Tag: Shahpura

  • ಆರೋಪ ಹಿನ್ನೆಲೆಯ ಉದ್ಯಮಿ ಪುತ್ರಿಗೆ ಶಹಪುರ ತಹಶೀಲ್ದಾರ್ ದುಬಾರಿ ಗಿಫ್ಟ್

    ಆರೋಪ ಹಿನ್ನೆಲೆಯ ಉದ್ಯಮಿ ಪುತ್ರಿಗೆ ಶಹಪುರ ತಹಶೀಲ್ದಾರ್ ದುಬಾರಿ ಗಿಫ್ಟ್

    ಯಾದಗಿರಿ: ಆರೋಪಗಳ ಹಿನ್ನೆಲೆ ಇರುವ ಉದ್ಯಮಿ ಮಗಳ ಹುಟ್ಟುಹಬ್ಬಕ್ಕೆ ಬೆಲೆ ಬಾಲು ಗಿಫ್ಟ್ ಕೊಟ್ಟು ಶಹಪುರ ತಹಶೀಲ್ದಾರ ಮೆಹಬೂಬಿ ಈಗ ಸುದ್ದಿಯಲ್ಲಿದ್ದಾರೆ. ಅಪರಾಧ ಹಿನ್ನೆಲೆ ಇರುವ ಉದ್ಯಮಿ ಮಗಳಿಗೆ ಸಾರ್ವಜನಿಕವಾಗಿ ಶಹಪುರ ತಹಶೀಲ್ದಾgರ್ ಮೆಹಬೂಬಿ ಮತ್ತು ಪತಿ ಚಿನ್ನದ ಸರ ಉಡುಗೊರೆಯನ್ನು ನೀಡಿದ್ದಾರೆ.

    ಇನ್ನೂ ತಹಶೀಲ್ದಾರ್ ಮೆಹಬೂಬಿ ಅವರ ಪತಿ ಕೂಡ ಹಿರಿಯ ಸರ್ಕಾರಿ ಅಧಿಕಾರಿಯಾಗಿದ್ದು, ಬೆಲೆ ಬಾಳುವ ಉಡುಗೊರೆ ನೀಡುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಶಹಪುರ ತಹಶೀಲ್ದಾರರ ಬೆಲೆ ಬಾಳುವ ಗಿಫ್ಟ್ ವಿಚಾರ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ಶಹಪುರ ತಾಲೂಕಿನ ಚಾಮನಾಳ ಗ್ರಾಮದ ಉದ್ಯಮಿ ಮಲಿಕ್ ಎಂಬವರ ಮಗಳ ಬರ್ತ್ ಡೇ ಪಾರ್ಟಿ, ಜನವರಿ 03 ರಂದು ಶಹಪುರ ಸಮೀಪದ ಬಿ.ಗುಡಿಯಲ್ಲಿರುವ ಅವರ ಮನೆಯಲ್ಲಿ ನಡೆದಿತ್ತು. ಸರ್ಕಾರದ ಅಕ್ಕಿ ಅಕ್ರಮವಾಗಿ ಮಾರಾಟ ಮತ್ತು ಅಕ್ರಮ ಮದ್ಯ ಮಾರಾಟ, ಜೂಜಾಟದ ಆರೋಪಗಳು ಉದ್ಯಮಿ ಮಲಿಕ್ ಮೇಲಿದೆ.

    ಬರ್ತ್ ಡೇ ಪಾರ್ಟಿಯಲ್ಲಿ ತಹಶೀಲ್ದಾರ್ ಮಾತ್ರವಲ್ಲದೇ ಪೊಲೀಸ್ ಇಲಾಖೆ ಅಧಿಕಾರಿಗಳು ಸಹ ಭಾಗಿಯಾಗಿ ದುಬಾರಿ ಮೊತ್ತದ ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆರೋಪಗಳ ಹಿನ್ನೆಲೆ ಇರುವ ಉದ್ಯಮಿ ಜೊತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಮತ್ತು ಶಹಪುರ ತಹಶಿಲ್ದಾರರ ಮೆಹಬೂಬಿಗೂ ಏನು ಕೆಲಸ? ಜನರ ಕೆಲಸ ಮಾಡಲು ಸಮಯ ಇಲ್ಲ ಎನ್ನುವ ತಹಶೀಲ್ದಾರರಿಗೆ ಪಾರ್ಟಿ ಮಾಡಲು ಸಮಯ ಹೇಗೆ ಸಿಗುತ್ತೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ಕಾರ್ಯಕ್ರಮದಲ್ಲಿ ಕೊರೊನಾದ ಯಾವುದೇ ನಿಯಮಗಳು ಪಾಲನೆ ಆಗಿಲ್ಲ, ತಾಲೂಕಿನಲ್ಲಿ ಕೊರೊನಾ ನಿಯಮಗಳನ್ನು ಸಮರ್ಪಕವಾಗಿ ಜಾರಿ ಮಾಡಬೇಕಾದ ಸ್ವತಃ ತಹಶೀಲ್ದಾರ್ ಅವರೇ ಮಾಸ್ಕ್ ಧರಿಸಿಲ್ಲ. ಇದು ಸಾರ್ವಜನಿಕ ಅಸಮಾಧಾನಕ್ಕೆ ಸಹ ಕಾರಣವಾಗಿದೆ. ಅಲ್ಲದೆ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಅಂತ ಜನ ಆಗ್ರಹಿಸುತ್ತಿದ್ದಾರೆ.

  • ಪ್ರೇಮ ಪಾಶದಲ್ಲಿ ಸಿಲುಕಿದ ಯುವಕನಿಗೆ ವಿಷ ಪ್ರಾಶಾನ

    ಪ್ರೇಮ ಪಾಶದಲ್ಲಿ ಸಿಲುಕಿದ ಯುವಕನಿಗೆ ವಿಷ ಪ್ರಾಶಾನ

    ಯಾದಗಿರಿ: ಯುವಕನ ಮೇಲೆ ಹಲ್ಲೆ ಮಾಡಿ ಬಳಿಕ, ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ನಗರದ ಹೊರ ವಲಯದಲ್ಲಿ ನಡೆದಿದೆ.

    ಶಹಾಪುರ ನಗರದ ಆಶ್ರಯ ಕಾಲೋನಿಯ ಅಲ್ಪಸಂಖ್ಯಾತರ ವಸತಿ ನಿಲಯದ ಬಳಿ ಈ ಘಟನೆ ನಡೆದಿದೆ. ಶಹಪುರ ತಾಲೂಕಿನ ಸಾದ್ಯಾಪುರ ಗ್ರಾಮದ ಸಂತೋಷ್ (22) ಮೃತ ಯುವಕ. ಮೃತ ಸಂತೋಷ್ ಅದೇ ಗ್ರಾಮದ ತಮ್ಮದೇ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದನು. ಇಬ್ಬರ ಪ್ರೀತಿ ವಿಚಾರ ಯುವತಿಯ ಮನೆಯವರಿಗೆ ತಿಳಿದಿತ್ತು.

    ಯುವತಿಯ ಸಂಬಂಧಿ ಬಾಗಪ್ಪ ಮತ್ತು ಆತನ ಸ್ನೇಹಿತರು ಸಂತೋಷ್ ನನ್ನು ಮಾತುಕತೆಗೆಂದು ಶಹಪುರಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಬಾಗಪ್ಪ ಮತ್ತು ಆತನ ಸ್ನೇಹಿತರು ಸಂತೋಷ್ ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಿದ್ದಾರೆಂದು ಅನುಮಾನಿಸಲಾಗಿದೆ.

    ಸದ್ಯ ಸಂತೋಷ್ ಮೃತ ದೇಹ ಶಹಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಮುಂದೆ ಯುವಕನ ಕುಟುಂಬಸ್ಥರ ಆಕ್ರಂದನ ಹೇಳತೀರದಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಚೆನ್ನಯ್ಯ ಹಿರೇಮಠ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದೆ.

  • 2 ಕೆಜಿ ರೇಷನ್ ಬೇಕಾದ್ರೆ ಕಡಿಮೆ ಕೊಡಿ, ಎಣ್ಣೆ ನಿಲ್ಲಿಸ್ಬೇಡಿ: ಕುಡುಕನ ಮನವಿ

    2 ಕೆಜಿ ರೇಷನ್ ಬೇಕಾದ್ರೆ ಕಡಿಮೆ ಕೊಡಿ, ಎಣ್ಣೆ ನಿಲ್ಲಿಸ್ಬೇಡಿ: ಕುಡುಕನ ಮನವಿ

    -ಎಣ್ಣೆಗೆ ಡಬಲ್ ಹಣ ನೀಡಿ ಬಡವರಾಗ್ತಿದ್ದೀವಿ
    -ಮುಖ್ಯಮಂತ್ರಿಗಳೇ ನಾವ್ ಬಡವರಾಗೋದನ್ನ ತಪ್ಪಿಸಿ

    ಯಾದಗಿರಿ: ಎರಡು ಕೆ.ಜಿ. ರೇಷನ್ ಬೇಕಾದ್ರೆ ಕಡಿಮೆ ಕೊಡಿ. ಆದ್ರೆ ಮದ್ಯ ಮಾರೋದನ್ನ ನಿಲ್ಲಿಸಬೇಡಿ ಎಂದು ಜಿಲ್ಲೆತ ಶಹಾಪುರ ತಾಲೂಕಿನ ಮೂಡಬೋಳ ಗ್ರಾಮದ ಕುಡುಕನೊಬ್ಬ ಸಿಎಂ ಬಳಿ ಮನವಿ ಮಾಡಿದ್ದಾನೆ.

    ಮಾನ್ಯ ಮುಖ್ಯಮಂತ್ರಿಗಳು ಲಾಕ್‍ಡೌನ್ ಘೋಷಿಸಿ ಒಳ್ಳೆಯದು ಮಾಡಿದ್ದೀರಿ. ನಿಮ್ಮ ಮಾತಿಗೆ ಬೆಲೆ ಕೊಟ್ಟು ಮನೆಯಲ್ಲಿಯೇ ಉಳಿದುಕೊಂಡಿದ್ದೇವೆ. ಎರಡು ತಿಂಗಳ ಪಡಿತರವನ್ನು ನೀಡಿದ್ದೀರಿ. ಆದ್ರೆ ನೀವು ನಮ್ಮ ಕಷ್ಟವನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಮದ್ಯ ಮಾರಾಟ ಬಂದ್ ಆಗಿದ್ದರಿಂದ 100-200 ರೂ.ಗೆ ಸಿಗುವ ಬಾಟಲ್ ಗಳಿಗೆ 500 ರಿಂದ 600 ರೂ. ನೀಡಬೇಕಾಗಿದೆ. ಇಷ್ಟೊಂದು ಹಣ ನೀಡಿ ಮದ್ಯ ಖರೀದಿ ಮಾಡೋದರಿಂದ ಬಡವರಾಗುತ್ತಿದ್ದೇವೆ ಎಂದು ಕುಡುಕ ತನ್ನ ಅಳಲು ತೋಡಿಕೊಂಡಿದ್ದಾನೆ.

    ರಾತ್ರಿ-ಹಗಲು ಎನ್ನದೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂಜೆ ವೇಳೆ ಒಂದು ಪೆಗ್ ಹಾಕಿದ್ರೆ ನಿದ್ದೆ ಬರುತ್ತೆ. ಎಣ್ಣೆ ಇಲ್ಲ ಅಂದ್ರೆ ನಮಗೆ ನೆಮ್ಮದಿ ಇಲ್ಲದಂತಾಗಿದೆ. ಹಾಗಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ನಾವು ಬಡವರಾಗೋದನ್ನ ತಪ್ಪಿಸಿ ಎಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾನೆ.

    ಸ್ಥಳೀಯ ಮಟ್ಟದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನ ಕಮೆಂಟ್ ಮಾಡುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿಯೂ ಆತ ಕಂಠಪೂರ್ತಿ ಕುಡಿದಿದ್ದಾನೆ. ಆತನಿಗೆ ಮದ್ಯ ಹೇಗೆ ಸಿಕ್ತು? ಶಹಪುರ ಪಟ್ಟಣದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆಗ್ತಿರೋದನ್ನ ಸಹ ಕುಡುಕ ಹೇಳಿದ್ದಾನೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.