Tag: sewer

  • ನನ್‌ ಗರ್ಲ್‍ಫ್ರೆಂಡ್ ಜೊತೆ ಮಾತಡ್ಬೇಡ – ಸ್ನೇಹಿತನನ್ನೇ ಹತ್ಯೆಗೈದು ಚರಂಡಿಗೆ ಎಸೆದ

    ನನ್‌ ಗರ್ಲ್‍ಫ್ರೆಂಡ್ ಜೊತೆ ಮಾತಡ್ಬೇಡ – ಸ್ನೇಹಿತನನ್ನೇ ಹತ್ಯೆಗೈದು ಚರಂಡಿಗೆ ಎಸೆದ

    ನವದೆಹಲಿ: ತನ್ನ ಗರ್ಲ್‍ಫ್ರೆಂಡ್ ಜೊತೆ ಮಾತನಾಡಿದ್ದಕ್ಕೆ ಯುವಕನೋರ್ವನ ಹತ್ಯೆಗೈದು ಶವವನ್ನು ಚರಂಡಿಗೆ ಎಸೆದ ಆರೋಪದಡಿ ಇಬ್ಬರು ದುಷ್ಕರ್ಮಿಗಳನ್ನು ದೆಹಲಿ ( Delhi) ಪೊಲೀಸರು ಬಂಧಿಸಿದ್ದಾರೆ.

    ಗಾಂಧಿನಗರ (Gandhi Nagar) ನಿವಾಸಿ ಮನೀಶ್ ಅಲಿಯಾಸ್ ವಿಷ್ಣು ಮೃತ ದುರ್ದೈವಿಯಾಗಿದ್ದು, ಆರೋಪಿಗಳನ್ನು ಸೀತಾರಾಮ್ ಸುತಾರ್ (21) ಮತ್ತು ಸಂಜಯ್ ಬುಚ್ಚಾ (22) ಎಂದು ಗುರುತಿಸಲಾಗಿದೆ.

    ಅಕ್ಟೋಬರ್ 22 ರಂದು ಮನೀಷ್ ಕಾಣೆಯಾಗಿರುವುದಾಗಿ ಅವರ ತಂದೆ ಭಗೀರಥ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಕರೋಲ್‍ಬಾಗ್‍ನ ಗಫಾರ್ ಮಾರುಕಟ್ಟೆಯ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಗ ಅಕ್ಟೋಬರ್ 21 ರಿಂದ ನಾಪತ್ತೆಯಾಗಿದ್ದಾನೆ. ಅಲ್ಲದೇ ನನ್ನ ಮಗನ ಕಾರು ದೆಹಲಿಯ ಕ್ಯಾಂಟ್ ಪ್ರದೇಶದಲ್ಲಿ ರಕ್ತದ ಕಲೆಗಳೊಂದಿಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ದೂರು ನೀಡಿದ್ದರು.

    ಈ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು, ಮನೀಶ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ರಾಜಸ್ಥಾನದ ಚುರುವಿನ  (Rajasthan’s Churu) ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರೂ ಮನೀಶ್‍ನನ್ನು ಕೊಂದು ಶವವನ್ನು ಚರಂಡಿಗೆ ಎಸೆದಿರುವ ವಿಚಾರ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: KPCC ಯಲ್ಲಿ ಭಿನ್ನಮತ ಸ್ಫೋಟ – ಪುಷ್ಪಾ ಅಮರನಾಥ್ ವಜಾಕ್ಕೆ ಆಗ್ರಹ

    crime

    ಆರೋಪಿ ಸಂಜಯ್ ಬುಚ್ಚಾ ಕೋಲ್ಕತ್ತಾದಲ್ಲಿ ಷೇರು ದಲ್ಲಾಳಿಯೊಂದಿಗೆ ಕೆಲಸ ಮಾಡುತ್ತಿದ್ದನು. ಮನೀಶ್ ತನ್ನ ಗೆಳತಿಯನ್ನು ಭೇಟಿಯಾದ ವಿಚಾರ ತಿಳಿದ ಸಂಜಯ್ ಬುಚ್ಚಾ ಆಕೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಸಂಶಯ ಹೊಂದಿದ್ದನು. ಇದರಿಂದ ತನ್ನ ಗೆಳತಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸುವಂತೆ ಮನೀಶ್‍ಗೆ ವಾರ್ನ್ ಮಾಡಿದ್ದನು. ಆದರೂ ಆತನ ಮಾತನ್ನು ನಿರಾಕರಿಸಿದ್ದರಿಂದ ಮನೀಶ್ ಅನ್ನು ಹತ್ಯೆಗೈಯ್ಯಲು ಸಂಜಯ್ ನಿರ್ಧರಿಸಿದನು. ಇದನ್ನೂ ಓದಿ: 2023ರ ವೇಳೆಗೆ ಚೀನಾ, ಪಾಕಿಸ್ತಾನಕ್ಕಿಂತ ಉತ್ತಮ ಸಂಬಳ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ ಭಾರತ

    ಅಕ್ಟೋಬರ್ 21 ರಂದು ದೆಹಲಿಯಲ್ಲಿ ಭೇಟಿಯಾಗುವಂತೆ ಮನೀಶ್‍ಗೆ ಸಂಜಯ್ ತಿಳಿಸಿದ್ದನು. ಇದೇ ವೇಳೆ ಸಂಜಯ್ ತನ್ನ ನೆರೆಮನೆಯ ಸೀತಾರಾಮ್ ಅನ್ನು ಕರೆಸಿಕೊಂಡು ಇಬ್ಬರೂ ಸೇರಿಕೊಂಡು ಮನೀಶ್‍ಗೆ ಮದ್ಯ ಕುಡಿಸಿದ್ದಾರೆ. ಬಳಿಕ ಸಂಜಯ್ ತನ್ನ ಗೆಳತಿಯ ನಂಬರ್ ಮತ್ತು ಫೋಟೋಗಳನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ಇದಕ್ಕೆ ಮನೀಶ್ ನಿರಾಕರಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಸಂಜಯ್ ಹಾಗೂ ಸೀತಾರಾಮ್ ಕಾರಿನೊಳಗೆ ಹಗ್ಗದ ಸಹಾಯದಿಂದ ಮನೀಶ್ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

    ಬಳಿಕ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಬಿಸಾಡಲು ಯತ್ನಿಸಿದರೂ, ದೀಪಾವಳಿ ಹಬ್ಬದ ಹಿನ್ನೆಲೆ ಎಲ್ಲೆಡೆ ಟ್ರಾಫಿಕ್ ಇದ್ದಿದ್ದರಿಂದ ಸುಮಾರು 2 ಗಂಟೆಗಳ ಕಾಲ ಮೃತದೇಹದೊಂದಿಗೆ ಕಾರಿನಲ್ಲಿಯೇ ತಿರುಗಾಡಿದ್ದಾರೆ. ಕೊನೆಗೆ ದೆಹಲಿಯ ಕ್ಯಾಂಟ್ ಪ್ರದೇಶದ ಚರಂಡಿಯೊಂದಕ್ಕೆ ಶವವನ್ನು ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಒಳಚರಂಡಿಯಲ್ಲಿ ಅನಿಲ ಸ್ಫೋಟ 14 ಮಂದಿ ಸಾವು

    ಒಳಚರಂಡಿಯಲ್ಲಿ ಅನಿಲ ಸ್ಫೋಟ 14 ಮಂದಿ ಸಾವು

    ಇಸ್ಲಾಮಾಬಾದ್: ಚರಂಡಿಯಲ್ಲಿ ಅನಿಲ ಸ್ಫೋಟ 14 ಮಂದಿ ಸಾವನ್ನಪ್ಪಿ, 12 ಮಂದಿ ಗಾಯಗೊಂಡಿರುವ ಘಟನೆ ಕರಾಚಿಯಲ್ಲಿ ನಡೆದಿದೆ.

    ಕರಾಚಿ ನಗರದ ಒಳಚರಂಡಿಯಲ್ಲಿ ಅನಿಲ ಸ್ಫೋಟ ಸಂಭವಿಸಿದ ಕಾರಣ, ಕನಿಷ್ಠ 14 ಮಂದಿ ಸಾವಿಗೀಡಾಗಿದ್ದಾರೆ. ಇತರ 12 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕರಾಚಿಯ ಶೇರ್‍ಶಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: BJP ಅವಧಿಯಲ್ಲಿ ಅಭಿವೃದ್ಧಿಯಾಗಿದ್ದು ಮೋದಿ ಸ್ನೇಹಿತರಷ್ಟೇ: ಪ್ರಿಯಾಂಕಾ ಗಾಂಧಿ

    ಒಳಚರಂಡಿ ಮೇಲೆ ಬ್ಯಾಂಕೊಂದರ ಕಟ್ಟಡ ನಿರ್ಮಿಸಲಾಗಿದೆ. ಒಳಚರಂಡಿಯಲ್ಲಿ ಶೇಖರಣೆಯಾಗಿದ್ದ ಅನಿಲಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಕಟ್ಟಡ ಕುಸಿದಿದೆ. ತನಿಖೆ ಬಳಿಕದ ಸ್ಫೋಟಕ್ಕೆ ಏನು ಕಾರಣ ಎಂಬುದು ತಿಳಿಯಲಿದೆ ಎಂದು ಕರಾಚಿ ಆಡಳಿ ತಾಧಿಕಾರಿ ಮುರ್ತಜಾ ವಹಾಬ್ ಹೇಳಿದ್ದಾರೆ. ಇದನ್ನೂ ಓದಿ: 7 ವರ್ಷದಲ್ಲಿ ಅವರೇನು ಮಾಡಿದ್ದಾರೆ? – ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

  • ಚರಂಡಿಗೆ ಬಿದ್ದಿದ್ದ ಹಸು ರಕ್ಷಣೆ – ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ

    ಚರಂಡಿಗೆ ಬಿದ್ದಿದ್ದ ಹಸು ರಕ್ಷಣೆ – ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ

    – ಹಸಿರು ಮೇಯಲು ಬಂದಿದ್ದ ಹಸು ಚರಂಡಿಗೆ

    ಮಡಿಕೇರಿ: ನಗರದ ಇಂದಿರಾ ಕ್ಯಾಂಟೀನ್ ಬಳಿಯ ಚರಂಡಿಗೆ ಬಿದ್ದು ಅಪಾಯದಲ್ಲಿ ಸಿಲುಕಿದ್ದ ಹಸುವನ್ನು ಸಾರ್ವಜನಿಕರು ರಕ್ಷಣೆ ಮಾಡಿ ಮಾನವೀಯತೆ ತೋರಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಕಳೆದ ಕೆಲವು ದಿನಗಳ ಹಿಂದೆ ಹೊಸದಾಗಿ ಚರಂಡಿ ನಿರ್ಮಿಸಲಾಗಿತ್ತು. ಆದರೆ ಅದರ ಮೇಲೆ ಸ್ಲ್ಯಾಬ್ ನಿರ್ಮಿಸದೇ ಬಿಟ್ಟಿದ್ದರ ಪರಿಣಾಮವಾಗಿ ಪಕ್ಕದಲ್ಲಿದ್ದ ಹಸಿರು ಮೇಯಲು ಬಂದಿದ್ದ ಹಸು ಚರಂಡಿಗೆ ಬಿದ್ದಿತ್ತು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಗಮನಿಸಿದ ಸ್ಥಳೀಯ ಆಟೋ ಚಾಲಕರು ಹಾಗೂ ಪತ್ರಕರ್ತರು ಸುಮಾರು ಅರ್ಧ ಗಂಟೆ ಸಾಹಸ ಮಾಡಿ, ಹಸುವನ್ನು ಮೇಲಕ್ಕೆ ಎತ್ತಿದ್ದಾರೆ.

    ರಾಷ್ಟ್ರಪತಿಯವರು ಬರುವ ಸಮಯದಲ್ಲಿ ಅಧಿಕಾರಿಗಳು ಇಲ್ಲಿ ನಿಂತು ತರಾತುರಿಯಲ್ಲಿ ಕೆಲಸ ಮಾಡಿದ್ದರು. ಚರಂಡಿಯ ಮೇಲ್ಭಾಗ ಮುಚ್ಚದಿದ್ದರೆ ರಾತ್ರಿ ಸಮಯದಲ್ಲಿ ಮನುಷ್ಯರು ಕೂಡ ಈ ಚರಂಡಿಯಲ್ಲಿ ಬೀಳುತ್ತಾರೆ. ಅದಕ್ಕಿಂತ ಮುಂಚೆ ಚರಂಡಿಯ ಮೇಲ್ಭಾಗವನ್ನು ಮುಚ್ಚಲು ಕ್ರಮ ಗೊಳ್ಳಬೇಕು. ರಾಷ್ಟ್ರಪತಿ ಬಂದು ಹೋದ ನಂತರ ಯಾರೂ ಈ ಕೂಡ ತಿರುಗಿ ನೋಡಲಿಲ್ಲ. ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡದಿದ್ದರೆ, ಈ ರೀತಿಯ ಅನಾಹುತಗಳು ಸಂಭವಿಸುತ್ತಲೇ ಇರುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಚರಂಡಿಯ ಮೇಲ್ಭಾಗ ತಕ್ಷಣವೇ ಮುಚ್ಚಬೇಕು ಎಂದು ಸಾರ್ವಜನಿಕರು ಒತ್ತಾಯಿಸಿಸುತ್ತಿದ್ದಾರೆ.

  • ಮಳೆ ನೀರು ಬ್ಲಾಕ್ – ಮ್ಯಾನ್‍ಹೋಲ್‍ಗೆ ಇಳಿದ ಕಾರ್ಪೋರೇಟರ್ ಕದ್ರಿ ಮನೋಹರ್ ಶೆಟ್ಟಿ

    ಮಳೆ ನೀರು ಬ್ಲಾಕ್ – ಮ್ಯಾನ್‍ಹೋಲ್‍ಗೆ ಇಳಿದ ಕಾರ್ಪೋರೇಟರ್ ಕದ್ರಿ ಮನೋಹರ್ ಶೆಟ್ಟಿ

    ಮಂಗಳೂರು: ಮಳೆ ನೀರು ಹರಿದು ಹೋಗುವ ಮ್ಯಾನ್‍ಹೋಲ್ ಚೇಂಬರ್ ಗೆ ಸ್ವತಃ ಕಾರ್ಪೊರೇಟರೇ ಇಳಿದು ಸಮಸ್ಯೆ ಬಗೆಹರಿಸಿದ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ.

    ಮಂಗಳೂರಿನ ಕದ್ರಿ ಕಂಬಳ ರಸ್ತೆ ಬದಿಯಲ್ಲಿ ನೀರು ಹರಿದು ಹೋಗುವ ಚರಂಡಿಯಲ್ಲಿ ಮಣ್ಣು, ಕಸಕಡ್ಡಿಗಳು ನಿಂತು ಮಳೆ ನೀರಿನ ಹರಿವಿಗೆ ಸಮಸ್ಯೆಯುಂಟಾಗಿತ್ತು. ಈ ಬಗ್ಗೆ ಸ್ಥಳೀಯರು ಮನಪಾ ಸದಸ್ಯ ಮನೋಹರ್ ಶೆಟ್ಟಿ ಕದ್ರಿಯವರ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಬಂದ ಕಾರ್ಪೊರೇಟರ್ ಕಾರ್ಮಿಕರನ್ನು ಕರೆಸಿ, ಪಕ್ಕದಲ್ಲೇ ಇದ್ದ ಮ್ಯಾನ್‍ಹೋಲ್ ಚೇಂಬರ್ ನೊಳಗೆ ಇಳಿದು ಪರಿಶೀಲಿಸುವಂತೆ ಹೇಳಿದರು. ಆದರೆ ಈ ಮ್ಯಾನ್‍ಹೋಲ್ ನೊಳಗೆ ಇಳಿಯಲು ಕಾರ್ಮಿಕರು ನಿರಾಕರಿಸಿದಾಗ, ಸತಃ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿ ಕೂಡಲೇ ತಮ್ಮ ಮನೆಯಿಂದ ಬದಲಿ ಉಡುಪುಗಳನ್ನು ತರಿಸಿ ಮ್ಯಾನ್‍ಹೋಲ್ ಚೇಂಬರ್ ಒಳಗಡೆ ಇಳಿದು ಸಮಸ್ಯೆ ಏನೆಂದು ಪರಿಶೀಲಿಸಿದರು.

    ಅಲ್ಲಿ ಶೇಖರಣೆಗೊಂಡಿದ್ದ ಮಣ್ಣು ಹಾಗೂ ಕಸ, ಕಡ್ಡಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಟ್ಟರು. ಇವರ ಈ ಜನಪರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ

  • ಪಾಳುಬಿದ್ದ ಕೆರೆಗೆ ಯುವಕರಿಂದ ಮರು ಜೀವ- ರೈತರ ಮೊಗದಲ್ಲಿ ಸಂತಸ

    ಪಾಳುಬಿದ್ದ ಕೆರೆಗೆ ಯುವಕರಿಂದ ಮರು ಜೀವ- ರೈತರ ಮೊಗದಲ್ಲಿ ಸಂತಸ

    – ಕೆರೆಗೆ ಬೇಕಿದೆ ತಡೆಗೋಡೆ

    ಮಡಿಕೇರಿ: ಹಲವು ವರ್ಷಗಳಿಂದ ಹೂಳುತುಂಬಿ ಪಾಳು ಬಿದ್ದಿದ್ದ ಅಭ್ಯತ್ ಮಂಗಲ ಸಾರ್ವಜನಿಕರ ಕೆರೆಯನ್ನು ನರೇಗಾ ಯೋಜನೆಯಡಿ ಯುವಕರ ತಂಡ ಪುನಶ್ಚೇತನಗೊಳಿಸಿದ್ದು, ಮರುಜೀವ ನೀಡಿದ್ದಾರೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್‍ಮಂಗಲ ಗ್ರಾಮದ ಅತ್ತಿಮಂಗಲ ಕೆರೆ ಹಲವು ವರ್ಷಗಳಿಂದ ಹೂಳು ತುಂಬಿತ್ತು. ಕಸದ ಗಿಡಗಳು ಬೆಳೆದು ಪಾಳು ಬಿದ್ದಿತ್ತು. ಮಾತ್ರವಲ್ಲದೇ ಕೆಲವರು ರಾತ್ರಿ ವೇಳೆ ಕೋಳಿ ಮಾಂಸದ ತ್ಯಾಜ್ಯವನ್ನು ಕೆರೆಯ ಬದಿಯಲ್ಲಿ ಎಸೆಯುತ್ತಿದ್ದು, ದುರ್ವಾಸನೆಯಿಂದ ಕೂಡಿತ್ತು.

    ಇದನ್ನು ಅರಿತ ನೆಲ್ಯಹುದಿಕೇರಿಯ ಮುತ್ತಪ್ಪ ಯುವಕಲಾ ಸಂಘದ ಯುವಕರ ತಂಡ ಕೆರೆಯ ಪುನಶ್ಚೇತನಕ್ಕೆ ಮುಂದಾಗಿತ್ತು. ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ಕೆರೆಯ ಅಭಿವೃದ್ಧಿಗೆ ಅನುವು ಮಾಡಿಕೊಡಲಾಗಿದೆ. ಅತ್ತಿಮಂಗಲ ಸಮೀಪದ ಮುಖ್ಯ ರಸ್ತೆಯ ಬದಿಯಲ್ಲೇ ಇರುವ ಕೆರೆಯನ್ನು ಕಳೆದ ಒಂದು ತಿಂಗಳಿನಿಂದ ಸ್ವಚ್ಛಗೊಳಿಸಲಾಗಿದೆ. ಕೆರೆಯ ಸುತ್ತಲೂ ಇದ್ದ ಕುರಚಲು ಗಿಡ ಹಾಗೂ ಹುಲ್ಲನ್ನು ತೆರವುಗೊಳಿಸಿ, ಕೆರೆಯ ಹೂಳನ್ನು ತೆಗೆಯಲಾಗಿದೆ.

    ರಸ್ತೆಯ ಬದಿಯಲ್ಲಿನ ಕಸದ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಗಿದೆ. ಒಂದು ತಿಂಗಳಿನಿಂದ ಯುವಕರ ತಂಡ ಕೆರೆಯ ಅಭಿವೃದ್ಧಿಯಲ್ಲಿ ತೊಡಗಿದ್ದು, ಇದೀಗ ಕೆರೆಗೆ ಜೀವಕಳೆ ಬಂದಿದೆ. ಬೇಸಿಗೆಯಲ್ಲಿ ಗ್ರಾಮದ ಕೃಷಿಕರಿಗೆ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಕೆರೆ ಅಭಿವೃದ್ಧಿಯಿಂದಾಗಿ ಸ್ಥಳೀಯ ಕೃಷಿಕರಿಗೆ ಉಪಯೋಗವಾಗಲಿದೆ. ಸುಮಾರು ಒಂದು ಏಕರೆ ವಿಸ್ತೀರ್ಣದಲ್ಲಿರುವ ಕೆರೆ ಈ ಹಿಂದೆ ಸ್ಥಳೀಯ ಕೃಷಿಕರಿಗೆ ನೀರಿನ ಮುಖ್ಯ ಮೂಲವಾಗಿತ್ತು. ಬಳಿಕ ನೀರಿಲ್ಲದೇ ಪಾಳು ಬಿದ್ದಿದ್ದು, ಗದ್ದೆಗಳಿಗೆ ನೀರಿನ ಕೊರತೆ ಉಂಟಾಗುತ್ತಿದೆ. ಪಂಚಾಯಿತಿಯ 5 ಲಕ್ಷ ರೂ. ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿದ್ದು, ಸುತ್ತಲಿನ ಜಾಗದಲ್ಲಿ ಹೂ ಗಿಡಗಳನ್ನು ನೆಟ್ಟು ಕೆರೆಯ ಅಂದ ಹೆಚ್ಚಿಸಲು ಸಹ ಯುವಕರು ಮುಂದಾಗಿದ್ದಾರೆ.

    ಮುಖ್ಯ ರಸ್ತೆಯ ತಿರುವಿನಲ್ಲಿ ಸಾರ್ವಜನಿಕ ಕೆರೆ ಇದ್ದು, ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಕೆರೆಯ ಸುತ್ತಲೂ ಕಬ್ಬಿಣದ ಬೇಲಿ ಹಾಗೂ ಬಕೆರೆಯ ಎರಡೂ ಬದಿ ತಿರುವು ಹಾಗೂ ಇಳಿಜಾರು ಇರುವುದರಿಂದ ಕೆರೆಗೆ ಅಡ್ಡಲಾಗಿ ಕಬ್ಬಿಣದ ತಡೆಗೋಡೆ ಅಳವಡಿಸಬೇಕು ಎಂದು ಸ್ಥಳೀಯರು ಸಲಹೆ ನೀಡಿದ್ದಾರೆ.

  • ಮುಗಿಯದ ಇಂದಿರಾ ಕ್ಯಾಂಟೀನ್ ಗೋಳು – ಬಿಲ್ ಕಟ್ಟಿಲ್ಲವೆಂದು ಲಾಕ್ ಆಯ್ತು ಶೌಚಾಲಯ

    ಮುಗಿಯದ ಇಂದಿರಾ ಕ್ಯಾಂಟೀನ್ ಗೋಳು – ಬಿಲ್ ಕಟ್ಟಿಲ್ಲವೆಂದು ಲಾಕ್ ಆಯ್ತು ಶೌಚಾಲಯ

    ಬೆಂಗಳೂರು: ಏನೇ ಮಾಡಿದರು ಇಂದಿರಾ ಕ್ಯಾಂಟೀನ್ ಗೋಳು ಮಾತ್ರ ಮುಗಿಯುತ್ತಲೇ ಇಲ್ಲ. ಒಳಚರಂಡಿ ಬಿಲ್ ಬಾಕಿ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಶೌಚಾಲಯದ ಸೌಲಭ್ಯ ಸ್ಥಗಿತಗೊಳಿಸಲಾಗಿದೆ. ಈ ಕ್ರಮ ಕ್ಯಾಂಟೀನ್‍ಗೆ ಬರುವ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡಿದೆ.

    ಬೆಂಗಳೂರಿನ ವಸಂತ ನಗರ, ಟಿ.ಸಿ ಪಾಳ್ಯ, ರಾಧಾಕೃಷ್ಣ ವಾರ್ಡ್‍ನಲ್ಲಿರುವ ಇಂದಿರಾ ಕ್ಯಾಂಟೀನ್‍ಗಳಲ್ಲಿ ಶೌಚಾಲಯ ಬಂದ್ ಗೋಳು ತಲೆ ಕೆಡಿಸಿದೆ. ರಿಯಾಯಿತಿ ದರದಲ್ಲಿ ಊಟ ಮಾಡಲು ಬರುವ ಗ್ರಾಹಕರಿಗೆ ಮೂಲಭೂತ ಸೌಕರ್ಯವೇ ಇಲ್ಲದಂತೆ ಆಗಿದೆ. ಬಿಲ್ ಬಾಕಿ ಹಿನ್ನೆಲೆಯಲ್ಲಿ ಒಳಚರಂಡಿ ಮೇಲ್ವಿಚಾರಣ ಸಿಬ್ಬಂದಿ ಸ್ಯಾನಿಟರಿ ಲೈನ್ ಬ್ಲಾಕ್ ಮಾಡಿದ್ದಾರೆ. ಈ ನಿರ್ಧಾರದಿಂದ ಇಂದಿರಾ ಕ್ಯಾಂಟೀನ್ ಗಬ್ಬು ನಾರುತ್ತಿದೆ.

    ಸ್ಯಾನಿಟರಿ ಬ್ಲಾಕ್ ಆದರೆ ಫುಡ್ ಪಾಯ್ಸನ್ ಹಾಗೂ ಸ್ವಚ್ಚತೆ ಸಮಸ್ಯೆ ಆಗಲಿದೆ ಎಂದು ಇಂದಿರಾ ಕ್ಯಾಂಟೀನ್ ಮ್ಯಾನೇಜರ್ ಮಹ್ಮದ್ ಹೇಳಿದ್ದಾರೆ. ಈ ಬಿಲ್ ಬಾಕಿ ಕಥೆ ತಿಳಿಯದ ಗ್ರಾಹಕ ಮಾತ್ರ ಶೌಚಾಲಯ ಸೇವೆ ಸ್ಥಗಿತ ಮಾಡಿರುವುದು ಸರಿ ಇಲ್ಲ. ಬೇಗ ಶೌಚಾಲಯ ವ್ಯವಸ್ಥೆ ಕೊಡಿ ಎಂದು ಆಗ್ರಹಿಸಿದ್ದಾರೆ.

    ಸುಪ್ರೀಂ ಕೋರ್ಟ್ ಆದೇಶದಂತೆ ಸ್ಟಾರ್ ಹೋಟೆಲ್, ಕೆಫೆ ಸೆಂಟರ್ ಹೀಗೆ ಯಾವ ಹೋಟೆಲ್‌ನಲ್ಲೂ ಗ್ರಾಹಕರು ಶೌಚಾಲಯ ಬಳಸುವುದನ್ನ ತಡೆಯುವಂತಿಲ್ಲ. ಆದರೆ ಇಂದಿರಾ ಕ್ಯಾಂಟೀನ್‍ನಲ್ಲಿ ಮಾತ್ರ 25 ಲಕ್ಷ ರೂ. ಬಿಲ್ ಬಾಕಿ ಹಿನ್ನೆಲೆ ಸ್ಯಾನಿಟರಿ ಲೈನ್ ಬ್ಲಾಕ್ ಮಾಡಲಾಗಿದ್ದು, ಇದೇ ನೆಪವೊಡ್ಡಿ ಗ್ರಾಹಕರಿಗೆ ಶೌಚಾಲಯ ಸೇವೆ ಸ್ಥಗಿತಗೊಳಿಸಿರುವುದು ಗ್ರಾಹಕರಿಗೆ ಬೇಸರ ತಂದಿದೆ.

  • ಮಳೆ ನೀರಿನಿಂದ ತನ್ನ ಮರಿಗಳನ್ನು ರಕ್ಷಿಸಿದ ನಾಯಿ – ದೃಶ್ಯ ನೋಡಿದ್ರೆ ಕಣ್ಣಂಚಲ್ಲಿ ಬರುತ್ತೆ ನೀರು

    ಮಳೆ ನೀರಿನಿಂದ ತನ್ನ ಮರಿಗಳನ್ನು ರಕ್ಷಿಸಿದ ನಾಯಿ – ದೃಶ್ಯ ನೋಡಿದ್ರೆ ಕಣ್ಣಂಚಲ್ಲಿ ಬರುತ್ತೆ ನೀರು

    ಕೋಲಾರ: ಮಳೆ ನೀರಿನ ಅವಾಂತರದಿಂದ ತಾಯಿ ನಾಯಿ ತನ್ನ ಮರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಪರದಾಟ ನಡೆಸಿದ ಘಟನೆ ಕೋಲಾರದಲ್ಲಿ ನಡೆದಿದೆ.

    ಇಂದು ಸಂಜೆ ಬಂದ ಮಳೆಗೆ ಚರಂಡಿಯಲ್ಲಿ ನೀರು ತುಂಬಿಕೊಂಡಿದೆ. ಅದೇ ಚರಂಡಿ ಬಳಿ ಇದ್ದ ನಾಯಿ ಮರಿಗಳ ರಕ್ಷಣೆಗಾಗಿ ತಾಯಿ ನಾಯಿ ಅರಣ್ಯ ರೋಧನೆ ನಡೆಸಿತು. ನಾಯಿ ಮರಿಗಳನ್ನು ರಕ್ಷಿಸುವ ಕರುಣಾಜನಕ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಕೋಲಾರದ ಗೌರಿಪೇಟೆಯ 5ನೇ ಕ್ರಾಸ್ ನಲ್ಲಿ ಇಂದು ಸಂಜೆ ಈ ಘಟನೆ ನಡೆದಿದೆ.

    ಮಳೆಯಾಗಿ ಚರಂಡಿಯಲ್ಲಿ ನೀರು ತುಂಬಿಕೊಂಡ ಪರಿಣಾಮ ನಾಯಿಯ ಪರದಾಟ, ಗೋಳಾಟ ಹೇಳ ತೀರದಂತಾಗಿತ್ತು. ತನ್ನ 5 ಮರಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಮತ್ತೊಂದು ಚರಂಡಿಗೆ ಸಾಗಿಸಿದ ನಾಯಿಯ ತಾಯಿ ಪ್ರೀತಿಯನ್ನು ಕಂಡ ಸ್ಥಳಿಯರ ಕಣ್ಣಾಲೆಗಳು ನೀರು ತುಂಬಿಕೊಂಡಿತ್ತು. ಕಿಂಡಿಯಂತಿರುವ ಸಣ್ಣ ಸಂದಿಯಲ್ಲಿ ತನ್ನ 5 ಮಕ್ಕಳನ್ನು ಪಾರು ಮಾಡಿದ ನಾಯಿ ಸಾಹಸಕ್ಕೆ ಸಾಟಿಯೇ ಇಲ್ಲವಾಗಿತ್ತು. ಮರಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಒಂದೊಂದಾಗಿ ಹೊತ್ತೊಯ್ದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿತು.

    ಮಳೆಯಲ್ಲೇ ನಾಯಿ ತನ್ನ ಮರಿಗಳನ್ನ ರಕ್ಷಣೆ ಮಾಡುವ ಮನಕಲಕುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಒಂದು ಕಡೆ ಮಳೆ, ಮತ್ತೊಂದೆಡೆ ಕಿಂಡಿಯಂತಿರುವ ಸಣ್ಣ ಕಾಲುವೆಯಲ್ಲಿ ಮರಿಗಳನ್ನು ರಕ್ಷಣೆ ಮಾಡಿದ ವಿಡಿಯೋ ನೋಡಿದರೆ ಕಣ್ಣಂಚಲ್ಲಿ ನೀರು ಬರುತ್ತವೆ.

  • 22 ವರ್ಷಗಳಿಂದ ಒಳಚರಂಡಿಯಲ್ಲೇ ಇವರ ಸಂಸಾರ

    ಬೊಗೊಟಾ: ಕೆಲವರು ಎಷ್ಟು ದುಡ್ಡಿದ್ದರೂ ಎಷ್ಟೇ ದೊಡ್ಡ ಮನೆಯಿದ್ದರೂ ಮತ್ತಷ್ಟು ಶ್ರೀಮಂತಿಕೆಗೆ ಹಂಬಲಿಸುತ್ತಾರೆ. ಮತ್ತೂ ಕೆಲವರು ಹಾಸಿಗೆ ಇದ್ದಷ್ಟೇ ಕಾಲು ಚಾಚು ಅನ್ನೋ ಮಾತಿನಂತೆ ಇದ್ದದ್ದರಲ್ಲೇ ನೆಮ್ಮದಿಯಾಗಿರ್ತಾರೆ. ಇದಕ್ಕೆ ಉದಹರಣೆ ದಕ್ಷಿಣ ಅಮೆರಿಕದ ಕೊಲೊಂಬಿಯಾದ ಈ ದಂಪತಿ. ಹಲವಾರು ವರ್ಷಗಳಿಂದ ಇವರು ಒಳಚಂಡಿಯೊಂದರಲ್ಲೇ ಸಂಸಾರ ನಡೆಸುತ್ತಿದ್ದಾರೆ. ಶ್ರೀಮಂತಿಕೆ ವೈಭೋಗಗಳು ಇಲ್ಲದಿದ್ದರೂ ಸಂತೋಷವಾಗಿದ್ದಾರೆ.

    ಮರಿಯಾ ಗಾರ್ಸಿಯಾ ಮತ್ತು ಮೈಗುಯೆಲ್ ರೆಸ್ಟ್ರೆಪೋ ದಂಪತಿ 22 ವರ್ಷಗಳಿಂದ ಒಳಚಂಡಿಯಲ್ಲೇ ಸಂಸಾರ ಮಾಡುತ್ತಿದ್ದಾರೆ ಅಂದ್ರೆ ನಂಬಲೇಬೇಕು. ಈ ದಂಪತಿ ಮೊದಲು ಕೊಲೊಂಬಿಯಾದ ಮೆಡೆಲಿನ್‍ನಲ್ಲಿ ಭೇಟಿಯಾದಾಗ ಇಬ್ಬರೂ ಮಾದಕ ವ್ಯಸನಿಗಳಗಿದ್ದರು. ಈ ಪ್ರದೇಶ ಹೆಚ್ಚು ಹಿಂಸಾಚಾರ ಹಾಗೂ ಮಾದಕದ್ರವ್ಯಗಳ ಕಳ್ಳಸಾಗಣೆಯ ಕೇಂದ್ರವಾಗಿತ್ತು. ಬೀದಿಯಲ್ಲೇ ಬದುಕು ಸಾಗಿಸುತ್ತಿದ್ದ ಇವರ ಜೀವನವನ್ನು ಮಾದಕ ವ್ಯಸನ ಹಾಳು ಮಾಡಿತ್ತು. ಆದ್ರೆ ಈ ಇಬ್ಬರೂ ಪರಸ್ಪರ ಜೊತೆಯಾಗಿದ್ದು ಸಂತೋಷ ಕಂಡುಕೊಂಡಿದ್ದರು. ಹೀಗಾಗಿ ಮಾದಕ ವ್ಯಸನದಿಂದ ಮುಕ್ತರಾಗಬೇಕು ಅಂತ ತೀರ್ಮಾನಿಸಿದ್ದರು.

    ಹಣ ಮತ್ತು ಆಶ್ರಯ ನೀಡಲು ಇಬ್ಬರಿಗೂ ಕುಟುಂಬಸ್ಥರು ಹಾಗೂ ಸ್ನೇಹಿತರಿಲ್ಲದ ಕಾರಣ ಈ ಒಳಚರಂಡಿಯನ್ನೇ ಮನೆಯಾಗಿಸಿಕೊಂಡರು. ಒಳಚರಂಡಿಯಲ್ಲಿ ವಾಸ ಮಾಡೋದನ್ನ ಊಹೆ ಮಾಡಿಕೊಂಡರೆ ನಮ್ಮ ಕಣ್ಣಮುಂದೆ ಬರೋದು ಕೇವಲ ಗಲೀಜು ಹಾಗೂ ಧೂಳಿನ ಚಿತ್ರಣ. ಆದ್ರೆ ಅದಕ್ಕೆ ವಿರುದ್ಧವೆಂಬಂತೆ ಈ ದಂಪತಿ ಒಳಚರಂಡಿಯಲ್ಲೇ ಎಲ್ಲಾ ಅಗತ್ಯ ವಸ್ತುಗಳನ್ನಿಟ್ಟುಕೊಂಡು ಚೊಕ್ಕವಾದ ಮನೆ ಮಾಡಿಕೊಂಡಿದ್ದಾರೆ. ಇದರೊಳಗೆ ಟಿವಿ, ಟೇಬಲ್ ಫ್ಯಾನ್ ಹಾಗೂ ವಿದ್ಯುತ್ ಸಂಪರ್ಕವೂ ಇದೆ. ಅಲ್ಲದೆ ಹಬ್ಬದ ಸಂದರ್ಭದಲ್ಲಿ ಇವರು ಎಲ್ಲರಂತೆ ಮನೆಯನ್ನ ಸಿಂಗರಿಸ್ತಾರೆ.

    ದಂಪತಿಯ ಜೊತೆ ಬ್ಲಾಕಿ ಎಂಬ ನಾಯಿ ಕೂಡ ಇದ್ದು ಮಾಲೀಕರು ಇಲ್ಲದಿದ್ದಾಗ ಮನೆಯನ್ನು ಕಾಯುತ್ತದೆ.