Tag: Share Market

  • ಸೆನ್ಸೆಕ್ಸ್‌ ಹೈಜಂಪ್‌ – ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಸೃಷ್ಟಿ

    ಸೆನ್ಸೆಕ್ಸ್‌ ಹೈಜಂಪ್‌ – ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಸೃಷ್ಟಿ

    ಮುಂಬೈ: ವಿಶ್ವದ ಹಲವು ರಾಷ್ಟ್ರಗಳು ಆರ್ಥಿಕ ಹಿಂಜರಿತದ (Economic Recession) ಭೀತಿ ಎದುರಿಸುತ್ತಿದ್ದರೆ ಭಾರತದ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌(Sensex) ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಬರೆದಿದೆ.

    ಗುರುವಾರ ಒಂದೇ ದಿನ 762.0 ಅಂಕ ಏರಿಕೆಯಾಗಿದೆ. ಬುಧವಾರ 61,510.58 ರಲ್ಲಿ ಕೊನೆಯಾಗಿದ್ದರೆ ಇಂದು 62,272.68ರಲ್ಲಿ ವಹಿವಾಟು ಕೊನೆಗೊಳಿಸಿತು. ಈ ಹಿಂದೆ 2021ರ ಅಕ್ಟೋಬರ್ 19ಕ್ಕೆ 62,245ಕ್ಕೆ ಏರಿದ್ದೇ ಇದುವರೆಗಿನ ದಾಖಲೆಯಾಗಿತ್ತು.

    ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ(Nifty) 216 ಅಂಕ ಏರಿಕೆ ಕಂಡಿದೆ. ಬುಧವಾರ 18,267.25 ರಲ್ಲಿ ಕೊನೆಗೊಂಡಿದ್ದರೆ ಇಂದು 18,484.10 ರಲ್ಲಿ ವಹಿವಾಟು ಮುಗಿಸಿದೆ. ಇದನ್ನೂ ಓದಿ: ಮಗಳಿಗೆ ಕಂಪನಿಯಲ್ಲಿ ಇಲ್ಲ ಆಸಕ್ತಿ – ಟಾಟಾಗೆ ಬಿಸ್ಲೆರಿಯನ್ನು ಮಾರಲು ಮುಂದಾದ ರಮೇಶ್ ಚೌಹಾಣ್

    ಏರಿಕೆ ಆಗಿದ್ದು ಯಾಕೆ?
    ಅಮೆರಿಕದ ಕೇಂದ್ರ ಬ್ಯಾಂಕ್‌ ಫೆಡರಲ್‌ ರಿಸರ್ವ್‌(Federal Reserve) ಬಡ್ಡಿ ದರ ಏರಿಕೆಯನ್ನು ತಡ ಮಾಡಬಹುದು ಎಂಬ ತಜ್ಞರ ಸಮಿತಿಯ ಸಲಹೆಯ ವರದಿ ಪ್ರಕಟವಾದ ಬೆನ್ನಲ್ಲೇ ಹೂಡಿಕೆದಾರರು ಹೂಡಿಕೆಯತ್ತ ಆಸಕ್ತಿ ತೋರಿದ ಪರಿಣಾಮ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆಯಾಗಿದೆ.

    ಈ ಕಾರಣದ ಜೊತೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ, ಡಾಲರ್‌ ಮುಂದೆ ರುಪಾಯಿ ಮೌಲ್ಯ ಚೇತರಿಕೆಯಾಗುತ್ತಿರುವುದು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.

    Live Tv
    [brid partner=56869869 player=32851 video=960834 autoplay=true]

  • ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ

    ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ

    ಮುಂಬೈ: ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಷೇರು ಮಾರುಕಟ್ಟೆಯಲ್ಲಿ(Share Market) ರಕ್ತಪಾತವಾಗಿದೆ.

    ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್‌(Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ(NSE) ಸೂಚಂಕ್ಯ ನಿಫ್ಟಿ(Nifty) ಅಂಕಗಳು ಭಾರೀ ಇಳಿಕೆಯಾಗಿದ್ದರಿಂದ ಒಂದೇ ದಿನ ಹೂಡಿಕೆದಾರರು ಸುಮಾರು 7 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ.

    ಶುಕ್ರವಾರ 58,098 ಅಂಕದಲ್ಲಿ  ಕೊನೆಯಾಗಿದ್ದ ಸೆನ್ಸೆಕ್ಸ್‌ ಇಂದು ಆರಂಭದ ಎರಡು ಗಂಟೆಯಲ್ಲಿ 1 ಸಾವಿರ ಅಂಕ ಇಳಿಕೆಯಾಗಿತ್ತು. ಬಳಿಕ ನಿಧನವಾಗಿ ಚೇತರಿಕೆ ಕಂಡಿತು. ಅಂತಿಮವಾಗಿ 953 ಅಂಕ ಇಳಿಕೆಯಾಗಿ ದಿನದ ಕೊನೆಯಲ್ಲಿ 57,145 ಅಂಕಗಳಿಗೆ ವ್ಯವಹಾರವನ್ನು ಕೊನೆಗೊಳಿಸಿತು.

    ಶುಕ್ರವಾರ 17,327 ಅಂಕದಲ್ಲಿ ಕೊನೆಯಾಗಿದ್ದ ನಿಫ್ಟಿ ಇಂದು 311ಅಂಕ ಇಳಿಕೆಯಾಗಿ 17,016 ಅಂಕಗಳಿಗೆ ಕೊನೆಯಾಯಿತು. ಇದನ್ನೂ ಓದಿ: ಯುಪಿಎ ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತ – ಇನ್ಫಿ ನಾರಾಯಣ ಮೂರ್ತಿ

    ರಕ್ತಪಾತಕ್ಕೆ ಕಾರಣ ಏನು?
    ಅಮೆರಿಕದ ಫೆಡರಲ್‌ ರಿಸರ್ವ್‌(Federal Reserve) ಬಡ್ಡಿ ದರವನ್ನು ಏರಿಸಿದ ಪರಿಣಾಮ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪರಿಣಾಮ ವಿಶ್ವಾದ್ಯಂತ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.

    ಡಾಲರ್‌ ಮುಂದೆ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತವಾಗಿದೆ. ಸೋಮವಾರ 81.55ಕ್ಕೆ ಇಳಿಕೆಯಾಗಿದೆ.

    ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ಬಡ್ಡಿದರವನ್ನು ಮತ್ತಷ್ಟು ಏರಿಸುವ ಸಾಧ್ಯತೆಯಿದೆ. ಈ ಬಾರಿ 35 ಬೇಸಿಸ್‌ ಪಾಯಿಂಟ್‌ ಏರಿಸಬಹುದು ಎಂಬ ನಿರೀಕ್ಷೆಯಿದೆ.

    ಜಪಾನ್‌ನಲ್ಲಿ 20 ತಿಂಗಳಿನಲ್ಲೇ ಕಡಿಮೆ ಪ್ರಮಾಣದಲ್ಲಿ ಕೈಗಾರಿಕ ಪ್ರಗತಿ ದಾಖಲಾಗಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ವಿಶ್ವಾದ್ಯಂತ ಆರ್ಥಿಕ ಬೆಳವಣಿಗೆ ಕುಸಿದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಗಳಲ್ಲಿ ರಕ್ತಪಾತ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಪತಂಜಲಿ – 5 ವರ್ಷದಲ್ಲಿ 4 IPO ಲಿಸ್ಟ್‌

    ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಪತಂಜಲಿ – 5 ವರ್ಷದಲ್ಲಿ 4 IPO ಲಿಸ್ಟ್‌

    ಮುಂಬೈ : ಪಂತಜಲಿ(Patanjali) ಸಂಸ್ಥೆಯೂ ಪತಂಜಲಿ ಸಮೂಹ ಸಂಸ್ಥೆಗಳನ್ನು ಆರಂಭಿಸಲು ಸನ್ನದ್ಧವಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ನಾಲ್ಕು ಹೊಸ ಆರಂಭಿಕ ಸಾರ್ವಜನಿಕ ಕೊಡುಗೆ(IPO) ಬಿಡುಗಡೆ ಮಾಡುವ ತಯಾರಿಯಲ್ಲಿದೆ ಎಂದು ಯೋಗ ಗುರು ಬಾಬಾ ರಾಮದೇವ್(Baba Ramdev) ಹೇಳಿದ್ದಾರೆ.

    ಮುಂಬರುವ ಐದು ವರ್ಷದಲ್ಲಿ ಪತಂಜಲಿ ಆಯುರ್ವೇದ್, ಪತಂಜಲಿ ವೆಲ್ನೆಸ್, ಪತಂಜಲಿ ಮೆಡಿಸಿನ್ ಮತ್ತು ಪತಂಜಲಿ ಲೈಫ್‌ಸೈಲ್ ಐಪಿಒಗಳನ್ನು ಕಂಪನಿ ಶೇರು ಮಾರುಕಟ್ಟೆಯಲ್ಲಿ(Share Market) ಪಟ್ಟಿ ಮಾಡಲಿದೆ. ಕನಿಷ್ಠ 5-7 ಕಂಪನಿಗಳನ್ನು ಹೊಂದುವ ಚಿಂತನೆ ಇದ್ದು ಸದ್ಯ ನಾಲ್ಕು ಪಟ್ಟಿ ಮಾಡಲು ತಯಾರಿ ಆರಂಭಗೊಂಡಿದೆ.

    ಪ್ರಸ್ತುತ ಪತಂಜಲಿಯ ಸಮೂಹದ ವಹಿವಾಟು 40,000 ಕೋಟಿ ರೂ ಇದ್ದು, ಮುಂದಿನ ಐದು ವರ್ಷಗಳಲ್ಲಿ ಇದು 1 ಲಕ್ಷ ಕೋಟಿ ಆಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ರಾಮದೇವ್ ಹೇಳಿದ್ದಾರೆ. ಅಲ್ಲದೇ ಈ ಐಪಿಒಗಳೊಂದಿಗೆ 5 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯ ತಲುಪುವ ಗುರಿಯನ್ನು ಕಂಪನಿ ಹೊಂದಿದೆ ಎಂದು ಹೇಳಿದರು‌. ಇದನ್ನೂ ಓದಿ: ಪ್ರತಿಷ್ಠಿತ ಟೂರ್ನಿಗಳಲ್ಲಿ ಟೀಂ ಇಂಡಿಯಾಗೆ ನಿರಾಸೆ – ಕಾಡುತ್ತಿದೆ ಕೂಲ್ ಕ್ಯಾಪ್ಟನ್ ಕೊರತೆ

    BABA RAMDEV

    ಮುಂದಿನ ದಿನಗಳಲ್ಲಿ ಪತಂಜಲಿ 5 ಲಕ್ಷ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಕಂಪನಿಯು 1 ಲಕ್ಷ ಪತಂಜಲಿ ವೆಲ್ನೆಸ್ ಸ್ಟೋರ್‌ಗಳನ್ನು ತೆರೆಯಲು ಯೋಜಿಸಿದೆ. ಪ್ರಸ್ತುತ, ಪತಂಜಲಿ ಫುಡ್ಸ್ ಮಾತ್ರ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಏಕೈಕ ಸಮೂಹ ಕಂಪನಿಯಾಗಿದೆ. ರುಚಿ ಸೋಯಾ(Ruchi Soya) ಎಂದು ಪಟ್ಟಿ ಮಾಡಲಾದ ಈ ಕಂಪನಿಯನ್ನು ಪತಂಜಲಿ ಆಯುರ್ವೇದ್ 2019 ರಲ್ಲಿ ರೆಸಲ್ಯೂಶನ್ ಪ್ರಕ್ರಿಯೆಯ ಅಡಿಯಲ್ಲಿ 4,350 ಕೋಟಿ ರೂ.ಗೆ ಖರೀದಿಸಿತು. ಈ ಕಂಪನಿಯ ನಿವ್ವಳ ಮೌಲ್ಯ ಸುಮಾರು 50,000 ಕೋಟಿ ರೂ. ಆಗಿದ್ದು ಕಂಪನಿಯು ಈಗಾಗಲೇ ಷೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ(BSE) ಮತ್ತು ಎನ್‌ಎಸ್‌ಇಯಲ್ಲಿ(NSE) ಪಟ್ಟಿಮಾಡಿದೆ.

    ಜೂನ್‌ನಲ್ಲಿ, ಖಾದ್ಯ ತೈಲ ಉತ್ಪಾದಕ ರುಚಿ ಸೋಯಾವನ್ನು ಪತಂಜಲಿ ಫುಡ್ಸ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು‌. ಪತಂಜಲಿ ಫುಡ್ಸ್ ಷೇರು ಬೆಲೆ ಗುರುವಾರ ಬಿಎಸ್‌ಇಯಲ್ಲಿ ಶೇ.0.5 ಏರಿಕೆಯಾಗಿ 1,349 ರೂ. ತಲುಪಿದೆ. ಕಳೆದ ಒಂದು ತಿಂಗಳಲ್ಲಿ ಈ ಸ್ಟಾಕ್ ಬೆಲೆಯು ಶೇ.20 ಮತ್ತು ಕಳೆದ ಆರು ತಿಂಗಳಲ್ಲಿ ಶೇ. 30 ರಷ್ಟು ಏರಿಕೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • 5,000 ರೂಪಾಯಿಯಿಂದ ಕೋಟ್ಯಧಿಪತಿಯಾದ ಜುಂಜುನ್‌ವಾಲ ಜೀವನ ರೋಚಕ

    5,000 ರೂಪಾಯಿಯಿಂದ ಕೋಟ್ಯಧಿಪತಿಯಾದ ಜುಂಜುನ್‌ವಾಲ ಜೀವನ ರೋಚಕ

    ನವದೆಹಲಿ: ಅವರು ಷೇರು ಮಾರುಕಟ್ಟೆ ತಜ್ಞ, ಮುಂಬೈನ ದಲಾಲ್ ಸ್ಟ್ರೀಲ್ ಕಿಂಗ್ 5000 ರೂಪಾಯಿಯೊಂದಿಗೆ ಮಾರ್ಕೇಟ್ ಗೆ ಎಂಟ್ರಿಯಾದ ಅವರು ಸದ್ಯ ಹೊಂದಿದ್ದು 11,000 ಕೋಟಿಯ ಪೊರ್ಟ್ ಪೊಲಿಯೊಗಳನ್ನ. ಆಕಾಶ್ ಏರ್ಲೈನ್ಸ್ ಮೂಲಕ ಮತ್ತಷ್ಟು ಎತ್ತರಕ್ಕೆ ಹಾರಲು ಸಿದ್ಧರಾಗಿದ್ದ ಆ ವ್ಯಕ್ತಿಯ ಬಾಳಲಿ ದುರ್ವಿಧಿ ಆಟವಾಡಿದ್ದು ಇಂದು ಇಹಲೋಕ ತ್ಯಜಿಸಿದ್ದಾರೆ. ಜುಂಜುನ್‌ವಾಲ ಅಷ್ಟಕ್ಕೂ ಯಾರು ಅವರು? ಏನಾಯ್ತು? ಅನ್ನೋ ಮಾಹಿತಿ ಇಲ್ಲಿದೆ.

    ಮುಂಬೈ ದಲಾಲ್ ಸ್ಟ್ರೀಟ್ ಕಿಂಗ್ ಅಂತ್ಲೆ ಕರೆಸಿಕೊಳ್ತಿದ್ದ ರಾಕೇಶ್ ಜುಂಜುನ್‌ವಾಲ ಭಾರತದ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಇವರು ಕೈ ಇಟ್ಟ ಷೇರುಗಳೇಲ್ಲ ಜಾಕ್‌ಪಾಟ್ ಹೊಡೆಯುತ್ತಿದ್ದವು. ಹೀಗಾಗೇ ಇವರನ್ನು ಅನುಸರಿಸುತ್ತಿದ್ದ ಜನರ ಸಂಖ್ಯೆ ಅಪಾರ. ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ರಿಕ್ಷಾ ಚಾಲಕನ ಕಾಲರ್ ಎಳೆದಾಡಿ ಕಪಾಳಮೋಕ್ಷ ಮಾಡಿದ್ಲು

    ಎರಡು ಕಿಡ್ನಿ ವೈಫಲ್ಯದಿಂದ ನಿರಂತರ ಡಯಾಲಿಸಸ್‌ಗೆ ಒಳಪಡುತ್ತಿದ್ದ ರಾಕೇಶ್ ಜುಂಜುನ್‌ವಾಲ ಆರೋಗ್ಯದಲ್ಲಿ ಇಂದು ಬೆಳಗ್ಗೆ ಏರುಪೇರು ಕಂಡು ಬಂದಿತ್ತು. ತಕ್ಷಣ ಅವರನ್ನು ಮುಂಬೈ‌ನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಸ್ಪತ್ರೆ ತಲುಪುವ ವೇಳೆಗೆ ನಿಧನ ಹೊಂದಿದ್ದರು ಎಂದು ವೈದ್ಯರು ಖಚಿತಪಡಿಸಿದ್ದಾರೆ.

    ಜುಂಜುನ್‌ವಾಲ ಜೀವನ ರೋಚಕ: ವ್ಯಾಪಾರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಹಾಗೂ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡ ರಾಕೇಶ್ ಜುಂಜುನ್‌ವಾಲ ಜೀವನ ಆರಂಭವಾಗಿದ್ದು 5,000 ರೂಪಾಯಿಗಳಿಂದ. 1985 ರಲ್ಲಿ 5,000 ರೂಪಾಯಿಗಳೊಂದಿಗೆ ಅವರು ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದರು. ಅಲ್ಲಿಂದ ಅವರು ಬದುಕೇ ಬದಲಾಯ್ತು. ಹೂಡಿಕೆ ಮಾಡಿದ ಷೇರುಗಳೇಲ್ಲ ಸಾವಿರ, ಲಕ್ಷ, ಕೋಟಿಗಳಲ್ಲಿ ಲಾಭ ಕೊಡ್ತಾ ಹೋದವು. ಅಲ್ಲಿಂದ ಅವರು ದೇಶದ ಅತಿದೊಡ್ಡ ಟ್ರೇಡರ್ ಆಗಿ ಬದಲಾದರು.

    ಇತ್ತಿಚೆಗೆ ಟೈಟಾನ್ ಕಂಪನಿಯಲ್ಲಿ ಇವರು ಹೂಡಿಕೆ ಮಾಡುತ್ತಿದ್ದಂತೆ ಬಹಳ ದೊಡ್ಡ ಪ್ರಮಾಣದ ಹೂಡಿಕೆ ಹರಿದು ಬಂದಿತ್ತು. ರಾಕೇಶ್ ಜುಂಜುನ್‌ವಾಲ ಕಂಪನಿಯೊಂದರ ಬಗ್ಗೆ ಮಾತನಾಡುತ್ತಿದ್ದಾರೆ ಅಂದ್ರೆ ಅಲ್ಲೊಂದು ಮ್ಯಾಜಿಕ್ ಆಗಲಿದೆ ಎನ್ನುವುದು ಅವರ ಅನುಯಾಯಿಗಳಾಗಿ ಅದಾಗಲೇ ಗೊತ್ತಾಗುತ್ತಿತ್ತು. ಇದನ್ನೂ ಓದಿ: ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫೋಟೋ ವಿವಾದ – ಪಾಲಿಕೆ ಕಾರ್ಯಕ್ಕೆ SDPI ವಿರೋಧ

    ಆಕಾಶ್ ಏರ್ಲೈನ್ಸ್ ಆರಂಭಿಸಿದ್ದ ಜುಂಜುನ್‌ವಾಲ: ಷೇರು ಮಾರುಕಟ್ಟೆ ಹೂಡಿಕೆದಾರನಾಗಿದ್ದ ರಾಕೇಶ್ ಜುಂಜುನ್‌ವಾಲ ಅವರು ಇತ್ತಿಚೆಗೆ ಆಕಾಶ್ ಹೆಸರಿನಲ್ಲಿ ಹೊಸ ಏರ್ಲೈನ್ಸ್ ಆರಂಭ ಮಾಡಿದ್ದರು. ಅತ್ಯುತ್ತಮ ಸೇವೆ ಕೊಡುವ ಇರಾದೆ ಹೊಂದಿದ್ದ ಅವರು ಅದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದರು.

    ಜುಂಜುನ್‌ವಾಲ ನಿಧನಕ್ಕೆ ಮೋದಿ ಸಂತಾಪ: ಇನ್ನು ರಾಕೇಶ್ ಜುಂಜುನ್‌ವಾಲ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಜೋತಿರಾಧಿತ್ಯ ಸಿಂಧಿಯ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

    ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ಅವರು, ಜುಂಜುನ್‌ವಾಲ ಅವರು ಅದಮ್ಯ ಚೇತನ ವ್ಯಕ್ತಿ. ಅವರ ಪೂರ್ಣ ಬದುಕು ವಿನೋದ ಹಾಗೂ ಗಾಂಭೀರ್ಯದಿಂದ ಕೂಡಿದೆ. ಹಣಕಾಸು ಕ್ಷೇತ್ರದಲ್ಲಿ ಅಳಿಸಲಾಗದ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ಬೇಸರವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಹಾಗೂ ಹಿತೈಷಿಗಳಿಗೆ ನನ್ನ ಸಂತಾಪಗಳು ʻಓಂ ಶಾಂತಿʼ ಎಂದು ಸಂತಾಪ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶೇ.8.62 ಡಿಸ್ಕೌಂಟ್‌ – ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

    ಶೇ.8.62 ಡಿಸ್ಕೌಂಟ್‌ – ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

    ಮುಂಬೈ: ದೇಶದ ಅತಿ ದೊಡ್ಡ ವಿಮಾ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮದ(ಎಲ್‌ಐಸಿ) ಷೇರು ಪೇಟೆಯಲ್ಲಿ ಲಿಸ್ಟಿಂಗ್‌ ಆಗಿದೆ.

    ಬಾಂಬೆ ಷೇರು ಮಾರಕಟ್ಟೆಯಲ್ಲಿ ಶೇ.8.62 ರಷ್ಟು ರಿಯಾಯಿತಿ ದರದೊಂದಿಗೆ 867.2 ರೂ. ಬೆಲೆಯಲ್ಲಿ ಲಿಸ್ಟ್‌ ಆಗಿದೆ. ಇಂದು ಲಿಸ್ಟ್‌ ಆಗುವ ಮೂಲಕ ಹೂಡಿಕೆದಾರರು ಷೇರುಗಳನ್ನು ಖರೀದಿ ಮಾಡಬಹುದು.

    ಆರಂಭದಲ್ಲಿ ಎಲ್‌ಐಸಿ ಷೇರುಗಳು ಭಾರೀ ಏರಿಕೆ ಆಗಲಿದೆ ಎಂದು ಗ್ರೇ ಮಾರ್ಕೆಟ್‌ ಸುಳಿವು ನೀಡಿತ್ತು. ಆದರೆ ಕಳೆದ ಒಂದು ವಾರದಿಂದ ಗ್ರೇ ಮಾರ್ಕೆಟ್‌ನಲ್ಲಿ ಎಲ್‌ಐಸಿ ಷೇರುಗಳ ಬೇಡಿಕೆ ಕುಸಿತ ಕಂಡಿದ್ದರಿಂದ ಈಗ ಕಡಿಮೆ ಬೆಲೆಯಲ್ಲಿ ಷೇರು ಲಿಸ್ಟ್‌ ಆಗಿದೆ. ಇಂದು ಮಧ್ಯಾಹ್ನದ ವೇಳೆಗೆ 890 ರೂ. ಬೆಲೆಯಲ್ಲಿ ಎಲ್‌ಐಸಿ ಷೇರು ಮಾರಾಟವಾಗುತ್ತಿದೆ. ಇದನ್ನೂ ಓದಿ: ಸಂಕಷ್ಟದಲ್ಲಿರುವ ಲಂಕಾಕ್ಕೆ ಭಾರತದಿಂದ ಪೆಟ್ರೋಲ್

    ಕೇಂದ್ರ ಸರ್ಕಾರ ಮೇ 4 ರಂದು ಎಲ್‌ಐಸಿ ಷೇರನ್ನು ಬಿಡುಗಡೆ ಮಾಡಿತ್ತು. ಐಪಿಒ ವೇಳೆ ಒಂದು ಷೇರಿಗೆ 949 ರೂ. ದರವನ್ನು ನಿಗದಿ ಮಾಡಲಾಗಿತ್ತು. ಈ ಸರ್ಕಾರ ಪಾಲಿಸಿದಾರರಿಗೆ ಮತ್ತು ರಿಟೇಲ್‌ ಹೂಡಿಕೆದಾರರಿಗೆ ರಿಯಾಯಿತಿ ದರವನ್ನು ಪ್ರಕಟಿಸಿತ್ತು. ಪಾಲಿಸಿದಾರರು 889 ರೂ. ರಿಟೇಲ್‌ ಹೂಡಿಕೆದಾರರು 904 ರೂ. ರಿಯಾಯಿತಿ ದರದಲ್ಲಿ ಷೇರನ್ನು ಖರೀದಿ ಮಾಡಿದ್ದರು. ಐಪಿಒ ಮೂಲಕ 20,557 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.

    ಅಸ್ಥಿರ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ಎಲ್ಐಸಿ ಕಳೆದ ತಿಂಗಳು ತನ್ನ ಐಪಿಒ ಗಾತ್ರವನ್ನು ಶೇ. 5 ರಿಂದ ಶೇಕಡ 3.5 ಕ್ಕೆ ಇಳಿಸಿತ್ತು. ಎಲ್‌ಐಸಿಯ ಐಪಿಒ ಗಾತ್ರವನ್ನು ಇಳಿಕೆ ಮಾಡಿದರೂ ಇದು ದೇಶದ ಅತೀ ದೊಡ್ಡ ಐಪಿಒ ಆಗಿ ದಾಖಲೆ ಬರೆದಿದೆ.

    ಕಳೆದ ನವೆಂಬರ್‌ನಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಪೇಟಿಎಂ 18,300 ಕೋಟಿ ರೂ. ಸಂಗ್ರಹಿಸಿದ್ದೇ ಈವರೆಗೆನ ದೇಶದ ದೊಡ್ಡ ಐಪಿಒ ಆಗಿದೆ. ಕೋಲ್‌ ಇಂಡಿಯಾ 2010 ರಲ್ಲಿ 15,500 ಕೋಟಿ ಮತ್ತು ರಿಲಯನ್ಸ್‌ ಪವರ್‌ 2008ರಲ್ಲಿ 11,700 ಕೋಟಿ ರೂ. ಐಪಿಒ ಮೂಲಕ ಸಂಗ್ರಹಿಸಿತ್ತು.

    ಕೇಂದ್ರ ಸರ್ಕಾರ 2021-22ರ ಹಣಕಾಸು ವರ್ಷದಲ್ಲಿ ಎಲ್‌ಐಸಿಯ 31.6 ಕೋಟಿ ಅಥವಾ ಶೇ.5 ರಷ್ಟು ಪಾಲನ್ನು ಮಾರಾಟ ಮಾಡಿ 60 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಕೊರೊನಾ ಕಾರಣದಿಂದ ಇದು ಮುಂದೂಡಿಕೆಯಾಗಿತ್ತು.

  • ಮೇ 4 ರಿಂದ ಎಲ್‌ಐಸಿ ಐಪಿಒ?

    ಮೇ 4 ರಿಂದ ಎಲ್‌ಐಸಿ ಐಪಿಒ?

    ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) ಮೇ 4ರಿಂದ 9ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

    ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಎಲ್‌ಐಸಿಯಲ್ಲಿರುವ ಶೇ.3.5 ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸಕಾರ ಮುಂದಾಗಿದೆ. ಮಾರಾಟದಿಂದ ಬೊಕ್ಕಸಕ್ಕೆ 21 ಸಾವಿರ ಕೋಟಿ ರೂ. ಬರಲಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯವು 6 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ.

    ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್‌ಐಸಿಯ ಶೇ. 5-7ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ 50 ರಿಂದ 65 ಸಾವಿರ ಕೋಟಿ ರೂ. ಸಂಗ್ರಹಿಸಲು ಮುಂದಾಗಿತ್ತು. ಆದರೆ ರಷ್ಯಾ–ಉಕ್ರೇನ್‌ ಯುದ್ಧ ಮತ್ತು ಹೂಡಿಕೆದಾರರಿಂದ ಹೆಚ್ಚಿನ ಬೇಡಿಕೆ ಇಲ್ಲದ ಹಿನ್ನೆಲೆಯಲ್ಲಿ ಐಪಿಒ ಬಿಡುಗಡೆ ಮುಂದೂಡಿಕೆಯಾಗಿತ್ತು. ಇದನ್ನೂ ಓದಿ: ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್

    ಎಲ್‌ಐಸಿಯ ಐಪಿಒ ಗಾತ್ರವನ್ನು ಇಳಿಕೆ ಮಾಡಿದರೂ ಇದು ದೇಶದ ಅತೀ ದೊಡ್ಡ ಐಪಿಒ ಆಗಿ ದಾಖಲೆ ಬರೆಯಲಿದೆ. ಕಳೆದ ನವೆಂಬರ್‌ನಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಪೇಟಿಎಂ 18,300 ಕೋಟಿ ರೂ. ಸಂಗ್ರಹಿಸಿದ್ದೇ ಈವರೆಗೆನ ದೇಶದ ದೊಡ್ಡ ಐಪಿಒ ಆಗಿದೆ. ಕೋಲ್‌ ಇಂಡಿಯಾ 2010 ರಲ್ಲಿ 15,500 ಕೋಟಿ ಮತ್ತು ರಿಲಯನ್ಸ್‌ ಪವರ್‌ 2008ರಲ್ಲಿ 11,700 ಕೋಟಿ ರೂ. ಐಪಿಒ ಮೂಲಕ ಸಂಗ್ರಹಿಸಿತ್ತು.

    ಕೇಂದ್ರ ಸರ್ಕಾರ 2021-22ರ ಹಣಕಾಸು ವರ್ಷದಲ್ಲಿ ಎಲ್‌ಐಸಿಯ 31.6 ಕೋಟಿ ಅಥವಾ ಶೇ.5 ರಷ್ಟು ಪಾಲನ್ನು ಮಾರಾಟ ಮಾಡಿ 60 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಕೊರೊನಾ ಕಾರಣದಿಂದ ಇದು ಮುಂದೂಡಿಕೆಯಾಗಿತ್ತು.

  • ಹೂಡಿಕೆದಾರರಿಗೆ ಇಷ್ಟವಾಯ್ತು ಬಜೆಟ್ – ಭಾರೀ ಏರಿಕೆಯೊಂದಿಗೆ ಸೆನ್ಸೆಕ್ಸ್ ದಾಖಲೆ

    ಹೂಡಿಕೆದಾರರಿಗೆ ಇಷ್ಟವಾಯ್ತು ಬಜೆಟ್ – ಭಾರೀ ಏರಿಕೆಯೊಂದಿಗೆ ಸೆನ್ಸೆಕ್ಸ್ ದಾಖಲೆ

    ಮುಂಬೈ: ಕೇಂದ್ರ ಸರ್ಕಾರದ ಬಜೆಟ್ ಅಂಶಗಳು ಹೂಡಿಕೆದಾರರಿಗೆ ಇಷ್ಟವಾಗಿದ್ದು ಒಂದೇ ದಿನದಲ್ಲಿ ಭಾರೀ ಏರಿಕೆ ಕಂಡಿದೆ. ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2,315 ಅಂಕ ಏರಿಕೆಯಾಗಿದ್ದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ 646 ಅಂಕ ಏರಿಕೆಯಾಗಿದೆ.

    ಹಲವು ಮಾನದಂಡಗಳಿಂದ ಸರ್ಕಾರ ಮಂಡಿಸಿದ ಬಜೆಟ್ ಚೆನ್ನಾಗಿದೆಯೋ ಇಲ್ಲವೋ ಎಂಬುದನ್ನು ವಿಶ್ಲೇಷಿಸಲಾಗುತ್ತದೆ. ಈ ಮಾನದಂಡಗಳ ಪೈಕಿ ಷೇರು ಮಾರುಕಟ್ಟೆಯೂ ಒಂದು ಮಾನದಂಡವಾಗಿ ಪರಿಗಣಿಸಲಾಗುತ್ತದೆ.

    50 ಸಾವಿರದ ಗಡಿ ದಾಟಿದ್ದ ಸೆನ್ಸೆಕ್ಸ್ ಕೆಲ ದಿನಗಳಿಂದ ಕುಸಿತ ಕಾಣುತ್ತಿತ್ತು. ಆದರೆ ಇಂದು ನಿರ್ಮಲಾ ಸೀತರಾಮನ್ ಮಂಡಿಸಿದ್ದ ಬಜೆಟ್ ಹೂಡಿಕೆದಾರರಿಗೆ ಇಷ್ಟವಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ.

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸೆನ್ಸೆಕ್ಸ್ 400 ಅಂಕ ಏರಿಕೆ ಕಂಡಿತು. ಬಳಿಕ ಮಧ್ಯಾಹ್ನದ ಹೊತ್ತಿಗೆ 1,500 ಅಂಕಕ್ಕೆ ಜಿಗಿಯಿತು. ಹೀಗೆ ನಾಗಾಲೋಟವನ್ನು ಮುಂದುವರಿಸಿದ್ದ ಸೆನ್ಸೆಕ್ಸ್ ಒಟ್ಟು 2,315 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿತು.

    ಈ ಮೂಲಕ ಕಳೆದ 10 ವರ್ಷಗಳ ಬಜೆಟ್ ದಿನಗಳಿಗೆ ಹೋಲಿಸಿದರೆ ಅತೀ ಹೆಚ್ಚು ಅಂಕ ಏರಿಕೆಯಾಗುವ ಮೂಲಕ ದಾಖಲೆ ಬರೆದಿದೆ. ಕಳೆದ ವರ್ಷ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬಳಿಕ ಸೆನ್ಸೆಕ್ಸ್ 700 ಅಂಕ ಕುಸಿದಿತ್ತು. ನಿಫ್ಟಿ 647 ಅಂಕಗಳಷ್ಟು ಅಂದರೆ ಶೇ.4.74ರಷ್ಟು ಏರಿಕೆ ಕಂಡು 14,281ಕ್ಕೆ ತಲುಪುವ ಮೂಲಕ ಬಜೆಟ್ ದಿನದ ದಾಖಲೆ ಬರೆದಿದೆ.

    ಪ್ರಮುಖವಾಗಿ ಬ್ಯಾಂಕಿಂಗ್ ಸೆಕ್ಟರ್‍ನ ಶೇರುಗಳಲ್ಲಿ ಏರಿಕೆ ಕಂಡಿದ್ದು, ಬಜಾಜ್ ಫಿನ್‍ಸರ್ವ್, ಇಂಡಸ್‍ಲ್ಯಾಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‍ಬಿಐ, ಎಲ್ ಆ್ಯಂಡ್ ಟಿ ಹಾಗೂ ಎಚ್‍ಡಿಎಫ್‍ಸಿ ಶೇರುಗಳಲ್ಲಿ ಶೇ.15.16ರಷ್ಟು ಭಾರೀ ಪ್ರಮಾಣದ ಬೆಳವಣಿಗೆ ಕಂಡಿದೆ.

    ಕಳೆದ 10 ವರ್ಷಗಳಲ್ಲಿ ಬಜೆಟ್ ಸಂದರ್ಭದಲ್ಲಿ ಶೇರು ಮಾರುಕಟ್ಟೆಯಲ್ಲಿ ಏರಿಕೆ ಕಾಣುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. ಅದರಲ್ಲೂ ಈ ಬಾರಿ ಬಾನೆತ್ತರಕ್ಕೆ ಜಿಗಿದಿದ್ದು, ಬಜೆಟ್ ದಿನ ಹಿಂದೆಂದಿಗಿಂತಲೂ ಅತೀ ಹೆಚ್ಚು ಏರಿಕೆ ಕಂಡಿದೆ. ಈ ಮೂಲಕ ಹೂಡಿಕೆದಾರರಲ್ಲಿ ಸಂತಸ ಮೂಡಿಸಿ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

  • ಅಮೆರಿಕದಲ್ಲಿ ಯಾರೂ ಮಾಡದ ಸಾಧನಗೈದ ಆಪಲ್‌ ಕಂಪನಿ

    ಅಮೆರಿಕದಲ್ಲಿ ಯಾರೂ ಮಾಡದ ಸಾಧನಗೈದ ಆಪಲ್‌ ಕಂಪನಿ

    ಕ್ಯಾಲಿಫೋರ್ನಿಯಾ: ಐಫೋನ್‌ ತಯಾರಕಾ, ಜಾಗತಿಕ ಐಟಿ ಕಂಪನಿ ಆಪಲ್‌ 1.5 ಟ್ರಿಲಿಯನ್‌(1.5 ಲಕ್ಷ ಕೋಟಿ) ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿದ ಅಮೆರಿಕದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಆಪ್‌ ಸ್ಟೋರ್‌ ಮಾರಾಟ, ಎಆರ್‌ಎಂ ಚಿಪ್‌ ಇರುವ ಮ್ಯಾಕ್‌ ಮತ್ತು 5ಜಿ ಐಫೋನ್‌ನಿಂದಾಗಿ ಆಪಲ್‌ ಷೇರು ಮೌಲ್ಯ ಏರಿಕೆಯಾಗಿದೆ. ಆಪಲ್‌ ಒಂದು ಷೇರಿನ ಬೆಲೆ 352 ಡಾಲರ್‌(26,700 ರೂ.) ಇರುವ ಕಾರಣ ಆಪಲ್‌ ಕಂಪನಿಯ ಮೌಲ್ಯ 1.53 ಟ್ರಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ.

    ಆಪಲ್‌ ಮೌಲ್ಯ ಪ್ರತಿ ವರ್ಷವೂ ಏರಿಕೆ ಆಗುತ್ತಿದ್ದು, ಇದೇ ರೀತಿ ಬೆಳವಣಿಗೆ ಸಾಧಿಸುತ್ತಾ ಹೋದರೆ ಮುಂದಿನ 4 ವರ್ಷದ ಒಳಗಡೆ 2 ಟ್ರಿಲಿಯನ್‌ ‌( 2 ಲಕ್ಷ ಕೋಟಿ)ಡಾಲರ್ನ್‌ ತಲುಪಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

    2018ರಲ್ಲಿ 1 ಟ್ರಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಅಮೆರಿಕದ ಕಂಪನಿ ಎಂಬ ಸಾಧನೆ ನಿರ್ಮಿಸಿತ್ತು.

    ಆಪಲ್‌ ವೇರೆಬಲ್‌ ಬಿಸಿನೆಸ್‌ನಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿದೆ. ಏರ್‌ಪಾಡ್‌ ಮತ್ತು ವಾಚ್‌ 60 ಶತಕೋಟಿ ಡಾಲರ್‌ ಬೆಳವಣಿಗೆ ಸಾಧಿಸಿದರೆ ಮುಂದಿನ 4 ವರ್ಷದಲ್ಲಿ ಸೇವಾ ಬಿಸಿನೆಸ್‌ 100 ಶತಕೋಟಿ ಡಾಲರ್‌ ತಲುಪಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಒಂದು ಕಡೆ ಕಂಪನಿಯ ಮೌಲ್ಯ ಹೆಚ್ಚಾಗುತ್ತಿದ್ದರೂ ಇನ್ನೊಂದು ಕಡೆಯಲ್ಲಿ ಆಪಲ್‌ ತನ್ನ ಷೇರನ್ನು ಖರೀದಿ ಮಾಡಬಹುದು ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಐಫೋನ್‌ ಮಾರುಕಟ್ಟೆ ಕುಸಿದರೂ ಆಪಲ್‌ ಕಂಪನಿಯ ಬೆಳವಣಿಗೆಗೆ ಯಾವುದೇ ಸಮಸ್ಯೆ ಆಗಲಿಲ್ಲ. ಈ ವರ್ಷ ಒಟ್ಟು ಶೇ.17ರಷ್ಟು ಪ್ರಗತಿ ಸಾಧಿಸಿದೆ. ಇಲ್ಲಿಯವರೆಗಿನ ಅತ್ಯುತ್ತಮ ಸಾಧನೆ ಇದಾಗಿದ್ದು, 13.3 ಶತಕೋಟಿ ಡಾಲರ್‌ ಆದಾಯವನ್ನು ಆಪಲ್‌ ಕಂಪನಿ ಗಳಿಸಿದೆ.

    ಆಪ್‌ ಸ್ಟೋರ್‌, ಆಪಲ್‌ ಮ್ಯೂಸಿಕ್‌, ವಿಡಿಯೋ, ಕ್ಲೌಡ್‌ ಸರ್ವಿಸ್‌, ಆಪ್‌ ಸ್ಟೋರ್‌ ಆಡ್‌ ಬಿಸಿನೆಸ್‌, ಆಪಲ್‌ ಕೇರ್‌, ಆಪಲ್‌ ಟಿವಿ ಪ್ಲಸ್‌, ಆಪಲ್‌ ನ್ಯೂಸ್‌ ಪ್ಲಸ್‌, ಆಪಲ್‌ ಕಾರ್ಡ್‌ನಂತ ಸೇವಾ ವಲಯದಿಂದ ಆಪಲ್‌ ಹೆಚ್ಚು ಆದಾಯಗಳಿಸಿದೆ.

    1976ರಲ್ಲಿ ಆಪಲ್‌ ಕಂಪನಿಯನ್ನು ಸ್ವೀವ್‌ ಜಾಬ್ಸ್‌ ಸ್ಥಾಪಿಸಿದ್ದರು. ಸದ್ಯ ಟಿಮ್‌ ಕುಕ್‌ ಕಂಪನಿಯ ಸಿಇಒ ಆಗಿ ಕಾರ್ಯವಿರ್ವಹಿಸುತ್ತಿದ್ದಾರೆ.

  • ಒಂದೇ ದಿನ 3 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು- ಏಷ್ಯನ್ ಪೇಂಟ್ಸ್, ಬಜಾಜ್ ಆಟೋ, ಮಾರುತಿಗೆ ಭಾರೀ ಲಾಭ

    ಒಂದೇ ದಿನ 3 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು- ಏಷ್ಯನ್ ಪೇಂಟ್ಸ್, ಬಜಾಜ್ ಆಟೋ, ಮಾರುತಿಗೆ ಭಾರೀ ಲಾಭ

    – ಪ್ರಧಾನಿ ಮೋದಿ ಆಲೋಚನೆಯಿಂದ ದೇಶ ಆರ್ಥಿಕತೆ ನಾಶ: ರಾಹುಲ್
    – ಮಾರುಕಟ್ಟೆ ತೆರೆಯುತ್ತಿದ್ದಂತೆ ಸೆನ್ಸೆಕ್ಸ್ 1,459 ಪಾಯಿಂಟ್ ಕುಸಿತ

    ಮುಂಬೈ: ಕೊರೊನಾ ವೈರಸ್ ಹಾಗೂ ಯೆಸ್ ಬ್ಯಾಂಕಿನ ಬಿಕ್ಕಟ್ಟಿನಿಂದ ಭಯಭೀತರಾದ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದಾಗಿ ಬಿಎಸ್‍ಇ ಸೆನ್ಸೆಕ್ಸ್ ಶುಕ್ರವಾರ 893.99 ಪಾಯಿಂಟ್‍ಗಳ ಕುಸಿತ ಕಂಡು 37,576.62 ಕ್ಕೆ ತಲುಪಿದೆ. ಅಂತೆಯೇ, ಎನ್‍ಎಸ್‍ಇ ನಿಫ್ಟಿ 368.15 ಪಾಯಿಂಟ್‍ಗಳ ಕುಸಿತದಿಂದ 11,000 ಪಾಯಿಂಟ್‍ಗಳ ಪಾತಾಳಕ್ಕೆ ತಲುಪಿದೆ.

    ಬ್ಯಾಂಕ್ ಷೇರುಗಳು ಬಿಎಸ್‍ಇಯಲ್ಲಿ ಶೇ.56 ಮತ್ತು ಎನ್‍ಎಸ್‍ಇಯಲ್ಲಿ ಶೇ.74 ಕುಸಿತ ಕಂಡಿವೆ. ಟಾಟಾ ಸ್ಟೀಲ್ ಷೇರುಗಳು ಬಿಎಸ್‍ಇಯಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದವು. ಬಜಾಜ್ ಆಟೋ, ಮಾರುತಿ ಮತ್ತು ಏಷ್ಯನ್ ಪೇಂಟ್ಸ್ ಮಾತ್ರ ಭಾರೀ ಲಾಭ ಗಳಿಸಿವೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಒಂದೇ ದಿನಕ್ಕೆ ಚಿನ್ನದ ಬೆಲೆ 990 ರೂ. ಹೆಚ್ಚಳ

    ಮಾರುಕಟ್ಟೆ ತೆರೆದ ಕೂಡಲೇ ಸೆನ್ಸೆಕ್ಸ್ 1,459 ಪಾಯಿಂಟ್ ಕುಸಿದು, 37,011.09ಕ್ಕೆ ತಲುಪಿತ್ತು. ಬಿಎಸ್‍ಇಯಲ್ಲಿ ಗುರುವಾರ ದಿನದಂತ್ಯಕ್ಕೆ 37,524 ಪಾಂಯಿಂಟ್ಸ್ ಇತ್ತು. ಆದರೆ ಇಂದಿನ ದಿನದಂತ್ಯಕ್ಕೆ 893.99 ಪಾಯಿಂಟ್ಸ್ ಕಳೆದುಕೊಂಡು, 37,576.62 ಪಾಯಿಂಟ್ಸ್ ಗೆ ತಲುಪಿದೆ.

    ಎನ್‍ಎಸ್‍ಇ ಇಂದು 279.55 ಪಾಯಿಂಟ್ಸ್ ಕುಸಿತ ಕಂಡಿದೆ. ಗುರುವಾರ ದಿನದಂತ್ಯಕ್ಕೆ 10,979 ಪಾಂಯಿಂಟ್ಸ್ ಹೊಂದಿದ್ದ ನಿಫ್ಟಿ ಇಂದಿನ ದಿನದ ಅಂತ್ಯಕ್ಕೆ 10,989.45 ಪಾಯಿಂಟ್ಸ್ ತಲುಪಿದೆ.

    ಎನ್‍ಎಸ್‍ಇಯಲ್ಲಿ ಬ್ಯಾಂಕ್ ಷೇರುಗಳು ಶೇ.76 ರಷ್ಟು ಕುಸಿದಿವೆ. ಎಸ್‍ಬಿಐ ಷೇರುಗಳು ಶೇ.12 ಕಡಿಮೆ ಆಗಿದೆ. ಗುರುವಾರ, ಯೆಸ್ ಬ್ಯಾಂಕ್ ಅನ್ನು ಉಳಿಸಲು ಸರ್ಕಾರ ಎಸ್‍ಬಿಐಗೆ ಫಾರ್ವರ್ಡ್ ಮಾಡಬಹುದು ಎಂಬ ವರದಿಯಿತ್ತು. ಈ ಕಾರಣದಿಂದಾಗಿ ಎಸ್‍ಬಿಐ ಷೇರುಗಳು ಕುಸಿತ ಕಂಡಿವೆ.

    ಕೊರೊನಾ ವೈರಸ್ ಸೋಂಕು ಹೆಚ್ಚುತ್ತಲೇ ಇದೆ. ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 1 ಲಕ್ಷವನ್ನು ತಲುಪುತ್ತಿದೆ ಹಾಗೂ 3,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪರಿಣಾಮ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ ನಿರಂತರವಾಗಿ ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಕಳೆದ 14 ವಹಿವಾಟು ಅವಧಿಯಲ್ಲಿ ಎಫ್‍ಐಐಗಳು ಭಾರತೀಯ ಮಾರುಕಟ್ಟೆಯಿಂದ 18,343 ಕೋಟಿ ರೂ. ಹಿಂಪಡೆದಿದ್ದಾರೆ.

    ಅಮೆರಿಕದ ಷೇರು ಮಾರುಕಟ್ಟೆ ಡೌ ಜೋನ್ಸ್ ಶೇ.3.58 ಮತ್ತು ನಾಸ್ಡಾಕ್ ಶೇ.3.10 ಇಳಿದಿದೆ. ನಿಕ್ಕಿ ಶೇ.2.94 ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆ ಶೇ.2.44 ಕುಸಿದಿದೆ.

    ಮೋದಿಯಿಂದ ನಾಶ:
    ಯೆಸ್ ಬ್ಯಾಂಕ್‍ನಲ್ಲಿನ ಬಿಕ್ಕಟ್ಟಿನ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಹನೆಯನ್ನು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದೆ. ಜೊತೆಗೆ ರಾಹುಲ್ ಗಾಂಧಿ ಅವರು, ಪ್ರಧಾನಿ ಮೋದಿ ಮತ್ತು ಅವರ ಆಲೋಚನೆಗಳು ಭಾರತದ ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.