Tag: Shanvi Srivastava

  • ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆ ಕದ್ದ ಶಾನ್ವಿ

    ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆ ಕದ್ದ ಶಾನ್ವಿ

    ನ್ನಡದ ‘ಮಾಸ್ಟರ್‌ಪೀಸ್’ ನಟಿ ಶಾನ್ವಿ ಶ್ರೀವಾಸ್ತವ (Shanvi Srivastava) ಬಹುಭಾಷಾ ನಟಿಯಾಗಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮಾಲ್ಡೀವ್ಸ್‌ ತೆಗೆದ ಹಾಟ್ ಫೋಟೋವೊಂದನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾ ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಮ್ಸ್- ಪೋಸ್ಟರ್ ರಿವೀಲ್

    ಸಿನಿಮಾಗೆ ಬ್ರೇಕ್ ಕೊಟ್ಟು ಮಾಲ್ಡೀವ್ಸ್‌ಗೆ (Maldives) ಶಾನ್ವಿ ತೆರಳಿದ್ದಾರೆ. ಕಡಲ ತೀರದಲ್ಲಿ ಹಾಟ್ ಆಗಿ ಪೋಸ್ಟ್ ನೀಡಿದ್ದಾರೆ. ವಿವಿಧ ಭಂಗಿಯಲ್ಲಿ ನಿಂತಿರುವ ಸುಂದರ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ನಟಿಯ ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ಇನ್ನೂ ‘ಚಂದ್ರಲೇಖ’ ಸಿನಿಮಾ ಮೂಲಕ ಶಾನ್ವಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಟಿಸಿದರು. ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದರು.

    ಆ ನಂತರ ಯಶ್ ಜೊತೆ ‘ಮಾಸ್ಟರ್‌ಪೀಸ್’ ಸಿನಿಮಾದಲ್ಲಿ ಶಾನ್ವಿ ನಟಿಸಿದರು. ಭಲೇ ಜೋಡಿ, ಸುಂದರಾಂಗ ಜಾಣ, ಮಫ್ತಿ, ಗೀತಾ, ತಾರಕ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂನಲ್ಲೂ ಶಾನ್ವಿ ಗುರುತಿಸಿಕೊಂಡಿದ್ದಾರೆ.

    ಪ್ರಸ್ತುತ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಿನಿಮಾದಲ್ಲಿ ನಿರೂಪ್ ಭಂಡಾರಿ, ಪೃಥ್ವಿ ಅಂಬರ್ ಜೊತೆ ಶಾನ್ವಿ ನಟಿಸಿದ್ದಾರೆ. ತ್ರಿಶೂಲಂ ಎಂಬ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.

  • ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು: ‘ತಾರಕ್‌’ ನಟಿ ಶಾನ್ವಿ ಶ್ರೀವಾತ್ಸವ್

    ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು: ‘ತಾರಕ್‌’ ನಟಿ ಶಾನ್ವಿ ಶ್ರೀವಾತ್ಸವ್

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ಖ್ಯಾತ ನಟ ದರ್ಶನ್ (Darshan) ಅರೆಸ್ಟ್ ಆಗಿದ್ದಾರೆ. ಈಗ ದರ್ಶನ್ ಪ್ರಕರಣದ ಬಗ್ಗೆ ತಾರಕ್ ನಟಿ ಶಾನ್ವಿ (Shanvi Srivastava) ರಿಯಾಕ್ಟ್ ಮಾಡಿದ್ದಾರೆ. ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಶಿವರಾಜ್‌ಕುಮಾರ್, ಹೇಮಂತ್ ರಾವ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್

    ಅವರ ಜೊತೆ ‘ತಾರಕ್’ ಸಿನಿಮಾದಲ್ಲಿ ಅಭಿನಯಿಸಿದ ಅನುಭವ ಚೆನ್ನಾಗಿತ್ತು. ಅಷ್ಟು ದೊಡ್ಡ ಸ್ಟಾರ್ ಅವರ ಜೊತೆ ನಟಿಸಿದ್ದು, ಖುಷಿಯಿದೆ. ನನಗೆ ತುಂಬಾ ಗೌರವ ಕೊಡ್ತಾ ಇದ್ದರು. ಅದು ಬಿಟ್ಟು ವೈಯಕ್ತಿಕ ವಿಚಾರ ನನಗೆ ಗೊತ್ತಿಲ್ಲ. ದರ್ಶನ್ ಈ ಘಟನೆ ಕೇಳಿ ಶಾಕ್ ಆಯ್ತು. ಈ ಪ್ರಕರಣದ ಕುರಿತು ನಾನು ಕಾಮೆಂಟ್ ಮಾಡೋದು ಸರಿಯಲ್ಲ. ನನಗೆ ಸಂಬಂಧಿಸಿಲ್ಲದ ಪ್ರಕರಣದ ಮಾತನಾಡಲ್ಲ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಹಾಡಿಗೆ ಸೊಂಟ ಬಳುಕಿಸಿದ ಆಶಿಕಾ ರಂಗನಾಥ್

    ನಾನು ಸೋಶಿಯಲ್ ಮೀಡಿಯಾ ಯೂಸ್ ಮಾಡೋವಾಗ ಕೆಟ್ಟ ಕಾಮೆಂಟ್ ಒಳ್ಳೆಯ ಕಾಮೆಂಟ್ ಬರುತ್ತದೆ. ಆದರೆ ಒಳ್ಳೆಯ ಕಾಮೆಂಟ್ ಜಾಸ್ತಿ ಇರುತ್ತಲ್ಲ ಅದರ ಬಗ್ಗೆ ಗಮನ ಕೊಡ್ತೀನಿ. ಕೆಟ್ಟ ಕಾಮೆಂಟ್‌ಗಳಿಗೆ ಜಾಸ್ತಿ ತಲೆ ಕೆಡಿಸಿಕೊಂಡರೆ ಸಮಯ ವ್ಯರ್ಥವಾಗುತ್ತದೆ. ದರ್ಶನ್ ಅವರು ಆದಷ್ಟು ಬೇಗ ಈ ಪ್ರಕರಣದಿಂದ ಹೊರ ಬರಲಿ ಅಂತ ಆಶಿಸುತ್ತೇನೆ ಎಂದು ಶಾನ್ವಿ ಮಾತನಾಡಿದ್ದಾರೆ.

    ಅಂದಹಾಗೆ, 2017ರಲ್ಲಿ ದರ್ಶನ್ ನಟನೆಯ ‘ತಾರಕ್’ ಸಿನಿಮಾದಲ್ಲಿ ಶಾನ್ವಿ ನಾಯಕಿಯಾಗಿ ನಟಿಸಿದ್ದರು. ಇಬ್ಬರ ಕಾಂಬಿನೇಷನ್ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

  • ಕನ್ನಡದ ನಟಿ ವಿದಿಶಾ ಶ್ರೀವಾಸ್ತವ ಪ್ರೆಗ್ನೆನ್ಸಿ ಫೋಟೋಶೂಟ್

    ಕನ್ನಡದ ನಟಿ ವಿದಿಶಾ ಶ್ರೀವಾಸ್ತವ ಪ್ರೆಗ್ನೆನ್ಸಿ ಫೋಟೋಶೂಟ್

    ನ್ನಡದ ಜನಪ್ರಿಯ ನಟಿ ಶಾನ್ವಿ ಶ್ರೀವಾಸ್ತವ (Shanvi Srivastav) ಸಹೋದರಿ, ನಟಿ ವಿದಿಶಾ (Vidisha) ಅವರು ಇದೀಗ ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಕನ್ನಡದ ‘ವಿರಾಟ್’ (Viraat) ಸಿನಿಮಾದ ನಟಿ ವಿದಿಶಾ, ಬೇಬಿ ಬಂಪ್ ಲುಕ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಬಾಲಿವುಡ್‌ ಚಿತ್ರಗಳ ಫ್ಲಾಪ್‌ ಬಳಿಕ ರಶ್ಮಿಕಾ ನಟನೆ 3ನೇ ಚಿತ್ರದ ಟೀಸರ್‌ ರಿಲೀಸ್

    ವಿರಾಟ್, ನಲಿ ನಲಿಯುತ ಸಿನಿಮಾಗಳಲ್ಲಿ ನಟಿಸಿರುವ ವಿದಿಶಾ ಶ್ರೀವಾಸ್ತವ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿದಿಶಾ ತಾಯಿಯಾಗುತ್ತಿರುವ ವಿಚಾರವನ್ನ ವಿದಿಶಾ ಸಹೋದರಿ ಶಾನ್ವಿ ಶ್ರೀವಾಸ್ತವ ಅವರು ಕೆಲ ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಿಹಿಸುದ್ದಿ ಹಂಚಿಕೊಂಡಿದ್ದರು.

    2018ರಲ್ಲಿ ಸಾಯಕ್ ಎಂಬವರನ್ನು ನಟಿ ವಿದಿಶಾ ಬನಾರಸ್‌ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಕೆಲ ವರ್ಷಗಳ ಡೇಟಿಂಗ್ ನಂತರ ಹಿರಿಯರ ಸಮ್ಮತಿಯ ಮೇರೆಗೆ ದಾಂಪತ್ಯ ಜೀವನಕ್ಕೆ ಸಾಯಕ್- ವಿದಿಶಾ ಕಾಲಿಟ್ಟಿದ್ದರು. ನಟಿ ವಿದಿಶಾ ಇದೀಗ ಚೊಚ್ಚಲ ಮಗುವಿನ ಬರುವಿಕೆಯ ಖುಷಿಯಲ್ಲಿದ್ದಾರೆ. ಇದೇ ಸಂತಸದಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್ (Pregnancy Photoshoot) ಮಾಡಿಸಿದ್ದಾರೆ.

    ನಟಿ ವಿದಿಶಾ ಇದೀಗ ತುಂಬು ಗರ್ಭಿಣಿಯಾಗಿದ್ದು, ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಬಣ್ಣ- ಬಿಳಿ ಬಣ್ಣದ ಉಡುಗೆಯಲ್ಲಿ ಪತಿ ಜೊತೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಫೋಟೋಶೂಟ್‌ನಲ್ಲಿ ನಟಿಯ ಪ್ರೆಗ್ನೆನ್ಸಿಯ ಗ್ಲೋ ಎದ್ದು ಕಾಣುತ್ತಿದೆ. ವಿದಿಶಾ ಫೋಟೋಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ವಿದಿಶಾ ಸುಸೂತ್ರವಾಗಿ ಹೆರಿಗೆ ಆಗಲಿ ಒಳ್ಳೆಯದಾಗಲಿ ಎಂದು ಫ್ಯಾನ್ಸ್ ಶುಭಕೋರಿದ್ದಾರೆ.

  • ಹಾರರ್ ಥ್ರಿಲ್ ನೀಡಲು ದಿನೇಶ್ ಬಾಬು 50ನೇ ಚಿತ್ರ ‘ಕಸ್ತೂರಿ ಮಹಲ್’ ರೆಡಿ

    ಹಾರರ್ ಥ್ರಿಲ್ ನೀಡಲು ದಿನೇಶ್ ಬಾಬು 50ನೇ ಚಿತ್ರ ‘ಕಸ್ತೂರಿ ಮಹಲ್’ ರೆಡಿ

    ಸ್ತೂರಿ ಮಹಲ್, ಹೆಸರಾಂತ ಹಾಗೂ ಹಿರಿಯ ನಿರ್ದೇಶಕ ದಿನೇಶ್ ಬಾಬು ಸಿನಿಮಾ. ಇದು ಈ ಚಿತ್ರದ ಹೆಗ್ಗಳಿಕೆ ಕೂಡ. ಒಂದಕ್ಕಿಂತ ಒಂದು ಸೂಪರ್ ಹಿಟ್ ಸಿನಿಮಾ ಕೊಟ್ಟ ದಿನೇಶ್ ಬಾಬು ಅವರ 50ನೇ ಸಿನಿಮಾ ಎನ್ನುವುದು ಇನ್ನೊಂದು ಇಂಟ್ರಸ್ಟಿಂಗ್ ವಿಚಾರ. ಸದ್ಯ ಹಾಡು, ಟ್ರೇಲರ್‌ಗಳ ಮೂಲಕ ಕನ್ನಡ ಸಿನಿರಸಿಕರ ಮನಗೆದ್ದಿರುವ ಈ ಚಿತ್ರ ಇದೇ ಶುಕ್ರವಾರ ಅಂದರೆ ಮೇ 13ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

    ತೆಲುಗು, ತಮಿಳು, ಮಲಯಾಳಂ, ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿ ಸೂಪರ್ ಹಿಟ್ ನೀಡಿರುವ ನಿರ್ದೇಶಕ ದಿನೇಶ್ ಬಾಬು ಕನ್ನಡ ಚಿತ್ರ ಪ್ರೇಮಿಗಳಿಗೆ ಬಲು ಅಚ್ಚು ಮೆಚ್ಚು. ಪುನೀತ್ ರಾಜ್ ಕುಮಾರ್ ಅಭಿನಯದ ಅಭಿ, ರಮೇಶ್ ಅರವಿಂದ್ ಅಭಿನಯದ ಅಮೃತ ವರ್ಷಿಣಿ ಸೇರಿದಂತೆ ಇನ್ನೂ ಹಲವು ಸಿನಿಮಾಗಳು ಇದಕ್ಕೆ ಕಾರಣ. ಸದ್ಯ ತಮ್ಮ ಸಿನಿ ಜರ್ನಿಯ 50ನೇ ಸಿನಿಮಾ ಕಸ್ತೂರಿ ಮಹಲ್‍ಗೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿ ರಂಜಿಸಲು ರೆಡಿಯಾಗಿದ್ದಾರೆ. ಇದನ್ನೂ ಓದಿ : ಬೆಂಗಳೂರು ರಸ್ತೆಯ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಖ್ಯಾತ ಗಾಯಕ ಅಜಯ್ ವಾರಿಯರ್

    ಕಸ್ತೂರಿ ಮಹಲ್ ಹಾರರ್ ಜಾನರ್ ಸಿನಿಮಾ. ಅವನೇ ಶ್ರೀಮನ್ನಾರಾಯಣ ಖ್ಯಾತಿಯ ನಟಿ ಶಾನ್ವಿ ಶ್ರೀವಾಸ್ತವ ಚಿತ್ರದ ನಾಯಕಿ. ಈಗಾಗಲೇ ಟ್ರೇಲರ್‌ನಲ್ಲಿ ಶಾನ್ವಿ ಅವತಾರ ನೋಡಿ ಥ್ರಿಲ್ ಆಗಿರುವ ಮಂದಿ ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಸ್ಕಂದ ಅಶೋಕ್, ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್, ರಂಗಾಯಣ ರಘು, ವತ್ಸಲಾ ಮೋಹನ್, ನೀನಾಸಂ ಅಶ್ವಥ್, ಕಾಶಿಮಾ, ಕೆಂಪೇಗೌಡ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.

    ಪಿಕೆಹೆಚ್ ದಾಸ್ ಕ್ಯಾಮೆರಾ ನಿರ್ದೇಶನ, ರಮೇಶ್ ಕೃಷ್ಣ ಸಂಗೀತ ಚಿತ್ರಕ್ಕಿದೆ. ಶ್ರೀ ಭವಾನಿ ಆರ್ಟ್ಸ್ ಬ್ಯಾನರ್ ನಡಿ ರವೀಶ್ ಆರ್.ಸಿ. ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಕಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡುತ್ತಿರುವ ಕಸ್ತೂರಿ ಮಹಲ್ ಮೇ 13ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಇದನ್ನೂ ಓದಿ : ಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ವಿಧಿವಶ

  • ಬೀಚ್‌ನಲ್ಲಿ ಮಾಸ್ಟರ್ ಪೀಸ್ ಬೆಡಗಿ – ಜಾಲಿಮೂಡ್‌ನಲ್ಲಿರುವ ಶಾನ್ವಿ ಕ್ಯೂಟ್ ವಿಡಿಯೋ ವೈರಲ್

    ಬೀಚ್‌ನಲ್ಲಿ ಮಾಸ್ಟರ್ ಪೀಸ್ ಬೆಡಗಿ – ಜಾಲಿಮೂಡ್‌ನಲ್ಲಿರುವ ಶಾನ್ವಿ ಕ್ಯೂಟ್ ವಿಡಿಯೋ ವೈರಲ್

    ಬೆಂಗಳೂರು: ಮಾಸ್ಟರ್ ಪೀಸ್ ಸಿನಿಮಾ ಖ್ಯಾತಿಯ ನಟಿ ಶಾನ್ವಿ ಶ್ರೀವತ್ಸವ್ ಸಮುದ್ರ ತೀರಲ್ಲಿ ಕಾಲ ಕಳೆಯುತ್ತಿರುವ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    shanvi srivastava

    ಚಂದ್ರಕಲಾ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಶಾನ್ವಿ ಶ್ರೀವತ್ಸವ್ ಮೊದಲ ಸಿನಿಮಾದಲ್ಲಿಯೇ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಬಳಿಕ ರಾಕಿಂಗ್ ಸ್ಟಾರ್ ಯಶ್ ಜೊತೆ ಮಾಸ್ಟರ್ ಪೀಸ್ ಸಿನಿಮಾದ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಮೂಲಕ ಖ್ಯಾತಿ ಪಡೆಯುವುದರ ಜೊತೆಗೆ ತಮ್ಮ ಗ್ಲಾಮರ್ ಲುಕ್‍ನಿಂದ ಅದೆಷ್ಟೋ ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು. ಇದನ್ನೂ ಓದಿ: ಫೋಟೋ ಚೆನ್ನಾಗಿ ಬಂದಿದ್ಯಾ ಅಂತ ಚೆಕ್ ಮಾಡ್ತಿದ್ದಾನೆ ರಾಯನ್: ಸುಧಾರಾಣಿ

    shanvi srivastava

    ಸದ್ಯ ಜಾಲಿ ಮೂಡ್‍ನಲ್ಲಿರುವ ಶಾನ್ವಿ ಶ್ರೀವತ್ಸವ್ ಕಡಲ ತೀರದಲ್ಲಿ ಮುಸುಕು ಕಟ್ಟಿದ ಮೋಡಗಳ ಮಧ್ಯೆ ಕೂಲ್ ಆಗಿರುವ ವಾತಾವರಣದಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಶಾನ್ವಿ ತುಂಡು ಬಟ್ಟೆ ತೊಟ್ಟು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಕೆಲವೊಂದು ಫೋಟೋಗಳನ್ನು ವೀಡಿಯೋ ಜೊತೆಗೆ ಸೇರಿಸಿ ಹಾಡೊಂದನ್ನು ಸೆಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿದ್ದರೆ, ಮತ್ತೊಂದರಲ್ಲಿ ಗಲ್ಲದತ್ತ ಕೈ ಇಟ್ಟುಕೊಂಡು ಹೀಗೆ ಸಖತ್ ಆಗಿ ಭಿನ್ನ, ಭಿನ್ನ ರೀತಿಯಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: 22 ದಿನ ಹಿಮಾಚಲ ಪ್ರದೇಶದಲ್ಲಿ ನಿಧಿ ಸುಬ್ಬಯ್ಯ ಮಾಡಿದ್ದೇನು?

     

    View this post on Instagram

     

    A post shared by Shanvi sri (@shanvisri)

    ಒಟ್ಟಾರೆ ಈ ವೀಡಿಯೋದಲ್ಲಿ ಶಾನ್ವಿ ಚೆಲುವನ್ನು ನೋಡಿದರೆ ಗಂಡೈಕ್ಳ ಎದೆಬಡಿತ ಏರುಪೇರಾಗುವುದಂತೂ ಪಕ್ಕಾ ಅಂತಲೇ ಹೇಳಬಹುದು.

  • ಕನ್ನಡದ ಕಂಪಿನೊಂದಿಗೆ ‘ಕಸ್ತೂರಿ ಮಹಲ್’ ಸೇರಿದ ಶಾನ್ವಿ ಶ್ರೀವಾತ್ಸವ್!

    ಕನ್ನಡದ ಕಂಪಿನೊಂದಿಗೆ ‘ಕಸ್ತೂರಿ ಮಹಲ್’ ಸೇರಿದ ಶಾನ್ವಿ ಶ್ರೀವಾತ್ಸವ್!

    ಒಂದು ವೈರಸ್ ಸೃಷ್ಟಿಸಿದ ಭೀತಿಯ ವಾತಾವರಣದಿಂದ ಥಂಡಾ ಹೊಡೆದಿದ್ದ ಚಿತ್ರರಂಗವೀಗ ಮೆಲ್ಲಗೆ ಕಾರ್ಯಾರಂಭ ಮಾಡುತ್ತಿದೆ. ಅದರ ಭಾಗವಾಗಿಯೇ ಒಂದಷ್ಟು ಸಿನಿಮಾಗಳ ಕಡೆಯಿಂದ ಸುದ್ದಿಗಳು ಹೊರಬೀಳಲಾರಂಭಿಸಿವೆ. ಇದೀಗ ಖ್ಯಾತ ನಿರ್ದೇಶಕ ದಿನೇಶ್ ಬಾಬು ಸಾರಥ್ಯದ ‘ಕಸ್ತೂರಿ ಮಹಲ್’ ಕೂಡಾ ಸುದ್ದಿ ಕೇಂದ್ರದಲ್ಲಿದೆ. ಅದಕ್ಕೆ ಆರಂಭಿಕ ಕಾರಣ ನಾಯಕಿಯ ಬದಲಾವಣೆ. ಆ ದಿಸೆಯಲ್ಲೀಗ ಕಸ್ತೂರಿ ಮಹಲ್‍ಗೆ ಅಪ್ಪಟ ಕನ್ನಡದ ಕಂಪಿನೊಂದಿಗೆ ಶಾನ್ವಿ ಶ್ರೀವಾತ್ಸವ್ ಅವರ ಆಗಮನವಾಗಿದೆ.

    ಕಸ್ತೂರಿ ಮಹಲ್ ಎಂಬುದು ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರ ಹೊಸ ಕನಸು. ಅದು ಕೊರೊನಾ ಮಾರಿ ಮೈಮುರಿದು ಹೂಂಕರಿಸುವ ಮುನ್ನವೇ ಒಂದಷ್ಟು ಸುದ್ದಿ ಮಾಡಿತ್ತು. ಆರಂಭ ಕಾಲದಲ್ಲಿ ಈ ಸಿನಿಮಾಗೆ ರಚಿತಾ ರಾಮ್ ನಾಯಕಿ ಎಂಬ ಮಾತು ಕೇಳಿ ಬಂದಿತ್ತು. ಆದರೆ ಇತ್ತೀಚೆಗೆ ಖುದ್ದು ದಿನೇಶ್ ಬಾಬು ಅವರೇ ಖಚಿತಪಡಿಸಿದ್ದರು. ಅದಾಗಿ ಈಗ ಒಂದು ವಾರವಷ್ಟೇ ಮಗುಚಿಕೊಂಡಿದೆ. ಅಷ್ಟರಲ್ಲಿಯೇ ಬಟ್ಟಲುಗಣ್ಣುಗಳ ಚೆಲುವೆ ಶಾನ್ವಿ ಶ್ರೀವಾತ್ಸವ್ ನಾಯಕಿಯ ಪಟ್ಟವನ್ನ ತಮ್ಮದಾಗಿಸಿಕೊಂಡಿದ್ದಾರೆ.

    ಈಗಾಗಲೇ ಕಸ್ತೂರಿ ಮಹಲ್ ಚಿತ್ರದ ತಾರಾಗಣ ಮತ್ತು ತಾಂತ್ರಿಕ ವರ್ಗ ನಿಕ್ಕಿಯಾಗಿದೆ. ಚಿತ್ರತಂಡ ಅದನ್ನೆಲ್ಲ ಹಾಗೆಯೇ ಮುಂದುವರೆಸಲು ತೀರ್ಮಾನಿಸಿದೆಯಂತೆ. ಈಗ ಆಗಿರೋದು ನಾಯಕಿಯ ಬದಲಾವಣೆ ಮಾತ್ರ. ಅತ್ತ ಈ ವಿಚಾರವನ್ನು ಚಿತ್ರತಂಡ ಹೇಳಿಕೊಳ್ಳುತ್ತಲೇ ಇತ್ತ ಶಾನ್ವಿ ಶ್ರೀವಾತ್ಸವ್ ಸಾಮಾಜಿಕ ಜಾಲತಾಣದ ಮೂಲಕ ಥ್ರಿಲ್ ಆಗಿಯೇ ಈ ವಿಚಾರವನ್ನ ಹಂಚಿಕೊಂಡಿದ್ದಾರೆ. ಹೀಗೆ ತನ್ನ ಮುಂದಿನ ಸಿನಿಮಾ ಬಗ್ಗೆ ಹೇಳಿಕೊಂಡ ರೀತಿಯಿಂದಲೇ ಸಮಸ್ತ ಕನ್ನಡಿಗರ ಮನಸು ಗೆದ್ದಿದ್ದಾರೆ.

     

    View this post on Instagram

     

    Next ❤️ Kasturi mahal .

    A post shared by Shanvi sri (@shanvisri) on

    ಶಾನ್ವಿ ಶ್ರೀವಾತ್ಸವ್ ಮೂಲತಃ ಪರಭಾಷಾ ಹುಡುಗಿ. ಒಂದು ಹಾರರ್ ಮೂವಿಯ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದ ಈ ಹುಡುಗಿ ಇಲ್ಲಿ ನೆಲೆ ಕಂಡುಕೊಂಡಿರೋದು ತನ್ನ ಪ್ರತಿಭೆ ಮತ್ತು ಹೊಸ ಕಲಿಕೆಯ ಉತ್ಸಾಹದಿಂದಲೇ. ಮೊದಲ ಸಿನಿಮಾದಿಂದಲೇ ಪ್ರೀತಿ ಕೊಟ್ಟ ಕನ್ನಡ ಭಾಷೆಯ ಮೇಲೆ ಅತೀವ ಮೋಹ ಬೆಳೆಸಿಕೊಂಡಿದ್ದ ಶಾನ್ವಿ, ಆ ನಂತರದಲ್ಲಿ ಗಂಭೀರವಾಗಿಯೇ ಕನ್ನಡ ಕಲಿಕೆ ಆರಂಭಿಸಿದ್ದರಂತೆ. ಯಾವುದೇ ಸಂದರ್ಶನಕ್ಕೆ ಹೋದರೂ ಕನ್ನಡದಲ್ಲಿಯೇ ಮಾತಾಡಲು ಪ್ರಯತ್ನಿಸುತ್ತಾ ಈಕೆ ಕನ್ನಡದ ಹೆಣ್ಣುಮಗಳಂತೆಯೇ ಬೆರೆತು ಹೋಗಿದ್ದಾರೆ.

    ಇದೀಗ ಅವನೇ ಶ್ರೀಮನ್ನಾರಾಯಣ ಸಿನಿಮಾ ನಂತರದ ತಮ್ಮ ಯಾನವನ್ನೂ ಕೂಡಾ ಅವರ ಅಚ್ಚ ಕನ್ನಡದಲ್ಲಿಯೇ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾನು ಕಸ್ತೂರಿ ಮಹಲ್‍ಗೆ ನಾಯಕಿಯಾದ ಸುದ್ದಿಯನ್ನ ಶಾನ್ವಿ ಹಂಚಿಕೊಂಡಿದ್ದಾರೆ. ತನಗೆ ಸಿಗುತ್ತಿರೋ ಒಳ್ಳೆ ಪಾತ್ರಗಳ ಯಾದಿಯಲ್ಲಿ ಕಸ್ತೂರಿ ಮಹಲ್ ಚಿತ್ರದ ಪಾತ್ರ ಮಹತ್ವದ್ದು ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ. ಇದೇ ಖುಷಿಯಲ್ಲಿ ಅವರು ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ. ಚಿತ್ರ ತಂಡ ಕೂಡಾ ಅದಕ್ಕಾಗಿ ಸನ್ನದ್ಧವಾಗಿದೆ.

    ದಿನೇಶ್ ಬಾಬು ಸಿನಿಮಾ ಅಂದ ಮೇಲೆ ಅದರ ಬಗ್ಗೆ ಕನ್ನಡ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇರುತ್ತೆ. ಇದುವರೆಗೂ ಅನೇಕ ಅತ್ಯುತ್ತಮ ಸಿನಿಮಾಗಳನ್ನು ಕೊಟ್ಟಿರೋ ಅವರು ಈ ಬಾರಿ ಮತ್ತೊಂದು ಅದ್ಭುತ ಕಥೆಯೊಂದಿಗೇ ಆಗಮಿಸುತ್ತಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಶ್ರುತಿ ಪ್ರಕಾಶ್, ಸ್ಕಂದ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ, ಕಾಶಿಮಾ ಮುಂತಾದವರ ತಾರಾಗಣವಿರಲಿದೆ. ಉಳಿದಂತೆ ಪಿಕೆಹೆಚ್ ದಾಸ್ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ ಹೊಂದಿರೋ ಕಸ್ತೂರಿ ಮಹಲ್ ಶ್ರೀ ಭವಾನಿ ಆರ್ಟ್ಸ್ ಮತ್ತು ರುಬಿನ್ ರಾಜ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿದೆ.

  • ಕಸ್ತೂರಿ ಮಹಲ್‍ನಿಂದ ಡಿಂಪಲ್ ಕ್ವೀನ್ ಔಟ್, ಶಾನ್ವಿ ಇನ್

    ಕಸ್ತೂರಿ ಮಹಲ್‍ನಿಂದ ಡಿಂಪಲ್ ಕ್ವೀನ್ ಔಟ್, ಶಾನ್ವಿ ಇನ್

    ಬೆಂಗಳೂರು: ಚಿತ್ರದ ಟೈಟಲ್ ಕುರಿತು ಸದ್ದು ಮಾಡಿದ್ದ ಸಿನಿಮಾದಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಹೊರ ನಡೆದಿದ್ದು, ಅವರ ಜಾಗಕ್ಕೆ ಶಾನ್ವಿಯವರನ್ನು ನಿರ್ದೇಶಕ ದಿನೇಶ್ ಬಾಬು ಆಯ್ಕೆ ಮಾಡಿದ್ದಾರೆ.

    ಆರಂಭದಲ್ಲಿ ದಿನೇಶ್ ಬಾಬು ಅವರು ಈ ಚಿತ್ರದ ಹೆಸರನ್ನು ಕಸ್ತೂರಿ ನಿವಾಸ ಎಂದು ಘೋಷಿಸಿದ್ದರು. ಆದರೆ ಡಾ.ರಾಜ್‍ಕುಮಾರ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಸ್ತೂರಿ ಮಹಲ್ ಎಂದು ಬದಲಾಯಿಸಿದ್ದಾರೆ. ಅಲ್ಲದೆ ಚಿತ್ರಕ್ಕೆ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸಿನಿಮಾದಿಂದ ಅವರು ಹೊರ ನಡೆದಿದ್ದು, ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಶಾನ್ವಿ ಶ್ರೀವಾಸ್ತವ ನಟಿಸುತ್ತಿದ್ದಾರೆ. ಸ್ಕಂದ ಅಶೋಕ್ ಅವರು ಮುಖ್ಯಭೂಮಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ರಚಿತಾ ರಾಮ್ ಅವರು ಚಿತ್ರದಿಂದ ಹೊರ ನಡೆದ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ದಿನೇಶ್ ಬಾಬು, ರಚಿತಾ ರಾಮ್ ಅವರು ಚಿತ್ರದಿಂದ ಹೊರ ನಡೆದಿರುವ ಕುರಿತು ನಿರ್ದಿಷ್ಟ ಕಾರಣ ತಿಳಿದಿಲ್ಲ. ಆದರೆ ಶಾನ್ವಿ ಅವರು ತಂಡ ಸೇರಿರುವುದಕ್ಕೆ ಸಂತೋಷವಾಗಿದೆ. ಅಕ್ಟೋಬರ್ ವೇಳೆಗೆ ಕೊಟ್ಟಿಗೆಹಾರದಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂದು ಮಾಹಿತಿ ನಿಡಿದರು. ಇನ್ನೂ ವಿಶೇಷವೆಂಬಂತೆ ಕಸ್ತೂರಿ ಮಹಲ್ ದಿನೇಶ್ ಬಾಬು ಅವರ 50ನೇ ಸಿನಿಮಾ ಆಗಿದೆ. ಹೀಗಾಗಿ ನಿರೀಕ್ಷೆ ಹೆಚ್ಚಿಸಿದೆ.

    ಅವನೇ ಶ್ರೀಮನ್ನಾರಾಯಣ ಸಕ್ಸಸ್ ಬಳಿಕ ಲಾಕ್‍ಡೌನ್ ದಿನಗಳನ್ನು ಎಂಜಾಯ್ ಮಾಡಿದ್ದ ನಟಿ ಶಾನ್ವಿ ಶ್ರೀವಾಸ್ತವ, ಇದೀಗ ಶೂಟಿಂಗ್ ಆರಂಭವಾಗುತ್ತಿದ್ದಂತೆ ತಮ್ಮ ಹೊಸ ಚಿತ್ರದ ಕುರಿತು ಘೋಷಿಸಿದ್ದಾರೆ. ಈ ಬಾರಿ ಅವರು ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಲಕ್ಷ್ಮೀ ಅವತಾರ ತಾಳಿದ್ದ ಶಾನ್ವಿ, ತಮ್ಮ ವಿಶಿಷ್ಟ ನಟನೆ ಮೂಲಕವೇ ಪ್ರೇಕ್ಷಕರನ್ನು ಸೆಳೆದಿದ್ದರು. ಇದೀಗ ಹಾರರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದು, ತಮ್ಮ ಹೊಸ ಸಿನಿಮಾ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅವರ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದು, ಹೆಚ್ಚು ಜನ ಲೈಕ್ ಮಾಡಿದ್ದಾರೆ.

    ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿರುವ ಶಾನ್ವಿ, ನನ್ನ ಮುಂದಿನ ಕನ್ನಡ ಚಿತ್ರ ಪ್ರಖ್ಯಾತ ನಿರ್ದೇಶಕರಾದ ದಿನೇಶ್ ಬಾಬು ಸರ್ ಅವರ ಕಸ್ತೂರಿಮಹಲ್ ಎಂದು ನಿಮ್ಮೆಲ್ಲರಿಗೂ ತಿಳಿಸಲು ನನಗೆ ಸಂತೋಷವಾಗುತ್ತದೆ. ನನ್ನ ಕನ್ನಡದ ಮೊದಲ ಚಿತ್ರದ ನಂತರ ಮತ್ತೊಮ್ಮೆ ಹಾರರ್ ಚಿತ್ರ ಮಾಡುತ್ತಿದ್ದು, ಇನ್ನೂ ಅನೇಕ ಒಳ್ಳೆಯ ಅವಕಾಶದ ನಿರೀಕ್ಷೆಯಲ್ಲಿದ್ದೇನೆ. ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹಕ್ಕೆ ಚಿರಋಣಿ ಎಂದು ಬರೆದುಕೊಂಡಿದ್ದಾರೆ.

    ಕನ್ನಡದಲ್ಲಿ ಚಂದ್ರಲೇಖ ಬಳಿಕ ಅವರು ನಟಿಸುತ್ತಿರುವ ಎರಡನೇ ಹಾರರ್ ಚಿತ್ರ ಇದಾಗಿದೆ. ಅಲ್ಲದೆ ಇನ್ನೂ ಹೆಚ್ಚಿನ ಅವಕಾಶಗಳ ನಿರೀಕ್ಷೆಯಲ್ಲಿರುವುದಾಗಿ ಸಹ ಅವರು ಹೇಳಿಕೊಂಡಿದ್ದಾರೆ. ಹೊಸ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ತಮ್ಮ ಸಿನಿ ಜರ್ನಿಯನ್ನು ಮುಂದುವರಿಸಿದ್ದಾರೆ.

  • ಇಂದಿನಿಂದ ಶ್ರೀಮನ್ನಾರಾಯಣನ ದರ್ಶನ- ಪ್ರೀಮಿಯರ್ ಶೋನಲ್ಲಿ ರಕ್ಷಿತ್ ಶೆಟ್ಟಿಗೆ ಶಹಬ್ಬಾಷ್

    ಇಂದಿನಿಂದ ಶ್ರೀಮನ್ನಾರಾಯಣನ ದರ್ಶನ- ಪ್ರೀಮಿಯರ್ ಶೋನಲ್ಲಿ ರಕ್ಷಿತ್ ಶೆಟ್ಟಿಗೆ ಶಹಬ್ಬಾಷ್

    ಬೆಂಗಳೂರು: `ಅವನೇ ಶ್ರೀಮನ್ನಾರಾಯಣ’ನ ಅವತಾರದಲ್ಲಿ ಲಕ್ಷ್ಮೀ ಸಮೇತ ಇಂದು ರಕ್ಷಿತ್ ಶೆಟ್ಟಿ ರಾಜಾದ್ಯಂತ ಥಿಯೇಟರ್‍ಗೆ ಎಂಟ್ರಿಕೊಡುತ್ತಿದ್ದಾರೆ. ವಿಭಿನ್ನ ಕಥೆಯ ಮೂಲಕ ಅದೃಷ್ಟ ಪರೀಕ್ಷೆಗಿಳಿದಿರುವ ಸಿಂಪಲ್‍ಸ್ಟಾರ್ ಬಂಪರ್ ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾರೆ.

    ಹೌದು. ಇಂದಿನಿಂದ ಶ್ರೀಮನ್ನಾರಾಯಣ ದರ್ಶನ ಕೊಡುತ್ತಿದ್ದಾನೆ. ಹ್ಯಾಟ್ಸಪ್ ಸಾಂಗ್ ಮೂಲಕ ಕಿಕ್ಕೇರಿಸಿದ್ದ ರಕ್ಷಿತ್ ಶೆಟ್ಟಿಯ ಕಲ್ಪನೆಯ ಕೂಸು ಅವನೇ ಶ್ರೀಮನ್ನಾರಾಯಣ ಇಂದು 10 ಗಂಟೆಯಿಂದ ಬೆಳ್ಳಿತೆರೆಯ ಮೇಲೆ ರಾರಾಜಿಸಲಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿರೋ ಸಿಂಪಲ್ ಸ್ಟಾರ್ ನ ಸಕ್ಸಸ್ ಯಾತ್ರೆ ಇಂದು 450ಕ್ಕೂ ಹೆಚ್ಚಿನ ಚಿತ್ರಮಂದಿರಲ್ಲಿಂದು ಮೆರವಣಿಗೆ ಹೊರಡಲಿದೆ.

    ಅಂದಹಾಗೇ ಅವನೇ ಶ್ರೀಮನ್ನಾರಾಯಣನ ರಕ್ಷಿತ್ ಶೆಟ್ಟಿಯ ಮೂರು ವರ್ಷದ ತಪಸ್ಸು. ಈಗಾಗಲೇ ಇನ್ಸ್ ಸ್ಟಾಗ್ರಾಂ, ಫೇಸ್‍ಬುಕ್, ಟ್ವಿಟ್ಟರ್ ನಲ್ಲಿ ಶ್ರೀಮನ್ನಾರಾಯಣ ಭಜನೆ ಜೋರಾಗಿದೆ. ಚಿತ್ರಮಂದಿರದ ಮುಂದೆ ಅವನೇ ಶ್ರೀಮನ್ನಾರಾಯಣನ ಕಟೌಟ್‍ಗಳು ರಾರಾಜಿಸ್ತಿದ್ದು, ಗ್ರ್ಯಾಂಡಾಗಿ ನಾರಾಯಣನನ್ನು ವೆಲ್‍ಕಂ ಮಾಡಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.

    ಗುರುವಾರ ಊರ್ವಶಿ ಚಿತ್ರಮಂದಿರದಲ್ಲಿ ಅದ್ಧೂರಿ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಕಲರ್‍ಫುಲ್ ಪ್ರಿಮಿಯರ್ ಶೋನಲ್ಲಿ ಶಿವರಾಜ್ ಕುಮಾರ್, ರವಿಚಂದ್ರನ್, ರಿಷಬ್ ಶೆಟ್ಟಿ, ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ಗುರುದತ್ತ್, ವಸಿಷ್ಠ, ಇಮ್ರಾನ್ ಸರ್ದಾರಿಯಾ, ಕೆ.ಮಂಜು ಸೇರಿದಂತೆ ಚಿತ್ರರಂಗ ಕಲಾವಿದರು, ತಂತ್ರಜ್ಞರು ಭಾಗಿಯಾಗಿದ್ರು. ಚಿತ್ರ ನೋಡಿದವರೆಲ್ಲಾ ಶೆಟ್ರಿಗೆ ಹ್ಯಾಟ್ಸಪ್ ಹೇಳಿದ್ದಾರೆ.

    1980ರ ಕಾಲಘಟ್ಟದ ಕಥೆ ಇದಾಗಿದೆ. ಸೂಪರ್ ಹಿಟ್ ಚಿತ್ರ ಕಿರಿಕ್ ಪಾರ್ಟಿ ವೇಳೆ ಹೊಳೆದ ಅವನೇ ಶ್ರೀಮನ್ನಾರಾಯಣ ಕಥೆಯನ್ನ ಸ್ವತಃ ರಕ್ಷಿತೇ ಬರೆದಿದ್ದಾರೆ. ರಕ್ಷಿತ್ ಶೆಟ್ಟಿ ಚಿತ್ರ ಅಂದ್ರೆ ಅದರಲ್ಲೇನೋ ವಿಶೇಷ ಇದ್ದೇ ಇರುತ್ತೆ. ಫ್ಯಾನ್ ಇಂಡಿಯಾ ರಿಲೀಸ್ ಆಗಲಿರುವ ಚಿತ್ರಕ್ಕೆ ಸಚಿನ್ ನಿರ್ದೇಶನವಿದೆ, ರಕ್ಷಿತ್ ಶೆಟ್ಟಿ- ಶಾನ್ವಿ ಜೋಡಿಯನ್ನು ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳುವ ಕಾತರತೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಪ್ರಕಾಶ್ ಗೌಡ ನಿರ್ಮಿಸಿರೋ 30 ಕೋಟಿ ವೆಚ್ಚದ `ಅವನೇ ಶ್ರೀಮನ್ನಾರಾಯಣ’ ದರ್ಶನಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.

    ಒಟ್ಟಿನಲ್ಲಿ ಸಿನಿರಸಿಕರೇ ಚರಿತ್ರೆ ಸೃಷ್ಠಿಸುವ ಅವತಾರದಲ್ಲಿ `ಅವನೇ ಶ್ರೀಮನ್ನಾರಾಯಣ’ ಮತ್ತು ಅಮರಾವತಿಯಿಂದ ಬಂದಿರೋ ಲಕ್ಷ್ಮೀಯ ದರ್ಶನನ್ನ ಥಿಯೇಟರ್‍ನಲ್ಲೇ ಪಡೆಯಿರಿ.

  • ತಮ್ಮ ದುಗುಡವನ್ನ ಅರ್ಥಮಾಡಿಕೊಂಡವರಿಗೆ ಶಾನ್ವಿ ಧನ್ಯವಾದ

    ತಮ್ಮ ದುಗುಡವನ್ನ ಅರ್ಥಮಾಡಿಕೊಂಡವರಿಗೆ ಶಾನ್ವಿ ಧನ್ಯವಾದ

    ಬೆಂಗಳೂರು: ನಟಿ ಶಾನ್ವಿ ಶ್ರೀವಾಸ್ತವ್ ಇತ್ತೀಚೆಗೆ “ಸಿನಿಮಾದಲ್ಲಿ ನಟಿಯರಿಗೆ ಹೆಚ್ಚಿನ ಮಹತ್ವ ಕೊಡುವುದಿಲ್ಲ, ಸಿನಿಮಾದ ಬಗ್ಗೆಯೂ ಯಾವುದೇ ಮಾಹಿತಿ ಕೊಡುವುದಿಲ್ಲ” ಎಂದು ತಮ್ಮ ಕೆಲ ಮಾತುಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದೀಗ ತಮ್ಮ ಮನವಿಯನ್ನು ಆಲಿಸಿದ ಪ್ರತಿಯೊಬ್ಬರಿಗೂ ಹಬ್ಬದ ದಿನದಂದು ಧನ್ಯವಾದ ತಿಳಿಸಿದ್ದಾರೆ.

    ಶಾನ್ವಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯ ಕೃಪಯಿಂದ ನಮ್ಮೆಲ್ಲರ ಮೇಲಿರಲೆಂದು ಪ್ರಾರ್ಥಿಸುತ್ತಾ, ನನ್ನ ಇತ್ತೀಚಿನ ‘ಮನವಿಯನ್ನು’ ಆಲಿಸಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು.

    ಮೊದಲನೆಯದಾಗಿ, ಶ್ರೀ ಸಲಾಂ ಅವರಂತ ನಿರ್ಮಾಪಕರು ನನ್ನ ದುಗುಡವನ್ನು ಅರ್ಥ ಮಾಡಿಕೊಂಡಿರುವುದು ತುಂಬಾ ಸಂತಸದ ವಿಷಯ. ಒಂದು ಚಿತ್ರಕ್ಕೆ ಏನು ಅವಶ್ಯಕವೆಂಬುದು ನಿಜವಾಗಿಯೂ ಆ ಚಿತ್ರತಂಡದ ವಿವೇಚನೆಗೆ ಬಿಟ್ಟದ್ದು, ಅದು ನನಗೂ ಅರಿವಿದೆ. ಆದರೆ ಅದರ ಬದಲಾವಣೆಯ ಮಾಹಿತಿ ಆ ಚಿತ್ರಕ್ಕೆ ಸಂಬಂಧ ಪಟ್ಟ ಎಲ್ಲರಿಗೂ ತಿಳಿಸುವುದು ಕರ್ತವ್ಯವು ಸರಿಯಷ್ಟೆ. ಗೀತಾ ಚಲನಚಿತ್ರ ನಿಮ್ಮೆಲ್ಲರಂತೆಯೆ ನನಗೂ ಹೆಮ್ಮೆಯ ವಿಷಯ.

    ನನ್ನ ಕಳಕಳಿಯ ಪ್ರಾರ್ಥನೆ ಕೇವಲ ಒಂದು ಚಿತ್ರಕ್ಕೆ ಮೀಸಲಾಗದೆ, ಈ ಹಿಂದೆಯೂ ಈ ರೀತಿಯ ಹಲವು ಸನ್ನಿವೇಶಗಳ ಪ್ರತೀಕವಾಗಿ ಹೊರ ಬಂದ ಕಾಳಜಿಯ ಮಾತುಗಳು. ಇದು ನನ್ನಂತಹ ನಟ, ನಟಿಯರಿಗೆಲ್ಲರನ್ನು ಕಾಡುವ ವಿಚಾರ. ಇಂತಹ ವಿಚಾರಗಳನ್ನು ಭವಿಷ್ಯದಲ್ಲಿ ಯಾರೊಂದಿಗೂ ಮರುಕಳಿಸದಿರಲೆಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಈ ಹಿಂದೆ ಪಬ್ಲಿಕ್ ಜೊತೆ ಮಾತನಾಡಿದ ಶಾನ್ವಿ, ನಾನು ಕೇವಲ ಕನ್ನಡ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದೇನೆ. ನಟಿಯರು ಸರಿಯಾದ ಸಮಯಕ್ಕೆ ಚಿತ್ರೀಕರಣಕ್ಕೆ ಬರಲ್ಲ, ವೃತ್ತಿಪರತೆಯನ್ನು ಹೊಂದಿರಲ್ಲ ಎಂದು ಹಲವರು ದೂರುತ್ತಾರೆ. ಆದ್ರೆ ನಟಿಯರು ಸಹ ಸಿನಿಮಾದ ಒಂದು ಭಾಗವಾಗಿ ಇರ್ತಾರೆ ಎಂದು ಯಾರೂ ತಿಳಿದುಕೊಳ್ಳಲ್ಲ. ಸಿನಿಮಾ ಚಿತ್ರೀಕರಣ ಯಾವ ಹಂತದಲ್ಲಿದೆ? ಡಬ್ಬಿಂಗ್ ನಡೆಯುತ್ತಿದ್ದೆಯಾ? ಚಿತ್ರದ ಯಾವ ವಿಷಯಗಳನ್ನು ಸಹ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಲ್ಲ. ನಟರಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನ ನಮಗೆ ನೀಡಲ್ಲ ಎಂಬ ಬೇಸರದ ನುಡಿಗಳನ್ನ ಕೆಲವು ಸಾಲುಗಳಲ್ಲಿ ಬಹಿರಂಗ ಪಡಿಸಿದ್ದೇನೆ ಎಂದಿದ್ದರು.

    ಚಿತ್ರರಂಗದಲ್ಲಿ ನನ್ನೊಬ್ಬಳಿಗೆ ಈ ರೀತಿ ಆಗಿಲ್ಲ. ಹಲವರು ಈ ಸಮಸ್ಯೆಯನ್ನು ಎದುರಿಸಿದ್ದಾರೆ. ನಮ್ಮನ್ನು ದೂರುವುದಕ್ಕಿಂತ ಅವಕಾಶಗಳನ್ನು ನೀಡಿದ್ರೆ ನಾವು ಏನು ಎಂಬುದನ್ನ ತೋರಿಸುತ್ತೇವೆ. ನನ್ನಲ್ಲಿ ಹುದುಗಿಕೊಂಡಿದ್ದ ಕೆಲ ಮಾತುಗಳನ್ನು ಹಂಚಿಕೊಂಡಿದ್ದೇನೆಯೇ ಹೊರತು ಯಾರನ್ನು ದೂರುತ್ತಿಲ್ಲ. ಸಿನಿಮಾ ಅಂಗಳದಲ್ಲಿ ಈ ರೀತಿಯ ಸನ್ನಿವೇಶಗಳನ್ನು ಹಲವು ನಟಿಯರು ಸೇರಿದಂತೆ ಕಲಾವಿದರು ಎದುರಿಸುತ್ತಾರೆ. ಹಾಗಾಗಿ ನನ್ನ ವೈಯಕ್ತಿಕ ಕೆಲ ಅಭಿಪ್ರಾಯಗಳನ್ನು ಬರೆದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.

  • ಸುಳ್ಳು ಭರವಸೆ ನೀಡಬೇಡಿ – ಫಸ್ಟ್ ಟೈಂ ಮನಸ್ಸಿನಾಳದ ನೋವನ್ನ ಬಹಿರಂಗಗೊಳಿಸಿದ ಶಾನ್ವಿ

    ಸುಳ್ಳು ಭರವಸೆ ನೀಡಬೇಡಿ – ಫಸ್ಟ್ ಟೈಂ ಮನಸ್ಸಿನಾಳದ ನೋವನ್ನ ಬಹಿರಂಗಗೊಳಿಸಿದ ಶಾನ್ವಿ

    ಬೆಂಗಳೂರು: ಚಂದನವನದ ಬೇಡಿಕೆಯ ನಟಿ ಮುದ್ದು ಚೆಲುವೆ ಶಾನ್ವಿ ಶ್ರೀವಾಸ್ತವ್ ತಮ್ಮ ಕೆಲ ಮಾತುಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಒಳ್ಳೆಯ ಸಿನಿಮಾವನ್ನು ಯಾರು ನೋಡಲು ಇಷ್ಟಪಡುವುದಿಲ್ಲ? ಒಳ್ಳೆಯದು, ಆದರೆ ಪ್ರೇಕ್ಷಕರಿಗೆ ಉತ್ತಮ ಸಿನಿಮಾ ಮಾಡಲು ಯಾರು ಬಯಸುವುದಿಲ್ಲ? ಎಂದು ಪ್ರಶ್ನೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಕ್ರೀಡೆಯಲ್ಲಿ ಸೋಲು ಅಥವಾ ಗೆಲುವು ಹೊರತಾಗಿಯೂ ಪ್ರತಿಯೊಬ್ಬರು ಅತ್ಯುತ್ತಮವಾದ ಆಟವನ್ನು ನೀಡುತ್ತಾರೆ. ಆದ್ದರಿಂದ ಎಲ್ಲರೂ ಉತ್ತಮ ಸಿನಿಮಾ ಮಾಡುವಾಗ ಮುಖ್ಯವಾಗಿ ಕೆಲಸದ ನೀತಿ, ಪ್ರಾಮಾಣಿಕತೆಗೆ ಪ್ರಾಮುಖ್ಯತೆ ನೀಡಬೇಕೆಂದು ನಾನು ವಿನಮ್ರದಿಂದ ಮನವಿ ಮಾಡಿಕೊಳ್ಳುತ್ತೇನೆ.

    ಪ್ರತಿಯೊಬ್ಬ ಕಲಾವಿದನೂ ಸಿನಿಮಾದ ಒಂದು ಭಾಗವಾಗಿರುತ್ತಾರೆ. ಅದನ್ನು ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳಬೇಕು. ಅದೇ ರೀತಿ ಸ್ಕ್ರಿಪ್ಟ್ ಪರದೆಯ ಮೇಲೆ ಚಿತ್ರಿಸಲ್ಪಡುವ ರೀತಿಯಲ್ಲಿಯೇ ಇರಬೇಕು. ಒಂದು ವೇಳೆ ಯಾವುದೇ ಬದಲಾವಣೆಗಳನ್ನು ಮಾಡಿದರೆ, ಅದನ್ನು ಕಲಾವಿದರಿಗೆ ತಿಳಿಸಬೇಕು. ಓರ್ವ ಕಲಾವಿದ ಸಿನಿಮಾದ ಹೊಸತನ್ನು ಅರ್ಥಮಾಡಿಕೊಳ್ಳುತ್ತಾನೆ. ಜೊತೆಗೆ ಅದು ನಿಜವಾದರೆ ಬದಲಾವಣೆಯನ್ನು ಗೌರವಿಸುತ್ತಾನೆ. ಅದರೆ ನಟನನ್ನು ದಾರಿ ತಪ್ಪಿಸುವುದು ಅನೈತಿಕವಾಗುತ್ತದೆ. ಇದಲ್ಲದೆ ಸುಳ್ಳು ಆಶ್ವಾಸನೆಗಳನ್ನು ನೀಡುವುದು ಬೇಡ. ಎಲ್ಲರೂ ಅತ್ಯುತ್ತಮವಾದ ಸಿನಿಮಾವನ್ನು ನೀಡೋಣ ಎಂದು ಬರೆದುಕೊಂಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶಾನ್ವಿ, ನನ್ನಲ್ಲಿ ಹುದುಗಿಕೊಂಡಿದ್ದ ಕೆಲ ಮಾತುಗಳನ್ನು ಇಂದು ಹಂಚಿಕೊಂಡಿದ್ದೇನೆಯೇ ಹೊರತು ಯಾರನ್ನು ದೂರುತ್ತಿಲ್ಲ. ಸಿನಿಮಾ ಅಂಗಳದಲ್ಲಿ ಈ ರೀತಿಯ ಸನ್ನಿವೇಶಗಳನ್ನು ಹಲವು ನಟಿಯರು ಸೇರಿದಂತೆ ಕಲಾವಿದರು ಎದುರಿಸುತ್ತಾರೆ. ಹಾಗಾಗಿ ನನ್ನ ವೈಯಕ್ತಿಕ ಕೆಲ ಅಭಿಪ್ರಾಯಗಳನ್ನು ಬರೆದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಇಂದು ನನಗೆ ತೋಚಿದ ಕೆಲವು ಸಾಲುಗಳನ್ನು ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದೇನೆ. ಸದ್ಯ ನಾನು ಕೇವಲ ಕನ್ನಡ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದೇನೆ. ನಟಿಯರು ಸರಿಯಾದ ಸಮಯಕ್ಕೆ ಚಿತ್ರೀಕರಣಕ್ಕೆ ಬರಲ್ಲ, ವೃತ್ತಿಪರತೆಯನ್ನು ಹೊಂದಿರಲ್ಲ ಎಂದು ಹಲವರು ದೂರುತ್ತಾರೆ. ಆದ್ರೆ ನಟಿಯರು ಸಹ ಸಿನಿಮಾದ ಒಂದು ಭಾಗವಾಗಿ ಇರ್ತಾರೆ ಎಂದು ಯಾರೂ ತಿಳಿದುಕೊಳ್ಳಲ್ಲ. ಸಿನಿಮಾ ಚಿತ್ರೀಕರಣ ಯಾವ ಹಂತದಲ್ಲಿದೆ? ಡಬ್ಬಿಂಗ್ ನಡೆಯುತ್ತಿದ್ದೆಯಾ? ಯಾವ ವಿಷಯಗಳನ್ನು ಸಹ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಲ್ಲ. ನಟರಿಗೆ ನೀಡುವಷ್ಟು ಪ್ರಾಮುಖ್ಯತೆಯನ್ನ ನಮಗೆ ನೀಡಲ್ಲ ಎಂಬ ಬೇಸರದ ನುಡಿಗಳನ್ನ ಕೆಲವು ಸಾಲುಗಳಲ್ಲಿ ಬಹಿರಂಗ ಪಡಿಸಿದ್ದೇನೆ. ಚಿತ್ರರಂಗದಲ್ಲಿ ನನ್ನೊಬ್ಬಳಿಗೆ ಈ ರೀತಿ ಆಗಿಲ್ಲ. ಹಲವರು ಈ ಸಮಸ್ಯೆಯನ್ನು ಎದುರಿಸಿದ್ದಾರೆ. ನಮ್ಮನ್ನು ದೂರುವುದಕ್ಕಿಂತ ಅವಕಾಶಗಳನ್ನು ನೀಡಿದ್ರೆ ನಾವು ಏನು ಎಂಬುದನ್ನ ತೋರಿಸುತ್ತೇವೆ ಎಂದು ತಿಳಿಸಿದರು.

    ಚಂದ್ರಲೇಖಾ, ರೌಡಿ, ಮಾಸ್ಟರ್ ಪೀಸ್, ಭಲೇ ಜೋಡಿ, ಸುಂದರಾಂಗ ಜಾಣ, ತಾರಕ್, ಗೀತಾ ಸೇರಿದಂತೆ ಹಲವು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಾನ್ವಿ ಶ್ರೀವಾಸ್ತವ್ ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ಬೇಡಿಕೆಯ ನಟಿಯಾಗಿದ್ದು, ಕಳೆದ ವಾರ ಶಾನ್ವಿ ನಟನೆಯ ಗೀತಾ ಸಿನಿಮಾ ಬಿಡುಗಡೆಗೊಂಡಿತ್ತು. ಸದ್ಯಕ್ಕೆ ತಮ್ಮ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.

    https://www.instagram.com/p/B3Ji3qMpmNy/