Tag: Shahrukh Khan

  • ಕೋಟ್ ಧರಿಸುತ್ತಿದ್ದ ವಿದ್ಯಾರ್ಥಿನಿ ಕೂದಲು ಸರಿಮಾಡಿದ ಶಾರುಖ್ – ವಿಡಿಯೋ ವೈರಲ್

    ಕೋಟ್ ಧರಿಸುತ್ತಿದ್ದ ವಿದ್ಯಾರ್ಥಿನಿ ಕೂದಲು ಸರಿಮಾಡಿದ ಶಾರುಖ್ – ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ಕಿಂಗ್‍ಖಾನ್ ಶಾರುಖ್ ಖಾನ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಕಾರ್ಯಕ್ರಮವೊಂದರ ವೇದಿಕೆ ಮೇಲೆ ವಿದ್ಯಾರ್ಥಿನಿಯ ಕೂದಲು ಸರಿಮಾಡಿ ಕೋಟ್ ಹಾಕಿಕೊಳ್ಳಲು ಶಾರುಖ್ ಸಹಾಯ ಮಾಡಿದ್ದು, ಅವರು ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುವ ರೀತಿ ನೆಟ್ಟಿಗರ ಮನ ಗೆದ್ದಿದೆ.

    ಇತ್ತೀಚೆಗೆ ಮುಂಬೈನ ಲಾ ಥ್ರೋಬ್ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಭಾಗಿಯಾಗಿದ್ದರು. ಸ್ನಾತಕೋತ್ತರ ಸ್ಕಾಲರ್‌ಶಿಪ್ ಪಡೆದ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಗಿತ್ತು. ಸ್ನಾತಕೋತ್ತರ ವಿದ್ಯಾರ್ಥಿನಿ ಕೇರಳದ ಗೋಪಿಕಾಗೆ ಗೌರವಿಸುವ ವೇಳೆ ಶಾರುಖ್ ಆಕೆಗೆ ಕೋಟ್ ಹಾಕಿಕೊಳ್ಳಲು ಸಹಾಯ ಮಾಡಿದರು. ಅಷ್ಟೇ ಅಲ್ಲದೇ ಆಕೆಯ ಕೂದಲನ್ನು ಸರಿ ಮಾಡಿದರು. ಸ್ಟಾರ್ ನಟನಾಗಿದ್ದರೂ ಹಿಂಜರಿಯದೆ ವಿದ್ಯಾರ್ಥಿನಿಗೆ ಸಹಾಯ ಮಾಡಿದ ಶಾರುಖ್ ಕಾರ್ಯ ಅಭಿಮಾನಿಗಳ ಮನ ಗೆದ್ದಿದೆ. ಶಾರುಖ್ ವಿದ್ಯಾರ್ಥಿನಿಗೆ ಸಹಾಯ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಕಿಂಗ್‍ಖಾನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ವಿದ್ಯಾರ್ಥಿ ವೇತನ ನೀಡಿ ಗೋಪಿಕಾಗೆ ಶಾರುಖ್ ಶುಭಹಾರೈಸಿದ್ದರು. ಗೋಪಿಕಾ ಪರಿಸರ ವಿಜ್ಞಾನ ವಿಷಯದಲ್ಲಿ ಸಂಶೋಧನೆ ಮಾಡುತ್ತಿರುವುದು ದೊಡ್ಡ ವಿಚಾರ. ಈ ಬಗ್ಗೆ ನನಗೆ ತಿಳಿದಿಲ್ಲ. ಅದನ್ನು ನಾನು ತಿಳಿದುಕೊಳ್ಳಲು ಹೋದರೆ ಅಷ್ಟೇ ಕಥೆ. ಆಕೆಗೆ ಒಳ್ಳೆಯದಾಗಲಿ ಎಂದು ಶುಭಕೋರಿದ್ದರು.

    ಗೋಪಿಕಾಗೆ ಶಿಕ್ಷಣ ನೀಡುತ್ತಿರುವ ಅವರ ಕುಟುಂಬಕ್ಕೆ ಧನ್ಯವಾದ. ಶಿಕ್ಷಣಕ್ಕೆ ಅಂತ್ಯವಿಲ್ಲ, ಯಾವುದಾದರೂ ವಿಷಯಗಳ ಬಗ್ಗೆ ನಾವು ಕಲಿಯುತ್ತಲೇ ಇರುತ್ತೇವೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ, ಅವರು ಸಬಲರಾಗುವಂತೆ ಮಾಡುವುದು ಮುಖ್ಯ. ಶಿಕ್ಷಣ ಕ್ಷೇತ್ರದಲ್ಲಿ ಭಾರತ ಮುಂದುವರಿಯುತ್ತಿದೆ ಎಂಬುದು ನನ್ನ ಅನಿಸಿಕೆ. ಗೋಪಿಕಾಳ ಆಸಕ್ತಿ ನಿಜಕ್ಕೂ ಮೆಚ್ಚುವಂತದ್ದು, ಈ ವಿದ್ಯಾರ್ಥಿ ವೇತನವು ಆಸ್ಟ್ರೇಲಿಯಾದ ಮೆಲ್ಬೋರ್ನ್‍ನಲ್ಲಿರುವ ಲಾ ಟ್ರೋಬ್‍ಗೆ ಪ್ರಯಾಣಿಸಲು ಗೋಪಿಕಾಗೆ ನೆರವಾಗುತ್ತೆ. ಅಲ್ಲಿ ಭಾರತದ ಕೃಷಿ ಕ್ಷೇತ್ರವನ್ನು ಸುಧಾರಿಸಿ, ಸಾಧನೆ ಮಾಡುವ ಆಕೆ ಕನಸು ನನಸಾಗಿಸಿಕೊಳ್ಳಲು ಅವಕಾಶ ದೊರೆಯುತ್ತದೆ ಎಂದು ಖಾರುಖ್ ಹೇಳಿದ್ದರು.

    ಸದ್ಯ ಎಲ್ಲೆಡೆ ವೈರಲ್ ಆಗುತ್ತಿರುವ ಶಾರುಖ್ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಿಂಗ್‍ಖಾನ್ ಹೆಣ್ಣುಮಕ್ಕಳ ಮೇಲಿಟ್ಟಿರುವ ಗೌರವ, ನಡೆಸಿಕೊಳ್ಳುವ ರೀತಿಗೆ ನೆಟ್ಟಿಗರು ಮನಸೋತ್ತಿದ್ದು, ನೀವು ಸೂಪರ್ ಶಾರುಖ್ ಎಂದು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ, ಮಕ್ಕಳು ಹಿಂದೂಸ್ತಾನಿಗಳು: ಶಾರೂಖ್ ಖಾನ್

    ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ, ಮಕ್ಕಳು ಹಿಂದೂಸ್ತಾನಿಗಳು: ಶಾರೂಖ್ ಖಾನ್

    ಮುಂಬೈ: ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ ಮತ್ತು ನನ್ನ ಮಕ್ಕಳು ಹಿಂದೂಸ್ತಾನಿಗಳು ಎಂದು ಹೇಳುವ ಮೂಲಕ ಬಾಲಿವುಡ್ ಕಿಂಗ್‍ಖಾನ್ ಶಾರೂಖ್ ಖಾನ್ ಧರ್ಮಗಳ ಬಗ್ಗೆ ಮಾತನಾಡಿದ್ದಾರೆ.

    ಸದ್ಯ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದಿರುವ ಅವರು, ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ನಮ್ಮ ಮನೆಯಲ್ಲಿ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ, ಮಕ್ಕಳು ಹಿಂದೂಸ್ತಾನಿಗಳು ಎಂದು ಹೇಳಿದ್ದಾರೆ.

    ನಮ್ಮ ಮನೆಯಲ್ಲಿ ಧರ್ಮಗಳ ಬಗ್ಗೆ ಚರ್ಚೆ ಅಗುವುದಿಲ್ಲ. ನಮ್ಮ ಮಕ್ಕಳು ಧರ್ಮವನ್ನು ಇಂಡಿಯನ್ ಎಂದು ಬಳಸುತ್ತಾರೆ. ನನ್ನ ಮಗಳು ಚಿಕ್ಕವಳಾಗಿದ್ದಾಗ ಅವರ ಶಾಲೆಯಲ್ಲಿ ನಿಮ್ಮ ಧರ್ಮ ಯಾವುದು ಎಂದು ಬರೆಯಬೇಕಿತ್ತು. ಆಗ ನನ್ನ ಮಗಳು ನನ್ನ ಬಳಿ ಬಂದು ನಮ್ಮ ಧರ್ಮ ಯಾವುದು ಎಂದು ಕೇಳಿದಳು. ನಾನು ಆಗ ನಾವು ಭಾರತೀಯರು ನಮಗೆ ಧರ್ಮವಿಲ್ಲ ಎಂದು ಬರೆಯಲು ಹೇಳಿದೆ ಎಂದು ತಿಳಿಸಿದ್ದಾರೆ.

    ನಾವು ಯಾವುತ್ತು ಹಿಂದೂ ಮುಸ್ಲಿಂ ಎಂದು ಮಾತನಾಡುವುದಿಲ್ಲ. ಮನೆಯಲ್ಲಿ ನಾವು ಎಲ್ಲಾ ಧರ್ಮಗಳ ಹಬ್ಬವನ್ನು ಆಚರಣೆ ಮಾಡುತ್ತೇವೆ. ಮಕ್ಕಳ ಮೇಲೆ ಧರ್ಮವನ್ನು ಹೇರುವುದಿಲ್ಲ. ಅದಕ್ಕಾಗಿಯೇ ನನ್ನ ಮಕ್ಕಳಿಗೆ ನಾನು ಆರ್ಯನ್ ಮತ್ತು ಸುಹಾನಾ ಎಂದು ಹೆರರಿಟ್ಟದ್ದೇನೆ. ಖಾನ್ ಎಂಬ ಹೆಸರು ನನ್ನಿಂದ ಬಂದಿರುವುದು, ಅವರು ಅದರಿಂದ ತಪ್ಪಿಸಿಕೊಳ್ಳಲು ಆಗಲ್ಲ ಎಂದು ಕಾರ್ಯಕ್ರಮದಲ್ಲಿ ಶಾರುಖ್ ಹೇಳಿದ್ದಾರೆ.

    ಇದೇ ಕಾರ್ಯಕ್ರಮದಲ್ಲಿ ಧರ್ಮದ ಬಗ್ಗೆ ಮಾತನಾಡಿರುವ ಶಾರುಖ್ ಖಾನ್ ಅವರು, ನಾನು ನಮಾಜ್ ಅನ್ನು ದಿನಕ್ಕೆ ಐದು ಬಾರಿ ಮಾಡಿದರೆ ನಾನು ಧಾರ್ಮಿಕನಲ್ಲ. ಆದರೆ ನಾನು ಇಸ್ಲಾಮಿಕ್. ನಾನು ಇಸ್ಲಾಂ ಧರ್ಮದ ಸಿದ್ಧಾಂತಗಳನ್ನು ನಂಬುತ್ತೇನೆ. ನನ್ನ ಧರ್ಮ ಒಳ್ಳೆಯದು ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.

    ಶಾರುಖ್ ಖಾನ್ ಸದ್ಯ ಸಿನಿಮಾಗಳಿಂದ ಸ್ವಲ್ಪ ವಿರಾಮ ಪಡೆದಿದ್ದಾರೆ. ಝೀರೋ ಸಿನಿಮಾದ ನಂತರ ಶಾರುಖ್ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಶಾರುಖ್ ಖಾನ್ ಅವರ ಇತ್ತೀಚೆಗೆ ಬಿಡುಗಡೆ ಕಂಡ ಚಿತ್ರಗಳು ಅಷ್ಟೇನು ಯಶಸ್ವಿಯಾಗಿಲ್ಲ. ಅದ್ದರಿಂದ ಕಿಂಗ್ ಖಾನ್ ಸಿನಿಮಾದಿಂದ ದೂರ ಉಳಿದಿದ್ದು, ಶಾರುಖ್ ಅವರ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿ ವಲಯದಲ್ಲಿ ಚರ್ಚೆಯಾಗುತ್ತದೆ.

  • 30 ವರ್ಷದ ‘ಮೆಹನತ್’ ಶಾರುಖ್ ಖಾನ್‍ರ ‘ಮನ್ನತ್’

    30 ವರ್ಷದ ‘ಮೆಹನತ್’ ಶಾರುಖ್ ಖಾನ್‍ರ ‘ಮನ್ನತ್’

    ಮುಂಬೈ: ಬಾಲಿವುಡ್ ಕಾ ಬಾದ್‍ಷಾ ಶಾರುಖ್ ಖಾನ್‍ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಭಾರತ ಮಾತ್ರವಲ್ಲ ವಿದೇಶದಲ್ಲೂ ಶಾರುಖ್ ಅಭಿನಯಕ್ಕೆ ಮನಸೋತ ಅಭಿಮಾನಿ ಬಳಗವಿದೆ. ಶಾರುಖ್ ಮಾತ್ರವಲ್ಲ ಅವರ ‘ಮನ್ನತ್’ ಬಂಗಲೆ ಕೂಡ ಸಿಕ್ಕಾಪಟ್ಟೆ ಫೇಮಸ್.

    ಹೌದು. ಶಾರುಖ್ ಖಾನ್‍ಗೆ ಎಷ್ಟು ಅಭಿಮಾನಿಗಳು ಇದ್ದಾರೋ, ಅವರ ಮನ್ನತ್ ಬಂಗಲೆಗೂ ಕೂಡ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಮುಂಬೈನಲ್ಲಿ ಮನ್ನತ್ ಬಂಗಲೆ ಒಂದು ರೀತಿ ಪ್ರವಾಸಿ ತಾಣದಂತೆ ಆಗಿಬಿಟ್ಟಿದೆ. ಸಾಮಾನ್ಯವಾಗಿ ಮುಂಬೈಗೆ ಹೋಗುವ ಶಾರುಖ್ ಅಭಿಮಾನಿಗಳು ಮನ್ನತ್ ಬಂಗಲೆ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳದೆ ವಾಪಸ್ ಬರಲ್ಲ. ಅಷ್ಟರ ಮಟ್ಟಿಗೆ ಮನ್ನತ್ ಬಂಗಲೆ ಫೇಮಸ್ ಆಗಿದೆ.

    ಮುಂಬೈನ ಬಾಂದ್ರಾ ಬ್ಯಾಂಡ್‍ಸ್ಟ್ಯಾಂಡ್‍ನಲ್ಲಿ ಶಾರುಖ್ ಅವರ ಮನ್ನತ್ ಬಂಗಲೆ ಇದೆ. ಮುಂಬೈನ ಸಮುದ್ರ ತೀರದಲ್ಲಿ ಈ ಬಂಗಲೆ ಇದ್ದು, ಸುಂದರ ಪ್ರಕೃತಿಯ ಮಧ್ಯೆ ಐಷಾರಾಮಿ ಮನ್ನತ್ ಬಂಗಲೆ ಎಲ್ಲರ ಗಮನ ಸೆಳೆದಿದೆ. ಈ ಸುಂದರ ಮನ್ನತ್ ಬಂಗಲೆ ಈಗ ಅಂದಾಜು 200 ಕೋಟಿ ರೂ. ಬೆಲೆ ಬಾಳುತ್ತದೆ.

    ಈ ಬಂಗಲೆ ನೋಡಿ ಆರ್ಕಷಿತಗೊಂಡ ಶಾರುಖ್ ಅಭಿಮಾನಿಯೋರ್ವ ಶಾರುಕ್‍ಗೆ ಟ್ವೀಟ್ ಮಾಡಿ, ‘ಸಾರ್ ನಿಮ್ಮ ಮನ್ನತ್ ಬಂಗಲೆಯಲ್ಲಿ ಒಂದು ರೂಮ್ ಬಾಡಿಗೆಗೆ ಬೇಕಿತ್ತು, ಎಷ್ಟು ಬಾಡಿಗೆ ಆಗುತ್ತೆ?’ ಎಂದು ಪ್ರಶ್ನಿಸಿದ್ದನು. ಇದಕ್ಕೆ ರೀ-ಟ್ವೀಟ್ ಮಾಡಿದ ಶಾರುಕ್, ’30 ವರ್ಷ ಶ್ರಮ ಪಡಬೇಕಾಗುತ್ತೆ’ ಎಂದು ಕೂಲ್ ಉತ್ತರ ನೀಡುವ ಮೂಲಕ ಮನ್ನತ್ ಬಂಗಲೆಗಾಗಿ ತಾವು 30 ವರ್ಷ ಶ್ರಮಿಸಿದ ಬಗ್ಗೆ ತಿಳಿಸಿದ್ದಾರೆ. ಈ ಟ್ವೀಟ್ ಸದ್ಯ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಶಾರುಖ್ ಉತ್ತರಕ್ಕೆ ಮನಸೋತಿದ್ದಾರೆ.

    ಕಷ್ಟಪಟ್ಟು, ಶ್ರಮಿಸಿ ಬಾಲಿವುಡ್‍ನಲ್ಲಿ ಹೆಸರು ಮಾಡಿದ ಕಲಾವಿದರಲ್ಲಿ ಶಾರುಖ್ ಕೂಡ ಒಬ್ಬರು. ದೆಹಲಿ ಮೂಲದವರಾದ ಶಾರುಖ್ ಬಾಲಿವುಡ್‍ಗೆ ಕಾಲಿಟ್ಟ ಮೇಲೆ ಸೆಟೆಲ್ ಆಗಿದ್ದು ಮುಂಬೈನಲ್ಲಿ. 2001ರಲ್ಲಿ ಶಾರುಖ್ ಅವರು ಮನ್ನತ್ ಬಂಗಲೆಯನ್ನು ಲೀಜ್‍ಗೆ ಪಡೆದಾಗ ಅದರ ಹೆಸರು ವಿಲ್ಲಾ ವಿಯೆನಾ ಎಂದಿತ್ತು. ಬಳಿಕ ಅದನ್ನು ಶಾರುಕ್ ಖರೀದಿಸಿದ ಬಳಿಕ ಅದಕ್ಕೆ ಮನ್ನತ್ ಎಂದು ಹೆಸರಿಟ್ಟರು. ಈ ಮನ್ನತ್ ಶಾರುಕ್ ಅವರ ಜೀವನದಲ್ಲಿ ಖರೀದಿಸಿದ ಬಹು ದುಬಾರಿ ವಸ್ತು ಎಂದು ಸ್ವತಃ ಶಾರುಕ್ ಅವರೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

    ಕಳೆದ ವರ್ಷ ಒಂದು ರೆಡಿಯೋ ಸಂದರ್ಶನದಲ್ಲಿ ಶಾರುಖ್ ತಾವು ಹೇಗೆ ತಮ್ಮ ಕನಸಿನ ಮನ್ನತ್ ಬಂಗಲೆ ಖರೀದಿಸಿದರು ಎಂಬುದನ್ನ ಹಂಚಿಕೊಂಡಿದ್ದರು. ನಾನು ದೆಹಲಿ ಹುಡುಗ, ದೆಹಲಿಯ ಮಂದಿ ಹೆಚ್ಚಾಗಿ ಬಂಗಲೆಗಳಲ್ಲಿ ವಾಸಿಸುತ್ತಾರೆ. ಆದರೆ ನಾನು ಮುಂಬೈಗೆ ಬಂದಾಗ ಪತ್ನಿ ಗೌರಿ ಜೊತೆಗೆ ಮೊದಲು ಅಪಾರ್ಟ್‌ಮೆಂಟ್‍ನಲ್ಲಿ ವಾಸಿಸುತ್ತಿದ್ದೆ. ಆಗ ನನ್ನ ಅತ್ತೆ ಇಷ್ಟು ಚಿಕ್ಕ ಮನೆಯಲ್ಲಿ ಹೇಗೆ ಇರುತ್ತೀರಾ ಅನ್ನುತ್ತಿದ್ದರು. ಮೊದಲ ಬಾರಿಗೆ ಮನ್ನತ್ ಬಂಗಲೆ ನೋಡಿದಾಗ ನನಗೆ ದೆಹಲಿಯ ಬಂಗಲೆ ನೆನಪಾಯ್ತು. ಅದಕ್ಕೆ ನಾನು ಅದನ್ನ ಖರೀದಿಸಿದೆ. ಇದು ನಾನು ನನ್ನ ಜೀವನದಲ್ಲಿ ಖರೀದಿಸಿದ ಅತ್ಯಂತ ದುಬಾರಿ ವಸ್ತು ಎಂದು ತಿಳಿಸಿದ್ದರು.

    ಕೇವಲ ಅಭಿಮಾನಿಗಳು ಮಾತ್ರವಲ್ಲ ಸ್ಟಾರ್ ನಟರಿಗೂ ಶಾರುಖ್ ಅವರ ಮನ್ನತ್ ಬಂಗಲೆ ಮೇಲೆ ಕಣ್ಣಿದೆ. ಶಾರುಖ್ ಅವರ ಆತ್ಮೀಯ ಗೆಳೆಯ ಸಲ್ಮಾನ್ ಖಾನ್ ಕೂಡ ಮನ್ನತ್ ಬಂಗಲೆಯ ಸೌಂದರ್ಯ ಸೋತು ಅದನ್ನು ಖರೀದಿಸಬೇಕು ಅಂದುಕೊಂಡಿದ್ದರು. ಆದರೆ ಅವರ ತಂದೆ ಬೇಡ ಎಂದಿದ್ದಕ್ಕೆ ಸಲ್ಲು ಸುಮ್ಮನಾಗಿದ್ದರು.

  • ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿದ ಶಾರೂಕ್ ಬಗ್ಗೆ ಸಲ್ಮಾನ್ ಪ್ರತಿಕ್ರಿಯೆ

    ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿದ ಶಾರೂಕ್ ಬಗ್ಗೆ ಸಲ್ಮಾನ್ ಪ್ರತಿಕ್ರಿಯೆ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರು ದೀಪಾವಳಿ ಪಾರ್ಟಿಯಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಮ್ಯಾನೇಜರ್ ಜೀವ ಉಳಿಸಿದ್ದರು. ಈ ಸುದ್ದಿ ಕೇಳುತ್ತಿದ್ದಂತೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಹೀರೋ ಎಂದು ಹೇಳುವ ಮೂಲಕ ಶಾರೂಕ್‍ರನ್ನು ಹೊಗಳಿದ್ದಾರೆ.

    ಸಲ್ಮಾನ್ ತನ್ನ ಇನ್‍ಸ್ಟಾಗ್ರಾಂನಲ್ಲಿ ಶಾರೂಕ್ ಖಾನ್ ನಟಿಸಿದ ‘ಹ್ಯಾಪಿ ನ್ಯೂ ಇಯರ್’ ಚಿತ್ರದ ಹಾಡಿನ ದೃಶ್ಯವೊಂದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ, “ಬೆಂಕಿಯಲ್ಲಿ ಜಿಗಿದು ಅದನ್ನು ನಂದಿಸಿ ಬೇರೆಯವರನ್ನು ರಕ್ಷಿಸುವವನೇ ನಿಜವಾದ ಹೀರೋ” ಎಂದು ಸಲ್ಮಾನ್ ಹಿನ್ನೆಲೆ ಧ್ವನಿ ನೀಡಿದ್ದಾರೆ.

     

    View this post on Instagram

     

    @iamsrk

    A post shared by Chulbul Pandey (@beingsalmankhan) on

    ಶಾರೂಕ್ ನಟಿ ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿದ ಸುದ್ದಿ ವೈರಲ್ ಆಗುತ್ತಿತ್ತು. ಈ ಸುದ್ದಿ ತಿಳಿದ ಸಲ್ಮಾನ್ ಹ್ಯಾಪಿ ನ್ಯೂ ಇಯರ್ ಚಿತ್ರದ ‘ಮನವಾ ಲಾಗೆ’ ಹಾಡಿದ ದೃಶ್ಯವೊಂದನ್ನು ಪೋಸ್ಟ್ ಮಾಡಿ ಶಾರೂಕ್‍ರನ್ನು ಹೀರೋ ಎಂದು ಹೊಗಳಿದ್ದಾರೆ.  ಇದನ್ನೂ ಓದಿ: ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿ ನಿಜ ಜೀವನದಲ್ಲೂ ಹೀರೋ ಆದ ಶಾರೂಕ್

    ಆಗಿದ್ದೇನು?
    ದೀಪಾವಳಿ ಹಬ್ಬವಿದ್ದ ಹಿನ್ನೆಲೆಯಲ್ಲಿ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್‍ನ ಹಲವು ಕಲಾವಿದರು ಸೇರಿದಂತೆ ಕ್ರಿಕೆಟ್ ಆಟಗಾರರು ಕೂಡ ಭಾಗಿಯಾಗಿದ್ದರು. ಐಶ್ವರ್ಯಾ ರೈ ಮ್ಯಾನೇಜರ್ ಅರ್ಚನಾ ಸದಾನಂದ್ ಅವರು ತಮ್ಮ ಮಗಳೊಂದಿಗೆ ಗಾರ್ಡನ್‍ನಲ್ಲಿ ನಿಂತಿದ್ದರು. ಈ ವೇಳೆ ಅವರು ಧರಿಸಿದ್ದ ಲೆಹೆಂಗಾಗೆ ಅಲ್ಲಿದ್ದ ದೀಪದ ಬೆಂಕಿಯ ಕಿಡಿ ತಾಕಿತ್ತು. ಇದನ್ನು ಗಮನಿಸಿದ ಶಾರೂಕ್ ತಕ್ಷಣ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಬೆಂಕಿಯನ್ನು ಆರಿಸಿದ್ದರು.

    ಈ ಘಟನೆಯಲ್ಲಿ ಅರ್ಚನಾ ಅವರ ಕೈ ಹಾಗೂ ಬಲಗಾಲಿಗೆ ಶೇ. 15ರಷ್ಟು ಸುಟ್ಟು ಗಾಯವಾಗಿದೆ. ಅಲ್ಲದೆ ಶಾರೂಕ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಗೊಂಡಿರುವ ಅರ್ಚನಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.

     

    View this post on Instagram

     

    Renowned publicist and Aishwarya Rai Bachchan’s manager of many years, Archana Sadanand’s lehenga caught fire from a Diwali Diya and while onlookers didn’t know what to do, superstar Shah Rukh Khan jumped to her rescue. While Archana and her daughter were present in the courtyard, her lehenga caught fire and when SRK noticed it, he took off his jacket to douse the flames with it. Reportedly, Archana sustained injuries in her right leg and hand while SRK too sustained minor burns which he got during his attempt to save her. Thankfully, because of the timely medical assistance and presence of ambulance nearby, Archana was immediately rushed to Nanavati Hospital in Vile Parle area. She was admitted to the ICU and visitors are not allowed to meet her as of now. She is recovering well, said the doctors. #archanasadanand #aishwaryaraibachchan #shahrukhkhan @viralbhayani

    A post shared by Viral Bhayani (@viralbhayani) on

  • ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿ ನಿಜ ಜೀವನದಲ್ಲೂ ಹೀರೋ ಆದ ಶಾರೂಕ್

    ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿ ನಿಜ ಜೀವನದಲ್ಲೂ ಹೀರೋ ಆದ ಶಾರೂಕ್

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್, ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಮ್ಯಾನೇಜರ್ ಜೀವ ಉಳಿಸಿ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ.

    ದೀಪಾವಳಿ ಹಬ್ಬವಿದ್ದ ಹಿನ್ನೆಲೆಯಲ್ಲಿ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್‍ನ ಹಲವು ಕಲಾವಿದರು ಸೇರಿದಂತೆ ಕ್ರಿಕೆಟ್ ಆಟಗಾರರು ಕೂಡ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಶಾರೂಕ್, ಐಶ್ವರ್ಯಾ ರೈ ಅವರ ಮ್ಯಾನೇಜರ್ ಅವರನ್ನು ಬೆಂಕಿ ಅವಘಡದಿಂದ ಪಾರು ಮಾಡಿದ್ದಾರೆ.

    ಐಶ್ವರ್ಯಾ ರೈ ಮ್ಯಾನೇಜರ್ ಅರ್ಚನಾ ಸದಾನಂದ್ ಅವರು ತಮ್ಮ ಮಗಳೊಂದಿಗೆ ಗಾರ್ಡನ್‍ನಲ್ಲಿ ನಿಂತಿದ್ದರು. ಈ ವೇಳೆ ಅವರು ಧರಿಸಿದ್ದ ಲೆಹೆಂಗಾಗೆ ಅಲ್ಲಿದ್ದ ದೀಪದ ಬೆಂಕಿಯ ಕಿಡಿ ತಾಕಿತ್ತು. ಇದನ್ನು ಗಮನಿಸಿದ ಶಾರೂಕ್ ತಕ್ಷಣ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಬೆಂಕಿಯನ್ನು ಆರಿಸುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ.

    ಈ ಘಟನೆಯಲ್ಲಿ ಅರ್ಚನಾ ಅವರ ಕೈ ಹಾಗೂ ಬಲಗಾಲಿಗೆ ಶೇ. 15ರಷ್ಟು ಸುಟ್ಟು ಗಾಯವಾಗಿದೆ. ಅಲ್ಲದೆ ಶಾರೂಕ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಗೊಂಡಿರುವ ಅರ್ಚನಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಶಾರೂಕ್ ಅವರ ಈ ಕಾರ್ಯಕ್ಕೆ ಅಲ್ಲಿದ್ದ ಕಲಾವಿದರು ಮೆಚ್ಚುಗೆ ಸೂಚಿಸಿದ್ದು, ಸಮಯ ಪ್ರಜ್ಞೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೇ ವೇಳೆ ತಿಲಕ ಇಟ್ಟುಕೊಂಡು ಫೋಟೋ ಹಂಚಿಕೊಂಡಿದ್ದ ನಟ ಶಾರೂಕ್ ಖಾನ್ ಮುಸ್ಲಿಂ ಸಮುದಾಯದವರಿಂದ ಟೀಕೆಗೆ ಗುರಿಯಾಗಿದ್ದರು.

    ಶಾರೂಕ್ ಖಾನ್ ಅವರ ಪತ್ನಿ ಗೌರಿ ಅವರು ಹಿಂದೂ ಆಗಿದ್ದು, ಪ್ರತಿ ವರ್ಷ ಅವರ ಮನೆಯಲ್ಲಿ ಗಣೇಶ್ ಹಬ್ಬ ಸೇರಿದಂತೆ, ದೀಪಾವಳಿಯನ್ನು ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಪುತ್ರ ಅಬ್ರಾಮ್ ಖಾನ್‍ರೊಂದಿಗೆ ಹಣೆಗೆ ತಿಲಕ ಇಟ್ಟು ಶಾರೂಕ್ ಖಾನ್ ಫೋಟೋ ಹಂಚಿಕೊಂಡಿದ್ದರು.

  • ಗಾಂಧೀಜಿ ಆದರ್ಶಗಳನ್ನು ಜನಪ್ರಿಯಗೊಳಿಸಲು ಬಾಲಿವುಡ್ ಮಂದಿಗೆ ಮೋದಿ ಮಣೆ

    ಗಾಂಧೀಜಿ ಆದರ್ಶಗಳನ್ನು ಜನಪ್ರಿಯಗೊಳಿಸಲು ಬಾಲಿವುಡ್ ಮಂದಿಗೆ ಮೋದಿ ಮಣೆ

    ನವದೆಹಲಿ: ಮಹಾತ್ಮಾ ಗಾಂಧೀಜಿ ಅವರ ಆದರ್ಶಗಳನ್ನು ಚಲನಚಿತ್ರೋದ್ಯಮದ ಮೂಲಕ ಜನಪ್ರಿಯಗೊಳಿಸಲು ಪ್ರಧಾನಿ ಮೋದಿ ಅವರು ಬಾಲಿವುಡ್ ನಟ-ನಟಿಯರನ್ನು ಭೇಟಿ ಮಾಡಿ ಸಂವಾದ ನಡೆಸಿದ್ದಾರೆ.

    ಗಾಂಧೀಜಿ ಅವರ 150 ನೇ ಜನ್ಮದಿನದ ಅಂಗವಾಗಿ ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ನಟಿ-ನಟಿಯರು ಭಾಗವಹಿಸಿ ಮೋದಿ ಅವರ ಜೊತೆ ಸಂವಾದ ನಡೆಸಿದರು. ಇದೇ ವೇಳೆ ಬಾಲಿವುಡ್ ನಟರಾದ ಅಮೀರ್ ಖಾನ್ ಮತ್ತು ಶಾರೂಖ್ ಖಾನ್ ಮೋದಿ ಅವರ ಈ ಯೋಜನೆಯನ್ನು ಶ್ಲಾಘಿಸಿದರು.

    ಬಾಲಿವುಡ್ ನ ಬಹುತೇಕ ನಟ-ನಟಿಯರು ಭಾಗವಸಿದ್ದ ಈ ಕಾರ್ಯಕ್ರಮದಲ್ಲಿ ಅಮೀರ್, ಶಾರೂಖ್, ರಾಜ್‍ಕುಮಾರ್ ಹಿರಾನಿ, ಕಂಗನಾ ರನೌತ್, ಆನಂದ್ ಎಲ್ ರೈ, ಎಸ್‍ಪಿ ಬಾಲಸುಬ್ರಹ್ಮಣ್ಯಂ, ಸೋನಮ್ ಕಪೂರ್, ಜಾಕಿ ಶ್ರಾಫ್, ಸೋನು ನಿಗಮ್, ಏಕ್ತಾ ಕಪೂರ್ ಸೇರಿದಂತೆ ಭಾರತೀಯ ಚಲನಚಿತ್ರ ಮತ್ತು ಮನರಂಜನಾ ಉದ್ಯಮದ ಸದಸ್ಯರು ಉಪಸ್ಥಿತರಿದ್ದರು.

    ಈ ಕಾರ್ಯಕ್ರಮ ಲೋಕ ಕಲ್ಯಾಣ್ ಮಾರ್ಗದ ನಿವಾಸದಲ್ಲಿ ಶನಿವಾರ ಸಂಜೆ 7 ಕ್ಕೆ ಆಯೋಜಿಸಿಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಸಂಬಂಧಿಸಿದ ನಾಲ್ಕು ಸಾಂಸ್ಕೃತಿಕ ವಿಡಿಯೋಗಳನ್ನು ಬಿಡುಗಡೆ ಮಾಡಿದರು. ಈ ವೇಳೆ ಚಿತ್ರೋದ್ಯಮದ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಜನಪ್ರಿಯಗೊಳಿಸುವ ವಿಷಯದಲ್ಲಿ ಮನರಂಜನಾ ಉದ್ಯಮದಲ್ಲಿ ಹಲವಾರು ಜನರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

    ಚಿತ್ರೋದ್ಯಮ ಸಾಮಾನ್ಯ ನಾಗರಿಕರನ್ನು ಮನರಂಜನೆಯ ಜೊತೆಗೆ ಒಳ್ಳೆಯ ವಿಚಾರಗಳನ್ನು ಹೇಳಬೇಕು. ಸಮಾಜವನ್ನು ಸಕಾರಾತ್ಮಕವಾಗಿ ಪರಿವರ್ತನೆ ಮಾಡುವ ಸಮಾಥ್ರ್ಯ ಸಿನಿಮಾ ಮಂದಿಗೆ ಇದೆ ಎಂದು ಹೇಳಿದರು. ಗಾಂಧೀಜಿ ಅವರು ಸರಳತೆಗೆ ಸಮಾನಾರ್ಥಕವಾದವರು. ಒಂದು ಆಲೋಚನೆಯಿಂದ ಒಬ್ಬ ವ್ಯಕ್ತಿ, ಪ್ರಪಂಚದಾದ್ಯಂತ ಜನರೊಂದಿಗೆ ಸಂಪರ್ಕವನ್ನು ಸ್ಥಾಪಿಸಬಲ್ಲವರು ಎಂದರೆ ಅದು ಗಾಂಧೀಜಿಯವರು ಮಾತ್ರ ಎಂದು ತಿಳಿಸಿದರು.

    ಈ ವಿಚಾರದ ಬಗ್ಗೆ ಮಾತನಾಡಿದ ನಟ ಅಮೀರ್ ಖಾನ್, ಮೊದಲಿಗೆ ಗಾಂಧೀಜಿ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿರುವ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು. ಸಿನಿಮಾ ರಂಗದವರಾಗಿ, ಸೆಲಿಬ್ರಿಟಿಗಳಾಗಿ ನಾವು ಮಾಡಬಹುದಾದದ್ದು ತುಂಬಾ ಇದೆ ಮತ್ತು ನಾವು ಇನ್ನು ಮುಂದೆ ಅದನ್ನು ಮಾಡುತ್ತೇವೆ ಎಂದು ನಾನು ಪ್ರಧಾನ ಮಂತ್ರಿಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.

    ನಮ್ಮೆಲ್ಲರನ್ನೂ ಒಂದುಗೂಡಿಸಿದ್ದಕ್ಕಾಗಿ ಪಿಎಂ ನರೇಂದ್ರ ಮೋದಿಯವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅದೂ ಸಹ ಈ ಮಹಾತ್ಮ ಗಾಂಧಿಯಂತಹ ಉತ್ತಮ ಕಾರಣಕ್ಕಾಗಿ ನಾವು ಸೇರಿದ್ದು ಖುಷಿಯಾಗಿದೆ. ನಾವು ಗಾಂಧೀಜಿಯನ್ನು ಭಾರತ ಮತ್ತು ಜಗತ್ತಿಗೆ ಮತ್ತೆ ಪರಿಚಯಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ನಟ ಶಾರೂಖ್ ಖಾನ್ ಹೇಳಿದ್ದಾರೆ.

  • ಮಧ್ಯರಾತ್ರಿ ಶಾರೂಕ್‍ರನ್ನು ನೆನಪಿಸಿಕೊಂಡು ದೀಪಿಕಾ ಟ್ವೀಟ್

    ಮಧ್ಯರಾತ್ರಿ ಶಾರೂಕ್‍ರನ್ನು ನೆನಪಿಸಿಕೊಂಡು ದೀಪಿಕಾ ಟ್ವೀಟ್

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಮಧ್ಯರಾತ್ರಿ ಕಿಂಗ್‍ಖಾನ್ ಶಾರೂಕ್ ಅವರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.

    ಶಾರೂಕ್ ಖಾನ್ ಅವರು ತಮ್ಮ ಟ್ವಟ್ಟರಿನಲ್ಲಿ ಬ್ಲಾಕ್ ಅಂಡ್ ವೈಟ್ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಶಾರೂಕ್ ತಲೆಕೂದಲು ಚದುರಿ ಹೋಗಿದೆ. ಅಲ್ಲದೆ, “ನನ್ನ ಲೈಬ್ರರಿ ಕ್ಲೀನ್ ಮಾಡಲು ಇಡೀ ರಾತ್ರಿ ಬೇಕಾಯಿತು. ಪುಸ್ತಕಗಳಲ್ಲಿ ವಾಸನೆ, ಧೂಳು ಮತ್ತು ಸಂತೋಷವನ್ನು ಕಂಡೆ” ಎಂದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್ ನೋಡಿದ ದೀಪಿಕಾ, “ಹಲೋ. ನೀವು ನನಗೆ ಫೋನ್ ಮಾಡಬೇಕಿತ್ತು” ಎಂದು ಮಧ್ಯರಾತ್ರಿ ಸುಮಾರು 1.20ಕ್ಕೆ ರೀ-ಟ್ವೀಟ್ ಮಾಡಿದ್ದಾರೆ. ದೀಪಿಕಾ ಮಧ್ಯರಾತ್ರಿ ಟ್ವೀಟ್ ಮಾಡಿರುವುದನ್ನು ನೋಡಿದ ಅಭಿಮಾನಿಗಳು ಅವರ ಕಾಲೆಳೆಯುತ್ತಿದ್ದಾರೆ.

    https://twitter.com/deepikapadukone/status/1178759077851258887?ref_src=twsrc%5Etfw%7Ctwcamp%5Etweetembed%7Ctwterm%5E1178759077851258887&ref_url=https%3A%2F%2Fhindi.news18.com%2Fnews%2Fentertainment%2Fbollywood-deepika-padukone-tweeted-to-shahrukh-khan-you-were-supposed-to-call-me-2471620.html

    ಶಾರೂಕ್ ಹಾಗೂ ದೀಪಿಕಾ ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್ ಪ್ರೆಸ್’, ಹಾಗೂ ‘ಹ್ಯಾಪಿ ನ್ಯೂ ಇಯರ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಶಾರೂಕ್ ಖಾನ್ ಕಳೆದ ವರ್ಷ ಬಿಡುಗಡೆಯಾದ ‘ಝೀರೋ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಅವರು ಯಾವ ಚಿತ್ರದಲ್ಲೂ ನಟಿಸಿಲ್ಲ.

    ಇತ್ತ ದೀಪಿಕಾ ಪಡುಕೋಣೆ, ಮೇಘನಾ ಗುಲ್ಝಾರ್ ನಿರ್ದೇಶಿಸುತ್ತಿರುವ `ಚಾಪಕ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮೀ ಅಗರ್ ವಾಲ್ ಜೀವನಚರಿತ್ರೆ ಆಗಿದೆ. ಈ ಚಿತ್ರದ ನಂತರ ದೀಪಿಕಾ ಪಡುಕೊಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ನೀನು ಶಾರುಖ್ ಮಗಳು, ನಿನಗೆ ಈ ಶೋ ಆಫ್ ಅಗತ್ಯವಿಲ್ಲ – ನೆಟ್ಟಿಗರಿಂದ ಸುಹಾನಾಗೆ ತರಾಟೆ

    ನೀನು ಶಾರುಖ್ ಮಗಳು, ನಿನಗೆ ಈ ಶೋ ಆಫ್ ಅಗತ್ಯವಿಲ್ಲ – ನೆಟ್ಟಿಗರಿಂದ ಸುಹಾನಾಗೆ ತರಾಟೆ

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೋಡಿದ ಶಾರುಖ್ ಅಭಿಮಾನಿಗಳು ಸುಹಾನಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಸುಹಾನಾ ಖಾನ್ ಹಾಟ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಸುಹಾನಾ ಅವರ ಎದೆ ಭಾಗ ಕಾಣುವಂತೆ ಒಂದು ಕೈಯಲ್ಲಿ ಕಾಫಿ ಕಪ್ ಹಾಗೂ ಮತ್ತೊಂದು ಕೈಯಲ್ಲಿ ಫೈಲ್ ಹಿಡಿದುಕೊಂಡು ಪೋಸ್ ನೀಡಿದ್ದಾರೆ.

     

    View this post on Instagram

     

    ❤️????

    A post shared by Suhana Khan (@suhanakhanoffcial) on

    ಈ ಫೋಟೋ ನೋಡಿ ಕೆಲವರು, ಇಷ್ಟೊಂದು ಶೋ ಆಫ್ ಮಾಡಬೇಡ. ನೀನು ಸಾಧಾರಣ ಉಡುಪು ಧರಿಸಿದರೂ ಸುಂದರವಾಗಿ ಕಾಣಿಸುತ್ತೀಯಾ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ನಿಮ್ಮ ಉಡುಪು ಸರಿ ಮಾಡಿಕೊಳ್ಳಿ. ನೀವು ಶಾರುಖ್ ಖಾನ್ ಅವರ ಮಗಳು. ನಿಮಗೆ ಈ ಶೋ ಆಫ್ ಅಗತ್ಯವಿಲ್ಲ ಎಂದು ಕಮೆಂಟ್ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸುಹಾನಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಸದ್ಯ ಸುಹಾನಾ ನ್ಯೂಯಾರ್ಕ್ ಯೂನಿರ್ವಸಿಟಿಯಲ್ಲಿ ನಟನೆ ಕಲಿಯಲು ದಾಖಲತಿ ಮಾಡಿಕೊಂಡಿದ್ದಾರೆ. ಈ ವೇಳೆ ಅವರು ತಮ್ಮ ಹೊಸ ಸ್ನೇಹಿತರ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  • ರೈಲ್ವೆ ನಿಲ್ದಾಣದಲ್ಲಿ ಹಲವು ಯುವತಿಯರನ್ನು ಪ್ರೀತಿಸಿದ್ದೇನೆ: ಶಾರುಖ್ ಖಾನ್

    ರೈಲ್ವೆ ನಿಲ್ದಾಣದಲ್ಲಿ ಹಲವು ಯುವತಿಯರನ್ನು ಪ್ರೀತಿಸಿದ್ದೇನೆ: ಶಾರುಖ್ ಖಾನ್

    ಮುಂಬೈ: ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಅವರು ರೈಲ್ವೆ ನಿಲ್ದಾಣದಲ್ಲಿ ನಾನು ಹಲವು ಯುವತಿಯರನ್ನು ಪ್ರೀತಿಸಿದ್ದೇನೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

    ಶುಕ್ರವಾರ ಶಾರುಖ್ ಖಾನ್ ಪೋಸ್ಟಲ್ ಕವರ್ ಉದ್ಘಾಟಿಸಲು ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಅವರು ತಾನು ಹಲವು ಸಿನಿಮಾಗಳಲ್ಲಿ ನಟಿಯರ ಜೊತೆ ರೈಲ್ವೆ ನಿಲ್ದಾಣದಲ್ಲಿ ರೊಮ್ಯಾನ್ಸ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಶಾರುಖ್, “ಇಲ್ಲಿ ಇರಲು ನನಗೆ ತುಂಬಾ ಸಂತೋಷವಾಗುತ್ತಿದೆ. ಏಕೆಂದರೆ ರೈಲ್ವೆ ನಿಲ್ದಾಣದಲ್ಲಿ ನಾನು ಹಲವು ಯುವತಿಯರನ್ನು ಪ್ರೀತಿಸಿದ್ದೇನೆ. ಆದರೆ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ನಾನು ಯಾರನ್ನು ಪ್ರೀತಿಸರಲಿಲ್ಲ. ನನಗೆ ಇಲ್ಲಿ ಆಹ್ವಾನಿಸಿದಕ್ಕೆ ಧನ್ಯವಾದಗಳು. ಸದ್ಯ ನಾನು ಈಗ ಈ ರೈಲ್ವೆ ನಿಲ್ದಾಣ ನೋಡಿಕೊಂಡಿದ್ದೇನೆ, ನಟಿಯ ಜೊತೆ ಮಾತುಕತೆ ನಡೆಸಿ ಇಲ್ಲಿ ಬಂದು ಹೋಗುವುದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

    ಶಾರುಖ್ ಖಾನ್ ಅವರ ಹಲವು ಚಿತ್ರಗಳನ್ನು ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ. ಹಾಗಾಗಿ ಶಾರುಖ್ ಅವರು ಈ ಮಾತನ್ನು ಹೇಳಿದ್ದಾರೆ. 1998ರಲ್ಲಿ ಶಾರುಖ್ ಖಾನ್ ನಟಿಸಿದ ‘ದಿಲ್ ಸೇ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಶಾರುಖ್ ನಟಿ ಮನೀಷಾ ಕೊಯಿರಾಲಾ ಅವರನ್ನು ಮೊದಲು ರೈಲ್ವೆ ನಿಲ್ದಾಣದಲ್ಲಿ ಭೇಟಿ ಮಾಡುತ್ತಾರೆ. ಈ ವೇಳೆ ಅವರಿಗೆ ಮನೀಷಾ ಅವರ ಮೇಲೆ ಪ್ರೀತಿ ಆಗುತ್ತದೆ.

    ಇದಾದ ಬಳಿಕ 2013ರಲ್ಲಿ ‘ಚೆನ್ನೈ ಎಕ್ಸ್ ಪ್ರೆಸ್’ ಚಿತ್ರದಲ್ಲಿ ಶಾರುಖ್ ರೈಲ್ವೆ ನಿಲ್ದಾಣದಲ್ಲಿಯೇ ನಟಿ ದೀಪಿಕಾ ಪಡುಕೋಣೆ ಅವರನ್ನು ಭೇಟಿ ಮಾಡುತ್ತಾರೆ. ಈ ಚಿತ್ರದ ಹಲವು ಭಾಗಗಳನ್ನು ರೈಲಿನಲ್ಲೇ ಚಿತ್ರೀಕರಿಸಲಾಗಿದೆ. ಶಾರುಖ್ ಭಾರತ ಅಲ್ಲದೆ ವಿದೇಶಿ ರೈಲ್ವೆ ನಿಲ್ದಾಣದಲ್ಲೂ ಸಿನಿಮಾಗಳನ್ನು ಚಿತ್ರೀಕರಿಸಿದ್ದಾರೆ. ಸೂಪರ್ ಹಿಟ್ ‘ದಿಲ್‍ವಾಲೆ ದುಲ್ಹಾನೀಯಾ ಲೇ ಜಾಯೆಂಗೆ’ ಚಿತ್ರದಲ್ಲಿ ಯೂರೊಪ್‍ನಲ್ಲಿ ರಾಜ್ ಮಲ್ಹೋತ್ರಾ ಪಾತ್ರಧಾರಿ ಆಗಿದ್ದ ಶಾರುಖ್ ಅವರು ಸಿಮ್ರನ್ ಸಿಂಗ್ ಪಾತ್ರಧಾರಿಯ ಕಾಜೋಲ್ ಅವರನ್ನು ಭೇಟಿ ಮಾಡಿದ್ದರು.

  • ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಶಾರೂಕ್ ಖಾನ್

    ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಶಾರೂಕ್ ಖಾನ್

    ಕ್ಯಾನ್ಬೆರಾ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರು ಮೆಲ್ಬೋರ್ನ್ ಮೂಲದ ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

    ಭಾರತೀಯ ಚಿತ್ರರಂಗ ಹೊರತುಪಡಿಸಿ ಶಾರೂಕ್ ಖಾನ್ ಅವರು ಮೀರ್ ಫೌಂಡೇಶನ್ ಮೂಲಕ ದೀನದಲಿತ ಮಕ್ಕಳು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದ್ದಕ್ಕೆ ಈ ಡಾಕ್ಟರೇಟ್ ನೀಡಲಾಗಿದೆ. ಈ ಬಗ್ಗೆ ಲಾ ಟ್ರೋಬ್ ವಿಶ್ವವಿದ್ಯಾಲಯ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶಾರೂಕ್ ಖಾನ್ ಡಾಕ್ಟರೇಟ್ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಬಳಿಕ ಮಾತನಾಡಿದ ಶಾರೂಕ್ ಖಾನ್, ಭಾರತೀಯ ಸಂಸ್ಕೃತಿಯೊಂದಿಗೆ ಸುದೀರ್ಘ ಒಡನಾಟ ಮತ್ತು ಮಹಿಳಾ ಸಮಾನತೆಗಾಗಿ ಪ್ರತಿಪಾದಿಸುವಲ್ಲಿ ಪ್ರಭಾವಶಾಲಿ ದಾಖಲೆಯನ್ನು ಹೊಂದಿರುವ ಲಾ ಟ್ರೋಬ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆಯಲು ಹೆಮ್ಮೆಯಾಗುತ್ತಿದೆ. ಈ ಗೌರವ ಡಾಕ್ಟರೇಟ್ ಸ್ವೀಕರಿಸಲು ನನಗೆ ನಿಜವಾಗಿಯೂ ಖುಷಿಯಾಗುತ್ತಿದೆ. ನನ್ನ ಸಾಧನೆಗಳನ್ನು ಗುರುತಿಸಿದ್ದಕ್ಕಾಗಿ ಲಾ ಟ್ರೋಬ್‍ಗೆ ಪ್ರಾಮಾಣಿಕವಾಗಿ ಧನ್ಯವಾದ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.

    ಲಾ ಟ್ರೋಬ್ ವಿಶ್ವವಿದ್ಯಾಲಯವು ಶಾರೂಖ್ ಖಾನ್ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ ಜೊತೆ ಗೌರವ ನೀಡಿದ ಮೊದಲ ಆಸ್ಟ್ರೇಲಿಯಾ ವಿಶ್ವವಿದ್ಯಾಲಯವಾಗಿದೆ. ಚಲನಚಿತ್ರೋತ್ಸವದಲ್ಲಿ ಶಾರೂಕ್ ಅವರಿಗೆ ‘ಎಕ್ಸಲೆನ್ಸ್ ಇನ್ ಸಿನಿಮಾ’ ಪ್ರಶಸ್ತಿ ಕೂಡ ದೊರೆತಿದೆ.

    ಈ ಮೊದಲು ಶಾರೂಕ್ ಖಾನ್ ಅವರಿಗೆ ನಾಲ್ಕು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿದೆ. 2009 ಬೆಡ್‍ಫೋಡ್ರ್ಶೈರ್ ವಿಶ್ವವಿದ್ಯಾಲಯ, 2015ರಲ್ಲಿ ಎಡಿನ್‍ಬರ್ಗ್ ವಿಶ್ವವಿದ್ಯಾಲಯ, 2016ರಲ್ಲಿ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ, 2019ರಲ್ಲಿ ಯೂನಿವರ್ಸಿಟಿ ಆಫ್ ಲಾನಿಂದ ಡಾಕ್ಟರೇಟ್ ಪಡೆದಿದ್ದಾರೆ.