Tag: Shariat

  • ಷರಿಯತ್ ಪ್ರಕಾರ ಶಿಕ್ಷೆ ನೀಡಿದರೆ, ಹಿಜಬ್ ಧರಿಸಲು ಅವಕಾಶ ಕೊಡಬಹುದು: ರಘುಪತಿ ಭಟ್

    ಷರಿಯತ್ ಪ್ರಕಾರ ಶಿಕ್ಷೆ ನೀಡಿದರೆ, ಹಿಜಬ್ ಧರಿಸಲು ಅವಕಾಶ ಕೊಡಬಹುದು: ರಘುಪತಿ ಭಟ್

    ಉಡುಪಿ: ಷರಿಯತ್ ಪ್ರಕಾರ ಶಿಕ್ಷೆ ನೀಡಿದರೆ ಹಿಜಬ್ ಧರಿಸಲು ಅವಕಾಶ ಕೊಡಬಹುದು ಎಂದು ಶಾಸಕ ರಘುಪತಿ ಭಟ್ ಕಿಡಿಕಾರಿದರು.

    ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲಾ ಬಿಜೆಪಿಯಿಂದ ಕೊಲೆ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ನಾನು ಸಹ ಉಗ್ರ ಭಾಷಣ ಮಾಡಿದ್ದೇನೆ. ಕಠೋರ ಮುಸ್ಲಿಮರು ಷರಿಯತ್ ಕಾನೂನು ಪಾಲಿಸಲು ತಯಾರು ಇರಲಿ. ಹರ್ಷನನ್ನು ಕೊಂದವರನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಲು ಅವಕಾಶ ಕೊಡಬೇಕು. ಕೊಲೆಗಡುಕರಿಗೆ ಷರಿಯತ್ ಕಾನೂನು ಪ್ರಕಾರ ಶಿಕ್ಷೆ ನೀಡುತ್ತೀರಾ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ:  ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

    ಷರಿಯತ್ ಪ್ರಕಾರ ಶಿಕ್ಷೆ ನೀಡಿದರೆ ಹಿಜಬ್ ಧರಿಸಲು ಅವಕಾಶ ಕೊಡಬಹುದು. ಕಠಿಣ ಶಿಕ್ಷೆ ಬೇಡ ತರಗತಿಯಲ್ಲಿ ಹಿಜಬ್ ಬೇಕು ಎಂದರೆ ಅದು ಆಗೂದಿಲ್ಲ. ಭಾರತ ದೇಶದ ಗಾಳಿ ನೀರು ಅನ್ನ ತಿನ್ನುತ್ತಿದ್ದೀರಿ. ಕಾಂಗ್ರೆಸ್ ಪಕ್ಷ ಪಲಾಯನ ಮಾಡಬೇಡಿ, ನಿಮ್ಮ ನಿಲುವು ಸ್ಪಷ್ಟಪಡಿಸಿ. ಹಿಜಬ್ ವಿಚಾರದ ನಿಲುವೇನು? ಹರ್ಷ ಕೊಲೆಯಲ್ಲಿ ನಿಲುವೇನು? ಎಂದು ಪ್ರಶ್ನೆ ಕೇಳಿದರು.

    ದುಬೈ ಸೌದಿಗಳಲ್ಲಿ ಷರಿಯತ್ ಕಾನೂನು ಇದ್ದರೂ ಆಧುನಿಕತೆಯನ್ನು ಒಪ್ಪಿಕೊಳ್ಳಲಾಗುತ್ತಿದೆ. ಹಿಂದೂಗಳ ಕೆಲ ಪದ್ಧತಿ ಕಾಲ-ಕಾಲಕ್ಕೆ ಬದಲಾವಣೆಯಾಗಿದೆ. ನಮ್ಮ ವಿದ್ವಾಂಸರು ಸತಿ ಸಹಗಮನ, ಬಾಲ್ಯವಿವಾಹ, ಅಸ್ಪೃಶ್ಯತೆ ಅಸಮಾನತೆಯನ್ನು ತೊಡೆದುಹಾಕಿದ್ದಾರೆ. ಷರಿಯತ್ ಕಾನೂನು ಒಪ್ಪುವುದಾದರೆ ಎಲ್ಲವನ್ನೂ ಮುಸ್ಲೀಮರಿಗೆ ಕಡ್ಡಾಯ ಮಾಡಿ ಎಂದು ಮನವಿ ಮಾಡಿದರು.

    ನಾವು ಭಾರತದ ಸಂವಿಧಾನ ಒಪ್ಪುವವರು. ಸಾಕಷ್ಟು ಒಳ್ಳೆಯ ಮುಸ್ಲಿಮರು ಸಂವಿಧಾನ ಒಪ್ಪುತ್ತಾರೆ. ಕ್ಲಾಸ್ ರೂಂನಲ್ಲಿ ಹಿಜಬ್ ಬೇಕು ಎನ್ನುವವರಿಗೆ ಷರಿಯತ್ ಕಾನೂನು ಜಾರಿಗೆ ತನ್ನಿ. ಕೊಲೆ, ಅತ್ಯಾಚಾರ, ಭಯೋತ್ಪಾದನೆ ಮಾಡಿದಾಗ ಶರಿಯತ್ ಬೇಡ್ವಾ? ಕಠೋರ ಮುಸ್ಲಿಮರು ಈಗಲೇ ಹೇಳಿಕೆಯನ್ನು ನೀಡಬೇಕು. ಅಪರಾಧ ಮಾಡಿದಾಗ ಭಾರತದ ಸಂವಿಧಾನ ಸುಪ್ರೀಂ ಕೋರ್ಟ್ ನೆನಪಾಗುತ್ತದೆ. ಕಾಲೇಜಿನ, ತರಗತಿಯ ಶಿಸ್ತು ಪಾಲಿಸುವ ಮುಸಲ್ಮಾನರಿಗೆ ನಾನು ಈ ಮಾತನ್ನು ಹೇಳುತ್ತಿಲ್ಲ ಎಂದು ಸಿಡಿದರು. ಇದನ್ನೂ ಓದಿ: ಹರ್ಷನ ಕೊಲೆಗೆ ಹಂತಕರು ಸ್ವತಃ ಕುಳಿತು ಮಚ್ಚು ರೆಡಿ ಮಾಡಿಸಿದ್ರು!

  • ಷರಿಯತ್ ಕಾನೂನು ಎಂದರೇನು? ಅಫ್ಘಾನ್ ತಾಲಿಬಾನ್ ಹೇಗೆ ಅರ್ಥೈಸುತ್ತದೆ?

    ಷರಿಯತ್ ಕಾನೂನು ಎಂದರೇನು? ಅಫ್ಘಾನ್ ತಾಲಿಬಾನ್ ಹೇಗೆ ಅರ್ಥೈಸುತ್ತದೆ?

    ಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾಗಿದೆ. ಕೆಲವೇ ದಿನಗಳಲ್ಲಿ ಅಧಿಕೃತ ಸರ್ಕಾರ ರಚನೆಯಾಗಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದಿಲ್ಲ ಎಂದಿರುವ ವಕ್ತಾರರು ಷರಿಯತ್ ಕಾನೂನಿನ ಅಡಿಯಲ್ಲಿ ಆಡಳಿತ ನಡೆಸುವುದಾಗಿ ಹೇಳಿದ್ದಾರೆ. 1996 ಮಾದರಿಯಲ್ಲಿ ಈಗ ತಾಲಿಬಾನ್ ಈಗ ಇರುವುದಿಲ್ಲ, ಷರಿಯತ್ ವ್ಯಾಪ್ತಿಯಲ್ಲಿ ಮಹಿಳೆಯರಿಗೂ ಸ್ವಾತಂತ್ರ್ಯ ನೀಡುವುದಾಗಿಯೂ ತಾಲಿಬಾನ್ ವಕ್ತಾರರು ಹೇಳಿದ್ದಾರೆ.

    ಆದರೆ ಈ ಹೇಳಿಕೆ ನಡುವೆಯೇ ಅಫ್ಘಾನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ಸರ್ಕಾರಿ ಸಾಮ್ಯದ ಸುದ್ದಿ ವಾಹಿನಿವೊಂದರ ಪ್ರಮುಖ ನಿರೂಪಕಿಯನ್ನೂ ಈಗ ಕೆಲಸದಿಂದ ತೆಗೆದು ಹಾಕಲಾಗಿದೆ. ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವುದಾಗಿ ಹೇಳಿದ್ದ ತಾಲಿಬಾನ್ ಷರಿಯತ್ ಕಾನೂನು ಹೇಗೆ ಅರ್ಥೈಸಿ ಕೊಳ್ಳುತ್ತಿದೆ ಎನ್ನುವುದು ಇಲ್ಲಿಯವರೆಗೂ ಗೊಂದಲಮಯವಾಗಿದೆ. ಈ ಹಿನ್ನೆಲೆಯಲ್ಲಿ ಷರಿಯತ್ ಕಾನೂನು ಎಂದರೇನು? ಇದನ್ನು ಅಫ್ಘಾನ್ ನಲ್ಲಿ ತಾಲಿಬಾನ್ ಅರ್ಥೈಸಿಕೊಂಡಿದೆ. ಈ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರ ಭವಿಷ್ಯ ಹೇಗಿರಲಿದೆ ಎಂದು ನೋಡೋಣ.

    ಷರಿಯಾ ಎಂದರೇನು?
    ಷರಿಯತ್ ಅಥಾವ ಶರಿಯಾ ಖುರಾನ್, ಪ್ರವಾದಿ ಮುಹಮ್ಮದ್ ಅವರ ಜೀವನ ಕಥೆಗಳು ಮತ್ತು ಧಾರ್ಮಿಕ ವಿದ್ವಾಂಸರ ತೀರ್ಪುಗಳನ್ನು ಆಧರಿಸಿದೆ. ಇದು ಇಸ್ಲಾಂನ ನೈತಿಕ ಮತ್ತು ಕಾನೂನು ಚೌಕಟ್ಟನ್ನು ರೂಪಿಸುತ್ತದೆ. ಖುರಾನ್ ನೈತಿಕ ಜೀವನಕ್ಕೆ ಒಂದು ಮಾರ್ಗವನ್ನು ವಿವರಿಸುತ್ತದೆ, ಆದರೆ ಇಲ್ಲಿ ಒಂದು ನಿರ್ದಿಷ್ಟ ಕಾನೂನುಗಳಿಲ್ಲ. ಷರಿಯತ್‍ನ ಒಂದು ವ್ಯಾಖ್ಯಾನವು ಮಹಿಳೆಯರಿಗೆ ವ್ಯಾಪಕವಾದ ಹಕ್ಕುಗಳನ್ನು ನೀಡಬಲ್ಲದು, ಇನ್ನೊಂದು ಮಹಿಳೆಯರಿಗೆ ಕೆಲವು ಹಕ್ಕುಗಳನ್ನು ಮಾತ್ರ ನೀಡಬಹುದು. ಆದರೆ ತಾಲಿಬಾನ್ ಹೇರುವ ಕೆಲವು ನಿಯಮಗಳು ಷರಿಯತ್ ಕಾನೂನುಗಳನ್ನು ಮೀರಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಷರಿಯತ್ ನ ವ್ಯಾಖ್ಯಾನಗಳು ಮುಸ್ಲಿಂ ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ ಮತ್ತು ಎಲ್ಲಾ ಹಲವು ಸರ್ಕಾರಗಳು ತಮ್ಮ ಕಾನೂನು ವ್ಯವಸ್ಥೆಯನ್ನು ಷರಿಯಾದ ಮೇಲೆ ಆಧರಿಸಿವೆ. ತಾಲಿಬಾನ್ ಷರಿಯಾ ಕಾನೂನಿನ ಅಡಿಯಲ್ಲಿ ಸರ್ಕಾರ ಸ್ಥಾಪಿಸುತ್ತಿದ್ದಾರೆ ಎಂದರೆ ಅವರು ಇಸ್ಲಾಮಿಕ್ ವಿದ್ವಾಂಸರು ಅಥವಾ ಇತರ ಇಸ್ಲಾಮಿಕ್ ಅಧಿಕಾರಿಗಳು ಒಪ್ಪುವ ರೀತಿಯಲ್ಲಿ ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಅರ್ಥವಲ್ಲ.

    ಷರಿಯಾ ಏನು ಸೂಚಿಸುತ್ತದೆ?
    ಕಳ್ಳತನ ಮತ್ತು ವ್ಯಭಿಚಾರದಂತಹ ಕೆಲವು ನಿರ್ದಿಷ್ಟ ಅಪರಾಧಗಳನ್ನು ಷರಿಯತ್ ಪಟ್ಟಿ ಮಾಡುತ್ತದೆ ಮತ್ತು ಆರೋಪಗಳ ಪರಿಸ್ಥಿತಿಯ ಮಾನದಂಡಗಳ ಆಧಾರದಲ್ಲಿ ಶಿಕ್ಷೆಗಳನ್ನು ವಿಧಿಸುತ್ತದೆ. ಅಲ್ಲದೇ ಇದು ಯಾವಾಗ ಮತ್ತು ಹೇಗೆ ಪ್ರಾರ್ಥನೆ ಮಾಡಬೇಕು, ಮದುವೆ ಅಥಾವ ವಿಚ್ಛೇದನ ಹೇಗೆ ಮಾಡಬೇಕು ಎನ್ನುವುದನ್ನು ನೈತಿಕ ನೆಲೆಗಟ್ಟಿನಲ್ಲಿ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುತ್ತದೆ. ಪುರುಷ ಬೆಂಗಾವಲು ಇಲ್ಲದೆ ಮಹಿಳೆಯರು ಮನೆಯಿಂದ ಹೊರಬರುವುದನ್ನು ಅಥವಾ ಹೆಚ್ಚಿನ ಉದ್ಯೋಗಗಳಲ್ಲಿ ಕೆಲಸ ಮಾಡುವುದನ್ನು ಷರಿಯತ್ ಕಾನೂನು ತಡೆಯುವುದಿಲ್ಲ.

    ತಾಲಿಬಾನ್ ಈ ಹಿಂದೆ ಷರಿಯಾವನ್ನು ಹೇಗೆ ಅರ್ಥೈಸಿತು?
    1996 ರಿಂದ 2001 ರವರೆಗೆ ತಾಲಿಬಾನ್ ಅಫ್ಘಾನಿಸ್ತಾನವನ್ನು ನಿಯಂತ್ರಿಸಿದಾಗ, ಅವರು ದೂರದರ್ಶನ ಮತ್ತು ಸಂಗೀತ ಉಪಕರಣಗಳನ್ನು ನಿಷೇಧಿಸಿದರು. ನಡವಳಿಕೆ, ಉಡುಗೆ ಮತ್ತು ಚಲನೆಯ ಮೇಲಿನ ನಿರ್ಬಂಧಗಳನ್ನು ಹೇರಿದರು. ಪರಿಶೀಲನೆಗೆ ನೈತಿಕತೆ ಪೊಲೀಸ್ ಅಧಿಕಾರಿಗಳು ನೇಮಿಸಿದರು, ತಮ್ಮ ನಿಯಮಗಳನ್ನು ಪಾಲಿಸದ ಮಹಿಳೆಯರನ್ನು ಅವಮಾನಿಸಿದರು ಮತ್ತು ಚಾವಟಿ ಏಟಿನಿಂದ ಶಿಕ್ಷಿಸಿದರು. 1996 ರಲ್ಲಿ, ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ಮಹಿಳೆಯೊಬ್ಬಳು ಉಗುರು ಬಣ್ಣ ಧರಿಸಿದ್ದಕ್ಕಾಗಿ ಹೆಬ್ಬೆರಳಿನ ತುದಿಯನ್ನು ಕತ್ತರಿಸಿದ್ದರು. ವ್ಯಭಿಚಾರದ ಆರೋಪ ಹೊತ್ತ ಮಹಿಳೆಯರನ್ನು ಕಲ್ಲಿನಿಂದ ಹೊಡೆದು ಸಾಯಿಸಲಾಯಿತು. ಮಹಿಳೆಯರು ಮನೆಯ ಹೊರಗೆ ಕೆಲಸ ಮಾಡುವುದನ್ನು ಅಥವಾ ಪುರುಷ ರಕ್ಷಕರಿಲ್ಲದೆ ಮನೆಯಿಂದ ಹೊರ ಹೋಗುವುದನ್ನು ನಿಷೇಧಿಸಿದರು, ಹುಡುಗಿಯರ ಶಾಲೆಗೆ ಹೋಗದಂತೆ ತಡೆದರು ಮತ್ತು ನಿಯಮ ಉಲ್ಲಂಘಿಸಿದ ಜನರನ್ನು ಸಾರ್ವಜನಿಕವಾಗಿ ಹೊಡೆದು ಶಿಕ್ಷಿಸಿದರು. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ

    ಈಗಿನ ಪರಿಸ್ಥಿತಿ ಏನು?
    ಮಹಿಳೆಯರಿಗೆ ಷರಿಯತ್ ಕಾನೂನು ಅಡಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗುವುದು ಎನ್ನಲಾಗಿದೆ. ಅದಕ್ಕೆ ಪೂರಕ ಎನ್ನುವಂತೆ ಮಹಿಳಾ ನಿರೂಪಕಿ ತಾಲಿಬಾನ್ ವಕ್ತಾರರ ಸಂದರ್ಶನ ನಡೆಸುವ ಮೂಲಕ ಭರವಸೆ ಹುಟ್ಟಿಸುವ ಪ್ರಯತ್ನ ಮಾಡಲಾಯಿತು. ಆದರೆ ಇದಾದ ಒಂದೆರಡು ದಿನಗಳಲ್ಲಿ ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸದಂತೆ ಒತ್ತಡ ಹೇರಲಾಗಿದೆ. ಮಹಿಳೆಯರನ್ನು ಪ್ರವೇಶ ನೀಡದ ಬಗ್ಗೆ ಮಹಿಳಾ ನಿರೂಪಕಿ ಬಹಿರಂಗವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

    ಸದ್ಯ ಕಾಬೂಲ್‍ನ ಹೊರಗೆ, ಕೆಲವು ಮಹಿಳೆಯರಿಗೆ ಪುರುಷ ಸಂಬಂಧಿಕರ ಸಹಾಯವಿಲ್ಲದೆ ಮನೆಯಿಂದ ಹೊರಹೋಗಬೇಡಿ ಎಂದು ಹೇಳಲಾಗಿದೆ ಮತ್ತು ತಾಲಿಬಾನ್ ಮಹಿಳೆಯರನ್ನು ವಿಶ್ವವಿದ್ಯಾನಿಲಯಕ್ಕೆ ಪ್ರವೇಶಿಸದಂತೆ ತಡೆಯಲಾಗುತ್ತಿದೆ. ತಾಲಿಬಾನಿಗಳು ಕೆಲವು ಮಹಿಳಾ ಚಿಕಿತ್ಸಾಲಯಗಳು ಮತ್ತು ಬಾಲಕಿಯರ ಶಾಲೆಗಳನ್ನು ಮುಚ್ಚಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ “ಇಸ್ಲಾಮಿಕ್ ಕಾನೂನಿನ ಮಿತಿಯೊಳಗೆ” ಅಥವಾ ತಮ್ಮ ಹೊಸದಾಗಿ ಸ್ಥಾಪಿತವಾದ ಆಡಳಿತದ ಅಡಿಯಲ್ಲಿ ಶರಿಯಾ ಹಕ್ಕುಗಳನ್ನು ಹೊಂದಿರುತ್ತದೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಆದರೆ ಇದರ ಅರ್ಥವೇನೆಂದು ಈವರೆಗೂ ಸ್ಪಷ್ಟವಾಗುತ್ತಿಲ್ಲ. ಇದನ್ನೂ ಓದಿ: “ಜೋರಾದ ಸದ್ದು ಕೇಳಿಸ್ತು.. ನೋಡಿದ್ರೆ ಮನೆ ಮೇಲೆ ಇಬ್ರು ಬಿದ್ದಿದ್ರು”