Tag: Shanvi Srivatsav

  • ಶಾನ್ವಿ ಶ್ರೀವಾತ್ಸವ್ ನಟನೆಯ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ ಕಿಚ್ಚ ಸುದೀಪ್

    ಶಾನ್ವಿ ಶ್ರೀವಾತ್ಸವ್ ನಟನೆಯ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ ಕಿಚ್ಚ ಸುದೀಪ್

    ಶಾನ್ವಿ ಶ್ರೀವಾತ್ಸವ್ (Shanvi Srivatsav)  ಅಭಿನಯದ ಡಾರ್ಕ್ ಕಾಮಿಡಿ ಆಕ್ಷನ್ ಚಿತ್ರ ‘ಬ್ಯಾಂಗ್’  ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಆಗಸ್ಟ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಇದೀಗ ಚಿತ್ರಕ್ಕೆ ಸ್ಟಾರ್ ಸ್ಪರ್ಶ ಸಿಕ್ಕಿದೆ. ‘ಬ್ಯಾಂಗ್’ (Bang)  ಚಿತ್ರಕ್ಕೆ ಕಿಚ್ಚ ಸುದೀಪ್ (Sudeep) ಹಿನ್ನೆಲೆ ಧ್ವನಿ ನೀಡಿದ್ದು ಚಿತ್ರತಂಡದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.

    ಈ ಕುರಿತು ಮಾತನಾಡಿರುವ ನಿರ್ದೇಶಕ ಗಣೇಶ್ ಪರಶುರಾಮ್ (Ganesh Parasuram), ‘ನಾವೆಲ್ಲರೂ ಸುದೀಪ್ ಅವರ ಚಿತ್ರಗಳನ್ನು ನೋಡಿ ಬೆಳೆದವರು. ಮೊದಲ ದಿನ ಮೊದಲ ಪ್ರದರ್ಶನದಲ್ಲೇ ಅವರ ಚಿತ್ರ ನೋಡಿ ಪುಳಕಿತರಾದವರು. ಅವರು ನಮ್ಮ ಚಿತ್ರಕ್ಕೆ ಧ್ವನಿ ನೀಡಿದಾಗ, ಅವರನ್ನು ಭೇಟಿಯಾಗಿ ಕೈಕುಲುಕಿದಾಗ, ನಮ್ಮ ಬಹುವರ್ಷಗಳ ಕನಸು ನನಸಾದಂತಾಯಿತು. ಚಿತ್ರದಲ್ಲಿನ ಸುದೀಪ್ ಅವರ ಉಪಸ್ಥಿತಿಯನ್ನು ಅವರ ಅಭಿಮಾನಿಗಳು ಸಹ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ಈ ಕನಸನ್ನು ನನಸು ಮಾಡಿದ ಶಾನ್ವಿ ಶ್ರೀವಾತ್ಸವ್ ಅವರಿಗೆ ಮತ್ತು ಒಂದು ಹೊಸ ತಂಡದ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಿಕ್ಕೆ ಸುದೀಪ್ ಅವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ. ಇದನ್ನೂ ಓದಿ:‘ನಾಗರಹಾವು’ ಚಿತ್ರದ ನಂತರ ಮತ್ತೆ ಒಂದಾಗಲಿದ್ದಾರೆ ದಿಗಂತ್-ರಮ್ಯಾ

    ಪೂಜಾ ವಸಂತ್ ಕುಮಾರ್ ನಿರ್ಮಾಣದ ‘ಬ್ಯಾಂಗ್’  ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಜೊತೆಗೆ ರಘು ದೀಕ್ಷಿತ್, ಸಾತ್ವಿಕಾ, ರಿತ್ವಿಕ್ ಮುರಳೀಧರ್, ಸುನಿಲ್ ಗುಜ್ಜಾರ್, ನಾಟ್ಯರಂಗ ಮುಂತಾದವರು ಅಭಿನಯಿಸಿದ್ದು, ರಿತ್ವಿಕ್ ಮುರಳೀಧರ್ ಅವರ ಸಂಗೀತ ಮತ್ತು ಉದಯ್ ಲೀಲಾ ಅವರ ಛಾಯಾಗ್ರಹಣವಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಆನಂದ್ ಆಡಿಯೋ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಎರಡೂ ಹಾಡುಗಳು ಜನಮೆಚ್ಚುಗೆಗೆ ಪಾತ್ರವಾಗಿವೆ.

    ‘ಬ್ಯಾಂಗ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದಿದ್ದು, ಜುಲೈ 29ರ ಶನಿವಾರ ಸಿನಿಮಾದ  ಟ್ರೇಲರ್ ಬಿಡುಗಡೆಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಳ್ಳಿಗರ ನೆರವಿಗೆ ನಿಂತ ಶಾನ್ವಿ

    ಹಳ್ಳಿಗರ ನೆರವಿಗೆ ನಿಂತ ಶಾನ್ವಿ

    ಬೆಂಗಳೂರು: ಶಾನ್ವಿ ಶ್ರೀವಾಸ್ತವ್ ಉತ್ತರ ಪ್ರದೇಶದ ವಾರಾಣಸಿಯವರಾದರೂ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈಗಾಗಲೇ ಸ್ಯಾಂಡಲ್‍ವುಡ್‍ನಲ್ಲಿ ಹತ್ತಾರು ಸಿನಿಮಾಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿರುವ ಶಾನ್ವಿ, ತಮ್ಮ ನಟನೆ ಮೂಲಕವೇ ಕನ್ನಡಿಗರನ್ನು ಸೆಳೆದಿದ್ದಾರೆ. ಸ್ಯಾಂಡಲ್‍ವುಡ್ ಪ್ರಸಿದ್ಧ ನಟರೊಂದಿಗೆ ಶಾನ್ವಿ ತೆರೆ ಹಂಚಿಕೊಂಡಿದ್ದು, ಇತ್ತೀಚೆಗೆ ಶ್ರೀಮನ್ನಾರಾಯಣ ಚಿತ್ರದಲ್ಲೂ ಮೋಡಿ ಮಾಡಿದ್ದಾರೆ.

    ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು, ತಾರಕ್, ಮಫ್ತಿ, ದಿ ವಿಲನ್ ಅವನೇ ಶ್ರೀಮನ್ನಾರಾಯಣ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ಟಾಲಿವುಡ್‍ನಲ್ಲಿಯೂ ಗುರುತಿಸಿಕೊಂಡಿದ್ದು, ತೆಲುಗಿನಲ್ಲೂ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ತೆರೆ ಹಂಚಿಕೊಳ್ಳುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಇನ್ನೂ ಕೆಲಸ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಸಹ. ಆದರೆ ಇದೀಗ ಲಾಕ್‍ಡೌನ್ ಆಗಿರುವುದರಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

    ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಹಲವು ನಟ, ನಟಿಯರು ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಅದೇ ರೀತಿ ಶಾನ್ವಿ ಸಹಾಯಕ್ಕೆ ಮುಂದಾಗಿದ್ದಾರೆ. ಫೇಸ್ಬುಕ್ ಮೂಲಕ ಸಹಾಯ ಮಾಡಲು ಮುಂದಾಗಿದ್ದು, ರೂರಲ್ ಹೆಲ್ತ್ ಕೇರ್ ಫೌಂಡೇಶನ್‍ನ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೇಸ್ಬುಕ್‍ನಲ್ಲಿ ಆನ್‍ಲೈನ್ ಮೂಲಕ ಇತರರು ದಾನ ನೀಡುವಂತೆ ಸಂಸ್ಥೆ ಮನವಿ ಮಾಡಿದ್ದು, ಗ್ರಾಮೀಣ ಭಾಗದ ಜನರಿಗೆ ನೇರವಾಗಿ ಸಹಾಯ ತಲುಪಬೇಕೆಂಬ ಉದ್ದೇಶದಿಂದ ಶಾನ್ವಿ ಈ ಸಂಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತರು, ಅಭಿಮಾನಿಗಳೂ ಸಹ ದಾನ ನೀಡುವಂತೆ ಕರೆ ನೀಡಿದ್ದಾರೆ. ಈ ಮೂಲಕ ಫಂಡ್ ಸಂಗ್ರಹಕ್ಕೆ ಮುಂದಾಗಿದ್ದಾರೆ.

    ಬಾಲಿವುಡ್, ಸ್ಯಾಂಡಲ್‍ವುಡ್‍ನಲ್ಲಿ ಹಲವು ನಟ, ನಟಿಯರು ನೇರವಾಗಿ ಕಾರ್ಮಿಕರಿಗೆ, ಬಡವರಿಗೆ ಹಣ ಹಾಗೂ ಆಹಾರ ಪದಾರ್ಥ ದಾನ ನೀಡುವ ಮೂಲಕ ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಶಾನ್ವಿ ಅವರು ಫಂಡ್ ಸಂಗ್ರಹಿಸಲು ಮುಂದಾಗಿದ್ದಾರೆ. ಅಂದಹಾಗೆ ಶಾನ್ವಿ ಪ್ರಸ್ತುತ ರವಿಚಂದ್ರ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿದೆ.

  • ಸೋಶಿಯಲ್ ಮೀಡಿಯಾದಲ್ಲಿ ಮೇಳೈಸಿತು ಶ್ರೀಮನ್ನಾರಾಯಣನ ಕ್ರೇಜ್!

    ಸೋಶಿಯಲ್ ಮೀಡಿಯಾದಲ್ಲಿ ಮೇಳೈಸಿತು ಶ್ರೀಮನ್ನಾರಾಯಣನ ಕ್ರೇಜ್!

    ಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ತೆರೆಗಾಣಲು ಕೌಂಟ್ ಡೌನ್ ಶುರುವಾಗಿದೆ. ಇದೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಶ್ರೀಮನ್ನಾರಾಯಣನ ಹವಾ ಜೋರಾಗಿದೆ. ಅಷ್ಟಕ್ಕೂ ಆರಂಭದಿಂದ ಇಲ್ಲಿಯವರೆಗೂ ಈ ಸಿನಿಮಾ ಬಗ್ಗೆ ಕಾಲ ಕಾಲಕ್ಕೆ ಒಂದಷ್ಟು ಚರ್ಚೆಗಳು ಚಾಲ್ತಿಯಲ್ಲಿದ್ದುಕೊಂಡು ಆ ಮೂಲಕವೇ ಕುತೂಹಲವೊಂದು ಸದಾ ಚಾಲ್ತಿಯಲ್ಲಿದೆ. ಈ ವಾರ ಬಿಡುಗಡೆಗೊಳ್ಳುತ್ತಿರುವ ಈ ಚಿತ್ರದ ಕೌಂಟ್ ಡೌನ್ ಕ್ರೇಜ್ ಅಂತೂ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳುವ ಕಡೇಯ ಕ್ಷಣಗಳನ್ನು ಪ್ರೇಕ್ಷಕರೆಲ್ಲ ಸೋಶಿಯಲ್ ಮೀಡಿಯಾ ಮೂಲಕ ಸಂಭ್ರಮಿಸುತ್ತಿದ್ದಾರೆ.

    ಇದು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿರುವ ಬಿಗ್ ಬಜೆಟ್ಟಿನ ಚಿತ್ರ. ಈ ವಾರ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ದರೂ ಇಷ್ಟರಲ್ಲಿಯೇ ಮಿಕ್ಕ ನಾಲಕ್ಕು ಭಾಷೆಗಳಲ್ಲಿ ಅವನೇ ಶ್ರೀಮನ್ನಾರಾಯಣ ಬಿಡುಗಡೆಯಾಗಲಿದ್ದಾನೆ. ಈ ಘಳಿಗೆಯಲ್ಲಿ ಶ್ರೀಮನ್ನಾರಾಯಣನ ಬರುವಿಕೆಯ ಕ್ಷಣಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇದರೊಂದಿಗೆ ಶ್ರೀಮನ್ನಾರಾಯಣನ ಬಗ್ಗೆ ಪ್ರೇಕ್ಷಕ ವಲಯದಲ್ಲಿ ಮಡುಗಟ್ಟಿಕೊಂಡಿರೋ ಕ್ಯೂರಿಯಾಸಿಟಿ ಮತ್ತಷ್ಟು ತೀವ್ರವಾಗಿ ಬಿಟ್ಟಿದೆ.

    ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ರದರ್ಶಿಸುತ್ತಿರುವ ವಿಭಿನ್ನವಾದ ಪ್ರಚಾರದ ಪಟ್ಟುಗಳಂತೂ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಸರ್ವವ್ಯಾಪಿಯಾಗಿಸುತ್ತಿವೆ. ಸಿನಿಮಾ ಪ್ರಚಾರದ ವಿಚಾರದಲ್ಲಿಯೂ ಒಂದಷ್ಟು ಸಿದ್ಧ ಸೂತ್ರಗಳಿವೆ. ಪುಷ್ಕರ್ ಅದೆಲ್ಲದರಾಚೆಗೆ ಪ್ರತಿಯೊಬ್ಬರೂ ಶ್ರೀಮನ್ನಾರಾಯಣನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲು ಅವರು ಅವನೇ ಶ್ರೀಮನ್ನಾರಾಯಣ ಚಿತ್ರದ ಬೃಹತ್ ಕಟೌಟಿನ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಇನ್ನು ಎಪ್ಪತ್ತೆರಡು ಗಂಟೆಗಳು ಮಾತ್ರ ಬಾಕಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ. ಇದಕ್ಕೆ ಬಂದಿರೋ ಕಮೆಂಟುಗಳೇ ಶ್ರೀಮನ್ನಾರಾಯಣನ ಬಗ್ಗೆ ಅದೆಂಥಾ ಕ್ರೇಜ್ ಇದೆ ಎಂಬುದನ್ನು ಸಾರಿ ಹೇಳುವಂತಿದೆ. ಇಂಥಾ ಕೌಂಟ್‍ಡೌನ್ ಕ್ರೇಜ್ ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ ಮೇರೆ ಮೀರಿಕೊಂಡಿದೆ.

  • ಯಶ್ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ಮೂಲಕ ರಾಧಿಕಾ, ಶಾನ್ವಿ ಸಂದೇಶ

    ಯಶ್ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ಮೂಲಕ ರಾಧಿಕಾ, ಶಾನ್ವಿ ಸಂದೇಶ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ 50 ದಿನಗಳಿರುವ ಹಿನ್ನೆಲೆಯಲ್ಲಿ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕಾಮನ್ ಡಿಪಿ ಹಂಚಿಕೊಂಡಿದ್ದಾರೆ.

    ರಾಧಿಕಾ ಪಂಡಿತ್ ಅವರು ತಮ್ಮ ಇನ್‍ಸ್ಟಾದಲ್ಲಿ ಯಶ್ ಮುಖವಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ರಾಕಿಂಗ್ ಸ್ಟಾರ್ ಯಶ್ ಬಾಸ್, ಪರಿಹಾರದ ಒಂದು ಭಾಗವಾಗಿರಿ. ನೀರು ಉಳಿಸಿ, ಗಿಡಗಳನ್ನು ಬೆಳೆಸಿ ಎಂದು ಬರೆಯಲಾಗಿದೆ.

    ಈ ಫೋಟೋ ಹಂಚಿಕೊಂಡ ರಾಧಿಕಾ ಅದಕ್ಕೆ, “ಹುಟ್ಟುಹಬ್ಬ ಕೇವಲ ಆಚರಣೆಗಳ ಬಗ್ಗೆ ಅಲ್ಲ. ನಿರ್ಣಯಗಳನ್ನು ಮಾಡುವ ಸಂದರ್ಭ. ಜನವರಿ 8ಕ್ಕೆ 50 ದಿನಗಳ ಕ್ಷಣಗಣನೆ ಶುರುವಾಗಿದೆ. ಕರ್ನಾಟಕ ಅಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳು ಯಶ್‍ಗೆ ತೋರುವ ಪ್ರೀತಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಪ್ರಯತ್ನದ ಹಿಂದಿನ ಅಲೋಚನೆಗಳು ನಿಜವಾಗಿಯೂ ಯೋಗ್ಯವಾಗಿದೆ. ಇದನ್ನು ಬೆಂಬಲಿಸಲು ನಟಿ ಶಾನ್ವಿ ಶ್ರೀವಾತ್ಸವ್ ಇಂದು ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದಾರೆ. ಶಾನ್ವಿ ಅವರ ಈ ಕೆಲಸಕ್ಕೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ನೀರು ಉಳಿಸಿ, ಗಿಡ ಬೆಳೆಸಿ, ಗೋ ಗ್ರೀನ್” ಎಂದು ಬರೆದುಕೊಂಡಿದ್ದಾರೆ.

    ನಟಿ ಶಾನ್ವಿ ಕೂಡ ತಮ್ಮ ಇನ್‍ಸ್ಟಾದಲ್ಲಿ ಯಶ್ ಅವರ ಕಾಮನ್ ಡಿಪಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, ನಮಸ್ಕಾರ. ರಾಕಿಂಗ್ ಸ್ಟಾರ್ ಯಶ್ ಸರ್ ಅಭಿಮಾನಿಗಳಿಗೆಲ್ಲಾ. ಯಶ್ ಸರ್ ಅವರ ಯೋಚನೆ-ಯೋಜನೆ ಅವರ ಮಾರ್ಗ ನಮಗೆಲ್ಲಾ ಸ್ಫೂರ್ತಿದಾಯಕ. ಅವರ ಹಾದಿಯಲ್ಲಿ ನಡೆಯುತ್ತಿರುವ ಅವರ ಫ್ಯಾನ್ಸ್ ಆದ ನೀವು, ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ರೀತಿ ಹೆಮ್ಮೆ ಎನಿಸುತ್ತಿದೆ.

    ಯಶ್ ಅವರ ಹುಟ್ಟುಹಬ್ಬಗೂ 50 ದಿನ ಮೊದಲು ಎಂದರೆ, 50ನೇ ದಿನವಾದ ಇಂದಿನಿಂದ ಜನವರಿ 8ರವರೆಗೂ ನೀವು ಮಾಡುತ್ತಿರುವ ಈ ಪರಿಹಾರದ ಒಂದು ಭಾಗವಾಗಿರಿ. ನೀರು ಉಳಿಸಿ, ಗಿಡಗಳನ್ನು ಬೆಳೆಸಿ ಅಮೂಲ್ಯವಾದಂತಹ ಅಭಿಯಾನದಲ್ಲಿ ನನ್ನನೂ ಭಾಗಿಯನ್ನಾಗಿಸಿದ್ದಕ್ಕೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗಕ್ಕೆ ಧನ್ಯವಾದ ಹೇಳುತ್ತಾ, ಈ ಪೋಸ್ಟರ್ ಪೋಸ್ಟ್ ಮಾಡಿದ್ದೀನಿ.

     

    View this post on Instagram

     

    ನಮಸ್ಕಾರ… ರಾಕಿಂಗ್ ಸ್ಟಾರ್ ಯಶ್ ಸಾರ್ ಅಭಿಮಾನಿಗಳಿಗೆಲ್ಲಾ… ಯಶ್ ಸಾರ್ ಅವ್ರ ಯೋಚನೆ-ಯೋಜನೆ ಅವ್ರ ಮಾರ್ಗ ನಮಗೆಲ್ಲಾ ಸ್ಫೂರ್ತಿದಾಯಕ. ಅವ್ರ ಹಾದಿಯಲ್ಲಿ ನಡೀತಿರೋ ಅವ್ರ ಫ್ಯಾನ್ಸ್ ಆದ ನೀವು, ಅವರ ಹುಟ್ಟುಹಬ್ಬವನ್ನ ಆಚರಿಸ್ತಿರೋ ರೀತಿ ಹೆಮ್ಮೆ ಅನ್ನಿಸ್ತಿದೆ. ಯಶ್ ರವರ ಬರ್ತ್ಡೇಗೂ 50ದಿನ ಮೊದಲು ಅಂದ್ರೆ,50ನೇ ದಿನವಾದ ಇಂದಿನಿಂದ ಜನವರಿ 8ರವರೆಗೂ ನೀವು ಮಾಡ್ತಿರೋ ಈ BE A PART OF SOLUTION BUT NOT POLLUTION. SAVE WATER,PLANT TREES,GO GREEN ಅಮೂಲ್ಯವಾದಂತಹ ಅಭಿಯಾನದಲ್ಲಿ ನನ್ನನೂ ಭಾಗಿಯನ್ನಾಗಿಸಿದ್ದಕ್ಕೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗಕ್ಕೆ ಧನ್ಯವಾದ ಹೇಳ್ತಾ.. ಈ 5BOSS0 POSTERನ ಪೋಸ್ಟ್ ಮಾಡ್ತಿದ್ದೀನಿ. ಅಂದ್ಹಾಗೆ ಈ ಪೋಸ್ಟರ್ ಕಾನ್ಸೆಪ್ಪ್ ನನಗ್ ಸಖತ್ ಇಷ್ಟ ಆಯ್ತು. ಪರಿಸರ ಮಾಲಿನ್ಯದ ಮೇಲೆ ಕೋಪಗೊಂಡಿರೋ ಯಶ್ ಸಾರ್ ಅವರ ಮೈಮನಸು ಹಸಿರುಮಯವಾಗಿರುವಂತೆ ಡಿಸೈನ್ ಮಾಡಿರೋ ರೀತಿ ಇಂಟ್ರೆಸ್ಟಿಂಗ್ ಅನ್ನಿಸ್ತಿದೆ. ಯಶ್ ಅವರ ಅಭಿಮಾನಿಗಳ ಈ ಅಭಿಯಾನದಲ್ಲಿ ನಾನು ಭಾಗಿಯಾಗಿದ್ದೀನಿ ನೀವು ಭಾಗಿಯಾಗಿ.. ಹಸಿರು ಬೆಳೆಸೋಣ.. ಪರಿಸರ ಉಳಿಸೋಣ.. ಜೈ ಹಿಂದ್, ಜೈ ಕರ್ನಾಟಕ ಮಾತೆ ನಿಮ್ಮ ಶಾನ್ವಿ ಶ್ರೀವಾತ್ಸವ್ #savegreen #Savewater #goGreenyashfans #worldwideyashfans #rockingstaryashfans @thenameisyash h @iamradhikapandit

    A post shared by Shanvi Srivastava (@shanvisri) on

    ಅಂದಹಾಗೆ ಈ ಪೋಸ್ಟರ್ ಕಾನ್ಸೆಪ್ಪ್ ನನಗ್ ಸಖತ್ ಇಷ್ಟ ಆಯಿತು. ಪರಿಸರ ಮಾಲಿನ್ಯದ ಮೇಲೆ ಕೋಪಗೊಂಡಿರುವ ಯಶ್ ಸರ್ ಅವರ ಮೈ ಮನಸ್ಸು ಹಸಿರುಮಯವಾಗಿರುವಂತೆ ಡಿಸೈನ್ ಮಾಡಿರುವ ರೀತಿ ಇಂಟ್ರೆಸ್ಟಿಂಗ್ ಎನಿಸುತ್ತಿದೆ. ಯಶ್ ಅವರ ಅಭಿಮಾನಿಗಳ ಈ ಅಭಿಯಾನದಲ್ಲಿ ನಾನು ಭಾಗಿಯಾಗಿದ್ದೀನಿ, ನೀವೂ ಭಾಗಿಯಾಗಿ. ಹಸಿರು ಬೆಳೆಸೋಣ, ಪರಿಸರ ಉಳಿಸೋಣ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

  • ದರ್ಶನ್ ‘ತಾರಕ್’ ಟೀಸರ್ ಸೂಪರ್ ಹಿಟ್..!

    ದರ್ಶನ್ ‘ತಾರಕ್’ ಟೀಸರ್ ಸೂಪರ್ ಹಿಟ್..!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಸಿನಿಮಾದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ. ನಿನ್ನೆ ಬಿಡುಗಡೆಯಾದ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ 3.50 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ.

    ಟೀಸರ್ ನಲ್ಲಿ ದರ್ಶನ್ ಸ್ಟೈಲಿಶ್ ಲುಕ್ ಮತ್ತು ಆಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. ‘ತಾರಕ್’ ದರ್ಶನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ ರಗ್ಬಿ ಪ್ಲೇಯರ್ ಪಾತ್ರವನ್ನು ನಿಭಾಯಿಸಿದ್ದಾರೆ. ತಾರಕ್ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶಿಸಿದ್ದು, ವಿಶೇಷ ಪಾತ್ರದಲ್ಲಿ ನಟ ದೇವರಾಜ್ ನಟಿಸಿದ್ದಾರೆ. ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾತ್ಸವ್ ಅಭಿನಯಿಸಿದ್ದಾರೆ.

    ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದಲ್ಲಿ ಒಟ್ಟಾರೆ 6 ಹಾಡುಗಳಿವೆ. ಟೀಸರ್ ನೋಡಲು ಕಾಯುತ್ತಿದ್ದ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಗುಣಗಾನ ಮಾಡುತ್ತಿದ್ದಾರೆ. ಈ ಬಾರಿಯ ದಸರಾ ವೇಳೆ ತಾರಕ್ ಚಿತ್ರಮಂದಿರ ತಲುಪಲಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಚಿತ್ರದ ಟೀಸರ್ ನೀವೂ ನೋಡಬಹುದು.

    https://www.youtube.com/watch?v=bUWVi72WlCw