Tag: Shashank

  • ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ 5ನೇ ಬಾರಿ ಒಂದಾದ ಶಶಾಂಕ್, ಅರ್ಜುನ್ ಜನ್ಯ

    ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ 5ನೇ ಬಾರಿ ಒಂದಾದ ಶಶಾಂಕ್, ಅರ್ಜುನ್ ಜನ್ಯ

    ಸ್ಯಾಂಡಲ್‌ವುಡ್ ನಿರ್ದೇಶಕ ಶಶಾಂಕ್ (Shashank) ಈಗ ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೈಹಾಕಿದ್ದಾರೆ. ಈ ಚಿತ್ರಕ್ಕಾಗಿ 5ನೇ ಬಾರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಜೊತೆ ಶಶಾಂಕ್ ಕೈಜೋಡಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಶಶಾಂಕ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:‘ಕಾಟೇರ’ ಡೈರೆಕ್ಟರ್ ತರುಣ್ ಜೊತೆ ಸೋನಲ್ ಮದುವೆ ಡೇಟ್ ಫಿಕ್ಸ್

    ಡಾರ್ಲಿಂಗ್ ಕೃಷ್ಣ (Darling Krishna) ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಶಶಾಂಕ್ ಡೈರೆಕ್ಷನ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟಕ್ಕೆ ಈ ಚಿತ್ರ ರೆಡಿ ಆಗುತ್ತಿದೆ. ಈ ಸಿನಿಮಾಗಾಗಿ 5ನೇ ಬಾರಿ ಅರ್ಜುನ್‌ ಜನ್ಯ ಜೊತೆ ಒಂದಾಗುತ್ತಿರೋದಾಗಿ ಶಶಾಂಕ್ ತಿಳಿಸಿದ್ದಾರೆ. ಈ ಚಿತ್ರಕ್ಕೆ ಸದ್ಯ DKS -02 ಅಂತ ಹೆಸರಿಡಲಾಗಿದೆ. ಈ ಮೂಲಕ ಸಂಗೀತ ಸಂಯೋಜನೆಯ ಕೆಲಸ ಶುರು ಆಗಿದೆ ಅನ್ನೋದನ್ನ ಡೈರೆಕ್ಟರ್ ಶಶಾಂಕ್ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

    ಸಿನಿಮಾದ ಟೈಟಲ್ ಶೀಘ್ರದಲ್ಲಿಯೇ ಅನೌನ್ಸ್ ಮಾಡುವ ಪ್ಲ್ಯಾನ್ ಕೂಡ ಹಾಕಲಾಗಿದೆ. ಆ ವಿಷಯನ್ನ ಕೂಡ ಇದೀಗ ವಿಡಿಯೋ ಮೂಲಕವೇ ಹೇಳಿದ್ದಾರೆ. ಡಾಲ್ಫಿನ್ ಸಂಸ್ಥೆ ಮೂಲಕ ಮಂಜುನಾಥ್ ಕಂದಕೂರು ಈ ಚಿತ್ರವನ್ನ ನಿರ್ಮಿಸೋಕೆ ಸಾಥ್‌ ನೀಡಿದ್ದಾರೆ.

    ಇನ್ನೂ ಈ ಹಿಂದೆ ಮುಂಗಾರು ಮಳೆ 2, ಜರಾಸಂಧ, ಲವ್ 360, ಕೌಸಲ್ಯ ಸುಪ್ರಜಾ ರಾಮ ಚಿತ್ರಕ್ಕಾಗಿ ಶಶಾಂಕ್‌ ಜೊತೆ ಅರ್ಜುನ್‌ ಜನ್ಯ ಕೆಲಸ ಮಾಡಿದ್ದಾರೆ. ಈಗ ಹೊಸ ಪ್ರಾಜೆಕ್ಟ್ ಮೂಲಕ ಬರುತ್ತಿರೋದ್ರಿಂದ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಿಸಿದೆ.

  • ‘ಈ ಪಾದ ಪುಣ್ಯ ಪಾದ’ ಚಿತ್ರದ ಟೈಟಲ್ ಬಿಡುಗಡೆ- ತಂಡಕ್ಕೆ ನಿರ್ದೇಶಕ ಶಶಾಂಕ್ ಸಾಥ್

    ‘ಈ ಪಾದ ಪುಣ್ಯ ಪಾದ’ ಚಿತ್ರದ ಟೈಟಲ್ ಬಿಡುಗಡೆ- ತಂಡಕ್ಕೆ ನಿರ್ದೇಶಕ ಶಶಾಂಕ್ ಸಾಥ್

    ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ‘ಈ ಪಾದ ಪುಣ್ಯ ಪಾದ’ (Ee Pada Punya Pada Film) ಸಿನಿಮಾ. ಮೊಗ್ಗಿನ ಮನಸ್ಸು, ಕೃಷ್ಣ ಲೀಲಾ, ಬಚ್ಚನ್ ಸಿನಿಮಾ ನಿರ್ದೇಶಕ ಶಶಾಂಕ್ ಈ ಚಿತ್ರದ ಟೈಟಲ್ ಬಿಡುಗಡೆ ಮಾಡಿ ಶುಭಕೋರಿದರು. ಇದನ್ನೂ ಓದಿ:ಲಂಡನ್ ಟ್ರಿಪ್ ಮುಗಿಸಿ ಮುಂಬೈಗೆ ಬಂದಿಳಿದ ದೀಪಿಕಾ ದಂಪತಿ

    ದಾರಿ ಯಾವುದಯ್ಯಾ ವೈಕುಂಠಕೆ, ಬ್ರಹ್ಮ ಕಮಲ, ತಾರಿಣಿ ಮುಂತಾದ ಸದಭಿರುಚಿ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ಸಿದ್ದು ಪೂರ್ಣಚಂದ್ರ (Siddu Poornachandra) ಈ ಚಿತ್ರಕ್ಕೆ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

    ಈ ಕಥೆಯ ವಿಶೇಷವೇನೆಂದರೆ, ಕಾಲುಗಳ ಮೇಲೆ ಕಥೆ ಬರೆಯಲಾಗಿದೆ. ಎಲ್ಲಾ ಪಾತ್ರಗಳ ಕಾಲುಗಳು ಕಥೆ ಹೇಳುತ್ತವೆ. ಮಗುವಿನ ಪಾದ, ದೊಡ್ಡವರ ಪಾದ, ವಯಸ್ಸಾದ ಪಾದ, ಧಣಿದ ಪಾದ, ಖುಷಿಯ ಪಾದ, ಪಾಪದ ಪಾದ, ಆನೆಕಾಲು ರೋಗಿಯ ಪಾದ ಹೀಗೆ ನಾನಾ ಪಾದಗಳಿಂದ ಕೂಡಿದ ವಿನೂತನ ಕಥಾ ಹಂದರ ಹೊಂದಿರುವ ಚಿತ್ರವಾಗಿದೆ.

    ಮುಖ್ಯ ಪಾತ್ರದಲ್ಲಿ ಆಟೋ ನಾಗರಾಜ್, ಮಮತಾ ರಾಹುತ್, ಪ್ರಭಾಕರ್ ಬೋರೇಗೌಡ, ಪ್ರಮಿಳಾ ಸುಬ್ರಹ್ಮಣ್ಯಂ, ಹರೀಶ್ ಕುಂದೂರ್, ಸನ್ನಿ, ಇನ್ನೂ ಮುಂತಾದವರ ತಾರಾಗಣವಿದೆ. ಛಾಯಾಗ್ರಹಣ ರಾಜು ಹೆಮ್ಮಿಗೆಪುರ, ಸಂಗೀತ ಅನಂತ್ ಆರ್ಯನ್, ಸಂಕಲನ ದೀಪಕ್, ವಸ್ತ್ರ ವಿನ್ಯಾಸ ನಾಗರತ್ನ ಕೆ ಹೆಚ್, ಪ್ರೊಡಕ್ಷನ್ ಡಿಸೈನ್ ದಿಲೀಪ್ ಹೆಚ್ ಆರ್, ಕಾರ್ಯಕಾರಿ ನಿರ್ಮಾಪಕರು ಪುಟ್ಟರಾಜು ಎ.ಕೆ ಆಲಗೌಡನ ಹಳ್ಳಿ, ಕಲಾ ನಿರ್ದೇಶನ ಬಸವರಾಜ್ ಆಚಾರ್ ನಿರ್ವಹಿಸುತ್ತಿದ್ದಾರೆ.

    ಆಗಸ್ಟ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ. ಬೆಂಗಳೂರು ರಾಮನಗರ, ಚನ್ನಪಟ್ಟಣ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಚಿತ್ರೀಕರಣವಾಗುತ್ತದೆ.

  • ಮತ್ತೆ ಡೈರೆಕ್ಟರ್‌ ಶಶಾಂಕ್‌ ಜೊತೆ ಕೈಜೋಡಿಸಿದ ಡಾರ್ಲಿಂಗ್ ಕೃಷ್ಣ

    ಮತ್ತೆ ಡೈರೆಕ್ಟರ್‌ ಶಶಾಂಕ್‌ ಜೊತೆ ಕೈಜೋಡಿಸಿದ ಡಾರ್ಲಿಂಗ್ ಕೃಷ್ಣ

    ಸ್ಯಾಂಡಲ್‌ವುಡ್ ನಟ ಡಾರ್ಲಿಂಗ್ ಕೃಷ್ಣ (Darling Krishna) ‘ಹಲಗಲಿ’ ಸಿನಿಮಾದಿಂದ ಹೊರಬಂದ ಬೆನ್ನಲ್ಲೇ ಮುಂದಿನ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೊಮ್ಮೆ ಡೈರೆಕ್ಟರ್ ಶಶಾಂಕ್  (Director Shashank) ಜೊತೆ ಸಿನಿಮಾ ಮಾಡಲು ಕೃಷ್ಣ ಕೈಜೋಡಿಸಿದ್ದಾರೆ.

    ಇತ್ತೀಚೆಗೆ ತೆರೆಕಂಡ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣಗೆ ಶಶಾಂಕ್ ಆ್ಯಕ್ಷನ್ ಕಟ್ ಹೇಳಿದ್ದರು. ಕೃಷ್ಣಗೆ ಬೃಂದಾ ಆಚಾರ್ಯ ಮತ್ತು ಮಿಲನಾ ನಾಗರಾಜ್ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನೂ ಓದಿ:ರೇವ್ ಪಾರ್ಟಿ ಪ್ರಕರಣ: ಹೇಮಾ, ಆಶಿ ರಾಯ್ ಬ್ಲಡ್ ರಿಪೋರ್ಟ್ ಪಾಸಿಟಿವ್

    ಆದರೆ, ಈ ಬಾರಿ ಕೃಷ್ಣ ಅವರಿಗಾಗಿ ಥ್ರಿಲ್ಲಿಂಗ್ ಚಿತ್ರ ಮಾಡಲು ಮುಂದಾಗಿದ್ದಾರೆ. ಹೊಸ ಬಗೆಯ ಕಥೆಯನ್ನು ತೋರಿಸಲು ಶಶಾಂಕ್‌ ಮತ್ತು ಡಾರ್ಲಿಂಗ್‌ ಕೃಷ್ಣ ರೆಡಿಯಾಗಿದ್ದಾರೆ. ಇದನ್ನೂ ಓದಿ:ನಿರ್ದೇಶನದತ್ತ ‘ರಂಗಿತರಂಗ’ ಚಿತ್ರದ ನಟ ನಿರೂಪ್ ಭಂಡಾರಿ

    ಅಂದಹಾಗೆ, ಕೃಷ್ಣ ಆರ್‌ಸಿ ಸ್ಟುಡಿಯೋಸ್ ನಿರ್ಮಾಣದ ‘ಫಾದರ್’ (Father)  ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಪ್ರಕಾಶ್ ರಾಜ್ ಮತ್ತು ತೆಲುಗು ನಟ ಸುನೀಲ್ ಸಹ ನಟಿಸಿದ್ದಾರೆ. ಜುಲೈನಲ್ಲಿ ‘ಫಾದರ್’ ಚಿತ್ರೀಕರಣವನ್ನು ಪೂರ್ಣಗೊಳಿಸುವನಿರೀಕ್ಷೆಯಿದ್ದು, ಶೀಘ್ರದಲ್ಲೇ ಶಶಾಂಕ್ ಅವರ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಸಾಥ್ ನೀಡಲಿದ್ದಾರೆ. ಆಗಸ್ಟ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ ಎನ್ನಲಾಗಿದೆ.

  • ಕಾವೇರಿ ಹೋರಾಟ ಮತ್ತು ಚಿತ್ರೋದ್ಯಮದ ಸಂಕಟ ಬಿಚ್ಚಿಟ್ಟ ನಿರ್ದೇಶಕ ಶಶಾಂಕ್

    ಕಾವೇರಿ ಹೋರಾಟ ಮತ್ತು ಚಿತ್ರೋದ್ಯಮದ ಸಂಕಟ ಬಿಚ್ಚಿಟ್ಟ ನಿರ್ದೇಶಕ ಶಶಾಂಕ್

    ಕಾವೇರಿ (Cauvery) ಹೋರಾಟಕ್ಕೆ ಚಿತ್ರೋದ್ಯಮದವರು ಎಲ್ಲಿ ಎಂದು ಕೇಳುವ ಕೆಲ ಹೋರಾಟಗಾರರಿಗೆ ಚಿತ್ರೋದ್ಯಮಕ್ಕಾಗಿ ನಿಮ್ಮ ಕೊಡುಕೊಳ್ಳುವಿಕೆ ಏನು ಎಂದು ನಟ ದರ್ಶನ್ (Darshan) ಕೇಳಿಸಿದ್ದರು. ಪರಭಾಷಾ ಚಿತ್ರಗಳನ್ನು ಗೆಲ್ಲಿಸುತ್ತಿರುವ ಕುರಿತು ಅವರು ಅಸಮಾಧಾನ ವ್ಯಕ್ತ ಪಡಿಸಿದ್ದರು. ದರ್ಶನ್ ಈ ನಡೆಯನ್ನು ಕನ್ನಡದ ಹೆಸರಾಂತ ನಿರ್ದೇಶಕ ಶಶಾಂಕ್ (Shashank) ಬೆಂಬಲಿಸಿದ್ದರು. ಈ ಕುರಿತು ಶಶಾಂಕ್ ಮತ್ತಷ್ಟು ವಿವರಗಳನ್ನು ಅಕ್ಷರ ರೂಪದಲ್ಲಿ ಬಿಚ್ಚಿಟ್ಟಿದ್ದಾರೆ. ಆ ಬರಹವಿದು.

    ಅನಾದಿ ಕಾಲದಿಂದಲೂ ಕನ್ನಡ ಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ಸೂಪರ್ ಸ್ಟಾರ್ ಗಳಾಗುವ ಮುಂಚೆ ಹೊಸಬರಾಗಿದ್ದ ನಟರು ಬಹಿರಂಗವಾಗಿ ಹೇಳಿದರೆ ಏನಾಗುತ್ತದೋ ಎಂಬ ಭಯದಲ್ಲಿ, ಒಳಗೇ ಅನುಭವಿಸುತ್ತಿದ್ದ ಒಂದು ಸಂಕಟದ ವಿಚಾರವನ್ನು ದರ್ಶನ್ ಸರ್ ಮೊನ್ನೆ ಧೈರ್ಯವಾಗಿ ಹೇಳಿದ್ದಾರೆ ಮತ್ತು ನಾನು ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇನೆ. ನಾನು ಇದುವರೆಗೂ ಜನರನ್ನು ಮೆಚ್ಚಿಸಲು ಸಿನಿಮಾ ಮಾಡಿದ್ದೇನೆಯೇ ಹೊರತು, ಯಾವ ನಾಯಕ ನಟರನ್ನು ಮೆಚ್ಚಿಸಲು ಅಲ್ಲ ಎಂಬುದನ್ನು ನನ್ನ ಚಿತ್ರಗಳೇ ಹೇಳುತ್ತವೆ.

    ದರ್ಶನ್ ಸರ್ ಮಾತಿಗೆ ನಾನು ಬೆಂಬಲ ಸೂಚಿಸಿದ್ದು ಒಬ್ಬ ಕನ್ನಡಿಗನಾಗಿ ಮತ್ತು ಕನ್ನಡ ಸಿನಿಮಾ ಪ್ರೇಮಿಯಾಗಿ ಅಷ್ಟೇ.  ಎಂತದೇ ಪರಿಸ್ಥಿತಿ ಬಂದರೂ, ಎಷ್ಟೇ ಆಮಿಷಗಳಿದ್ದರೂ, ಇದುವರೆಗೂ ರೀಮೇಕ್ ಚಿತ್ರಗಳನ್ನು ಮಾಡದಿರುವುದು ಮತ್ತು ಪ್ರತಿ ಚಿತ್ರದಲ್ಲೂ ಕನ್ನಡದ ಕಲಾವಿದರಿಗೆ ಪ್ರಾಮುಖ್ಯತೆ ನೀಡಿರುವುದೇ, ಕನ್ನಡ ಭಾಷೆಯ ಮೇಲಿನ ನನ್ನ ಬದ್ಧತೆಗೆ ಸಾಕ್ಷಿ.

    ನನ್ನ ನಿರ್ದೇಶನದ  ‘ಕೌಸಲ್ಯಾ ಸುಪ್ರಜಾ ರಾಮ’ ಸೇರಿದಂತೆ ನನ್ನ ಬಹುತೇಕ ಚಿತ್ರಗಳು ಗೆಲ್ಲಲು ಕಾರಣ, ನಿಜವಾದ ಕನ್ನಡ ಸಿನಿಮಾ ಪ್ರೇಮಿಗಳೇ. ಅವರಿಗೆ ನಾನು ಸದಾ ಚಿರಋಣಿ. ಆದರೆ, ಅಂಥವರ ಸಂಖ್ಯೆ ತುಂಬಾ ಕಡಿಮೆ ಇದೆ ಎನ್ನುವುದು ದುಃಖದ ಸಂಗತಿ. ಒಟ್ಟಾರೆ ಕನ್ನಡ ಚಿತ್ರರಂಗದ ಆರ್ಥಿಕತೆಯ ಅಂಕಿ-ಅಂಶವೇ ಅದಕ್ಕೆ ಸಾಕ್ಷಿ. ಆದರೆ, ಅದು ಸಾಮಾನ್ಯ ಪ್ರೇಕ್ಷಕರಿಗೆ ತಿಳಿಯದ ವಿಚಾರ. ಕಹಿ ಸತ್ಯವೇನೆಂದರೆ, ಈ ವರ್ಷದಲ್ಲಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಚಿತ್ರಗಳು ಎನಿಸಿಕೊಂಡ ಡೇರ್ ಡೆವಿಲ್ ಮುಸ್ತಫಾ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಕೌಸಲ್ಯಾ ಸುಪ್ರಜಾ ರಾಮ,  ಆಚಾರ್ ಅಂಡ್ ಕೋ,  ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳ ಒಟ್ಟು ಕಲೆಕ್ಷನ್ ಒಂದು ತಮಿಳು ಚಿತ್ರದ ಕಲೆಕ್ಷನ್‌ಗೆ ಸಮ. ಐದೂ ಗೆದ್ದ ಚಿತ್ರಗಳೇ. ಆದರೆ, ಇನ್ನೂ ಹೆಚ್ಚಿನ ಗಳಿಕೆಗೆ ಅರ್ಹತೆ ಇದ್ದ ಚಿತ್ರಗಳು.

    ನಾವು ಭಾರತೀಯರು, ನಮ್ಮದು ಭಾರತ ಚಿತ್ರರಂಗ, ಈಗ ನಮ್ಮ ಚಿತ್ರಗಳನ್ನು ಬೇರೆ ರಾಜ್ಯದ ಪ್ರೇಕ್ಷಕರು ನೋಡುತ್ತಿದ್ದಾರೆ, ನಾವು ಅವರ ಚಿತ್ರಗಳನ್ನು ನೋಡುವುದು ತಪ್ಪಲ್ಲ ಎಲ್ಲವೂ ನಿಜ. ಆದರೆ ಒಂದು ದೊಡ್ಡ  ವ್ಯತ್ಯಾಸವೇನೆಂದರೆ, ಅವರು ಪರಭಾಷೆಯ ಕೆಲವು ಚಿತ್ರಗಳನ್ನು ಮಾತ್ರ ನೋಡುತ್ತಾರೆ, ತಮ್ಮ ಭಾಷೆಯ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಸ್ಟಾರ್ ಸಿನಿಮಾಗಳ ಜೊತೆ ಜೊತೆಗೆ, ಇತರೆ ನಟರ, ಹೊಸಬರ, ಉತ್ತಮ ಕಥಾವಸ್ತುವಿನ  ಚಿತ್ರಗಳನ್ನೂ ದೊಡ್ಡ ಪ್ರಮಾಣದಲ್ಲಿ ನೋಡುತ್ತಾರೆ. ಹಾಗಾಗಿಯೇ, ಆ ಚಿತ್ರರಂಗಗಳ ಆರ್ಥಿಕತೆ ನಮಗಿಂತ 10 ಪಟ್ಟು ಹೆಚ್ಚಾಗಿದೆ. ಆದರೆ ನಮ್ಮಲ್ಲಿ ಎಲ್ಲವೂ ಉಲ್ಟಾ. ವಾರ್ಷಿಕ ವಹಿವಾಟಿನ ಲೆಕ್ಕದಲ್ಲಿ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗಿಂತಲೂ ಪರಭಾಷೆಯ ಚಿತ್ರಗಳ ಗಳಿಕೆಯೇ ಹೆಚ್ಚು.

    ಕನ್ನಡ ಚಿತ್ರೋದ್ಯಮದ ಸಂಕಟ ಕೇವಲ ಚಿತ್ರಮಂದಿರಕ್ಕಷ್ಟೆ ಸೀಮಿತವಾಗಿಲ್ಲ. OTT ಪ್ಲಾಟ್ ಫಾರ್ಮ್ ಗಳಲ್ಲೂ ಇದೇ ವ್ಯಥೆ. ಎಲ್ಲಾ ಭಾಷೆಯ ಚಿತ್ರಗಳನ್ನು ಕೊಳ್ಳುವ, ಹಾಟ್ ಸ್ಟಾರ್, ಸೋನಿ, ನೆಟ್ ಫ್ಲಿಕ್ಸ್ ನಂತಹ ಪ್ಲಾಟ್ ಫಾರ್ಮ್ ಗಳು, ಕನ್ನಡ ಚಿತ್ರಗಳಿಂದ ವಿಮುಖವಾಗಿರುವುದಕ್ಕೇ, ಕನ್ನಡ ಭಾಷೆಯಲ್ಲಿ ವೆಬ್ ಸೀರೀಸ್ ಗಳು ನಿರ್ಮಾಣವಾಗದಿರುವುದಕ್ಕೆ ಕಾರಣ ಕೂಡ, ಕನ್ನಡ ಪ್ರೇಕ್ಷಕರ ಕೊರತೆ! ಎಲ್ಲಾ ಭಾಷೆಯಲ್ಲೂ  ಚಿತ್ರಗಳನ್ನು ನಿರ್ಮಿಸುವ ದೊಡ್ಡ ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳು ಕನ್ನಡದಲ್ಲಿ ಚಿತ್ರ ನಿರ್ಮಿಸಲು ಹಿಂದೇಟು ಹಾಕುವುದಕ್ಕೂ ಇದೇ  ಕಾರಣ.

    ಇವೆಲ್ಲವನ್ನು ಅವರು ಸುಮ್ಮನೆ ಹೇಳುವುದಿಲ್ಲ, ಅವರ ಬಳಿ ಇರುವ ಅಂಕಿ-ಅಂಶಗಳ ಆಧಾರದೊಂದಿಗೆ ಹೇಳುತ್ತಾರೆ. ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದರೆ, ಆ ಊರು ಸಮೃದ್ಧವಾಗಿದೆ ಎಂದು ಅರ್ಥವಲ್ಲ, ಒಂದು ಕೆಜಿಎಫ್, ಒಂದು ಕಾಂತಾರ ಕನ್ನಡ ಚಿತ್ರರಂಗಕ್ಕೆ ಅಳತೆ ಗೋಲಾಗಲಾರವು. ಕಾವೇರಿ ಸಮಸ್ಯೆ- ಕನ್ನಡ ಚಿತ್ರೋದ್ಯಮದ ಸಮಸ್ಯೆ ಎರಡೂ  ಬೇರೆ ನಿಜ. ಆದರೆ, ಸಾಮ್ಯತೆ ಇರುವುದು ‘ನಮ್ಮದು’ ಎಂಬ ಭಾವದಲ್ಲಿ.. ಕಾವೇರಿ ನಮ್ಮದು, ನಮಗೇ ಮೊದಲ ಆದ್ಯತೆ ನೀಡಬೇಕು ಎಂಬುದು ಎಷ್ಟು ನ್ಯಾಯವೋ, ಕನ್ನಡ ಭಾಷೆಯ ಚಿತ್ರಕ್ಕೇ ಮೊದಲ ಆದ್ಯತೆ ನೀಡಿ ಎಂಬ ಮನವಿಯು ಅಷ್ಟೇ ನ್ಯಾಯ. ಕಾವೇರಿ ನೀರನ್ನು ನಂಬಿ ಬದುಕುತ್ತಿರುವ ಲಕ್ಷಾಂತರ ರೈತರ ಕುಟುಂಬಗಳಂತೆ, ಕನ್ನಡ ಚಿತ್ರೋದ್ಯಮವನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿವೆ. ಸಮಸ್ಯೆಗಳು ಎದುರಾದಾಗ, ಪರಸ್ಪರರ ನೆರವಿಗೆ ನಿಲ್ಲುವುದೇ ನಿಜವಾದ ಮಾನವೀಯತೆ.

    ನಮ್ಮ ಚಿತ್ರಗಳನ್ನು ಪ್ರೇಕ್ಷಕರಾಗಿ ನೀವು ವಿಮರ್ಶೆ, ಟೀಕೆ ಮಾಡಿದಾಗ, ನಾವು ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಮುಂದಿನ ಚಿತ್ರಗಳಲ್ಲಿ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುವುದಿಲ್ಲವೆ? ಹಾಗೇ, ನಿಮ್ಮ ತಪ್ಪುಗಳನ್ನು ಚಿತ್ರೋದ್ಯಮಕ್ಕೆ ಸಂಬಂಧಪಟ್ಟವರು ತೋರಿಸಿದಾಗ, ನೀವೂ ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುವುದು ನ್ಯಾಯವಲ್ಲವೇ? ವಿಮರ್ಶೆ- ಪರಾಮರ್ಶೆಗಳು ಎರಡೂ ಕಡೆಯಿಂದ ಇದ್ದರಷ್ಟೇ, ಆರೋಗ್ಯಕರವಾದ ವಾತಾವರಣ ನಿರ್ಮಾಣವಾಗುತ್ತದೆ ಎಂಬುದು ನನ್ನ ಅನಿಸಿಕೆ.

    ಕನ್ನಡ ಚಿತ್ರಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಇರಬಹುದು ಆದರೆ, ನಾವೆಲ್ಲರೂ ಇಂದು ನೆಲೆ ಕಂಡಿರುವುದೇ ಅವರ ಪ್ರೀತಿ ಮತ್ತು ಅಭಿಮಾನದಿಂದ. ಅಂತಹ ಪ್ರೇಕ್ಷಕರಿಗಾಗಿ ನಮ್ಮ ಕಾಯಕ ಮುಂದುವರೆಯುತ್ತದೆ. ಸತ್ಯ ಹೇಳಿದರೂ ಅದನ್ನು ಒಪ್ಪದೇ, ಪರಾಮರ್ಶಿಸದೆ, ಆತ್ಮಾವಲೋಕನ ಮಾಡಿಕೊಳ್ಳದೆ, ಕಾಲು ಎಳೆಯುವುದನ್ನೇ ಕಾಯಕ ಮಾಡಿಕೊಳ್ಳುವ ಜನರಿಗೆ ತಾಯಿ ಭುವನೇಶ್ವರಿ ಸದ್ಬುದ್ಧಿ ನೀಡಲಿ.  ಏನೇ ಸಂಕಟಗಳಿದ್ದರೂ,ಕನ್ನಡ ನಾಡಿನ ಸಮಸ್ಯೆಗಳಿಗೆ ಕನ್ನಡ ಚಿತ್ರರಂಗ ಸದಾ ಧ್ವನಿಯಾಗಿದೆ, ಮುಂದೆಯೂ ಆಗಿರುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 50 ಕಥೆ ರಿಜೆಕ್ಟ್ ಮಾಡಿ `ಕೌಸಲ್ಯ ಸುಪ್ರಜಾ ರಾಮ’ ಒಪ್ಪಿದ್ದೇಕೆ ಆದಿ-ನಿಧಿ?

    50 ಕಥೆ ರಿಜೆಕ್ಟ್ ಮಾಡಿ `ಕೌಸಲ್ಯ ಸುಪ್ರಜಾ ರಾಮ’ ಒಪ್ಪಿದ್ದೇಕೆ ಆದಿ-ನಿಧಿ?

    ನೀವೆಲ್ಲರೂ ಶಶಾಂಕ್ ನಿರ್ದೇಶಿಸಿರುವ `ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಸಿನಿಮಾ ಮಾಡೋದಕ್ಕೆ ಕಾತುರರಾಗಿರುತ್ತೀರಿ. ಆದಿ ಮತ್ತು ನಿಧಿ ಮತ್ತೆ ಒಂದಾಗಿರುವುದರಿಂದ ಬಿಗ್‍ಸ್ಕ್ರೀನ್‍ನ ಮೇಲೆ ಈ ಕ್ಯೂಟ್ ಕಪಲ್ಸ್ ನ ಕಣ್ತುಂಬಿಕೊಳ್ಳುವುದಕ್ಕೆ ಕುತೂಹಲಭರಿತರಾಗಿರುತ್ತೀರಿ. ಅಚ್ಚರಿ ಏನಪ್ಪ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ಆದಿ ಮತ್ತು ನಿಧಿ ಹತ್ತಲ್ಲ, ಇಪ್ಪತ್ತಲ್ಲ, ಭರ್ತಿ 50 ಪ್ರಾಜೆಕ್ಟ್‍ಗಳನ್ನ ರಿಜೆಕ್ಟ್ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ನಿಧಿಮಾ ನಮ್ಮೊಟ್ಟಿಗೆ ಮಾತನಾಡಿದ್ದಾರೆ. ಒಂದಿಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

    ಆದಿ ಮತ್ತು ನಿಧಿ ಬೆಳ್ಳಿತೆರೆಯ ಬೊಂಬಾಟ್ ಜೋಡಿ. ಲವ್ ಮಾಕ್ಟೇಲ್ ಚಿತ್ರದ ಮೂಲಕ ಕಿಕ್ಕೇರಿಸಿದ ಈ ಕ್ಯೂಟ್ ಕಪಲ್ಸ್ ಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ನೆಕ್ಸ್ಟ್ ಲೆವೆಲ್ ಫ್ಯಾನ್ ಬೇಸ್ ಜೊತೆಗೆ ಹೊಸದೊಂದು ಕ್ರೇಜ್ ಸೃಷ್ಟಿಸಿ, ಸೆನ್ಸೇಷನ್ ಸೃಷ್ಟಿಸಿರೋ ಈ ತಾರಾ ಜೋಡಿ ಹಿಂದೆ ಅಭಿಮಾನಿಗಳು ಮಾತ್ರವಲ್ಲ ನಿರ್ದೇಶಕರು ಮತ್ತು ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಬಿಗ್‍ಸ್ಕ್ರೀನ್‍ಗೆ ಕಿಚ್ಚು ಹಚ್ಚಿ, ಬಾಕ್ಸ್ ಆಫೀಸ್‍ನಲ್ಲಿ ಬಂಗಾರದ ಬೆಳೆ ತೆಗೆಯೋ ಈ ಸ್ಟಾರ್ ಜೋಡಿನಾ ಹಾಕ್ಕೊಂಡು ಪಿಕ್ಚರ್ ಮಾಡಬೇಕು ಅಂತ ಹಪಹಪಿಸುತ್ತಿದ್ದಾರೆ. ಅಚ್ಚರಿ ಅಂದರೆ ಲವ್ ಮಾಕ್ಟೇಲ್ 1 ಹಾಗೂ 2 ಚಿತ್ರಗಳು ತೆರೆಗೆ ಬಂದ್ಮೇಲೆ ಸುಮಾರು 50 ಕಥೆಗಳು ಆದಿ-ನಿಧಿನಾ ಅರಸಿಕೊಂಡು ಬಂದಿವೆಯಂತೆ. ಆದರೆ, ಪುನಃ ಪುನಃ ತೆರೆಮೇಲೆ ಒಂದಾಗಲು ಬಯಸದ ಲವ್‌ ಬರ್ಡ್ಸ್, ಮೊಗ್ಗಿನ ಮನಸ್ಸು ಡೈರೆಕ್ಟರ್ ಕೆತ್ತಿದ ಕಥೆಗೆ ಮನಸೋತಿದ್ದಾರೆ. `ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ಅಂದ್ಹಾಗೇ, ಜನ ಆದಿ ಮತ್ತು ನಿಧಿನಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗಂತ, ಪದೇ ಪದೇ ಪೇರ್ ಆಗಿ ನಟಿಸೋದು ಸರಿಯಲ್ಲ ಎನ್ನುವ ಕಾರಣಕ್ಕೆ ಅರಸಿಕೊಂಡು ಬಂದಂತಹ ಸಿನಿಮಾಗಳನ್ನೆಲ್ಲಾ ತಿರಸ್ಕರಿಸಿದ್ದಂತೂ ನಿಜ. ಆದರೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನ ರಿಜೆಕ್ಟ್ ಮಾಡುವುದಕ್ಕೆ ಮನಸ್ಸು ಒಪ್ಪಲಿಲ್ಲ. ನಿರ್ದೇಶಕ ಶಶಾಂಕ್ ಅವರು ಅದ್ಭುತವಾದ ಕಥೆನಾ ರಚಿಸಿದ್ದರಿಂದ ಮೊದಲು ಕೃಷ್ಣ ಅವರು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟರು. ಡಾರ್ಲಿಂಗ್‍ಗೆ ಪ್ರೇಮಂ ಪೂಜ್ಯಂ ಬ್ಯೂಟಿ ಬೃಂದಾ (Brinda Acharya) ಜೊತೆಯಾದ್ರೂ ಕೂಡ ಆ ರೋಲ್ ಪ್ಲೇ ಮಾಡುವುದಕ್ಕೆ ನಾನು ಒಪ್ಪಿಗೆ ಸೂಚಿಸಿದೆ. ಇದೊಂದು ಸೆನ್ಸಿಬಲ್ ಪಾತ್ರ ಆಗಿದ್ದರಿಂದ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಆರಂಭದಲ್ಲಿ ನಂಗೆ ಭಯ ಇತ್ತು. ಆದರೆ, ಶಶಾಂಕ್‍ರಂತಹ (Shashank) ದೊಡ್ಡ ನಿರ್ದೇಶಕರ ಸಿನಿಮಾ ಕೈಬಿಡುವುದಕ್ಕೆ ನಾನು ಸಿದ್ದಳಿರಲಿಲ್ಲ. ಹೀಗಾಗಿ, ಆ ಕ್ಯಾರೆಕ್ಟರ್ ನ ಚಾಲೆಂಜ್ ಆಗಿ ತೆಗೆದುಕೊಂಡು ನಟಿಸಿದ್ದೇನೆ ಅಂತಾರೇ ನಟಿ ಮಿಲನ ನಾಗರಾಜ್.

    ಅಷ್ಟಕ್ಕೂ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಮಿಲನ ಪಾತ್ರ ಏನು? ಈ ಕುತೂಹಲದ ಪ್ರಶ್ನೆಗೆ ನಿರ್ದೇಶಕರಾಗಲಿ, ಮಿಲನ ಆಗಲಿ ಉತ್ತರ ಕೊಡುತ್ತಿಲ್ಲ. ಕಾರಣ, ಮಿಲನ ಬಹುಮುಖ್ಯವಾದ ಪಾತ್ರ ನಿಭಾಯಿಸಿದ್ದಾರಂತೆ. ಇಲ್ಲಿವರೆಗೂ ಸಿಲ್ವರ್ ಸ್ಕ್ರೀನ್ ಮೇಲೆ ನಾವ್ಯಾರು ನೋಡಿರದ ಲುಕ್ ನಲ್ಲಿ ನಿರ್ದೇಶಕರು ನಿಧಿನಾ ತೋರಿಸಿದ್ದಾರಂತೆ. ಇಂಟ್ರೆಸ್ಟಿಂಗ್ ಮ್ಯಾಟರ್ ಏನಪ್ಪ ಅಂದರೆ ನಿಧಿ ಇಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಎಷ್ಟು ಬೋಲ್ಡ್ ಎಂಬುದಕ್ಕೆ ರಿಲೀಸ್ ಆಗಿರುವ ’90 ಹಾಕು ಕಿಟ್ಟಪ್ಪ’ ಹಾಡು ನೋಡಿದರೆ ಗೊತ್ತಾಗುತ್ತೆ. ಇದು ಜಸ್ಟ್ ಟೀಸರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ ಅಂತ ಅಂದುಕೊಳ್ಳಬಹುದು. ಇನ್ನೊಂದು ವಿಶೇಷ ಅಂದರೆ ಆದಿ-ನಿಧಿ ಫ್ಯಾನ್ಸ್ ಗೆ ನಿರಾಸೆಯಾಗಲ್ಲ. ಯಾಕಂದ್ರೆ, ಕೃಷ್ಣ ಹಾಗೂ ಮಿಲನ ಕಾಂಬಿನೇಷನ್ ದೃಶ್ಯಗಳು ಈ ಚಿತ್ರದಲ್ಲಿವೆ. ಸಿನಿಮಾಪ್ರೇಮಿಗಳಿಗೆ ಕಿಕ್ ಕೊಡುವಂತಹ, ಅಭಿಮಾನಿಗಳು ಹುಚ್ಚೇಳುವಂತಹ ಸನ್ನಿವೇಶಗಳನ್ನ ಡೈರೆಕ್ಟರ್ ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ. ಅದೆಲ್ಲವನ್ನೂ ತೆರೆಮೇಲೆ ನೋಡುವುದಕ್ಕೆ  ಕೆಲವೇ ಕೆಲವು ದಿನಗಳು ಬಾಕಿಯಿವೆ.

    ಶಶಾಂಕ್ ನಿರ್ದೇಶನದ ಎಲ್ಲಾ ಸಿನಿಮಾಗಳಂತೆ ಇಲ್ಲಿಯೂ ಒಂದು ಕ್ಯೂಟ್ ಲವ್‍ಸ್ಟೋರಿನಾ ಕಾಣಬಹುದು. ಜೊತೆಗೆ ಫ್ಯಾಮಿಲಿ ವ್ಯಾಲ್ಯೂಸ್, ತಾಯಿ-ಮಗನ ಸೆಂಟಿಮೆಂಟ್ ಈ ಪಿಕ್ಚರ್‍ನಲ್ಲಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಗಂಡಸು ಅನ್ನೋ ಅಹಂಕಾರನ ತಲೆಗೇರಿಸಿಕೊಂಡಿರೋ ಗಂಡಸರ ಮಧ್ಯೆ ಹೆಣ್ಣುಮಕ್ಕಳು ಎಷ್ಟೆಲ್ಲಾ ಸಂಕಷ್ಟಗಳನ್ನ ಸಹಿಸಿಕೊಂಡು ಬದುಕುತ್ತಿದ್ದಾರೆ. ಮೇಲ್ ಇಗೋದಿಂದ ಸ್ತ್ರೀಯರು ಎಷ್ಟು ಸಫರ್ ಆಗ್ತಿದ್ದಾರೆ, ಮೇಲ್ ಇಗೋ ಸಮಾಜವನ್ನ ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ ಮತ್ತು ಎಷ್ಟೆಲ್ಲಾ ಪರಿಣಾಮ ಬೀರುತ್ತಿದೆ ಇದೆಲ್ಲವನ್ನೂ `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಮೂಲಕ ಶಶಾಂಕ್ ಸೊಸೈಟಿಗೆ ತಿಳಿಸುವುದಕ್ಕೆ ಹೊರಟಿದ್ದಾರೆ. ಡಾಲಿಂಗ್ ಕೃಷ್ಣ (Darling Krishna), ಮಿಲನ ನಾಗರಾಜ್ (Milana Nagaraj), ಬೃಂದಾ ಆಚಾರ್ಯ, ರಂಗಾಯಣ ರಘು, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್, ನಾಗಭೂಷಣ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಕೃಷ್ಣ-ಮಿಲನ ಜೋಡಿಯ ಆರನೇ ಕಾಂಬಿನೇಷನ್ ಚಿತ್ರ ಇದಾಗಿದ್ದು, ಲವ್‌ ಬರ್ಡ್ಸ್ ಚಿತ್ರದ ನಂತರ ಈ ಕ್ಯೂಟ್ ಪೇರ್ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

    ಇದೇ ಜುಲೈ 28ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಕುಟುಂಬ ಸಮೇತ ಥಿಯೇಟರ್‍ಗೆ ಬಂದು ನೋಡುವಂತಹ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ರೀಚ್ ಆಗುವ ಟೆಕ್ನಿಕಲ್ ಕ್ವಾಲಿಟಿ ಪ್ಲಸ್ ಕ್ವಾಂಟಿಟಿಯನ್ನೊಳಗೊಂಡಿದೆ. ಸಿನಿಮಾಟೋಗ್ರಫಿ ಮೂಲಕ ಕಥೆನಾ ಜನರಿಗೆ ಕನ್ವೆ ಮಾಡುವಂತಹ ಪ್ರಯೋಗಕ್ಕೆ ಶಶಾಂಕ್ ಕೈಹಾಕಿದ್ದು, ಸುಜ್ಞಾನ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಇಂಟ್ರೆಸ್ಟಿಂಗ್ ಸಂಗತಿ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೆನಡಾ ಹಾಗೂ ಯುಎಸ್‍ಎನಲ್ಲೂ ಬಿಡುಗಡೆಯಾಗ್ತಿದೆ. ಆರ್‌ ಆರ್ ಆರ್ ನಂತಹ ದೊಡ್ಡ ದೊಡ್ಡ ಸಿನಿಮಾಗಳನ್ನ ವಿತರಣೆ ಮಾಡಿದಂತಹ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ಹೊತ್ತಿರುವುದು ವಿಶೇಷ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕೌಸಲ್ಯ ಸುಪ್ರಜಾ ರಾಮ’ನ ರಾಣಿಯ ಮುಡಿಗೇರಲಿದೆ ಕರ್ನಾಟಕ ಕ್ರಷ್ ಕಿರೀಟ

    ‘ಕೌಸಲ್ಯ ಸುಪ್ರಜಾ ರಾಮ’ನ ರಾಣಿಯ ಮುಡಿಗೇರಲಿದೆ ಕರ್ನಾಟಕ ಕ್ರಷ್ ಕಿರೀಟ

    ದ್ಭುತ ಅಭಿನಯದಿಂದ, ಅಮೋಘ ಸಿರಿಯಿಂದ ಕಲಾರಸಿಕರ ಹೃದಯ ಗೆಲ್ಲುವ ಕೆಲ ನಟಿಮಣಿಯರು, ಅಭಿಮಾನಿಗಳ ಪ್ರೀತಿ ಸಂಪಾದನೆ ಮಾಡುವುದರ ಜೊತೆಗೆ ಕರ್ನಾಟಕ ಕ್ರಷ್ ಪಟ್ಟಕ್ಕೇರಿ ಕರುನಾಡಿನ ಅಂಗಳದಲ್ಲಿ ಮೆರವಣಿಗೆ ಹೋಗಿ ಬರುತ್ತಾರೆ. ಕಳೆದ ವರ್ಷ ಕಾಂತಾರ ಲೀಲಾ ಹೊಸದೊಂದು ಕ್ರೇಜ್ ಸೃಷ್ಟಿಸಿ, ಮುತ್ತಿನ ಪಲ್ಲಕ್ಕಿ ಏರಿ ಕರ್ನಾಟಕ ಮಾತ್ರವಲ್ಲದೇ ಇಡೀ ಜಗತ್ತು ಸುತ್ತಿಬಂದರು. ಅಚ್ಚರಿ ಅಂದರೆ ಈ ನಟಿ ಕರ್ನಾಟಕ ತುಂಬೆಲ್ಲಾ ದಿಬ್ಬಣ ಹೊರಡುವ ಮೊದಲೇ ಸಂಚಲನ ಸೃಷ್ಟಿಸಿದ್ದಾರೆ. ಅದೊಂದು ಹಾಡಿನಿಂದ ಕರ್ನಾಟಕ ಕ್ರಷ್ ಕಿರೀಟ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಅಷ್ಟಕ್ಕೂ, ಆ ನಟಿ ಬೇರಾರು ಅಲ್ಲ ಕೌಸಲ್ಯ ಸುಪ್ರಜಾ ರಾಮನ (Kausalya Supraja Rama) ರಾಣಿ ಬೃಂದಾ ಆಚಾರ್ಯ

    ಬೃಂದಾ ಆಚಾರ್ಯ (Brinda Acharya) ಹೊನ್ನಾವರದ ಹೊನ್ನಿನಂತಹ ಚೆಲುವೆ.  ಅಮರ ಶಿಲ್ಪಿ ಜಕಣಚಾರಿ ಕೆತ್ತಿದ ಶಿಲಾಬಾಲಿಕೆಯಂತಿರೋ ಈ ಬೆಡಗಿ, ನಗುವೆಂಬ ಆಭರಣದಿಂದಲೇ ಕನ್ನಡ ಕಲಾಭಿಮಾನಿಗಳನ್ನ  ಮನಸೂರೆಗೊಳ್ಳುತ್ತಿದ್ದಾರೆ. ತನ್ನ ಸಹಜ ಸೌಂದರ್ಯದಿಂದ ಹರೆಯದ ಹುಡುಗರ  ಹೃದಯ ಕದ್ದು, ಪಡ್ಡೆಹೈಕ್ಳ ನಿದ್ದೆಗೆಡಿಸಿರೋ ಈ ಸುಂದರಿ, `ಕೌಸಲ್ಯೆಯ ಸುಪುತ್ರ ರಾಮ’ನಿಗೆ ಜೊತೆಯಾಗಿ ಕರ್ನಾಟಕ ಕ್ರಷ್ ಆಗುವತ್ತ ಹೊರಟಿದ್ದಾಳೆ. ಈಗಾಗಲೇ ಶಿವಾನಿಯಾಗಿ ಎಲ್ಲರ ಹೃದಯ ಗೆದ್ದಿದ್ದಾಳೆ. ಈಕೆಯ ಜವಾನಿ ಕಂಡು ತಲೆಕೆಡಿಸಿಕೊಂಡಿರೋ ಹುಡುಗರು, ನಾವು ಸೋತೋಗ್ಬಿಟ್ವಲ್ಲೇ ಶಿವಾನಿ ಅಂತ ಹಾಡಿ ಕುಣಿಯುತ್ತಿದ್ದಾರೆ.

    ಇದೇ ಖುಷಿಯಲ್ಲಿ ನಮ್ಮೊಟ್ಟಿಗೆ ಮಾತಿಗಿಳಿದ ಶಿವಾನಿ, ಜುಲೈ 28 ರಿಂದ ನಾನು ಪಡ್ಡೆಹುಡುಗರ ಆಲ್ ಟೈಮ್ ಕ್ರಷ್ ಆಗೋದ್ರಲ್ಲಿ ನೋ ಡೌಟ್ ಎಂದರು. ಅಂದ್ಹಾಗೇ, ಜುಲೈ 28 ರಂದು ಶಿವಾನಿ ನಟಿಸಿರುವ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕರ್ನಾಟಕದಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಶಶಾಂಕ್ (Shashank) ನಿರ್ದೇಶನ ಚಿತ್ರಕ್ಕಿದ್ದು, ಡಾರ್ಲಿಂಗ್ ಕೃಷ್ಣಾಗೆ (Darling Krishna) ಶಿವಾನಿ ಅಲಿಯಾಸ್ ಬೃಂದಾ ಆಚಾರ್ಯ ಜೋಡಿಯಾಗಿದ್ದಾರೆ. ಮಿಲನ ನಾಗರಾಜ್ ಕೂಡ ಈ ಸಿನಿಮಾದಲ್ಲಿ ಮಿಂಚಿದ್ದು, ನಿಧಿ ಪಾತ್ರವನ್ನ ಡೈರೆಕ್ಟರ್ ಗುಟ್ಟಾಗಿರಿಸಿದ್ದಾರೆ

    ನಿರ್ದೇಶಕ ಶಶಾಂಕ್ ಅವರು ತಮ್ಮ ಸಿನಿಮಾಗಳಲ್ಲಿ ನಟಿಮಣಿಯರಿಗೆ ಪವರ್ ಫುಲ್ ರೋಲ್ ನ ಸೃಷ್ಟಿ ಮಾಡ್ತಾರೆ. ಫರ್ಪಾಮೆನ್ಸ್ ಗೆ ಸ್ಕೋಪ್ ಇರುವ ಪಾತ್ರ ಕೆತ್ತನೆ ಮಾಡುವುದರಿಂದ ಮೊಗ್ಗಿನ ಮನಸು ಡೈರೆಕ್ಟರ್ ಜೊತೆ ವರ್ಕ್ ಮಾಡುವುದಕ್ಕೆ ನಾಯಕಿಯರು ತುದಿಗಾಲಲ್ಲಿ ನಿಂತಿರ್ತಾರೆ. ಇದಕ್ಕೆ ಬೃಂದಾ ಆಚಾರ್ಯ ಕೂಡ ಹೊರತಾಗಿರಲಿಲ್ಲ. ಯಾವಾಗ ಶಶಾಂಕ್ ಸರ್ ಸಿನಿಮಾದಲ್ಲಿ ಅವಕಾಶ ಸಿಗುತ್ತಪ್ಪ ಅಂತ ಕಾಯ್ತಿದ್ದ ಬೃಂದಾಗೆ, `ಕೌಸಲ್ಯ ಸುಪ್ರಜಾ  ರಾಮ’ ಚಿತ್ರದಲ್ಲಿ ಶಿವಾನಿ ಪಾತ್ರ ಪೋಷಣೆ ಮಾಡುವ ಚಾನ್ಸ್ ಸಿಗ್ತು. ರಿಯಲ್ ಲೈಫ್ ನಲ್ಲೂ ಎಂಜಿನಿಯರ್ ಆಗಿ ವರ್ಕ್ ಮಾಡ್ತಿದ್ದ ಬೃಂದಾಗೆ, ರೀಲ್ ಲೈಫ್ ನಲ್ಲಿ, `ಕೌಸಲ್ಯ ಸುಪ್ರಜಾ ರಾಮ’ದಲ್ಲಿ ಎಂಜಿನಿಯರ್  ಹುಡುಗಿ ಪಾತ್ರ ಪ್ಲೇ ಮಾಡುವ ಅದೃಷ್ಟ ಒದಗಿಬಂತು. ಹೀಗಾಗಿ, ಬೃಂದಾ ದಿಲ್ ಖುಷ್ ಆಗಿದ್ದಾರೆ. ಈ ಸಿನಿಮಾ ರಿಲೀಸ್ ಆದ್ಮೇಲೆ ಎಲ್ಲಾ ಹುಡುಗರು ಶಿವಾನಿ ಥರ ಹುಡುಗಿ ಬೇಕು ಅಂತ ಹಠ ಹಿಡಿಯುತ್ತಾರೆಂದು ಖುಷಿಯಿಂದ ಹೇಳಿಕೊಳ್ತಾರೆ.

    ಈ ಹಿಂದೆ ಬೃಂದಾ ಎರಡು ಸಿನಿಮಾ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಜೊತೆ `ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ಕ್ಲಾಸಿಕ್ ಕ್ಯಾರೆಕ್ಟರ್ ಪ್ಲೇ ಮಾಡಿ ಎಲ್ಲರ ಏಂಜೆಲ್ ಆಗಿದ್ದರು. `ಜೂಲಿಯಟ್’ ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ಸ್ ಕಲಿತು ಕಿಕ್ಕಿರಿಸಿದ್ದರು. ಈಗ `ಕೌಸಲ್ಯ ಸುಪ್ರಜಾ ರಾಮ’ದಲ್ಲಿ ಶಿವಾನಿಯಾಗಿ ಕಲಾರಸಿಕರನ್ನು ಕ್ಲೀನ್ ಬೋಲ್ಡ್ ಮಾಡಲು ಬರುತ್ತಿದ್ದಾರೆ. ಕಿರುತೆರೆ ಲೋಕದಲ್ಲಿ ಶನಿ ಸೀರಿಯಲ್ ನಲ್ಲಿ ದಾಮಿನಿಯಾಗಿ ಮಿಂಚಿ, ಪ್ರೇಮಂ ಪೂಜ್ಯಂ ಎನ್ನುತ್ತಾ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಟ್ಟ ಬೃಂದಾ, ಒಂದಾದ್ಮೇಲೊಂದು ಸಿನಿಮಾ ಮೂಲಕ ಬೆಳ್ಳಿತೆರೆನಾ ಆವರಿಸಿಕೊಳ್ತಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಭಿನ್ನ- ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಚಿತ್ರಪ್ರೇಮಿಗಳ ದಿಲ್ ಕದಿಯುತ್ತಿದ್ದಾರೆ. ಸ್ಟಾರ್ ನಾಯಕಿಯಾಗುವತ್ತ ಲಗ್ಗೆ ಇಡುತ್ತಿದ್ದಾರೆ. ಆಲ್ ದಿ ಬೆಸ್ಟ್ ಬೃಂದಾ ಆಚಾರ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕೌಸಲ್ಯ ಸುಪ್ರಜಾ ರಾಮ’ ಡಾರ್ಲಿಂಗ್ ಕೃಷ್ಣ ಕರಿಯರ್ ನ ಬಿಗ್ಗೆಸ್ಟ್ ಸಿನಿಮಾ: ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಗ್ಯಾರಂಟಿ ಎಂದ ಡೈರೆಕ್ಟರ್ ಶಶಾಂಕ್

    ‘ಕೌಸಲ್ಯ ಸುಪ್ರಜಾ ರಾಮ’ ಡಾರ್ಲಿಂಗ್ ಕೃಷ್ಣ ಕರಿಯರ್ ನ ಬಿಗ್ಗೆಸ್ಟ್ ಸಿನಿಮಾ: ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಗ್ಯಾರಂಟಿ ಎಂದ ಡೈರೆಕ್ಟರ್ ಶಶಾಂಕ್

    ಬಿಟ್ಟಿ ಬಿಲ್ಡಪ್ ಕೊಡದೇ ಸೈಲೆಂಟಾಗಿಯೇ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಂಚಲನ ಮೂಡಿಸಿರುವ ಸಿನಿಮಾಗಳ ಪೈಕಿ `ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಚಿತ್ರವೂ ಒಂದು. ನಿರ್ದೇಶಕ ಶಶಾಂಕ್ ಕಲ್ಪನೆಯಲ್ಲಿ ಅರಳಿರುವ ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ (Darling Krishna) ಹೀರೋ. ಪ್ರೇಮಂಪೂಜ್ಯಂ ಸಿನಿಮಾ ಖ್ಯಾತಿಯ ಬೃಂದಾ ಆಚಾರ್ಯ (Brinda Acharya) ಹಾಗೂ ಮಿಲನ ನಾಗರಾಜ್ (Milan Nagaraj) ಇಬ್ಬರು ನಾಯಕಿಯರು. ಆದರೆ, ಯಾರಿಗೆಷ್ಟು ಸ್ಕೋಪು, ಯಾರಿಗೆಷ್ಟು ಸ್ಕ್ರೀನ್ ಸ್ಪೇಸ್ ಇದೆ ಎಂಬುದು ಸದ್ಯಕ್ಕಿರುವ ಕುತೂಹಲ. ಆ ಕುತೂಹಲಕ್ಕೆ ಮತ್ತು `ಕೌಸಲ್ಯ ಸುಪ್ರಜಾ ರಾಮ’ ಕಥನಕ್ಕೆ ಜುಲೈ 28ರಂದು ತೆರೆಬೀಳಲಿದೆ. ಅಂದು ರಾಜ್ಯಾದ್ಯಂತ ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ.

    `ಕೌಸಲ್ಯ ಸುಪ್ರಜಾ ರಾಮ’ ಟೈಟಲ್ ಕೇಳಿದಾಕ್ಷಣ ಸುಪ್ರಭಾತ ನೆನಪಾಗೋದು ಸಹಜ. ಆದರೆ, ನಿರ್ದೇಶಕ ಶಶಾಂಕ್ ಈ ಚಿತ್ರದ ಮೂಲಕ ಸಿನಿಮಾಪ್ರೇಮಿಗಳಿಗೆ ಹಾಗೂ ಸಮಾಜಕ್ಕೆ ಹೇಳಲು ಹೊರಟಿರುವ ಸಂದೇಶವೇ ಬೇರೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಗಂಡಸು ಅನ್ನೋ ಅಹಂಕಾರನ ತಲೆಗೇರಿಸಿಕೊಂಡಿರೋ ಗಂಡಸರ ಮಧ್ಯೆ ಹೆಣ್ಣುಮಕ್ಕಳು ಎಷ್ಟೆಲ್ಲಾ ಸಂಕಷ್ಟಗಳನ್ನ ಸಹಿಸಿಕೊಂಡು ಬದುಕುತ್ತಿದ್ದಾರೆ. ಮೇಲ್ ಇಗೋದಿಂದ ಸ್ತ್ರೀಯರು ಎಷ್ಟು ಸಫರ್ ಆಗ್ತಿದ್ದಾರೆ, ಮೇಲ್ ಇಗೋ ಸಮಾಜವನ್ನ ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ ಮತ್ತು ಎಷ್ಟೆಲ್ಲಾ ಪರಿಣಾಮ ಬೀರುತ್ತಿದೆ ಇದೆಲ್ಲವನ್ನೂ `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಮೂಲಕ ಶಶಾಂಕ್ ಸೊಸೈಟಿಗೆ ತಿಳಿಸುವುದಕ್ಕೆ ಹೊರಟಿದ್ದಾರೆ. ಇದನ್ನೂ ಓದಿ:ಉಪ್ಪಿ ಅಭಿಮಾನಿಗಳಿಗೆ ಗುಡ್ ನ್ಯೂಸ್- ‌’ಬುದ್ಧಿವಂತ 2′ ಬಿಗ್ ಅಪ್‌ಡೇಟ್

    ಅಚ್ಚರಿ ಅಂದರೆ ಈ ಮೇಲ್ ಇಗೋ ಕುರಿತಾದ ಸಿನಿಮಾ ಇಲ್ಲಿತನಕ ತೆರೆಮೇಲೆ ಬಂದೇ ಇಲ್ಲ. ಫಾರ್ ದಿ ಫಸ್ಟ್ ಟೈಮ್ ನಿರ್ದೇಶಕ ಶಶಾಂಕ್ (Shashank) ಅವರು ನಿಜವಾದ ಗಂಡಸು ಅಂದರೆ ಯಾರು ಅನ್ನೋದನ್ನ ಹೇಳುವುದಕ್ಕೆ ಹೊರಟಿದ್ದಾರೆ. ತಾವು ಕಂಡಿದ್ದು ಮತ್ತು ತಮ್ಮ ಅನುಭವಕ್ಕೆ ಬಂದಿದ್ದು ಎಲ್ಲದನ್ನೂ ಸೇರಿಸಿ, ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ನಾನು ಗಂಡಸು ಎನ್ನುವ ಅಹಂ ಅಷ್ಟು ಬೇಗ ನೆತ್ತಿಯಿಂದಿಳಿಯಲು ಸಾಧ್ಯವಿಲ್ಲ. ಆದರೆ, ಈ ಸಿನಿಮಾಗೆ ಸಮಾಜದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡುವ ಶಕ್ತಿಯಿದೆ. ನಾನು ಇಲ್ಲಿತನಕ ಡೈರೆಕ್ಟ್ ಮಾಡಿರುವ ಸಿನಿಮಾಗಳಲ್ಲಿ ಇದು ನನ್ನ ಅತ್ಯುತ್ತಮ ಸಿನಿಮಾ. ಈ ಚಿತ್ರ ಬ್ಲಾಕ್‍ಬಸ್ಟರ್ ಹಿಟ್ ಆಗುತ್ತೆ ಎನ್ನುವ ಭರವಸೆ ನಂಗಿದೆ ಎನ್ನುತ್ತಾರೆ ನಿರ್ದೇಶಕ ಶಶಾಂಕ್

    ಅಂದ್ಹಾಗೇ, ಶಶಾಂಕ್ ಇಲ್ಲಿವರೆಗೂ ಹತ್ತು ಸಿನಿಮಾ ಡೈರೆಕ್ಟ್ ಮಾಡಿದ್ದಾರೆ. ಆ ಹತ್ತರಲ್ಲಿ ಆರೇಳು ಚಿತ್ರಗಳು ಬ್ಲಾಕ್‍ಬಸ್ಟರ್ ಹಿಟ್ ಲಿಸ್ಟ್ ಸೇರಿವೆ. ಆ ಸಾಲಿಗೆ `ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಸೇರ್ಪಡೆಯಾಗೋದ್ರಲ್ಲಿ ನೋ ಡೌಟ್ ಎಂದು ಹೇಳಿಕೊಳ್ಳುವ ನಿರ್ದೇಶಕರು, ಇದು ಡಾರ್ಲಿಂಗ್ ಕೃಷ್ಣ ಕರಿಯರ್ ಬಿಗ್ಗೆಸ್ಟ್ ಸಿನಿಮಾ ಅಂತ ಅಷ್ಟೇ ಖುಷಿಯಿಂದ ಹೇಳಿಕೊಂಡರು. ಲವ್‍ಮಾಕ್ಟೇಲ್ ಆದಿನಾ ಮತ್ತು ನಿಧಿನಾ ಇಬ್ಬರನ್ನೂ ಡಿಫರೆಂಟಾಗಿ ತೋರಿಸಿದ್ದೇನೆ. ಮೂರು ವಿಭಿನ್ನ ಶೇಡ್‍ಗಳಲ್ಲಿ ಕೃಷ್ಣ ಕಾಣಿಸಿಕೊಂಡರೆ, ಮಾದಕ ಮದನಾರಿಯಂತೆ ಮಿಲನಾ ಮಿಂಚಿದ್ದಾರೆ. ರಿಲೀಸ್ ಆಗಿರುವ ಟ್ರೇಲರ್ ನೋಡಿದರೆ ಗೊತ್ತಾಗುತ್ತೆ ನಿಧಿ ಎಷ್ಟು ಬೋಲ್ಡ್ ಅಂಡ್ ಬ್ಯೂಟಿಫುಲ್ ಅನ್ನೋದು. ಇನ್ನೊಂದು ವಿಶೇಷ ಅಂದರೆ ನಮ್ಮ ಸಿನಿಮಾ ನಟಿ ಬೃಂದಾ ಮೇಲೆ ಹುಡುಗರಿಗೆ ಕ್ರಷ್ ಆಗುತ್ತೆ. ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾ ರಿಲೀಸ್ ಆದ್ಮೇಲೆ ಬೃಂದಾ ಕರ್ನಾಟಕದ ಕ್ರಷ್ ಆಗ್ತಾರೆ ಅದ್ರಲ್ಲಿ ಎರಡು ಮಾತಿಲ್ಲ ಎಂದರು.

    ಶಶಾಂಕ್ ನಿರ್ದೇಶನದ ಎಲ್ಲಾ ಸಿನಿಮಾಗಳಂತೆ ಇಲ್ಲಿಯೂ ಒಂದು ಕ್ಯೂಟ್ ಲವ್‍ಸ್ಟೋರಿನಾ ಕಾಣಬಹುದು. ಡಾರ್ಲಿಂಗ್, ಬೃಂದಾ ಫಸ್ಟ್ ಟೈಮ್ ಸ್ಕ್ರೀನ್ ಶೇರ್ ಮಾಡಿದ್ರೂ `ಶಿವಾನಿ’ ಹಾಡಿನ ಮೂಲಕ ಪಡ್ಡೆಹುಡುಗರ ತಲೆಕೆಡಿಸಿದ್ದಾರೆ. ರಂಗಾಯಣ ರಘು ಹಾಗೂ ಸುಧಾ ಬೆಳವಾಡಿಯವರು ಫ್ಯಾಮಿಲಿ ಆಡಿಯನ್ಸ್ ನ ಅಟ್ರ್ಯಾಕ್ಟ್ ಮಾಡ್ತಿದ್ದಾರೆ. ನಾಗಭೂಷಣ್, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಇದೊಂದು ಕುಟುಂಬ ಸಮೇತ ಥಿಯೇಟರ್‍ಗೆ ಬಂದು ನೋಡುವಂತಹ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ರೀಚ್ ಆಗುವ ಟೆಕ್ನಿಕಲ್ ಕ್ವಾಲಿಟಿ ಪ್ಲಸ್ ಕ್ವಾಂಟಿಟಿಯನ್ನೊಳಗೊಂಡಿದೆ. ಸಿನಿಮಾಟೋಗ್ರಫಿ ಮೂಲಕ ಕಥೆನಾ ಜನರಿಗೆ ಕನ್ವೆ ಮಾಡುವಂತಹ ಪ್ರಯೋಗಕ್ಕೆ ಶಶಾಂಕ್ ಕೈಹಾಕಿದ್ದು, ಸುಜ್ಞಾನ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ.

    ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೆನಡಾ ಹಾಗೂ ಯುಎಸ್‍ಎನಲ್ಲೂ ಬಿಡುಗಡೆಯಾಗ್ತಿದೆ. ಆರ್‌ ಆರ್ ಆರ್ ನಂತಹ ದೊಡ್ಡ ದೊಡ್ಡ ಸಿನಿಮಾಗಳನ್ನ ವಿತರಣೆ ಮಾಡಿದಂತಹ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಡಿಸ್ಟ್ರಿಬ್ಯೂಷನ್ ಜವಬ್ದಾರಿ ಹೊತ್ತಿದೆ. ಜುಲೈ 28ರಂದು ಭರ್ಜರಿಯಾಗಿ ಚಿತ್ರ ರಿಲೀಸ್ ಮಾಡುವ ಪ್ಲ್ಯಾನ್ ರೂಪಿಸಿದೆ. ಈ ಮಧ್ಯೆ ನಿರ್ದೇಶಕ ಶಶಾಂಕ್ ಅವರಿಗೆ `ಕೆ’ ಅಕ್ಷರ ಕೈ ಹಿಡಿಯುತ್ತಾ ಎನ್ನುವ ಕುತೂಹಲದ ಪ್ರಶ್ನೆಯೊಂದು ಮೂಡಿದೆ. ಕೃಷ್ಣನ್ ಲವ್‍ಸ್ಟೋರಿ, ಕೃಷ್ಣಲೀಲಾ ಕೈ ಹಿಡಿದಂತೆ `ಕೆ’ ಅಕ್ಷರದಿಂದ ಶುರುವಾಗುವ `ಕೌಸಲ್ಯ ಸುಪ್ರಜಾ ರಾಮ’ ಚಿತ್ರವೂ ಕೈ ಹಿಡಿಯಬಹುದಾ? ಮೊಗ್ಗಿನ ಮನಸ್ಸು ಡೈರೆಕ್ಟರ್ ಗೆ ಅದೃಷ್ಟ ಖುಲಾಯಿಸಬಹುದಾ? ಹೀಗೊಂದು ಕ್ಯೂರಿಯಾಸಿಟಿ ಎಲ್ಲರಲ್ಲೂ ಮನೆ ಮಾಡಿದೆ. ಅಂದ್ಹಾಗೇ, `ಕೆ’ ಅಕ್ಷರದ ಕೆಜಿಎಫ್, ಕಾಂತಾರ ಸಿನಿಮಾಗಳು ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ವು. ಹೀಗಾಗಿ, `ಕೆ’ ಅಕ್ಷರದ `ಕೌಸಲ್ಯ ಸುಪ್ರಜಾ ರಾಮ’ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿ ಕಾಯುವಂತೆ ಮಾಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 200-300 ಕೋಟಿ ಅಲ್ಲ ಕಥೆ ಮುಖ್ಯ ಎಂದ ಡಾರ್ಲಿಂಗ್: ‘ಕೌಸಲ್ಯ ಸುಪ್ರಜಾ ರಾಮ’ ದಿ ಬೆಸ್ಟ್ ಕಥೆ, ಕೃಷ್ಣ ದಿಲ್ ಖುಷ್

    200-300 ಕೋಟಿ ಅಲ್ಲ ಕಥೆ ಮುಖ್ಯ ಎಂದ ಡಾರ್ಲಿಂಗ್: ‘ಕೌಸಲ್ಯ ಸುಪ್ರಜಾ ರಾಮ’ ದಿ ಬೆಸ್ಟ್ ಕಥೆ, ಕೃಷ್ಣ ದಿಲ್ ಖುಷ್

    ನ್ನಡ ಚಿತ್ರರಂಗದ ಡಾರ್ಲಿಂಗ್ (Darling Krishna),  ಇಂಡಸ್ಟ್ರಿಗೆ ಬಂದು ಹದಿಮೂರು ವರ್ಷಗಳು ಕಳೀತಾ ಬಂತು.  ಈ ಹದಿಮೂರು ವರ್ಷದಲ್ಲಿ  20 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಹೊಸ ಬಗೆಯ ಪ್ರಯೋಗ ಮಾಡುತ್ತಾ ಬೆಳ್ಳಿತೆರೆಯನ್ನಾವರಿಸಿಕೊಂಡಿದ್ದಾರೆ. ಸೋಲು, ಗೆಲುವನ್ನ ಸಮನಾಗಿ ಕಾಣುತ್ತಾ ಮುನ್ನಡೆಯುತ್ತಿರುವ ಡಾರ್ಲಿಂಗ್, ಲವ್ ಮಾಕ್ಟೇಲ್ ಚಿತ್ರದಿಂದ ಸ್ಟಾರ್ ಪಟ್ಟಕ್ಕೇರಿದರು. ನಟನಾಗಿ, ನಿರ್ದೇಶಕನಾಗಿ ದಿಗ್ವಿಜಯ ಸಾಧಿಸಿದರು. ಮದರಂಗಿ ಕೃಷ್ಣನಾಗಿದ್ದ ಡಾರ್ಲಿಂಗ್, ಲವ್ ಮಾಕ್ಟೇಲ್ ಆದಿಯಾಗಿ ಪ್ರಮೋಷನ್ ಪಡೆದರು. ಈಗ ಕೌಸಲ್ಯ ಸುಪ್ರಜಾ ರಾಮನಾಗಿ(Kausalya Supraja Rama)  ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಇದು ನನ್ನ ಸಿನಿಮಾ ಕರಿಯರ್ ನ ದಿ ಬೆಸ್ಟ್ ಕಥೆಯುಳ್ಳ ಚಿತ್ರವೆಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

    `ಕೌಸಲ್ಯ ಸುಪ್ರಜಾ ರಾಮ’ ಶೀರ್ಷಿಕೆಯಿಂದಲೇ ಕಲಾಭಿಮಾನಿಗಳ ಕಿವಿಯನ್ನರಳಿಸಿದ್ದ ಸಿನಿಮಾ. ಶಶಾಂಕ್ (Shashank) ನಿರ್ದೇಶನದ ಚಿತ್ರ ಎನ್ನುವ ಕಾರಣಕ್ಕೆ ಕುತೂಹಲ ಮೂಡಿತ್ತು. ಡಾರ್ಲಿಂಗ್ ಎಂಟ್ರಿಕೊಟ್ಮೇಲೆ ಆ ಕೂತೂಹಲ ದುಪ್ಪಟ್ಟಾಯ್ತು. ಬದಲಾದ ಆದಿಯ ಲುಕ್ಕು, ಗೆಟಪ್ಪು ಅಭಿಮಾನಿಗಳನ್ನ ಮಾತ್ರವಲ್ಲ ಸಿನಿಮಾಪ್ರೇಮಿಗಳನ್ನೂ ಕಣ್ಣರಳಿಸಿ ನೋಡುವಂತೆ ಮಾಡ್ತು.ಅದ್ಯಾವಾಗ ಆದಿ ಜೊತೆ ಪ್ರಮೋಷನಲ್ ವಿಡಿಯೋಗಳಲ್ಲಿ ನಿಧಿ ಕಾಣಿಸಿಕೊಂಡರೋ ಕೌಸಲ್ಯ ಸುಪ್ರಜಾ ರಾಮನ ಮೇಲೆ ನಿರೀಕ್ಷೆ ದುಪ್ಪಟ್ಟಾಯ್ತು. ಟ್ರೇಲರ್ ಹಾಗೂ ಹಾಡುಗಳನ್ನ ನೋಡಿದ್ಮೇಲೆ ಕುತೂಹಲ ಗರಿಗೆದರಿದೆ. ಫಸ್ಟ್ ಡೇ ಫಸ್ಟ್ ಶೋ ಮಿಸ್ ಮಾಡದೇ ಸಿನಿಮಾ ನೋಡುವ ಕಾತುರ ಪ್ರೇಕ್ಷಕರಲ್ಲಿ ಹೆಚ್ಚಿದೆ. ಇದನ್ನೂ ಓದಿ:ದುಬೈನಲ್ಲಿ ಬಿಗ್ ಬಾಸ್ ದೀಪಿಕಾ ದಾಸ್ ಮೋಜು-ಮಸ್ತಿ

    ಆದಿ ಮತ್ತು ನಿಧಿನಾ ಒಟ್ಟಿಗೆ ನೋಡಬೇಕೆನ್ನುವ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಈ ಸಿನಿಮಾ ಖಂಡಿತವಾಗಲೂ ಇಷ್ಟವಾಗುತ್ತೆ. ವಿಶೇಷ ಅಂದರೆ ಹಿಂದೆಂದೂ ಕಂಡಿರದ ಅವತಾರದಲ್ಲಿ ಕೃಷ್ಣ ಹಾಗೂ ಮಿಲನ ಮಿಂಚಿದ್ದಾರೆ. ಡಾರ್ಲಿಂಗ್‍ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡ್ರೂ ಕೂಡ ಕೃಷ್ಣ ಹಾಗೂ ಮಿಲನ ನಾಗರಾಜ್ ಕಾಂಬಿನೇಷನ್ ದೃಶ್ಯಗಳು ಚಿತ್ರದಲ್ಲಿರಲಿವೆ. ಈ ಬಗ್ಗೆ ಹೆಚ್ಚು ಡೀಟೈಲ್ಸ್ ಬಿಟ್ಟುಕೊಡದ ಕೃಷ್ಣ, ಇಲ್ಲಿ ವಿಲನ್ನು ನಾನೇ, ಹೀರೋನೂ ನಾನೇ ಅಂತೇಳುವ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದರು. ನನ್ನ ಕ್ಯಾರೆಕ್ಟರ್ ಡೆಪ್ತ್ ಆಗಿದೆ. ವಿವಿಧ ಆಯಾಮಗಳನ್ನೊಳಗೊಂಡ ಪಾತ್ರ ಇದಾಗಿದ್ದು, ನನ್ನ ಕರಿಯರ್ ನ ದಿ ಬೆಸ್ಟ್ ಕಥೆಯುಳ್ಳ ಚಿತ್ರ ಎಂದು ಖುಷಿಯಿಂದ ಹೇಳಿಕೊಂಡರು.

    ಕೌಸಲ್ಯ ಸುಪ್ರಜಾ ರಾಮ ಡಾರ್ಲಿಂಗ್ ಕರಿಯರ್ ನ ಬಿಗ್ಗೆಸ್ಟ್ ಸಿನಿಮಾ ಅಂತೆ. ಹೈಯೆಸ್ಟ್ ರೆಮ್ಯೂನರೇಷನ್ ಪಡೆದಿದ್ದು ಇದೇ ಸಿನಿಮಾಗೆನ್ನುವ ಸುದ್ದಿಯಿದೆ. ಈಗಾಗಲೇ ನಾಲ್ಕೈದು ಭಾರೀ ಸಿನಿಮಾ ನೋಡಿರುವ ಡಾರ್ಲಿಂಗ್, ಈ ಸಿನಿಮಾ ಒಳ್ಳೆ ಸಿನಿಮಾ ಆಗುತ್ತೆ. ಪ್ರೇಕ್ಷಕರ ಮನಸಲ್ಲಿ ದೀರ್ಘಕಾಲ ಉಳಿಯೋ ಚಿತ್ರವಾಗುತ್ತೆ ಎಂದಿದ್ದಾರೆ. ಸ್ಟ್ರಾಂಗ್ ಕಂಟೆಂಟ್ ಮುಂದೆ 200 ಕೋಟಿ 300 ಕೋಟಿ ಲೆಕ್ಕಕ್ಕೆ ಬರಲ್ಲ. ಬಿಲ್ಡಪ್, ಹೈಪ್ ಕೊಡುವುದರ ಕಡೆ ಗಮನ ಕೊಡದೇ, ಸಿನಿಮಾ ಮಾಡುವ ಕಡೆ ಗಮನ ಕೊಡಬೇಕು. ಆಗ ಒಳ್ಳೆ ಕಂಟೆಂಟ್ ಇರುವ ಸಿನಿಮಾಗಳನ್ನ ಕಮರ್ಷಿಯಲ್ ವೇನಲ್ಲಿ ಕಟ್ಟಿಕೊಡುವುದಕ್ಕೆ ಸಾಧ್ಯವಾಗುತ್ತೆನ್ನುವ ಮಾತನ್ನಾಡಿದರು. ಇಲ್ಲಿತನಕ ಯಾರೂ ಟಚ್ ಮಾಡದ ಕಥೆಯೊಂದನ್ನ ನಿರ್ದೇಶಕ ಶಶಾಂಕ್ `ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಹೇಳಿದ್ದು, ಪ್ರತಿಯೊಬ್ಬರಿಗೂ ಈ ಸಿನಿಮಾ ಕನೆಕ್ಟ್ ಆಗುತ್ತೆ ಎಂದರು.

    ಅಂದ್ಹಾಗೇ ಈ ಚಿತ್ರ ಮೇಲ್ ಇಗೋ ಕುರಿತಾದದ್ದು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಗಂಡಸು ಅನ್ನೋ ಅಹಂಕಾರನ ತಲೆಗೇರಿಸಿಕೊಂಡಿರೋ ಗಂಡಸರ ಮಧ್ಯೆ ಹೆಣ್ಣುಮಕ್ಕಳು ಎಷ್ಟೆಲ್ಲಾ ಸಂಕಷ್ಟಗಳನ್ನ ಸಹಿಸಿಕೊಂಡು ಬದುಕುತ್ತಿದ್ದಾರೆ. ಮೇಲ್ ಇಗೋದಿಂದ ಸ್ತ್ರೀಯರು ಎಷ್ಟು ಸಫರ್ ಆಗ್ತಿದ್ದಾರೆ, ಮೇಲ್ ಇಗೋ ಸಮಾಜವನ್ನ ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ ಮತ್ತು ಎಷ್ಟೆಲ್ಲಾ ಪರಿಣಾಮ ಬೀರುತ್ತಿದೆ ಅನ್ನೋದೇ ಕೌಸಲ್ಯ ಸುಪ್ರಜಾ ರಾಮ ಚಿತ್ರದ ತಿರುಳು. ಡಾಲಿಂಗ್ ಕೃಷ್ಣ, ಮಿಲನ ನಾಗರಾಜ್ (Milana Nagaraj), ಬೃಂದಾ ಆಚಾರ್ಯ, ರಂಗಾಯಣ ರಘು, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್, ನಾಗಭೂಷಣ್ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಮೊಗ್ಗಿನ ಮನಸ್ಸು, ಕೃಷ್ಣನ್ ಲವ್‍ಸ್ಟೋರಿ, ಕೃಷ್ಣಲೀಲಾ ಥರ ಇಲ್ಲೊಂದು ಕ್ಯೂಟ್ ಲವ್‍ಸ್ಟೋರಿಯ ಜೊತೆಗೆ ಫ್ಯಾಮಿಲಿ ವ್ಯಾಲ್ಯೂಸ್ ಕುರಿತಾದ ಅಂಶಗಳನ್ನ ಚಿತ್ರದಲ್ಲಿ ನೋಡಬಹುದು. ತಾಯಿ-ಮಗನ ಸೆಂಟಿಮೆಂಟ್‍ನ ಚಿತ್ರದಲ್ಲಿ ಕಾಣಬಹುದು.

     

    ಇದೇ ಜುಲೈ 28ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಕುಟುಂಬ ಸಮೇತ ಥಿಯೇಟರ್‍ಗೆ ಬಂದು ನೋಡುವಂತಹ ಸಿನಿಮಾ ಇದಾಗಿದ್ದು, ಪ್ಯಾನ್ ಇಂಡಿಯಾ ರೀಚ್ ಆಗುವ ಟೆಕ್ನಿಕಲ್ ಕ್ವಾಲಿಟಿ ಪ್ಲಸ್ ಕ್ವಾಂಟಿಟಿಯನ್ನೊಳಗೊಂಡಿದೆ. ಸಿನಿಮಾಟೋಗ್ರಫಿ ಮೂಲಕ ಕಥೆನಾ ಜನರಿಗೆ ಕನ್ವೆ ಮಾಡುವಂತಹ ಪ್ರಯೋಗಕ್ಕೆ ಶಶಾಂಕ್ ಕೈಹಾಕಿದ್ದು, ಸುಜ್ಞಾನ್ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಅಡಿಯಲ್ಲಿ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ರಿಚ್ ಆಗಿಯೇ ಮೂಡಿಬಂದಿದೆ. ಇಂಟ್ರೆಸ್ಟಿಂಗ್ ಸಂಗತಿ ಅಂದರೆ `ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೆನಡಾ ಹಾಗೂ ಯುಎಸ್‍ಎ ನಲ್ಲೂ ಬಿಡುಗಡೆಯಾಗ್ತಿದೆ. ಆರ್‌ ಆರ್ ಆರ್ ನಂತಹ ದೊಡ್ಡ ದೊಡ್ಡ ಸಿನಿಮಾಗಳನ್ನ ವಿತರಣೆ ಮಾಡಿದಂತಹ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ, `ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಡಿಸ್ಟ್ರಿಬ್ಯೂಷನ್ ಜವಾಬ್ದಾರಿ ಹೊತ್ತಿರುವುದು ವಿಶೇಷ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಶಶಾಂಕ್ ಸಾವು

    ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಶಶಾಂಕ್ ಸಾವು

    ಬೆಂಗಳೂರು: ಪ್ರೀತಿ ವಿಚಾರಕ್ಕೆ ಯುವಕನನ್ನು ಕಿಡ್ನಾಪ್ ಮಾಡಿ ಬೆಂಕಿ ಹಚ್ಚಿದ್ದರಿಂದ ಗಂಭೀರ ಗಾಯಗೊಂಡಿದ್ದ ಶಶಾಂಕ್ (Shashank) ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ  ಸಾವನ್ನಪ್ಪಿದ್ದಾನೆ.

    ಆರ್‌ಆರ್ ನಗರದ ನಿವಾಸಿ ರಂಗನಾಥ್ ಹಾಗೂ ಸತ್ಯಪ್ರೇಮ ದಂಪತಿಯ ಪುತ್ರ ಶಶಾಂಕ್‌ನನ್ನು (19) ದುಷ್ಕರ್ಮಿಗಳು ಕಿಡ್ನಾಪ್ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಘಟನೆಯಿಂದಾಗಿ ಶಶಾಂಕ್ ದೇಹದ 90% ರಷ್ಟು ಭಾಗ ಸುಟ್ಟು ಹೋಗಿತ್ತು. ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಶಶಾಂಕ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

    ಘಟನೆಯೇನು?
    ನಗರದ ಖಾಸಗಿ ಕಾಲೇಜಿನಲ್ಲಿ ಯುವಕ ಸಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ. ಶಶಾಂಕ್ ತನ್ನ ಸಂಬಂಧಿಕರ ಮಗಳೊಬ್ಬಳನ್ನು ಪ್ರೀತಿಸುತಿದ್ದ. ಇದಕ್ಕೆ ಯುವತಿಯ ಪೋಷಕರ ವಿರೋಧವಿತ್ತು. ಇದೇ ಕಾರಣಕ್ಕೆ ಕಾಲೇಜ್ ಬಳಿ ಇದ್ದ ಯುವಕನನ್ನು ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಕೈ ಕಾಲು ಕಟ್ಟಿ ಬೆಂಕಿ ಹಚ್ಚಿದ್ದರು. ಇದನ್ನೂ ಓದಿ ಪ್ರೀತಿ ವಿಚಾರಕ್ಕೆ ಕಿರಿಕ್ – ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು

    ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ಶಶಾಂಕ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಇದರಿಂದ ಅಸಮಾಧಾನಗೊಂಡಿದ್ದ ಯುವತಿಯ ಪೋಷಕರು ಆತನ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಇದಾದ ಬಳಿಕ ಯುವತಿಯ ವಿಚಾರದಿಂದ ದೂರ ಇರುತ್ತೇನೆ ಎಂದು ಶಶಾಂಕ್ ಹೇಳಿದ್ದ. ಆದರೂ ದುಷ್ಕರ್ಮಿಗಳು ಶಶಾಂಕ್ ಮೇಲೆ ವಿಕೃತಿ ಮೆರೆದಿದ್ದರು. ಇದನ್ನೂ ಓದಿ: ಅಪ್ಪ-ಅಮ್ಮನ ತಲೆಗೆ ರಾಡ್‍ನಿಂದ ಹೊಡೆದು ಕೊಂದು ಮಗ ಎಸ್ಕೇಪ್!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕೌಸಲ್ಯ ಸುಪ್ರಜಾ ರಾಮ’  ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ಶಾಂಕ್ (Shashank) ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಚಿತ್ರದ ಟ್ರೈಲರ್ (Trailer) ಇತ್ತೀಚೆಗೆ ಬಿಡುಗಡೆಯಾಯಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  (Sudeep) ಟ್ರೈಲರ್ ಅನಾವರಣ ಮಾಡಿದರು.  ‌

    ಈ ಟ್ರೈಲರ್ ನಲ್ಲಿ ಬಹಳ ಒಳ್ಳೆಯ ಕಥೆಯನ್ನು ಕಂಡೆ ಎಂದು ಮಾತು ಪ್ರಾರಂಭಿಸಿದ ಕಿಚ್ಚ ಸುದೀಪ್,ಇಲ್ಲಿ ನಂಬಿಕೆ ಮತ್ತು ಸಂಬಂಧಗಳ ಸಂಘರ್ಷ ಇದೆ. ಶಶಾಂಕ್ ಅವರು ಎಮೋಷನ್ ಗಳನ್ನು ಹಿಡಿದಿಡುವ ರೀತಿ ನನಗೆ ಇಷ್ಟ. ಚಿತ್ರದ ಹಾಡುಗಳು ಚೆನ್ನಾಗಿವೆ. ಈ ಚಿತ್ರ ಸಹ ಚೆನ್ನಾಗಿ ಮೂಡಿಬಂದಿರುತ್ತದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

    ನಾನು ಇದುವರೆಗೂ ಮಾಡಿರುವ ಸಿನಿಮಾಗಳಲ್ಲಿ ಬೆಸ್ಟ್ ಸಿನಿಮಾ ಇದು. ಕಾರಣ ಈ ಚಿತ್ರದ ಕಥೆ. ಈ ಕಥೆಗೆ ಯಾವುದೋ ಒಂದು ಆಯಾಮವಿಲ್ಲ, ಹಲವು ಆಯಾಮಗಳಿವೆ. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ರಿಲೇಟ್ ಆಗುವ ಕಥೆ ಇದು. ಪ್ರತಿಯೊಬ್ಬರೂ ಚಿತ್ರದಲ್ಲಿನ ಯಾವುದಾದರೊಂದು ಪಾತ್ರದ ಜೊತೆಗೆ ರಿಲೇಟ್ ಮಾಡಿಕೊಳ್ಳಬಹುದು. ಈ ತರಹದ ಕಥೆ ಸಿಗೋದು ಕಷ್ಟ. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಹುದು ಎಂಬ ನಿರೀಕ್ಷೆ ಇದೆ. ಕೃಷ್ಣ ಅವರನ್ನು ಬೇರೆ ತರಹ ತೋರಿಸುವ ಪ್ರಯತ್ನ ಮಾಡಿದ್ದೇನೆ.   ಮಿಲನಾ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿದ್ದು ಬೇರೆ ಕಾರಣಕ್ಕಲ್ಲ, ಅವರ ಪ್ರತಿಭೆಗಾಗಿ. ಆ ಪಾತ್ರ ನಿಭಾಯಿಸುವುದು ಬಹಳ ಕಷ್ಟ. ಬಹಳ ನೈಜವಾಗಿ ಮತ್ತು ಸೆನ್ಸಿಬಲ್ ಆಗಿ ನಟಿಸಬೇಕಿತ್ತು. ನಿರೀಕ್ಷೆಗೂ ಮೀರಿ ಅವರು ನಟಿಸಿದ್ದಾರೆ. ಬೃಂದಾ ಅವರ ಅಭಿನಯ ಕೂಡ ಅದ್ಭುತವಾಗಿದೆ. ಜುಲೈ 28ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಇಷ್ಟವಾಗಬಹುದೆಂಬ ನಂಬಿಕೆ ಇದೆ ಎಂದು ನರ್ದೇಶಕ ಶಶಾಂಕ್ ತಿಳಿಸಿದರು. ಇದನ್ನೂ ಓದಿ:ನಟನೆ ಜೊತೆಗೆ ನಿರ್ದೇಶನಕ್ಕಿಳಿದ ʼಗರುಡ’ ಖ್ಯಾತಿಯ ಸಿದ್ದಾರ್ಥ್ ಮಹೇಶ್

    ನಾನು ಇಷ್ಟು ವರ್ಷಗಳಲ್ಲಿ ಕೇಳಿರುವ ದಿ ಬೆಸ್ಟ್ ಕಥೆ ಇದು ಎಂದ ನಾಯಕ ಡಾರ್ಲಿಂಗ್ ಕೃಷ್ಣ (Darling Krishna),  ಈ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಮನರಂಜನಾತ್ಮಕವಾಗಿ ಹೇಳಿದ್ದಾರೆ. ಶಶಾಂಕ್ ಅವರು ಬಂದಾಗ, ಕಥೆ ಇರಲಿಲ್ಲ. ನಿಮಗೆ ಯಾವ ತರಹದ ಸಿನಿಮಾ ಬೇಕು ಎಂದು ಕೇಳಿದರು. ನೀವು ನಿಮ್ಮ ಸ್ಟೈಲ್ ನಲ್ಲೇ ಮಾಡಿ ಎಂದು ಹೇಳಿದೆ. ಒಂದು ತಿಂಗಳ ನಂತರ ಈ ಕಥೆ ತಂದರು. ಬಹಳ ಸುಲಭವಾಗಿ ಮುಗಿದ ಚಿತ್ರ ಇದು. ನಟನೆ ಮಾಡಿದ್ದೇ ಗೊತ್ತಾಗಲಿಲ್ಲ. ಈ ಸಿನಿಮಾ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದು ತಿಳಿಸಿದರು.

    ಶಶಾಂಕ್ ಅವರು ಬಂದು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಮ್ಮ ಕೌರವ ಪ್ರೊಡಕ್ಷನ್ ಹೌಸ್ ಹಾಗೂ ಶಶಾಂಕ್ ಸಿನಿಮಾಸ್ ಜೊತೆ ಸೇರಿ ಈ ಚಿತ್ರ‌ ನಿರ್ಮಾಣ ಮಾಡಿದ್ದೇವೆ.‌ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಹಿಟ್ ಆಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಸುದೀಪ್ ಅವರಿಗೆ ಧನ್ಯವಾದ ಎಂದು ಬಿ.ಸಿ.ಪಾಟೀಲ್ (BC Patil). ಚಿತ್ರದಲ್ಲಿ ನಟಿಸಿರುವ ಮಿಲನ ನಾಗರಾಜ್, ಬೃಂದಾ ಆಚಾರ್ಯ, ನಾಗಭೂಷಣ್ ಸೇರಿದಂತೆ ಅನೇಕ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]