Tag: sharukh khan

  • ನಯನತಾರಾ- ವಿಘ್ನೇಶ್ ಶಿವನ್ ಮದುವೆಯಲ್ಲಿ ಸ್ಟಾರ್ ಕಲಾವಿದರ ದಂಡು: ಮದುವೆ ಆಲ್ಬಂ ಔಟ್

    ನಯನತಾರಾ- ವಿಘ್ನೇಶ್ ಶಿವನ್ ಮದುವೆಯಲ್ಲಿ ಸ್ಟಾರ್ ಕಲಾವಿದರ ದಂಡು: ಮದುವೆ ಆಲ್ಬಂ ಔಟ್

    ಕಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ನಯನತಾರಾ ಮತ್ತು ವಿಘ್ವೇಶ್ ಶಿವನ್ ಇದೀಗ ಮದುವೆ ಒಂದು ತಿಂಗಳು ಕಳೆದಿದೆ. ಇದೇ ಖುಷಿಯಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಕೂಡ ತಮ್ಮ ಮದುವೆ ಆಲ್ಬಂ ರಿವೀಲ್ ಮಾಡಿದ್ದಾರೆ. ಈ ಜೋಡಿಯ ಮದುವೆಗೆ ಸೂಪರ್ ಸ್ಟಾರ್ಸ್‌ ದಂಡೇ ಹರಿದು ಬಂದಿತ್ತು. ಸದ್ಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by Vignesh Shivan (@wikkiofficial)

    ನಯನತಾರಾ ಮತ್ತು ವಿಘ್ನೇಶ್ ಶಿವನ್ ಹಲವು ವರ್ಷಗಳ ಡೇಟಿಂಗ್ ನಂತರ ಗುರು ಹಿರಿಯರ ಸಮ್ಮುಖದಲ್ಲಿ ಜೂನ್ 9ರಂದು ಹಸೆಮಣೆ ಏರಿದ್ದರು. ಈ ಮದುವೆಗೆ ಸೌತ್ ಮತ್ತು ಬಾಲಿವುಡ್‌ನ ಸ್ಟಾರ್ಸ್‌ ಸಾಕ್ಷಿಯಾಗಿದ್ದರು.

    ಸೂಪರ್ ಸ್ಟಾರ್ ರಜನೀಕಾಂತ್, ಬಿಟೌನ್ ಬಿಗ್ ಸ್ಟಾರ್ ಶಾರುಖ್ ಖಾನ್, ಮತ್ತು ನಿರ್ದೇಶಕ ಅಟ್ಲೀ ಜತೆಗೆ ಸೌತ್‌ನ ಸ್ಟಾರ್ ಸೂರ್ಯ ದಂಪತಿ, ವಿಜಯ್ ಸೇತುಪತಿ, ಇಳಯರಾಜ ಮದುವೆಗೆ ಹಾಜರಿ ಇದ್ದರು. ಜತೆಗೆ ನವದಂಪತಿಗೆ ರಜನೀಕಾಂತ್ ಸ್ಪೆಷಲ್ ಗಿಫ್ಟ್ ಕೂಡ ನೀಡಿದ್ದರು. ಸದ್ಯ ನಯನತಾರಾ ಮದುವೆಯಲ್ಲಿ ಈ ಎಲ್ಲಾ ಸ್ಟಾರ್‌ಗಳಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಮೊದಲ ತಿಂಗಳ ವಿವಾಹ ಸಂಭ್ರಮ ಆಚರಿಸಿಕೊಂಡ ನಯನತಾರಾ ಮತ್ತು ವಿಘ್ನೇಶ್ ಶಿವನ್

     

    View this post on Instagram

     

    A post shared by Vignesh Shivan (@wikkiofficial)

    ಇನ್ನು ಮದುವೆ ಆಗಿ ಕೆಲವೇ ದಿನಗಳಲ್ಲಿ ನಯನತಾರಾ ಶಾರುಖ್ ನಟನೆಯ `ಜವಾನ್’ ಶೂಟಿಂಗ್‌ನಲ್ಲಿ ಹಾಜರ್ ಇದ್ದರು. ಹನಿಮೂನ್‌ನಿಂದ ಸೀದಾ `ಜವಾನ್’ ಚಿತ್ರೀಕರಣಕ್ಕೆ ನಯನತಾರಾ ಹಾಜರ್ ಆಗಿದ್ದರು. ಸದ್ಯ ಮದುವೆ ಆಗಿ ಒಂದು ತಿಂಗಳು ಪೂರೈಸಿರುವ ಖುಷಿಯಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‌ʻಡುಂಕಿʼ ಚಿತ್ರಕ್ಕೆ ಶಾರುಖ್ ಖಾನ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು

    ‌ʻಡುಂಕಿʼ ಚಿತ್ರಕ್ಕೆ ಶಾರುಖ್ ಖಾನ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು

    `ಜೀರೋ’ ಚಿತ್ರದ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ `ಡುಂಕಿ’ ಚಿತ್ರಕ್ಕೆ ಶಾರುಖ್ ಖಾನ್‌ಗೆ ಜೋಡಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಂಡಿದ್ದಾರೆ.

    ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮತ್ತು ನಿರ್ಮಾಣದ `ಡುಂಕಿ’ ಚಿತ್ರದಲ್ಲಿ ಶಾರುಖ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್‌ಗೆ ನಾಯಕಿಯಾಗಿ ತಾಪ್ಸಿ ಪನ್ನು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಂತದ ಶೂಟಿಂಗ್ ನೆರವೇರಿದ್ದು, ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ಶುರುವಾಗಲಿದೆ. ಇದನ್ನೂ ಓದಿ:ಪವಿತ್ರ ಲೋಕೇಶ್ ದೂರು : ತನಿಖೆ ಆರಂಭಿಸಿದ ಸೈಬರ್ ಪೊಲೀಸ್

    ಮೊದಲ ಬಾರಿಗೆ ತೆರೆಗೆ ಮೇಲೆ ಶಾರುಖ್ ಖಾನ್ ಮತ್ತು ತಾಪ್ಸಿ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಭಿನ್ನ ಕಥೆಯ ಮೂಲಕ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಸಹ ನಿರ್ಮಾಪಕಿಯಾಗಿ ಶಾರುಖ್ ಪತ್ನಿ ಗೌರಿ ಖಾನ್ ಸಾಥ್ ನೀಡಿದ್ದಾರೆ.

    Live Tv

  • ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

    ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

    ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಹನಿಮೂನ್‌ಗಾಗಿ ವಿದೇಶಕ್ಕೆ ಹಾರಿದ್ದ ಈ ಜೋಡಿ ಇದೀಗ ಹಿಂದಿರುಗಿದ್ದಾರೆ. ಈ ಬೆನ್ನಲ್ಲೇ ಶಾರುಖ್ ನಟನೆಯ `ಜವಾನ್’ ಸಿನಿಮಾಗೂ ಹಾಜರಾಗಿದ್ದಾರೆ.

    ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ನಿರ್ದೇಶಕ ವಿಘ್ನೇಶ್ ಮತ್ತು ನಯನತಾರಾ ಜೂನ್ ೯ರಂದು ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಬಳಿಕ ಹನಿಮೂನ್‌ಗಾಗಿ ಈ ಜೋಡಿ ವಿದೇಶಕ್ಕೆ ಹಾರಿತ್ತು. ಈಗ ಮತ್ತೆ ಮನೆಗೆ ವಾಪಸ್ ಆಗಿದ್ದು, ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರೀಕರಣದಲ್ಲಿ ಭಾಗಿಯಾಲಿದ್ದಾರೆ.

    ಹನಿಮೂನ್‌ನಿಂದ ನೇರವಾಗಿ ಮುಂಬೈಗೆ ಬಂದಿರುವ ನಯನತಾರಾ, ಅಟ್ಲೀ ನಿರ್ದೇಶನದ ಜವಾನ್ ಚಿತ್ರೀಕರಣದಲ್ಲಿ ನಯನತಾರಾ ಭಾಗಿಯಾಗಲಿದ್ದಾರೆ. ಜುಲೈ ಎರಡನೇ ವಾರದ ಅಂತ್ಯದವೆಗೆಗೂ ಶೂಟಿಂಗ್ ಇರಲಿದೆ. ಶಾರುಖ್‌ಗೆ ಮೊದಲ ಬಾರಿಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಳ್ತಿದ್ದಾರೆ. ಟೀಸರ್‌ನಿಂದ ಹೈಪ್‌ ಕ್ರಿಯೇಟ್‌ ಮಾಡಿರುವ ʻಜವಾನ್‌ʼ , ಚಿತ್ರಮಂದಿರದಲ್ಲಿ ಹೇಗೆಲ್ಲಾ ಮೋಡಿ ಮಾಡಬಹುದು ಅಂತಾ ಕಾದುನೋಡಬೇಕಿದೆ.

    Live Tv

  • ತಮಿಳಿನ ಸ್ಟಾರ್ ನಟನಿಗಾಗಿ ಸಂಭಾವನೆ ಪಡೆಯದೆ ನಟಿಸಿದ ಶಾರುಖ್ ಖಾನ್

    ತಮಿಳಿನ ಸ್ಟಾರ್ ನಟನಿಗಾಗಿ ಸಂಭಾವನೆ ಪಡೆಯದೆ ನಟಿಸಿದ ಶಾರುಖ್ ಖಾನ್

    ಬಿಟೌನ್ ಸ್ಟಾರ್ ಶಾರುಖ್ ಖಾನ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಈ ಮಧ್ಯೆ ತಮಿಳಿನ ಸೂಪರ್ ಸ್ಟಾರ್ ಒಬ್ಬರ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಂಭಾವನೆ ಡಿಮ್ಯಾಂಡ್ ಮಾಡದೇ ನಟಿಸಿ ಬಂದಿದ್ದಾರೆ. ಈ ಕುರಿತು ಫಿಲ್ಮಿಂ ನಗರಿಯಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

    ಶಾರುಖ್ ಖಾನ್ ಬತ್ತಳಿಕೆಯಲ್ಲಿ ಬಿಗ್ ಬಜೆಟ್ ಸಿನಿಮಾಗಳಿರುವಾಗ ಕೊಂಚ ಬಿಡುವು ಮಾಡಿಕೊಂಡು ಸ್ನೇಹಿತನ ಸಿನಿಮಾಗೆ ಸಾಥ್ ನೀಡಿದ್ದಾರೆ. ಕಾಲಿವುಡ್ ಸ್ಟಾರ್ ಮಾಧವನ್ ನಟನೆಯ ನಿರೀಕ್ಷಿತ ರಾಕೆಟ್ರಿ ಚಿತ್ರದಲ್ಲಿ ಹಣ ಪಡೆಯದೇ ನಟಿಸಿ ಬಂದಿದ್ದಾರೆ. ಈ ಕುರಿತು ನಟ ಮಾಧವನ್ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ದಿಗಂತ್ ಡಿಸ್ಚಾರ್ಜ್ ಬೆನ್ನಲ್ಲೇ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ ನಟಿ ಐಂದ್ರಿತಾ ರೇ

    ತಮಿಳಿನ ನಟ ಆರ್.ಮಾಧವನ್ ಅವರ `ರಾಕೆಟ್ರಿ’ ಸಿನಿಮಾ ಮುಂದಿನ ವಾರ ಬಿಡುಗಡೆ ಆಗುತ್ತಿದ್ದು, ಸಿನಿಮಾದಲ್ಲಿ ಶಾರುಖ್ ಖಾನ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಅವರು ಸಂಭಾವನೆ ಪಡೆದಿಲ್ಲವಂತೆ. ಅಲ್ಲದೆ ಆ ಸಿನಿಮಾದಲ್ಲಿ ತಾವು ನಟಿಸಲೇ ಬೇಕು ಎಂದು ಪಟ್ಟು ಹಿಡಿದು ಕೇಳಿದರಂತೆ ಶಾರುಖ್ ಖಾನ್. ಈ ಬಗ್ಗೆ ಆರ್.ಮಾಧವನ್ ಸಂದರ್ಶನದಲ್ಲಿ ಹೇಳಿದ್ದಾರೆ.

    ಈ ಹಿಂದೆ ಶಾರುಖ್ ಖಾನ್ ಜೊತೆಗೆ `ಜೀರೋ’ ಸಿನಿಮಾ ಚಿತ್ರೀಕರಣ ಮಾಡುವಾಗ ನಾನು ಅದರಲ್ಲಿ ಸಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆಗ ನಾನು ಶಾರುಖ್ ಖಾನ್‌ಗೆ `ರಾಕೆಟ್ರಿ’ ಸಿನಿಮಾದ ಕತೆ ಹೇಳಿದ್ದೆ. ಅಂದು ಅವರಿಗೆ ಈ ಕಥೆ ಇಷ್ಟವಾಗಿತ್ತು.ನಂತರ ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಹೋದಾಗ ಮ್ಯಾಡಿ, ನಾನು ನಿನ್ನ ಸಿನಿಮಾದಲ್ಲಿ ನಟಿಸುತ್ತೇನೆ. ನನಗೆ ಒಂದು ಸಣ್ಣ ಪಾತ್ರ ಕೊಡು ಸಾಕು ಎಂದಿದ್ದರು. ನನ್ನ ಮೇಲಿನ ಪ್ರೀತಿಗೆ ಹೇಳುತ್ತಿದ್ದಾರೆ ಎಂದುಕೊಂಡು ಥ್ಯಾಂಕ್ಸ್ ಹೇಳಿದೆ, ಆಗ ಶಾರುಖ್ ಖಾನ್ ಇಲ್ಲ ನಾನು ಸೀರಿಯಸ್ ಆಗಿದ್ದೇನೆ ಎಂದರು ಎಂದು ಮಾಧವನ್ ನೆನಪು ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by R. Madhavan (@actormaddy)

    ಬಳಿಕ ಶಾರುಖ್ ಮ್ಯಾನೇಜರ್ ನನಗೆ ಕರೆ ಮಾಡಿ, `ರಾಕೆಟ್ರಿ’ ಚಿತ್ರಕ್ಕೆ ಯಾವಾಗ ಡೇಟ್ಸ್ ಬೇಕು ಎಂದು ಕೇಳಿದಾಗ ಶಾರುಖ್ ಬೆಂಬಲಕ್ಕೆ ಖುಷಿಯಾದೆ. ರಾಕೆಟ್ರಿ ಚಿತ್ರದಲ್ಲಿ ಶಾರುಖ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಈ ವೇಳೆ ಮಾಧವನ್ ರಿವೀಲ್ ಮಾಡಿದ್ದಾರೆ. ಒಟ್ನಲ್ಲಿ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿದ್ದರು. ಭಾಷೆಗೂ ಮೀರಿದ ಸ್ನೇಹ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    Live Tv

  • ಮಹಿಳಾ ಕ್ರಿಕೆಟ್ ತಂಡದ ಮಾಲಿಕನಾದ ಶಾರುಖ್ ಖಾನ್

    ಮಹಿಳಾ ಕ್ರಿಕೆಟ್ ತಂಡದ ಮಾಲಿಕನಾದ ಶಾರುಖ್ ಖಾನ್

    ಬಾಲಿವುಡ್ ನಟ ಶಾರುಖ್ ಖಾನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. `ಜೀರೋ’ ಚಿತ್ರದ ಸೋಲಿನ ನಂತರ ಭರ್ಜರಿ ವರ್ಕೌಟ್ ಮಾಡಿ, ಮತ್ತೆ ಕಿಂಗ್ ಖಾನ್ ಕಂಬ್ಯಾಕ್ ಆಗ್ತಿದ್ದಾರೆ. ಇದೀಗ ಶಾರುಖ್ ಖಾನ್ ಮಹತ್ತರದ ಹೆಜ್ಜೆವೊಂದನ್ನು ಇಟ್ಟಿದ್ದಾರೆ. ಮಹಿಳಾ ಕ್ರಿಕೆಟ್ ತಂಡದ ಶಾರುಖ್ ಖಾನ್ ಮಾಲಿಕನಾಗಿದ್ದಾರೆ.

    ಇದೀಗ ಶಾರುಖ್ ಲಿಸ್ಟ್‌ನಲ್ಲಿ ಕೈತುಂಬಾ ಸಿನಿಮಾಗಳಿವೆ. ಇದರ ಮಧ್ಯೆ ಕ್ರಿಕೆಟ್ ತಂಡದ ಜವಾಬ್ದಾರಿಯನ್ನು ಕೈಗೊತ್ತಿಕೊಂಡಿದ್ದಾರೆ. ಮಹಿಳಾ ತಂಡ ನೈಟ್ ರೈಡರ್ಸ್‌ ಶಾರುಖ್ ಸಾಥ್ ನೀಡಿದ್ದಾರೆ. ಆಗಸ್ಟ್ 30ರಂದು 2022ಕ್ಕೆ ನಡೆಯುವ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್ ಉದ್ಘಟನಾ ಪಂದ್ಯದಲ್ಲಿ ಸ್ಪರ್ಧಿಸುವ ಮೂಲಕ ನೈಟ್ ರೈಡರ್ಸ್ ತಂಡ ಮೊದಲ ಹೆಜ್ಜೆ ಇಡಲಿದೆ. ಈ ಕುರಿತು ನಟ ಶಾರುಖ್ ಕೂಡ ಟ್ವೀಟ್ ಮೂಲಕ ತಿಳಿಸಿದ್ದು, ತಂಡದ ಭಾಗವಾಗಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಖ್ಯಾತನಟಿ ಅಮಲಾರನ್ನು ಮಂಚಕ್ಕೆ ಕರೆದ ವ್ಯಕ್ತಿಗೆ ಹೈಕೋರ್ಟ್ ಶಾಕ್

    ಬಹುನಿರೀಕ್ಷಿತ ಪಠಾಣ್, ಜವಾನ್, ಡುಂಕಿ, ಸಿನಿಮಾಗಳಲ್ಲಿ ಶಾರುಖ್ ಖಾನ್ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆ ಮಹಿಳಾ ಕ್ರಿಕೆಟ್ ಟೀಮ್‌ಗೆ ಸಾಥ್ ನೀಡಿರುವದಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

    Live Tv

  • `ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    `ಜವಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶಾರುಖ್ ಖಾನ್ ಎಂಟ್ರಿ

    ಶಾರುಖ್ ಖಾನ್ `ಜೀರೋ’ ಚಿತ್ರದ ಸೋಲಿನ ನಂತರ ಜವಾನ್ ಆಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಜವಾನ್ ಆರ್ಭಟಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ. ಅಷ್ಟೇ ಅಲ್ಲ, ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಶಾರುಖ್ ಎಂಟ್ರಿ ಕೊಡ್ತಿದ್ದಾರೆ.

    2018ರ `ಜೀರೋ’ ಸಿನಿಮಾ ನೆಲಕಚ್ಚಿದ ಮೇಲೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದಿಷ್ಟು ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದು ಬಿಟ್ಟರೆ ಶಾರುಖ್ ನಟನೆಯ ಚಿತ್ರಗಳು ರಿಲೀಸ್ ಆಗಿಲ್ಲ. ಈಗ ತೆರೆಮರೆಯಲ್ಲಿ ಭರ್ಜರಿ ಕಸರತ್ತು ಮಾಡಿಕೊಂಡು, ಬಾಲಿವುಡ್ ಬಾದಷಾ ಶಾರುಖ್ ಖಾನ್ ಜವಾನ್ ಆಗಿ ಅವತಾರವೆತ್ತಲು ರೆಡಿಯಾಗಿದ್ದಾರೆ. ಚಿತ್ರದಲ್ಲಿ ದ್ವಿಪಾತ್ರಕ್ಕೆ ಶಾರುಖ್ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಯೋಗರಾಜ್ ಭಟ್ ಮಾವ, ನಟ ಸತ್ಯ ಉಮ್ಮತ್ತಾಲ್ ನಿಧನ

    ಅಟ್ಲೀ ಮತ್ತು ಶಾರುಖ್ ಕಾಂಬಿನೇಷನ್ `ಜವಾನ್’ ಸಿನಿಮಾ ಜೂನ್ 2ರಂದು 2023ಕ್ಕೆ ತೆರೆಗೆ ಅಬ್ಬರಿಸಲು ಮುಹೂರ್ತ ಫಿಕ್ಸ್ ಆಗಿದೆ. ಶಾರುಖ್‌ಗೆ ನಯನತಾರಾ ಜೋಡಿಯಾಗಿ ನಟಿಸಿದ್ದಾರೆ. ಹಿಂದಿ, ತಮಿಳು,ತೆಲುಗು, ಸೇರಿದಂತೆ ಕನ್ನಡದಲ್ಲೂ ಜವಾನ್ ಸಿನಿಮಾ ತೆರೆ ಕಾಣಲಿದೆ. ಟೀಸರ್ ಮೂಲಕಕ ಶಾರುಖ್ ಲುಕ್ ಕೂಡ ರಿವೀಲ್ ಮಾಡಿದ್ದು, 2023ಕ್ಕೆ ಬೆಳ್ಳಿಪರದೆಯಲ್ಲಿ ರಾರಾಜಿಸೋದು ಗ್ಯಾರೆಂಟಿ.

    ಇದೊಂದು ಪಕ್ಕಾ ಆ್ಯಕ್ಷನ್ ಓರಿಯೆಂಟೆಡ್ ಚಿತ್ರವಾಗಿದ್ದು, ಶಾರುಖ್ ಹೊಸ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಗೆಲುವಿಗಾಗಿ ಕಾಯ್ತಿರೋ ಬಾದಷಾ ಶಾರುಖ್‌ಗೆ ಜವಾನ್ ಸಿನಿಮಾ ಕೈಹಿಡಿಯುತ್ತಾ ಅಂತಾ ಕಾದುನೋಡಬೇಕಿದೆ.

  • ಶಾರುಖ್ ಖಾನ್ ಮಗ ಎಂಬ ಕಾರಣಕ್ಕೆ ಬಲಿಪಶು ಮಾಡಿದ್ದಾರೆಂದ ಶತ್ರುಘ್ನ ಸಿನ್ಹಾ.!

    ಶಾರುಖ್ ಖಾನ್ ಮಗ ಎಂಬ ಕಾರಣಕ್ಕೆ ಬಲಿಪಶು ಮಾಡಿದ್ದಾರೆಂದ ಶತ್ರುಘ್ನ ಸಿನ್ಹಾ.!

    ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಕ್ಲೀನ್ ಚೀಟ್ ನೀಡಿದೆ. ಈ ಬೆನ್ನಲ್ಲೆ ನಟ ಶತ್ರುಘ್ನ ಸಿನ್ಹಾ, ಶಾರುಖ್ ಖಾನ್ ಪುತ್ರ ಎಂಬ ಕಾರಣಕ್ಕಾಗಿ ಆರ್ಯನ್ ಖಾನ್ ಅನ್ನು ಬಲಿಪಶು ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎನ್‌ಸಿಬಿ ಕ್ಲೀನ್ ಚೀಟ್ ನೀಡಿದ ಬೆನ್ನಲ್ಲೆ ಸಾಕಷ್ಟು ಸ್ಟಾರ್ ನಟ ಮತ್ತು ನಟಿಯರು ಈ ಕುರಿತು ಮಾಡಿದ್ದಾರೆ. ಶಾರುಖ್ ಖಾನ್ ಪುತ್ರನ ಬಂಧನವಾದ ದಿನದಿಂದಲೂ ಈವರೆಗೂ ಸ್ಟಾರ್ಸ್, ಶಾರುಖ್ ಬೆನ್ನಿಗೆ ನಿಂತಿದ್ದಾರೆ. ಇದೀಗ ಶಾರುಖ್ ಖಾನ್ ಪುತ್ರನ ಪರ ಬ್ಯಾಟಿಂಗ್ ಶತ್ರುಘ್ನ ಸಿನ್ಹಾ ಮಾಡಿದ್ದಾರೆ. ಇದನ್ನೂ ಓದಿ: ಐಪಿಎಲ್ ಫೈನಲ್ ಮ್ಯಾಚ್: `ಕೆಜಿಎಫ್’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ರಣ್‌ವೀರ್ ಸಿಂಗ್

    ARYAN

    ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎನ್‌ಸಿಬಿ ಕ್ಲೀನ್ ಚೀಟ್ ನೀಡಿ, ಚಾರ್ಜ್ ಶೀಟ್‌ನಿಂದ ಆರ್ಯನ್ ಖಾನ್ ಹೆಸರನ್ನ ತೆಗೆದುಹಾಕಲಾಗಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಶತ್ರುಘ್ನ ಸಿನ್ಹಾ, ಮುಗ್ಧ ಹುಡುಗ ಆರ್ಯನ್ ಯಾವುದೇ ಸಾಕ್ಷಿ ಮತ್ತು ಪುರಾವೆಯಿಲ್ಲದೇ ಬಂಧಿಸಿದ್ದರು. ಸೂಕ್ತ ತನಿಖೆ ಕೈಗೊಳ್ಳಬೇಕಿತ್ತು. ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಎಂಬ ಕಾರಣಕ್ಕೆ ಆರ್ಯನ್ ಅನ್ನು ಬಲಿಪಶು ಮಾಡಿದ್ದಾರೆ. ಇಂತಹ ಕಾರ್ಯಕ್ಕೆ ಹೆಜ್ಜೆ ಇಡುವ ಮುನ್ನ ಸಾವಿರ ಬಾರಿ ಯೋಚಿಸಬೇಕು ಎಂದಿದ್ದಾರೆ. ಒಟ್ನಲ್ಲಿ ಶಾರುಖ್ ಖಾನ್ ಕುಟುಂಬದ ಪರ ನಿಂತ ಶತ್ರುಘ್ನ ಸಿನ್ಹಾಗೆ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

  • ಮಗಳ ಬಾಯ್‌ಫ್ರೆಂಡ್‌ಗೆ ಶಾರುಖ್ ಖಾನ್ ಧಮ್ಕಿ: ಅಷ್ಟಕ್ಕೂ ಅಸಲಿ ವಿಚಾರವೇನು?

    ಮಗಳ ಬಾಯ್‌ಫ್ರೆಂಡ್‌ಗೆ ಶಾರುಖ್ ಖಾನ್ ಧಮ್ಕಿ: ಅಷ್ಟಕ್ಕೂ ಅಸಲಿ ವಿಚಾರವೇನು?

    ಬಾಲಿವುಡ್ ನಟ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ವಿಚಾರದಲ್ಲಿ ಫುಲ್ ಗರಂ ಆಗಿದ್ದಾರೆ. ತನ್ನ ಪುತ್ರಿಯ ಬಾಯ್‌ಫ್ರೆಂಡ್ ಅಗುವವನಿಗೆ 7 ಷರತ್ತಗಳನ್ನು ವಿಧಿಸಿದ್ದಾರೆ. ತನ್ನ ಮಗಳಿಗೆ ಕಿಸ್ ಮಾಡಿದ್ರೆ ಆತನ ತುಟಿ ಕತ್ತರಿಸುತ್ತೇನೆ ಎಂದಿದ್ದಾರೆ.

    ಬಿಟೌನ್ ಸೂಪರ್ ಸ್ಟಾರ್ ತನ್ನ ಮಗಳ ವಿಚಾರದಲ್ಲಿ ಸಖತ್ ಕಟ್ಟುನಿಟ್ಟು. ಮಗಳ ಭವಿಷ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಆಕೆಯ ಜೀವನದ ಕುರಿತು ಕನಸು ಕಾಣುತ್ತಾರಂತೆ ಹಾಗಂತ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪುತ್ರಿಯ ಬಾಯ್ ಪ್ರೇಂಡ್‌ಗೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

    ಇತ್ತೀಚೆಗೆ ಮೇ 22ರಂದು ಸುಹಾನಾ ಖಾನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಮಾತನಾಡಿದ ಶಾರುಖ್ ಖಾನ್, ನನ್ನ ಮಗಳ ಬಾಯ್‌ಫ್ರೆಂಡ್ ಆಗುವವನು 7 ಷರತ್ತುಗಳನ್ನು ಪಾಲಿಸಲೇಬೇಕು. ಒಳ್ಳೆಯ ಕೆಲಸ ಮಾಡಬೇಕು, ಮಗಳ ಜೊತೆ ಸದಾ ಇರಬೇಕು, ಇನ್ನೂ ಒಬ್ಬ ವಕೀಲನನ್ನು ಇಟ್ಟಕೊಳ್ಳಬೇಕು, ಆಕೆಯ ಏನಾದ್ರು ಅನಾಹುತ ಆದರೆ ಅದೇ ರೀತಿ ಆತನಿಗೂ ಆಗುತ್ತದೆ ಎಂದು ಶಾರುಖ್ ಖಡಕ್ ಷರತ್ತುಗಳನ್ನೇ ಹಾಕಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ಚಿತ್ರದಿಂದ ಹೊರ ನಡೆದ ತಂಗಿಯ ಪತಿ ಆಯುಷ್‌

    ಇನ್ನು ಖಾಸಗಿ ಕಾರ್ಯಕ್ರಮವೊಂದರಲ್ಲಿ ನಿರ್ದೇಶಕ ಕಮ್ ನಿರೂಪಕ ಕರಣ್ ಜೋಹರ್, ಶಾರುಖ್‌ಗೆ ನಿಮ್ಮ ಮಗಳಿಗೆ ಯಾರಾದರೂ ಕಿಸ್ ಮಾಡಿದ್ರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದರು. ಕಿಸ್ ಮಾಡಿದ್ರೆ ಆತನ ತುಟಿಯನ್ನೇ ಕತ್ತರಿಸುತ್ತೇನೆ ಅಂತಾ ಶಾರುಖ್ ನೇರವಾಗಿ ಹೇಳಿದ್ದರು. ಒಟ್ನಲ್ಲಿ ಶಾರುಖ್ ಖಾನ್ ತಮ್ಮ ಮುದ್ದಿನ ಮಗಳ ವಿಚಾರದಲ್ಲಿ ತಾವೆಷ್ಟು ಖಡಕ್ ಎಂಬುದನ್ನ ತಮ್ಮ ಉತ್ತರದ ಮೂಲಕ ತಿಳಿಸಿದ್ದರು.

  • `ಗೂಗ್ಲಿ’ ನಟಿಗೆ ಶಾರುಖ್ ಖಾನ್ ಜೊತೆ ನಟಿಸಬೇಕಂತೆ

    `ಗೂಗ್ಲಿ’ ನಟಿಗೆ ಶಾರುಖ್ ಖಾನ್ ಜೊತೆ ನಟಿಸಬೇಕಂತೆ

    `ಚಿರು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಕೃತಿ ಕರಬಂಧ ಸದ್ಯ ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿರೋ ನಟಿಗೆ ಶಾರುಖ್ ಖಾನ್ ಜೊತೆ ನಟಿಸಬೇಕಂತೆ ಹಾಗಂತ ಸ್ವತಃ ನಟಿ ಕೃತಿ ಹೇಳಿಕೊಂಡಿದ್ದಾರೆ.

    `ಚಿರು’, `ಪ್ರೇಮ್ ಅಡ್ಡಾ’, `ಗೂಗ್ಲಿ’ ಚಿತ್ರದ ಮೂಲಕ ಗಮನ ಸೆಳೆದ ನಟಿ ಕೃತಿ ಈಗ ಬಾಲಿವುಡ್ ಚಿತ್ರಗಳಲ್ಲಿ ಆಕ್ಟೀವ್ ಆಗಿದ್ದಾರೆ. ಜತೆಗೆ ಇದೀಗ ಮಾಲಿವುಡ್ ಚಿತ್ರರಂಗದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇತ್ತೀಚೆಗೆ `ಗೂಗ್ಲಿ’ ನಟಿ ಕೃತಿ ನೀಡಿದ ಸಂದರ್ಶನವೊಂದರಲ್ಲಿ ನಾನು ಶಾರುಖ್ ಖಾನ್ ಅಭಿಮಾನಿ, ಅವರ ಜತೆ ಚಿತ್ರದಲ್ಲಿ ನಟಿಸಬೇಕು ಎಂಬ ತಮ್ಮ ಅಭಿಲಾಷೆಯನ್ನ ವ್ಯಕ್ತಪಡಿಸಿದ್ದಾರೆ.

    ಕೃತಿ ಚಿಕ್ಕವಯಸ್ಸಿನಿಂದಲೂ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಸಿನಿಮಾಗಳನ್ನ ನೋಡುತ್ತಲೇ ಬೆಳೆದವರು. ಅದರಲ್ಲೂ ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬದ ಜೊತೆ ಸಾಕಷ್ಟು ಸಿನಿಮಾಗಳನ್ನ ನೋಡಿದ್ದರಂತೆ. ಕೆಲ ವರ್ಷಗಳ ಹಿಂದೆ `ಕುಚ್ ಕುಚ್ ಹೋತಾ ಹೈ’ ನೋಡಿ ಚಿತ್ರದಲ್ಲಿ ಇರುವಂತಹದ್ದೆ ಪ್ರೇಂಡ್‌ಶಿಪ್ ಬ್ಯಾಂಡ್ ತಂದು ಹಾಕಿಕೊಂಡಿದ್ದರಂತೆ. ಇದನ್ನೂ ಓದಿ: ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ 18ನೇ ದಿನವೂ ರಾಕಿಭಾಯ್ ಅಬ್ಬರ: 400 ಕೋಟಿಯತ್ತ `ಕೆಜಿಎಫ್ 2′

    ಇನ್ನು ಸಾಕಷ್ಟು ಖಾನ್ ಸಿನಿಮಾ ನೋಡಿ ಬೆಳೆದಿರೋ ಕೃತಿಗೆ ಒಂದಲ್ಲಾ ಒಂದು ದಿನ ತಾನು ಅವರ ಜತೆ ನಟಿಸುತ್ತೇನೆ. ಹಾಗೆಯೇ ನನ್ನ ನೆಚ್ಚಿನ ನಟ ಶಾರುಖ್ ಖಾನ್ ಜೊತೆ ನಟಿಸೋದು ನಿಜ ಅಂತಾ ತಮ್ಮ ಮನದಾಸೆಯನ್ನು ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಗೂಗ್ಲಿ ನಟಿಯ ಇಚ್ಛೆಯಂತೆಯೇ ಆಗಲಿ ಅಂತಾ ಫ್ಯಾನ್ಸ್ ಕೂಡ ವಿಶ್ ಮಾಡ್ತಿದ್ದಾರೆ.

  • ಕಾಜಲ್ ಜೊತೆ ಶಾರುಖ್ ಖಾನ್ ಮತ್ತೆ ರೊಮ್ಯಾನ್ಸ್

    ಕಾಜಲ್ ಜೊತೆ ಶಾರುಖ್ ಖಾನ್ ಮತ್ತೆ ರೊಮ್ಯಾನ್ಸ್

    ಬಾಲಿವುಡ್‌ನ ಬೆಸ್ಟ್ ಆನ್ ಸ್ಕ್ರೀನ್‌ ಕಪಲ್ ಅಂದ್ರೆ ಶಾರುಖ್ ಖಾನ್ ಮತ್ತು ಕಾಜಲ್, ಸಾಕಷ್ಟು ಚಿತ್ರಗಳ ಮೂಲಕ ಮೋಡಿ ಮಾಡಿರೋ ಈ ಜೋಡಿ ಮತ್ತೆ ತೆರೆಯ ಮೇಲೆ ಒಂದಾಗಲು ಸಜ್ಜಾಗಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ಕಮಾಲ್ ಮಾಡಲು ಬರುತ್ತಿದ್ದಾರೆ.

    `ಕುಚ್ ಕುಚ್ ಹೋತಾ ಹೈ’, `ಕಭಿ ಖುಷಿ ಕಭಿ ಗಮ್’, `ದಿಲ್‌ವಾಲೆ’, `ಬಾಜಿಗಾರ್’ ಚಿತ್ರಗಳ ಮೂಲಕ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟು ಹಾಕಿರೋ ಶಾರುಖ್ ಖಾನ್ ಮತ್ತು ಕಾಜಲ್ ಜೋಡಿ ಮತ್ತೆ ಬೆಳ್ಳಿ ಪರದೆಯಲ್ಲಿ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ.

    ನಿರ್ಮಾಪಕ ಕರಣ್ ಜೋಹರ್ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಟಿ ಆಲಿಯಾ ಭಟ್ ಮತ್ತು ರಣ್‌ವೀರ್ ಸಿಂಗ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಪ್ರೇಮ ಕಹಾನಿಯನ್ನೇ ಭಿನ್ನವಾಗಿ ತೋರಿಸಲು ಹೊರಟಿದ್ದಾರೆ ಕರಣ್ ಜೋಹರ್. ಇದೀಗ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಬಿಟೌನ್ ಜೋಡಿ ಹಕ್ಕಿಗಳಾಗಿ ಫೇಮ್ ಗಿಟ್ಟಿಸಿಕೊಂಡಿದ್ದ ಶಾರುಖ್ ಮತ್ತು ಕಾಜಲ್ ಈ ಚಿತ್ರದಲ್ಲಿ ಸ್ಪೆಷಲ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇದನ್ನೂ ಓದಿ: ರವಿವರ್ಮನ ಕಲ್ಪನೆಯ ಸುಂದರಿಯರಂತೆ ಪತ್ನಿಯ ಫೋಟೋ ಶೂಟ್ ಮಾಡಿಸಿದ ಜನಾರ್ದನ ರೆಡ್ಡಿ

    `ಗಲ್ಲಿ ಭಾಯ್’ ಚಿತ್ರದಲ್ಲಿ ಕಮಾಲ್ ಮಾಡಿದ್ದ ಜೋಡಿ ಆಲಿಯಾ ಮತ್ತು ರಣ್‌ವೀರ್ ಸಿಂಗ್ ಜೋಡಿ ಮತ್ತೆ `ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಗಾಗಿ ಒಂದಾಗಿದ್ದಾರೆ. ಈ ಜೋಡಿಗೆ ಬಾಲಿವುಡ್ ರೊಮ್ಯಾಂಟಿಕ್ ಜೋಡಿ ಶಾರುಖ್ ಮತ್ತು ಕಾಜಲ್ ಸಾಥ್ ಕೊಡಲಿದ್ದಾರೆ. ಈ ಗುಡ್ ನ್ಯೂಸ್ ನಂತರ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ರಿಲೀಸ್ ಆದಮೇಲೆ ಯಾವ ರೀತಿ ಕಮಾಲ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.