Tag: session

  • ಬಜೆಟ್ ಅಧಿವೇಶನಕ್ಕಿಂದು ತೆರೆ – ಕಲಾಪಕ್ಕೆ ಬರಲು ಕೈ ಶಾಸಕರಿಗೂ ವಿಪ್

    ಬಜೆಟ್ ಅಧಿವೇಶನಕ್ಕಿಂದು ತೆರೆ – ಕಲಾಪಕ್ಕೆ ಬರಲು ಕೈ ಶಾಸಕರಿಗೂ ವಿಪ್

    – ರೈತರ ಸಾಲಮನ್ನಾಗೆ ಸಿಎಂ ಕೊಡ್ತಾರ ಸಮಯ

    ಬೆಂಗಳೂರು: ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಲಿದ್ದಾರೆ.

    ಒಂಭತ್ತು ದಿನಗಳ ಅಧಿವೇಶನದಲ್ಲಿ ಬಜೆಟ್ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಇಂದು ಕಲಾಪ ಆರಂಭವಾಗುತ್ತಿದಂತೆ ಚರ್ಚೆಗೆ ಸಿಎಂ ಸಿದ್ಧರಾಮಯ್ಯ ಉತ್ತರಿಸಲಿದ್ದಾರೆ. ಬಳಿಕ ಧನವಿನಿಯೋಗವನ್ನ ಮತಕ್ಕೆ ಹಾಕುವ ಮೂಲಕ ಸಿಎಂ ಸಿದ್ದರಾಮಯ್ಯ ಬಜೆಟ್‍ಗೆ ಅಂಗೀಕಾರ ಪಡೆಯಲಿದ್ದಾರೆ.

    ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ಎಲ್ಲಾ ಕೈ ಶಾಸಕರು ಇಂದು ಸದನದಲ್ಲಿ ಕಡ್ಡಾಯವಾಗಿ ಇರುವಂತೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ವಿಪ್ ಜಾರಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕುತೂಹಲ ಮೂಡಿಸಿದ್ದು, ಸಹಕಾರಿ ಬ್ಯಾಂಕುಗಳಲ್ಲಿ ಬಡ್ಡಿ ಮನ್ನಾ ಸಹಿತ ರೈತರ ಸಾಲ ಮರುಪಾವತಿಗೆ ಅವಧಿ ವಿಸ್ತರಿಸಿ ಘೋಷಣೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

    ವಿಧಾನಪರಿಷತ್ ಕಲಾಪ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದ್ದು ಮೊದಲು ಪ್ರಶ್ನೋತ್ತರ ಅವಧಿ ನಡೆಯಲಿದೆ. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಉತ್ತರ ನೀಡಿದ ಬಳಿಕ ಮಧ್ಯಾಹ್ನದ ನಂತ್ರ ವಿಧಾನ ಪರಿಷತ್ ನಲ್ಲಿ ಸಿಎಂ ಉತ್ತರ ನೀಡಿಲಿದ್ದಾರೆ. ಉತ್ತರದ ಬಳಿಕ ಬಜೆಟ್ ಗೆ ಅನುಮೋದನೆ ಸಿಗಲಿದೆ.

  • ಟಿವಿ ಮಾಧ್ಯಮದವರು ಮಾತನಾಡೋ ಬದಲು ಚುನಾವಣೆಗೆ ನಿಲ್ಲಲಿ: ಶಾಸಕ ತಂಗಡಗಿ

    ಟಿವಿ ಮಾಧ್ಯಮದವರು ಮಾತನಾಡೋ ಬದಲು ಚುನಾವಣೆಗೆ ನಿಲ್ಲಲಿ: ಶಾಸಕ ತಂಗಡಗಿ

    ಬೆಂಗಳೂರು: ಟಿವಿ ಮಾಧ್ಯಮದವರು ಮಾತನಾಡೋ ಬದಲು ಚುನಾವಣೆಗೆ ನಿಲ್ಲಲಿ. ಗ್ರಾಮ ಪಂಚಾಯತ್ ಚುನಾವಣೆಗೆ ನಿಂತು ನೋಡಿ. ಆಗ ಗೊತ್ತಾಗುತ್ತದೆ ಜನರ ಸಮಸ್ಯೆ ಏನು ಅಂತ. ನಾವು ಯಾವ ಬೂಟ್, ವಾಚ್ ಬಟ್ಟೆ ಹಾಕ್ತೀವಿ ಅಂತ ಮಾಧ್ಯಮಗಳಿಗೆ ಹೇಳಬೇಕಾ? ಮಾಧ್ಯಮದವ್ರು ಏನ್ ಬೇಕಾದ್ರೂ ಮಾಡಬಹುದಾ ಎಂದು ಕಾಂಗ್ರೆಸ್ ಶಾಸಕ ಶಿವರಾಜ್ ತಂಗಡಗಿ ಪ್ರಶ್ನೆ ಮಾಡಿದ್ದಾರೆ.

    ವಿಧಾನಸಭೆಯಲ್ಲಿ ನಿಯಮ 69ರ ಅಡಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ಮೇಲೆ ಕಡಿವಾಣ ಹಾಕಬೇಕು. 19 ವರ್ಷ ನನ್ನ ಜತೆಗಿದ್ದ ಹೆಂಡತಿ ನನ್ನನ್ನು ಪ್ರಶ್ನೆ ಮಾಡುವಂತಹ ಸ್ಥಿತಿ ತಂದಿದ್ದು ಮಾಧ್ಯಮಗಳು. ಕುಮ್ಮಿ, ಸಿದ್ದು, ಯಡ್ಡಿ ಅಂತಾ ತೋರಿಸ್ತಾರೆ. ಕೆಲ ನ್ಯೂಸ್ ಆಂಕರ್ ಗಳನ್ನು ನೋಡಬೇಕು. ಅಯ್ಯೋ… ಎಲ್ಲರೂ ಮುಗಿ ಬೀಳ್ತಾರೆ. ಏಕ ವಚನದಲ್ಲಿ ನಮ್ಮ ಬಗ್ಗೆ ಮಾತಾಡ್ತಾರೆ ಎಂದು ಹೇಳಿದರು.

    ಇವರೇನು ಬಾಹುಬಲಿಗಳಾ: ಅಳಂದದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಯಾರು ಎಲ್ಲಿ ಕುಳಿತು ಏನು ಬೇಕಾದ್ರೂ ಮಾತಾಡಬಹುದಾ? ಸ್ಟುಡಿಯೋದಲ್ಲಿ ನಾಲ್ಕು ಗೋಡೆಗಳ ಕುಳಿತು ಏನು ಬೇಕಾದ್ರೂ ಮಾತಾಡಬಹುದಾ? ಸ್ವಾತಂತ್ರ್ಯದ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದಾ? ನಾವು ಸದನದಲ್ಲಿ ತೂಕಡಿಸಿದ್ರೂ ಸುದ್ದಿ ಮಾಡ್ತಾರೆ. ನಾವು ಮನುಷ್ಯರಲ್ಲವಾ? ನಮ್ಮ ತಪ್ಪುಗಳನ್ನು ಎತ್ತಿ ತೋರಿಸಲಿ. ಆದ್ರೆ ಸ್ಟುಡಿಯೋದಲ್ಲಿ ಕುಳಿತು ಮಾತಾಡೋದಕ್ಕೆ ಇವರೇನು ಬಾಹುಬಲಿಗಳಾ ಎಂದು ಪ್ರಶ್ನಿಸಿದರು.

    ಮಾಧ್ಯಮದವರನ್ನು ಕಾನೂನು ಮೂಲಕ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಅವರೇ ದೂರುದಾರರು, ಅವರೇ ವಕೀಲರು ಕೊನೆಗೆ ಅವರೇ ಜಡ್ಜ್‍ಮೆಂಟ್ ಕೊಡ್ತಾರೆ ಎಂದು ಆರೋಪಿಸಿದರು.

    ತೇಜೋವಧೆ ಆಗ್ತಿದೆ: ಶಾಸಕ ಸುರೇಶ್ ಗೌಡ ಮಾತನಾಡಿ, ನಮ್ಮನ್ನು ಗೂಂಡಾಗಿರಿ, ರೌಡಿ ಎಂದು ಕರೆಯುತ್ತಾರೆ. ಗೂಂಡಾಗಿರಿ ಎನ್ನುವ ಪದಕ್ಕೆ ಅರ್ಥ ಏನು ಎಂದು ಪ್ರಶ್ನಿಸಿದರು. ಈ ವೇಳೆ ತುಮಕೂರು ಟೋಲ್ ಗಲಾಟೆಯನ್ನು ಪ್ರಸ್ತಾಪಿಸಿದ ಅವರು ಮ್ಯಾನೇಜರ್‍ಗೆ ಬೈಯ್ದು ಬಂದಿದ್ದು ಸತ್ಯ. ಪಬ್ಲಿಕ್ ಟಿವಿಯವರು ನನ್ನ ಪ್ರತಿಕ್ರಿಯೆ ಕೇಳಿದ್ರು. ಆ ಬಳಿಕ ಸುದ್ದಿ ಬೇರೆ ಚಾನೆಲ್ ಗಳಲ್ಲೂ ಬಂತು. ಬೇರೆ ಚಾನೆಲ್‍ಗಳು ನನ್ನ ರೌಡಿ ಶಾಸಕ ಅಂತಾ ತೋರಿಸಿದ್ರು. ನನ್ನ ಮೇಲೆ ತೇಜೋವಧೆ ನಡೆಯುತ್ತಿದೆ ಎಂದು ಹೇಳಿದರು.

    ನಮಗೂ ಗೌರವ ಇಲ್ವಾ: ಶಾಸಕ ರಾಜು ಕಾಗೆ ಮಾತನಾಡಿ, ಕಾಗೆ ಎಲ್ಲಿ ಹುಡುಕಿ ಅಂತಾ ಪದ ಬಳಸಿದ್ದಾರೆ. ನನ್ನ ಬಗ್ಗೆ ಇಲ್ಲಸಲ್ಲದ ಪದ ಬಳಸಿದ್ದಾರೆ. ಇವರಿಗೆ ಅಧಿಕಾರವನ್ನು ಕೊಟ್ಟವರು ಯಾರು? ನನಗೂ ಪ್ರಕರಣಕ್ಕೂ ಸಂಬಂಧವೇ ಇರಲಿಲ್ಲ. ಕರಡಿ ಹಿಡಿಯುತ್ತೀರಾ. ಹುಲಿ ಹಿಡಿಯುತ್ತೀರಾ? ಕಾಗೆ ಹಿಡಿಯೋದಕ್ಕೆ ಆಗಲ್ವಾ ಅಂತಾ ತೋರಿಸಿದ್ರು. ನಾನು ಅವತ್ತು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾಗ ನನ್ನ ಹೆಣ್ಮಕ್ಕಳು ನನ್ನ ತಡೆದ್ರು. ನಮಗೂ ಮಾನ ಮರ್ಯಾದೆ, ಗೌರವ ಇಲ್ವಾ? ಮಾಧ್ಯಮಗಳ ಮೇಲೆ ನಿಯಂತ್ರಣ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಎಂದರು.

    ನಾಚಿಕೆಯಾಗ್ಬೇಕು: ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಾತನಾಡಿ ಮಾಧ್ಯಮದವರ ಮೇಲೆ ಕೂಡ ಸಾಕಷ್ಟು ಆರೋಪ ಗಳು ಇವೆ. ಮಾಧ್ಯಮದಲ್ಲಿ ಇರೋರು ಎಲ್ಲರೂ ಸತ್ಯ ಹರಿಶ್ಚಂದ್ರರಾ? ಆದ್ರೆ ಇದುವರೆಗೂ ಒಂದೇ ಒಂದು ಸುದ್ದಿ ಬಗ್ಗೆ ಬರೆಯೋದಿಲ್ಲ. ಈ ಹಿಂದೆ ಪೆÇಲೀಸರನ್ನು ನಂಬಬಾರದು ಅಂತ ಮಾತು ಇತ್ತು. ಈಗ ನಮ್ಮ ಜೊತೆ ಇದ್ದು, ನಮ್ಮ ಜೊತೆ ಊಟ ಮಾಡಿ, ಬೆಳಿಗ್ಗೆ ನಮ್ಮ ಬಗ್ಗೆಯೇ ಸುದ್ದಿ ಬರೆಯುತ್ತಾರೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ನಮ್ಮ ತಟ್ಟೆಯಲ್ಲಿ ನೊಣ ಹುಡುಕುತ್ತಿರಾ.ಮಾಧ್ಯಮಗಳಿಗೆ ಥೂ ನಾಚಿಕೆಯಾಗಬೇಕು ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

    ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ವೈವಾಹಿಕ ಜೀವನ ಸರಿ ಆಗುತ್ತಿತ್ತು. ಆದರೆ ದೃಶ್ಯ ಮಾಧ್ಯಮದವರೇ ಅವರ ಸಂಬಂಧ ಹಾಳು ಮಾಡಿ, ಗಂಡ ಹೆಂಡತಿ ಬೇರೆ ಬೇರೆ ಮಾಡಿದ್ದಾರೆ. ಪತ್ರಕರ್ತರ ಆಗೋಕ್ಕೆ ಒಂದು ಅರ್ಹತೆ ಹಾಗು ಅನುಭವ ನಿಗದಿ ಮಾಡಬೇಕು ಎಂದು ಅವರು ಹೇಳಿದರು.

    https://www.youtube.com/watch?v=RplFyEPEAN4

  • ಹೆಚ್‍ಡಿಕೆ ಆಯ್ತು ಈಗ ಶೆಟ್ಟರ್ ಆಶ್ವಾಸನೆ – ಸದನದಲ್ಲೂ ಶುರುವಾಯ್ತು ಅಂಗನವಾಡಿ ಕೂಗು

    ಹೆಚ್‍ಡಿಕೆ ಆಯ್ತು ಈಗ ಶೆಟ್ಟರ್ ಆಶ್ವಾಸನೆ – ಸದನದಲ್ಲೂ ಶುರುವಾಯ್ತು ಅಂಗನವಾಡಿ ಕೂಗು

    ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಳಿಕ ಈಗ ಬಿಜೆಪಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿಯಿಂದ ಧರಣಿ ನಡೆಸುತ್ತಿರೋ ಫ್ರೀಡಂಪಾರ್ಕ್‍ಗೆ ಭೇಟಿ ನೀಡಿದ್ದಾರೆ.

    ಈ ವೇಳೆ 10 ಸಾವಿರ ಸಂಬಳ ನೀಡೋವರೆಗೂ ಜಾಗ ಬಿಟ್ಟು ಕದಲಲ್ಲ ಅಂತ ಅಂಗನವಾಡಿ ಕಾರ್ಯಕರ್ತೆಯರು ಶೆಟ್ಟರ್ ಮುಂದೆಯೂ ಆಕ್ರೋಶ ವ್ಯಕ್ತಪಡಿಸಿದ್ರು. ಸದನ ನಡೆಸೋಕೆ ಬಿಡಬೇಡಿ, ನಮ್ಮ ಸಮಸ್ಯೆ ಮೊದ್ಲು ಬಗೆಹರಿಸಿ ಅಂತ ಒತ್ತಡ ಹಾಕಿದ್ರು. ಆದ್ರೆ ಶೆಟ್ಟರ್ ಈ ಕುರಿತು ನಾವು ಕೇಂದ್ರದಿಂದ ನೆರವು ಕೊಡಿಸೋ ಪ್ರಯತ್ನ ಮಾಡ್ತೀವಿ. ನಮ್ಮ ಸರ್ಕಾರ ಬಂದ್ರೆ ನಿಮ್ಮ ಸಮಸ್ಯೆ ಬಗೆಹರಿಸ್ತೀವಿ ಅಂತ ಅಂದ್ರು.

    ಸದಸನದಲ್ಲೂ ಪ್ರಸ್ತಾಪ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಬಗ್ಗೆ ಇಂದು ಸದನದಲ್ಲಿ ಬಿಜಿಪಿ ಪ್ರಸ್ತಾಪಿಸಿದ್ದು, ನಿಯಮ 69 ರಡಿ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ. 10 ಸಾವಿರ ಜನ ರಸ್ತೆಯ ಮೇಲೆ ಇದ್ದಾರೆ. ಅವರ ಕಷ್ಟ ಕೇಳಬೇಕು ಅಂತಾ ಆಗ್ರಹಿಸಲಾಯಿತು. ಈ ವೇಳೆ ಪ್ರಶ್ನೋತ್ತರ ಬಳಿಕ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಭರವಸೆ ನೀಡಿದ್ರು.

    ಇದನ್ನೂ ಓದಿ: ಅಂಗನವಾಡಿ ನೌಕರರಿಂದ ಆಹೋರಾತ್ರಿ ಧರಣಿ – ಬೀದಿಯಲ್ಲೇ ಮಕ್ಕಳ ನಿದ್ದೆ

    ಇದನ್ನೂ ಓದಿ: ಅಂಗನವಾಡಿ ನೌಕರರ ಧರಣಿ: ಸಾವಿರಾರು ಮಹಿಳೆಯರಿಗೆ ಒಂದೇ ಶೌಚಾಲಯ

    ಇದನ್ನೂ ಓದಿ: ಅಂಗನವಾಡಿ ನೌಕರರ ಪ್ರತಿಭಟನೆಗೆ ಬೆಚ್ಚಿದ ಬೆಂಗಳೂರು – ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್

    ಇದನ್ನೂ ಓದಿ: ಅಂಗನವಾಡಿ ನೌಕರರ ಧರಣಿ- ಹೆಚ್‍ಡಿಕೆ ಭೇಟಿ, ನೊಂದ ಮಹಿಳೆಯರಿಗೆ ಸಾಂತ್ವನ

  • ಅಧಿವೇಶನದಲ್ಲಿಂದು ಬರದ ಚರ್ಚೆ- ಸರ್ಕಾರದ ತರಾಟೆಗೆ ವಿಪಕ್ಷಗಳು ಸಜ್ಜು

    – ಕ್ಲಬ್ ಡ್ರೆಸ್‍ಕೋಡ್ ಬಗ್ಗೆ ವರದಿ ಮಂಡನೆ

    ಬೆಂಗಳೂರು: ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಇವತ್ತು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯಲಿದೆ. ಪ್ರತಿಪಕ್ಷ ಬಿಜೆಪಿ ವಂದನಾರ್ಪಣೆ ನಿರ್ಣಯದ ಚರ್ಚೆ ವೇಳೆ ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗಿಸಲು ನಿರ್ಧರಿಸಿದೆ.

    ಬರ ಪರಿಹಾರ ಅಸಮರ್ಪಕ ನಿರ್ವಹಣೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತಾ ಹಾಗೂ ಐಟಿ ದಾಳಿ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಸವಾರಿ ನಡೆಸಲು ಬಿಜೆಪಿ ಸಿದ್ಧತೆ ನಡೆಸಿದೆ.

    ಈ ನಡುವೆ ಕಲಾಪದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಕ್ಲಬ್‍ಗಳ ಕಾರ್ಯಚಟುವಟಿಕೆಗಳು ಮತ್ತು ನಿಯಂತ್ರಣದ ಅಧ್ಯಯನದ ಸಮಿತಿ ವರದಿಯನ್ನ ಅಧ್ಯಕ್ಷ ಎನ್.ಎ.ಹ್ಯಾರಿಸ್ ಮಂಡಿಸಲಿದ್ದಾರೆ. ಕ್ಲಬ್‍ಗಳ ಡ್ರೆಸ್‍ಕೋಡ್‍ಗೆ ಕಡಿವಾಣ, ಅನಧಿಕೃತ ಬಾರ್ ಕೌಂಟರ್‍ಗಳ ಮೇಲೆ ಕಡಿವಾಣ ಸೇರಿದಂತೆ ಹಲವು ಪ್ರಮುಖ ಶಿಫಾರಸುಗಳನ್ನು ಮಾಡುವ ಸಾಧ್ಯತೆ ಇದೆ.