Tag: Shamant

  • ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‍ನಲ್ಲಿ ಬ್ರೋ ಗೌಡ ಫುಲ್ ಮಿಂಚಿಂಗ್

    ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‍ನಲ್ಲಿ ಬ್ರೋ ಗೌಡ ಫುಲ್ ಮಿಂಚಿಂಗ್

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಖ್ಯಾತಿಯ ಬ್ರೋ ಗೌಡ ಶಮಂತ್ ಸದಾ ವಿಭಿನ್ನವಾದ ಲುಕ್‍ನಲ್ಲಿ ಆಗಾಗ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್ ತೊಟ್ಟು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಮಿಂಚುತ್ತಿದ್ದಾರೆ.

    shamanth

    ಬಿಗ್‍ಬಾಸ್ ಸೀಸನ್-8 ಆರಂಭದಿಂದ ಕೊನೆಯವರೆಗೂ ಸದಾ ವೆರೈಟಿ ಡ್ರೆಸ್‍ಗಳನ್ನು ತೊಡುವ ಮೂಲಕ ಶಮಂತ್ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದರು. ಅಲ್ಲದೇ ಬಿಗ್‍ಬಾಸ್ ವಾರದ ಪಂಚಾಯತಿ ಕಟ್ಟೆಯಲ್ಲಿ ಶಮಂತ್ ಹೇರ್ ಸ್ಟೈಲ್ ಹಾಗೂ ಉಡುಪಿನ ಬಗ್ಗೆ ಹಲವು ಭಾರೀ ಚರ್ಚೆಗಳು ಕೂಡ ನಡೆದಿದೆ. ಜೊತೆಗೆ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ ವೇಳೆ ವೇದಿಕೆ ಮೇಲೆ ಎಂಟ್ರಿ ಕೊಟ್ಟಾಗ ಶಮಂತ್ ಧರಿಸಿದ್ದ ಯೆಲ್ಲೋ ಡ್ರೆಸ್ ಭಾರೀ ಸದ್ದು ಮಾಡಿತ್ತು. ಇದನ್ನೂ ಓದಿ: ಫುಲ್ ಒಳ್ಳೆ ಹುಡುಗನ ರೀತಿ ಡವ್ ಎಂದ ಬ್ರೊ ಗೌಡ

    ಬಿಗ್‍ಬಾಸ್ ನಂತರ ಇತ್ತೀಚೆಗಷ್ಟೇ ಕೆಂಪು ಬಣ್ಣದ ನ್ಯೂ ಸ್ಟೈಲ್ ಕುರ್ತಾ ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದ ಶಮಂತ್ ಇದೀಗ ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್ ತೊಟ್ಟು ಫೋಟೋಗೆ ಪೋಸ್ ಕೊಡುತ್ತಾ ಸಖತ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.

    ಈ ಫೋಟೋವನ್ನು ಶಮಂತ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಅರ್ಧ ಭಾಗ ಕಪ್ಪು ಹಾಗೂ ಇನ್ನೂ ಅರ್ಧ ಭಾಗ ಬಿಳಿ ಬಣ್ಣದ ಜಾಕೆಟ್ ಧರಿಸಿದ್ದಾರೆ. ಜೊತೆಗೆ ಅದಕ್ಕೆ ಸೂಟ್ ಆಗುವಂತೆ ಅರ್ಧ ಭಾಗ ಬಿಳಿ ಮತ್ತೆ ಅರ್ಧ ಭಾಗ ಕಪ್ಪು ಬಣ್ಣದ ಪ್ಯಾಂಟ್‍ನನ್ನು ಧರಿಸಿದ್ದಾರೆ. ಅಷ್ಟಲ್ಲದೇ ಬ್ಲಾಕ್ ಆ್ಯಂಡ್ ವೈಟ್ ಜೀವನ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಸೀಸನ್-15 – 350 ಕೋಟಿ ಸಂಭಾವಣೆ ಪಡೆಯಲಿದ್ದಾರೆ ಸಲ್ಮಾನ್ ಖಾನ್!

    ಒಟ್ಟಾರೆ ಶಮಂತ್ ಹೊಸ ಡ್ರೆಸ್‍ಗೆ ಕೆಲವರು ಸೂಪರ್ ಅಂತ ಕಾಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ಜಾತ್ರೆಯಂತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ನಂಗೆ ಗೊತ್ತು ನೀವು ಅತ್ತಿದ್ದೀರಿ – ಪೆಟ್ಟಾದರೂ ಕೆಪಿಗೆ ಸಮಾಧಾನ ಹೇಳಿದ ಕೆ

    ನಂಗೆ ಗೊತ್ತು ನೀವು ಅತ್ತಿದ್ದೀರಿ – ಪೆಟ್ಟಾದರೂ ಕೆಪಿಗೆ ಸಮಾಧಾನ ಹೇಳಿದ ಕೆ

    ಬಿಗ್‍ಬಾಸ್ ನೀಡಿದ್ದ ಹೀಗೂ ಅಂಟೆ ಟಾಸ್ಕ್ ವೇಳೆ ದಿವ್ಯಾ ಉರುಡುಗ(ಕವನ) ಕೈಗೆ ಪೆಟ್ಟಾಗಿದ್ದಕ್ಕೆ ಅರವಿಂದ್ ಕೆ.ಪಿ ಬೇಸರಗೊಂಡಿದ್ದಾರೆ.

    ಬಿಗ್ ಬಾಸ್ ‘ಹೀಗೂ ಅಂಟೆ’ ಎಂಬ ಟಾಸ್ಕ್‌ನನ್ನು ನೀಡಿದ್ದರು. ಈ ಟಾಸ್ಕ್‌ನಲ್ಲಿ ಎರಡು ತಂಡದ ಒಬ್ಬೊಬ್ಬ ಸದಸ್ಯರು ಬಿಗ್‍ಬಾಸ್ ನೀಡುವ ಜಾಕೆಟ್ ತೊಡಬೇಕು ಹಾಗೂ ಎದುರಾಳಿ ತಂಡದವರು ಆ ಜಾಕೆಟ್‍ಗೆ ಸ್ಟಾರ್ ಒಂದನ್ನು ಅಂಟಿಸಬೇಕು ಎಂದು ಸೂಚಿಸಿದ್ದರು.

    ಅದರಂತೆ ವಿಜಯಯಾತ್ರೆ ತಂಡದ ಅರವಿಂದ್ ಜಾಕೆಟ್ ತೊಟ್ಟು ಆಟ ಆಡುವಾಗ, ದಿವ್ಯಾ ಉರುಡುಗ ಮಂಜು ಹಾಗೂ ದಿವ್ಯಾ ಸುರೇಶ್ ಸ್ಟಾರ್ ಅಂಟಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ಅರವಿಂದ್ ದಿವ್ಯಾ ಉರುಡುಗ ಮೇಲೆ ಜೋರಾಗಿ ಬೀಳುತ್ತಾರೆ. ಟಾಸ್ಕ್ ನಂತರ ನಾನು ಬಹಳ ಜೋರಾಗಿ ಓಡಿ ಬರಬೇಕಾದರೆ ನನ್ನನ್ನು ತಡೆಯಲು ಬರಬೇಡ ಏಟಾಗುತ್ತದೆ ಎಂದು ಒಂದು ಬಾರಿ ದಿವ್ಯಾ ಉರುಡುಗಗೆ ಎಚ್ಚರಿಸುತ್ತಾರೆ.

    ನಂತರ ನಿಂಗೈತೆ ಇರು ತಂಡದಿಂದ ಜಾಕೆಟ್ ತೊಟ್ಟ ಆಟ ಆಡಲು ದಿವ್ಯಾ ಉರುಡುಗ ಆರಂಭಿಸುತ್ತಾರೆ. ಈ ವೇಳೆ ಅರವಿಂದ್ ದಿವ್ಯಾ ಉರುಡುಗಗೆ ಸ್ಟಾರ್ ಅಂಟಿಸಲು ಪ್ರಯತ್ನಿಸುತ್ತಿರುತ್ತಾರೆ. ಆಗ ಚಕ್ರವರ್ತಿ ದಿವ್ಯಾ ಉರುಡುಗರನ್ನು ಸೇವ್ ಮಾಡಲು ಹೋಗಿ ಗಾರ್ಡನ್ ಏರಿಯಾದಲ್ಲಿದ್ದ ಗಾಜಿಗೆ ದಿವ್ಯಾ ಉರುಡುಗ ಕೈ ತಗುಲಿ ಪೆಟ್ಟಾಗುತ್ತದೆ. ನಂತರ ಮನೆಯ ಎಲ್ಲ ಸದಸ್ಯರು ದಿವ್ಯಾ ಉರುಡುಗರಿಗೆ ಸಮಾಧಾನ ಪಡಿಸುತ್ತಾರೆ ಮತ್ತು ಕನ್ಫೆಷನ್ ರೂಮ್‍ಗೆ ಅರವಿಂದ್ ದಿವ್ಯಾ ಉರುಡುಗರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಾರೆ. ಬಳಿಕ ನಾನು ಅವಳನ್ನು ಸೇವ್ ಮಾಡಿ ಡೈರೆಕ್ಷನ್ ಚೇಂಜ್ ಮಾಡಲು ಪ್ರಯತ್ನಿಸಿದೆ ಆದರೆ ಈ ರೀತಿ ಆಯ್ತು ಎಂದು ಚಕ್ರವರ್ತಿ ಮನೆಯ ಸದಸ್ಯರಿಗೆ ತಿಳಿಸುತ್ತಾರೆ.

    ಬಳಿಕ ಚಿಕಿತ್ಸೆ ಪಡೆದು ವಾಪಸ್ ಬಂದ ದಿವ್ಯಾ ಉರುಡುಗರನ್ನು ಕಂಡು ಅರವಿಂದ್ ತಬ್ಬಿಕೊಂಡು ಅರವಿಂದ್ ನಿಟ್ಟುಸಿರು ಬಿಟ್ಟು, ದಿವ್ಯಾ ಉರುಡುಗರನ್ನು ಸಮಾಧಾನ ಪಡಿಸುತ್ತಾರೆ. ನಂತರ ದಿವ್ಯಾ ಉರುಡುಗ ಅರವಿಂದ್ ಕೆನ್ನೆಯನ್ನು ಕ್ಯೂಟ್ ಆಗಿ ಹಿಡಿದುಕೊಂಡು, ನನಗೆ ಹೀಗೆ ಪೆಟ್ಟಾಗಿದಕ್ಕೆ ಅತ್ರಾ ಎಂದು ಕೇಳುತ್ತಾರೆ. ಇದಕ್ಕೆ ಅರವಿಂದ್ ಇಲ್ಲ ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ನನಗೆ ನಿಮ್ಮ ಧ್ವನಿ ಅತ್ತಿರುವಂತೆ ಕೇಳಿಸುತ್ತಿದೆ. ನನಗೆ ಗೊತ್ತು, ನೀವು ಅತ್ತಿದ್ದೀರಾ ಎಂದು ಹೇಳುತ್ತಾರೆ.

    ಆಗ ಅರವಿಂದ್ ನಿನಗೆ ಏಟಾಗಿದ್ಯಾಲ್ಲ ಅದಕ್ಕೆ ನನ್ನ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ ಎಂದು ಅಣಿಕಿಸಿ, ಜೀವ ಬಾಯಿಗೆ ಬಂದು ಬಿಟ್ಟಿತ್ತು. ಹೊಟ್ಟೆ ಬಳಿ ನೋಡಿದರೆ ರಕ್ತ ಇತ್ತು. ಅದು ಎಲ್ಲಿಂದ ಎಂದು ಗೊತ್ತಾಗುತ್ತಿರಲಿಲ್ಲ ಎಂದು ಗಾಬರಿಗೊಂಡಿದ್ದಾಗಿ ಅರವಿಂದ್ ದಿವ್ಯಾ ಉರುಡುಗಗೆ ಹೇಳಿದ್ದಾರೆ. ನಂತರ ಶಮಂತ್, ದಿವ್ಯಾ ಉರುಡುಗ ಮತ್ತು ಅರವಿಂದ್ ಇದೇ ವಿಚಾರವಾಗಿ ಕುಳಿತು ಚರ್ಚೆ ನಡೆಸುತ್ತಿರುವ ವೇಳೆ ನಾನು ಮೊದಲ ಬಾರಿಗೆ ಅರವಿಂದ್‍ರವರ ವಾಯ್ಸ್ ವೊಂದನ್ನು ಕೇಳಿದೆ, ಅದು ಹತ್ತು ಸೆಕೆಂಡ್, ಶೇಕಿಂಗ್ ವಾಯ್ಸ್ ಆಗಿತ್ತು ಎನುತ್ತಾರೆ. ಆಗ ಅರವಿಂದ್ ಹೌದು ಎಂದು ಹೇಳುತ್ತಾ ಕಣ್ಣಿನ ಅಂಚಲಿನಲ್ಲಿ ನೀರು ತುಂಬಿಕೊಳ್ಳುತ್ತಾರೆ. ಆಗ ದಿವ್ಯಾ ಉರುಡುಗ ಅರವಿಂದ್‍ರನ್ನು ತಬ್ಬಿಕೊಂಡು ಸಮಾದಾನ ಪಡಿಸುತ್ತಾರೆ.

    ದಿವ್ಯಾ ಅವರನ್ನು ಮನೆಯಲ್ಲಿ ಕವನ ಎಂದು ಕರೆಯುತ್ತಾರೆ. ಹೀಗಾಗಿ ಅರವಿಂದ್ ಶಾರ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ‘ಕೆ’ ಎಂದು ಕರೆಯುತ್ತಾರೆ. ಇದನ್ನೂ ಓದಿ:ನನ್ನ ಎದುರಾಕ್ಕೊಂಡವರು ಮಂಡಿ ಬಗ್ಗಿಸಿ ನಡೀಬೇಕು- ಶುಭಾ ವಿರುದ್ಧ ಮಂಜು ರಿವೇಂಜ್

  • ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

    ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

    ಪ್ರತಿ ದಿನ ದೊಡ್ಮನೆ ಮಂದಿಗೆ ಒಂದಲ್ಲ ಒಂದು ಟಾಸ್ಕ್ ನೀಡುವ ಬಿಗ್‍ಬಾಸ್ 15ನೇ ದಿನದಂದು ಚಿನ್ನದ ಮೊಟ್ಟೆ ಟಾಸ್ಕ್ ನೀಡಿದ್ದರು. ಈ ವೇಳೆ ಗೆದ್ದ ಚಕ್ರವರ್ತಿ, ಮಂಜು, ದಿವ್ಯಾ ಸುರೇಶ್, ಅರವಿಂದ್ ಹಾಗೂ ಶಮಂತ್‍ರವರಿಗೆ ಹೆಚ್ಚುವರಿಯಾಗಿ ಬಿಗ್‍ಬಾಸ್ ಒಂದು ಚಿನ್ನದ ಮೊಟ್ಟೆ ನೀಡಿ, ಅದನ್ನು ಮನೆಯ ಯಾವುದೇ ಸದಸ್ಯರ ತಲೆಯ ಮೇಲೆ ಹೊಡೆದರೆ ಆ ಸದಸ್ಯರ ಲಾಕರ್‍ನಲ್ಲಿರುವ ಹಣ ಮೊಟ್ಟೆ ಹೊಡೆದವರ ಪಾಲಾಗುತ್ತದೆ ಎಂದು ಸೂಚಿಸಿದ್ದರು.

    ಹೀಗಾಗಿ ಚಕ್ರವರ್ತಿ, ಮಂಜು, ದಿವ್ಯಾ ಸುರೇಶ್, ಅರವಿಂದ್ ಹಾಗೂ ಶಮಂತ್ ಮನೆಯ ಇತರ ಸದಸ್ಯರಿಗೆ ಮೊಟ್ಟೆ ಹೊಡೆಯಲು ಪ್ಲಾನ್ ಮಾಡುತ್ತಾರೆ. ಈ ವೇಳೆ ವೈಷ್ಣವಿ, ಶುಭಾ, ಪ್ರಿಯಾಂಕ್ ಬಾತ್ ರೂಮ್‍ನಲ್ಲಿ ಅವಿತುಕೊಂಡಿರುತ್ತಾರೆ. ನಂತರ ಬಾತ್ ರೂಮ್ ಬಾಗಿಲು ತೆಗೆದುಕೊಂಡಿದ್ದ ಪ್ರಿಯಾಂಕರ ಬೆನ್ನ ಹಿಂದೆ ಶಮಂತ್ ಬೀಳುತ್ತಾರೆ. ಅಲ್ಲಿಂದ ತಪ್ಪಿಸಿಕೊಂಡು ಸ್ವಿಮಿಂಗ್ ಪೂಲ್‍ಗೆ ಬಿದ್ದ ಪ್ರಿಯಾಂಕರನ್ನು ಅಟ್ಟಾಡಿಸಿಕೊಂಡು ದಿವ್ಯಾ ಸುರೇಶ್ ಮೊಟ್ಟೆ ಹೊಡೆಯುತ್ತಾರೆ. ಈ ವೇಳೆ ರೊಚ್ಚಿಗೆದ್ದ ಪ್ರಿಯಾಂಕ ದಿವ್ಯಾ ಸುರೇಶ್ ಬೆನ್ನ ಮೇಲೆ ಹೊಡೆಯುತ್ತಾರೆ. ಇದಕ್ಕೆ ದಿವ್ಯಾ ಸುರೇಶ್ ನನಗೆ ಯಾಕೆ ಹೊಡೆದೆ ಎಂದು ಪ್ರಶ್ನಿಸಿದಾಗ, ನೀನು ಏನು ಮಾಡಿದ್ದು ಎಂದು ಪ್ರಿಯಾಂಕ ತಿಮ್ಮೇಶ್ ಕಿಡಿಕಾರಿದ್ದಾರೆ.

    ನಂತರ ಬಿಗ್‍ಬಾಸ್ ನೀರಿನಲ್ಲಿದ್ದಾಗ ಹೊಡೆದಿದ್ದಾರೆ ಎಂದು ಹೇಳುತ್ತಾ ಮನೆಯ ಒಳಗೆ ಸಿಟ್ಟಿನಿಂದ ಹೋಗಿ ಪ್ರಿಯಾಂಕ ತಿಮ್ಮೇಶ್ ದಿವ್ಯಾ ಸುರೇಶ್ ಪೆಟ್ಟಿಗೆಯಲ್ಲಿದ್ದ ಹಣವನ್ನು ಹಾಳು ಮಾಡುತ್ತಾರೆ. ಬಳಿಕ ಸ್ವಿಮಿಂಗ್ ಪೂಲ್‍ಗೆ ಮತ್ತೆ ಇಳಿದ ಪ್ರಿಯಾಂಕ ಮೊಟ್ಟೆ ಹೊಡೆಯುವುದು ದೊಡ್ಡ ವಿಚಾರವಲ್ಲ. ನನಗೆ ಪೆಟ್ಟಾಗುವುದು ಇರುತ್ತದೆ. ಪರಾಚುವುದು ಇರುತ್ತದೆ ಎಂದು ಶಮಂತ್‍ಗೆ ಹೇಳುತ್ತಿರುತ್ತಾರೆ. ಈ ವೇಳೆ ನಾನು ಅವನಿಗೆ ಮೊಟ್ಟೆ ಹೊಡೆಯಲು ಹೇಳಿದೆ ಎಂದು ಚಕ್ರವರ್ತಿಯವರು ಮಧ್ಯೆ ಮಾತನಾಡಿದಾಗ, ನಾನು ಶಮಂತ್ ಹತ್ತಿರ ಮಾತಾಡುತ್ತಿದ್ದೇನೆ ನಿಮ್ಮ ಹತ್ತಿರ ಇಲ್ಲ ಎಂದು ಪ್ರಿಯಾಂಕ ಹೇಳಿದಾಗ, ನಾನು ಶಮಂತ್ ಹತ್ತಿರನೇ ಹೇಳುತ್ತಿದ್ದೇನೆ ಎಂದು ಚಕ್ರವರ್ತಿ ಹೇಳುತ್ತಾರೆ.

    ಇದಕ್ಕೆ ಹೇ.. ಎಂದು, ನೀವೇಕೆ ಮಾತನಾಡುತ್ತಿದೀರಾ ಸುಮ್ಮನೆ ಎಂದು ಪ್ರಿಯಾಂಕ ಚಕ್ರವರ್ತಿ ವಿರುದ್ಧ ಹರಿಹಾಯ್ದಿದ್ದಾರೆ. ಆಗ ಚಕ್ರರ್ತಿಯವರು ನಾನು ನಿನ್ನ ಹತ್ತಿರ ಮಾತನ್ನೇ ಆಡುತ್ತಿಲ್ಲ. ಕಿರುಚಾಡ ಬೇಡ. ನಾನು ಶಮಂತ್ ಹತ್ತಿರ, ಮೊಟ್ಟೆ ಇರುವವರ ಹತ್ತಿರ ಹೇಳುತ್ತಿದ್ದೇನೆ, ನಿನ್ನ ಬಳಿ ಮಾತನಾಡುತ್ತಲೇ ಇಲ್ಲ. ಕೂಗಾಡಿ ಸೀನ್ ಕ್ರಿಯೆಟ್ ಮಾಡಬೇಡ. ನನಗೂ ನಿನಗೂ ವಿಷಯವೇ ಇಲ್ಲ. ನೀನು ಏನಾದರೂ ಮಾಡಿಕೋ, ಕಿರುಚಿಕೋ, ನನ್ನ ಈ ವಿಚಾರಕ್ಕೆ ಎಳೆಯಬೇಡ, ತೆಗೆದುಕೊಂಡರೆ ಕೆಟ್ಟದಾಗಿ ಮಾತನಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:ಆಲೂಗಡ್ಡೆಯಿಂದ ತಯಾರಿಸಿ ರುಚಿಯಾದ ಬೆಳಗ್ಗಿನ ಟಿಫನ್

  • ದೊಡ್ಮನೆ ಕುಚುಕು ಗೆಳೆಯರ ಮಧ್ಯೆ ಬಿಗ್ ಫೈಟ್

    ದೊಡ್ಮನೆ ಕುಚುಕು ಗೆಳೆಯರ ಮಧ್ಯೆ ಬಿಗ್ ಫೈಟ್

    ಬಿಗ್‍ಬಾಸ್ ಮನೆಯಲ್ಲಿ ಕುಚುಕ ಗೆಳೆಯರು ಅಂದರೆ ಅದು ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್. ದೊಡ್ಮನೆಯಲ್ಲಿ ಎಲ್ಲಿ ನೋಡಿದರೂ ಒಟ್ಟಿಗೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವ ಇವರಿಬ್ಬರ ಮಧ್ಯೆ ಟಾಸ್ಕ್ ವೇಳೆ ಜೋರಾದ ವಾಗ್ವಾದ ನಡೆದಿದೆ.

    ಹೌದು, ಬಿಗ್‍ಬಾಸ್ ಮನೆಯಲ್ಲಿ ಮೈಂಡ್ ಗೇಮ್ ಆಡುತ್ತಿರುವ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಇಬ್ಬರು ಸದಾ ಮನೆಯ ಎಲ್ಲಾ ಸ್ಪರ್ಧಿಗಳ ಕಮೆಂಟ್ ಪಾಸ್ ಮಾಡುತ್ತಾ, ಚುರುಕಾಗಿ ಆಟ ಆಡುತ್ತಿದ್ದಾರೆ. ಇಷ್ಟು ದಿನ ಮನೆಯ ಸ್ಪರ್ಧಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ ಈ ಜೋಡಿ, ಇದಿಗ ನೀನಾ – ನಾನಾ ಎಂದು ಜಗಳಕ್ಕೆ ನಿಂತಿದ್ದಾರೆ.

    ಎರಡು ತಂಡಗಳು ತಲಾ ಮೂರು ಸ್ಟಾರ್ ಪಡೆದ ಹಿನ್ನೆಲೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‍ಗಾಗಿ ಮನೆಯ ಸದಸ್ಯರಿಗೆ ಬಿಗ್ ಬಾಸ್ ಮತ್ತೊಂದು ಟಾಸ್ಕ್ ನೀಡಿದ್ದರು. ಡ್ರಮ್‍ನಲ್ಲಿ ತುಂಬಿಸಿದ್ದ ನೀರನ್ನು ಮಗ್‍ನಲ್ಲಿ ತುಂಬಿಸಿಕೊಂಡು ಹೋಗಿ ಕೊನೆಯಲ್ಲಿ ಇರಿಸಲಾಗಿರುವ ಜಾರ್‍ಗೆ ತುಂಬಿಸಬೇಕು ಎಂದು ಬಿಗ್‍ಬಾಸ್ ಟಾಸ್ಕ್‍ವೊಂದನ್ನು ನೀಡಿದ್ದರು. ಈ ವೇಳೆ ಶಮಂತ್ ಆಟ ಆಡುವಾಗ ಫೌಲ್ ಆಗುತ್ತಾರೆ. ಇದರಿಂದ ಕೋಪಗೊಂಡ ಚಕ್ರವರ್ತಿ ಚಂದ್ರಚೂಡ್, ಶಮಂತ್ ಫಾಲ್ ಮಾಡಬೇಡ್ವೋ, ಫೌಲ್ ಮಾಡ್ಬೇಡಿ ಎಂದು ಕಿರುಚಾಡುತ್ತಾರೆ. ಇದರಿಂದ ರೊಚ್ಚಿಗೆದ್ದ ಪ್ರಶಾಂತ್ ಸಂಬರಗಿ ಬಜರ್ ಆದ ನಂತರ ಯಾಕೆ ಬೈಯ್ಯಬೇಕು ಎಂದು ಕಿಡಿಕಾರಿದ್ದಾರೆ.

    ಈ ನಡುವೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಜಗಳ ಬಿಡಿಸಿ ಸಮಾಧಾನಗೊಳಿಸಲು ಮಧ್ಯೆ ಬಂದ ಅರವಿಂದ್‍ಗೆ ಕೇರ್ ಮಾಡದೇ ಚಕ್ರವರ್ತಿ ಚಂದ್ರಚೂಡ್ ಜಗಳ ಮುಂದುವರೆಸಿದ್ದಾರೆ. ಗೇಮ್ ಮುಗಿದ ನಂತರ ನನಗೆ ಬಂದು ಹೇಳಿದ್ದು ಇಷ್ಟ ಆಗಲಿಲ್ಲ ಎಂದು ಶಮಂತ್ ಹೇಳಿದ್ದಾರೆ.

    ನಂತರ ಗುರುವಾರ ಬಿಗ್‍ಬಾಸ್ ನೀಡಿದ್ದ ನೆನಪಿರಲಿ ಟಾಸ್ಕ್ ವೇಳೆ ನೀವು ಮಾಡಿದ ಯಡವಟ್ಟಿನಿಂದ ನಾವು ಸೋತ್ತಿದ್ವಿ. ಆದರೆ ಯಾರು ಕೂಡ ಏನು ಮಾತನಾಡಲಿಲ್ಲ ಎಂದು ದಿವ್ಯಾ ಉರುಡುಗ ಹರಿಹಾಯ್ದಿದ್ದಾರೆ. ಈ ವೇಳೆ ಬಜರ್ ಆದ ನಂತರ ನಾನು ಸರಿಯಾಗಿ ಆಡಿದ್ದೇನೆ ಎಂದು ತೋರಿಸಿಕೊಳ್ಳುವುದು ಎಂದು ಪ್ರಶಾಂತ್ ಸಂಬರಗಿ ಚಕ್ರವರ್ತಿ ಚಂದ್ರಚೂಡ್‍ಗೆ ಅಣುಕಿಸಿದ್ದಾರೆ.

    ಇದಕ್ಕೆ ರೊಚ್ಚಿಗೆದ್ದ ಚಕ್ರವರ್ತಿಯವರು ಬಜರ್ ಆದ ಮೆಲೆ ಅವನಿಗೆ ಹೇಳುತ್ತೇನೆ. ಏನು ಮಾಡುತ್ತಿಯಾ ತಿರುಗೇಟು ನೀಡಿದ್ದಾರೆ. ನಂತರ ಚಕ್ರವರ್ತಿಯವರನ್ನು ಸಮಾಧಾನಗೊಳಿಸಲು ಹೆಗಲ ಮೇಲೆ ಕೈ ಹಾಕಲು ಬಂದ ಪ್ರಶಾಂತ್ ಸಂಬರಗಿಯನ್ನು ಜೋರಾಗಿ ತಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಡಿಯುಗೆ ಅರೆ..ಅರೆ.. ಮುದ್ದು ಗಿಳಿ ಎಂದ ಅರವಿಂದ್

  • ನಾ ನಿನ್ನ ಮರೆಯಲಾರೆ ರೀತಿ ತೆರೆಮೇಲೆ ಬರಲಿದ್ಯಾಂತೆ ಅರ್ವಿಯಾ ಸಿನಿಮಾ

    ನಾ ನಿನ್ನ ಮರೆಯಲಾರೆ ರೀತಿ ತೆರೆಮೇಲೆ ಬರಲಿದ್ಯಾಂತೆ ಅರ್ವಿಯಾ ಸಿನಿಮಾ

    ಬಿಗ್‍ಬಾಸ್ ಮನೆಯ ಕ್ಯೂಟ್ ಪೇರ್ ಅಂದರೆ ಅರವಿಂದ್, ದಿವ್ಯಾ ಉರುಡುಗ. ಕಳೆದ ಇನ್ನಿಂಗ್ಸ್ ವೇಳೆ ಈ ಮುದ್ದಾದ ಜೋಡಿ ನಡುವೆ ಇರುವ ಪ್ರೀತಿ, ಹೊಂದಾಣಿಕೆ ಹಾಗೂ ಕಾಳಜಿ ನೋಡಿ ಮನೆಮಂದಿಯೆಲ್ಲಾ ಇವರಿಬ್ಬರು ಒಂದಾದರೆ ಎಷ್ಟು ಚೆಂದ ಎಂದು ಮಾತನಾಡಿಕೊಂಡಿದ್ದರು.

    ಇದೀಗ ಚಕ್ರವರ್ತಿ ಚಂದ್ರಚೂಡ್‍ರವರು ಅರವಿಂದ್, ದಿವ್ಯಾ ಬಗ್ಗೆ ತಮಗಿರುವ ಆಸೆಯನ್ನು ಹೊರಹಾಕಿದ್ದಾರೆ. ಎರಡನೇ ಇನ್ನಿಂಗ್ಸ್ ನ 9ನೇ ದಿನ ಬೆಡ್ ರೂಮ್ ಏರಿಯಾದಲ್ಲಿ ಅರವಿಂದ್, ದಿವ್ಯಾ ಉರುಡುಗ, ಚಕ್ರವರ್ತಿ, ಪ್ರಶಾಂತ್ ಸಂಬರಗಿ ಹಾಗೂ ಶಮಂತ್ ಕುಳಿತುಕೊಂಡಿರುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್‍ರವರು ಸಿನಿಮಾ ಕಥೆಯನ್ನು ಹೇಳಿದ್ದಾರೆ.

    ಅರವಿಂದ್, ದಿವ್ಯಾ ಉರುಡುಗ ಸಿನಿಮಾ ಮಾಡಬೇಕು. ಇವರಿಬ್ಬರಿಗೂ 10 ನಿಮಿಷದಲ್ಲಿ ಕಥೆ ಕೊಡುತ್ತೇನೆ. ಬೈಕ್ ಮೇಲೆಯೇ ಕಥೆ ಕೊಡುತ್ತೇನೆ. ನಾ ನಿನ್ನ ಮರೆಯಲಾರೆ ರೀತಿ ಇರಬೇಕು. ಎರಡು ತಿಂಗಳು ಇವರಿಬ್ಬರಿಗೂ ಟ್ರೈನಿಂಗ್ ನೀಡಿ ಮಾಡಿದರೆ ಸರಿಯಾಗಿ ಮಾಡಬಹುದು. ನಾನು ಸಿನಿಮಾವನ್ನು ನಿರ್ದೇಶಿಸುತ್ತೇನೆ. ಶಮಂತ್ ಸಂಗೀತಾ ನೀಡುತ್ತಾನೆ. ಪ್ರಶಾಂತ್ ನಿರ್ಮಾಣ ಮಾಡುತ್ತಾನೆ. ಇನ್ನೂ ಸಿನಿಮಾದ ಟೈಟಲ್ ‘ಅರ್ವಿಯಾ’ ಎಂದು ಹೇಳುತ್ತಾರೆ.

    ಈ ವೇಳೆ ಶಮಂತ್ ನಾನು ಹೀರೋಯಿನ್ ತಮ್ಮ ಎಂದು ಹೇಳುತ್ತಾರೆ. ಆಗ ಚಕ್ರವರ್ತಿ ಚಂದ್ರಚೂಡ್ ನಾನು ನಿನಗೆ ಕ್ಯಾರೆಕ್ಟರ್ ನೀಡುತ್ತೇನೆ ಸುಮ್ಮನೆ ಇರು ಬಾಯಿ ಮುಚ್ಚಿಸುತ್ತಾರೆ. ಆಗ ಪ್ರಶಾಂತ್ ನಾನು ಹೀರೋ ಅಣ್ಣಾನಾ ಎಂದು ಕೇಳುತ್ತಾರೆ. ಕ್ಯಾರೆಕ್ಟರ್ ಬೇಕೆಂದರೆ ಕಥೆ ಆದ ನಂತರ ನನ್ನ ಬಳಿ ರಿಕ್ವೆಸ್ಟ್ ಮಾಡಿಕೊಂಡರೆ ಕೊಡುತ್ತೇನೆ ಎಂದು ಹೇಳುತ್ತಾ ನಗುತ್ತಾರೆ.

    ಸಿನಿಮಾದಲ್ಲಿ ಬಿಗ್‍ಬಾಸ್ ಮನೆಯಲ್ಲಿ ರಿಂಗ್ ನೀಡಿ ಇಬ್ಬರು ಹೇಗೆ ಒಂದಾದರೋ ಅದೊಂದು ಎಪಿಸೋಡ್ ತೆಗೆದುಕೊಳ್ಳಬಹುದು. ನಾನು ಮಾಡೇ ಮಾಡುತ್ತೇನೆ. ಹೊರಗಡೆ ಹೋಗಿದ ತಕ್ಷಣ ನೀವು ಎರಡು ತಿಂಗಳಿನಲ್ಲಿ ರೆಡಿಯಾಗಬೇಕು. ಅರವಿಂದ್‍ಗೆ ಆ್ಯಕ್ಟಿಂಗ್ ಕ್ಲಾಸ್ ನಾನೇ ತೆಗೆದುಕೊಳ್ಳುತ್ತೇನೆ ಅಂತ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ. ಇದನ್ನೂ ಓದಿ:  ನೀನು ನನಗೆ ಅಡ್ವೈಸ್ ಮಾಡಬೇಡ: ನಿಧಿಗೆ ಶುಭಾ ಟಾಂಗ್

  • ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು, ಕೆಟ್ಟವರಿಗೆ ದುಷ್ಟ: ಸಂಬರಗಿ

    ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು, ಕೆಟ್ಟವರಿಗೆ ದುಷ್ಟ: ಸಂಬರಗಿ

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‍ನ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ವೇಳೆ ದಿವ್ಯಾ ಸುರೇಶ್ ಹೇಳಿದ ಒಂದು ಹೇಳಿಕೆಯಿಂದ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಆಕ್ರೋಶಗೊಂಡಿದ್ದಾರೆ.

    ಭಾನುವಾರ ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರನ್ನು ಬಹುಶಃ ನಿನ್ನನ್ನು ಸೆಕ್ಯೂರಿಟಿ ಗಾರ್ಡ್ ಆಗಿ ಕರೆಸಿರಬಹುದು. ಯಾವಾಗಲೂ ಹಿಂದೆ ಮಾತನಾಡುತ್ತಿದ್ದರು ಎಂದು ನಮ್ಮ ಮನೆಯಲ್ಲಿ ಹೇಳುತ್ತಿದ್ದರು ಎಂದು ದಿವ್ಯಾ ಸುರೇಶ್ ಸುದೀಪ್ ಎದುರಲ್ಲಿ ಹೇಳಿದ್ದರು.

    ವಾರದ ಕೊನೆಯಲ್ಲಿ ಪ್ರಶಾಂತ್ ಅವರನ್ನು ಎಲಿಮಿನೆಟ್‍ಗೊಳಿಸಿ ನಂತರ ಮನೆಯ ಸ್ಪರ್ಧಿಗಳಿಗೆ, ಪ್ರಶಾಂತ್ ಅವರು ಸೇವ್ ಆಗಿದ್ದು, ಬಿಗ್‍ಬಾಸ್ ಮುಂದಿನ ಆದೇಶದವರೆಗೂ ಮನೆಯಲ್ಲಿ ಪ್ರಶಾಂತ್ ಕಂಡರೂ ಕಾಣದಂತೆ ವರ್ತಿಸಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದರು. ನಂತರ ಮನೆ ಮಂದಿಯನ್ನೆಲ್ಲಾ ಮಾತನಡಿಸಲು ಸರ್ಕಸ್ ಮಾಡಿದ ಪ್ರಶಾಂತ್ ಜೊತೆಗೆ ಯಾರು ಕೂಡ ಮಾತನಾಡಲಿಲ್ಲ.

    ಈ ವೇಳೆ ದಿವ್ಯಾ ಸುರೇಶ್‍ರನ್ನು ಬಿಡದೇ ಪ್ರಶಾಂತ್ ಸಂಬರ್ಗಿ ಕೆದಕುವ ಪ್ರಯತ್ನ ಮಾಡಿದ್ದಾರೆ. ಡೈನಿಂಗ್ ಹಾಲ್ ಕುಳಿತು ದಿವ್ಯಾ ಸುರೇಶ್ ಟಿಫಿನ್ ಮಾಡುತ್ತಿರುತ್ತಾರೆ. ಆಗ ಪ್ರಶಾಂತ್, ಪ್ರಿಯಾಂಕ ಆಚೆ ಹೋದಾಗ ನನ್ನ ಟಿವಿ ಸಂದರ್ಶನಗಳನ್ನು ನೋಡಿದ್ಯಾ? ಫೇಕ್ ಲವ್ ಸ್ಟೋರಿ ಬಗ್ಗೆ ಹೇಳಿದ್ದೇನೆ. ಅದನ್ನು ಇಲ್ಲಿಯೂ ಒಪ್ಪಿಕೊಂಡಿದ್ದಾರೆ. ಪ್ರಿಯಾಂಕ ಫೇಕ್ ಲವ್ ಸ್ಟೋರಿ ಬಗ್ಗೆ ಕೇಳಿದ್ಯಾ? ಕೃತಕವಾದ ಮೆಕನಿಕಲ್ ಲವ್ ಸ್ಟೋರಿ ಬಗ್ಗೆ ನಾನು ಆಚೆ ಹೇಳಿದ್ದೇನೆ. ಕರ್ನಾಟಕ ಜನತೆ ಮುಂದೆ ಆಡಿರುವ ನಾಟಕ ಒಪ್ಪಿಕೊಂಡಿದ್ದಾರೆ. ಇರುವುದನ್ನು ಹಾಗೇ ನಾನು ಆಚೆ ನೇರವಾಗಿ ಹೇಳಿದರೆ ನಿಷ್ಠುರವಾಗಿ ಕೋಪ ಬರುತ್ತದೆ. ಪ್ರಿಯಾಂಕ ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‍ಗೆ ಎಷ್ಟು ಕೆಲಸ ಗೊತ್ತಾ? ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‍ಗೆ 30 ಸಾವಿರ ಸಂಬಳ ಜೊತೆಗೆ ಮನೆ ಕೂಡ ನೀಡಿದ್ದೇನೆ ಎಂದು ಅಣುಕಿಸಿದ್ದಾರೆ.

    ನಂತರ ಶಮಂತ್ ಕಿವಿಯ ಬಳಿ ಬಂದು ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು ಕೆಟ್ಟವರಿಗೆ ದುಷ್ಟ ಎಂದು ನನಗೆ ಶತ್ರುಗಳಿಗಿಂತ ಮಿತ್ರರು ಜಾಸ್ತಿ ಇದ್ದಾರೆ. ಆದರೆ ಶತ್ರುಗಳೇ ರಿಯಲ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ

  • ಡವ್ ರಾಣಿ ಮಗಳು ಅಂದ ಶಮಂತ್‍ಗೆ ವೈಷ್ಣವಿ ವಾರ್ನ್

    ಡವ್ ರಾಣಿ ಮಗಳು ಅಂದ ಶಮಂತ್‍ಗೆ ವೈಷ್ಣವಿ ವಾರ್ನ್

    ಬಿಗ್‍ಬಾಸ್ ಸೆಕೆಂಡ್ ಇನಿಂಗ್ಸ್ ನ ಮೊದಲ ವಾರದ ಕಥೆ ಕಿಚ್ಚನ ಜೊತೆಗೆ ಕಾರ್ಯಕ್ರಮಕ್ಕೆ ಬಿಗ್ ಮನೆ ಸ್ಪರ್ಧಿ ಜಬರ್ ದಸ್ತ್ ಆಗಿ ರೆಡಿಯಾಗುತ್ತಿದ್ದರು. ಈ ವೇಳೆ ಡವ್ ರಾಣಿ ಮಗಳು ಎಂದ ಶಮಂತ್‍ಗೆ ವೈಷ್ಣವಿ ವಾರ್ನ್ ಮಾಡಿದ್ದಾರೆ.

    ಬಾತ್ ರೂಂ ಏರಿಯಾದಲ್ಲಿ ವೈಷ್ಣವಿ ಹಾಗೂ ಶಮಂತ್ ರೆಡಿಯಾಗುತ್ತಿರುತ್ತಾರೆ. ಈ ವೇಳೆ ವೈಷ್ಣವಿ ಶಮಂತ್‍ಗೆ ನಮ್ಮ ಅಮ್ಮನಿಗೆ ಏಕೆ ಬೈತಿದ್ದಿರಾ ಎಂದು ವೈಷ್ಣವಿ ಪ್ರಶ್ನಿಸಿದ್ದಾರೆ. ಆಗ ಶಮಂತ್ ನಾನು ಏಕೆ ನಿಮ್ಮ ಅಮ್ಮನನ್ನು ಬೈಯ್ಯಲಿ ಎಂದಿದ್ದಾರೆ. ಹಾಗಾದರೆ ಡವ್ ರಾಣಿ ಮಗಳು ಎಂದರೆ ಅರ್ಥ ಏನು ವೈಷ್ಣವಿ ಶಮಂತ್‍ಗೆ ಕೇಳಿದ್ದಾರೆ.

    ಆಗ ಶಮಂತ್ ಲೈನ್ಸ್ ಮ್ಯಾಚ್ ಮಾಡಿದೆ. ಸಾಂಗ್ ಹೇಳಿದರೆ ನಿಜವಾಗಿಯೂ ಅದನ್ನು ಅರ್ಥೈಸಿಕೊಳ್ಳುತ್ತಾರೆ ಎಂದು ಅರ್ಥವಲ್ಲ ಎಂದು ವಿವರಿಸುತ್ತಾರೆ. ಅದು ಏನಾದರೂ ಆಗಿರಲಿ ಈಗ ನಾನು ಹೇಳ್ಲಾ? ಎಂದು ವೈಷ್ಣವಿ ಹೇಳಿದಾಗ, ನೀವು ಕೂಡ ನಗುತ್ತಿದ್ರಿ, ನಾನು ಕೂಡ ನಗುತ್ತಿದ್ದೆ ಹಾಗಾಗಿ ರೇಗಿಸಿದಷ್ಟೇ. ಅದನ್ನು ಜಗಳ ಎಂದು ಹೇಳುವುದಿಲ್ಲ. ನಾನು ನಿಮ್ಮ ಅಮ್ಮನಿಗೆ ನಾನು ಏಕೆ ಬೈಯ್ಯಲಿ, ಅವರು ನನಗೇನು ಮಾಡಿದ್ದಾರೆ ಎಂದಿದ್ದಾರೆ.

    ನಂತರ ವೈಷ್ಣವಿ ನಿಮಗೇನಾದರೂ ತಮಾಷೆ ಮಾಡಬೇಕಾದರೆ ನನ್ನ ಮೇಲೆ ಮಾಡಿ. ನನ್ನ ಫ್ಯಾಮಿಲಿ ಮೇಲೆ ಅಲ್ಲ ಎಂದು ವಾರ್ನ್ ಮಾಡಿದ್ದಾರೆ. ನಂತರ ಶಮಂತ್ ವೈಷ್ಣವಿ ಬಳಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಹುಡುಗಿಯರಿಗೆ ಒಲಿಯದ ಕ್ಯಾಪ್ಟನ್ ಪಟ್ಟ

  • ಪ್ರಶಾಂತ್ ಸಂಬರಗಿಯವರು ನನ್ನಿಂದ ಏನು ಕಿತ್ಕೊಳ್ಳೊಕೆ ಆಗಲ್ಲ: ಶಮಂತ್

    ಪ್ರಶಾಂತ್ ಸಂಬರಗಿಯವರು ನನ್ನಿಂದ ಏನು ಕಿತ್ಕೊಳ್ಳೊಕೆ ಆಗಲ್ಲ: ಶಮಂತ್

    ಬೆಂಗಳೂರು: ಬಿಗ್‍ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟು ಸ್ಪರ್ಧಿಗಳು ಆಟ ಶುರು ಮಾಡಿದ್ದಾರೆ. ಸದ್ಯ ಪ್ರಶಾಂತ್ ಸಂಬರಗಿ, ಪ್ರಿಯಾಂಕಾ ತಿಮ್ಮೇಶ್, ಚಕ್ರವರ್ತಿ ಒಟ್ಟಿಗೆ ಕುಳಿತು ಚರ್ಚೆ ನಡೆಸುತ್ತಿದ್ದಾಗ, ಶಮಂತ್ ಪ್ರಶಾಂತ್ ಸಂಬರಗಿಗೆ ಚಿಕ್ಕಪ್ಪ ಎಂದು ಕರೆಯುತ್ತಾರೆ. ಇದಕ್ಕೆ ಪ್ರಶಾಂತ್ ಇನ್ನೊಮ್ಮೆ ನೀನು ನನ್ನನ್ನು ಚಿಕ್ಕಪ್ಪ ಎಂದರೆ ಎಂದು ವಾರ್ನ್ ಮಾಡುತ್ತಾರೆ. ಆಗ ಶಮಂತ್ ಚಿಕ್ಕಪ್ಪ, ಚಿಕ್ಕಪ್ಪ ಎಂದು ಮತ್ತೆ ರೇಗಿಸುತ್ತಾರೆ.

    ಈ ವೇಳೆ ಪ್ರಿಯಾಂಕಾ ತಿಮ್ಮೇಶ್, ಪ್ರಶಾಂತ್ ಅವರಿಗೇನಾದರೂ ಮಗಳಿದ್ದಿದ್ದರೆ ಇಷ್ಟೊತ್ತಿಗೆ ಎಂಗೇಜ್‍ಮೆಂಟ್ ಆಗಿರುತ್ತಿತ್ತು ಎಂದು ಶಮಂತ್ ಹೇಳುತ್ತಿದ್ದರು ಎಂದಿದ್ದಾರೆ. ಇದರ ಅರ್ಥ ಇಷ್ಟು ಒಳ್ಳೆಯ ಮಾವ ಸಿಕ್ಕಿದ್ದಾರೆ ಮಗಳನ್ನು ಬಿಡಬಾರದು ಎಂದು ಪ್ರಿಯಾಂಕಾ ತಿಮ್ಮೇಶ್ ವಿವರಿಸುತ್ತಾರುವಾಗ, ಶಮಂತ್ ಮಾವ ಕೆಟ್ಟವರು. ಆದರೆ ನನಗೆ ಒಳ್ಳೆಯವರಷ್ಟೇ ಮಾವ ಬ್ರಿಲಿಯಂಟ್ ಎಂದು ಹೇಳುತ್ತಾರೆ.

    ನಂತರ ಚಕ್ರವರ್ತಿ ಚಂದ್ರಚೂಡ್‍ರವರು ನಿನಗೆ ಪ್ರಶಾಂತ್ ಏನು ಅನಿಸುತ್ತಾರೆ, ನಿನಗೆ ಅವರ ಮೇಲೆ ಏನು ಫೀಲಿಂಗ್ ಇದೆ ಎಂದು ಪ್ರಶ್ನಿಸಿದಾಗ, ಶಮಂತ್ ಪ್ರಶಾಂತ್‍ರವರು ನನಗೆ ಒಂದು ರೀತಿ ಅಂಕಲ್ ಮಾದರಿ, ಚಿಕ್ಕಪ್ಪ ನನ್ನ ಹತ್ತಿರ ಏನು ಕಿತ್ತಿಕೊಳ್ಳುವುದಕ್ಕೆ ಆಗುವುದಿಲ್ಲ. ಬರೆದು ಕೊಂಡುತ್ತೇನೆ ಪ್ರಶಾಂತ್ ಸಂಬರ್ಗಿಯವರು ಶಮಂತ್ ಅವರಿಂದ ಏನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ತುಂಬಾ ಜನ ನನ್ನ ಮೇಲೆ ದೃಷ್ಟಿ ಹಾಕಿದ್ದಾರೆ ಅಂದ ಶಮಂತ್

  • ವೈಷ್ಣವಿಯಿಂದ ಇರಿಟೇಟ್ ಆಗ್ತಿದೆ ಅಂದ ಅರವಿಂದ್, ಶಮಂತ್

    ವೈಷ್ಣವಿಯಿಂದ ಇರಿಟೇಟ್ ಆಗ್ತಿದೆ ಅಂದ ಅರವಿಂದ್, ಶಮಂತ್

    ಕೊರೊನಾದಿಂದ ಬಿಗ್‍ಬಾಸ್ ಕಾರ್ಯಕ್ರಮ ಅಂತಿಮ ಹಂತಕ್ಕೆ ತಲುಪಿದೆ. ಸದ್ಯ ವಾರದ ಕೊನೆಯ ದಿನ ಮನೆಮಂದಿಗೆ ಕಣ್ಮಣಿ ಕೇಳಿದ ಪ್ರಶ್ನೆಯೊಂದಕ್ಕೆ ಶಮಂತ್ ಹಾಗೂ ಅರವಿಂದ್ ವೈಷ್ಣವಿಯನ್ನು ಸಹಿಸಿಕೊಂಡು ಇದ್ದೀವಿ ಎಂದಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ನಿಧಿ ಹಾಗೂ ಶುಭಾ ಇವರಿಬ್ಬರ ನಡುವೆ ಯಾರು, ಯಾರನ್ನು ಹೆಚ್ಚಾಗಿ ಸಹಿಸಿಕೊಳ್ಳುತ್ತಾರೆ ಎಂದು ಕಣ್ಮಣಿ ಪ್ರಶ್ನಿಸಿದೆ. ಆಗ ಮನೆಯ ಸದಸ್ಯರು ಒಬ್ಬೊಬ್ಬರಾಗಿಯೇ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಬರುತ್ತಾರೆ. ಈ ವೇಳೆ ಶಮಂತ್ ಸರದಿ ಬಂದಾಗ, ನನಗೆ ಮೊನ್ನೆಯಿಂದ ವೈಷ್ಣವಿಯವರು ಬ್ರೂಸ್ಲಿ, ಬ್ರೂಸ್ಲಿ ಅಂತಾ ಒಂದು ಜೋಕ್ ಹೇಳುತ್ತಿದ್ದಾರೆ. ಅದನ್ನು ಕೇಳಿ ತಲೆಯನ್ನ ಹೋಗಿ ಗೋಡೆಗೆ ಗುದ್ದಿಕೊಳ್ಳೋಣ ಎನ್ನುವಷ್ಟು ತಲೆ ಕೆಟ್ಟು ಹೋಗಿದೆ. ಅದರಲ್ಲಿ ಉತ್ತರ ಯಾವುದೋ, ಪ್ರಶ್ನೆ ಯೂವುದೋ ಅಂತ ಗೊತ್ತೆ ಆಗುತ್ತಿರಲಿಲ್ಲ. ಆದರೆ ಸಖತ್ ಆಗಿ ಇತ್ತು. ಸ್ವಲ್ಪನಾದರೂ ತಲೆಗೆ ಕೆಲಸ ಕೊಟ್ಟರು. ಸೋ ವೈಷ್ಣವಿಯವರನ್ನು ಸಹಿಸಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾರೆ.

    ನಂತರ ಅರವಿಂದ್, ಸಹಿಸಿಕೊಳ್ಳುವುದೆಂದರೆ ಶಮಂತ್ ಹೇಳಿದಂತೆ ವೈಷ್ಣವಿ. ಯಾಕೆಂದರೆ ಕೆಲವೊಂದು ಬಾರಿ ಪಾಯಿಂಟ್ ಇಲ್ಲದಿರುವ ಜೋಕ್ ಹೇಳುತ್ತಿರುತ್ತಾರೆ. ಅದು ಡೈರೆಕ್ಷನ್‍ನಲ್ಲಿಯೂ ಇರುವುದಿಲ್ಲ. ಅದನ್ನು ಸ್ವಲ್ಪ ನುಂಗಿ, ನುಂಗಿ ಹೇಳುತ್ತಿರುತ್ತಾರೆ. ಅದಕ್ಕೆ ನಾನು ರೇಗಾಡಿಕೊಂಡು ಸಹಿಸಿಕೊಳ್ಳುತ್ತಿರುತ್ತೇನೆ. ಪಾಯಿಂಟ್ ಇಲ್ಲದೇ ಇರುವುದಕ್ಕೆ ರೇಗಾಡುತ್ತಿರುತ್ತೇವೆ ಹೊರತು ಜೋಕ್‍ಗೆ ರೇಗಾಡುವುದಿಲ್ಲ ಎನ್ನುತ್ತಾರೆ.

  • ಮುಂದಿನ ವಾರವೇ ಹೊರಗೆ ಹೋಗು ನೀನು- ಪ್ರಿಯಾಂಕಾ

    ಮುಂದಿನ ವಾರವೇ ಹೊರಗೆ ಹೋಗು ನೀನು- ಪ್ರಿಯಾಂಕಾ

    ಪ್ರಿಯಾಂಕಾ ಮನೆಯೊಳಗೆ ಹೋದ ಮೇಲೆ ಯಾರೊಂದಿಗೆ ಅಷ್ಟಾಗಿ ಬೆರೆಯುತ್ತಿಲ್ಲ ಎಂಬ ಆರೋಪವನ್ನು ಮನೆಮಂದಿ ಆಗಾಗ ಹೇಳುತ್ತಿರುತ್ತಾರೆ. ಈ ವಾರ ಇದೀಗ ಕಳಪೆ ಪಟ್ಟಿಯನ್ನು ನೀಡಿ ಜೈಲಿಗೆ ಕಳುಹಿಸಿದ್ದಾರೆ.

    ಪ್ರಿಯಾಂಕಾ ತಿಮ್ಮೇಶ್ ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಾಲಿಟ್ಟಿದ್ದಾರೆ. ಮನೆಗೆ ಬಂದು ಮೂರು ವಾರ ಕಳೆಯುವುದರೊಳಗೆ ಸಾಕಷ್ಟು ಕಿರಿಕ್, ಜಗಳಗಳು, ಮನಸ್ತಾಪಗಳು ನಡೆದಿವೆ. ಗೇಮ್‍ನಲ್ಲಿ ಸರಿಯಾದ ತೀರ್ಪು ಸಿಗದೇ ಇದ್ದಾಗ, ತೀರ್ಪುಗಾರರ ವಿರುದ್ಧವೇ ಗರಂ ಆಗಿದ್ದಾರೆ. ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಶಮಂತ್ ಜೊತೆಗೆ ಒಂಚೂರು ಕ್ಲೋಸ್ ಆಗಿ ಇರ್ತಾರೆ. ಆದರೆ ಇವಾಗ ಶಮಂತ್‍ಗೆ, ನಿಂಗೆ ನಾಚಿಕೆ ಆಗ್ಬೇಕು, ಮುಂದಿನ ವಾರವೇ ಹೊರಗೆ ಹೋಗು ನೀನು ಅಂತ ಶಾಪ ಹಾಕಿದ್ದಾರೆ.

     ಶಮಂತ್ ಜೈಲಿನಲ್ಲಿರುವ ಪ್ರಿಯಾಂಕಳ ಜೊತೆಗೆ ಮಾತನಾಡಲು ಬಂದಿದ್ದಾರೆ. ಆಗ ಪ್ರಿಯಾಂಕ ನಾನಿಲ್ಲಿಂದ ಹೊರಗೆ ಬಂದಮೇಲೆ ನಿನ್ನ ಜೊತೆ ನಯಾಪೈಸೆಯೂ ಸೇರುವುದಿಲ್ಲ. ಯಾಕೆಂದರೆ ನನಗೆ ಇಷ್ಟಬಂದವರ ಜೊತೆಗೆ ನಾನು ಸೇರುತ್ತೇನೆ. ನಾನಿಲ್ಲಿಗೆ ಸಂಬಂಧಗಳನ್ನು ಹುಟ್ಟುಹಾಕೋಕೆ, ಎಲ್ಲರೊಂದಿಗೆ ಬೆರೆಯುವುದಕ್ಕೆ ಬಂದಿಲ್ಲ. ನಾನು ಆಟ ಆಡಬೇಕು, ನಾನೇನೂ ಅಂತ ಸಾಬೀತು ಮಾಡಬೇಕು ಎಂದು ಸಿಟ್ಟಿನಿಂದ ಶಮಂತ್ ಬಳಿ ಹೇಳಿದ್ದಾರೆ.

     ಹಾಗಾದರೆ ಯಾರು ಜೊತೆ ಮಾತಾಡಲ್ವಾ? ಎಂದು ಶಮಂತ್ ಪ್ರಿಯಾಂಕಾಗೆ ಪ್ರಶ್ನಿಸಿದ್ದಾರೆ. ನಾನಾಗಿಯೇ ಮಾತನಾಡಲ್ಲ. ಮಾತಾಡಿದ್ರೆ, ಮಾತಾಡಿಸ್ತೀನಿ. ಅವರಿಗೂ ನನ್ನ ಜೊತೆ ಮಾತನಾಡಬೇಕು ಅಂತ ಇರಬೇಕಪ್ಪ. ಇಲ್ಲಿಂದ ಹೊರಗೆ ಹೋದಮೇಲೆಯೂ ನೀನೊಬ್ಬ ಬೆಸ್ಟ್ ಫ್ರೆಂಡ್ ಆಗ್ತೀಯಾ ಅಂತ ನಾನು ಅಂದ್ಕೊಂಡಿದ್ದೆ. ಇನ್ನೊಬ್ಬರ ಜೊತೆ ಇನ್ವಾಲ್ಮೆಂಟ್ ಇಲ್ಲ ನೀನು ಯಾಕ್ ಯೋಚನೆ ಮಾಡ್ತೀಯಾ. ನಿನ್ನ ಜೊತೆ ನಾನು ಮಾತಾಡಲ್ವಾ? ಹೇಳು ಎಂದು ಪ್ರಿಯಾಂಕ ಶಮಂತ್‍ಗೆ ಹೇಳಿದ್ದಾರೆ. ಬಿಗ್‍ಬಾಸ್ ಹತ್ರ ನನಗೆ ಅನ್ನಿಸಿದ್ದನ್ನು ನಾನು ಹೇಳಿದ್ದೇನೆ ಎಂದು ಶಮಂತ್ ಹೇಳಿದ್ದಾರೆ.

    ಮುಂದಿನ ವಾರವೇ ಈ ಮನೆಯಿಂದ ಹೊರಗೆ ಹೋಗು ನೀನು. ನಂದೇ ಶಾಪ. ನಾಚಿಕೆ ಆಗ್ಬೇಕು. ಕಳಪೆ ಅಂತ ಹೇಳಿಬಿಟ್ಟು, ಕಳಪೆ ಜಾಗದಲ್ಲಿ ಬಂದು ಮಾತಾಡ್ತಾ ಇದಿಯಲ್ಲ. ನೀನು ಬಂದು ಹತ್ತು ವಾರ ಆಗಿದೆ. ಈಗ ಇನ್ನೊಬ್ಬರ ಬಾಯಲ್ಲಿ ಇವಾಗ ಚೆನ್ನಾಗಿ ಆಡ್ತಾ ಇದ್ದಾನೆ ಪರವಾಗಿಲ್ಲ ಅಂತ ಅನ್ನಿಸ್ಕೋತಿಯಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ. ಅಂದ್ರೆ ಇವಾಗಲೇ ಬಿಗ್ ಬಾಸ್ ಕಪ್ ಕೊಟ್ಟು ಕಳಿಸಬೇಕಾಗಿತ್ತಾ? ಎಂದು ಶಮಂತ್ ಹೇಳಿದ್ದಾರೆ. ಮೂರು ವಾರದಲ್ಲೇ ನಿನ್ನನ್ನ ನೀನು ಸಾಬೀತು ಮಾಡ್ಕೋಬೇಕಿತ್ತು. 10 ವಾರದವರೆಗೂ ಕಾಯಬೇಕಿತ್ತಾ? ಅದೇನು ಮಾಡುತ್ತೀಯಾ ನಾನು ನೋಡುತ್ತೇನೆ ಎಂದು ಶಮಂತ್ ಎಂದು ಪ್ರಿಯಾಂಕ ಹೇಳಿದ್ದಾರೆ.

    ಮನೆಮಂದಿ ಪ್ರಿಯಾಂಕಾಗೆ ಜೈಲಿಗೆ ಹಾಕಿರುವುದು ಕೋಪಕ್ಕೆ ಕಾರಣವಾಗಿದೆ. ಮನೆಮಂದಿ ಮೇಲೆ ಇರುವ ಸಿಟ್ಟನ್ನು ಪ್ರಿಯಾಂಕಾ ಅಮಾಯಕ ಶಮಂತ್ ಮೇಲೆ ಹಾಕಿದ್ದಾರೆ. ಶಮಂತ್ ಮಾತ್ರ ಏನೂ ಮಾತನಾಡದೆ ಸುಮ್ನೆ ಆಗಿದ್ದಾರೆ.