Tag: ship

  • ಕೊರೊನಾ ಎಫೆಕ್ಟ್ – ಸಮುದ್ರ ಮಧ್ಯೆ ಸಿಲುಕಿದ್ದ ಮಂಗ್ಳೂರಿನ ಮಧುಮಗ ಬಿಡುಗಡೆ

    ಕೊರೊನಾ ಎಫೆಕ್ಟ್ – ಸಮುದ್ರ ಮಧ್ಯೆ ಸಿಲುಕಿದ್ದ ಮಂಗ್ಳೂರಿನ ಮಧುಮಗ ಬಿಡುಗಡೆ

    – ಶೀಘ್ರದಲ್ಲೇ ನಡೆಯಲಿದೆ ಮುಂದೂಡಲ್ಪಟ್ಟ ವಿವಾಹ

    ಮಂಗಳೂರು: ಕೊರೊನಾ ವೈರಸ್ ಎಫೆಕ್ಟ್‌ನಿಂದ ಸಮುದ್ರ ಮಧ್ಯೆ ದಿಗ್ಬಂಧನಕ್ಕೊಳಗಾಗಿದ್ದ ಹಡಗನ್ನು ಹಾಂಗ್ ಕಾಂಗ್ ಸರ್ಕಾರ ಇಂದು ಬಿಡುಗಡೆಗೊಳಿಸಿದೆ. ಹೀಗಾಗಿ ಆ ಹಡಗಿನಲ್ಲಿದ್ದ ಸಿಬ್ಬಂದಿ ಮಂಗಳೂರಿನ ಕುಂಪಲ ನಿವಾಸಿಗೆ ಇಂದು ಮದುವೆಯಾಗಬೇಕಿತ್ತು. ಇದೀಗ ಮುಂದೂಡಲ್ಪಟ್ಟ ವಿವಾಹ ಶೀಘ್ರದಲ್ಲೇ ನಡೆಯಲಿದೆ.

    ಸಿಂಗಾಪುರ ಮೂಲದ ಸ್ಟಾರ್ ಕ್ರೂಝ್‍ನಲ್ಲಿ ಮಂಗಳೂರಿನ ಕುಂಪನ ನಿವಾಸಿ ಗೌರವ್ ಕಳೆದ ಕೆಲ ವರ್ಷದಿಂದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 10 ಅಂದರೆ ಇಂದು ಮಂಗಳೂರಿನಲ್ಲಿ ಗೌರವ್‍ಗೆ ಮದುವೆ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್‍ನ ಹಿನ್ನೆಲೆಯಲ್ಲಿ ಗೌರವ್ ಇದ್ದ ಸ್ಟಾರ್ ಕ್ರೂಝ್‍ನ್ನು ಹಾಂಗ್ ಕಾಂಗ್ ಸಮುದ್ರ ಮಧ್ಯೆ ಅಲ್ಲಿನ ಸರ್ಕಾರ ತಡೆದು ನಿಲ್ಲಿಸಿತ್ತು. ಇದನ್ನೂ ಓದಿ: ಮದುವೆಗೂ ತಟ್ಟಿದ ಕೊರೊನಾ ವೈರಸ್

    ಕಳೆದ ಎಂಟು ದಿನದಿಂದ ಸಮುದ್ರ ಮಧ್ಯೆಯಲ್ಲೇ 1,700 ಪ್ರವಾಸಿಗರು ಸೇರಿ ಸಿಬ್ಬಂದಿ ದಿಗ್ಭಂದನಕ್ಕೊಳಗಾಗಿದ್ದರು. ಹಾಂಗ್ ಕಾಂಗ್, ಸಿಂಗಪುರ, ಥೈವಾನ್ ನಡುವೆ ಸಂಚರಿಸುವ ಕ್ರೂಝ್ ಆಗಿರುವುದರಿಂದ ಅದರಲ್ಲಿದ್ದ ಎಲ್ಲರನ್ನೂ ಕೊರೊನಾ ವೈರಸ್ ಇರುವ ಶಂಕೆಯಿಂದ ತಪಾಸಣೆ ನಡೆಸಲಾಗಿತ್ತು. ಹೀಗಾಗಿ ಇಂದು ನಿಗದಿಯಾಗಿದ್ದ ಗೌರವ್ ಅವರ ಮದುವೆಯನ್ನು ಅವರು ಬರದೇ ಇರುವ ಕಾರಣಕ್ಕೆ ಮುಂದೂಡಲಾಗಿತ್ತು.

    ಇಂದು ಹಡಗಿನಲ್ಲಿದ್ದ ಎಲ್ಲರ ವರದಿಯಲ್ಲೂ ನೆಗೆಟಿವ್ ಬಂದಿರುವುದರಿಂದ ಹಗಡನ್ನು ಬಿಡುಗಡೆಗೊಳಿಸಲಾಗಿದೆ. ಹೀಗಾಗಿ ಕ್ರೂಝ್‍ನಲ್ಲಿದ್ದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದು, ಗೌರವ್ ಅವರು ಶೀಘ್ರದಲ್ಲೇ ಊರಿಗೆ ಬರಲಿದ್ದಾರೆ. ಹೀಗಾಗಿ ಮುಂದೂಡಲ್ಪಟ್ಟ ಮದುವೆ ಶೀಘ್ರದಲ್ಲೇ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.

  • ಕಾರವಾರದ ಯುವಕನಿಗೆ ದಿಗ್ಭಂಧನ – ಪೋಷಕರು ಜಿಲ್ಲಾಡಳಿತದ ಮೊರೆ

    ಕಾರವಾರದ ಯುವಕನಿಗೆ ದಿಗ್ಭಂಧನ – ಪೋಷಕರು ಜಿಲ್ಲಾಡಳಿತದ ಮೊರೆ

    ಕಾರವಾರ: ಕೊರೊನಾ ವೈರಸ್ ಆತಂಕ ಹಿನ್ನೆಲೆಯಲ್ಲಿ ಜಪಾನಿನ ಯುಕೋಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಯುವಕನಿದ್ದ ಹಡಗನ್ನು ತಡೆ ಹಿಡಿದು ಘಟನೆ ನಡೆದಿದ್ದು, ತಮ್ಮ ಮಗನನ್ನು ರಕ್ಷಿಸಿ ಕರೆ ತರುವಂತೆ ಅವರ ಪೋಷಕರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

    ಜಪಾನಿನ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಕಾರವಾರದ ಪದ್ಮನಾಭನಗರದ ಯುವಕ ಅಭಿಷೇಕ್ ಕಳೆದ ಆರು ತಿಂಗಳಿಂದ ಸ್ಟಿವರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಡಗು ಪ್ರವಾಸಿಗರನ್ನು ಕರೆದುಕೊಂಡು ಸಿಂಗಾಪುರ ಹಾಗೂ ಚೀನಾಕ್ಕೆ ಪ್ರವಾಸ ಮುಗಿಸಿ, ಮತ್ತೆ ಚೀನಾಗೆ 2,600 ಜನ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು.

    ಈ ವೇಳೆ ಮೊದಲು 10 ಜನ ನಂತರ 15 ಹೀಗೆ ಒಟ್ಟು 40 ಜನರಿಗೆ ಸೊಂಕು ಹರಡಿತ್ತು. ಈ ಕಾರಣದಿಂದ ಹಡಗನ್ನು ಕಳೆದ ಆರು ದಿನದಿಂದ ಸಮುದ್ರದಲ್ಲೇ ತಡೆ ಹಿಡಿದಿದ್ದು, ದಿಬ್ಭಂದನದಲ್ಲಿ ಇರಿಸಲಾಗಿದೆ. ಹಡಗಿನ ಹೋಟಲೊಂದರಲ್ಲಿ ಸ್ಟಿವರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಭಿಷೇಕ್ ವೈರಸ್‍ನ ಭಯದಿಂದ ಇತ್ತ ಮನೆಗೂ ಬಾರದೆ ಚೈನಾಕ್ಕೂ ಹೋಗದಂತಾಗಿದೆ.

    ಮನೆಯವರಿಗೆ ಸಂಪರ್ಕಿಸಿ ತನ್ನನ್ನು ದೇಶಕ್ಕೆ ಕರೆಸಿಕೊಳ್ಳುವಂತೆ ಅಭಿಷೇಕ್ ತನ್ನ ಪೋಷಕರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇನ್ನು ಸೋಂಕು ತಗಲದ ತಮ್ಮ ಮಗನನ್ನು ರಕ್ಷಿಸುವಂತೆ ಹಾಗೂ ಮರಳಿ ಭಾರತಕ್ಕೆ ಕರೆ ತರುವಂತೆ ಮನವಿ ಮಾಡಿದ್ದಾರೆ.

  • ವಿಮೆ ಹಣಕ್ಕಾಗಿ ಡ್ರೆಜ್ಜಿಂಗ್ ಹಡಗು ಮುಳಗಲು ಬಿಟ್ಟರಾ?

    ವಿಮೆ ಹಣಕ್ಕಾಗಿ ಡ್ರೆಜ್ಜಿಂಗ್ ಹಡಗು ಮುಳಗಲು ಬಿಟ್ಟರಾ?

    ಮಂಗಳೂರು: ಕೆಲಸಕ್ಕೆ ಬಾರದ ಡ್ರೆಜ್ಜಿಂಗ್ ಹಡಗೊಂದನ್ನು ಮಂಗಳೂರು ಬಳಿಯ ಸಮುದ್ರದಲ್ಲಿ ಮುಳುಗಿಸಿ ವಿಮೆ ಪರಿಹಾರ ಪಡೆಯುವ ಹುನ್ನಾರ ಕೇಳಿಬಂದಿದೆ.

    ಮಂಗಳೂರಿನ ಸುರತ್ಕಲ್ ಬಳಿಯ ಸಮುದ್ರ ಮಧ್ಯೆ ಕಳೆದ ಆರು ತಿಂಗಳಿಂದ ಮುಂಬೈ ಮೂಲದ ದಿ ಮರ್ಕೇಟರ್ ಲಿಮಿಟೆಡ್ ಕಂಪನಿಗೆ ಸೇರಿದ ಭಗವತಿ ಪ್ರೇಮ್ ಹೆಸರಿನ ಡ್ರೆಜ್ಜಿಂಗ್ ಹಡಗು ಲಂಗರು ಹಾಕಿದೆ. ಈ ಬಗ್ಗೆ ಮಂಗಳೂರಿನ ಎನ್‍ಎಂಪಿಟಿ ಬಂದರು ಅಧಿಕಾರಿಗಳು ಹಡಗು ತೆರವು ಮಾಡುವಂತೆ ಸೂಚನೆ ನೀಡಿದ್ದರೂ ಕಂಪನಿ ನಿರ್ಲಕ್ಷ್ಯ ತೋರಿತ್ತು.

    ಮಳೆಗಾಲದಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗುವ ಬಗ್ಗೆಯೂ ಎಚ್ಚರಿಕೆ ನೀಡಲಾಗಿತ್ತು. ಎರಡು ದಿನಗಳ ಹಿಂದೆ ಹಡಗಿನಲ್ಲಿ ಸೋರಿಕೆ ಆಗುತ್ತಿದ್ದು ಅಪಾಯಕ್ಕೀಡಾಗಿರುವ ಬಗ್ಗೆ ಎನ್‍ಎಂಪಿಟಿ ಅಧಿಕಾರಿಗಳಿಗೆ ರಕ್ಷಣೆಗೆ ಕರೆ ಬಂದಿತ್ತು. ಇದೀಗ ಹಡಗಿನಲ್ಲಿದ್ದ 15 ಮಂದಿ ಕಾರ್ಮಿಕರನ್ನು ರಕ್ಷಿಸಿ, ಹಡಗನ್ನು ಸಮುದ್ರ ಮಧ್ಯದಿಂದ ಸುರತ್ಕಲ್ ಕಡಲ ತೀರಕ್ಕೆ ತಂದು ನಿಲ್ಲಿಸಲಾಗಿದೆ.

    ಒಂದು ವೇಳೆ ಹಡಗು ಒಡೆದು ಸಮುದ್ರ ಪಾಲಾದರೆ ಅಪಾರ ಪ್ರಮಾಣದ ಮಾಲಿನ್ಯವಾಗುತ್ತದೆ. ಹಾಗಿದ್ದರೂ ಎನ್‍ಎಂಪಿಟಿ ಅಧಿಕಾರಿಗಳು ಹಡಗಿನಿಂದ ಯಾವುದೇ ಅಪಾಯ ಇಲ್ಲವೆಂದು ಪ್ರಕಟಣೆ ನೀಡಿದ್ದಾರೆ. ಹೀಗಾಗಿ ಕಂಪನಿ ಮತ್ತು ಎನ್‍ಎಂಪಿಟಿ ಅಧಿಕಾರಿಗಳು ಸೇರಿ ಹಡಗನ್ನು ಮುಳುಗಿಸಿ ಕೋಟ್ಯಂತರ ವಿಮಾ ಹಣವನ್ನು ದೋಚಲು ಪ್ಲಾನ್ ಮಾಡಿರುವ ಶಂಕೆ ವ್ಯಕ್ತವಾಗಿದೆ.

  • ಲಕ್ಷದ್ವೀಪಕ್ಕೆ ಬರುತ್ತಿದ್ದಾರೆ 15 ಐಸಿಸ್ ಉಗ್ರರು – ಕೇರಳ ಕರಾವಳಿಯಲ್ಲಿ ಹೈ ಅಲರ್ಟ್

    ಲಕ್ಷದ್ವೀಪಕ್ಕೆ ಬರುತ್ತಿದ್ದಾರೆ 15 ಐಸಿಸ್ ಉಗ್ರರು – ಕೇರಳ ಕರಾವಳಿಯಲ್ಲಿ ಹೈ ಅಲರ್ಟ್

    ತಿರುವನಂತಪುರಂ: ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದ ನಂತರ ಲಕ್ಷದ್ವೀಪಕ್ಕೆ 15 ಐಸಿಸ್ ಉಗ್ರರು ಬರುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ಬೆನ್ನಲ್ಲೇ ಕೇರಳದ ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    15 ಜನ ಇಸ್ಲಾಮಿಕ್ ಸ್ಟೇಟ್ ಉಗ್ರರು ಶ್ರೀಲಂಕಾದಿಂದ ಬಿಳಿ ಬಣ್ಣದ ದೋಣಿಯಲ್ಲಿ ಲಕ್ಷದ್ವೀಪದ ಕಡೆ ತೆರಳುತ್ತಿದ್ದಾರೆ. ಅವರು ಲಕ್ಷದ್ವೀಪದಲ್ಲಿ ಇದ್ದುಕೊಂಡು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಬಹುದು ಎಂಬ ಭಾರತೀಯ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ. ಮಾರ್ಚ್ 23 ರಂದು ಶ್ರೀಲಂಕಾ ಈ ಸೂಚನೆ ನೀಡಿದ ಬೆನ್ನಲ್ಲೇ ಕೇರಳದ ಕೋಸ್ಟಲ್ ಪೊಲೀಸ್ ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ.

    ಶ್ರೀಲಂಕಾದಲ್ಲಿ ಏಪ್ರಿಲ್ 21 ರಂದು ನಡೆದ ಸರಣಿ ಬಾಂಬ್ ಸ್ಫೋಟದ ನಂತರ ನಾವು ಕರಾವಳಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅನುಮಾನಾಸ್ಪದ ಚಟುವಟಿಕೆಗಳು ಕರಾವಳಿ ಪ್ರದೇಶದಲ್ಲಿ ಕಂಡು ಬಂದರೆ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

    ಸಮುದ್ರದಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಹಡಗುಗಳು ಕಂಡಬಂದರೆ ಆದರ ಬಗ್ಗೆ ಎಚ್ಚರಿಕೆ ವಹಿಸುವಂತೆ ಕರಾವಳಿ ಪೊಲೀಸ್ ಠಾಣೆಗೆ ಸೂಚನೆ ನೀಡಲಾಗಿದೆ.

    ಶ್ರೀಲಂಕಾದಲ್ಲಿ ಚರ್ಚ್ ಮತ್ತು ಹೋಟೆಲ್‍ಗಳು ಸೇರಿ ಎಂಟು ಕಡೆಯಲ್ಲಿ ಸರಣಿ ಅತ್ಮಾಹುತಿ ಬಾಂಬ್ ಸ್ಫೋಟಿಸಲಾಗಿತ್ತು. ಈ ಬಾಂಬ್ ದಾಳಿಯಲ್ಲಿ ಕನ್ನಡಿಗರೂ ಸೇರಿ 250 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈ ದಾಳಿಯ ಹೊಣೆಯನ್ನು ಇದೇ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.

  • ಚೇಸ್ ಮಾಡಿ ಪಾಕ್ ಹಡಗನ್ನು ನಿಲ್ಲಿಸಿದ ಭಾರತ – 500 ಕೋಟಿ ಮೌಲ್ಯದ ಮಾದಕ ವಸ್ತು ವಶ

    ಚೇಸ್ ಮಾಡಿ ಪಾಕ್ ಹಡಗನ್ನು ನಿಲ್ಲಿಸಿದ ಭಾರತ – 500 ಕೋಟಿ ಮೌಲ್ಯದ ಮಾದಕ ವಸ್ತು ವಶ

    ನವದೆಹಲಿ: ಪಾಕಿಸ್ತಾನದ ಹಡಗಿನಲ್ಲಿ ಸಾಗಿಸುತ್ತಿದ್ದ 500 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಭಾರತದ ಕೋಸ್ಟ್ ಗಾರ್ಡ್ ವಶಪಡಿಸಿಕೊಂಡಿದೆ.

    ಪಾಕಿಸ್ತಾನದ “ಅಲ್ ಮದಿನಾ” ಹೆಸರಿನ ಹಡಗು ಗುಜರಾತಿನ ಜಾಕೌ ಕರವಾಳಿಯ ಭಾಗದಲ್ಲಿ ಮಾದಕ ವಸ್ತುಗಳನ್ನು ರಫ್ತು ಮಾಡಲು ಬಂದು ನಿಂತಿದೆ ಎಂದು ಗುಪ್ತಚರ ಇಲಾಖೆ ಖಚಿತ ಮಾಹಿತಿ ನೀಡಿತ್ತು. ಈ ಮಾಹಿತಿಯ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಈ ಹಡಗನ್ನು ಜಪ್ತಿ ಮಾಡಲು ಎರಡು ವೇಗದ ಬೋಟ್‍ನೊಂದಿಗೆ ಸಮುದ್ರಕ್ಕೆ ಇಳಿದಿದೆ.

    ಭಾರತದ ಬೋಟ್‍ಗಳನ್ನು ತಮ್ಮ ಕಡೆ ಬರುತ್ತಿರುವುದನ್ನು ಗಮನಿಸಿದ ಪಾಕ್ ಹಡಗು ವಾಪಸ್ ತಿರುಗಿಸಿ ಪಾಕ್ ಕರಾವಳಿಯತ್ತ ಮುನ್ನುಗ್ಗಿದೆ. ಈ ವೇಳೆ ಭಾರತದ ಬೋಟ್‍ಗಳು ಚೇಸ್ ಮಾಡಿ ಆ ಹಡಗನ್ನು ತಡೆದು ನಿಲ್ಲಿಸಿದೆ.

    ಈ ವೇಳೆ ಆ ಹಡಗಿನಲ್ಲಿದ್ದ ವ್ಯಕ್ತಿಗಳು ಕೆಲವು ಚೀಲಗಳನ್ನು ಸಮುದ್ರಕ್ಕೆ ಎಸೆದಿದ್ದಾರೆ. ಸಮುದ್ರಕ್ಕೆ ಎಸೆದಿದ್ದ 7 ಚೀಲಗಳನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಹಡಗಿನಿಂದ ವಶಪಡಿಸಿಕೊಂಡ ವಸ್ತುಗಳನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದಾಗ ಈ ಮಾದಕ ವಸ್ತುಗಳ ಸುಮಾರು 400 ರಿಂದ 500 ಕೋಟಿ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ. ಹಡಗಿನಲ್ಲಿದ್ದ ವ್ಯಕ್ತಿಗಳನ್ನು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

    ಮೂರು ತಿಂಗಳಲ್ಲಿ 2 ಬಾರಿ ಗುಜರಾತಿನ ಜಾಕೌ ಕರವಾಳಿಯಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಮಾರ್ಚ್‍ನಲ್ಲಿ 100 ಕಿಲೋಗ್ರಾಮ್ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು.

    2017ರ ಜುಲೈನಲ್ಲಿ ಪನಾಮ ಎಂಬ ಹಡಗಿನಿಂದ 3,500 ಕೋಟಿ ಬೆಲೆ ಬಾಳುವ 1,500 ಕಿಲೋಗ್ರಾಮ್ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು. ಇದು ಗುಜರಾತ್ ಕರಾವಳಿ ಪ್ರದೇಶದಲ್ಲಿ ವಶಪಡಿಸಿಕೊಂಡ ದೊಡ್ಡ ಮೊತ್ತದ ಮಾದಕ ವಸ್ತು ಎಂಬುದಾಗಿ ವರದಿಯಾಗಿದೆ.

  • ರಜಾದಿನ ಮುಗ್ಸಿ ಬರುತ್ತಿದ್ದಂತೆ ಶವವಾಗಿ ನೌಕಾ ಸೇನೆಯ ನಾವಿಕ ಪತ್ತೆ

    ರಜಾದಿನ ಮುಗ್ಸಿ ಬರುತ್ತಿದ್ದಂತೆ ಶವವಾಗಿ ನೌಕಾ ಸೇನೆಯ ನಾವಿಕ ಪತ್ತೆ

    ಮುಂಬೈ: ಐಎನ್‍ಎಸ್ ತಲ್ವಾರ್ ನೌಕೆಯಲ್ಲಿ ಅನುಮಾನಾಸ್ಪದವಾಗಿ 21 ವರ್ಷದ ನಾವಿಕರೊಬ್ಬರು ಮೃತಪಟ್ಟಿದ್ದಾರೆ.

    ರಾಹುಲ್ ಚೌಧರಿ(21) ಮೃತ ನಾವಿಕ. ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ತನ್ನ ಪೋಷಕರೊಂದಿಗೆ ರಜಾದಿನ ಕಳೆದು ಬಂದಿದ್ದ ರಾಹುಲ್ ಚೌಧರಿ ನಿಗೂಢವಾಗಿ ಮೃತಪಟ್ಟಿದ್ದಾರೆ.

    ಚೌಧರಿ ಹೇಗೆ ಮೃತಪಟ್ಟಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ಮೆಟ್ಟಿಲನ್ನು ಹತ್ತುವ ಸಂದರ್ಭದಲ್ಲಿ ಚೌಧರಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದು ಎಂದು ರಕ್ಷಣಾ ತಂಡದ ಮೂಲಗಳು ತಿಳಿಸಿವೆ.

    ರಕ್ತದ ಮಡುವಿನಲ್ಲಿ ಚೌಧರಿ ಬಿದ್ದಿದ್ದನ್ನು ನೋಡಿ ಸಹೋದ್ಯೋಗಿ ತಕ್ಷಣ ಇತರ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಚೌಧರಿಯನ್ನು ಐಎನ್‍ಎಸ್ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಚೌಧರಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಚೌಧರಿ ತಂದೆ ರಮೇಶ್ ಚಂದ್ರ ಹಾಗೂ ಚಿಕ್ಕಪ್ಪ ರಾಕೇಶ್ ಕುಮಾರ್ ಮುಂಬೈಗೆ ಆಗಮಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ. ಮೃತ ಚೌಧರಿ ತಲೆಯ ಮೇಲೆ ಗಾಯದ ಗುರುತು ಬಿದ್ದಿದ್ದು, ಮೂಗು ಮತ್ತು ಕಿವಿಗಳಿಂದ ರಕ್ತ ಬರುತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಮೃತ ಚೌಧರಿ ಸಾವಿನ ತನಿಖೆಗೆ ಒಂದು ತನಿಖಾ ತಂಡವನ್ನು ನೇಮಿಸಲಾಗಿದೆ. ಇದು ಒಂದು ಆಕಸ್ಮಿಕ ಘಟನೆಯೇ ಅಥವಾ ಯಾರಾದರೂ ನೌಕೆಯಲ್ಲಿ ಅವರನ್ನು ಹತ್ಯೆ ಮಾಡಿದ್ದಾರಾ ಎನ್ನುವುದು ಖಚಿತವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಕಾನೂನಿನ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಸಂಶೋಧನಾ ಹಡಗಿಗೆ ಬೆಂಕಿ- 16 ವಿಜ್ಞಾನಿಗಳು ಸೇರಿದಂತೆ 46 ಜನರ ರಕ್ಷಣೆ

    ಸಂಶೋಧನಾ ಹಡಗಿಗೆ ಬೆಂಕಿ- 16 ವಿಜ್ಞಾನಿಗಳು ಸೇರಿದಂತೆ 46 ಜನರ ರಕ್ಷಣೆ

    ಮಂಗಳೂರು: ಬೆಂಕಿ ಅವಘಡಕ್ಕೀಡಾದ ಸಾಗರ ಸಂಶೋಧನ ಹಡಗಿನಲ್ಲಿ ಸಿಲುಕಿದ್ದ 16 ವಿಜ್ಞಾನಿಗಳು ಸೇರಿದಂತೆ 46 ಜನರನ್ನು ಕರಾವಳಿಯ ಕಾವಲು ಪಡೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮಂಗಳೂರು ಕಡಲ ತೀರದಿಂದ 40 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು.

    ಕೊಚ್ಚಿಯಿಂದ ಸಂಶೋಧನೆಗಾಗಿ ಮಂಗಳೂರಿಗೆ ಬಂದಿದ್ದ ಹಡಗು ಹಿಂದಿರುಗುತ್ತಿದ್ದ ವೇಳೆ ಬೆಂಕಿ ಅವಘಡಕ್ಕೆ ತುತ್ತಾಗಿತ್ತು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಶುಕ್ರವಾರ ರಾತ್ರಿ ಸುಮಾರು 10 ಗಂಟೆಗೆ ಮಂಗಳೂರು ಕೇಂದ್ರ ಕಚೇರಿಗೆ ಲಭ್ಯವಾಗಿತ್ತು. ಕೂಡಲೇ ರಕ್ಷಣಾ ಕಾರ್ಯಚರಣೆ ಆರಂಭಿಸಿದ ಸಿಬ್ಬಂದಿ ಐಸಿಜಿಎಸ್ ವಿಕ್ರಂ ಮತ್ತು ಸುಜಯ್ ಮೂಲಕ ಘಟನಾ ಸ್ಥಳಕ್ಕೆ ತೆರಳಿದ್ದರು.

    ಬೆಂಕಿಯನ್ನು ನಂದಿಸಿ, ಹಡಗಿನಲ್ಲಿದ್ದ 16 ವಿಜ್ಞಾನಿಗಳು ಹಾಗು 30 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಬೆಂಕಿ ಸಂಪೂರ್ಣ ನಂದಿದ ಬಳಿಕ ಹಡಗನ್ನು ಮಂಗಳೂರಿಗೆ ತರಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ಮುಳುಗುವ ಹಡಗು, ಅದರಲ್ಲಿ ಯಾರಾದ್ರೂ ಕುಳಿತುಕೊಳ್ತರಾ: ಸಿದ್ದರಾಮಯ್ಯ ವ್ಯಂಗ್ಯ

    ಬಿಜೆಪಿ ಮುಳುಗುವ ಹಡಗು, ಅದರಲ್ಲಿ ಯಾರಾದ್ರೂ ಕುಳಿತುಕೊಳ್ತರಾ: ಸಿದ್ದರಾಮಯ್ಯ ವ್ಯಂಗ್ಯ

    ಬಾಗಲಕೋಟೆ: ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ಮುಳುಗುವ ಹಡಗಿನಂತೆ ಆಗಿದೆ. ಮುಳುಗುವ ಹಡಗಿನಲ್ಲಿ ಯಾರಾದ್ರೂ ಕುಳಿತುಕೊಳ್ಳುತ್ತಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ಸಂಪುಟ ವಿಸ್ತರಣೆ ಬಳಿಕ ಬಿಜೆಪಿ ಆಪರೇಷನ್ ಕಮಲ ಪ್ಲಾನ್ ಮಾಡುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾರೂ ರಾಜೀನಾಮೆ ಕೊಡಲ್ಲ, ಅತೃಪ್ತಿ ಯಾರಲ್ಲೂ ಇಲ್ಲ. ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ಮ್ಯಾನ್. ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸ ನನಗಿದೆ. ಮುಂದಿನ ಸಂಪುಟ ವಿಸ್ತರಣೆ ವೇಳೆಯಲ್ಲಿ ಈ ಬಾರಿ ಸಚಿವ ಸ್ಥಾನ ವಂಚಿತರಿಗೆ ಅವಕಾಶ ನೀಡಲಾಗವುದು ಎಂದು ತಿಳಿಸಿದರು.

    ಇದೇ ವೇಳೆ ರಾಮಲಿಂಗಾ ರೆಡ್ಡಿ ಅವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ರಾಮಲಿಂಗಾ ರೆಡ್ಡಿ ಅವರು ಹಿರಿಯರು. ಅವರಿಗೆ ಸಹಜವಾಗಿ ಸಚಿವ ಸ್ಥಾನ ಸಿಗದೇ ಇರುವುದು ಅಸಮಾಧಾನ ಇದೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಆದರೆ ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗದಂತೆ ಯಾರು ಷಡ್ಯಂತ್ರ ಮಾಡಿಲ್ಲ ಎಂದರು.

    ಬಿ.ಸಿ.ಪಾಟೀಲ, ಎಚ್.ಕೆ.ಪಾಟೀಲ ಅಸಮಾಧಾನ ವಿಚಾರವಾಗಿ ಮಾತನಾಡಿ, ಕೆಲವರಿಗೆ ಅಸಮಾಧಾನ ಆಗಿರುವುದು ಸಹಜ. ಎಲ್ಲರೂ ಮಂತ್ರಿ ಆಗಲು ಯೋಗ್ಯರೆ ಇದ್ದಾರೆ. ಆದರೆ ಎಲ್ಲರನ್ನೂ ಮಂತ್ರಿ ಮಾಡಲು ಆಗಲ್ಲ. ಸದ್ಯ ಆರು ಜನರನ್ನು ಮಾಡಿದ್ದೇವೆ. ಲೋಕಸಭಾ ಬಳಿಕ ಮತ್ತೆ ವಿಸ್ತರಣೆ ಆಗುತ್ತೆ ಎಂದು ಹೇಳಿದರು.

    ಉಳಿದಂತೆ ಸಂಪುಟ ವಿಸ್ತರಣೆ ಮಾತ್ರ ಆಗಿದ್ದು, ಯಾರಿಗೆ ಯಾವ ಸಚಿವ ಖಾತೆ ನೀಡಬೇಕೆಂದು ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 2003ರಲ್ಲಿ ಮುಳುಗಿದ್ದ ಹಡಗು ಕಾರವಾರದ ಲೈಟ್ ಹೌಸ್‍ನಲ್ಲಿ ಪತ್ತೆ

    2003ರಲ್ಲಿ ಮುಳುಗಿದ್ದ ಹಡಗು ಕಾರವಾರದ ಲೈಟ್ ಹೌಸ್‍ನಲ್ಲಿ ಪತ್ತೆ

    ಕಾರವಾರ: ದುರಂತಕ್ಕೀಡಾಗಿ ಇಬ್ಬರನ್ನು ಬಲಿ ತೆಗೆದುಕೊಂಡು ಸಮುದ್ರದಿಂದ ಮೇಲೆತ್ತಲಾಗದೇ ಅರ್ಧ ಭಾಗವನ್ನು ಬಿಟ್ಟು ಹೋಗಿದ್ದ ಹಡಗು ಈಗ ಕಾರವಾರದ ಲೈಟ್ ಹೌಸ್ ನಲ್ಲಿ ಪತ್ತೆಯಾಗಿದೆ.

    ಸಮುದ್ರದಲ್ಲಿ ಎದ್ದ ಬಿರುಗಾಳಿಗೆ 2003ರಲ್ಲಿ ಓಷನ್ ಇರಾನಿ ಹೆಸರಿನ ಕಚ್ಚಾ ತೈಲ ಹಡಗು ಕಾರವಾರದ ಬಂದರಿಗೆ ಬರುವ ವೇಳೆ ಇಲ್ಲಿನ ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ದ್ವೀಪದ ಕಲ್ಲುಬಂಡೆಗೆ ಅಪ್ಪಳಿಸಿ ಸಮುದ್ರದಲ್ಲಿ ಮುಳುಗಿತ್ತು.

    ಈ ವೇಳೆ ಹದಿನೈದು ಜನರನ್ನು ರಕ್ಷಿಸಿದ್ದು ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ನಂತರ ಹಡಗಿನ ಅರ್ಧ ಭಾಗವನ್ನು ತುಂಡರಿಸಿ ಉಳಿದ ಭಾಗವನ್ನು ಮೇಲೆತ್ತಲಾಗದೆ ಅಲ್ಲಿಯೇ ಬಿಡಲಾಗಿತ್ತು. ಈಗ ಈ ಹಡಗಿನ ಅವಶೇಷಗಳಲ್ಲಿ ಬಲು ಅಪರೂಪದ ಹವಳದ ದಿಬ್ಬಗಳು ಬೆಳೆದಿದ್ದು ಕೋಟಿ ಕೋಟಿಗೆ ಬೆಲೆ ಬಾಳುತ್ತಿದೆ. ಹೀಗಾಗಿ ಇದೀಗ ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

    ಇಂದು ಲೈಟ್ ಹೌಸ್ ಬಳಿ ನೇತ್ರಾಣಿ ಅಡ್ವೆಂಚರ್ ನ ಸಿಬ್ಬಂದಿ ಸ್ಕೂಬಾ ಡೈ ಮಾಡಿದಾಗ ಈ ಹಡಗು ಹಾಗೂ ಹವಳದ ದಿಬ್ಬ ಪತ್ತೆಯಾಗಿದ್ದು ಜನರನ್ನು ಸೆಳೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಡಗಿನ ಟ್ಯಾಂಕರ್ ಒಡೆದು, ಸಮುದ್ರ ಸೇರಿದ ತೈಲ

    ಹಡಗಿನ ಟ್ಯಾಂಕರ್ ಒಡೆದು, ಸಮುದ್ರ ಸೇರಿದ ತೈಲ

    ಮಂಗಳೂರು: ನಗರದ ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್‍ಎಂಪಿಟಿ) ಬಂದರಿನಲ್ಲಿ ಹಡಗಿನ ಟ್ಯಾಂಕರ್ ಒಡೆದ ಪರಿಣಾಮ ಸುಮಾರು 150 ಲೀಟರಿಗೂ ಅಧಿಕ ಪ್ರಮಾಣದ ತೈಲ ಸಮುದ್ರಕ್ಕೆ ಸೇರಿದೆ.

    ಶ್ರೀಲಂಕಾದ ಕೊಲಂಬೋದಿಂದ ಬಂದಿದ್ದ ಎಂ.ವಿ. ಎಕ್ಸ್‌ಪ್ರೆಸ್‌ ಬ್ರಹ್ಮಪುತ್ರ ಹಡಗಿನ ಟ್ಯಾಂಕರ್ ಒಡೆದ ಪರಿಣಾಮ, 150 ಲೀಟರಿಗೂ ಅಧಿಕ ಪ್ರಮಾಣದ ತೈಲ ಸಮುದ್ರ ಸೇರಿದೆ. ನಗರದ ಎನ್‍ಎಂಪಿಟಿ ಬಂದರಿನಿಂದ ಕಂಟೈನರ್ ಲೋಡ್ ಮಾಡಿ ಹಿಂದಿರುಗುವ ವೇಳೆ ಈ ಅವಘಡ ನಡೆದಿದೆ.

    ಮಾಹಿತಿಗಳ ಪ್ರಕಾರ ಹಡಗನ್ನು ಟಗ್‍ನಲ್ಲಿ ಬಂದರಿನ ಜೆಟ್ಟಿಯಿಂದ ಹೊರಕ್ಕೆ ಒಯ್ಯಲಾಗುತ್ತಿತ್ತು. ಈ ವೇಳೆ ಜೆಟ್ಟಿಯ ಗೋಡೆ ಹಡಗಿನಲ್ಲಿದ್ದ ಟ್ಯಾಂಕರ್ ಗೆ ಬಡಿದ ಪರಿಣಾಮ, ಟ್ಯಾಂಕರ್ ನಿಂದ ತೈಲ ಸೋರಿಕೆಯಾಗಿದೆ. ಕೂಡಲೇ ಎಚ್ಚೆತ್ತ ಹಡಗಿನ ಸಿಬ್ಬಂದಿ ಹಾಗೂ ಸ್ಥಳೀಯರು ಸೋರಿಕೆಯನ್ನು ತಡೆದು, ಸಮುದ್ರದಲ್ಲಿ ತೈಲ ಹರಡದಂತೆ ಕ್ರಮ ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv