Tag: Shahrukh Khan

  • ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಶಾರೂಕ್ ಸರ್ಪ್ರೈಸ್

    ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಶಾರೂಕ್ ಸರ್ಪ್ರೈಸ್

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ತಮ್ಮ ‘ಮನ್ನತ್’ ಮನೆಯಿಂದ ಹೊರಬಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

    ಶಾರೂಕ್ ಖಾನ್ ಪ್ರತಿ ವರ್ಷ ತಮ್ಮ ಮನ್ನತ್ ಮನೆಯಲ್ಲಿ ಈದ್ ಆಚರಿಸುತ್ತಾರೆ. ಬಳಿಕ ತಮ್ಮ ಟೆರೇಸ್‍ಗೆ ಹೋಗಿ ಮನೆಯ ಹೊರಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸುತ್ತಾರೆ. ಹಾಗೆಯೇ ರಂಜಾನ್ ಹಬ್ಬದಂದು ಕೂಡ ಶಾರೂಕ್ ಮನೆಯ ಹೊರಗೆ ಬಂದು ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

    ಶಾರೂಕ್ ಈ ಬಾರಿ ತಮ್ಮ ಕಿರಿಯ ಮಗ ಅಬ್ರಾಹಂ ಹಾಗೂ ಅಮೆರಿಕ ಚ್ಯಾಟ್ ಶೋ ನಿರೂಪಕ ಡೇವಿಡ್ ಲೆಟರ್‍ಮ್ಯಾನ್ ಜೊತೆ ಮನೆಯ ಟೆರೇಸ್ ಬದಲು ಕಾರಿನ ಮೇಲೆ ನಿಂತುಕೊಂಡು ಅಭಿಮಾನಿಗಳಿಗೆ ಶುಭಾಶಯ ತಿಳಿಸುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಶಾರೂಕ್ ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ಕೈಬೀಸಿದ್ದಾರೆ. ಈ ವೇಳೆ ಶಾರೂಕ್ ಕಪ್ಪು ಬಣ್ಣದ ಟೀ-ಶರ್ಟ್‍ಗೆ ಶರ್ಟ್ ಧರಿಸಿ ಅದಕ್ಕೆ ನೀಲಿ ಬಣ್ಣದ ಡೆನಿಮ್ ಧರಿಸಿದ್ದರು.

    ಇತ್ತೀಚೆಗೆ ಶಾರೂಕ್ ಖಾನ್ ತನ್ನ ಕೇಶವಿನ್ಯಾಸಕನ ಸಹೋದರಿಯ ಮದುವೆಗೆ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಶಾರೂಕ್ ಹಿಂದುಗಡೆ ಗೇಟ್ ಮೂಲಕ ನೇರವಾಗಿ ವೇದಿಕೆ ಮೇಲೆ ಹೋಗಿ ವಧು-ವರನನ್ನು ತಬ್ಬಿಕೊಂಡು ಶುಭಾಶಯ ತಿಳಿಸಿದ್ದರು.

    ಶಾರೂಕ್ ಖಾನ್ ಕೊನೆಯದಾಗಿ `ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಬಾಕ್ಸ್ ಆಫೀಸ್‍ನಲ್ಲಿ ಅಷ್ಟು ಸದ್ದು ಮಾಡಲಿಲ್ಲ. ಈ ಚಿತ್ರ ಸೋಲು ಕಂಡಿದ್ದಕ್ಕೆ ಶಾರೂಕ್ ಖಾನ್ ಜೂನ್ ತಿಂಗಳಿನವರೆಗೂ ಯಾವುದೇ ಚಿತ್ರವನ್ನು ಸಹಿ ಮಾಡಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

  • ತನ್ನ ಹೇರ್‌ಸ್ಟೈಲಿಸ್ಟ್ ಸಹೋದರಿ ಮದ್ವೆಗೆ ಬಾಲಿವುಡ್ ಬಾದ್‍ಶಾ ಸರ್ಪ್ರೈಸ್ ಭೇಟಿ

    ತನ್ನ ಹೇರ್‌ಸ್ಟೈಲಿಸ್ಟ್ ಸಹೋದರಿ ಮದ್ವೆಗೆ ಬಾಲಿವುಡ್ ಬಾದ್‍ಶಾ ಸರ್ಪ್ರೈಸ್ ಭೇಟಿ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ತನ್ನ ಕೇಶವಿನ್ಯಾಸಕನ ಸಹೋದರಿಯ ಮದುವೆಗೆ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

    ಇತ್ತೀಚೆಗೆ ಶಾರೂಕ್ ಖಾನ್ ಇನ್‍ಸ್ಟಾಗ್ರಾಂ ಫ್ಯಾನ್ ಪೇಜ್‍ಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶಾರೂಕ್ ಬ್ಲಾಕ್ ಸೂಟ್ ಧರಿಸಿ ಮದುವೆಯಲ್ಲಿ ಭಾಗವಹಿಸಿದ್ದಾರೆ. ಶಾರೂಖ್ ಹಿಂದುಗಡೆ ಗೇಟ್ ಮೂಲಕ ನೇರವಾಗಿ ವೇದಿಕೆ ಮೇಲೆ ಹೋಗಿ ವಧು-ವರನನ್ನು ತಬ್ಬಿಕೊಂಡು ಶುಭಾಶಯ ತಿಳಿಸಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಾರೂಕ್ ಅಭಿಮಾನಿಗಳು ಈ ವಿಡಿಯೋ ನೋಡಿ ಸಂತಸಪಡುತ್ತಿದ್ದಾರೆ. ಈ ವಿಡಿಯೋ ನೋಡಿ ಕೆಲವರು ನಿಮಗೆ ತುಂಬಾ ದೊಡ್ಡ ಹೃದಯ. ನೀವು ನನಗೆ ಸ್ಫೂರ್ತಿ ಎಂದು ಕಮೆಂಟ್ ಮಾಡುವ ಮೂಲಕ ಶಾರೂಕ್ ಸರಳತೆಯನ್ನು ಹೊಗಳಿದ್ದಾರೆ.

    ಶಾರೂಕ್ ಅಭಿಮಾನಿಗಳು ಈ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ತಕ್ಷಣ ಸಾಕಷ್ಟು ಕಮೆಂಟ್‍ಗಳು ಬರುತ್ತಿತ್ತು. ಈ ವಿಡಿಯೋಗೆ ಇದುವರೆಗೂ 31 ಸಾವಿರಕ್ಕೂ ಹೆಚ್ಚು ವ್ಯೂ ಬಂದಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

    ಶಾರೂಕ್ ಖಾನ್ ಕೊನೆಯದಾಗಿ ‘ಝೀರೋ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಬಾಕ್ಸ್ ಆಫೀಸ್‍ನಲ್ಲಿ ಅಷ್ಟು ಸದ್ದು ಮಾಡಲಿಲ್ಲ. ಈ ಚಿತ್ರ ಸೋಲು ಕಂಡಿದ್ದಕ್ಕೆ ಶಾರೂಕ್ ಖಾನ್ ಜೂನ್ ತಿಂಗಳಿನವರೆಗೂ ಯಾವುದೇ ಚಿತ್ರವನ್ನು ಸಹಿ ಮಾಡಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

  • ‘ಝೀರೋ’ ಗೆ ಭರ್ಜರಿ ಫೈಟ್ ನೀಡಿದ ‘ಕೆಜಿಎಫ್’

    ‘ಝೀರೋ’ ಗೆ ಭರ್ಜರಿ ಫೈಟ್ ನೀಡಿದ ‘ಕೆಜಿಎಫ್’

    – 3 ದಿನದಲ್ಲಿ 60 ಕೋಟಿ ಕಲೆಕ್ಷನ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ದೇಶ-ವಿದೇಶದಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಮಾಡಿದ್ದು, ಬಾಲಿವುಡ್‍ನ ನಟ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾಗೆ ಭರ್ಜರಿ ಫೈಟ್ ನೀಡಿದೆ.

    ‘ಕೆಜಿಎಫ್’ ಸಿನಿಮಾ ಪಂಚಭಾಷೆಯಲ್ಲಿ ಇದೇ ಶುಕ್ರವಾರ ಬಿಡುಗಡೆಗೊಂಡಿತ್ತು. ಅದೇ ದಿನ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾ ಕೂಡ ಬಿಡುಗಡೆಯಾಗಿತ್ತು. ಆದರೆ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ‘ಝೀರೋ’ ಸಿನಿಮಾವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಇದನ್ನೂ ಓದಿ: ಗಲ್ಲಾ ಪೆಟ್ಟಿಗೆಯಲ್ಲೂ ರಾಕಿಯ ಆರ್ಭಟ- ಹಿಂದಿಯಲ್ಲಿ ಫಸ್ಟ್ ಡೇ 2.10 ಕೋಟಿ

    ‘ಕೆಜಿಎಫ್’ ಸಿನಿಮಾ ಬಿಡುಗಡೆಯಾದ ಮೊದಲ ದಿವವೇ ಸುಮಾರು 30 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಬಳಿಕ ಶನಿವಾರ ಮತ್ತು ಭಾನುವಾರ ವೀಕೆಂಡ್ ಇದ್ದ ಕಾರಣ ಮೂರು ದಿನಗಳಲ್ಲಿ ‘ಕೆಜಿಎಫ್’ ಸಿನಿಮಾ 60 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕ ವಿಜಯ ಕಿರಗಂದೂರು ತಿಳಿಸಿದ್ದಾರೆ. ಇದನ್ನೂ ಓದಿ:’ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್

    ಮೊದಲನೇ ದಿನ 24 ಕೋಟಿ ರೂ. ಗಳಿಸಿದರೆ, ಎರಡನೇ ದಿನ ಮತ್ತು ಮೂರನೇ ದಿನ 20-21 ಕೋಟಿ ರೂ. ಗಳಿಸಿದ್ದು, ಮೂರು ದಿನಗಳಲ್ಲಿ ಸುಮಾರು 60 ಕೋಟಿ ರೂ. ಗಳಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೇ ಹಿಂದಿಯಲ್ಲೂ ಕೂಡ ಕಲೆಕ್ಷನ್ ಅಧಿಕವಾಗಿದ್ದು, ಕನ್ನಡ ಸಿನಿಮಾಗೆ ಬೇರೆ ಭಾಷೆಯಲ್ಲೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

    ಕನ್ನಡದ ಕೆಜಿಎಫ್ ಸಿನಿಮಾ ಝೀರೋ ಸಿನಿಮಾಗೆ ತೀವ್ರ ಪೈಪೋಟಿ ಕೊಟ್ಟಿದ್ದು, ಇದರಿಂದ ಝೀರೋ ಸಿನಿಮಾದ ಕಲೆಕ್ಷನ್ ಕಡಿಮೆಯಾಗಿದೆ. ಮೊದಲ ದಿನವೇ ಕೆಜಿಎಫ್ 24 ಕೋಟಿ ರೂ. ಗಳಿಸಿತ್ತು. ಭಾರತದಲ್ಲಿ 18 ಕೋಟಿ, ಕನ್ನಡದಲ್ಲಿಯೇ 12.5 ಕೋಟಿ ರೂ ಗಳಿಸಿತ್ತು. ವೀಕೆಂಡ್ ಇದ್ದ ಕಾರಣ ಸುಮಾರು 40 ಕೋಟಿ ಹಣವನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಝೀರೋ ಸಿನಿಮಾ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಕೇವಲ 38 ಕೋಟಿ ರೂ. ಕೆಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

    ದಿನದಿಂದ ದಿನಕ್ಕೆ ಪ್ರೇಕ್ಷಕರು ಕೂಡ ಹೆಚ್ಚಾಗುತ್ತಿದ್ದಾರೆ. ಆದ್ದರಿಂದ ಪರಭಾಷೆ ಸಿನಿಮಾಗೆ ಕನ್ನಡ ಸಿನಿಮಾ ಪೈಪೋಟಿ ನೀಡಿದೆ. ಹಿಂದಿ ಭಾಷೆಯಲ್ಲಿ ಕೆಜಿಎಫ್ ಮೊದಲ ದಿನವೇ 2.1 ಕೋಟಿ ರೂ. ಗಳಿಸಿದ್ದು, ಎರಡನೇ ದಿನ 3 ಕೋಟಿ ರೂ. ಗಳಿಸಿತ್ತು ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್’

    ‘ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್’

    ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಸಿನಿಮಾ ‘ಝೀರೋ’ ಸಿನಿಮಾವನ್ನು ಕೆಜಿಎಫ್ ಹಿಂದಿಕ್ಕಿ ಮುನ್ನುಗ್ಗುತ್ತಿದೆ.

    ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾಗಿಂತಲೂ ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್’ ಸಿನಿಮಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಲೈಕ್ಸ್ ಬಂದಿದೆ. ಬುಕ್ ಮೈ ಶೋದಲ್ಲಿ ‘ಕೆಜಿಎಫ್’ ಸಿನಿಮಾ 3 ಲಕ್ಷದ 57 ಸಾವಿರ ಲೈಕ್ಸ್ ಪಡೆದಿದೆ. ಇನ್ನು ಶಾರೂಕ್ ಖಾನ್ ನಟನೆಯ ‘ಝೀರೋ’ ಸಿನಿಮಾ 2 ಲಕ್ಷದ 59 ಸಾವಿರ ಲೈಕ್ಸ್ ಪಡೆದಿದೆ.

    ಎಲ್ಲಾ ಅಡೆತಡೆಗಳನ್ನು ಮೀರಿ ದೇಶಾದ್ಯಂತ ಹವಾ ಎಬ್ಬಿಸಿದ್ದ ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ತೆರೆಗೆ ಅಪ್ಪಳಿಸಿದ್ದು, ವಿಶ್ವಾದ್ಯಂತ 2 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಐದು ಭಾಷೆಗಳಲ್ಲಿ ತೆರೆ ಕಂಡಿದೆ.

    ರಾಜ್ಯದೆಲ್ಲೆಡೆ 350 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಯಶ್ ಅಭಿಮಾನಿಗಳು ಮಧ್ಯರಾತ್ರಿಯಿಂದ ಚಳಿಯಲ್ಲೇ ಕಾದು ಕುಳಿತಿದ್ದರು. ಆನ್‍ಲೈನ್ ಟಿಕೆಟ್ ಬುಕ್ಕಿಂಗ್‍ಗೆ ಭಾರೀ ಬೇಡಿಕೆ ಬಂದಿದ್ದು, ಈಗಾಗಲೇ ಟಿಕೆಟ್‍ಗಳು ಸೇಲ್ ಆಗುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಕೆಜಿಎಫ್ ರಿಲೀಸ್ ಆಗಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಯಶ್ ಚಿತ್ರ ರಿಲೀಸ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳೆದ 10 ವರ್ಷದಿಂದ ನನ್ನನ್ನು ಯಾರು ಡೇಟಿಂಗ್‍ಗೆ ಕರೆದಿಲ್ಲ: ಕತ್ರಿನಾ ಕೈಫ್

    ಕಳೆದ 10 ವರ್ಷದಿಂದ ನನ್ನನ್ನು ಯಾರು ಡೇಟಿಂಗ್‍ಗೆ ಕರೆದಿಲ್ಲ: ಕತ್ರಿನಾ ಕೈಫ್

    ನವದೆಹಲಿ: ಕಳೆದ 10 ವರ್ಷಗಳಿಂದ ನನ್ನನ್ನು ಯಾರು ಡೇಟಿಂಗ್‍ಗೆ ಕರೆದಿಲ್ಲ ಎಂದು ಬಾಲಿವುಡ್ ಬಾಬಿ ಗರ್ಲ್ ಕತ್ರಿನಾ ಕೈಫ್ ಹೇಳಿದ್ದಾರೆ.

    ಝೀರೊ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಕತ್ರಿನಾ, ಶಾರುಖ್ ಖಾನ್ ಹಾಗೂ ಅನುಷ್ಕಾ ಶರ್ಮಾರೊಂದಿಗೆ ಮಾಧ್ಯಮ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಡೇಟಿಂಗ್ ಕುರಿತ ಪ್ರಶ್ನೆಗೆ ಉತ್ತರಿಸಿದ ಕತ್ರಿನಾ, ಸುಮಾರು 10 ವರ್ಷಗಳಿಂದ ನನ್ನನ್ನು ಯಾರು ಡೇಟಿಂಗ್‍ಗೆ ಕರೆದಿಲ್ಲ ಎಂದು ಹೇಳಿದರು. ತಕ್ಷಣ ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾರುಖ್ ಖಾನ್, ಕತ್ರಿನಾ ಅವರ ಮಾತು ಹೇಳಿ ನನಗೆ ಬೇಸರ ಆಗುತ್ತಿದೆ. ಇಂದೇ ನಾನು ಅವರನ್ನ ದೆಹಲಿ ನಗರದಲ್ಲಿ ಡೇಟಿಂಗ್‍ಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದರು.

    ಇದೇ ವೇಳೆ ಪುರುಷರಲ್ಲಿ ನೀವು ಮೊದಲು ಗಮನಿಸುವ ಅಂಶ ಯಾವುದು ಎನ್ನುವ ಪ್ರಶ್ನೆಗೆ ಕಣ್ಣು ಎಂದು ಕತ್ರಿನಾ ಉತ್ತರಿಸಿದರು. ಸದ್ಯ ಬಾಲಿವುಡ್ ಸೆಕ್ಸಿ ಗರ್ಲ್ ಆಗಿರುವ ಕತ್ರಿನಾ ಕೈಫ್ ಮದುವೆಗಾಗಿ ಕಾಯುತ್ತಿದ್ದು, ಸೂಕ್ತ ವರನಿಗಾಗಿ ಕತ್ರಿನಾ ಮತ್ತು ಕುಟುಂಬಸ್ಥರು ಹುಡುಕಾಟದಲ್ಲಿದ್ದಾರೆ ಎಂದು ಮಾಧ್ಯಮವೊಂದು ಕೆಲದಿನಗಳ ಹಿಂದೆ ಸುದ್ದಿ ಪ್ರಕಟಿಸಿತ್ತು.

    ಬಾಲಿವುಡ್ ನಲ್ಲಿ ತಮ್ಮ ಮೋಹಕ ಚೆಲುವಿನ ಮೂಲಕವೇ ಹೆಸರು ಮಾಡಿದ ಕತ್ರಿನಾ ಅವರ ಸಿನಿ ಕೆರಿಯರ್ ಆರಂಭದಿಂದಲೂ ಕೆಲ ನಾಯಕರ ಜೊತೆ ತುಳುಕು ಹಾಕಿಕೊಂಡಿತ್ತು. ಆರಂಭದಲ್ಲಿ ಭಾಯಿಜಾನ್ ಸಲ್ಮಾನ್ ಖಾನ್ ಅವರನ್ನೇ ಕತ್ರಿನಾ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿತ್ತು. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಬ್ರೇಕಪ್ ಮಾಡಿಕೊಂಡಿದ್ದರು. ಈ ಎಲ್ಲ ಘಟನೆಗಳಿಂದ ನೊಂದಿದ್ದ ಕತ್ರಿನಾ ಲೈಫ್ ಎಂಟ್ರಿ ಕೊಟ್ಟಿದ್ದು ಚಾಕ್ಲೇಟ್ ಹೀರೋ ರಣ್‍ಬೀರ್ ಕಪೂರ್. ಸಿನಿಮಾದಲ್ಲಿ ಜೊತೆಯಾಗಿದ್ದ ರಣ್‍ಬೀರ್ ಸದ್ದಿಲ್ಲದೇ ಕತ್ರಿನಾಗೆ ಹತ್ತಿರವಾಗುತ್ತಾ ಹೋದರು. ಕತ್ರಿನಾ ಮತ್ತು ರಣ್‍ಬೀರ್ ವಿದೇಶ ಪ್ರವಾಸದಲ್ಲಿ ಮೋಜಿನಲ್ಲಿ ತೊಡಗಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಕೆಲವು ದಿನಗಳ ನಂತರ ನಾವಿಬ್ಬರು ಬೇರೆಯಾಗಿದ್ದೇವೆ ಎಂಬ ಸಂದೇಶವನ್ನು ಈ ಜೋಡಿ ಪರೋಕ್ಷವಾಗಿ ಹೊರಹಾಕಿತ್ತು.

    ಕತ್ರಿನಾಳಿಂದ ದೂರವಾದ ರಣ್‍ಬೀರ್ ಇದೀಗ ಆಲಿಯಾ ಭಟ್ ಜೊತೆ ಡೇಟಿಂಗ್ ನಲ್ಲಿದ್ದಾರೆಂಬ ಸುದ್ದಿಯೊಂದು ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ. ಇತ್ತ ಕತ್ರಿನಾ ಮತ್ತೆ ಹಳೆ ಗೆಳೆಯ ಸಲ್ಮಾನ್ ಖಾನ್ ಗೆ ಹತ್ತಿರವಾಗುತ್ತಿದ್ದು, ಸತತ ಸೋಲುಗಳಿಂದ ನಿರಾಸೆಗೊಳಗಾದ ಗೆಳತಿಗೆ ಸಿನಿಮಾ ಆಯ್ಕೆಯಲ್ಲಿ ಸುಲ್ತಾನ್ ಸಲಹೆ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲಿವುಡ್ ಬಾದ್ ಶಾ ನಿಂದ ಗಂಭೀರ್‌ಗೆ ಪ್ರೀತಿಯ ಸಂದೇಶ

    ಬಾಲಿವುಡ್ ಬಾದ್ ಶಾ ನಿಂದ ಗಂಭೀರ್‌ಗೆ ಪ್ರೀತಿಯ ಸಂದೇಶ

    ಮುಂಬೈ: ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಗೌತಮ್ ಗಂಭೀರ್ ಅವರಿಗೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪ್ರೀತಿಯ ಸಂದೇಶ ರವಾನಿಸಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ಗಂಭೀರ್ ಮಂಗಳವಾರ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಘೋಷಿಸಿದ್ದರು. ಈ ಬಗ್ಗೆ ತಮ್ಮ ಮನದಾಳದ ಮಾತನ್ನಾಡಿರುವ ಶಾರುಖ್ ಖಾನ್ ರವರ ಸಂದೇಶ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.

    ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರೂಖ್, ಕ್ರಿಕೆಟ್‍ಗೆ ವಿದಾಯ ಹೇಳಿದ ಗಂಭೀರ್ ಅವರಿಗೆ ಬರೀ ಅಭಿನಂದಿಸಿ ಶುಭ ಕೋರಿಲ್ಲ, ಬದಲಿಗೆ ಗಂಭೀರ್ ಅವರನ್ನು ವಿಶೇಷ ವ್ಯಕ್ತಿಯನ್ನಾಗಿ ಪರಿಗಣಿಸಿದ್ದಾರೆ.

    ಗಂಭೀರ್ ಗೆ ಪ್ರೀತಿಯಿಂದ ಟ್ವೀಟ್ ಮಾಡಿರುವ ಶಾರೂಖ್, ‘ತಂಡದ ಮುಂದಾಳತ್ವಕ್ಕೆ ಮತ್ತು ಪ್ರೀತಿಗೆ ಧನ್ಯವಾದಗಳು ನನ್ನ ನಾಯಕನೇ. ವಿಶೇಷ ವ್ಯಕ್ತಿಯಾದ ನಿನ್ನನ್ನು ಅಲ್ಲಾ ಖುಷಿಯಾಗಿಟ್ಟಿರಲಿ. ನೀನಿನ್ನೂ ನಗುವಂತಾಗಲಿ’ ಎಂದು ಬರೆದುಕೊಂಡಿದ್ದಾರೆ.

    ನಿವೃತ್ತಿ ಕುರಿತು ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದ ಅವರು, ಸತತವಾಗಿ 15 ವರ್ಷ ಭಾರತ ದೇಶಕ್ಕಾಗಿ ನಾನು ಕ್ರಿಕೆಟ್ ಆಡಿದ್ದೇನೆ. ಈ ಸುಂದರವಾದ ಆಟದಿಂದ ಈಗ ನಿವೃತ್ತಿ ಬಯಸುತ್ತಿದ್ದೇನೆ. ನನ್ನ ಕೊನೆಯ ಪಂದ್ಯವನ್ನು ಡಿಸೆಂಬರ್ 6 ರಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಆಂಧ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಆಡಲಿದ್ದೇನೆ. ಒಬ್ಬ ಬ್ಯಾಟ್ಸ್‍ಮನ್ ಆಗಿ ಸಮಯಕ್ಕೆ ತುಂಬಾ ಮಹತ್ವವನ್ನು ನೀಡಿದ್ದೇನೆ. ಈಗ ನನಗೆ ಸರಿಯಾದ ಸಮಯ ಬಂದಿದೆ ಎಂದು ಹೇಳಿದ್ದರು.

    37 ವರ್ಷದ ಗೌತಮ್ ಗಂಭೀರ್ ಇದುವರೆಗೂ ಒಟ್ಟು 147 ಏಕದಿನ ಪಂದ್ಯಗಳನ್ನಾಡಿದ್ದು, 39.68ರ ಸರಾಸರಿಯಲ್ಲಿ 5,238 ರನ್ ಗಳಿಸಿದ್ದರು. ಇದರಲ್ಲಿ 11 ಶತಕ ಹಾಗೂ 34 ಅರ್ಧ ಶತಕಗಳನ್ನು ಒಳಗೊಂಡಿದೆ. 52 ಟೆಸ್ಟ್ ಪಂದ್ಯಗಳಲ್ಲಿ 41.95 ಸರಾಸರಿಯಂತೆ 4,154 ರನ್ ಹೊಡೆದಿದ್ದರು. ಇದರಲ್ಲಿ 9 ಶತಕ ಸೇರಿದಂತೆ 22 ಅರ್ಧ ಶತಕಗಳು ದಾಖಲಾಗಿವೆ. ಇದಲ್ಲದೇ ಟಿ-20ಯಲ್ಲಿ 37 ಪಂದ್ಯಗಳನ್ನಾಡಿದ್ದ ಅವರು, 27.41ರ ಸರಾಸರಿಯಲ್ಲಿ 932 ರನ್ ಬಾರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ಮೂಲಕ ವಿಶ್ವ ಮಟ್ಟದಲ್ಲಿ ಶುರುವಾಗಲಿದೆಯಾ ಯಶ್ ಹವಾ?

    ಕೆಜಿಎಫ್ ಮೂಲಕ ವಿಶ್ವ ಮಟ್ಟದಲ್ಲಿ ಶುರುವಾಗಲಿದೆಯಾ ಯಶ್ ಹವಾ?

    ಬೆಂಗಳೂರು: ಅಖಂಡ ಎರಡು ವರ್ಷಗಳ ನಿರಂತರ ಶ್ರಮವೊಂದು ಸಾರ್ಥಕಗೊಂಡಿದೆ. ಈ ಅವಧಿಯಲ್ಲಿ ಈ ಸಿನಿಮಾವನ್ನೇ ಉಸಿರಾಡಿದ್ದ ಕೆಜಿಎಫ್ ಚಿತ್ರತಂಡದ ಮುಖದಲ್ಲೀಗ ತೃಪ್ತಿಯ ಮಂದಹಾಸ ಮೂಡಿಕೊಂಡಿದೆ. ಅದಕ್ಕೆ ಕಾರಣವಾಗಿರೋದು ಮೊನ್ನೆಯಷ್ಟೇ ಬಿಡುಗಡೆಯಾಗಿರೋ ಟ್ರೇಲರ್ ಗೆ ಎಲ್ಲ ಭಾಷೆಗಳಲ್ಲಿಯೂ ಸಿಗುತ್ತಿರೋ ಅಭೂತಪೂರ್ವ ಪ್ರತಿಕ್ರಿಯೆ!

    ಯಶ್ ಅಭಿನಯದ ಈ ಚಿತ್ರ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅಭಿನಯದ ಝೀರೋ ಚಿತ್ರಕ್ಕೆದುರಾಗಿ ಬಿಡುಗಡೆಯಾಗಲಿದೆ. ಈ ವಿಚಾರ ತಿಳಿಯುತ್ತಲೇ ಅನೇಕರು ಲೇವಡಿಯಾಡಿದ್ದೂ ಇದೆ. ಆದರೆ ಇದೀಗ ಕೆಜಿಎಫ್ ಟ್ರೇಲರ್ ಬಾಲಿವುಡ್ ಮಟ್ಟದಲ್ಲಿಯೂ ಸಂಚಲನ ಸೃಷ್ಟಿಸಿದೆ. ಇದುವೇ ಈ ಚಿತ್ರದ ಗೆಲುವಿನ ಭವಿಷ್ಯವನ್ನೂ ಹೇಳುತ್ತಿದೆ.

    ಟ್ರೇಲರ್ ಹವಾ ಮೂಲಕವೇ ಸ್ಯಾಂಡಲ್‍ವುಡ್‍ಗೆ ಸೀಮಿತವಾಗಿದ್ದ ಯಶ್ ಬಾಲಿವುಡ್ ಅನ್ನೂ ಮೀರಿ ವಿಶ್ವ ಮಟ್ಟದಲ್ಲಿಯೂ ಹೆಸರು ಮಾಡಲಿದ್ದಾರೆಂಬ ಮಾತುಗಳೂ ವ್ಯಾಪಕವಾಗಿಯೇ ಕೇಳಿ ಬರಲಾರಂಭಿಸಿವೆ. ಇಂಥಾ ಸಂದರ್ಭದಲ್ಲಿಯೇ ಯಶ್ ಕೂಡಾ ಈ ಯಶದ ಬಗ್ಗೆ ಮಾತಾಡಿದ್ದಾರೆ. ತಾನು ವಿಶ್ವಮಟ್ಟದಲ್ಲಿ ಗಮನ ಸೆಳೆದವ ನಟ ಅಲ್ಲದಿದ್ದರೂ ಶಾರೂಖ್ ರಂಥಾ ನಟರ ಸಿನಿಮಾದೊಂದಿಗೇ ತಮ್ಮ ಕೆಜಿಎಫ್ ಚಿತ್ರವೂ ತೆರೆ ಕಾಣುತ್ತಿರೋದರ ಬಗ್ಗೆ ಖುಷಿ ಇದೆ ಅಂದಿದ್ದಾರೆ. ಜೊತೆಗೆ ತಾವು ಸಿನಿಮಾ ಅಭಿಮಾನಿ ಅಂದಿರೋ ಯಶ್ ಅವರಿಗೆ ಬಾಲಿವುಡ್ಡಲ್ಲಿ ಅಮಿತಾಬ್ ಬಚ್ಚನ್ ಅಂದ್ರೆ ಇಷ್ಟವಂತೆ. ಇನ್ನು ದೀಪಿಕಾ ಪಡುಕೋಣೆ ಅಂದರೂ ತಮಗಿಷ್ಟ ಅಂದಿದ್ದಾರೆ ಯಶ್!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ವಿರುದ್ಧ ದೂರು ದಾಖಲು

    ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ವಿರುದ್ಧ ದೂರು ದಾಖಲು

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ವಿರುದ್ಧ ಸಿಖ್ ಸಮುದಾಯದವರು ದೂರು ದಾಖಲಿಸಿದ್ದಾರೆ.

    ‘ಝೀರೋ’ ಚಿತ್ರದ ಟ್ರೇಲರ್ ನಲ್ಲಿ ಶಾರೂಕ್ ‘ಕಿರ್ ಪನ್’ ಧರಿಸಿದ್ದಕ್ಕೆ ದೆಹಲಿಯ ಸಿಖ್ ಗುರುದ್ವಾರ ಮ್ಯಾನೇಜ್‍ಮೆಂಟ್ ಕಮಿಟಿಯ ಜನರಲ್ ಸೆಕ್ರೆಟರಿ ಮಂಜಿದರ್ ಸಿಂಗ್ ಸಿರಸಾ ಶಾರೂಕ್ ಹಾಗೂ ನಿರ್ದೇಶಕ ಆನಂದ್ ಎಲ್ ರೈ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.

    ಸಿಖ್ ಸಮುದಾಯದವರು ಝೀರೋ ಚಿತ್ರದ ಟ್ರೈಲರ್ ತಮ್ಮ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರು ನೀಡುತ್ತಿದ್ದರು. ಹಾಗಾಗಿ ದೆಹಲಿಯ ನಾರ್ತ್ ಆವೆನ್ಯೂ ಪೊಲೀಸ್ ಠಾಣೆಯಲ್ಲಿ ಶಾರೂಕ್ ಹಾಗೂ ಆನಂದ್ ವಿರುದ್ಧ ದೂರು ದಾಖಲಾಗಿದೆ.

    ಚಿತ್ರದ ಟ್ರೈಲರ್ ನಲ್ಲಿ ಶಾರೂಕ್ ಗತ್ರಾ ಕಿರ್ ಪನ್ ಧರಿಸಿದ್ದಾರೆ. ವಿಶ್ವಾದ್ಯಂತ ಸಿಖ್ ಸಮುದಾಯದವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಖ್ ಸಂಪ್ರದಾಯದ ಪ್ರಕಾರ ಗತ್ರ ಕಿರ್ ಪನ್ ಕೇವಲ ಅಮ್ರಿತ್‍ದರಿ ಸಿಖ್ ಜನರು ಧರಿಸುವುದು. ಹಾಗಾಗಿ ಶಾರೂಕ್ ಹಾಗೂ ಆನಂದ್ ವಿರುದ್ಧ ದೂರು ದಾಖಲಿಸಬೇಕೆಂದು ಪೊಲೀಸರಿಗೆ ಮಂಜಿದರ್ ಒತ್ತಾಯಿಸಿದ್ದಾರೆ.

     

    View this post on Instagram

     

    @zero21dec @iamsrk @katrinakaif @anushkasharma #zeroposter

    A post shared by Rana Usama (@ranausama182) on

    ಝೀರೋ ಚಿತ್ರದ ಟ್ರೈಲರ್ ನಲ್ಲಿ ಶಾರೂಕ್ ಗತ್ರ ಕಿರ್ ಪನ್ ಧರಿಸಿದ ಕಾರಣ ವಿಳಂಬ ಮಾಡದೇ ಈ ಟ್ರೇಲರ್ ಪ್ರದರ್ಶನ ಮಾಡುವುದನ್ನು ನಿಲ್ಲಿಸಬೇಕೆಂದು ಮಂಜಿದರ್ ಸಿಂಗ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಚಿತ್ರದಲ್ಲಿ ನಟಿ ಶ್ರೀದೇವಿ, ರಾಣಿ ಮುಖರ್ಜಿ, ಕಾಜೋಲ್, ಅಲಿಯಾ ಭಟ್, ಅಭಯ್ ಡಿಯೋಲ್, ಆರ್. ಮಾಧವನ್ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಾರೂಕ್‍ಗೆ ನಾಯಕಿಯಾಗಿ ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್ ನಟಿಸಿದ್ದು, ಡಿಸೆಂಬರ್ 21ರಂದು ಚಿತ್ರ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬರ್ತ್‌ ಡೇಯಂದು ಕಿಂಗ್‍ಖಾನ್‍ಗಾಗಿ ಕತ್ತು ಕುಯ್ದುಕೊಂಡ ಹುಚ್ಚು ಅಭಿಮಾನಿ!

    ಬರ್ತ್‌ ಡೇಯಂದು ಕಿಂಗ್‍ಖಾನ್‍ಗಾಗಿ ಕತ್ತು ಕುಯ್ದುಕೊಂಡ ಹುಚ್ಚು ಅಭಿಮಾನಿ!

    ಮುಂಬೈ: ಹುಚ್ಚು ಅಭಿಮಾನಿಯೊಬ್ಬ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಹುಟ್ಟುಹಬ್ಬದಂದು ಅವರನ್ನು ಭೇಟಿ ಮಾಡಲು ಸಾಧ್ಯವಾಗದ್ದಕ್ಕೆ ಬೇಸರಗೊಂಡು ತನ್ನ ಕತ್ತನ್ನು ಕುಯ್ದುಕೊಂಡಿದ್ದಾನೆ.

    ಈ ಘಟನೆ ಶುಕ್ರವಾರ ಬಾಂದ್ರಾದಲ್ಲಿ ನಡೆದಿದ್ದು, ಮೊಹಮ್ಮದ್ ಸಲೀಂ ಎಂಬ ಹುಚ್ಚು ಅಭಿಮಾನಿಯೇ ತನ್ನ ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಕತ್ತನ್ನೇ ಸೀಳಿಕೊಂಡಿದ್ದಾನೆ. ಶುಕ್ರವಾರ ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರು ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಈ ವೇಳೆ ಶಾರೂಕ್ ಅವರ ಮನ್ನತ್ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭ ಕೋರುತ್ತಿದ್ದರು.

    ಶಾರೂಖ್ ಮನೆಯ ಬಳಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಸಂಪೂರ್ಣ ಭದ್ರತಾ ವ್ಯವಸ್ಥೆ ಹಾಕಿ ಅಭಿಮಾನಿಗಳನ್ನು ಮನೆ ಒಳಗಡೆ ತೆರಳಲು ಬಿಡಲಿಲ್ಲ. ಇದರಿಂದಾಗಿ ಅಭಿಮಾನಿ ಮೊಹಮ್ಮದ್ ಸಲೀಂ ಮನನೊಂದು ಶುಕ್ರವಾರ ಬೆಳಗಿನ ಜಾವ 3.05 ಕ್ಕೆ ತನ್ನ ಗಂಟಲನ್ನು ಚಾಕುವಿನಿಂದ ಸೀಳಿಕೊಂಡಿದ್ದಾನೆ. ತಕ್ಷಣ ಅಲ್ಲೇ ಇದ್ದ ಪೊಲೀಸರು ಆತನನ್ನು ಬಾಬಾ ಆಸ್ಪತ್ರೆಗೆ ಕರೆದುಕೊಂಡು ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ.

    ಚಿಕಿತ್ಸೆಯ ಬಳಿಕ ಸಲೀಂ ಅವರ ಪತ್ನಿಯನ್ನು ಕರೆಸಿ ಆತನನ್ನು ಮನೆಗೆ ಕಳುಹಿಸಲಾಗಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಈ ಘಟನೆ ಸಂಬಂಧಪಟ್ಟಂತೆ ಡೈರಿಯಲ್ಲಿ ನಮೂದಿಸಲಾಗಿದ್ದು, ಸಲೀಂ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ ಎಂದು ಅಧಿಕಾರಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೀಪಿಕಾ ಮದ್ವೆ ಸುದ್ದಿ ಕೇಳಿ ಎಮೋಷನಲ್ ಆಗ್ಬಿಟ್ಟೆ: ಶಾರೂಖ್ ಖಾನ್

    ದೀಪಿಕಾ ಮದ್ವೆ ಸುದ್ದಿ ಕೇಳಿ ಎಮೋಷನಲ್ ಆಗ್ಬಿಟ್ಟೆ: ಶಾರೂಖ್ ಖಾನ್

    ಮುಂಬೈ: ಬಾಲಿವುಡ್ ಗುಳಿ ಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಮದುವೆ ಸುದ್ದಿ ಕೇಳಿದಾಗ ನಾನು ಎಮೋಷನಲ್ ಆದೆ ಎಂದು ಕಿಂಗ್ ಖಾನ್ ಶಾರೂಖ್ ಖಾನ್ ಹೇಳಿದ್ದಾರೆ.

    ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ವಿಷಯವನ್ನು ರಿವೀಲ್ ಮಾಡಿದಾಗ ತುಂಬಾನೇ ಖುಷಿ ಆಯಿತು. ನಾನು ಅಂದೇ ದೀಪಿಕಾಗೆ ಮದುವೆ ಶುಭಾಶಯವನ್ನು ಸಹ ತಿಳಿಸಿದೆ. ನಾನು ನನ್ನ ದಾಂಪತ್ಯ ಜೀವನದಲ್ಲಿ ತುಂಬಾ ಸಂತೋಷವಾಗಿದ್ದೇನೆ. ಹಾಗೆಯೇ ನನ್ನ ಜೊತೆ ನಟಿಸಿದ್ದ ನಟಿಯರು ಸಾಂಸಾರಿಕ ಜೀವನದಲ್ಲಿ ಚೆನ್ನಾಗಿರಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

    ನನಗೆ ಜೊತೆಯಾಗಿ ನಟಿಸಿದ ನಟಿಯರ ಮದುವೆ ಸುದ್ದಿ ಕೇಳಿದಾಗ ಸಹಜವಾಗಿ ಖುಷಿ ಆಗುತ್ತದೆ. ಮೊದಲಿಗೆ ನಾನು ಶ್ರೀದೇವಿ ಮತ್ತು ಮಾಧುರಿ ಅವರೊಂದಿಗೆ ಸಿನಿ ಜೀವನವನ್ನು ಆರಂಭಿಸಿದೆ. ಅಂದು ನಾನು ಈ ನಟಿಯರೊಂದಿಗೆ ನಟಿಸಿದ್ದ ಸಿನಿಮಾಗಳು ನನ್ನ ಫಿಲಂ ಕೆರಿಯರ್ ನ್ನು ಎತ್ತರಕ್ಕೆ ತಲಪುವಂತೆ ಮಾಡಿದ್ದವು. ಇನ್ನು ಎರಡನೇ ಜನರೇಷನ್ ನಲ್ಲಿ ನನಗೆ ಜೊತೆಯಾಗಿ ನಟಿಸಿದ್ದು ದೀಪಿಕಾ ಪಡುಕೋಣೆ ಮತ್ತು ಅನುಷ್ಕಾ ಶರ್ಮಾ. ಈ ಮಹಿಳೆಯರು ನನ್ನ ಜೀವನದಲ್ಲಿ ಅತ್ಯಂತ ಪ್ರಮುಖರು. ಸಹಜವಾಗಿ ಇವರೆಲ್ಲರೂ ಮದುವೆ ಆಗ್ತಿದ್ದೀನಿ ಅಂದಾಗ ಒಂದು ಕ್ಷಣ ಭಾವುಕನಾಗಿದ್ದೇನೆ ಎಂದು ತಿಳಿಸಿದ್ದಾರೆ.

    2007ರಲ್ಲಿ ತೆರೆಕಂಡ ಶಾರೂಖ್ ಅಭಿನಯದ ‘ಓಂ ಶಾಂತಿ ಓಂ’ ಚಿತ್ರದ ಮೂಲಕ ದೀಪಿಕಾ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು. 2008 ರಲ್ಲಿ ತೆರೆಕಂಡ ‘ರಬನೇ ಬನಾ ದಿ ಜೋಡಿ’ ಸಿನಿಮಾ ಮೂಲಕ ಅನುಷ್ಕಾ ಶರ್ಮಾ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ದೀಪಿಕಾ ಮತ್ತು ಶಾರೂಖ್ ಖಾನ್ ಜೊತೆಯಾಗಿ ನಟಿಸಿದ್ದ ಓಂ ಶಾಂತಿ ಓಂ, ಚೆನ್ನೈ ಎಕ್ಸ್ ಪ್ರೆಸ್ ಮತ್ತು ಹ್ಯಾಪಿ ನ್ಯೂ ಇಯರ್ ಮೂರು ಸಿನಿಮಾಗಳು ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡಿವೆ.

    ನವೆಂಬರ್ 14 ಮತ್ತು 15ರಂದು ಬಾಲಿವುಡ್ ತಾರೆ, ದೀಪಿಕಾ ಪಡುಕೋಣೆ ಮತ್ತು ನಟ ರಣ್‍ವೀರ್ ಸಿಂಗ್ ಮದುವೆ ನಡೆಯಲಿದೆ. ಈಗಾಗಲೇ ಬೆಂಗಳೂರು ತಲುಪಿರುವ ದೀಪಿಕಾ ಮದುವೆ ಶಾಸ್ತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿಗೆ ಬರುವ ಮುನ್ನವೇ ದೀಪಿಕಾ ಚಿನ್ನಾಭರಣ ಖರೀದಿಸಿದ್ದು, 20 ಲಕ್ಷ ರೂ. ಬೆಲೆ ಬಾಳುವ ಮಂಗಳಸೂತ್ರ ಖರೀದಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv