವುದೇ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಬಳಸದಂತೆ ಸಂಸ್ಥಾನದವರು ಸೆಕ್ಯೂರೀಟಿಸ್ ಆಂಡ್ ಎಕ್ಸ್ ಚೆಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ) ಮತ್ತು ಪ್ರಧಾನಿಗಳ ಬಳಿ ಮನವಿ ಮಾಡುವಂತೆ ಹೇಳಿದ್ದಾರೆ.

     

  • ಶಿರಾಡಿಯಲ್ಲಿ ಕಾಣಿಸಿಕೊಂಡ ಶಂಕಿತ ನಕ್ಸಲರು- ಮೂವರು ಶಸ್ತ್ರಧಾರಿಗಳನ್ನು ಕಂಡು ಸ್ಥಳೀಯರಲ್ಲಿ ಆತಂಕ

    ಶಿರಾಡಿಯಲ್ಲಿ ಕಾಣಿಸಿಕೊಂಡ ಶಂಕಿತ ನಕ್ಸಲರು- ಮೂವರು ಶಸ್ತ್ರಧಾರಿಗಳನ್ನು ಕಂಡು ಸ್ಥಳೀಯರಲ್ಲಿ ಆತಂಕ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿಘಾಟಿ ಪ್ರದೇಶದಲ್ಲಿ ಮೂವರು ನಕ್ಸಲರು ಕಾಣಿಸಿಕೊಂಡಿದ್ದಾರೆ.

    ಶಿರಾಡಿಯ ಅಡ್ಡಹೊಳೆ ಅರಣ್ಯ ವ್ಯಾಪ್ತಿಯ ಮಿತ್ತಮಜಲು ಎಂಬಲ್ಲಿ ರಾತ್ರಿ 7.30ರ ಸುಮಾರಿಗೆ ಶಸ್ತ್ರಧಾರಿ ನಕ್ಸಲರು ಪರಿಸರದ ಮನೆಗಳಿಗೆ ಭೇಟಿ ನೀಡಿದ್ದಾರೆ. ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿದ್ದ ತಂಡ ಲೀಲಾ ಎಂಬವರ ಮನೆಗೆ ಆಗಮಿಸಿ ತಾವು ಕಾಡಿನಲ್ಲಿರುವ ನಕ್ಸಲರಾಗಿದ್ದು ತುಂಬಾ ಹಸಿವಿನಿಂದ ಇದ್ದೇವೆ. ಹೀಗಾಗಿ ಆಹಾರ ತಯಾರಿಸಿಕೊಡುವಂತೆ ವಿನಂತಿಸಿದ್ದಾರೆ. ಅಲ್ಲದೆ ತಮ್ಮಲ್ಲಿದ್ದ ಮೊಬೈಲ್, ಲ್ಯಾಪ್ ಟಾಪ್ ಚಾರ್ಜ್ ಮಾಡಿದ್ದಾರೆ.

    ಮನೆಯಲ್ಲಿ ಅಕ್ಕಿ ಹಿಟ್ಟು ಮಾಡಿದ್ದನ್ನು ಕಂಡು ದೋಸೆ ಮಾಡಿಕೊಡುವಂತೆ ವಿನಂತಿಸಿ, ದೋಸೆ ಮಾಡಿ ತಿಂದಿದ್ದಾರೆ. ಪರಿಸರದ ಬೇರೆ ಮನೆಗಳಿಗೂ ಭೇಟಿ ನೀಡಿದ್ದು ಅಕ್ಕಿ, ಸಕ್ಕರೆ, ತರಕಾರಿ ಕೇಳಿ ಪಡೆದು ರಾತ್ರಿಯೇ ಕಾಡಿನಲ್ಲಿ ಕಣ್ಮರೆಯಾಗಿದ್ದಾರೆ.

    ತಂಡದ ಸದಸ್ಯರು ಮಲಯಾಳಂ, ತಮಿಳು, ತುಳು ಮಾತನಾಡುತ್ತಿದ್ದರು. ನಕ್ಸಲರು ಬಂದ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಉಪ್ಪಿನಂಗಡಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ದೃಢಪಡಿಸಿದ್ದಾರೆ. ದಕ್ಷಿಣ ಕನ್ನಡ ಎಸ್‍ಪಿ ಸುಧೀರ್ ರೆಡ್ಡಿ ಸ್ಥಳಕ್ಕೆ ತೆರಳಿದ್ದು ಇಂದು ಬೆಳಗ್ಗಿನಿಂದ ಎಎನ್‍ಎಫ್ ಪಡೆ ಕೂಂಬಿಂಗ್ ಆರಂಭಿಸಲಿದೆ.

    ಈ ಹಿಂದೆ ಅಂದರೆ 2012ರಲ್ಲಿ ಪುಷ್ಪಗಿರಿ, ಆನೆ ಕರಿಡಾರ್ ನಂತಹ ವಿಷಯಗಳನ್ನು ಕೈಗೆತ್ತಿಕೊಂಡು ಜನರ ವಿಶ್ವಾಸ ಗಳಿಸಲು ನಕ್ಸಲರು ಸುಬ್ರಹ್ಮಣ್ಯ ಸಮೀಪದ ಪಳ್ಳಿಗದ್ದೆಯಲ್ಲಿ ಓಡಾಡಿದ್ದರು. ಚೇರು, ಭಾಗ್ಯ, ಎರ್ಮಾಯಿಲ್ ನಡುತೋಟ ಮುಂತಾದ ಕಡೆಗಳಲ್ಲೂ ಕಾಡಿನಂಚಿನ ಮನೆಗಳಿಗೆ ಬಂದು ಆಹಾರ ಸಾಮಗ್ರಿ ಸಾಗಿಸಿದ್ದರು.

    ಬೇರೆ ಕಡೆಗಳಲ್ಲಿನ ನಕ್ಸಲರ ಮೂಲ ಕಂಡುಕೊಳ್ಳಲು ವಿಫಲರಾಗಿದ್ದ ಎಎನ್‍ಎಫ್ ಸಿಬ್ಬಂದಿಗೆ ಪಳ್ಳಿಗದ್ದೆಗೆ ನಕ್ಸಲರು ಬಂದಿದ್ದು ಪ್ರಬಲ ಪುರಾವೆಯಾಗಿ ದೊರೆತಿತ್ತು. ನಕ್ಸಲರ ಜಾಡು ಹಿಡಿದ ಯೋಧರು, ಬಿಸಿಲೆ ಸಮೀಪ ಎನ್‍ಕೌಂಟರ್ ನಡೆಸಿ ಎಲ್ಲಪ್ಪ ಎಂಬಾತನನ್ನು ಕೊಂದು ಹಾಕಿದ್ದರು.

  • ಬಾಬಾ ಭಕ್ತರೇ ಶಿರಡಿ ಪ್ರಸಾದ ತಿನ್ನೋ ಮುನ್ನ ಎಚ್ಚರ- ಈ ಸುದ್ದಿ ಓದಿ

    ಬಾಬಾ ಭಕ್ತರೇ ಶಿರಡಿ ಪ್ರಸಾದ ತಿನ್ನೋ ಮುನ್ನ ಎಚ್ಚರ- ಈ ಸುದ್ದಿ ಓದಿ

    ಬೆಂಗಳೂರು: ಶಿರಡಿ ಸಾಯಿಬಾಬಾನನ್ನು ನಂಬದ ಜೀವಗಳಿಲ್ಲ. ಬಾಬಾ ದರ್ಶನಕ್ಕೆ, ಅಲ್ಲಿನ ಪ್ರಸಾದ ತಿಂದರೆ ಬದುಕು ಪಾವನ ಅನ್ನೋ ನಂಬಿಕೆ ಕೋಟಿ ಭಕ್ತರದ್ದು. ಆದ್ರೇ ಈಗ ನಂಬಿಕೆಯ ಬುಡವೊಂದು ಅಲ್ಲಾಡುತ್ತಿದೆ. ಕೋಟಿ ಭಕ್ತರು ಬಾಬಾ ಪ್ರಸಾದ ಕಂಡ್ರೆ ಮಾರು ದೂರು ಓಡೋ ಪ್ರಮಾದವೊಂದು ನಡೆದು ಹೋಗಿದೆ.

    ಬಾಬಾ ಭಕ್ತರಾಗಿರುವ ಬೆಂಗಳೂರಿನ ಸದಾಶಿವನಗರದ ನಿವಾಸಿ ಪರಶುರಾಮ್ ಶಿರಡಿಗೆ ತೆರಳಿ ಅಲ್ಲಿಂದ ಮೂವತ್ತು ಪ್ಯಾಕೆಟ್ ಪ್ರಸಾದದ ಪೇಡಾವನ್ನು ಸನ್ನಿಧಿಯಿಂದ ಕಳೆದ ತಿಂಗಳು ತಂದಿದ್ದಾರೆ. ಬಾಬಾ ಪ್ರಸಾದ ತಿಂದ ತಕ್ಷಣ ಅವ್ರಿಗೆ ವಾಂತಿ, ಭೇದಿ, ಹೊಟ್ಟೆನೋವು ಶುರುವಾಗಿದೆ. ಕೂಡಲೇ ಪ್ರಸಾದವನ್ನ ಪರಿಶೀಲಿಸಿ ನೋಡಿದಾಗ ಪೇಡಾದಲ್ಲಿ ಕಪ್ಪು ಮೆಟಲ್‍ನಂತಹ ವಸ್ತು ಪತ್ತೆಯಾಗಿದೆ. ಸುಟ್ಟಾಗ ವಿಚಿತ್ರ ಪ್ಲಾಸ್ಟಿಕ್ ವಾಸನೆ ಬಂದಿದೆ. ಕೂಡಲೇ ಇದನ್ನು ರಾಮಯ್ಯ ಆಸ್ಪತ್ರೆಯ ಲ್ಯಾಬ್‍ಗೆ ತೆಗೆದುಕೊಂಡು ಹೋಗಿ ಪರೀಕ್ಷೆಗೆ ನೀಡಿದ್ದಾರೆ. ಈಗ ಲ್ಯಾಬ್‍ನಿಂದ ಊಹಿಸಲಾರದ ಬಾಬಾ ಪ್ರಸಾದದ ಅಸಲಿಯತ್ತು ಬಯಲಾಗಿದೆ.

    ಏನೇನಿದೆ ಪ್ರಸಾದದಲ್ಲಿ?: ಬಾಬಾ ಪ್ರಸಾದದಲ್ಲಿ ರಾಶಿರಾಶಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಅತ್ಯಂತ ಅಪಾಯಕಾರಿಯಾದ ಸ್ಟೆಪಿಲೋಕಾಕಯ್ ಹಾಗೂ ಸೂಡಾಮೋನಸ್ ಅನ್ನುವ ಬ್ಯಾಡ್ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಸಾಮಾನ್ಯವಾಗಿ ಸೂಡಾಮೋನಸ್ ಗಾಯವಾಗಿರುವ, ಕೀವಾಗಿರುವ ಅಥವಾ ಹುಣ್ಣಾಗಿದ್ರೆ ಈ ಬ್ಯಾಕ್ಟೀರಿಯಾ ಇರುತ್ತೆ. ಇದು ಪ್ರಸಾದದಲ್ಲಿ ಕಂಡುಬಂದಿದೆ ಅಂದ್ರೆ ಪ್ರಸಾದ ತಯಾರಿಸುವ ವ್ಯಕ್ತಿ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಂಡಿಲ್ಲ. ಅದ್ರಿಂದ ಪ್ರಸಾದವೇ ವಿಷವಾಗಿ ಮಾರ್ಪಾಡಾಗಿದೆ ಅನ್ನೋ ಶಾಕಿಂಗ್ ಸುದ್ದಿ ಲ್ಯಾಬ್ ರಿಪೋರ್ಟ್‍ನಲ್ಲಿ ಬಯಲಾಗಿದೆ. ಇದರ ಜೊತೆಗೆ ಪಾಲ್ಮೇಟಿಕ್ ಆ್ಯಸಿಡ್ ಅಂಶವೂ ಇದೆ. ಪೇಡಾಗೆ ಹಾಲು ಮಿಕ್ಸ್ ಮಾಡೋ ಬದಲು ವನಸ್ಪತಿ ಎಣ್ಣೆ ಬಳಕೆ ಮಾಡಿದ್ದು ಇನ್ನೊಂದು ಅನಾಹುತಕ್ಕೆ ಕಾರಣವಾಗಿದೆ.

    ಈ ಪ್ರಸಾದ ತಿಂದ್ರೆ ಏನಾಗುತ್ತೆ?: ಈ ವಿಷಯುಕ್ತ, ಕಲಬೆರೆಕೆ ಪ್ರಸಾದ ತಿಂದ್ರೆ ಹೊಟ್ಟೆನೋವು, ವಾಂತಿ-ಬೇಧಿ, ಜ್ವರ ಬಾಯಿಯ ಹುಣ್ಣು ಸೇರಿದಂತೆ ಟೈಫಾಯ್ಡ್, ಜಾಂಡೀಸ್‍ನಂತಹ ಕಾಯಿಲೆ ಬರಲಿದೆ. ಇಲ್ಲಿ ಸಂಪೂರ್ಣವಾಗಿ ಆಹಾರ ಸುರಕ್ಷತೆ ಕಾಯ್ದೆಯನ್ನು ಉಲ್ಲಂಘನೆ ಮಾಡಲಾಗಿದೆ ಅಂತಾ ವೈದ್ಯರು ಹೇಳ್ತಾರೆ. ಇನ್ನು ಲ್ಯಾಬ್ ಟೆಸ್ಟ್‍ಗೆ ಕೊಟ್ಟ ಸಾಯಿ ಭಕ್ತರಂತೂ ಈ ರಿಪೋರ್ಟ್‍ನಿಂದ ಕಂಗಾಲಾಗಿದ್ದಾರೆ.