Tag: Secret

  • ‘ಸಾಹೇಬ’ರ ಆದೇಶದಂತೆ ನನ್ನ ಬಂಧನವಾಯ್ತು- ಸಿದ್ದು ಬಳಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ

    ‘ಸಾಹೇಬ’ರ ಆದೇಶದಂತೆ ನನ್ನ ಬಂಧನವಾಯ್ತು- ಸಿದ್ದು ಬಳಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ

    ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್ ಇಂದು ಭೇಟಿ ಮಾಡಿದ್ದಾರೆ. ಈ ವೇಳೆ ಡಿಕೆಶಿ, ಸಿದ್ದರಾಮಯ್ಯ ಅವರ ಬಳಿಕ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

    ಸಿದ್ದು ಬಳಿ ಮಾತನಾಡಿದ ಡಿಕೆಶಿ, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನನ್ನ ಏಕೆ ಅರೆಸ್ಟ್ ಮಾಡಿದ್ದರು ಎಂಬುದು ನನಗೆ ಗೊತ್ತಿಲ್ಲ. ಅಧಿಕಾರಿಗಳು ನನಗೆ ವಿಚಾರಣೆಗೆ ಹಾಜುರಾಗುವಂತೆ ಹೇಳಿದ್ದರು. ನಾನು ವಿಚಾರಣೆಗೆ ಹಾಜರಾಗಿದ್ದೆ. ನಾಲ್ಕು ದಿನಗಳ ಕಾಲ ಅಧಿಕಾರಿಗಳು ನನ್ನನ್ನು ವಿಚಾರಣೆ ನಡೆಸಿದ್ದರು. ಆದರೆ ಇದ್ದಕ್ಕಿದ್ದಂತೆ ಅವರು ನನ್ನನ್ನು ಅರೆಸ್ಟ್ ಮಾಡಿದ್ದರು. ಏಕೆ ಅರೆಸ್ಟ್ ಮಾಡಿದರು ಎಂಬುದು ನನಗೂ ಗೊತ್ತಾಗಲಿಲ್ಲ. ನನ್ನನ್ನು ಬಂಧಿಸಿರುವುದನ್ನು ನೋಡಿದ ನನ್ನ ವಕೀಲರಿಗು ಕೂಡ ಶಾಕ್ ಆಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಡಿಕೆಶಿ ಮನೆಗೆ ಸಿದ್ದರಾಮಯ್ಯ, ಪರಮೇಶ್ವರ್, ಮುನಿಯಪ್ಪ ಭೇಟಿ – ‘ಬಂಡೆ’ ಆಲಂಗಿಸಿ ಭಾವುಕರಾದ ಪರಂ

    ನನ್ನನ್ನು ಈಗಲೇ ಅರೆಸ್ಟ್ ಮಾಡಿ ಎಂದು ಇಡಿ ಅಧಿಕಾರಿಗಳಿಗೆ ಸಾಹೇಬ್ ಆದೇಶಿಸಿದ್ದರು. ಆ ಸಾಹೇಬರ ಆದೇಶದಂತೆ ಅಧಿಕಾರಿಗಳು ನನ್ನನ್ನು ಬಂಧಿಸಿದ್ದಾರೆ. ಈ ವೇಳೆ ನಾನು ಏಕೆ ನನ್ನನ್ನು ಅರೆಸ್ಟ್ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ಅವರು ‘ಮೇಲಿನ ಸಾಹೇಬರು ಹೇಳಿದಂತೆ ನಾವು ಮಾಡುತ್ತಿದ್ದೇವೆ. ಅವರು ಹೇಳಿದ್ದನ್ನು ಮಾಡುವುದು ನಮ್ಮ ಕೆಲಸ ಎಂದು ಇಡಿ ಅಧಿಕಾರಿಗಳು ಉತ್ತರಿಸಿದ್ದರು ಎಂದು ಡಿಕೆಶಿ ತಿಳಿಸಿದ್ದಾರೆ.

    ನನ್ನನ್ನು ಬಂಧಿಸಿದ್ದಕ್ಕೆ ಇಡಿ ಅಧಿಕಾರಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಅರೆಸ್ಟ್ ಮಾಡುವ ಕೇಸಲ್ಲ ಸಾರ್ ಎಂದು ಹೇಳಿದರೂ ಯಾಕೆ ಅರೆಸ್ಟ್ ಮಾಡಿ ಎಂದು ಹೇಳುತ್ತಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ. ಆದರೆ ನಾವು ಮೇಲಿನವರ ಆದೇಶವನ್ನು ಪಾಲಿಸದೇ ವಿಧಿಯಿಲ್ಲ ಎಂದು ಕೆಲ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

  • ಮದ್ವೆಯಾಗಿ 9 ತಿಂಗ್ಳ ಬಳಿಕ ಪ್ರಿಯಾಂಕಾರಿಂದ ಬೆಡ್‍ರೂಂ ಸೀಕ್ರೆಟ್ ರಿವೀಲ್

    ಮದ್ವೆಯಾಗಿ 9 ತಿಂಗ್ಳ ಬಳಿಕ ಪ್ರಿಯಾಂಕಾರಿಂದ ಬೆಡ್‍ರೂಂ ಸೀಕ್ರೆಟ್ ರಿವೀಲ್

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾದ 9 ತಿಂಗಳ ಬಳಿಕ ತಮ್ಮ ಬೆಡ್‍ರೂಂ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

    ಇತ್ತೀಚೆಗೆ ಪ್ರಿಯಾಂಕಾ ಅವರು ವೆಬ್‍ಸೈಟ್‍ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು, “ನಾನು ಮಲಗಿಕೊಂಡು ಎದ್ದಾಗ ನಿಕ್ ನನ್ನ ಮುಖ ನೋಡಲು ಇಷ್ಟಪಡುತ್ತಾರೆ. ಒಂದು ನಿಮಿಷ ಇರಿ ನಾನು ಸ್ವಲ್ಪ ಮಸ್ಕರಾ ಹಾಗೂ ಮಾಯಿಶ್ಚರೈಸರ್ ಹಾಕಿಕೊಳ್ಳುತ್ತೇನೆ ಎಂದು ನಾನು ಹೇಳುತ್ತೇನೆ. ಮಲಗಿಕೊಂಡು ಎದ್ದಾಗ ನನ್ನ ಕಣ್ಣುಗಳು ಭಾರವಾಗಿರುತ್ತದೆ. ಆದರೆ ನಿಕ್‍ಗೆ ಅದೇ ಇಷ್ಟವಾಗುತ್ತದೆ. ನನಗೆ ಇದು ವಿಚಿತ್ರ ಎನಿಸಿದ್ದರೂ ನಾನು ಅವರಿಗೆ ನನ್ನನ್ನು ನೋಡಲು ಅವಕಾಶ ನೀಡುತ್ತೇನೆ” ಎಂದು ಹೇಳಿದ್ದಾರೆ.

    ಕಳೆದ ವರ್ಷ ಡಿಸೆಂಬರ್ 1 ಮತ್ತು 2ರಂದು ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಇಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದರು. ಪ್ರಿಯಾಂಕಾ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕಾದಲ್ಲಿ ಮಾಡಿಕೊಂಡಿದ್ದರು.

    ಮದುವೆಯಾದ ನಂತರ ಪ್ರಿಯಾಂಕಾ ತಮ್ಮ ಪತಿ ನಿಕ್ ಜೋನಸ್ ಜೊತೆ ಅಮೆರಿಕದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಕಳೆದ ತಿಂಗಳು ಪ್ರಿಯಾಂಕಾ ಫ್ಲೋರಿಡಾದ ಮಿಯಾಮಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ತಮ್ಮ-ತಮ್ಮ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲಸದ ನಡುವೆಯೂ ಇಬ್ಬರು ಒಟ್ಟಿಗೆ ಕಾಲ ಕಳೆಯುತ್ತಾರೆ.

  • ನಿಂಬೆಹಣ್ಣಿನ ರಹಸ್ಯ ಬಿಚ್ಚಿಟ್ಟ ಎಚ್.ಡಿ ರೇವಣ್ಣ – ಮತ್ತೆ ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ

    ನಿಂಬೆಹಣ್ಣಿನ ರಹಸ್ಯ ಬಿಚ್ಚಿಟ್ಟ ಎಚ್.ಡಿ ರೇವಣ್ಣ – ಮತ್ತೆ ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ

    ಮೈಸೂರು: ನಾನು ಯಾಕೆ ನಿಂಬೆಹಣ್ಣನ್ನು ಹಿಡಿದುಕೊಂಡಿರುತ್ತೇನೆ ಎನ್ನುವ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಉತ್ತರ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೆಲವೊಂದಕ್ಕೆ ನಿಂಬೆಹಣ್ಣು ಬೇಕೇ ಬೇಕು ಅದಕ್ಕೆ ಹಿಡಿದುಕೊಂಡಿರುತ್ತೇನೆ. ನಮ್ಮ ಕುಲದೇವರು ಈಶ್ವರ. ಈಶ್ವರ ಫೋಟೋ ಜೊತೆ ನಿಂಬೆಹಣ್ಣು ಇಟ್ಟುಕೊಂಡಿರುತ್ತೇನೆ. ಸಮಾವೇಶದಲ್ಲಿ ಯಾರೋ ಕೊಟ್ಟರೂ ಅಂತಾ 5-6 ನಿಂಬೆಹಣ್ಣು ಇಟ್ಟುಕೊಂಡಿದ್ದೆ ಅಷ್ಟೇ ಎಂದರು.

    ಬಳಿಕ ನಿಮ್ಮ ಹೆಸರಲ್ಲಿ ನಿಂಬೆಹಣ್ಣು ಫೇಮಸ್ ಆಗಿದೆ ಎಂದು ಪ್ರಶ್ನಿಸಿದ್ದಕ್ಕೆ ರೇವಣ್ಣ ನಕ್ಕಿದ್ದಾರೆ. ಹಾಗಾದರೆ ಯಡಿಯೂರಪ್ಪ ಅವರಿಗೂ ಒಂದು ನಿಂಬೆಹಣ್ಣು ಕೊಡುತ್ತೇನೆ. ಆರ್. ಅಶೋಕ್‍ಗೂ ನಿಂಬೆಹಣ್ಣು ಕೊಡುತ್ತೇನೆ ಬೇಕಿದ್ರೆ ಕೇಳಲಿ ಎಂದು ನಗುತ್ತಾ ಉತ್ತರಿಸಿದರು. ಇದನ್ನೂ ಓದಿ: ಸೇಫ್ಟಿ ಇರಲೆಂದು ಯಶ್‍ಗೆ ನಿಂಬೆಹಣ್ಣು ಕೊಟ್ಟ ಅಭಿಮಾನಿ

    ಈಶ್ವರಪ್ಪ ಅವರಿಗೆ ನಿಂಬೆಹಣ್ಣು ಕೊಡಲ್ವಾ ಎಂದು ಪ್ರಶ್ನಿಸಿದ್ದಕ್ಕೆ, ಈಶ್ವರಪ್ಪನನ್ನು ಯಾಕ್ರಪ್ಪ ಇಷ್ಟೋತ್ತಲ್ಲಿ ನೆನಪಿಸಿಕೊಳ್ತೀರಾ? ಯಾರಾದರೂ ಒಳ್ಳೆಯವರನ್ನು ನೆನಪಿಸಿಕೊಳ್ಳಿ. ಆ ಈಶ್ವರಪ್ಪನನ್ನು ಯಾಕ್ ನೆನಪಿಸಿಕೊಳ್ತೀರಾ. ಈಶ್ವರಪ್ಪನ ಬಗ್ಗೆ ಮಾತನಾಡಿದ್ರೆ ನಾನು ಪೊಳ್ಳೆದ್ದು ಹೋಗ್ತಿನಿ. 2018ರಲ್ಲಿ ಈಶ್ವರಪ್ಪ ಪರಿಸ್ಥಿತಿ ಏನಾಗಿತ್ತು ಗೊತ್ತು ತಾನೇ? ಅವರೇ ನಮ್ಮ ಪಕ್ಷಕ್ಕೆ ಬರುವುದಕ್ಕೆ ತಯಾರಾಗಿದ್ದರು. ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದರು. ಇದನ್ನೂ ಓದಿ: ನಿಖಿಲ್‍ಗೆ ಮೂರು ನಿಂಬೆಹಣ್ಣು ಕೊಟ್ಟ ಜೆಡಿಎಸ್ ಕಾರ್ಯಕರ್ತರು!

    ಡೈರಿಯಲ್ಲಿ ಬರೆದಿಟ್ಟುಕೊಳ್ಳಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ. ರೈತರ ಸಹಾಯ ಧನದ ಪಟ್ಟಿ ಕೇಂದ್ರಕ್ಕೆ ತಲುಪಿಲ್ಲ ಅಂದರೆ ನಾನು ರಾಜಕೀಯ ನಿವೃತ್ತಿ ಆಗುತ್ತೇನೆ. ರಾಜ್ಯದಿಂದ ಕೇಂದ್ರಕ್ಕೆ 15 ಲಕ್ಷ ರೈತರ ಪಟ್ಟಿ ಹೋಗಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ರೇವಣ್ಣ ತಿರುಗೇಟು ನೀಡಿದರು.

  • ದೀಪಿಕಾ ಜೊತೆ ನಟಿಸದ್ದಕ್ಕೆ ಉತ್ತರ ಕೊಟ್ಟ ಸಲ್ಮಾನ್ ಖಾನ್

    ದೀಪಿಕಾ ಜೊತೆ ನಟಿಸದ್ದಕ್ಕೆ ಉತ್ತರ ಕೊಟ್ಟ ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

    ಇತ್ತೀಚೆಗೆ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆಗ ಅವರನ್ನು ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂದು ಪ್ರಶ್ನಿಸಲಾಗಿತ್ತು. ಆಗ ಸಲ್ಮಾನ್, ಹೌದು. ನನಗೂ ಕೂಡ ಆಶ್ಚರ್ಯವಾಗುತ್ತಿದೆ. ನಾನು ದೀಪಿಕಾ ಜೊತೆ ಯಾವಾಗ ಸಿನಿಮಾ ಮಾಡುತ್ತೇನೆ ಎಂದು ಮರು ಪ್ರಶ್ನೆ ಹಾಕಿದ್ದಾರೆ.

    ಅಲ್ಲದೆ ದೀಪಿಕಾ ಜೊತೆ ನಟಿಸಲು ಇದುವರೆಗೂ ನನಗೆ ಯಾರೂ ಕೇಳಿಲ್ಲ ಎಂದು ನಗುತ್ತಲೇ ಉತ್ತರಿಸಿದ್ದಾರೆ. ಬಳಿಕ ದೀಪಿಕಾ ಬಹುದೊಡ್ಡ ನಟಿ. ಹಾಗಾಗಿ ನನ್ನ ಜೊತೆ ಸಿನಿಮಾ ಮಾಡುವ ಅರ್ಹತೆ ಅವರಿಗಿದೆ. ಆದರೆ ಸದ್ಯಕ್ಕೆ ಅಂತಹ ಸುದ್ದಿ ಇಲ್ಲ ಎಂದು ಹೇಳಿದ್ದಾರೆ.

    ಸಲ್ಮಾನ್ ಖಾನ್ ಬಾಲಿವುಡ್ ಟಾಪ್ ನಟಿಯರ ಜೊತೆ ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೆ ಹೊಸ ಹೊಸ ಪ್ರತಿಭೆಗಳನ್ನು ತಮ್ಮ ಸಿನಿಮಾಗಳಿಗೆ ನಾಯಕಿ ಪಾತ್ರ ಮಾಡುವ ಅವಕಾಶಗಳು ನೀಡಿದ್ದಾರೆ. ಹೀಗಿರುವಾಗ ಅವರು ಬಾಲಿವುಡ್ ಟಾಪ್ ನಟಿ ದೀಪಿಕಾ ಜೊತೆ ಇದುವರೆಗೂ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

    ಸಲ್ಮಾನ್ ಖಾನ್ ‘ಭಾರತ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್‍ಗೆ ನಾಯಕಿಯಾಗಿ ಕತ್ರಿನಾ ಕೈಫ್ ನಟಿಸಿದ್ದಾರೆ. ಈ ಚಿತ್ರದಲ್ಲಿ ತಬು, ದಿಶಾ ಪಠಾಣಿ, ಶಶಾಂಕ್ ಅರೋರಾ, ಜಾಕಿ ಶ್ರಾಫ್, ಸುನೀಲ್ ಗ್ರೋವರ್, ಆಸೀಫ್ ಶೇಖ್, ನೋರಾ ಫತೇಹಿ ಸೇರಿದಂತೆ ಹಲವರು ನಟಿಸಿದ್ದಾರೆ. ಜೂನ್ 5ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

  • ತಂದೆ ಎರಡನೇ ಮದ್ವೆಯಾದಾಗ ನಾನಿನ್ನು ಚಿಕ್ಕವಳು: ಸಾರಾ ಅಲಿಖಾನ್

    ತಂದೆ ಎರಡನೇ ಮದ್ವೆಯಾದಾಗ ನಾನಿನ್ನು ಚಿಕ್ಕವಳು: ಸಾರಾ ಅಲಿಖಾನ್

    -ಸೈಫ್ ಎರಡನೇ ಮದ್ವೆ ಹಿಂದಿನ ರಹಸ್ಯ ಬಿಚ್ಚಿಟ್ಟ ಪುತ್ರಿ

    ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ತಮ್ಮ ತಂದೆಯ ಎರಡನೇ ಮದುವೆಯ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಇತ್ತೀಚೆಗೆ ಸಾರಾ ಅಲಿ ಖಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾರ್ಯಕ್ರಮದ ಸಂದರ್ಶಕ ಸೈಫ್ ಅಲಿ ಖಾನ್ ಅವರ ಎರಡನೇ ಮದುವೆ ಬಗ್ಗೆ ಸಾರಾ ಅಲಿ ಖಾನ್ ಅವರನ್ನು ಪ್ರಶ್ನಿಸಿದ್ದಾರೆ. ನಿಮ್ಮ ತಂದೆ ಎರಡನೇ ಮದುವೆಯಾಗುವಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದ್ದಾರೆ.

    ನನ್ನ ತಂದೆ ಎರಡನೇ ಮದುವೆ ಆಗುವ ವಿಷಯ ನನಗೆ ತಿಳಿದಿತ್ತು. ನಾನು ಕರೀನಾ ಕಪೂರ್ ಅವರ ಅಭಿಮಾನಿ. ಅವರು ನನ್ನ ಜೀವನದಲ್ಲಿ ಇರಬೇಕೆಂದು ಬಯಸಿದ್ದೆ. ಆದರೆ ಅವರು ಈಗ ಮಲತಾಯಿ ಆಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಸಾರಾ ಅಲಿ ಖಾನ್ ಉತ್ತರಿಸಿದ್ದಾರೆ.

    ನನ್ನ ತಂದೆ ಕರೀನಾ ಕಪೂರ್ ಅವರನ್ನು ಮದುವೆ ಆಗುತ್ತಿದ್ದೀನಿ ಎಂದು ಹೇಳಿದ್ದಾಗ ನಾನು ಯಾವ ಉಡುಪು ಧರಿಸಬೇಕು ಎಂದು ನನ್ನ ತಾಯಿಯ ಬಳಿ ಕೇಳಿದೆ. ಆಗ ನನ್ನ ತಾಯಿ ನೀನು ಯಾವ ಉಡುಪನ್ನು ಧರಿಸುತ್ತೀಯಾ? ಎಂದು ಕೇಳಿದ್ದರು. ನನ್ನ ತಾಯಿ ಕೂಡ ನನ್ನ ತಂದೆಯ ಎರಡನೇ ಮದುವೆಗೆ ಒಪ್ಪಿಗೆ ನೀಡಿದ್ದರು ಎಂದು ಸಾರಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿದ ಮತ್ತಿನಲ್ಲಿ 3 ವರ್ಷಗಳ ಬಳಿಕ ಸ್ನೇಹಿತನ ಕೊಲೆ ರಹಸ್ಯ ಬಿಚ್ಚಿಟ್ಟ ಆರೋಪಿ!

    ಕುಡಿದ ಮತ್ತಿನಲ್ಲಿ 3 ವರ್ಷಗಳ ಬಳಿಕ ಸ್ನೇಹಿತನ ಕೊಲೆ ರಹಸ್ಯ ಬಿಚ್ಚಿಟ್ಟ ಆರೋಪಿ!

    ಬೆಂಗಳೂರು: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮೂರು ವರ್ಷಗಳ ಬಳಿಕ ತನ್ನ ಸ್ನೇಹಿತನ ಕೊಲೆಯ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.

    ದಿನೇಶ್ ಹಾಗು ಅಭಿಷೇಕ್ ಇಬ್ಬರೂ ಸ್ನೇಹಿತರಾಗಿದ್ದರು. 2016ರ ಮಾರ್ಚ್ 16ರಂದು ದಿನೇಶ್ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದ. ರೈಲು ಹಳಿ ದಾಟುವಾಗ ದಿನೇಶ್ ಸಾವನ್ನಪ್ಪಿದ ಎಂದು ಅಭಿಷೇಕ್ ಎಲ್ಲರನ್ನು ನಂಬಿಸಿದ್ದನು. ಇತ್ತೀಚೆಗೆ ದಿನೇಶ್ ತನ್ನ ಸ್ನೇಹಿತ ಅಭಿಷೇಕ್‍ಗೆ ಕನಸಿನಲ್ಲಿ ಬರಲಾರಂಭಿಸಿದ್ದನು. ಈ ವೇಳೆ ಅಭಿಷೇಕ್ ತನ್ನ ತಪ್ಪಿನ ಅರಿವಾಗಿ ದಿನೇಶ್ ಸಮಾಧಿಗೆ ಪೂಜೆ ಸಲ್ಲಿಸಿದ್ದನು. ಅಲ್ಲದೇ ದಿನೇಶ್ ಸಮಾಧಿ ಬಳಿ ನಿಂತು ಕ್ಷಮೆ ಕೋರಿದ್ದಾನೆ.

    ಇದೇ 13ರಂದು ದಿನೇಶ್ ಕುಡಿದ ಮತ್ತಲ್ಲಿ ನಡೆದ ವಿಚಾರವನ್ನು ಸ್ನೇಹಿತರ ಬಳಿ ಬಾಯ್ಬಿಟ್ಟಿದ್ದಾನೆ. ನಿಮಗೆ ತಿಳಿಯದಂತೆ ನಾನು ದೊಡ್ಡ ತಪ್ಪು ಮಾಡಿದ್ದೇನೆ. ಅಂದು ಅಮೃತ ವೈನ್ಸ್ ನಲ್ಲಿ ಪಾರ್ಟಿ ಮುಗಿದ ಬಳಿಕ ನೀವು ಮನೆಗೆ ಹೋಗಿದ್ದೀರಿ. ನಾನು ಮತ್ತು ದಿನೇಶ್ ನಾಯಂಡಹಳ್ಳಿಯ ರೈಲ್ವೆ ಗೇಟ್ ಬಳಿ ಹೋಗಿದ್ದೇವು. ಆ ವೇಳೆ ಹಣಕಾಸಿನ ವಿಚಾರವಾಗಿ ನಮ್ಮಿಬ್ಬರ ನಡುವೆ ಜಗಳವಾಯಿತು. ಆಗ ರೈಲು ಬರುತ್ತಿದ್ದ ಸಮಯಕ್ಕೆ ದಿನೇಶನನ್ನು ರೈಲಿನ ಮುಂದೆ ನಾನೇ ತಳ್ಳಿ ಕೊಲೆ ಮಾಡಿದೆ ಎಂದು ಅಭಿಷೇಕ್ ಸ್ನೇಹಿತರ ಬಳಿ ಹೇಳಿಕೊಂಡಿದ್ದಾನೆ.

    ಈ ವಿಚಾರವನ್ನು ಸ್ನೇಹಿತರು ದಿನೇಶ್ ತಂದೆಗೆ ತಿಳಿಸಿದ್ದಾರೆ. ಬಳಿಕ ಈ ವಿಷಯ ಪೊಲೀಸರಿಗೆ ತಿಳಿದು ಅಭಿಷೇಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್ ಮನೆಯಲ್ಲಿ ತನ್ನ ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಟ್ಟ ರ‍್ಯಾಪಿಡ್ ರಶ್ಮಿ

    ಬಿಗ್ ಮನೆಯಲ್ಲಿ ತನ್ನ ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಟ್ಟ ರ‍್ಯಾಪಿಡ್ ರಶ್ಮಿ

    ಬೆಂಗಳೂರು: ಬಿಗ್ ಬಾಸ್ ಸೀಸನ್-6ರಲ್ಲಿ ರ‍್ಯಾಪಿಡ್ ರಶ್ಮಿ ತಮ್ಮ ವೈಯಕ್ತಿಕ ಜೀವನದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ‘ನನ್ನ ಕಥೆ’ ಎಂಬ ಚಟುವಟಿಕೆಯನ್ನು ನೀಡಿತ್ತು. ಈ ಚಟುವಟಿಕೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದ ಕಥೆಗಳನ್ನು ಹೇಳಬೇಕಿತ್ತು. ಈ ವೇಳೆ ರಶ್ಮಿ ತಮ್ಮ ಜೀವನದ ಕಹಿ ನೆನಪನ್ನು ಮನೆಯ ಎಲ್ಲರ ಸಮ್ಮುಖದಲ್ಲಿ ಬಿಚ್ಚಿಟ್ಟಿದ್ದಾರೆ.

    ನನಗೆ 2007ರಲ್ಲಿ ಮದುವೆ ಆಗಿತ್ತು. ಆ ಮದುವೆ ಕೇವಲ ಎರಡುವರೆ ವರ್ಷಗಳ ಕಾಲವಿತ್ತು. ಕೆಲವು ಕಾರಣಾಂತರದಿಂದ ಆ ಮದುವೆ ಮುರಿದು ಬಿತ್ತು. ನಾನೇ ಆ ಮದುವೆಯಿಂದ ಹೊರಬಂದು ಡಿವೋರ್ಸ್ ಪಡೆಯಲು ನಿರ್ಧರಿಸಿದೆ. ನನ್ನ ತಾಯಿಗೂ ಡಿವೋರ್ಸ್ ಆಗಿದೆ. ಅವರ ರೀತಿ ನನ್ನ ಜೀವನ ಕೂಡ ಆಗಿದೆ ಎಂದು ಅವರು ಸಾಕಷ್ಟು ನೋವಿನಲ್ಲಿದ್ದರು. ಅಲ್ಲದೇ ನೀನು ಡಿವೋರ್ಸ್ ಪಡೆದರೆ ನನ್ನ ಪಾಲಿಗೆ ಸತ್ತು ಹೋಗಿದ್ದೇಯಾ ಎಂದು ತಿಳಿದುಕೋ ಎಂದು ನನ್ನ ತಾಯಿ ನನಗೆ ಹೇಳಿದರು.

    ನಾನು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾಗ ನನ್ನ ತಾಯಿ ನನ್ನ ಬಳಿ ಮಾತನಾಡುತ್ತಿರಲಿಲ್ಲ. ಈ ವೇಳೆ ನನ್ನ ತಾಯಿಯ ಗೆಳತಿಯೊಬ್ಬರು ಬಂದು ನಾವಿಬ್ಬರು ಮಾತನಾಡುವ ಹಾಗೆ ಮಾಡಿದ್ದರು. ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಗ ಆಗ ತಾನೇ ನಾನು ಆರ್.ಜೆ ಆಗಿದೆ. ಈ ವಿಷಯ ಎಲ್ಲರಿಗೂ ಗೊತ್ತಾದರೆ ಏನಾಗುತ್ತೋ ಎಂಬ ಭಯ ನನಗೆ ಕಾಡುತ್ತಿತ್ತು ಎಂದು ರಶ್ಮಿ ಹೇಳಿದ್ದಾರೆ.

    ವಿಚ್ಛೇದನ ಪಡೆದ ಬಳಿಕ ನನ್ನ ಜೀವನದಲ್ಲಿ ನಾನು ಡೇವಿಸ್ ರನ್ನು ಭೇಟಿ ಮಾಡಿದೆ. ನನ್ನ ಮೊದಲ ಮದುವೆ ಮುರಿದುಬಿದ್ದ ಕಾರಣ ನಾನು ತುಂಬಾ ಬೇಸರದಲ್ಲಿದ್ದೆ. ಈ ವೇಳೆ ಡೇವಿಸ್ ನನಗೆ ಆತ್ಮವಿಶ್ವಾಸ ತುಂಬಿದ್ದರು. ಅಲ್ಲದೇ 2010 ರಿಂದ 2013 ವರೆಗೂ ನಾನು ಹಾಗೂ ಡೇವಿಸ್ ಪ್ರೀತಿಸುತ್ತಿದ್ದೇವು. ಬಳಿಕ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದೇವು. ಡೇವಿಸ್‍ಗೆ ಇದು ಮೊದಲ ಮದುವೆಯಾಗಿದ್ದು, ಅವರ ಕುಟುಂಬದವರು ನನ್ನನ್ನು ಒಪ್ಪಲಿಲ್ಲ. ಅವರು ಈ ಮದುವೆಯನ್ನು ವಿರೋಧಿಸಿದ್ದರು.

    ನಮ್ಮ ಮದುವೆಗೆ ಡೇವಿಸ್ ಅವರ ಕುಟುಂಬದವರು ವಿರೋಧಿಸಿದರು. ಡೇವಿಸ್ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ನನ್ನನ್ನು ಮದುವೆಯಾದರು. ಕಳೆದ 6 ವರ್ಷಗಳ ಹಿಂದೆ ನಾನು ಡೇವಿಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟೆ. ಈ ಆರು ವರ್ಷಗಳಲ್ಲಿ ನನ್ನ ಜೀವನ ಚೆನ್ನಾಗಿದೆ ಹಾಗೂ ಡೇವಿಸ್ ನನ್ನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನಾನು ಸುಮಾರು 12 ವರ್ಷಗಳಿಂದ ಆರ್.ಜೆ ಆಗಿದ್ದೇನೆ. ಇದುವರೆಗೂ ಈ ವಿಷಯ ಯಾರಿಗೂ ಗೊತ್ತಿಲ್ಲ ಎಂದು ರ‍್ಯಾಪಿಡ್ ರಶ್ಮಿ ತಮ್ಮ ಹಳೆಯ ನೆನಪನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
  • ತನ್ನ ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಟ್ಟ ದೀಪಿಕಾ

    ತನ್ನ ವೈಯಕ್ತಿಕ ಜೀವನದ ರಹಸ್ಯ ಬಿಚ್ಚಿಟ್ಟ ದೀಪಿಕಾ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಬಹುದಿನದ ಗೆಳೆಯ ರಣ್‍ವೀರ್ ಸಿಂಗ್ ಜೊತೆ ಇಟಲಿಯ ಲೇಕ್ ಕೋಮೋದಲ್ಲಿ ಅದ್ಧೂರಿಯಾಗಿ ಮದುವೆಯಾದ ಬಳಿಕ ಮೊದಲ ಬಾರಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ದೀಪಿಕಾ ತನ್ನ ಜೀವನದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಇತ್ತೀಚೆಗೆ ದೀಪಿಕಾ ಫಿಲ್ಮ್‍ಫೇರ್ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದಾರೆ. ನಾನು ಹಾಗೂ ರಣ್‍ವೀರ್ ನಾಲ್ಕು ವರ್ಷದ ಹಿಂದೆ ಎಂಗೇಜ್ ಆಗಿದ್ದೀವಿ. ಈ ವಿಷಯ ನನ್ನ ಕುಟುಂಬದವರು ಹಾಗೂ ರಣ್‍ವೀರ್ ಕುಟುಂಬದವರನ್ನು ಬಿಟ್ಟರೆ ಬೇರೆ ಯಾರಿಗೂ ಗೊತ್ತಿರಲಿಲ್ಲ ಎಂದು ಮದುವೆ ಮೊದಲು ತಮ್ಮ ಹಾಗೂ ರಣ್‍ವೀರ್ ಸಂಬಂಧದ ಬಗ್ಗೆ ದೀಪಿಕಾ ಮಾತನಾಡಿದರು.

    ಇದೇ ವೇಳೆ ಸಂದರ್ಶನದಲ್ಲಿ ದೀಪಿಕಾ ಅವರನ್ನು ನಿಮಗೆ ಈಗ ಮದುವೆ ಆಗಿದೆ. ಈಗ ನೀವು ಲಿಪ್ ಕಿಸ್ ಮಾಡುವುದನ್ನು ನಿಲ್ಲಿಸುತ್ತೀರಾ ಎಂದು ಪ್ರಶ್ನಿಸಲಾಗಿತ್ತು. ಪ್ರಶ್ನೆ ಕೇಳಿದ ತಕ್ಷಣ ದೀಪಿಕಾ ತಲೆ ತಗ್ಗಿಸಿ ಛೀ.. ಎಂದು ನಗುತ್ತಾ ಪ್ರತಿಕ್ರಿಯಿಸಿದರು. ಅಲ್ಲದೇ ಅಭಿಮಾನಿಯೊಬ್ಬರು ದೀಪಿಕಾ ಅವರಿಗೆ ನಿಮ್ಮ ಹಣವೆಲ್ಲಾ ಮದುವೆಗೆ ಖರ್ಚು ಮಾಡುತ್ತೀರಾ? ಎಂದು ಪ್ರಶ್ನೆಯನ್ನು ಕೇಳಿದ್ದರು. ಆಗ ದೀಪಿಕಾ ನನ್ನ ಬಳಿ ಸಾಕಷ್ಟು ಹಣವಿದೆ. ಯೋಚನೆ ಮಾಡಬೇಡಿ ಎಂದು ಉತ್ತರಿಸಿದರು.

    ಈ ಸಂದರ್ಶನದಲ್ಲಿ ದೀಪಿಕಾ ಅವರಿಗೆ ತಮ್ಮ ಹನಿಮೂನ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಕೆಲಸದ ಒತ್ತಡದಿಂದ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಇನ್ನೂ ತಮ್ಮ ಹನಿಮೂನ್ ಪ್ಲಾನ್ ಮಾಡಿಲ್ಲ. ಈ ಬಗ್ಗೆ ದೀಪಿಕಾ ಅವರನ್ನು ಕೇಳಿದ್ದಾಗ ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾವು ಇದುವರೆಗೂ ಯಾವುದೇ ಹನಿಮೂನ್ ಪ್ಲಾನ್ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದರು.

    ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಯ ಲೇಕ್ ಕೋಮೋದಲ್ಲಿ ನವೆಂಬರ್ 14 ಹಾಗೂ ನವೆಂಬರ್ 15ರಂದು ಕೊಂಕಣಿ ಮತ್ತು ಸಿಖ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಟಲಿಯಿಂದ ಬಂದ ನಂತರ ಈ ಜೋಡಿ ಬೆಂಗಳೂರಿನಲ್ಲಿ ಹಾಗೂ ಮುಂಬೈನಲ್ಲಿ ಎರಡು ಬಾರಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮಾಡಿಕೊಂಡಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನುಷ್ಕಾ ಜೊತೆಗಿನ ಸಂಬಂಧದ ರಹಸ್ಯ ಬಿಚ್ಚಿಟ್ಟ ಪ್ರಭಾಸ್: ವಿಡಿಯೋ

    ಅನುಷ್ಕಾ ಜೊತೆಗಿನ ಸಂಬಂಧದ ರಹಸ್ಯ ಬಿಚ್ಚಿಟ್ಟ ಪ್ರಭಾಸ್: ವಿಡಿಯೋ

    ಮುಂಬೈ: ಬಾಹುಬಲಿ ನಟ ಪ್ರಭಾಸ್ ಅವರು ತಮ್ಮ ಗೆಳತಿ ಅನುಷ್ಕಾ ಶೆಟ್ಟಿ ಜೊತೆಗಿನ ಸಂಬಂಧದ ರಹಸ್ಯ ಬಿಚ್ಚಿಟ್ಟಿದ್ದಾರೆ.

    ನಿರ್ದೇಶಕ ಕರಣ್ ಜೋಹರ್ ನಡೆಸಿ ಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಪ್ರಭಾಸ್ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಭಾಸ್ ಜೊತೆ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ರಾಣಾ ದಗ್ಗುಬಾಟಿ ಕೂಡ ಪಾಲ್ಗೊಂಡಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ, ನೀವು ಸಿಂಗಲ್ ಆಗಿದ್ದೀರಾ? ನಿಮ್ಮ ಮತ್ತು ಅನುಷ್ಕಾ ಡೇಟಿಂಗ್ ಸುದ್ದಿ ನಿಜಾವೇ ಎಂದು ಪ್ರಭಾಸ್ ಅವರನ್ನು ಪ್ರಶ್ನಿಸಿದ್ದಾರೆ.

    ಈ ಪ್ರಶ್ನೆಗೆ ಪ್ರಭಾಸ್, ನಾನು ಸಿಂಗಲ್ ಎಂದು ಉತ್ತರಿಸಿದ್ದಾರೆ. ನಂತರ ಕರಣ್ ರ‍್ಯಾಪಿಡ್ ಫೈರ್ ರೌಂಡ್‍ನಲ್ಲಿ ಕರಣ್ ಅವರು ಪ್ರಭಾಸ್ ನೀವು ಈ ಸೋಫಾದಲ್ಲಿ ಕುಳಿತು ಸುಳ್ಳು ಹೇಳಿದ್ದೀರಿ ಅಲ್ಲವೇ ಎಂದು ಪ್ರಶ್ನಿಸಿದರು. ಆಗ ಪ್ರಭಾಸ್ ಹೌದು ಎಂದು ಹೇಳಿ ಎಲ್ಲರ ಮುಂದೆ ಜೋರಾಗಿ ನಕ್ಕಿದ್ದಾರೆ.

    ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ನಟರು ಭಾಗಿಯಾಗಿದ್ದಾರೆ. ಬಾಹುಬಲಿ ಚಿತ್ರತಂಡ ಜೊತೆ ಕರಣ್ ನಡೆಸಿಕೊಟ್ಟ ಈ ಸಂಚಿಕೆ ಡಿಸೆಂಬರ್ ತಿಂಗಳ ಕೊನೆಯಲ್ಲಿ ಪ್ರಸಾರವಾಗಲಿದೆ. ಪ್ರಭಾಸ್ ಅವರಿಗೆ 38 ವರ್ಷವಾಗಿದ್ದು, ಸಲ್ಮಾನ್ ಖಾನ್ ಅವರಂತೆ ಪ್ರಭಾಸ್ ಅವರನ್ನು ಅಭಿಮಾನಿಗಳು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂದು ಕರೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಶ್, ಪ್ರಭಾಸ್ ಭೇಟಿಯ ಸೀಕ್ರೆಟ್ ರಿವೀಲ್- ಅತೀ ದೊಡ್ಡ ಶೋನಲ್ಲಿ ನಟರು ಭಾಗಿ

    ಯಶ್, ಪ್ರಭಾಸ್ ಭೇಟಿಯ ಸೀಕ್ರೆಟ್ ರಿವೀಲ್- ಅತೀ ದೊಡ್ಡ ಶೋನಲ್ಲಿ ನಟರು ಭಾಗಿ

    ಮುಂಬೈ: ಬಾಹುಬಲಿ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಕೆಜಿಎಫ್ ರಾಕಿ ಭಾಯ್ ಯಶ್ ಮುಂಬೈನಲ್ಲಿ ಭೇಟಿಯಾಗಿರುವ ಸೀಕ್ರೆಟ್ ಈಗ ರಿವೀಲ್ ಆಗಿದ್ದು, ರಾಜಾಹುಲಿ ಹಾಗೂ ಬಾಹುಬಲಿ ಅತೀ ದೊಡ್ಡ ಶೋವೊಂದರಲ್ಲಿ ಭಾಗಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ನಿರ್ದೇಶಕ ಕರಣ್ ಜೋಹರ್ ಇಂದು ಬೆಳಗ್ಗೆ ಟ್ವಿಟ್ಟರಿನಲ್ಲಿ, “ನಾನು ‘ಕಾಫಿ ವಿತ್ ಕರಣ್’ ಕಾರ್ಯಕ್ರಮ ನಡೆಸಿಕೊಡಲು ಹೋಗುತ್ತಿದ್ದೇನೆ. ಈ ಕಾರ್ಯಕ್ರಮ ನಡೆಸಿಕೊಡಲು ತುಂಬಾ ಹೆಮ್ಮೆಯಾಗುತ್ತಿದೆ. ಇಂದು ಹೆಮ್ಮೆಯ ಒಂದು ಕಾಫಿ ಯಾರೂ ಎಂದು ಗೆಸ್ ಮಾಡುತ್ತೀರಾ?” ಎಂದು ಟ್ವೀಟ್ ಮಾಡಿದರು.

    ಕರಣ್ ಜೋಹರ್ ಟ್ವೀಟಿಗೆ ಎಲ್ಲರೂ ಪ್ರಭಾಸ್, ರಾಜಾಮೌಳಿ ಹಾಗೂ ರಾಣಾ ಬರುತ್ತಾರೆ ಎಂದು ರೀ-ಟ್ವೀಟ್ ಮಾಡಿದರು. ಮತ್ತೆ ಕೆಲವರು ಪ್ರಭಾಸ್ ಹಾಗೂ ಯಶ್ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಗೆಸ್ ಮಾಡಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬಾಹುಬಲಿ-ಕೆಜಿಎಫ್ ‘ರಾಕಿ ಭಾಯ್’ ಮುಂಬೈನಲ್ಲಿ ಭೇಟಿಯಾಗಿದ್ದೇಕೆ?

    https://twitter.com/karanjohar/status/1071233254055911424?ref_src=twsrc%5Etfw%7Ctwcamp%5Etweetembed%7Ctwterm%5E1071233254055911424&ref_url=http%3A%2F%2Fenglish.sakshi.com%2Fentertainment%2F2018%2F12%2F08%2Fbaahubali-prabhas-on-koffee-with-karan-opens-about-anushka-and-martial-status

    ಪ್ರಭಾಸ್ ಹಾಗೂ ಯಶ್ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಇಬ್ಬರು ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾದರೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲ ಸೌತ್ ನಟರು ಯಶ್ ಹಾಗೂ ಪ್ರಭಾಸ್ ಆಗುತ್ತಾರೆ.

    ಮುಂಬೈನ ಪಾಲಿಭವನ್ ನಿಂದ ಹೊರಡುವಾಗ ಇಬ್ಬರು ನಟರೂ ಪರಸ್ಪರ ತಬ್ಬಿಕೊಂಡು ಬಾಯ್ ಹೇಳಿದ್ದಾರೆ. ಆ್ಯಕ್ಷನ್ ಸಿನಿಮಾದಿಂದ ಖ್ಯಾತಿಗೊಂಡ ಇಬ್ಬರನ್ನು ನೋಡಿ ಎಲ್ಲರಿಗೂ ಖುಷಿಯಾಗಿದೆ. ಇದೇ ವೇಳೆ ಇಬ್ಬರು ಸ್ಟಾರ್ ನಟರೂ ಯಾವುದೇ ಹಮ್ಮಿಲ್ಲದೆ ಫೋಟೋಗೆ ಪೋಸ್ ಕೊಟ್ಟು ಅಭಿಮಾನಿಗಳಿಗೆ ಖುಷಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv