Tag: sex scam

  • ದಯಾನಂದ ಸ್ವಾಮಿ ಜೊತೆ ರಾಸಲೀಲೆ ಪ್ರಕರಣ: ಕೊನೆಗೂ ರಹಸ್ಯ ಬಿಚ್ಚಿಟ್ಟ ನಟಿ ಕಾವ್ಯಾ ಆಚಾರ್ಯ

    ದಯಾನಂದ ಸ್ವಾಮಿ ಜೊತೆ ರಾಸಲೀಲೆ ಪ್ರಕರಣ: ಕೊನೆಗೂ ರಹಸ್ಯ ಬಿಚ್ಚಿಟ್ಟ ನಟಿ ಕಾವ್ಯಾ ಆಚಾರ್ಯ

    ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಮಠಗಳಲ್ಲೊಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ದಯಾನಂದ ಸ್ವಾಮಿ ರಾಸಲೀಲೆಯಲ್ಲಿ ಭಾಗಿಯಾಗಿದ್ದ ನಟಿ ಕಾವ್ಯ ಆಚಾರ್ಯ ಇದೇ ಮೊದಲ ಬಾರಿಗೆ ತನ್ನ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ.

    ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದ್ದು, ವಿಡಿಯೋದಲ್ಲಿ ಕಾವ್ಯಾ ಆಚಾರ್ಯ ರಾಸಲೀಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೊದಲು ಮೀಡಿಯಾದವರಲ್ಲಿ ಕ್ಷಮೆ ಕೇಳಲು ಇಷ್ಟ ಪಡ್ತೀನಿ. ನನಗೆ ಹುಷಾರಿರಲಿಲ್ಲ. ಅಲ್ಲದೇ ನನಗೆ ಬೆದರಿಕೆ ಕೂಡ ಬಂದಿತ್ತು. ಹೀಗಾಗಿ ಘಟನೆಯ ಬಳಿಕ ಮಾಧ್ಯಮದ ಮುಂದೆ ಬರಲು ಆಗಲಿಲ್ಲ ಅಂತ ಹೇಳಿದ್ದಾರೆ.

    ಇನ್ನು 2-3 ದಿನಗಳಲ್ಲೆ ಕೆಲವರ ಮುಖಾಂತರ ಬಂದು ನಾನು ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸರ ಬಳಿ ದೂರು ದಾಖಲಿಸುತ್ತೇನೆ. ಅದರಲ್ಲಿ 10 ಮಂದಿಯ ಹೆಸರು ಬರೆದಿದ್ದೀನಿ. ದೂರು ಕೊಟ್ಟ ಬಳಿಕ ನಾನು ಮಾಧ್ಯಮದ ಮುಂದೆ ಬಂದು ಯಾರ್ಯಾರು ಏನೇನು ಮಾಡಿದ್ದಾರೆ? ಬಲತ್ಕಾರವಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಇವುಗಳನ್ನೆಲ್ಲಾ ಬಹಿರಂಗಪಡಿಸುತ್ತೇನೆ ಅಂತ ಹೇಳಿದ್ರು.

    ಇದನ್ನೂ ಓದಿ: ಪ್ರತಿಭಟನೆ ಮಾಡಿದವ್ರಿಂದ್ಲೇ ಡೀಲ್- ಸ್ವಾಮೀಜಿ ರಾಸಲೀಲೆ ಪ್ರಕರಣದ ಇನ್‍ಸೈಡ್ ಸ್ಟೋರಿ

    ಇಂದು ನನ್ನ ಕುಟುಂಬವನ್ನು ಹೊರಗಡೆ ಓಡಾಡದ ಹಾಗೆ ಮಾಡಿಬಿಟ್ಟಿದ್ದಾರೆ. ಆದ್ರೆ ನಾನು ಸಾಯೋ ಸಮಯದಲ್ಲಿ ನನ್ನ ಅಣ್ಣ ಹಾಗೂ ದೊಡ್ಡಮ್ಮ ನನ್ನನ್ನು ಉಳಿಸಿ, ಧೈರ್ಯ ತುಂಬಿದ್ದಾರೆ. ನೀನು ಸಾಯಬಾರದು. ಈ ರೀತಿ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡಲೇಬೇಕು ಅಂತ ಧೈರ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನಾನು ಧೈರ್ಯವಾಗಿದ್ದೀನಿ. ಈ ರೀತಿ ಯಾವ ಹೆಣ್ಣುಮಕ್ಕಳಿಗೂ ಆಗಬಾರದು ಅಂತ ಕಣ್ಣೀರು ಹಾಕಿದ್ದಾರೆ.

    ಜಂಗಮ ಮಠದ ಪೀಠಾಧ್ಯಕ್ಷನಾಗಲು ಮುಂದಾಗಿದ್ದ ದಯಾನಂದ್ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರೋ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಸ್ವಾಮೀಜಿಯ ಜೊತೆ ರಾಸಲೀಲೆಯಲ್ಲಿ ತೊಡಗಿರುವುದು ನಟಿ ಕಾವ್ಯಾ ಆಚಾರ್ಯ ಎಂದು ಹೇಳಲಾಗಿತ್ತು.

    ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ನಟಿ ಕಾವ್ಯಾರನ್ನು ಸಂಪರ್ಕಿಸಿದಾಗ, ನಾನು ಈಗ ತಾನೇ ಈ ಸುದ್ದಿ ಕೇಳಿದೆ. ಆದರೆ ಅದು ನಾನಲ್ಲ. ನಿಮಗೆ ಗೊತ್ತಿದೆ ಯಾರು ಬೇಕಾದರೂ ಹೀಗೆ ಮಾಡ್ತಾರೆ. ಯಾರೋ ಬೇಕಂತಾನೇ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಈ ರೀತಿ ಮಾಡುವವರು ಇರುತ್ತಾರೆ. ನನಗೆ ಯಾವ ಸ್ವಾಮೀಜಿಯೂ ಗೊತ್ತಿಲ್ಲ. ನನಗೂ ಇದಕ್ಕೂ ಏನು ಸಂಬಂಧ ಇಲ್ಲ ಎಂದು ಹೇಳಿದ್ದರು.

    ದಯಾನಂದ ಹೇಳಿದ್ದೇನು?: ರಾಸಲೀಲೆ ರಹಸ್ಯ ವಿಡಿಯೋ ಮಾಡಿದ್ದು 2014 ಜನವರಿ 4 ರಂದು. ಇದಾದ ಬಳಿಕ 2014 ಜನವರಿ 6 ರಂದು ನನ್ನ ಬಳಿ ಡೀಲ್‍ಗೆ ಬಂದ್ರು. ನನ್ನ ಬಳಿ 5 ಕೋಟಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ರು. ಆ ರೀತಿಯ ವಿಡಿಯೋ ಏನು ಇಲ್ಲ ಅಂದಾಗ ಮೊಬೈಲ್‍ನಲ್ಲಿ ವಿಡಿಯೋ ತೋರಿಸಿದ್ರು. ಬಸವರಾಜ್, ಮಹೇಶ್, ಹಿಮಾಚಲಪತಿ, ಸೂರ್ಯ, ಧರ್ಮೇಂದ್ರ ಅಲಿಯಾಸ್ ಶಂಕರ್ ಈ ಐವರೇ ನನ್ನ ಬಳಿ ದುಡ್ಡು ತೆಗೆದುಕೊಂಡಿದ್ದಾರೆ ಅಂತ ಸ್ವಾಮೀಜಿ ಹೇಳಿದ್ದ.

    https://www.youtube.com/watch?v=jzvC69jzdBg

    https://www.youtube.com/watch?v=s_FMyEPUKf4

    https://www.youtube.com/watch?v=9JvRzC7ZT_g

    https://www.youtube.com/watch?v=4hUdbxqu6qw

    https://www.youtube.com/watch?v=Ro8s_y6UJHE

    https://www.youtube.com/watch?v=Wju-SCH4x1s

     

  • ಬೆಳಗಾವಿಯ ಪ್ರತಿಷ್ಠಿತ ಉದ್ಯಮಿ ಮಗನ ಸೆಕ್ಸ್ ಸ್ಕ್ಯಾಮ್ ಫೋಟೋ ವೈರಲ್

    ಬೆಳಗಾವಿಯ ಪ್ರತಿಷ್ಠಿತ ಉದ್ಯಮಿ ಮಗನ ಸೆಕ್ಸ್ ಸ್ಕ್ಯಾಮ್ ಫೋಟೋ ವೈರಲ್

    ಬೆಳಗಾವಿ: ಜಿಲ್ಲೆಯ ಪ್ರತಿಷ್ಠಿತ ಕ್ಲಬ್‍ವೊಂದರ ಬಳಿ ಸೆಕ್ಸ್ ಸ್ಕ್ಯಾಮ್ ನಡೆದಿರುವ ಬಗ್ಗೆ ವರದಿಯಾಗಿದೆ. ಬೆಳಗಾವಿಯ ಪ್ರತಿಷ್ಠಿತ ಉದ್ಯಮಿಯೊಬ್ಬರ ಮಗ ರಂಗಿನಾಟವಾಡಿದ್ದು, ಇದೀಗ ಈ ಫೋ ಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಖ್ಯಾತ ಉದ್ಯಮಿಯ ಮಗನಾದ ಖ್ಯಾತ ಸ್ಕೇಟಿಂಗ್ ಪಟು ಈ ನೀಲಿ ಚಿತ್ರಗಳ ಫೋಟೋದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ತನ್ನ ಕೊಣೆಯಲ್ಲಿ ಈ ನೀಲಿ ಚಿತ್ರಗಳನ್ನು ತೆಗೆದಿದ್ದು ಈಗ ವೈರಲ್ ಆಗಿದೆ.

    ಸ್ಕೇಟಿಂಗ್‍ಗೆ ಎಂದು ಬಂದ ಯುವತಿಯ ಜೊತೆ ಉದ್ಯಮಿ ಪುತ್ರ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾನೆ. ಯುವತಿಯನ್ನು ಗೋವಾಗೆ ಕರೆದುಕೊಂಡು ಹೋಗಿ ಅಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಅಶ್ಲೀಲ ಫೋಟೋ ತೆಗಯಲಾಗಿದೆ.