Tag: shaktiman

  • ರಣವೀರ್ ಸಿಂಗ್ ಅವರ ಯೋಗ್ಯತೆ ಪ್ರಶ್ನೆ ಮಾಡಿದ ಶಕ್ತಿಮಾನ್

    ರಣವೀರ್ ಸಿಂಗ್ ಅವರ ಯೋಗ್ಯತೆ ಪ್ರಶ್ನೆ ಮಾಡಿದ ಶಕ್ತಿಮಾನ್

    ಬಾಲಿವುಡ್ ಅಂಗಳದಲ್ಲಿ ಶಕ್ತಿಮಾನ್ (Shaktiman) ಕುರಿತಂತೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಹಿಂದೆ ಶಕ್ತಿಮಾನ್ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಮಕ್ಕಳಿಗೆ ನೆಚ್ಚಿನ ಸೀರಿಸ್ ಅದಾಗಿತ್ತು. ಈಗ ಮತ್ತೆ ಶಕ್ತಿಮಾನ್ ತೆರೆಗೆ ತರಲು ಯೋಚಿಸಲಾಗುತ್ತಿದೆ. ಶಕ್ತಿಮಾನ್ ಪಾತ್ರ ಮಾಡಿದ್ದ ಮುಖೇಶ್ ಖನ್ನಾ ಅವರ ಜಾಗವನ್ನು ಯಾರು ತುಂಬ ಬಲ್ಲರು ಎನ್ನುವ ಹುಡುಕಾಟ ಕೂಡ ನಡೆದಿದೆ.

    ಶಕ್ತಿಮಾನ್ ಪಾತ್ರಕ್ಕೆ ಜೀವ ತುಂಬಬಲ್ಲ ಶಕ್ತಿ ರಣವೀರ್ ಸಿಂಗ್ (Ranveer Singh) ಅವರಿಗೆ ಇದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಶಕ್ತಿಮಾನ್ ಪಾತ್ರ ಮಾಡಿದ್ದ ಮುಖೇಶ್ ಖನ್ನಾ ಅವರು ಅದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಅಂತಹ ಪಾತ್ರವನ್ನು ಮಾಡುವಂತಹ ಯೋಗ್ಯತೆ ಮತ್ತು ಅರ್ಹತೆ ರಣವೀರ್ ಸಿಂಗ್ ಗೆ ಇಲ್ಲವೆಂದು ಅವರು ಹೇಳಿದ್ದಾರೆ.

    ರಣವೀರ್ ಸಿಂಗ್ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಳ್ಳುವುದಕ್ಕೆ ಲಾಯಕ್. ಶಕ್ತಿಮಾನ್ ಅಂತಹ ಧೈತ್ಯ ಪಾತ್ರವನ್ನು ಅವರು ಮಾಡುವುದಕ್ಕೆ ಆಗುವುದಿಲ್ಲ. ಮತ್ತೆ ಯೋಗ್ಯತೆ ಕೂಡ ಅವರಿಗೆ ಇಲ್ಲ ಎಂದು ಕಿಡಿಕಾರಿದ್ದಾರೆ. ಬೇರೆ ನಟನನ್ನು ಹುಡುಕುವುದು ಸೂಕ್ತ ಎನ್ನುವ ಸಲಹೆಯನ್ನೂ ಅವರು ನೀಡಿದ್ದಾರೆ.

    ತಮ್ಮ ಬಗ್ಗೆ ಖನ್ನಾ ಹಾಗೆ ಮಾತನಾಡಿದ್ದಕ್ಕೆ ರಣವೀರ್ ಸಿಂಗ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಷಯ ಅವರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಬಂದಿದ್ದರೆ, ಯಾವ ರೀತಿಯಲ್ಲಿ ಅವರು ರಿಯ್ಯಾಕ್ಟ್ ಮಾಡ್ತಾರೆ ಎನ್ನುವುದನ್ನು ಕಾದು ನೋಡಬೇಕು.

  • ‘ಶಕ್ತಿಮಾನ್‌’ ಸಿನಿಮಾ ತಡವಾಗಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟ ಮುಖೇಶ್‌ ಖನ್ನಾ

    ‘ಶಕ್ತಿಮಾನ್‌’ ಸಿನಿಮಾ ತಡವಾಗಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟ ಮುಖೇಶ್‌ ಖನ್ನಾ

    ಕಿರುತೆರೆ ಜನಪ್ರಿಯ ‘ಶಕ್ತಿಮಾನ್’ (Shaktimaan) ಧಾರಾವಾಹಿ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ತರಲು ಪ್ಲ್ಯಾನ್ ನಡೆಯುತ್ತಿದೆ. ಈ ಸೀರಿಯಲ್‌ನಲ್ಲಿ ಮುಕೇಶ್ ಖನ್ನಾ ಅವರು ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಈ ಕುರಿತು ಬಹಳ ಹಿಂದೆಯೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಾಗಿತ್ತು. ಆದರೂ ಕೂಡ ‘ಶಕ್ತಿಮಾನ್’ ಸಿನಿಮಾ ಸೆಟ್ಟೇರಲು ಕಾರಣ ಏನು ಎಂಬುದನ್ನು ಮುಕೇಶ್ ಖನ್ನಾ(Actor Mukesh Khanna) ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ನಟ ಈ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರಣಿತಾ ಹಾಟ್‌ನೆಸ್‌ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು

    1993ರಲ್ಲಿ ಇಂಡಿಯನ್ ಸೂಪರ್ ಹೀರೋ ಆಗಿ ಮುಖೇಶ್ ಖನ್ನಾ ಅವರು ಮಿಂಚಿದ್ದರು. ಮಕ್ಕಳಿಗಂತೂ ‘ಶಕ್ತಿಮಾನ್’ ಎಂದರೆ ಎಲ್ಲಿಲ್ಲದ ಪ್ರೀತಿ. ಆತನ ಸಾಹಸಗಳು ಒಂದೆರಡಲ್ಲ. ಈಗ ಈ ಸೂಪರ್ ಹೀರೋ ಪಾತ್ರವನ್ನೇ ಮುಖ್ಯವಾಗಿ ಇಟ್ಟುಕೊಂಡು ಸಿನಿಮಾ ಸಿದ್ಧವಾಗುತ್ತಿದೆ. ಶಕ್ತಿಮಾನ್ ಸಿನಿಮಾದ ಬಜೆಟ್ 200-300 ಕೋಟಿ ರೂಪಾಯಿ ನಿರ್ಮಾಣದಲ್ಲಿ ಬರಲಿದೆ. ‘ಸ್ಪೈಡರ್ ಮ್ಯಾನ್’ (Spider Man) ಸಿನಿಮಾ ಮಾಡಿದ್ದ ಸೋನಿ ಪಿಕ್ಚರ್ಸ್ (Sony Pictures) ಸಂಸ್ಥೆಯವರು ಶಕ್ತಿಮಾನ್ ಸಾಥ್ ನೀಡ್ತಿದ್ದಾರೆ. ಮೊದಲು ಕೊರೊನಾ ಬಂತು. ಅದರಿಂದ ವಿಳಂಬ ಆಯಿತು ಎಂದು ಮುಕೇಶ್ ಖನ್ನಾ ಹೇಳಿದ್ದಾರೆ.

    ಇದು ದೊಡ್ಡ ಸಿನಿಮಾ ಆದ್ದರಿಂದ ಸಮಯ ಹಿಡಿಯುತ್ತದೆ. ನಾನು ಶಕ್ತಿಮಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನಾ ಎಂಬುದು ದೊಡ್ಡ ಪ್ರಶ್ನೆ. ಬೇರೆ ಯಾರಾದರೂ ಶಕ್ತಿಮಾನ್ ಪಾತ್ರ ಮಾಡುತ್ತಾರಾ? ಆ ಬಗ್ಗೆ ನನಗೆ ತಿಳಿದಿಲ್ಲ. ಇದೊಂದು ಕಮರ್ಷಿಯಲ್ ಸಿನಿಮಾ. ದುಡ್ಡಿನ ಮಾತುಕತೆ ಸಾಕಷ್ಟು ಇರುತ್ತದೆ. ಈ ಸಿನಿಮಾದಲ್ಲಿ ನಾನು ಇರುತ್ತೇನೆ. ನನ್ನನ್ನು ಬಿಟ್ಟು ಈ ಸಿನಿಮಾ ಮಾಡೋಕೆ ಆಗಲ್ಲ ಎಂಬುದು ಎಲ್ಲರಿಗೂ ಗೊತ್ತು ಎಂದು ನಟ ಮುಖೇಶ್ ರಿಯಾಕ್ಟ್ ಮಾಡಿದ್ದಾರೆ.

    ಈ ಚಿತ್ರದಲ್ಲಿ ಮುಕೇಶ್ ಖನ್ನಾ ಇರುತ್ತಾರೆ ಆದರೆ ಶಕ್ತಿಮಾನ್ ವೇಷದಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. ಯಾಕೆಂದರೆ ಇದು ನಿರ್ಮಾಪಕರ ನಿರ್ಧಾರವಾಗಿದೆ. ಪಾತ್ರವರ್ಗ ಮತ್ತು ತಾಂತ್ರಿಕ ಬಳಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಮುಕೇಶ್ ಖನ್ನಾ ಹೇಳಿದ್ದಾರೆ. ರಣವೀರ್ ಸಿಂಗ್ (Ranveer Singh) ಅವರು ಶಕ್ತಿಮಾನ್ ಆಗಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂದು ಕಾದುನೋಡಬೇಕಿದೆ.

  • ದೀಪಿಕಾ ಹಾಕಿದ ಬಿಕಿನಿ ಪ್ರಚೋದನಕಾರಿ, ಅಶ್ಲೀಲಕಷ್ಟೇ ಸೀಮಿತ ಮಾಡಬೇಡಿ : ಶಕ್ತಿಮಾನ್ ಹೊಸ ಬಾಂಬ್

    ದೀಪಿಕಾ ಹಾಕಿದ ಬಿಕಿನಿ ಪ್ರಚೋದನಕಾರಿ, ಅಶ್ಲೀಲಕಷ್ಟೇ ಸೀಮಿತ ಮಾಡಬೇಡಿ : ಶಕ್ತಿಮಾನ್ ಹೊಸ ಬಾಂಬ್

    ಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಕಿರುವ ಬಿಕಿನಿ ಕೇವಲ ಅಶ್ಲೀಲವಷ್ಟೇ ಅಲ್ಲ, ಅದು ಪ್ರಚೋದನಕಾರಿ ಕೂಡ ಆಗಿದೆ ಎಂದು ಶಕ್ತಿಮಾನ್ ಪಾತ್ರಧಾರಿ ಮುಕೇಶ್ ಖನ್ನಾ ಪ್ರತಿಕ್ರಿಯೆ ನೀಡಿದ್ದಾರೆ. ಬೇಷರಂ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿದ್ದಾರೆ ಎನ್ನುವುದು ಪ್ರಶ್ನೆಯಲ್ಲ. ಅದು ಚರ್ಚೆಯ ವಿಷಯ ಕೂಡ ಆಗಬಾರದು. ಚರ್ಚೆ ಮಾಡಬೇಕಾಗಿದ್ದು ಪ್ರಚೋದನಕಾರಿ ಆಗುವಂತಹ ಬಟ್ಟೆಗಳನ್ನು ಹಾಕಿದ್ದಾರೆ ಎನ್ನುವುದು ಎಂದಿದ್ದಾರೆ ಖನ್ನಾ.

    ನಟಿಯೊಬ್ಬಳು ಪ್ರಚೋದನಕಾರಿ ಆಗುವಂತಹ ಬಟ್ಟೆ ಮತ್ತು ಭಂಗಿಯಲ್ಲಿ ಇದ್ದಾರೆ ಎನ್ನುವ ಅಂಶವನ್ನು ಸೆನ್ಸಾರ್ ಮಂಡಳಿಯು ಗಮನಿಸದೇ ಇರುವುದು ಅಚ್ಚರಿ ತಂದಿದೆ ಎಂದಿರುವ ಖನ್ನಾ. ವಿವೇಚನೆ ಇಲ್ಲದೇ ಈ ಹಾಡನ್ನು ಸೆನ್ಸಾರ್ ಮಾಡಲಾಯಿತಾ ಎಂದು ಪ್ರಶ್ನೆ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯಲ್ಲಿ ಇರುವವರು ವಿವೇಚನೆ ಬಳಸಿಕೊಂಡು ಸೆನ್ಸಾರ್ ಮಾಡಬೇಕು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ

    ಬಾಲಿವುಡ್ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದ ವಿಚಾರ, ಇದೀಗ ದೇಶಭಕ್ತಿಯನ್ನು ಪ್ರಶ್ನಿಸುವಲ್ಲಿಗೆ ಹೋಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವುದಕ್ಕಾಗಿಯೇ ಕೇಸರಿ ಬಿಕಿನಿ ಹಾಕಿಸಲಾಗಿದೆ ಎಂದು ನಟ ಶಾರುಖ್ ಖಾನ್ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ. ಈ ಕುರಿತು ಶಾರುಖ್ ಖಾನ್ ಮತ್ತೊಂದು ಟ್ವಿಟ್ ಮಾಡಿದ್ದು, ‘ಪಠಾಣ್ ಸಿನಿಮಾ ಕೂಡ ದೇಶಭಕ್ತಿಯನ್ನು ಸಾರುತ್ತದೆ’ ಎಂದು ಬರೆದುಕೊಂಡಿದ್ದಾರೆ. ಸಿನಿಮಾವನ್ನು ಬಾಯ್ಕಾಟ್ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದಿದ್ದಾರೆ.

    ಪಠಾಣ್ ಸಿನಿಮಾ ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರುವಾಗಿದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಈ ಬಿಕಿನಿ ತೊಟ್ಟ ಸಂದರ್ಭದಲ್ಲಿ ಬರುವ ಹಾಡೊಂದರ ಸಾಹಿತ್ಯ ‘ನಾಚಿಕೆ ಇಲ್ಲದ ಬಣ್ಣ’ ಎನ್ನುವುದಾಗಿದೆ. ಇದು ಹಿಂದೂಗಳನ್ನು ಹೀಯಾಳಿಸುವ ಉದ್ದೇಶದಿಂದಲೇ ಮಾಡಿದ ಕೃತ್ಯ ಎಂದು ಹೇಳಲಾಗುತ್ತಿದೆ. ಹಾಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎನ್ನುವ ಧ್ವನಿ ಜೋರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತೆರೆಗೆ ಬರಲಿದೆ ಬಾಲಿವುಡ್ ನಟಿ ಮಧುಬಾಲಾ ಬಯೋಪಿಕ್

    ತೆರೆಗೆ ಬರಲಿದೆ ಬಾಲಿವುಡ್ ನಟಿ ಮಧುಬಾಲಾ ಬಯೋಪಿಕ್

    ಬಾಲಿವುಡ್ ಚಿತ್ರರಂಗದಲ್ಲಿ ಇಪ್ಪತ್ತು ವರ್ಷಗಳ ಕಾಲ ರಾರಾಜಿಸಿದ ನಟಿ ಮಧುಬಾಲಾ ನಿಜ ಜೀವನದ ಕಥೆಯನ್ನ ತೆರೆಯ ಮೇಲೆ ತರಲು ಮಧುಬಾಲಾ ಅವರ ಸಹೋದರಿ ಮಧುರ್ ಸಜ್ಜಾಗಿದ್ದಾರೆ. ಮಧುರ್‌ಗೆ `ಶಕ್ತಿಮಾನ್’ ಧಾರಾವಾಹಿ ನಿರ್ಮಾಪಕರು ಸಾಥ್ ನೀಡಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ 20 ವರ್ಷಗಳ ಕಾಲ ಆಳಿದ ನಟಿ ಮಧುಬಾಲಾ ನೈಜ ಜೀವನದ ಕಥೆಯನ್ನ ಬೆಳ್ಳಿಪರದೆಯಲ್ಲಿ ಪ್ರಸ್ತುತ ಪಡಿಸಲು ತೆರೆಮರೆಯಲ್ಲಿ ಭರ್ಜರಿ ಕೆಲಸ ನಡೆಯುತ್ತಿದೆ. ಸ್ವತಃ ಮಧುಭಾಲಾ ಅವರ ಸಹೋದರಿ ಮಧುರ್ ಈ ಚಿತ್ರವನ್ನು ನಿರ್ಮಾಣ ಮಾಡೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್

    ಮುಸ್ಲಿಂ ಧರ್ಮದ ಸಾಮಾನ್ಯ ಹುಡುಗಿಯೊಬ್ಬಳು ಮಧುಬಾಲಾ ಆಗಿ ಮಿಂಚಿದ ಕಥೆ, ಚಿತ್ರರಂಗದಲ್ಲಿ 70ಕ್ಕೂ ಹೆಚ್ಚು ಚಿತ್ರದಲ್ಲಿ ನಾನಾ ಬಗೆಯ ಪಾತ್ರದ ಮೂಲಕ ಮಧುಬಾಲಾ ರಂಜಿಸಿದ್ದಾರೆ. ತೆರೆಯ ಮೇಲಿನ ಕಥೆಯ ಜತೆ ತೆರೆಯ ಹಿಂದಿನ ಅಸಲಿತ್ತು ಎನಿತ್ತು ಎಂಬುದನ್ನ ಈ ಬಯೋಪಿಕ್ ಮೂಲಕ ತೋರಿಸಲಿದ್ದಾರೆ. ಮಧುಬಾಲಾ ಪಾತ್ರಕ್ಕಾಗಿ ಬಾಲಿವುಡ್ ಸೂಕ್ತ ನಾಯಕಿಯನ್ನೇ ಚಿತ್ರತಂಡ ಆಯ್ಕೆ ಮಾಡಲಿದೆ. ಇನ್ನು ಮಧುಬಾಲಾ ಪಾತ್ರದಲ್ಲಿ ಯಾವ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]