Tag: service

  • ದೇಶದಲ್ಲೇ ಫಸ್ಟ್, ಸಿಲಿಕಾನ್ ಸಿಟಿಯಲ್ಲಿ ಶ್ವಾನಗಳಿಗೂ ಕ್ಯಾಬ್!

    ದೇಶದಲ್ಲೇ ಫಸ್ಟ್, ಸಿಲಿಕಾನ್ ಸಿಟಿಯಲ್ಲಿ ಶ್ವಾನಗಳಿಗೂ ಕ್ಯಾಬ್!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಾಮಾನ್ಯವಾಗಿ ಜನರ ಓಡಾಟಕ್ಕೆ ಓಲಾ, ಉಬರ್, ಕ್ಯಾಬ್ ನೋಡಿರಬಹುದು. ಆದರೆ ಬೆಂಗಳೂರಿನಲ್ಲಿ ನಾಯಿಗಳಿಗೆ ಕ್ಯಾಬ್ ಓಪನ್ ಆಗತ್ತಿದೆ.

    ಹೌದು ಶ್ವಾನಗಳಿಗೂ ಕ್ಯಾಬ್ ಸೌಲಭ್ಯ ಸಿಕ್ಕಿದೆ. ಡೊಗ್ಗೂರು ಅಮೃತ್ ಸಂಸ್ಥೆ ಅವರು ಶ್ವಾನ ಮತ್ತು ಇತರೆ ಸಾಕು ಪ್ರಾಣಿಗಳಿಗಾಗಿ ಈ ವ್ಯವಸ್ಥೆಯನ್ನು ಮಾಡಿದೆ. ಓಡಾಡುವುದಕ್ಕೆ ಮಾತ್ರವಲ್ಲದೇ ಶ್ವಾನಗಳಲ್ಲಿ ಆರೋಗ್ಯ ಸಮಸ್ಯೆಯಾದಾಗ ಹತ್ತಿರದ ಆಸ್ಪತ್ರೆಗೆ ಸಾಗಿಸಲು ಈ ವ್ಯವಸ್ಥೆ ಮಾಡಲಾಗಿದೆ.

    ದೇಶದಲ್ಲೇ ಮೊದಲ ಬಾರಿಗೆ ಆಪ್ ಆಧಾರಿತ ಶ್ವಾನಗಳ ಕ್ಯಾಬ್ ಬೆಂಗಳೂರಿನಲ್ಲಿ ಶುರುವಾಗಿದೆ. Pawcab ಹೆಸರಿನಲ್ಲಿ ಶ್ವಾನ ಕ್ಯಾಬ್ ಆರಂಭವಾಗಿದ್ದು, ನೀವು ಇದನ್ನ ಡೌನ್ಲೋಡ್ ಮಾಡಿಕೊಂಡರೆ ಸಾಕು. ನಿಮ್ಮ ಶ್ವಾನಕ್ಕೆ ಆರೋಗ್ಯ ಸಮಸ್ಯೆ ಕಂಡು ಬಂದಾಗ ನಿಮಗೆ ಹತ್ತಿರದಲ್ಲಿರೋ ಡಾಗ್ ಕೇರ್ ಸೆಂಟರ್ ಯಾವುದು ಎಂಬ ಮಾಹಿತಿ ನೀಡುವುದರ ಜೊತೆಗೆ ಹತ್ತಿರದ ಆಸ್ಪತ್ರೆಗೆ ತಲುಪಿಸಲು ಸಹಾಯ ಮಾಡುತ್ತದೆ. ಜೊತೆಗೆ ಬೀದಿ ನಾಯಿಗಳಿಗೆ ಅಪಾಯವಾದ ಸಂದರ್ಭ ಉಚಿತ ಚಿಕಿತ್ಸೆ ಮಾಡುವುದರ ಜೊತೆಗೆ ಅವುಗಳು ಮರಣ ಹೊಂದಿದ ಸಂದರ್ಭದಲ್ಲಿ ಸಿಬ್ಬಂದಿಯೇ ಸಂಸ್ಕಾರ ಸ್ಥಳಕ್ಕೆ ಸಾಗಿಸಲು ಸಹಾಯ ಮಾಡುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥ ಅಮೃತ್ ಅವರು ಹೇಳಿದರು.

    ಬೀದಿ ನಾಯಿಗಳು ಎಲ್ಲೆಂದರಲ್ಲಿ ಸಾವನ್ನಪ್ಪಿ ಕೊಳೆಯುತ್ತಾ ಇರುವುದನ್ನು ನೋಡಿದಾಗ ಇದು ಒಂದೊಳ್ಳೆ ಯೋಜನೆ ಎನ್ನುವ ಅಭಿಪ್ರಾಯ ಈಗ ವ್ಯಕ್ತವಾಗಿದೆ.

    ಆಂಡ್ರಯ್ಡ್ ಆಪ್ ಡೌನ್‍ಲೋಡ್ ಮಾಡಲು ಕ್ಲಿಕ್ ಮಾಡಿ: Pawcab

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದ ಮೊದಲ ಸಾರ್ವಜನಿಕ ಸೈಕಲ್ ಸೇವೆ ಮೈಸೂರಿನಲ್ಲಿ ಸೂಪರ್ ಹಿಟ್

    ದೇಶದ ಮೊದಲ ಸಾರ್ವಜನಿಕ ಸೈಕಲ್ ಸೇವೆ ಮೈಸೂರಿನಲ್ಲಿ ಸೂಪರ್ ಹಿಟ್

    ಮೈಸೂರು: ನಗರದಲ್ಲಿ ನೂತನವಾಗಿ ಆರಂಭವಾಗಿರುವ ದೇಶದ ಮೊದಲ ಸಾರ್ವಜನಿಕ ಬೈಸಿಕಲ್ ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಈ ಯೋಜನೆಯ ಅಧಿಕೃತ ಚಂದಾದಾರರಾಗಿ 10 ಸಾವಿರ ಮಂದಿ ನೊಂದಣಿಯಾಗಿದ್ದು, ಟ್ರಿಣ್ ಟ್ರಿಣ್ ಯೋಜನೆ ದಿನೇ ದಿನೇ ಮತ್ತಷ್ಟು ಜನಪ್ರಿಯವಾಗುತ್ತಿದೆ. ಟ್ರಿಣ್ ಟ್ರಿಣ್ ಬೈಸಿಕಲ್ ಬಳಕೆದಾರರ ಸಂಖ್ಯೆ 10 ಸಾವಿರ ಗಡಿ ದಾಟಿರುವುದು ಯೋಜನೆಯ ಸಫಲತೆಗೆ ಸಾಕ್ಷಿಯಾಗಿದೆ.

    2017 ಜೂನ್ 4ರಂದು ಈ ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆ ಚಾಲನೆಗೊಂಡಿತ್ತು. ಕಳೆದ ಶುಕ್ರವಾರದ ವೇಳೆಗೆ ಒಟ್ಟು 10 ಸಾವಿರ ಸದಸ್ಯರು ನೋಂದಣಿಯಾಗಿದ್ದರೆ. ತಿಂಗಳಿಗೆ ಸರಾಸರಿ 300 ರಿಂದ 500 ಮಂದಿ ನೋಂದಣಿಯಾಗಿದ್ದು, ಪ್ರತಿನಿತ್ಯ ಸರಾಸರಿ 800 ರಿಂದ 1000 ಮಂದಿಯಿಂದ ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆಯನ್ನು ಬಳಕೆ ಮಾಡುತ್ತಿದ್ದಾರೆ.

    ಮೈಸೂರು ನಗರದಾದ್ಯಂತ ಒಟ್ಟು 52 ಟ್ರಿಣ್ ಟ್ರಿಣ್ ಬೈಸಿಕಲ್ ಕೇಂದ್ರಗಳಿವೆ. ಒಟ್ಟು 12 ಕಡೆ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸೈಕಲ್ ಬಳಕೆಯಿಂದ ಆರೋಗ್ಯ ವೃದ್ಧಿಯಾಗಿದೆ. ಸೈಕಲ್ ಸವಾರಿ ನಮ್ಮ ಹೆಮ್ಮೆಯ ಸವಾರಿ ಎಂದು ಚಂದಾದರರು ಹೇಳುತ್ತಿದ್ದಾರೆ.

    ನಗರದಲ್ಲಿ ಹೆಚ್ಚುತ್ತಿದ್ದ ವಾಹನ ದಟ್ಟಣೆಯಿಂದ ಉಂಟಾಗುತ್ತಿದ್ದ ಹಾನಿಯಿಂದ ಪರಿಸರವನ್ನು ಸಂರಕ್ಷಿಸುವ ದೃಷ್ಟಿಯಿಂದ ಮೈಸೂರು ನಗರ ಪ್ರಮುಖ ಭಾಗಗಳಲ್ಲಿ ಟ್ರಿಣ್ ಟ್ರಿಣ್ ಸೇವೆ ಆರಂಭಿಸಲಾಗಿತ್ತು. ದೇಶ, ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಸಹ ವಾಹನ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿತ್ತು. ಸದ್ಯ ಸರ್ಕಾರ ಈ ಯೋಜನೆಗೆ ಯಶಸ್ವಿಯಾಗಿ ಜಾರಿಗೆ ಯಾಗಿದೆ.

  • ಕಾಂಗ್ರೆಸ್‍ನಲ್ಲಿ ಮುಂದುವರಿದ `ಸೇವೆ’ ಸಮರ!

    ಕಾಂಗ್ರೆಸ್‍ನಲ್ಲಿ ಮುಂದುವರಿದ `ಸೇವೆ’ ಸಮರ!

    ಬೆಂಗಳೂರು: ಮಂತ್ರಿ ಸ್ಥಾನ ಹಂಚಿಕೆಯಾದ ದಿನದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾರ ನಡುವಿನ `ಸೇವೆ’ ಸಮರ ದಿನೇ ದಿನೇ ಹೆಚ್ಚುತ್ತಿದ್ದು ಇಂದು ಮಂದುವರಿದಿದೆ.

    ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎನ್ನುವುದು ಜಗತ್ತಿಗೆ ಗೊತ್ತಿರುವ ವಿಚಾರ. ನಾನು ಹೇಳಿದ ಸೇವೆಯನ್ನು ಅವರು ಯಾವ ಸೇವೆ ಅಂದುಕೊಂಡರೋ ಗೊತ್ತಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳುವ ಮೂಲಕ ಮತ್ತೊಮ್ಮೆ ಜಯಮಾಲಾರನ್ನು ಕೆಣಕಿದ್ದಾರೆ.

    ಜಯಮಾಲಾರವರ ಸೇವೆಯನ್ನು ಮೆಚ್ಚಿ ಕಾಂಗ್ರೆಸ್ ಮುಖಂಡರು ಸಚಿವ ಸ್ಥಾನ ನೀಡಿದ್ದಾರೆ. ಸಚಿವ ಸ್ಥಾನ ಸಿಕ್ಕಿದ್ದರ ಬಗ್ಗೆ ನನಗೇನೂ ಹೊಟ್ಟೆಕಿಚ್ಚು ಇಲ್ಲ. ಉತ್ತರ ಕರ್ನಾಟಕದ ಕಡೆ ಉರುಳು ಸೇವೆ, ದೇವರ ಸೇವೆ ಹಾಗೂ ಅಭಿಷೇಕ ಸೇವೆ ಎಲ್ಲವೂ ಇದೆ. ಈ ಅರ್ಥದಲ್ಲಿ ನಾನು ಸೇವೆ ಎಂದು ಪದ ಬಳಕೆ ಮಾಡಿದ್ದೆ, ನಮ್ಮಲ್ಲಿ `ಸೇವೆ’ ಎಂದರೆ `ಕೆಲಸ’ ಎಂಬರ್ಥ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

    ಏನಿದು ಟಾಂಗ್ ರಾಜಕೀಯ?
    ಜಯಮಾಲಾ ಅವರಿಗೆ ಸಚಿವ ಸ್ಥಾನ ಸಿಕ್ಕ ದಿನದಿಂದಲೂ ಕಾಂಗ್ರೆಸ್ ಪಕ್ಷದಲ್ಲೇ ಅಪಸ್ವರ ಎದ್ದಿತ್ತು. ಜೂನ್ 9 ರಂದು ಮಾಧ್ಯಮದೊಂದಿಗೆ ಮಾತನಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ. ಆದರೂ ನನಗೆ ಸಚಿವ ಸ್ಥಾನ ಕೈತಪ್ಪಿತು. ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಜಯಮಾಲಾ ಅವರ `ಸೇವೆ’ಯನ್ನು ಕಾಂಗ್ರೆಸ್ ಮುಖಂಡರು ಮೆಚ್ಚಿದ್ದು, ಅದೇ ಕಾರಣಕ್ಕೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಚಿವೆ ಜಯಮಾಲಾ, ಜಗತ್ತಿನಲ್ಲಿ ಎಲ್ಲದಕ್ಕೂ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವುದೇ ಔಷಧಿ ಇಲ್ಲವೆಂದು ತಿರುಗೇಟು ನೀಡಿದ್ದರು.

  • ಉತ್ತರ ಕನ್ನಡ ಭಾಗದಲ್ಲಿ ಸೇವೆ ಅಂದ್ರೆ ಕೆಲಸ: ಜಯಮಾಲಾಗೆ ಹೆಬ್ಬಾಳ್ಕರ್ ಟಾಂಗ್

    ಉತ್ತರ ಕನ್ನಡ ಭಾಗದಲ್ಲಿ ಸೇವೆ ಅಂದ್ರೆ ಕೆಲಸ: ಜಯಮಾಲಾಗೆ ಹೆಬ್ಬಾಳ್ಕರ್ ಟಾಂಗ್

    ಬೆಳಗಾವಿ: ಉತ್ತರ ಕನ್ನಡ ಭಾಗದಲ್ಲಿ ಸೇವೆ ಎಂದರೆ ಕೆಲಸ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರಿಗೆ ತಿರುಗೇಟು ನೀಡಿದ್ದಾರೆ.

    ಸೇವೆ ಪದವನ್ನು ಅನರ್ಥ ಮಾಡಿಕೊಳ್ಳಬೇಡಿ. ಉತ್ತರ ಕರ್ನಾಟಕದಲ್ಲಿ ಸೇವೆ ಎಂದರೆ ಕೆಲಸ. ನೀವು ಪಕ್ಷಕ್ಕಾಗಿ ಕೆಲಸ ಮಾಡಿದ್ದೀರಿ. ಅದಕ್ಕೆ ಮಂತ್ರಿ ಸ್ಥಾನ ಸಿಕ್ಕಿದೆ ಎಂದು ಜಯಮಾಲಾಗೆ ಹೇಳುವ ಮೂಲಕ ಟಾಂಗ್ ನೀಡಿದರು. ಇದನ್ನು ಓದಿ: ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೋ ಅಂತಾ ತಿಳಿಯುತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ಕೆಲಸದ ಅರ್ಥದಲ್ಲಿ ನಾನು ಸೇವೆ ಎಂಬ ಪದ ಬಳಸಿದ್ದೇನೆ. ಅದಕ್ಕೆ ಸಚಿವರು ತಪ್ಪು ಅರ್ಥ ಮಾಡಿಕೊಳ್ಳಬಾರದು. ಪಕ್ಷದ ಚಟುವಟಿಕೆಗಳಲ್ಲಿ ಇಬ್ಬರು ಕೂಡಿ ಸೇವೆ ಸಲ್ಲಿಸಿದ್ದೇವೆ. ಪಕ್ಷದ ಯಾವುದೇ ಕೆಲಸ ಇದ್ದರೂ ನಾನು ಜಯಮಾಲಾ ಅವರಿಗೆ ಮೊದಲು ಫೋನ್ ಕರೆ ಮಾಡುತ್ತಿದ್ದೆ. ಜಯಮಾಲಾ ಅವರಿಗೆ ಖಾತೆ ಸಿಕ್ಕಿದ್ದಕ್ಕೆ ನಾನು ಹೊಟ್ಟೆ ಕಿಚ್ಚುಪಟ್ಟಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದರು.  ಇದನ್ನು ಓದಿ: ಜಗತ್ತಲ್ಲಿ ಎಲ್ಲದಕ್ಕೂ ಔಷಧವಿದೆ, ಆದರೆ ಹೊಟ್ಟೆಕಿಚ್ಚಿಗಿಲ್ಲ: ಹೆಬ್ಬಾಳ್ಕರ್ ಗೆ ಜಯಮಾಲಾ ಟಾಂಗ್

    ಏನಿದು ಟಾಂಗ್ ರಾಜಕೀಯ?
    ಜೂನ್ 9 ರಂದು ಮಾಧ್ಯಮದೊಂದಿಗೆ ಮಾತನಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ. ಆದರೂ ನನಗೆ ಸಚಿವ ಸ್ಥಾನ ಕೈತಪ್ಪಿತು. ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಜಯಮಾಲಾ ಅವರ ಸೇವೆಯನ್ನು ಕಾಂಗ್ರೆಸ್ ಮುಖಂಡರು ಮೆಚ್ಚಿದ್ದು, ಅದೇ ಕಾರಣಕ್ಕೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದರು. ಇದಕ್ಕೆ ಸಚಿವೆ ಜಯಮಾಲಾ, ಜಗತ್ತನಲ್ಲಿ ಎಲ್ಲದಕ್ಕೂ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವುದೇ ಔಷಧಿ ಇಲ್ಲವೆಂದು ತಿರುಗೇಟು ನೀಡಿದ್ದರು.

  • ಮನೆ ಬಾಗಿಲಿಗೆ ಬಂದ ಐಸಿಯು ಸೇವೆ

    ಮನೆ ಬಾಗಿಲಿಗೆ ಬಂದ ಐಸಿಯು ಸೇವೆ

    ನವದೆಹಲಿ: ವೆಂಟಿಲೇಟರ್ಸ್, ವೈದ್ಯರ ಸೇವೆಗಳು ಮನೆಯ ಬಾಗಿಲಿಗೆ ಬಂದಾಯ್ತು ಈಗ ತುರ್ತು ನಿಘಾ ಘಟಕ(ಐಸಿಯು) ಸೇವೆಯು ದೊರೆಯಲಿದೆ.

    ಜನವರಿ 2 ರಂದು 77 ವರ್ಷದ ಡಿ ಸಿ ಗಂಭೀರ್ ಎಂಬವರು ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದು ಜ್ಞಾನ ತಪ್ಪಿದ್ದರು. ನಂತರ ಫರಿಧಾಬಾದ್ ಆಸ್ಪತ್ರೆಯಲ್ಲಿ 2 ತಿಂಗಳು ಚಿಕಿತ್ಸೆ ಪಡೆದ ಅವರು ಕೋಮಾ ಸ್ಥಿತಿಯಲ್ಲಿ ಮನೆಯ ಗೆಸ್ಟ್ ರೂಮ್ ನಲ್ಲಿ ಮಲಗಿದ್ದಾರೆ. ಗಂಭೀರ್ ಅವರಿರುವ ರೂಮ್ ಸದ್ಯ ಐಸಿಯು ಆಗಿ ಮಾರ್ಪಾಡಾಗಿದೆ. ಉಸಿರಾಡುವ ಯಂತ್ರ, ಆಮ್ಲಜನಕ ಸಿಲಿಂಡರ್, ಹೃದಯ ಸಂಬಂಧಿ ಯಂತ್ರಗಳು ಹಾಗೂ ಇತರೆ ಜೀವ ಉಳಿಸುವ ಸಾಧನಗಳು ಹಾಸಿಗೆ ಸುತ್ತಾ ಇದೆ.

    ಗಂಭೀರ್ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬರದಿದ್ದರು ಆಸ್ಪತ್ರೆಯಲ್ಲಿ ನೋಡಿಕೊಳ್ಳುವುದಕ್ಕಿಂತ ಮನೆಯಲ್ಲಿ ನೋಡಿಕೊಳ್ಳುವುದು ಸುರಕ್ಷಿತ ಹಾಗೂ ಸುಲಭ ಎಂದು ಅವರ ಮಗ ವಿಕಾಸ್ ಹೇಳುತ್ತಾರೆ.

    ಐಸಿಯುನಲ್ಲಿ ಇದ್ದಾಗ ಹುಣ್ಣುಗಳು ಆಗುತ್ತಿತ್ತು. ಐಸಿಯು ಸಿಬ್ಬಂದಿ ಪ್ರತಿ ರೋಗಿಗೂ ಪ್ರತ್ಯೇಕ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ರೋಗಿಗೆ ಸಮಸ್ಯೆಯನ್ನು ಹೇಳಲು ಆಗದಿದ್ದಾಗ ಪರಿಸ್ಥಿತಿ ಉಲ್ಭಣವಾಗುತ್ತದೆ. ಒಂದು ಹಂತವನ್ನು ಮೀರಿ ಐಸಿಯು ನಲ್ಲಿ ರೋಗಿಯನ್ನು ಇರಿಸಿದಾಗ ಮೂಲ ಸಮಸ್ಯೆ ಗುಣವಾಗುವುದಕ್ಕಿಂತ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಮನೆಯಲ್ಲಿ ಸೋಂಕನ್ನು ಹತೋಟಿಯಲ್ಲಿ ಇಡಬಹುದು ಜೊತೆಗೆ ಎಷ್ಟು ಹೊತ್ತು ಬೇಕು ಅಷ್ಟು ಹೊತ್ತು ಇವರ ಜೊತೆ ಇರಬಹುದು. ಐಸಿಯು ನಲ್ಲಿ 15 ನಿಮಿಷದಂತೆ ಎರಡು ಸಲ ದಿನಕ್ಕೆ ಭೇಟಿ ಮಾಡಬಹುದಿತ್ತು ಎಂದು ಹೇಳಿದರು.

    ಐಸಿಯು ಭೇಟಿ ರೋಗಿಗಳಿಗೆ ಹಾಗೂ ಭೇಟಿ ಮಾಡುವವರಿಗೆ ಆರೋಗ್ಯಕರವಲ್ಲ. ಈಗ ಫಿಲಿಪ್ಸ್, ಡಾಬರ್ ಹಾಗೂ ಕೆಲ ಹೊಸ ಸ್ಟಾರ್ಟ್ ಅಪ್ ಕಂಪೆನಿಗಳು ಐಸಿಯು ಸೇವೆಯನ್ನು ಒದಗಿಸುತ್ತಿವೆ.

    ಕಳೆದ ವರ್ಷ ದೆಹಲಿ ಎನ್‍ಸಿಆರ್ ಪ್ರದೇಶದಲ್ಲಿ ಫಿಲಿಪ್ಸ್ ಐಸಿಯು ಸೇವೆಯನ್ನು ಆರಂಭಿಸಿತು. 10 ರಿಂದ 25 ರೋಗಿಗಳು ಸೇವೆಯನ್ನು ಪಡೆಯುತ್ತಿದ್ದಾರೆ ಎಂದು ಕಂಪೆನಿಯ ರಿಚಾ ಸಿಂಗ್ ತಿಳಿಸಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನ್ಯೂಕ್ಲಿಯಸ್ ಕುಟುಂಬಗಳು ಹೆಚ್ಚಾಗುತ್ತಿವೆ. ಹಾಗಾಗಿ ಮನೆಯಲ್ಲಿ ಐಸಿಯು ಸೇವೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

    ಆಸ್ಪತ್ರೆಗಳು ಮನೆಯಿಂದ ದೂರ ಇದ್ದಾಗ ತುರ್ತು ಚಿಕಿತ್ಸೆಗೆ ಐಸಿಯು ಸೇವೆ ಬಹಳ ಸಹಾಯವಾಗುತ್ತದೆ ಎಂದು ಜನರಲ್ಲಿ ಭಾವನೆ ಮೂಡುತ್ತಿದೆ ಎಂದು ಹೆಲ್ತ್ ಕೇರ್ ವಿಭಾಗದ ನೌಕರರೊಬ್ಬರು ತಿಳಿಸಿದರು.

    ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಸೇವೆ ಪಡೆಯಲು ದಿನಕ್ಕೆ 30 ರಿಂದ 50 ಸಾವಿರ ಪಾವತಿ ಮಾಡಬೇಕಾಗುತ್ತದೆ. ಮನೆಯಲ್ಲೇ ಆದರೆ 7,500 ರೂ ರಿಂದ 12,500 ರೂಗಳಿಗೆ ವೆಚ್ಚ ತಗ್ಗಲಿದೆ ಎಂದು ಸ್ಟಾರ್ಟ್ ಅಪ್ ಕಂಪೆನಿಯ ಕಾರ್ಯನಿರ್ವಾಣಾಧಿಕಾರಿ ರಾಜೀವ್ ಮಾಥೂರ್ ತಿಳಿಸಿದ್ದಾರೆ. ದೆಹಲಿಯ ಎನ್‍ಸಿಆರ್ ಪ್ರದೇಶದಲ್ಲಿ 630 ರೋಗಿಗಳಿಗೆ ಸೇವೆಯನ್ನು ಕಲ್ಪಿಸಿದ್ದು ಸದ್ಯದಲ್ಲೇ ಇನ್ನೊಂದು ಶಾಖೆಯನ್ನು ಮುಂಬೈಯಲ್ಲಿ ತೆರೆಯಲಿದ್ದೇವೆ ಎಂದು ತಿಳಿಸಿದರು.

    ಐಸಿಯು ಸೇವೆ ಒದಗಿಸಲು ಮನೆಯಲ್ಲಿ ವ್ಯವಸ್ಥಿತವಾದ ಶುಚಿಯಾದ ರೂಮ್ ಇದ್ದು ಅನಿಯಂತ್ರಿತ ಪವರ್ ಬ್ಯಾಕ್ ಅಪ್ ಮತ್ತು ಸ್ಟೆಬಿಲೈಜರ್ಸ್ ಇರಬೇಕು. ಆಸ್ಪತ್ರೆಯವರ ಅನುಮತಿ ಪಡೆದ ಮೇಲೆ ರೋಗಿಯನ್ನು ಮನೆಯ ಐಸಿಯುಗೆ ವರ್ಗಾಯಿಸುತ್ತೇವೆ ಎಂದು ತಿಳಿಸಿದರು.

  • ನಿವೃತ್ತಿಯಾದ್ರೂ ನಿಲ್ಲದ ಆರೋಗ್ಯ ಸೇವೆ!ರಾಜ್ಯಕ್ಕೆ ಮಾದರಿಯಾದ ಬೀದರ್ ಡಾಕ್ಟರ್

    ನಿವೃತ್ತಿಯಾದ್ರೂ ನಿಲ್ಲದ ಆರೋಗ್ಯ ಸೇವೆ!ರಾಜ್ಯಕ್ಕೆ ಮಾದರಿಯಾದ ಬೀದರ್ ಡಾಕ್ಟರ್

    ಬೀದರ್: ಸರ್ಕಾರಿ ಆಸ್ಪತ್ರೆ ಅಂದ್ರೆ ಮೂಗು ಮುರಿಯುವವರೇ ಜಾಸ್ತಿ. ಆದ್ರೆ. ಇದನ್ನು ಸುಳ್ಳು ಮಾಡಿದ್ದಾರೆ ನಮ್ಮ ಪಬ್ಲಿಕ್ ಹೀರೋ ಡಾಕ್ಟರ್. ಸ್ವಂತ ಖರ್ಚಿನಲ್ಲಿ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯ ನೀಡಿದ್ದಾರೆ. ಅಷ್ಟೇ ಅಲ್ಲ, ನಿವೃತ್ತಿಯಾದರೂ ಜನರ ಒತ್ತಾಯಕ್ಕೆ ಮಣಿದು ಸೇವೆಯಲ್ಲಿ ಮುಂದುವರಿಯುತ್ತಿದ್ದಾರೆ.

    ವೈದ್ಯರು ಮನಸ್ಸು ಮಾಡಿದರೆ ಯಾವ ರೀತಿ ಮಾದರಿ ಸೇವೆಯನ್ನು ನೀಡಬಹುದು ಎಂಬುದಕ್ಕೆ ಡಾ. ರಾಜೇಂದ್ರ ಕೇಶವ್‍ರಾವ್ ನಿಟ್ಟೂರ್‍ಕರ್ ಒಂದು ಉತ್ತಮ ಉದಾಹರಣೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿರುವ ಸಮುದಾಯ ಅರೋಗ್ಯ ಕೇಂದ್ರದಲ್ಲಿ 20 ವರ್ಷಗಳಿಂದ ರೋಗಿಗಳ ಸೇವೆಯಲ್ಲಿ ತೊಡಗಿಕೊಂಡು ಮಾದರಿ ವೈದ್ಯರಾಗಿದ್ದಾರೆ.

    ಭಿನ್ನ ಹೇಗೆ: 18 ಸಿಬ್ಬಂದಿ ಇರುವ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕಾರ್ಯವೈಖರಿ ಗಮನಿಸಲು ವೈಯಕ್ತಿವಾಗಿ 70 ಸಾವಿರ ಖರ್ಚು ಮಾಡಿ 8 ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಜೊತೆಗೆ ರೋಗಿಗಳ ಹಿತದೃಷ್ಟಿಯಿಂದ ಯಿಂದ ಸ್ಕ್ಯಾನಿಂಗ್ ಮಿಷನ್, ಎಕ್ಸ್ ರೇ ಮಿಷನ್, ಹೈಟೆಕ್ ಆಪರೇಷನ್ ಥಿಯೇಟರ್, ಹೈಟೆಕ್ ಹೆರಿಗೆ ರೂಂ, ಇಸಿಜಿ ಮೆಷಿನ್ ತಂದು ಗ್ರಾಮೀಣ ಪ್ರದೇಶ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳ ಪಾಲಿನ ದೇವರಾಗಿದ್ದಾರೆ.

    ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು: ನಿವೃತಿಯಾದರೂ ಸಾರ್ವಜನಿಕರ ಒತ್ತಾಯ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಸೂಚನೆ ಮೇರೆಗೆ ಎನ್‍ಆರ್‍ಎಚ್‍ಎಂ ಅಡಿಯಲ್ಲಿ ಈ ರಾಜೇಂದ್ರ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ 20ಕ್ಕೂ ಹೆಚ್ಚು ಹಳ್ಳಿಗಳಿನಿಂದ 200ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು, ಚಿಕಿತ್ಸೆಯಲ್ಲಿ ಖಾಸಗಿ ಆಸ್ಪತ್ರೆಗೆ ಸೆಡ್ಡು ಹೊಡೆಯುತ್ತಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಹೈಟೆಕ್ ಯಂತ್ರ ಮಾತ್ರ ಅಲ್ಲ ಕಾಯಿಲೆಯಿಂದ ಬರುವ ರೋಗಿಗಳಿಗೆ ಪಾಸಿಟಿವ್ ಯೋಚನೆಗಳು ಬರುವಂತೆ ಮೂಡಲು ಆಸ್ಪತ್ರೆಯಲ್ಲಿ ಸ್ವಚ್ಛವಾಗಿರುವ ಉದ್ಯಾನವನ ನಿರ್ಮಿಸಿದ್ದಾರೆ.

    ಡಾ. ರಾಜೇಂದ್ರ ಅವರಿಂದಾಗಿ ಈ ಆಸ್ಪತ್ರೆ ಈಗ ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಮುದಾಯ ಆರೋಗ್ಯ ಕೇಂದ್ರ ರಾಜ್ಯಕ್ಕೆ ಮಾದರಿಯಾಗಿದೆ ಎಂದು ವೈದ್ಯರನ್ನು ಸ್ಥಳೀಯರಾದ ಸುನೀಲ್ ಪಾಟೀಲ್ ಹೊಗಳುತ್ತಾರೆ.

    ಗ್ರಾಮೀಣ ಪ್ರದೇಶಕ್ಕೆ ಬಂದು ವೈದ್ಯರು ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿರುವಾಗ ಈ ವೈದ್ಯರು ತಮ್ಮ ಕಾರ್ಯವೈಖರಿಯಿಂದ ರಾಜ್ಯಕ್ಕೆ ಮಾದರಿಯಾಗಿರುವುದು ಸಂತೋಷದ ಸಂಗತಿಯಾಗಿದೆ. ಸಮುದಾಯ ಆರೋಗ್ಯ ಕೇಂದ್ರವನ್ನು ಚಿಕಿತ್ಸೆಯಲ್ಲಿ ಖಾಸಗಿ ಆಸ್ಪತ್ರೆಗೆ ಸೆಡ್ಡುಹೊಡೆಯುವಂತೆ ಮಾಡಿದ ವೈದ್ಯರಿಗೆ ನಮ್ಮದೊಂದು ಸಲಾಂ.

    https://www.youtube.com/watch?v=VNIxm3-CDK8