Tag: sharukh khan

  • ಶಾರುಖ್ ಮನೆಮುಂದೆ ಜಮಾಯಿಸಿದ ಜನಸಾಗರ ನೋಡಿ ಅಚ್ಚರಿಪಟ್ಟ `ಕಾಂತಾರ’ ಹೀರೋ

    ಶಾರುಖ್ ಮನೆಮುಂದೆ ಜಮಾಯಿಸಿದ ಜನಸಾಗರ ನೋಡಿ ಅಚ್ಚರಿಪಟ್ಟ `ಕಾಂತಾರ’ ಹೀರೋ

    `ಕಾಂತಾರ’ (Kantara Film) ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಶೆಟ್ಟಿ (Rishab Shetty) ಸದ್ಯ ಮುಂಬೈಗೆ ಹಾರಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಮನೆ ಮುಂದೆ ಜಮಾಯಿಸಿದ ಜನಸಾಗರ ನೋಡಿ ರಿಷಬ್ ಅಚ್ಚರಿಪಟ್ಟಿದ್ದಾರೆ.

    ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಚಿತ್ರದ ಸಕ್ಸಸ್ ನಂತರ ಸಾಕಷ್ಟು ಕಡೆ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಬಗ್ಗೆ ಮಾತನಾಡಿದ್ದಾರೆ.

    `ಕಾಂತಾರ’ ಚಿತ್ರದ ರಿಲೀಸ್ ಬಳಿಕ ಮುಂಬೈನಲ್ಲಿ ಸಾಕಷ್ಟು ಕಡೆ ಸಂದರ್ಶನ ನೀಡಿದ್ದು, ಈ ವೇಳೆ ಶಾರುಖ್ ಮನೆ ಮುಂದೆ ಜನಸಾಗರ ನೋಡಿ ಅಚ್ಚರಿಪಟ್ಟಿದ್ದೆ ಎಂದಿದ್ದಾರೆ. ಇಲ್ಲಿ ಯಾಕೆ ಇಷ್ಟು ಜನ ಸೇರಿದ್ದಾರೆ ಎಂದು ಸಂದರ್ಶಕನನ್ನು ಈ ಬಗ್ಗೆ ಕೇಳಿದಾಗ, ಇದು ಶಾರುಖ್ ಅವರ ಮನ್ನತ್ ಬಂಗಲೆ ಎಂದು ಉತ್ತರಿಸಿದ್ದಾರೆ. ಬಾದಷಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ದಂಡೇ ಜಮಾಯಿಸಿತ್ತು.  ಶಾರುಖ್ ಅವರ ಅಭಿಮಾನಿಗಳ ಅಭಿಮಾನ ಕಂಡು ಅಚ್ಚರಿಪಟ್ಟಿದ್ದೆ ಎಂದು ರಿಷಬ್ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೈವೋಲ್ಟೇಜ್ ಆ್ಯಕ್ಷನ್ ʻಪಠಾಣ್ʼ ಟೀಸರ್‌ನಲ್ಲಿ ಶಾರುಖ್ ಖಾನ್ ಗ್ರ್ಯಾಂಡ್ ಎಂಟ್ರಿ

    ಹೈವೋಲ್ಟೇಜ್ ಆ್ಯಕ್ಷನ್ ʻಪಠಾಣ್ʼ ಟೀಸರ್‌ನಲ್ಲಿ ಶಾರುಖ್ ಖಾನ್ ಗ್ರ್ಯಾಂಡ್ ಎಂಟ್ರಿ

    ಬಾಲಿವುಡ್ (Bollywood) ಬಾದಷಾ ಶಾರುಖ್ ಖಾನ್ (Sharukh Khan) 57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್‌ಡೇ ಖುಷಿಯ ಜೊತೆ ಫ್ಯಾನ್ಸ್‌ಗೆ ಶಾರುಖ್ ಟೀಮ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ʻಪಠಾಣ್ʼ ಚಿತ್ರದ ಟೀಸರ್ ಮೂಲಕ ರಗಡ್ ಅವತಾರದಲ್ಲಿ ಶಾರುಖ್ ಬಂದಿದ್ದಾರೆ.

    ಶಾರುಖ್ ಖಾನ್ ಸಾಕಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟಿರುವ ಸ್ಟಾರ್ ನಟ, ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಲಕ್ ಕೈ ಕೊಟ್ಟಿತ್ತು. 2018ರಲ್ಲಿ `ಜೀರೋ’ (Zero Film) ಚಿತ್ರದಲ್ಲಿ ತೆರೆಕಂಡ ಬಳಿಕ ಚಿತ್ರರಂಗದಿಂದ ದೂರ ಸರಿದಿದ್ದರು. ಇದೀಗ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ `ಪಠಾಣ್’ (Pathan Film) ಚಿತ್ರದ ಟೀಸರ್ ಝಲಕ್ ಮೂಲಕ ಶಾರುಖ್ ಧೂಳೆಬ್ಬಿಸುತ್ತಿದ್ದಾರೆ.

    ಸಿಕ್ಸ್‌ಪ್ಯಾಕ್ ಗೆಟಪ್‌ನಲ್ಲಿ ಆ್ಯಕ್ಷನ್ ಅವತಾರದಲ್ಲಿ ಶಾರುಖ್ ಖಾನ್ ಭಿನ್ನವಾಗಿ ಟೀಸರ್‌ನಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಶಾರುಖ್‌ಗೆ ದೀಪಿಕಾ ಪಡುಕೋಣೆ (Deepika Padukone) ಜೋಡಿಯಾಗಿದ್ದು, ಜಾನ್ ಅಬ್ರಾಹಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖಡಕ್ ಡೈಲಾಗ್ಸ್, ಮೈನವಿರೇಳಿಸುವಂತಹ ದೃಶ್ಯಗಳು ನೋಡುಗರನ್ನ ಅಟ್ರಾಕ್ಟ್ ಮಾಡಿದೆ. ಟೀಸರ್ ರಿಲೀಸ್ ಬಳಿಕ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೇ ವಿವ್ಸ್ ಗಿಟ್ಟಿಸಿಕೊಂಡಿದೆ. ಇದನ್ನೂ ಓದಿ:ಮಲಯಾಳಂಗೆ ಹಾರಿದ ರಾಜ್ ಬಿ. ಶೆಟ್ಟಿ : ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಾಯಕಿ

    `ಓಂ ಶಾಂತಿ ಓಂ’ ಮತ್ತು ʻಹ್ಯಾಪಿ ನ್ಯೂ ಇಯರ್ʼ ನಂತರ ಮತ್ತೆ ಈ ಜೋಡಿ ಪಠಾಣ್ ಮೂಲಕ ಬರುತ್ತಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇದೇ 2023ರಂದು ಜನವರಿ 25ಕ್ಕೆ ಪಠಾಣ್‌ ತೆರೆಗೆ ಅಬ್ಬರಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್

    ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್

    ಬಿಟೌನ್ ಸೂಪರ್ ಸ್ಟಾರ್ ಶಾರುಖ್ ಖಾನ್ (Sharukh Khan) ನಟಿಸಿರುವ ಸಿನಿಮಾಗಳು ಮಕಾಡೆ ಮಲಗಿದ್ದ ಬೆನ್ನಲ್ಲೇ ಸಿನಿಮಾದಿಂದ ಸರಿದಿದ್ದರು. ಇದೀಗ ಲಾಂಗ್ ಗ್ಯಾಪ್‌ನ ನಂತರ ಮತ್ತೆ `ಜವಾನ್’ (Jawan) ಚಿತ್ರದ ಮೂಲಕ ಶಾರುಖ್ ಖಾನ್ ಕಂಬ್ಯಾಕ್ ಆಗುತ್ತಿದ್ದಾರೆ. ಜೊತೆಗೆ ಈ ಚಿತ್ರದ ಒಟಿಟಿ ಹಕ್ಕು 100 ಕೋಟಿ ರೂಪಾಯಿಗೆ ಸೋಲ್ಡ್ ಔಟ್ ಆಗಿದೆ.

    ಅಟ್ಲೀ ನಿರ್ದೇಶನದ ಸಿನಿಮಾ `ಜವಾನ್’ ಚಿತ್ರದಲ್ಲಿ ಶಾರುಖ್ ಖಾನ್ ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಈ ಚಿತ್ರದ ಕೊನೆಯ ಹಂತದ ಶೂಟಿಂಗ್‌ನಲ್ಲಿರುವ ಬೆನ್ನಲ್ಲೇ 100 ಕೋಟಿ(100 Crore) ರೂಪಾಯಿಗೆ ಒಟಿಟಿಗೆ ಸೇಲ್ ಆಗಿದೆ. ಚಿತ್ರಮಂದಿರಲ್ಲಿ ಬಂದ ನಂತರ ಒಟಿಟಿಗೆ ಲಗ್ಗೆ ಇಡಲಿದೆ. ಇದನ್ನೂ ಓದಿ:ಕೇಂದ್ರ ಸಚಿವ ಠಾಕೂರ್ ಭೇಟಿ ಮಾಡಿದ ‘ಕಾಂತಾರ’ ನಿರ್ಮಾಪಕ ವಿಜಯ್ ಕಿರಗಂದೂರ

    ಬಾಲಿವುಡ್‌ನಲ್ಲಿ (Bollywood) ಇದೀಗ ಸೌತ್ ಸಿನಿಮಾಗಳೇ ಸೂಪರ್ ಡೂಪರ್ ಹಿಟ್ ಆಗುತ್ತಿದೆ. ಹಿಂದಿ ಚಿತ್ರಗಳು ಗಟ್ಟಿ ನೆಲೆ ಕಾಣದೇ ಮಕಾಡೆ ಮಲಗುತ್ತಿದೆ. ಆದರೆ ಈಗ ಜವಾನ್ ಚಿತ್ರ ಬಹುಕೋಟಿ ವೆಚ್ಚಕ್ಕೆ ಒಟಿಟಿಗೆ ಸೇಲ್ ಆಗಿರುವುದು ಬಾಲಿವುಡ್‌ಗೆ ಮರುಜೀವ ಕೋಟಿ ಕೊಟ್ಟಿದೆ. 100 ಕೋಟಿ ರೂಪಾಯಿಗೆ ಸೇಲ್ ಆಗುವ ಮೂಲಕ ಜವಾನ್ ಹಿಸ್ಟರಿ ಕ್ರಿಯೇಟ್ ಮಾಡಿದೆ.

    `ಜವಾನ್’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಸೋಲಿನ ರುಚಿ ಕಂಡಿರುವ ಶಾರುಖ್‌ಗೆ ಈ ಸಿನಿಮಾ ಗೆಲುವಿನ ಸಿಹಿ ನೀಡುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಸೀಸನ್ 7(Coffe With Karan) ಶೋ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಶೋನಲ್ಲಿ ತಾರೆಯರ ಬ್ರೇಕಪ್, ಗಾಸಿಪ್, ಸೆಕ್ಸ್, ಡೇಟಿಂಗ್, ವಿಚಾರ ಕೇಳುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಈ ಶೋನಲ್ಲಿ ಶಾರುಖ್ ಪತ್ನಿ ಗೌರಿ ಖಾನ್(Gowri Khan) ಕೂಡ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲ, ಮೊದಲ ಬಾರಿಗೆ ಮಗ ಆರ್ಯನ್ ಖಾನ್ (Aryan Khan) ಬಗ್ಗೆ ಮೌನ ಮುರಿದಿದ್ದಾರೆ.

    ಈಗಾಗಲೇ ಕಾಫಿ ವಿ ಕರಣ್ ಸೀಸನ್ 7ರಲ್ಲಿ ಸಾಕಷ್ಟು ಸಿನಿತಾರೆಯರು ಭಾಗವಹಿಸಿದ್ದಾರೆ.  ಕರಣ್ ನಿರೂಪಣೆಯ ಶೋ ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಇದೀಗ ಕಾರ್ಯಕ್ರಮದಲ್ಲಿ ಶಾರುಖ್ ಪತ್ನಿ ಗೌರಿ ಖಾನ್, ಸಂಜಯ್ ಕಪೂರ್ ಪತ್ನಿ ಮಹೀಪ್, ಚಂಕಿ ಪಾಂಡೆ ಪತ್ನಿ ಭಾವನಾ ಪಾಂಡೆ ಭಾಗವಹಿಸಿದ್ದಾರೆ. ಈ ಮೂವರು ತಮ್ಮ ಕುಟುಂಬ ಬಗ್ಗೆ ಸಾಕಷ್ಟು ವಿಚಾರವನ್ನ ರಿವೀಲ್ ಮಾಡಿದ್ದಾರೆ. ಜೊತೆಗೆ ಶಾರುಖ್ ಪತ್ನಿ ಗೌರಿ ಕೂಡ ಮೊದಲ ಬಾರಿಗೆ ಮಗನ ಡ್ರಗ್ಸ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

    ವೃತ್ತಿಪರವಾಗಿ ಮಾತ್ರವಲ್ಲದೇ ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ತುಂಬಾ ಕಠಿಣ ಸಮಯವನ್ನ ಎದುರಿಸಿದ್ದೀರಿ ಈ ಬಗ್ಗೆ ಹೇಳಿ ಎಂದು ಕರಣ್ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗೌರಿ ಖಾನ್ ತಾಯಿಯಾಗಿ, ಪೋಷಕರಾಗಿ ನಾವು ಆಗ ಅನುಭವಿಸಿದ್ದಕ್ಕಿಂತ ಮತ್ತೊಂದಿಲ್ಲ. ಕುಟುಂಬವಾಗಿ ನಿಂತಾಗ ಇಂದು ನಾವು ದೊಡ್ಡ ಜಾಗದಲ್ಲಿದ್ದೇವೆ. ನಮ್ಮ ಎಲ್ಲಾ ಸ್ನೇಹಿತರು, ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದವನ್ನ ತಿಳಿಸುತ್ತೇನೆ ಎಂದು ಗೌರಿ ಖಾನ್ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ:ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

    ಈ ವೇಳೆ ಸುಹಾನ್ ಖಾನ್‌ಗೆ ಡೇಟಿಂಗ್ ಬಗ್ಗೆ ಎನು ಸಲಹೆ ಕೊಡುತ್ತೀರಾ ಎಂದು ಕರಣ್ ಗೌರಿ ಖಾನ್‌ಗೆ ಕೇಳಿದ್ದಾರೆ. ಒಟ್ಟಿಗೆ ಇಬ್ಬರು ಹುಡುಗರ ಜತೆ ಡೇಟ್ ಮಾಡಬೇಡ ಎಂದು ಹೇಳಿದ್ದಾರೆ. ಗೌರಿ ಖಾನ್ ಬೋಲ್ಡ್ ಮಾತು ನೋಡುಗರಿಗೆ ಅಚ್ಚರಿ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಶಾರುಖ್ ಖಾನ್ ಪುತ್ರನ ಜೊತೆ ಪಾಕ್ ನಟಿಯ ಲವ್ವಿ-ಡವ್ವಿ

    ಶಾರುಖ್ ಖಾನ್ ಪುತ್ರನ ಜೊತೆ ಪಾಕ್ ನಟಿಯ ಲವ್ವಿ-ಡವ್ವಿ

    ಶ್ರೀದೇವಿ ಮಗಳಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಪಾಕಿಸ್ತಾನದ ನಟಿ ಸಜಲ್ ಅಲಿ(Sajal Ali) ಇದೀಗ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಪುತ್ರನ ಮೇಲೆ ಈ ನಟಿಗೆ ಲವ್ ಆಗಿದ್ಯಂತೆ. ಹಾಗಂತ ಸೋಷಿಯಲ್ ಮೀಡಿಯಾ ಮೂಲಕ ಸಜಲ್ ಹೇಳಿಕೊಂಡಿದ್ದಾರೆ.

    ಪಾಕ್ ನಟಿ ಸಜಲ್ ಸಾಕಷ್ಟು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. `ಮೋಮ್’ (Mom) ಚಿತ್ರದಲ್ಲಿ ಎವರ್‌ಗ್ರೀನ್ ನಟಿ ಶ್ರೀದೇವಿ(Sridevi Kapoor) ಪುತ್ರಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಶಾರುಖ್ (Sharukh Khan) ಪುತ್ರ ಆರ್ಯನ್ ಮೇಲೆ ಸಜಲ್ ಅಲಿಗೆ ಪ್ಯಾರ್ ಆಗಿದೆ. ಆರ್ಯನ್ ಖಾನ್ ಅಂದ್ರೆ ತನಗಿಷ್ಟ ಎಂಬರ್ಥದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ `ಬಾ ಬಾರೋ ರಸಿಕಾ’ ಖ್ಯಾತಿಯ ನಟಿ ಆಶಿತಾ

    ಇತ್ತೀಚೆಗೆ ನಟಿ ಸಜಲ್, ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಆರ್ಯನ್ ಖಾನ್ ಫೋಟೋ ಶೇರ್ ಮಾಡಿ, ಶಾರುಖ್ ಖಾನ್ ನಟನೆಯ ರೊಮ್ಯಾಂಟಿಕ್ ಸಾಂಗ್ ಆ್ಯಡ್ ಮಾಡಿ ಶೇರ್ ಮಾಡಿದ್ದರು. ಈ ಫೋಸ್ಟ್ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಕೂಡ ಆಗುತ್ತಿದೆ. ಇದನ್ನೂ ಓದಿ:ವೆಬ್ ಸಿರೀಸ್‌ನತ್ತ ಮುಖ ಮಾಡಿದ ಹರ್ಷಿಕಾ ಪೂಣಚ್ಚ

    ಇವರಿಬ್ಬರು ಮದುವೆ ಆದರೆ ಹೇಗಿರುತ್ತದೆ. ಇವರಿಬ್ಬರ ಜೋಡಿ ಹೇಗಿದೆ ಎಂದು ಈಗಾಗಲೇ ನೆಟ್ಟಿಗರು ಮುಂದಾಲೋಚನೆ ಮಾಡಿದ್ದಾರೆ. ಸಜಲ್ ಅಲಿ ಪ್ರೀತಿಗೆ ಆರ್ಯನ್ ಖಾನ್ ಇನ್ನೂ ರಿಯಾಕ್ಷನ್ ಕೊಟ್ಟಿಲ್ಲ. ಮುಂದೆ ಎನೆಲ್ಲಾ ಬೆಳವಣಿಗೆ ಆಗಬಹುದು ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ತಮ್ಮ ಸಂಭಾವನೆಯಲ್ಲಿ ʼಜವಾನ್‌ʼ ಚಿತ್ರಕ್ಕಾಗಿ 5 ಕೋಟಿ ಹೆಚ್ಚಿಸಿಕೊಂಡ  ವಿಜಯ್ ಸೇತುಪತಿ!

    ತಮ್ಮ ಸಂಭಾವನೆಯಲ್ಲಿ ʼಜವಾನ್‌ʼ ಚಿತ್ರಕ್ಕಾಗಿ 5 ಕೋಟಿ ಹೆಚ್ಚಿಸಿಕೊಂಡ ವಿಜಯ್ ಸೇತುಪತಿ!

    ಕಾಲಿವುಡ್‌ನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಸದ್ಯ ಹಿಂದಿ ಸಿನಿಮಾಗಳ ಮುಖ ಮಾಡಿದ್ದಾರೆ. ಶಾರುಖ್ ನಟನೆಯ `ಜವಾನ್’ ಚಿತ್ರತಂಡಕ್ಕೆ ವಿಜಯ್ ಸೇರಿಕೊಂಡಿದ್ದಾರೆ. ಇದೀಗ ಈ ಚಿತ್ರಕ್ಕೆ ಪಡೆದಿರುವ ಸಂಭಾವನೆ ವಿಚಾರವಾಗಿ ವಿಜಯ್ ಸೇತುಪತಿ ಸಖತ್ ಸೌಂಡ್ ಮಾಡುತ್ತಿದ್ದಾರೆ.

    ದಕ್ಷಿಣದ ಸಿನಿಮಾಗಳ ಮೂಲಕ ಸಕ್ಸಸ್‌ಫುಲ್ ನಟನಾಗಿ ಗುರುತಿಸಿಕೊಂಡಿರುವ ವಿಜಯ್ ಸೇತುಪತಿಗೆ ಬಾಲಿವುಡ್‌ನಲ್ಲೂ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ನಿರ್ದೇಶಕ ಅಟ್ಲೀ ತಮ್ಮ ಮುಂಬರುವ `ಜವಾನ್’ ಚಿತ್ರಕ್ಕೆ ವಿಜಯ್ ಸೇತುಪತಿ ಅವರೇ ತಮ್ಮ ಪ್ರಾಜೆಕ್ಟ್‌ಗೆ ಬೇಕು ಎಂದು ಒಂದೊಳ್ಳೆ ಸಂಭಾವನೆ ನೀಡಿ, ಈ ಸಿನಿಮಾಗೆ ಫಿಕ್ಸ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸುಶ್ಮಿತಾ ಸೇನ್

    ಶಾರುಖ್ ಖಾನ್ ಮುಂದೆ ಪವರ್‌ಫುಲ್ ಪಾತ್ರದಲ್ಲಿ ನಟಿಸಲು ತಮಗೆ ಅರಸಿ ಬಂದಿದ್ದ ಸಾಕಷ್ಟು ಪ್ರಾಜೆಕ್ಟ್ ಅನ್ನ ವಿಜಯ್ ಕೈಬಿಟ್ಟಿದ್ದಾರೆ. 15 ಕೋಟಿ ಇದ್ದ ತಮ್ಮ ಸಂಭಾವನೆಯನ್ನ 20 ಕೋಟಿಗೆ ಹೆಚ್ಚಿಕೊಂಡಿದ್ದಾರೆ.

    `ಜವಾನ್’ ಚಿತ್ರದಲ್ಲಿ ಶಾರುಖ್ ಮತ್ತು ನಯನತಾರಾ ಎದುರು ವಿಜಯ್ ಸೇತುಪತಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ನಿಷೇಧದ ಬಗ್ಗೆ ಏಕ್ತಾ ಕಪೂರ್ ಪ್ರತಿಕ್ರಿಯೆ

    `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ನಿಷೇಧದ ಬಗ್ಗೆ ಏಕ್ತಾ ಕಪೂರ್ ಪ್ರತಿಕ್ರಿಯೆ

    ಬಾಲಿವುಡ್‌ನಲ್ಲಿ ಈಗಾಗಲೇ ಬಾಯ್ಕಾಟ್ ಟ್ರೆಂಡ್‌ಗೆ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಲಿಯಾಗಿದೆ. ಜತೆಗೆ ಖಾನ್‌ಗಳ ಚಿತ್ರಗಳನ್ನ ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ನಿರ್ಮಾಪಕಿ ಏಕ್ತಾ ಕಪೂರ್ ಬಾಯ್ಕಾಟ್ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದಾರೆ.

    ಇತ್ತೀಚೆಗೆ ಆಮೀರ್ ಖಾನ್ ನಟಿಸಿ, ನಿರ್ದೇಶಿಸಿದ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಬಾಯ್ಕಾಟ್ ಟ್ರೆಂಡ್‌ಗೆ ಬಲಿಯಾಗಿರುವ ಈ ಸಿನಿಮಾ ನಂತರ ಇನ್ನುಳಿದ ಖಾನ್‌ಗಳ ಚಿತ್ರಗಳ ಮೇಲೆ ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇದೀಗ ಈ ಕುರಿತು ಸಂದರ್ಶನವೊಂದರಲ್ಲಿ ಏಕ್ತಾ ಕಪೂರ್ ಮಾತನಾಡಿದ್ದಾರೆ. ಇದನ್ನೂ ಓದಿ:ಹಾಸಿಗೆ ಇದ್ದಷ್ಟು ಕಾಸು ಚಾಚು ಎಂದ ಸೋನು ಶ್ರೀನಿವಾಸ್ ಗೌಡ

    ಸಿನಿಮಾ ಜಗತ್ತಿಗೆ ಅತ್ಯುತ್ತಮ ಚಿತ್ರಗಳನ್ನ ಕೊಡುಗೆ ಕೊಟ್ಟಿರುವರನ್ನು ಬಹಿಷ್ಕರಿಸುವುದು ವಿಚಿತ್ರ ಸಂಗತಿ. ಇಂಡಸ್ಟ್ರಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್ ಚಿತ್ರರಂಗದ ದಂತಕಥೆಗಳು. ನಾವು ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗೌರಿ ಖಾನ್ ಹೊಸ ಪ್ರಾಜೆಕ್ಟ್‌ನಲ್ಲಿ ನಟಿ ಕತ್ರಿನಾ ಕೈಫ್

    ಗೌರಿ ಖಾನ್ ಹೊಸ ಪ್ರಾಜೆಕ್ಟ್‌ನಲ್ಲಿ ನಟಿ ಕತ್ರಿನಾ ಕೈಫ್

    ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುವ ನಟಿ. ಮದುವೆ ಆದ್ಮೇಲೂ ಕೂಡ ಈ ನಟಿಯ ಮೇಲಿರುವ ಕ್ರೇಜ್ ಕಡಿಮೆಯಾಗಿಲ್ಲ. ಇದೀಗ ಶಾರುಖ್ ಪತ್ನಿ ಗೌರಿ ಖಾನ್ ಅವರ ಹೊಸ ಪ್ರಾಜೆಕ್ಟ್ಗೆ ಕತ್ರಿನಾ ಕೈಫ್ ಸಾಥ್ ನೀಡಿದ್ದಾರೆ.

    ಬಿಟೌನ್‌ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಕತ್ರಿನಾ ಕೈಫ್ ಕೈಯಲ್ಲಿ ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದೀಗ ಹೊಸ ಪ್ರಾಜೆಕ್ಟ್‌ವೊಂದು ಕತ್ರಿನಾರನ್ನ ಅರಸಿ ಬಂದಿದೆ. ಬಾದಷಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಪ್ರಾಜೆಕ್ಟ್‌ನಲ್ಲಿ ಕತ್ರಿನಾ ಕೈಫ್ ಮಿಂಚಲಿದ್ದಾರೆ. ಈ ಕುರಿತು ನಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್‌ಗೆ ಯಾಕೆ ಹೋಗಬಾರದು? ನವ್ಯಶ್ರೀ ರಾವ್ ಪ್ರಶ್ನೆ

     

    View this post on Instagram

     

    A post shared by Katrina Kaif (@katrinakaif)

    ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಗೌರಿ ಖಾನ್ ಈಗ ಕತ್ರಿನಾಗೆ ಸಾಥ್ ನೀಡಲಿದ್ದಾರೆ. ಈ ಕುರಿತು ಹೆಚ್ಚಿನ ಅಪ್‌ಡೇಟ್‌ಗಾಗಿ ಮುಂದಿನ ದಿನಗಳವರೆಗೆ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಪಠಾಣ್’ ಲುಕ್ ಔಟ್: ಗನ್ ಹಿಡಿದು ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

    `ಪಠಾಣ್’ ಲುಕ್ ಔಟ್: ಗನ್ ಹಿಡಿದು ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

    ಬಾಲಿವುಡ್ ಬ್ಯೂಟಿ ಕ್ವೀನ್ ದೀಪಿಕಾ ಪಡುಕೋಣೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಾರುಖ್ ಖಾನ್‌ಗೆ ನಾಯಕಿಯಾಗಿ `ಪಠಾಣ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ದೀಪಿಕಾ ಲುಕ್ ರಿವೀಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಬಾದಶಾ ಶಾರುಖ್ ಖಾನ್ ಜತೆ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ಮೋಡಿ ಮಾಡಿದ್ದಾರೆ. ಈಗ ಪಠಾಣ್ ಚಿತ್ರದಲ್ಲೂ ಶಾರುಖ್‌ಗೆ ದೀಪಿಕಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಚಿತ್ರದಲ್ಲಿನ ದೀಪಿಕಾ ಫಸ್ಟ್ ಲುಕ್ ರಿವೀಲ್ ಆಗಿದ್ದು, ದೀಪಿಕಾ ಎಂದೂ ಕಾಣಿಸಿಕೊಂಡಿರದ ಲುಕ್ಕಿನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:53ನೇ ವಯಸ್ಸಿನಲ್ಲಿ ಬೆತ್ತಲಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಜನ್ನಿಫರ್ ಲೊಪೇಜ್

     

    View this post on Instagram

     

    A post shared by Deepika Padukone (@deepikapadukone)

    ಸಿದ್ಧಾರ್ಥ್ ನಿರ್ದೇಶನದ, ಯಶ್ ರಾಜ್ ಫಿಲ್ಮ್ಸ್‌ ನಿರ್ಮಾಣದ `ಪಠಾಣ್’ ಚಿತ್ರದಲ್ಲಿ ಗನ್ ಹಿಡಿದು, ಫುಲ್ ಮಾಸ್ ಲುಕ್ಕಿನಲ್ಲಿ ದೀಪಿಕಾ ಮಿಂಚಿದ್ದಾರೆ. ಡಿಪ್ಪಿ ರಗಡ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮುಂದಿನ ವರ್ಷ ಜನವರಿ 25ಕ್ಕೆ ಹಿಂದಿ, ತಮಿಳು, ತೆಲುಗುನಲ್ಲಿ ತೆರೆಗೆ ಅಬ್ಬರಿಸಲಿದೆ. ರಿಲೀಸ್‌ಗೂ ಮುಂಚೆನೇ `ಪಠಾಣ್’ ಸಿನಿಮಾ ಪ್ರೇಕ್ಷಕರ ವಲಯದಲ್ಲಿ ಹಲ್‌ಚಲ್ ಸೃಷ್ಟಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಬಾಲಿವುಡ್‌ನ ನಂಬರ್ ಒನ್ ಶೋ `ಕಾಫಿ ವಿತ್ ಕರಣ್’ ಸಖತ್ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಆಲಿಯಾ ಭಟ್ ಮತ್ತು ರಣ್‌ವೀರ್ ಸಿಂಗ್ ಈ ಶೋನಲ್ಲಿ ಕಾಣಿಸಿಕೊಂಡು ಮನಬಿಚ್ಚಿ ಮಾತನಾಡಿದ್ದರು. ಶಾರುಖ್ ಪತ್ನಿ ಗೌರಿ ಖಾನ್ ಕೂಡ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

    ಕಾಫಿ ವಿತ್ ಕರಣ್ ಸೀಸನ್ 7 ಸದ್ಯ ಓಟಿಟಿನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಆಲಿಯಾ ಮತ್ತು ರಣ್‌ವೀರ್ ಸಂದರ್ಶನದ ಬೆನ್ನಲ್ಲೇ ಗೌರಿ ಖಾನ್ ಕೂಡ ಮಹೀರ್ ಕಪೂರ್ ಮತ್ತು ಭಾವನಾ ಪಾಂಡೆ ಜತೆ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಗೌರಿ ಖಾನ್, ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಬಗ್ಗೆ ಮಾತನಾಡಿದ್ದಾರೆ. ಆ ಸಮಯದಲ್ಲಿ ಎದುರಿಸಿದ ಸವಾಲಿನ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ʻಬಿಗ್ ಬಾಸ್’ ಮನೆಗೆ ಇವರಿಗಿದೆಯಂತೆ ಎಂಟ್ರಿ: ಸಂಭವನೀಯ ಪಟ್ಟಿ ರಿಲೀಸ್

    ಕಳೆದ ವರ್ಷ ಡ್ರಗ್ಸ್ ಕೇಸ್‌ನಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಅರೆಸ್ಟ್ ಆಗಿದ್ದರು. ಕಾನೂನು ಹೋರಾಟದ ನಂತರ ಎನ್‌ಸಿಬಿ ಕ್ಲಿನ್ ಚೀಟ್ ನೀಡಿತ್ತು. ಇಷ್ಟೇಲ್ಲಾ ಆರ್ಯನ್ ಖಾನ್‌ನ ಡ್ರಗ್ಸ್ ಕೇಸ್‌ನಲ್ಲಿ ಅವಾಂತರ ಆಗಿತ್ತು. ಈ ಕುರಿತು ಶಾರುಖ್ ದಂಪತಿ ಯಾವುದೇ ರಿಯಾಕ್ಷನ್ ಕೊಟ್ಟಿರಲಿಲ್ಲ. ಆರ್ಯನ್ ಕೇಸ್‌ನ ವಿಚಾರದಲ್ಲಿ ಮೌನ ವಹಿಸಿದ್ದರು. ಈಗ `ಕಾಫಿ ವಿತ್ ಕರಣ್’ ಶೋನಲ್ಲಿ ಈ ಕುರಿತು ಗೌರಿ ಖಾನ್ ಮನಬಿಚ್ಚಿ ಮಾತನಾಡಿದ್ದಾರಂತೆ. ಅಷ್ಟಕ್ಕೂ ಈ ವಿಚಾರ ನಿಜಾನಾ ಅಂತಾ ಶೋ ತೆರೆಯ ಮೇಲೆ ಬರುವವೆರೆಗೂ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]