Tag: Shankaranna

  • ಶಂಕರಣ್ಣ@45: ಹೀಗೊಂದು ಸುದ್ದಿ ನಿಜನಾ?

    ಶಂಕರಣ್ಣ@45: ಹೀಗೊಂದು ಸುದ್ದಿ ನಿಜನಾ?

    ಖ್ಯಾತನಾಮರು ನಿಧನರಾದಾಗ ಅಥವಾ ಸುದ್ದಿಯಾದಾಗ ಅವರ ಮೇಲೆ ಸಿನಿಮಾ ಮಾಡುವ ಖಯಾಲಿಯನ್ನು ಸ್ಯಾಂಡಲ್ ವುಡ್ ನಲ್ಲಿ ಕೆಲವರು ಬೆಳೆಸಿಕೊಂಡಿದ್ದಾರೆ. ಆದರೆ, ಆ ಸಿನಿಮಾಗಳು ಈವರೆಗೂ ಆಗಿಲ್ಲ. ಆದರೂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ನೋಂದಾಯಿಸಲಾಗುತ್ತದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಈ ಹಿಂದೆ ಭೂಗತ ಪಾತಕಿ, ಸುಪಾರಿ ಕಿಲ್ಲರ್ ಗುಂಡಿಗೆ ತಲೆಯೊಡ್ಡಿದ್ದ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯ ಪಿ.ಎಸ್.ಐ ಮಲ್ಲಿಕಾರ್ಜುನ್ ಬಂಡೆ ಅವರ ಮೇಲೆ ಸಿನಿಮಾ ಮಾಡಲು ಮೂವರು ರೆಡಿಯಾಗಿದ್ದರು. ಮೂರು ಟೈಟಲ್ ಗಳು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಆದವು. ಅದು ಈವರೆಗೂ ಸುದ್ದಿಯಿಲ್ಲ. ಐಎಎಸ್ ಅಧಿಕಾರಿ ಡಿ.ಕೆ ರವಿ ನಿಧನರಾದಾಗಲೂ ಅವರ ಬಗ್ಗೆ ಸಿನಿಮಾ ಮಾಡಲು ಹಲವರು ಮುಂದಾದರು. ವಾಣಿಜ್ಯ ಮಂಡಳಿಯು ಡಿ.ಕೆ. ರವಿ ಹೆಸರಿನಲ್ಲಿ ಶೀರ್ಷಿಕೆ ಕೊಡದೇ ಇದ್ದರೂ ಬೇರೆ ಬೇರೆ ಹೆಸರಿನಲ್ಲಿ ಟೈಟಲ್ ರೆಜಿಸ್ಟರ್ ಆಯಿತು. ಆ ಸಿನಿಮಾಗಳು ಈವರೆಗೂ ಸೆಟ್ಟೇರಿಲ್ಲ. ಐ.ಪಿ.ಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಾಗ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡುತ್ತೇನೆ ಎಂದು ಬಂದರು. ಅದು ಕೂಡ ಈವರೆಗೂ ಆಗಲಿಲ್ಲ. ಹೀಗೆ ಇಂತಹ ಘಟನೆಗಳು ನಡೆದಾಗೆಲ್ಲ ಸಿನಿಮಾ ಮಾಡುವ ಇಂಗಿತವನ್ನು ಕೆಲವರು ವ್ಯಕ್ತ ಪಡಿಸುತ್ತಾರೆ, ಕಾವು ಆರಿದ ನಂತರ ಸುಮ್ಮನಾಗುತ್ತಾರೆ. ಇದೀಗ 45ನೇ ವಯಸ್ಸಿಗೆ 25ರ ಹರೆಯದ ಹುಡುಗಿಯನ್ನು ಮದುವೆಯಾಗಿ ನೆನ್ನೆಯಷ್ಟೇ ನೇಣಿಗೆ ಕೊರಳೊಡ್ಡಿರುವ ಶಂಕರಣ್ಣನ ಬಗ್ಗೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಗಿರಿಕಿ ಹೊಡೆಯುತ್ತಿದೆ.

    ಲಾಕ್ ಡೌನ್, ಕೊರೋನಾ, ಕೋವಿಡ್ ಎನ್ನುವ ಆತಂಕದ ನಡುವೆ 2021ರಲ್ಲಿ 45ರ ಇಳಿವಯಸ್ಸಿನ ಶಂಕರಣ್ಣ ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದ ಮೇಘನಾ ಅವರನ್ನು ಮದುವೆಯಾಗಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈಗ ಅದನ್ನೇ ಸಿನಿಮಾ ಮಾಡುವ ಆಲೋಚನೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಶಂಕರಣ್ಣ ಮತ್ತು ಮೇಘನಾ ಅವರದ್ದು ಒಂದು ರೀತಿಯಲ್ಲಿ ಇಂಟ್ರಸ್ಟಿಂಗ್ ಸ್ಟೋರಿ ನಿಜ. ಮೇಘನಾ ಅವರಿಗೆ ಆಗಲೇ ಮದುವೆ ಆಗಿತ್ತು. ಎರಡು ವರ್ಷದಿಂದ ಗಂಡ ನಾಪತ್ತೆಯಾಗಿದ್ದ. ಮದುವೆಯಾಗಿಯೂ ಒಂಟಿ ಬದುಕು ನಡೆಸುವುದು ತುಂಬಾ ಕಷ್ಟ. ಹಾಗಾಗಿ ಇನ್ನೂ ಮದುವೆಯಾಗದೇ ಉಳಿದಿದ್ದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶಂಕರಣ್ಣನನ್ನು ಭೇಟಿಯಾಗುವ ಮೇಘನಾ, ತನ್ನನ್ನು ಮದುವೆ ಆಗುವಂತೆ ಕೇಳುತ್ತಾಳೆ. ನೊಂದಿರುವ ಹುಡುಗಿಗೆ ಬಾಳು ಕೊಡಲು ಶಂಕರಣ್ಣ ಒಪ್ಪುತ್ತಾನೆ. ಗುರು ಹಿರಿಯರ ಸಮ್ಮುಖದಲ್ಲಿ ಇಬ್ಬರೂ ಸತಿಪತಿಗಳಾಗುತ್ತಾರೆ. ಆ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿತ್ತು. ಕೆಲವರು ಅವರನ್ನು ಆಡಿಕೊಂಡರೆ, ಇನ್ನೂ ಕೆಲವರು ಶಂಕರಣ್ಣನಿಗೆ ಶಹಭಾಷ್ ಹೇಳಿದ್ದರು. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

    Shankaranna

    ಈ ದಾಂಪತ್ಯಕ್ಕೆ ಕೇವಲ ಐದೇ ಐದು ತಿಂಗಳು ಆಯುಷ್ಯ ಅಂತ ಯಾರೂ ಅಂದುಕೊಂಡಿರಲಿಲ್ಲ. ನೆನ್ನೆ ಶಂಕರಣ್ಣ ಬಾರದ ಲೋಕಕ್ಕೆ ಹೋಗಿ ಬಿಟ್ಟಿದ್ದಾರೆ. ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕರಣ್ಣನ ಸಾವು ಇದೀಗ ನಾನಾ ರೂಪ ಪಡೆದುಕೊಂಡಿದೆ. ಹೆಂಡತಿ ಮೇಘನಾ ಒಂದು ರೀತಿಯಲ್ಲಿ ಹೇಳಿದರೆ, ಶಂಕರಣ್ಣನ ತಾಯಿ ಮತ್ತೊಂದು ರೀತಿಯಲ್ಲಿ ಹೇಳುತ್ತಿದ್ದಾರೆ. ಹಾಗಾಗಿ ಶಂಕರಣ್ಣನ ಸಾವು ನಿಗೂಢ.

  • ಶಂಕರಣ್ಣನ ಬಳಿ ಹೋಗಿ ಮದುವೆ ಆಗ್ತೀರಾ ಎಂದು ಕೇಳಿದ್ದ ಮೇಘನಾ

    ಶಂಕರಣ್ಣನ ಬಳಿ ಹೋಗಿ ಮದುವೆ ಆಗ್ತೀರಾ ಎಂದು ಕೇಳಿದ್ದ ಮೇಘನಾ

    ತುಮಕೂರು: ತುಮಕೂರಿನಲ್ಲಿ ನಡೆದ ಮದುವೆಯೊಂದು ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗಿತ್ತು. ಗಂಡ ಮೋಸ ಮಾಡಿದ್ದಕ್ಕೆ ಇಪ್ಪತ್ತು ವರ್ಷದ ಹಿರಿಯನಾಗಿದ್ದ ಶಂಕರಣ್ಣನನ್ನು ಮದುವೆಯಾಗುವಂತೆ ಮೇಘನಾ ಕೇಳಿಕೊಂಡು ವಿವಾಹವಾಗಿದ್ದರು. ಆದರೀಗ ಶಂಕರಣ್ಣನವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮೇಘನಾ ಅವರು ಶಂಕರಣ್ಣ ಅವರ ಕೈಹಿಡಿಯುವ ಮುನ್ನವೇ ವಿವಾಹವಾಗಿದ್ದರು. ಆದರೆ ಮದುವೆಯಾಗಿ 2 ವರ್ಷಗಳೇ ಕಳೆದರೂ ಗಂಡ ವಾಪಸ್ ಬರೆದೇ ಮೋಸ ಮಾಡಿದ್ದನು. ನಂತರ ಶಂಕರಣ್ಣ ಅವರ ಮೇಲೆ ಮನಸ್ಸು ಹೊಂದಿದ್ದ ಮೇಘನಾ ಸ್ವತಃ ತಾವಾಗಿಯೇ ಹೋಗಿ ನನ್ನನ್ನು ಮದುವೆಯಾಗುತ್ತೀರಾ ಎಂದು ಕೇಳಿದ್ದರು. ಇದನ್ನೂ ಓದಿ: 25 ವರ್ಷದವಳನ್ನು ಮದ್ವೆಯಾಗಿ ವೈರಲ್ ಆಗಿದ್ದ ಶಂಕರಣ್ಣ ಆತ್ಮಹತ್ಯೆ

    45 ವರ್ಷವಾದರೂ ಶಂಕರಣ್ಣ ಅವರಿಗೆ ಇನ್ನೂ ಮದುವೆಯಾಗಿರಲಿಲ್ಲ. ಅಲ್ಲದೇ ಮೊದಲಿಗೆ ಶಂಕರಣ್ಣ ಅವರು ಮದುವೆಯಾಗಲು ಒಪ್ಪಿಕೊಂಡಿರಲಿಲ್ಲ. ಆದರೆ ನಂತರ ಮದುವೆಯಾಗಲು ಒಪ್ಪಿ ಇಬ್ಬರು ಇಷ್ಟಪಟ್ಟು 2021ರ ಅಕ್ಟೋಬರ್‌ನಲ್ಲಿ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ದೇವಾಲಯವೊಂದರಲ್ಲಿ ಸರಳವಾಗಿ ವಿವಾಹವಾಗಿದ್ದರು. ಇದನ್ನೂ ಓದಿ: 45 ವರ್ಷದ ವ್ಯಕ್ತಿಯ ಜೊತೆ 25ರ ಯುವತಿ ಮದುವೆ

    ಕಳೆದ ಮೂರ್ನಾಲ್ಕು ದಿನಗಳಿಂದ ಅತ್ತೆ, ಸೊಸೆ ನಡುವೆ ಜಗಳ ನಡೆದಿತ್ತು. ಇದರಿಂದ ಬೇಸತ್ತು ಶಂಕರಣ್ಣ ಮನೆ ಬಿಟ್ಟು ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದಲ್ಲಿದ್ದ ತಮ್ಮ ತೋಟದಲ್ಲಿ ಇಂದು ಬೆಳ್ಳಂಬೆಳ್ಳಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಪತಿಯನ್ನು ಕಳೆದುಕೊಂಡು ಮರದ ಕೆಳಗೆ ಕೂತು ಪತ್ನಿ ಮೇಘನಾ ರೋಧಿಸುತ್ತಿದ್ದಾರೆ.

    ಹಳ್ಳಿಯಲ್ಲಿರುವುದು ಬೇಡ ಬೆಂಗಳೂರಿಗೆ ಹೋಗೋಣ ಎಂದು ಮೇಘನಾ ಶಂಕರಣ್ಣ ಅವರಿಗೆ ಕಾಟ ಕೊಡುತ್ತಿದ್ದರಿಂದ ಈ ವಿಚಾರವಾಗಿ ಅತ್ತೆ, ಸೊಸೆ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಇದರಿಂದ ಬೇಸತ್ತು ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳಕ್ಕೆ ಹುಲಿಯೂರು ದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಶಂಕರಣ್ಣ ಅವರದ್ದು ಆತ್ಮಹತ್ಯೆಯೋ.. ಕೊಲೆಯೋ.. ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.