Tag: shankaracharya shree

  • ಲಕ್ಷಾಂತರ ಮಕ್ಕಳ ಕಂಠ ಸಿರಿಯಲ್ಲಿ ಮೂಡಿದ ವಿವೇಕದೀಪಿನಿ ಶ್ಲೋಕ

    ಲಕ್ಷಾಂತರ ಮಕ್ಕಳ ಕಂಠ ಸಿರಿಯಲ್ಲಿ ಮೂಡಿದ ವಿವೇಕದೀಪಿನಿ ಶ್ಲೋಕ

    ಬೆಂಗಳೂರು : ಏಕ ಕಾಲದಲ್ಲಿ ಲಕ್ಷಾಂತರ ಮಕ್ಕಳ ಕಂಠ ಸಿರಿಯಲ್ಲಿ ಶ್ರೀ ಶಂಕರಾಚಾರ್ಯವಿರಚಿತ ಪ್ರಶೋತ್ತರರತ್ನ ಮಾಲಿಕೆಯ ಸಂಗ್ರಹವಾದ ವಿವೇಕದೀಪಿನಿಯ ಸಾಮೂಹಿಕ ಶ್ಲೋಕ ಪಠಣ ಯಶಸ್ವಿಯಾಗಿ ಮೂಡಿಬಂತು. ಅರಮನೆ ಮೈದಾನದ ಕೃಷ್ಣ ವಿಹಾರ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಕ್ಕಳು ಶ್ಲೋಕ ಪಠಣ ಮಾಡಿ ಹೊಸ ಇತಿಹಾಸಕ್ಕೆ ಸಾಕ್ಷಿಯಾದರು.

    ವೇದಾಂತ ಭಾರತಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದರು. ಪರಮಪೂಜ್ಯ ಶ್ರೀಶ್ರೀ ಶಂಕರಭಾರತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸಿಎಂ ಯಡಿಯೂರಪ್ಪ, ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

    https://twitter.com/AmitShah/status/1218520310120468480

    ಬೆಂಗಳೂರಿನ 500ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಗೆ ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆ ಶ್ಲೋಕಗಳನ್ನ ವೇದಾಂತ ಭಾರತಿ ಸಂಸ್ಥೆ ಸುಮಾರು 6 ತಿಂಗಳಿಂದ ಕಲಿಸುತ್ತಿದ್ದರು. ಇಂದು ಅಂತಿಮವಾಗಿ ಏಕ ಕಾಲಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ಶ್ಲೋಕ ಪಠಣ ಮಾಡುವ ಕಾರ್ಯಕ್ರಮವನ್ನ ವೇದಾಂತ ಭಾರತಿ ಸಂಸ್ಥೆ ಆಯೋಜಿಸಿತ್ತು.

    ಕಾರ್ಯಕ್ರಮದಲ್ಲಿ ಅಮಿತ್ ಶಾ ಮಾತನಾಡಿ, ಶಂಕರಾಚಾರ್ಯರ ತತ್ವ ಆದರ್ಶಗಳನ್ನ ಜೀವನದಲ್ಲಿ ಅಳವಡಿಕೊಳ್ಳಬೇಕು. ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆ ಅಭ್ಯಾಸದಿಂದ ನಮ್ಮ ಜೀವನವೇ ಬದಲಾಗುತ್ತೆ ಅಂತ ಮಕ್ಕಳಿಗೆ ನೀತಿ ಪಾಠ ಮಾಡಿದ್ರು.

    ಸಿಎಂ ಯಡಿಯೂರಪ್ಪ, ಮಾತನಾಡಿ, ವಿವೇಕದೀಪಿನಿ ಕಾರ್ಯಕ್ರಮಕ್ಕೆ ಶಾಲೆಗಳಲ್ಲಿ ಶ್ಲೋಕ ಕಲಿಕೆಗೆ ಸರ್ಕಾರ ಅನುಮತಿ ಕೊಟ್ಟಿದೆ. ವಸುದೈವಕ ಕುಟುಂಬಕಂ, ಸರ್ವೆ ಜನ ಸುಖಿನೋ ಭವಂತೂ ಅನ್ನೋ ಸಂಸ್ಕಾರದಲ್ಲಿ ನಾವು ಇದ್ದೇವೆ. ಶಂಕರಾಚಾರ್ಯರ ಶ್ಲೋಕಗಳು ಇವತ್ತಿನ ಜೀವನಕ್ಕೆ ಹೋಲುತ್ತವೆ ಅಂತ ತಿಳಿಸಿದ್ರು.

    ಪರಮಪೂಜ್ಯ ಶ್ರೀ ಶ್ರೀ ಶಂಕರಭಾರತೀ ಸ್ವಾಮೀಜಿ ಮಾತಾಡಿ, ಉತ್ತಮ ಸಮಾಜ ನಿರ್ಮಾಣದ ಕೆಲಸ ಆಗಬೇಕಾದ್ರೆ, ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆ ಪಠಣ ಮಾಡಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂತ ಮಾವಿನ ಹಣ್ಣಿನ ಕಥೆ ಸಮೇತ ಮಾರ್ಗದರ್ಶನ ನೀಡಿದರು.

  • ಕಂಚಿ ಜಗದ್ಗುರು ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ ವಿಧಿವಶ

    ಕಂಚಿ ಜಗದ್ಗುರು ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ ವಿಧಿವಶ

    ಚೆನ್ನೈ: ಕಂಚಿ ಪೀಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಇಂದು ತಮಿಳುನಾಡಿನ ಕಂಚೀಪುರಂನಲ್ಲಿ ನಿಧನ ಹೊಂದಿದ್ದಾರೆ.

    82 ವರ್ಷದ ಕಂಚಿಶ್ರೀಯವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ವರ್ಷದಿಂದ ಆವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಸ್ವಾಮೀಜಿಯವರು ಈ ಹಿಂದೆ ಅಂದ್ರೆ ಜನವರಿ ತಿಂಗಳಿನಲ್ಲಿ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಕೂಡ ಆಗಿದ್ದರು. ಆ ಬಳಿಕ ಅವರ ಆರೋಗ್ಯ ಹದಗೆಡುತ್ತಾ ಬಂದಿತ್ತು.

    ಶಂಕರಾಚಾರ್ಯರು 8ನೇ ಶತಮಾನದಲ್ಲಿ ಸ್ಥಾಪಿಸಿದ ಪೀಠಗಳಲ್ಲಿ ಕಂಚಿ ಪೀಠ ಕೂಡಾ ಒಂದು. 1994ರಲ್ಲಿ ಚಂದ್ರಶೇಖರ ಸರಸ್ವತಿ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ, ಮಠದ 69ನೇ ಪೀಠಾಧಿಪತಿಯಾಗಿ ಜಯೇಂದ್ರ ಸರಸ್ವತಿ ಸ್ವಾಮೀಜಿ ಅಧಿಕಾರ ಸ್ವೀಕರಿಸಿದ್ದು, ದೇಶಾದ್ಯಂತ ಅಸಂಖ್ಯಾತ ಭಕ್ತರನ್ನು ಹೊಂದಿದ್ದರು.

    ಕಂಚಿ ವರದರಾಜ ಪೆರುಮಾಳ್ ದೇವಸ್ಥಾನದ ಮ್ಯಾನೇಜರ್ ಕೊಲೆ ಪ್ರಕರಣದಲ್ಲಿ 2004ರಲ್ಲಿ ಸ್ವಾಮೀಜಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ 2013ರಲ್ಲಿ ಸ್ವಾಮೀಜಿ ಹಾಗೂ ಇತರೆ 22 ಜನರ ಮೇಲಿದ್ದ ಆರೋಪವನ್ನ ತೆರವುಗೊಳಿಸಲಾಗಿತ್ತು.

    ಸ್ವಾಮೀಜಿ ನಿಧನಕ್ಕೆ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.