Tag: Shankar

  • ವಾವ್ 2.0 ಟ್ರೇಲರ್ ರಿಲೀಸ್ ಆಯ್ತು- ರೀ ಲೋಡೆಡ್ ಚಿಟ್ಟಿ ಕಮ್ ಬ್ಯಾಕ್

    ವಾವ್ 2.0 ಟ್ರೇಲರ್ ರಿಲೀಸ್ ಆಯ್ತು- ರೀ ಲೋಡೆಡ್ ಚಿಟ್ಟಿ ಕಮ್ ಬ್ಯಾಕ್

    -15 ನಿಮಿಷದಲ್ಲಿ ಮೂರು ಲಕ್ಷಕ್ಕೂ ಅಧಿಕ ವ್ಯೂವ್

    ಬೆಂಗಳೂರು: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ನಟ ರಜಿನಿಕಾಂತ್ ಅಭಿನಯದ ‘ರೋಬೋ 2.0’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಚಿತ್ರ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. 2010ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಇಂದು ಟ್ರೇಲರ್ ಬಿಡುಗಡೆಯಾಗಿದ್ದು ಕುತೂಹಲವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

    ಟೀಸರ್ ನೋಡಿದಾಗಲೇ ಚಿತ್ರಕ್ಕೆ ಭಾರೀ ತಂತ್ರಜ್ಞಾನವನ್ನು ಬಳಸಲಾಗಿದೆ ಎನ್ನುವುದು ಗೊತ್ತಾಗಿತ್ತು. ಇಂದು ರಿಲೀಸ್ ಆಗಿರುವ ಟ್ರೇಲರ್ ನಲ್ಲಿ ಅಕ್ಷಯ್ ಕುಮಾರ್ ಮತ್ತು ರಜಿನಿಕಾಂತ್ ಡೈಲಾಗ್ ಗಳು ವಾವ್ ಎನ್ನುವಂತಿವೆ. ಇತ್ತ ಇಡೀ ಪ್ರಪಂಚವನ್ನ ತನ್ನ ಕೈ ವಶ ಮಾಡಿಕೊಳ್ಳಲು ಪ್ರಯತ್ನಿಸುವ ಅಕ್ಷಯ್ ಕುಮಾರ್ ಎಂಬ ಖಳನಾಯಕನಿಗೆ ತಿರುಗೇಟು ನೀಡಲು ರೀಲೋಡೆಡ್ ಚಿಟ್ಟಿ ಹುಟ್ಟಿ ಬರುತ್ತಾನೆ ಎಂಬುದನ್ನ ಟ್ರೇಲರ್ ಸ್ಪಷ್ಟಪಡಿಸಿದೆ. ಇತ್ತ ಬ್ರಿಟನ್ ಚೆಲುವೆ ಆ್ಯಮಿ ಜಾಕ್ಸನ್ ರೋಬೋ ಲುಕ್ ನಲ್ಲಿ ಮತ್ತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

    ಚೆನ್ನೈನ ಸತ್ಯಂ ಚಿತ್ರಮಂದಿರ ಸೇರಿದಂತೆ ಪ್ರಪಂಚದಾದ್ಯಂತ ಸುಮಾರು 6 ಸಾವಿರ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ‘ರೋಬೋ 2.0.’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ‘ರೋಬೋ 2.0’ ಸಿನಿಮಾ ಶಂಕರ್ ಅವರ ನಿರ್ದೇಶನದ ಬಹುಕೋಟಿ ವೆಚ್ಚದ ಚಿತ್ರವಾಗಿದೆ. 2010ರಲ್ಲಿ ಶಂಕರ್ ನಿರ್ದೇಶನದಲ್ಲೇ ಮೂಡಿಬಂದಿದ್ದ ಎಂದಿರನ್ ಚಿತ್ರದ ಮುಂದಿನ ಭಾಗವಾಗಿ 2.0 ಮೂಡಿಬಂದಿದ್ದು, ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ.

    ಈ ಸಿನಿಮಾದಲ್ಲಿ ನಟ ರಜಿನಿಕಾಂತ್ ಮತ್ತು ನಟಿ ಆಮಿ ಜಾಕ್ಷನ್ ಅಭಿನಯಿಸಿದ್ದಾರೆ. ವಿಶೇಷವಾಗಿ ಚಿತ್ರದ ಖಳನಾಯಕನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ. ಈ ಸಿನಿಮಾ ಬರೋಬ್ಬರಿ 550 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗಿದ್ದು, ನವೆಂಬರ್ 29ಕ್ಕೆ ಪ್ರಪಂಚದಾದ್ಯಂತ 9 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

    ಇತ್ತೀಚೆಗೆ ‘ರೋಬೋ 2.0’ ಸಿನಿಮಾ ಟೀಸರ್ ರಿಲೀಸ್ ಆಗಿತ್ತು. ರಿಲೀಸ್ ಆದ ದಿನದಿಂದ ಸುಮಾರು ಒಂದು ವಾರದವರೆಗೂ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಒಂದರಲ್ಲಿ ಇದ್ದು, ಅಷ್ಟರ ಮಟ್ಟಿಗೆ ಸದ್ದು ಮಾಡಿತ್ತು. ಚಿತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದ್ದು, 3ಡಿ ರೂಪದಲ್ಲಿ ಸಿನಿಮಾ ಸಿದ್ಧಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಚ್‍ಡಿಕೆ ಗವರ್ನಮೆಂಟ್‍ನಲ್ಲೂ ಲೂಟಿಕೋರರಿಗೆ ಶ್ರೀರಕ್ಷೆ- ಸಸ್ಪೆಂಡ್ ಆಗಿರೋ ಅಧಿಕಾರಿ ಮತ್ತೆ ನೇಮಕ

    ಎಚ್‍ಡಿಕೆ ಗವರ್ನಮೆಂಟ್‍ನಲ್ಲೂ ಲೂಟಿಕೋರರಿಗೆ ಶ್ರೀರಕ್ಷೆ- ಸಸ್ಪೆಂಡ್ ಆಗಿರೋ ಅಧಿಕಾರಿ ಮತ್ತೆ ನೇಮಕ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹೋಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ ಬಂದರೂ ಲೂಟಿಕೋರರಿಗೆ ಶ್ರೀರಕ್ಷೆಯಾಗಿದ್ದು, ಮತ್ತೆ ಅಮಾನತು ಆಗಿದ್ದ ಅಧಿಕಾರಿಯನ್ನು ನೇಮಕ ಮಾಡಲು ಮನವಿ ಮಾಡಲಾಗಿದೆ.

    ಸಣ್ಣ ಕೈಗಾರಿಗಳ ಸಚಿವ ಎಸ್.ಆರ್ ಶ್ರೀನಿವಾಸ್ ಭ್ರಷ್ಟ ಅಧಿಕಾರಿಯ ಮರುನೇಮಕಕ್ಕೆ ಕಡತ ನೀಡುವಂತೆ ಪತ್ರ ಬರೆದಿರೋದು ಬೆಳಕಿಗೆ ಬಂದಿದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಶಂಕರ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರ ಸಸ್ಪೆಂಡ್ ಮಾಡಿತ್ತು. ಅಷ್ಟೇ ಅಲ್ಲದೇ ಆತನ ವಿರುದ್ಧ ತನಿಖೆ ಮಾಡಲು ನಿವೃತ್ತ ನ್ಯಾಯಾಧೀಶ ಪದ್ಮರಾಜ್ ನೇತೃತ್ವದಲ್ಲಿ ಕಮಿಟಿಯನ್ನು ಸಹ ರಚನೆ ಮಾಡಿತ್ತು.

    ಕಮಿಟಿಯ ವರದಿಯಲ್ಲಿ ಶಂಕರ್ ವಿರುದ್ಧ ಹಲವು ಆರೋಪಗಳನ್ನು ಹೊರಿಸಿತ್ತು. ಇದರಿಂದ ಶಂಕರ್ ಅವರನ್ನು ಸಸ್ಪೆಂಡ್ ಸಹ ಮಾಡಲಾಗಿತ್ತು. ಕೋರ್ಟ್ ಸಹ ಅಮಾನತು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನೂ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಸ್ಪೆಂಡ್ ಆಗಿದ್ದ ಶಂಕರ್ ಅವರ ಮರು ನೇಮಕಕ್ಕೆ ಕಡತ ಕಳಿಸುವಂತೆ ಸಣ್ಣ ಕೈಗಾರಿಗಳ ಮಂತ್ರಿ ಶ್ರೀನಿವಾಸ್ ಪತ್ರ ಬರೆದಿರೋದು ಇದೀಗ ಅನುಮಾನಕ್ಕೆ ಕಾರಣವಾಗಿದೆ.

    ಅಷ್ಟೇ ಅಲ್ಲದೆ ವಿಧಾನ ಪರಿಷತ್ ಸದಸ್ಯ ಕಾಂತ್‍ರಾಜ್ ಸಹ ಶಂಕರ್ ಅವರ ಮರು ನೇಮಕಕ್ಕೆ ಒತ್ತಾಯ ಮಾಡಿರೋದು ಸರ್ಕಾರ ಭ್ರಷ್ಟರ ಪರ ವಕಾಲತ್ತು ವಹಿಸುತ್ತಿದೆ ಅನ್ನೋ ಟೀಕೆಗಳು ಕೇಳಿ ಬರುತ್ತಿವೆ.

  • ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಅರಣ್ಯ ಸಚಿವ ದಿಢೀರ್ ಭೇಟಿ!

    ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಅರಣ್ಯ ಸಚಿವ ದಿಢೀರ್ ಭೇಟಿ!

    ಬೆಂಗಳೂರು: ಅರಣ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸಚಿವ ಶಂಕರ್ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ್ದಾರೆ.

    ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಜೈವಿಕ ಉದ್ಯಾನವನದ ಮುಖ್ಯ ನಿರ್ವಹಣಾಧಿಕಾರಿ ಗೋಕುಲ್ ಗೈರು ಹಾಜರಾಗಿದ್ದು, ಡಿ.ಡಿ. ಕುಶಾಲಪ್ಪಗೆ ಸಚಿವರು ತರಾಟೆ ತೆಗೆದುಕೊಂಡಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಭೇಟಿಯ ನೆನಪಿಗಾಗಿ ಬೇವಿನ ಗಿಡವನ್ನು ನೆಟ್ಟಿದ್ದಾರೆ. ಮೃಗಾಲಯಕ್ಕೆ ಭೇಟಿಕೊಟ್ಟ ಸಚಿವರು ಪ್ರವಾಸಿಗರಲ್ಲಿ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ಸಚಿವರು ಮತ್ತಷ್ಟು ಸೌಲಭ್ಯಗಳ ಬಗ್ಗೆ ಪ್ರವಾಸಿಗರ ಬಳಿ ಕೇಳಿ ತಿಳಿದು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಸಚಿವರು ಸಸ್ಯಾಹಾರಿ, ಮಾಂಸಾಹಾರಿ ಸಫಾರಿ ಹಾಗೂ ಚಿಟ್ಟೆ ಪಾರ್ಕ್ ಗೆ ಭೇಟಿಕೊಟ್ಟು ಪ್ರಾಣಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಆನೆ ಸಫಾರಿಯಲ್ಲಿ ಆನೆಯ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ಇನ್ನು ಸಫಾರಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಗುಣಮಟ್ಟವನ್ನು ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಉದ್ಯಾನವನದಲ್ಲಿ ಹೆಚ್ಚಿನ ಬಯಲು ಪ್ರದೇಶ ಇದ್ದು, ಅಲ್ಲಿ ಮರಗಳನ್ನು ಬೆಳೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಜೊತೆಗೆ ಮೃಗಾಲಯ ಹಾಗೂ ಸಫಾರಿಗಳ ಮುಖ್ಯದ್ವಾರದ ಬಳಿ ಉದ್ಯಾನವನ ಹಾಗೂ ಕಿರು ಜಲಪಾತಗಳು ಸೃಷ್ಟಿಸಿ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸುವಂತೆ ತಿಳಿಸಿದ್ದೇವೆ. ಬಹಳ ವರ್ಷಗಳಿಂದ ಇಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಖಾಯಂಗೊಳಿಸುವುದಾಗಿ ತಿಳಿಸಿದರು.

  • ಹಿಂಬಾಗಿಲಿನ ಮೂಲಕ ಬಿಎಸ್‍ವೈ ಮನೆಗೆ ಎಂಟ್ರಿ ಕೊಟ್ಟ ಪಕ್ಷೇತರ ಶಾಸಕ

    ಹಿಂಬಾಗಿಲಿನ ಮೂಲಕ ಬಿಎಸ್‍ವೈ ಮನೆಗೆ ಎಂಟ್ರಿ ಕೊಟ್ಟ ಪಕ್ಷೇತರ ಶಾಸಕ

    ಬೆಂಗಳೂರು: ವಿಧಾನ ಸಭಾ ಚುನಾವಣಾ ಫಲಿತಾಂಶದ ಬಳಿಕ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇತ್ತ 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಮುಂದಿನ ನಡೆ ಏನೆಂಬುದರ ಬಗ್ಗೆ ತೀವ್ರ ಕೂತುಹಲವನ್ನು ಹುಟ್ಟುಹಾಕಿದೆ.

    ಇಂದು ಕೂಡ ಬೆಳ್ಳಂಬೆಳಗ್ಗೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಪಕ್ಷೇತರ ಶಾಸಕ ಶಂಕರ್ ರನ್ನು ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮನೆಗೆ ಈಶ್ವರಪ್ಪ ಕರೆದುಕೊಂಡು ಬಂದಿದ್ದಾರೆ.

    ರಾಣೆಬೆನ್ನೂರು ನೂತನ ಶಾಸಕ ಆರ್.ಶಂಕರ್ ಬಿಎಸ್ ವೈ ನಿವಾಸಕ್ಕೆ ಹಿಂಬಾಗಿಲಿನಿಂದ ಆಗಮಿಸಿದ್ದಾರೆ. ಇವರನ್ನು ಈಶ್ವರಪ್ಪ ಕರೆತಂದಿದ್ದು, ಈಶರಪ್ಪ ಮಾತ್ರ ಮುಂಬಾಗಿಲಿನಿಂದ ಬಂದಿದ್ದಾರೆ. ಅಷ್ಟೇ ಅಲ್ಲದೇ ಇವರು ಈಶ್ವರಪ್ಪ ಸಂಬಂಧಿಯೂ ಕೂಡ ಆಗಿದ್ದಾರೆ. ಇಂದು ಸುಮಾರು 8 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಎಲ್ಲ ನೂತನ ಶಾಸಕರನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಆಹ್ವಾನ ಕೊಟ್ಟಿದ್ದಾರೆ.

    ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ರಾಜ್ಯಪಾಲರನ್ನ ಮತ್ತೊಮ್ಮೆ ಭೇಟಿ ಮಾಡಲು ಕಾಂಗ್ರೆಸ್ ಜೆಡಿಎಸ್ ತೀರ್ಮಾನ ಮಾಡಿದೆ. ರಾಜ್ಯಪಾಲರು ಬಹುಮತ ಸಾಬೀತು ಪಡಿಸಲು ಅವಕಾಶ ನೀಡದಿದ್ದರೆ. ಆಪರೇಷನ್ ಕಮಲದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಕೇರಳದ ಕೊಚ್ಚಿನ್ ರೆಸಾರ್ಟ್ ಗೆ ಶಿಫ್ಟ್ ಆಗಲು ಕಾಂಗ್ರೆಸ್ ತೀರ್ಮಾನ ಮಾಡಿದ್ದು, ಪ್ರತ್ಯೇಕ ಬಸ್ ಮೂಲಕ ಕಾಂಗ್ರೆಸ್ ನಾಯಕರು ಕೊಚ್ಚಿನ್ ಗೆ ಶಿಫ್ಟ್ ಆಗುವ ಸಿದ್ಧತೆ ನಡೆಯುತ್ತಿದೆ ಎಂದು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ರಾಜ್ಯದ ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ದೂರ ತಳ್ಳಿದ್ದಾರೆ. ರಾಜ್ಯದ ಜನ ಬಿಜೆಪಿಗೆ ದೊಡ್ಡ ಬೆಂಬಲ ನೀಡಿದ್ದಾರೆ. ಕಾಂಗ್ರ್ರೆಸ್ ಮತ್ತು ಜೆಡಿಎಸ್ ಹಿಂಬಾಗಿಲಿನಿಂದ ಸರ್ಕಾರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ನಾವು ಯಾವುದೇ ಶಾಸಕರನ್ನ ಸಂಪರ್ಕಿಸಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರೇ ನಮ್ಮನ್ನ ಸಂಪರ್ಕಿಸಿದ್ದಾರೆ. ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಬೇಕಿಲ್ಲ. ಅವರಾಗಿ ಬಂದಿದ್ದಾರೆ. ಯಾರು ಎಷ್ಟು ಅಂತಾ ಈಗ ಹೇಳಲ್ಲ. ಆದರೆ ಶಾಸಕ ಶಂಕ್‍ರ್ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.