Tag: Secret Meeting

  • ಸುಮಲತಾ ಸೀಕ್ರೆಟ್ ಮೀಟಿಂಗ್ ವಿಡಿಯೋ ಲೀಕ್-ಒಂದೇ ಏಟಿಗೆ 2 ಹಕ್ಕಿ ಹೊಡೆಯಲು ಸಿಎಂ ಪ್ಲಾನ್ !

    ಸುಮಲತಾ ಸೀಕ್ರೆಟ್ ಮೀಟಿಂಗ್ ವಿಡಿಯೋ ಲೀಕ್-ಒಂದೇ ಏಟಿಗೆ 2 ಹಕ್ಕಿ ಹೊಡೆಯಲು ಸಿಎಂ ಪ್ಲಾನ್ !

    ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಬುಧವಾರ ಸೀಕ್ರೆಟ್ ಮೀಟಿಂಗ್ ಮಾಡಿದ್ದು, ಅವರ ರಹಸ್ಯ ಮೀಟಿಂಗ್ ವಿಡಿಯೋ ಲೀಕ್ ಆಗಿದೆ. ಆದರೆ ಹೋಟೆಲ್‍ವೊಂದರ ಸಿಸಿಟಿವಿ ವಿಡಿಯೋ ಅಷ್ಟು ಸುಲಭವಾಗಿ ಹೇಗೆ ಲೀಕ್ ಆಯಿತು ಎಂಬುವುದೇ ಪ್ರಶ್ನೆಯಾಗಿದೆ.

    ಹೌದು.. ಸಿಎಂ ಕುಮಾರಸ್ವಾಮಿ ಅವರೇ ಸುಮಲತಾ ಅವರ ಸೀಕ್ರೆಟ್ ಮೀಟಿಂಗ್‍ನ ವಿಡಿಯೋ ಲೀಕ್ ಮಾಡಿಸಿದ್ದು, ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯಲು ಪ್ಲಾನ್ ಮಾಡಿ ವಿಡಿಯೋ ಲೀಕ್ ಮಾಡಿಸಿದ್ದಾರೆ. ಅಂದರೆ ಮಾಜಿ ಪ್ರಧಾನಿ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದೂರದ ರೆಸಾರ್ಟ್‌ನಲ್ಲಿ ಕೂತು ವಿಶ್ರಾಂತಿ ಪಡೆಯುತ್ತಾ ಸುಮ್ಮನ್ನೆ ಕುಳಿತಿಲ್ಲ. ಅವರೇ ರೆಸಾರ್ಟ್‌ನಲ್ಲಿ ಕುಳಿತು ವಿಡಿಯೋ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.

    ಸುಮಲತಾ ಜೊತೆ ಚಲುವರಾಯಸ್ವಾಮಿ ಅಂಡ್ ಟೀಮ್ ಸಭೆ ನಡೆಸಿದ ವಿಡಿಯೋ ಲೀಕ್ ಮಾಡಿಸುವ ಮೂಲಕ ಚಲುವರಾಯಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರಲು ಸಿಎಂ ಪ್ಲಾನ್ ಮಾಡಿದ್ದಾರೆ. ಜೊತೆಗೆ ಸುಮಲತಾ ಪರ ಸಿದ್ದರಾಮಯ್ಯ ತೆರೆಮರೆ ಆಟ ಆಡಿದ್ದಾರೆ ಎಂಬುದನ್ನ ಕಾಂಗ್ರೆಸ್ ಹೈಕಮಾಂಡ್‍ಗೆ ಮನವರಿಕೆ ಮಾಡಿಸಿ ಸಿದ್ದರಾಮಯ್ಯ ಅವರ ಪ್ರಾಬಲ್ಯ ತಗ್ಗಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಹೀಗೆ ತಮ್ಮ ಮಂಡ್ಯ ಜಿಲ್ಲಾ ರಾಜಕೀಯ ವಿರೋಧಿಗಳನ್ನ ಒಂದೇ ಏಟಿಗೆ ರಾಜಕೀಯವಾಗಿ ಮುಗಿಸುವುದು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದು, ಇದೇ ವಿಡಿಯೋ ಆಧರಿಸಿ ಸಿದ್ದರಾಮಯ್ಯರನ್ನ ಸೈಡ್ ಲೈನ್ ಮಾಡಿಸಿ ಸರ್ಕಾರ ಸುಭದ್ರ ಮಾಡಿಕೊಳ್ಳಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಬುಧವಾರ ಸುಮಲತಾರ ಸಭೆ ಸಂದರ್ಭದಲ್ಲೇ ಗುಪ್ತಚರ ಇಲಾಖೆ ಅಧಿಕಾರಿಗಳು ಹೋಟೆಲ್‍ಗೆ ಬಂದಿದ್ದಾರೆ. ಅದರ ಮಾಹಿತಿ ತಿಳಿದರೂ ಸುಮಲತಾ ಅಂಡ್ ಟೀಮ್ ಸಭೆ ನಡೆಸಿದೆ. ಸಭೆ ಮುಗಿಸಿ ಹೊರಡುತ್ತಿದ್ದಂತೆ ಹೋಟೆಲ್‍ನಿಂದ ಸಿಸಿ ಕ್ಯಾಮರಾ ವಿಡಿಯೋವನ್ನ ಪೊಲೀಸ್ ಅಧಿಕಾರಿಗಳ ಮೂಲಕ ಸಿಎಂ ಹೆಚ್‍ಡಿಕೆ ತೆಗೆಸಿದ್ದು, ಬಳಿಕ ವ್ಯವಸ್ಥಿತವಾಗಿ ಮಾಧ್ಯಮಗಳ ಕೈ ಸೇರುವಂತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಮೂಲಕ ತಮ್ಮ ಮಗನ ಸೋಲಿಸಲು ಯತ್ನಿಸಿದ ಮಂಡ್ಯದ ಕಾಂಗ್ರೆಸ್ ನಾಯಕರ ತಲೆದಂಡಕ್ಕೆ ಬಲೆ ಹೆಣಿದಿದ್ದು, ಅಲ್ಲದೇ ಸಿದ್ದರಾಮಯ್ಯರನ್ನ ಶತಾಯಗತಾಯ ಸೈಡ್ ಲೈನ್ ಮಾಡಲು ಸಿಎಂ ಕುಮಾರಸ್ವಾಮಿ ಸ್ಕೆಚ್ ಹಾಕಿ ಆಪರೇಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ನಂತರ ಕೆಪಿಸಿಸಿ ಹಾಗೂ ಎಐಸಿಸಿ ಮಟ್ಟದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತೆ ಎಂಬುದು ಕುತೂಹಲ ಮೂಡಿಸಿದೆ.

  • ಅಪ್ಪ-ಮಗನಿಗಾಗಿ ವರುಣಾ, ಚಾಮುಂಡೇಶ್ವರಿ ಮೀಸಲು-ಸಿದ್ದರಾಮಯ್ಯ ಸೋಲಿಸಲು ಜೆಡಿಎಸ್, ಬಿಜೆಪಿ ಒಂದಾಗುತ್ತಾ ?

    ಅಪ್ಪ-ಮಗನಿಗಾಗಿ ವರುಣಾ, ಚಾಮುಂಡೇಶ್ವರಿ ಮೀಸಲು-ಸಿದ್ದರಾಮಯ್ಯ ಸೋಲಿಸಲು ಜೆಡಿಎಸ್, ಬಿಜೆಪಿ ಒಂದಾಗುತ್ತಾ ?

    ಬೆಂಗಳೂರು: ಪುತ್ರ ಯತೀಂದ್ರರ ರಾಜಕೀಯ ಭವಿಷ್ಯಕ್ಕಾಗಿ ಸಿಎಂ ಸಿದ್ದರಾಮಯ್ಯ ಸರ್ಕಸ್ ಆರಂಭಿಸಿದ್ದಾರೆ. ವರುಣಾ ಕ್ಷೇತ್ರದಲ್ಲೇ ಪುತ್ರನನ್ನು ಕಣಕ್ಕಿಳಿಸಲು ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು, ವರುಣಾ ಕ್ಷೇತ್ರದ ಮುಖಂಡರೊಂದಿಗೆ ವಾರದ ಹಿಂದೆ ರಹಸ್ಯ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

    ನನ್ನ ಮಗನ ಸ್ಪರ್ಧೆಗೆ 2018ರ ವಿಧಾನಸಭೆ ಚುನಾವಣೆ ಸರಿಯಾದ ಸಮಯ. ನಾನು ಸಿಎಂ ಆಗಿರೋದ್ರಿಂದ ಪಕ್ಷದಲ್ಲಿ ಎಲ್ಲವೂ ನಡೆಯುತ್ತೆ. ಹಾಗಾಗಿ ವರುಣಾ ಕ್ಷೇತ್ರದಲ್ಲಿ ನನ್ನ ಮಗನ ಗೆಲುವಿಗೆ ಶ್ರಮಿಸಬೇಕು ಎಂದು ಸಭೆಯಲ್ಲಿ ಉಳಿದ ನಾಯಕರುಗಳಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ನಾನು ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಅಲ್ಲಿನ ಜನರು ನನ್ನ ಕಷ್ಟ ಕಾಲದಲ್ಲಿಯೇ ಕೈಬಿಟ್ಟಿಲ್ಲ. ಇನ್ನು ಈಗ ಕೈ ಬಿಡ್ತಾರಾ? ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ. ಸಿಎಂ ನಿಲುವಿಗೆ ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ನಿಂತರೆ ಕಾಂಗ್ರೆಸ್ ವಿರುದ್ಧ ಬಿಜೆಪಿ, ಜೆಡಿಎಸ್ ಒಂದಾಗುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.