Tag: sea

  • ಬಟ್ಟೆಯಿಂದ ಮಗನ ಕಟ್ಟಿಕೊಂಡು ನದಿಗೆ ಹಾರಿದ್ದ ತಂದೆ – 12 ದಿನದ ನಂತ್ರ ಶವ ಪತ್ತೆ

    ಬಟ್ಟೆಯಿಂದ ಮಗನ ಕಟ್ಟಿಕೊಂಡು ನದಿಗೆ ಹಾರಿದ್ದ ತಂದೆ – 12 ದಿನದ ನಂತ್ರ ಶವ ಪತ್ತೆ

    – ನಾನೊಬ್ಬ ಮಗನನ್ನ ಕೊಲ್ಲುವ ಮಹಾ ಪಾಪಿ
    – ಡೆತ್‍ನೋಟ್ ಬರೆದಿದ್ದ ತಂದೆ

    ಉಡುಪಿ: ಆರು ವರ್ಷದ ಮಗನನ್ನು ಕಟ್ಟಿಕೊಂಡು ನೇತ್ರಾವತಿ ನದಿಗೆ ಹಾರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಮೃತದೇಹಗಳು ಉಡುಪಿಯಲ್ಲಿ ಪತ್ತೆಯಾಗಿದೆ. ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ನೇತ್ರಾವತಿ ನದಿಗೆ ಹಾರಿದ್ದ ತಂದೆ ಮಗನ ಶವ ಸುಮಾರು 65 ಕಿ.ಮೀ ದೂರದ ಉಡುಪಿ ಜಿಲ್ಲೆಯ ಕಟಪಾಡಿ ಸಮುದ್ರ ಕಿನಾರೆಗೆ ತೇಲಿ ಬಂದಿದೆ.

    ಗೋಪಾಲಕೃಷ್ಣ ರೈ ಹಾಗೂ ಪುತ್ರ ಅನೀಶ್ ರೈ ಮೃತ ತಂದೆ-ಮಗ. 12 ದಿನದ ನಂತರ ಕಟಪಾಡಿ ಸಮೀಪ ತಂದೆ ಮಗನ ಶವ ಕೊಳೆತ ಸ್ಥಿತಿಯಲ್ಲಿ ಒಟ್ಟಿಗೆ ಸಿಕ್ಕಿವೆ.

    ಏನಿದು ಪ್ರಕರಣ?
    ಫೆಬ್ರವರಿ 16ರ ಮುಂಜಾನೆ 4.30ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ತಂದೆ ಹಾಗೂ ಪುತ್ರ ರಾಷ್ಟ್ರೀಯ ಹೆದ್ದಾರಿ 66ರಿಂದ ಕಣ್ಮರೆಯಾಗಿದ್ದರು. ನಾಪತ್ತೆಯಾದವರನ್ನು ಬಂಟ್ವಾಳದ ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿ ಗೋಪಾಲಕೃಷ್ಣ ರೈ ಹಾಗೂ ಪುತ್ರ ಅನೀಶ್ ರೈ ಎಂದು ಗುರುತಿಸಲಾಗಿತ್ತು. ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಗೋಪಾಲಕೃಷ್ಣ ರೈ ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಹಿಂದೆ ಮುಂಬೈಯಿಂದ ಕೊಣಾಜೆಯ ಪಾವೂರಿಗೆ ಸಂಬಂಧಿಕರ ಮನೆಗೆ ದೈವದ ನೇಮೋತ್ಸವಕ್ಕೆ ಬಂದಿದ್ದನು. ಭಾನುವಾರ ನಸುಕಿನ ಜಾವ 4.30ರ ವೇಳೆ ಮಗ ಅನೀಶ್ ರೈಯೊಂದಿಗೆ ಗೋಪಾಕೃಷ್ಣ ರೈ ಕಾರು ಚಲಾಯಿಸಿ ಮನೆಯಿಂದ ಹೊರಗೆ ಹೊರಟಿದ್ದನು.

    ಈ ಕಾರು ಫೆಬ್ರವರಿ 16 ರಂದು ಭಾನುವಾರ ಬೆಳಗ್ಗಿನ ಜಾವ ಉಳ್ಳಾಲ ನೇತ್ರಾವತಿ ನದಿಯ ಸೇತುವೆ ಬಳಿ ಪತ್ತೆಯಾಗಿತ್ತು. ನೇತ್ರಾವತಿ ಸೇತುವೆಯಲ್ಲಿ ಕಾರು ನಿಂತಿದ್ದು, ವಾಹನದಲ್ಲಿ ಯಾರೂ ಇಲ್ಲದ್ದು ನೋಡಿ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದರು. “ತನಗೆ ಒಂದು ವಾರದಿಂದ ನಿದ್ರೆ ಬರುತ್ತಿಲ್ಲ. ನಾನೊಬ್ಬ ಮಗನನ್ನು ಕೊಲ್ಲುವ ಮಹಾ ಪಾಪಿ. ಇದಕ್ಕಾಗಿ ನನ್ನ ಕ್ಷಮಿಸಿರಿ. ಪತ್ನಿ ಅಶ್ವಿನಿ ರೈ ನಿನ್ನನ್ನು ಬಿಟ್ಟು ಇಬ್ಬರೂ ದೂರ ಹೋಗುತ್ತಿದ್ದೇವೆ ಎಂದು ಡೆತ್‍ನೋಟ್” ಬರೆದಿಟ್ಟಿದ್ದನು. ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಕ್ಕಾಗಿ ರಾತ್ರಿ ಹಗಲು ಶೋಧಕಾರ್ಯ ನಡೆಸಿದ್ದರು.

    ಘಟನೆಗೆ ಸಂಬಂಧಿಸಿದಂತೆ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ. ಆದರೆ ಶುಕ್ರವಾರ ರಾತ್ರಿ ಕಟಪಾಡಿ ಸಮೀಪ ತಂದೆ ಮಗನ ಶವ ಕೊಳೆತ ಸ್ಥಿತಿಯಲ್ಲಿ ಒಟ್ಟಿಗೆ ಸಿಕ್ಕಿವೆ. ಕುಟುಂಬಸ್ಥರು ಮೃತದೇಹಗಳ ಗುರುತು ಪತ್ತೆ ಮಾಡಿದ್ದಾರೆ. ತಂದೆ ಮಗ ಬಟ್ಟೆ ಸುತ್ತಿಕೊಂಡು ನೀರಿಗೆ ಹಾರಿದ್ದಾರೆ ಎಂದು ಮೃತದೇಹ ಮೇಲಕ್ಕೆತ್ತಿದವರು ಮಾಹಿತಿ ನೀಡಿದ್ದಾರೆ. ಮೃತದೇಹ 12 ದಿನ ನೀರನಲ್ಲಿದ್ದರಿಂದ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ಉಡುಪಿಯ ಅಜ್ಜರಕಾಡು ಶವಾಗಾರದಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಮಂಗಳೂರಿಗೆ ರವಾನಿಸಲಾಗಿದೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಆಪತ್ಬಾಂಧವ ಕಾಪು ಸೂರಿ ಶೆಟ್ಟಿ ಮಾತನಾಡಿ, ಶವ ಕಲ್ಲುಗಳ ನಡುವೆ ಸಿಲುಕಿತ್ತು. ಮೇಲೆತ್ತಲು ಬಹಳ ಕಷ್ಟವಾಯಿತು. ಜೊತೆಗೆ ಪ್ರಾಣ ಕಳೆದುಕೊಳ್ಳುವ ಉದ್ದೇಶದಿಂದ ಬಟ್ಟೆಯಿಂದ ಪರಸ್ಪರ ಸುತ್ತಿಕೊಂಡಿದ್ದರು. ಅಂತ್ಯಸಂಸ್ಕಾರ ಕೂಡ ಜೊತೆಗೆ ಆಗಬೇಕೆಂಬ ಇಚ್ಛೆ ಅವರದ್ದಾಗಿತ್ತು ಅಂತ ಕುಟುಂಬಸ್ಥರು ಹೇಳಿದ್ದಾರೆ ಎಂದರು.

    ಮೃತರ ಸಹೋದರ ಹರೀಶ್ ರೈ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇ ಇರಲಿಲ್ಲ. ಆರ್ಥಿಕ, ಕೌಟುಂಬಿಕ ಸಮಸ್ಯೆಗಳೂ ಇರಲಿಲ್ಲ. ಯಾಕೆ ಹೀಗೆ ಮಾಡಿಕೊಂಡರು ಎಂದು  ಗೊತ್ತಾಗುತ್ತಿಲ್ಲ ಎಂದರು.

     

  • ಕರಾವಳಿಯ ಕಡಲಿನಲ್ಲಿ ಕಡಿಮೆಯಾದ ಮೀನುಗಳು

    ಕರಾವಳಿಯ ಕಡಲಿನಲ್ಲಿ ಕಡಿಮೆಯಾದ ಮೀನುಗಳು

    ಮಂಗಳೂರು: ಕರಾವಳಿಯ ಆರ್ಥಿಕತೆಯ ಜೀವನಾಡಿ ಮೀನುಗಾರಿಕೆಗೆ ದೊಡ್ಡ ಹೊಡೆತ ಬಿದ್ದಿದೆ. ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಮತ್ಸ್ಯಕ್ಷಾಮ ಪಶ್ಚಿಮ ಕರಾವಳಿಯಲ್ಲಿ ಕಂಡು ಬಂದಿದ್ದು, ಮೀನಿನ ಬೇಟೆ ಸಿಗದೆ ಕಡಲ ಮಕ್ಕಳು ಕಂಗಾಲಾಗಿದ್ದಾರೆ.

    ಜಾಗತಿಕ ತಾಪಮಾನ ಏರಿಕೆಯ ಜೊತೆ ಅವೈಜ್ಞಾನಿಕ ಮೀನುಗಾರಿಕಾ ಪದ್ಧತಿಯಿಂದ ಕಡಲಿನಲ್ಲಿ ಮೀನಿನ ಸಂತತಿ ಭಾರೀ ಪ್ರಮಾಣದಲ್ಲಿ ಕೆಳಮುಖವಾಗಿದ್ದು, ಶೇ. 80ರಷ್ಟು ಬೋಟ್ ಗಳು ಮೀನುಗಾರಿಕೆ ನಡೆಸದೆ ದಡದಲ್ಲೇ ಲಂಗರು ಹಾಕಿದೆ.

    ಸಾಮಾನ್ಯವಾಗಿ ಜನವರಿ ಮೊದಲ ತಿಂಗಳಿನಿಂದ ಸಮುದ್ರದಲ್ಲಿ ಮೀನಿನ ಲಭ್ಯತೆ ಹೆಚ್ಚಿದ್ದು, ಈ ಬಾರಿ ನಿರೀಕ್ಷೆಯಂತೆ ಮೀನುಗಾರರಿಗೆ ಮೀನುಗಳು ಸಿಗುತ್ತಿಲ್ಲ. ಮಂಗಳೂರು ಬಂದರಿನಲ್ಲಿ ಟ್ರಾಲ್ ಬೋಟ್‍ಗಳಲ್ಲಿ ಹೆಚ್ಚಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಸದ್ಯ ಕೆಲಸವಿಲ್ಲದೆ ನಿರ್ಗತಿಕರಾಗಿದ್ದಾರೆ.

    ಬಂದರಿನಲ್ಲಿ ಸುಮಾರು 30,000 ಮಂದಿ ಕೆಲಸ ಮಾಡುತ್ತಿದ್ದು, ಬೋಟ್‍ಗಳು ಸಮುದ್ರಕ್ಕಿಳಿಯದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾಮಾನ್ಯವಾಗಿ ಒಂದು ಬೋಟು ಮೀನು ಹಿಡಿದು ತಂದರೆ ಅದರಿಂದ ಐಸ್ ಪ್ಲಾಂಟ್‍ಗಳು, ಬೋಟುಗಳಿಂದ ಮೀನು ತೆಗೆಯುವ ಕಾರ್ಮಿಕರು, ಮೀನು ವ್ಯಾಪಾರಿಗಳು ಕೆಲಸ ಮಾಡಬಹುದು. ಆದರೆ ಈಗ ಯಾರಿಗೂ ಕೆಲಸ ಇಲ್ಲದೆ ಸಂತ್ರಸ್ತರಾಗಿದ್ದಾರೆ.

    ಅವೈಜ್ಞಾನಿಕ ಮೀನುಗಾರಿಕಾ ವಿಧಾನದಿಂದಲೂ ಮೀನಿನ ಸಂತತಿ ನಶಿಸುತ್ತಿದೆ. ಕೇಂದ್ರ ಸರ್ಕಾರದ ನಿಷೇಧಿತ ಲೈಟ್ ಫಿಶಿಂಗ್ ವಿಧಾನದಲ್ಲೂ ಮೀನುಗಾರಿಕೆ ನಡೆಸಲಾಗುತ್ತಿದ್ದು, ಮೀನುಗಳು ನಾಶವಾಗುತ್ತಿದೆ. ಪ್ರಖರವಾದ ಲೈಟ್‍ನಿಂದ ಮೀನುಗಳಿಗೆ ಸಿಗುವ ಆಹಾರದವೂ ಕರಟಿ ಹೋಗುತ್ತಿದ್ದು, ಆಹಾರವಿಲ್ಲದೆಯೂ ಮೀನುಗಳು ಸಾವನ್ನಪ್ಪುತ್ತಿದೆ.

    ಕಳೆದ ವರ್ಷದ ಲೆಕ್ಕಾಚಾರವನ್ನು ಗಮನಿಸಿದಾಗ ಈ ವರ್ಷದಲ್ಲಿ 756 ಕೋಟಿ ನಷ್ಟವಾಗಿದ್ದು, ಮೀನುಗಾರರೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಡಲಿನಲ್ಲಿ ಜೀವ ಪಣಕ್ಕಿಟ್ಟು ಮತ್ಸ್ಯ ಬೇಟೆಯಾಡುವ ಕಡಲ ಮಕ್ಕಳನ್ನು ಸರ್ಕಾರವೂ ಕೈ ಬಿಟ್ಟಿದ್ದು, ಅತಂತ್ರರಾಗಿದ್ದಾರೆ.

  • ಮೀನುಗಾರರ ಬಲೆಗೆ ಬಿತ್ತು ಚಪ್ಪಲಿ ಮೀನು – ಅಪರೂಪದ ಈ ಮೀನಿನ ವಿಶೇಷವೇನು ಗೊತ್ತಾ?

    ಮೀನುಗಾರರ ಬಲೆಗೆ ಬಿತ್ತು ಚಪ್ಪಲಿ ಮೀನು – ಅಪರೂಪದ ಈ ಮೀನಿನ ವಿಶೇಷವೇನು ಗೊತ್ತಾ?

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮೀನುಗಾರರು ಮತ್ಸ್ಯ ಕ್ಷಾಮದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಈ ಬಾರಿ ಅಪರೂಪದ ಮೀನುಗಳು ಮೀನುಗಾರರ ಬಲೆಗೆ ಬೀಳುವ ಮೂಲಕ ಮೀನುಗಾರರು ಆಶ್ಚರ್ಯ ಪಡುವಂತೆ ಮಾಡಿದೆ.

    ಹೌದು. ಕಾರವಾರದ ಬೈತಕೋಲಿನ ಬಂದರಿನಲ್ಲಿ ಅಪರೂಪದ ಮೀನುಗಳು ಸಿಗತೊಡಗಿದೆ. ಇವುಗಳಲ್ಲಿ ಸ್ಥಳೀಯವಾಗಿ ಚಪ್ಪಲಿ ಮೀನು, `ಇಚ್ಚ್ ಮೀನು’ ಎಂದು ಕರೆಯುವ ಮೀನೊಂದು ಬೈತಖೋಲ್ ಮೀನುಗಾರಿಕೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ಹೋಗಿದ್ದ ಬೋಟ್‍ನ ಬಲೆಗೆ ಬಿದ್ದಿದೆ. ಈ ಮೀನಿನ ವೈಜ್ಞಾನಿಕ ಹೆಸರು ‘ಎಚನೀಸ್ ನೌಕ್ರೆಟಸ್’. ಇವು ಹೆಚ್ಚಾಗಿ ಆಳ ಸಮುದ್ರದಲ್ಲಿ ಅಂದರೆ ಸುಮಾರು 100 ರಿಂದ 150 ಅಡಿ ಆಳದಲ್ಲಿ ಕಂಡುಬರುತ್ತವೆ.

    ಈ ಮೀನು ತನ್ನ ತಲೆಯ ಮೇಲೆ ಚಪ್ಪಲಿ ಆಕಾರದಲ್ಲಿ ಹರಿತವಾದ ಡಿಸ್ಕ್ ಸಹಾಯದಿಂದ ದೊಡ್ಡ ಮೀನುಗಳ ಮೇಲೆ ದಾಳಿ ಮಾಡುತ್ತದೆ. ಡಿಸ್ಕ್ ನೆರವಿನಿಂದ ದೊಡ್ಡ ಮೀನುಗಳನ್ನು ಇದು ಗಟ್ಟಿಯಾಗಿ ಹಿಡಿದುಕೊಂಡು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚರಿಸುವುದು ಇದರ ವಿಶೇಷಗಳಲ್ಲಿ ಒಂದಾಗಿದ್ದು, ಕೆಲವೊಮ್ಮೆ ಸ್ಕೂಬಾ ಡೈವರ್ಸ್ ಗಳ ಮೇಲೂ ಈ ಮೀನು ದಾಳಿ ಮಾಡುವಷ್ಟು ಸಾಮರ್ಥ್ಯ ಹೊಂದಿದೆ.

    ಅಂಡಮಾನ್ ನಿಕೋಬಾರ್, ಲಕ್ಷದ್ವೀಪಗಳಲ್ಲಿ ಹಾಗೂ ಆಸ್ಟ್ರೇಲಿಯಾದ ಕಡಲಲ್ಲಿ ಹೆಚ್ಚು ಕಂಡುಬರುತ್ತವೆ. ಕರ್ನಾಟಕದ ಕರಾವಳಿಯಲ್ಲಿ ಅಪರೂಪ ಎಂದು ಹೇಳುವ ಈ ಮೀನು ಈ ಬಾರಿ ಸಮುದ್ರದಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಕರ್ನಾಟಕದ ಕರಾವಳಿ ಭಾಗಕ್ಕೆ ಈ ಮೀನಿನ ಹಲವು ಗುಂಪುಗಳು ವಲಸೆ ಬಂದಿವೆ. ಹೀಗಾಗಿ ಇಲ್ಲಿನ ಮೀನುಗಾರರ ಬಲೆಗೆ ಬೀಳುತ್ತಿದೆ. ಈ ಮೀನು ಅಪರೂಪವಾದ್ದರಿಂದ ಇವುಗಳಿಗೆ ಮಾರುಕಟ್ಟೆ ಸಹ ಇಲ್ಲ. ಹೀಗಾಗಿ ಇವುಗಳು ಸಿಕ್ಕರೂ ಮೀನುಗಾರರಿಗೆ ಮಾತ್ರ ಲಾಭದ ಮೀನಾಗಿಲ್ಲ. ಆದರೆ ಅರಬ್ಬಿ ಸಮುದ್ರದಲ್ಲಿ ಆಗುತ್ತಿರುವ ಬದಲಾವಣೆಗೆ ಕರ್ನಾಟಕ ಕರಾವಳಿಯ ಭಾಗದಲ್ಲಿ ಅಪರೂಪದ ಮೀನುಗಳು ಪತ್ತೆಯಾಗುತ್ತಿದ್ದು ಮೀನುಗಾರರನ್ನೇ ವಿಸ್ಮಯ ಮೂಡಿಸುವಂತೆ ಮಾಡಿದೆ.

  • ಸಮುದ್ರದ ಬಂಡೆಗೆ ಒಂದೂವರೆ ವರ್ಷದ ಮಗುವನ್ನೇ ಎಸೆದ್ಳು – ಪತಿಯೇ ಕೊಲೆಗಾರ ಎಂದ್ಳು

    ಸಮುದ್ರದ ಬಂಡೆಗೆ ಒಂದೂವರೆ ವರ್ಷದ ಮಗುವನ್ನೇ ಎಸೆದ್ಳು – ಪತಿಯೇ ಕೊಲೆಗಾರ ಎಂದ್ಳು

    – ಲವ್ವರ್ ಜೊತೆ ಹೊಸ ಜೀವನ ಶುರು ಮಾಡೋ ಪ್ಲಾನ್
    – ಮದ್ವೆಯಾಗಿ ಮಗುವಿದ್ರೂ ಬೇರೊಬ್ಬನ ಜೊತೆ ಲವ್

    ತಿರುವನಂತಪುರ: ಸ್ವಂತ ಮಗುವನ್ನು ಸಮುದ್ರದ ಬಂಡೆಗೆ ಎಸೆದು ಕೊಲೆ ಮಾಡಿದ ಆರೋಪದ ಮೇರೆಗೆ 22 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಕಣ್ಣೂರು ನಗರದಲ್ಲಿ ನಡೆದಿದೆ.

    ಶರಣ್ಯ ಬಂಧಿತ ಆರೋಪಿ. ಮಗುವಿನ ಕೊಲೆಗೆ ಸಂಬಂಧಿಸಿದಂತೆ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳೀಯರು ಆರೋಪಿ ಶರಣ್ಯಳ ಒಂದೂವರೆ ವರ್ಷದ ಮಗನ ಶವವನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಾಥಮಿಕ ತನಿಖೆಯ ವೇಳೆ ಶರಣ್ಯ ತನ್ನ ಮಗುವಿನ ಸಾವಿಗೆ ಪತಿ ಕಾರಣ ಎಂದು ಪೊಲೀಸರಿಗೆ ತಿಳಿಸಿದ್ದಳು.

    ಆಕೆಯ ಹೇಳಿಕೆಯ ಆಧಾರದ ಮೇಲೆ ಪತಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಸಾಕ್ಷಿಗಳು ಶರಣ್ಯ ಪರವಾಗಿದ್ದವು. ಹೀಗಾಗಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗ ಆರೋಪಿ ಸತ್ಯ ಬಾಯಿಬಿಟ್ಟಿದ್ದಾಳೆ. ತಾನೇ ಮಗುವನ್ನು ಕೊಲೆ ಮಾಡಿರುವುದಾಗಿ ತನಿಖಾಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾಳೆ.

    ಸಮುದ್ರದಲ್ಲಿ ಬಂಡೆಗೆ ಮಗುವನ್ನು ಎಸೆಯುವ ಮೂಲಕ ಸ್ವಂತ ಮಗನನ್ನು ಕೊಲೆ ಮಾಡಿದ್ದಾಳೆ. ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಲವ್ವರ್ ಜೊತೆ ಹೊಸ ಜೀವನವನ್ನು ಪ್ರಾರಂಭಿಸಲು ಇಷ್ಟಪಟ್ಟಿದ್ದಳು. ಹೀಗಾಗಿ ಮಗುವನ್ನು ಕೊಲೆ ಮಾಡಿ, ಆ ಕೊಲೆಯನ್ನು ಪತಿ ಮಾಡಿದ್ದಾನೆ ಎಂದು ಸೂಚಿಸಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಕೇರಳದ ಕಣ್ಣೂರು ಜಿಲ್ಲೆಯ ಥೈಯಿಲ್ ಸಮುದ್ರ ತೀರದಲ್ಲಿ ಸೋಮವಾರ ಒಂದೂವರೆ ವರ್ಷದ ಪುಟ್ಟ ಮಗುವಿನ ಶವ ಪತ್ತೆಯಾಗಿತ್ತು. ಸೋಮವಾರ ಬೆಳಿಗ್ಗೆ 6 ಗಂಟೆಗೆ ಮಗುವಿನ ತಂದೆ ಪ್ರಣವ್ ಕಣ್ಣೂರು ನಗರ ಪೊಲೀಸ್ ಠಾಣೆಯಲ್ಲಿ ಮಗ ವಿಯಾನ್ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ನಂತರ ಪೋಷಕರು ಮತ್ತು ಪೊಲೀಸರು ನೆರೆಹೊರೆಯವರ ಸಹಾಯದಿಂದ ಹತ್ತಿರದ ಸ್ಥಳಗಳಲ್ಲಿ ಹುಡುಕಲು ಪ್ರಾರಂಭಿಸಿದರು.

    ಬೆಳಿಗ್ಗೆ 9 ಗಂಟೆಗೆ ಅವರ ಮನೆಯಿಂದ ಕೇವಲ 50 ಮೀಟರ್ ದೂರದಲ್ಲಿರುವ ಸಮುದ್ರ ತೀರದಲ್ಲಿ ಬಂಡೆಗಳ ಮಧ್ಯೆ ವಿಯಾನ್ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಘಟನೆಯ ನಂತರ ಕಣ್ಣೂರು ನಗರ ಪೊಲೀಸರು ಮೊದಲು ವಿಯಾನ್ ತಂದೆ ಪ್ರಣವ್ ಮತ್ತು ನಂತರ ತಾಯಿ ಶರಣ್ಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಈ ವೇಳೆ ಇವರಿಬ್ಬರ ಹೇಳಿಕೆಗಳು ಹೊಂದಾಣಿಕೆಯಾಗುತ್ತಿರಲಿಲ್ಲ. ಹೀಗಾಗಿ ಮಗುವಿನ ಸಾವಿನ ಹಿಂದೆ ಇಬ್ಬರಲ್ಲಿ ಒಬ್ಬರು ಇದ್ದಾರೆ ಎಂದು ಪೊಲೀಸರು ಶಂಕಿಸಿದ್ದರು.

    ಸದ್ಯಕ್ಕೆ ಪೊಲೀಸರು ಆರೋಪಿ ಶರಣ್ಯಳನ್ನು ಬಂಧಿಸಿದ್ದಾರೆ. ಆಕೆಯ ಕೃತ್ಯವನ್ನು ತಿಳಿದು ಆಕ್ರೋಶಗೊಂಡ ಸ್ಥಳೀಯರು ಆರೋಪಿ ಶರಣ್ಯ ಳ ಮೇಲೆ ಹಲ್ಲೆ ಮಾಡಿದ್ದರು. ಬಂಧಿತ ಆರೋಪಿಯನ್ನು ಪೊಲೀಸರು ಬುಧವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಲಯಾಕ್ಕೆ ಹಾಜರುಪಡಿಸಿದ್ದರು.

  • ಕಾರವಾರದ ಯುವಕನಿಗೆ ದಿಗ್ಭಂಧನ – ಪೋಷಕರು ಜಿಲ್ಲಾಡಳಿತದ ಮೊರೆ

    ಕಾರವಾರದ ಯುವಕನಿಗೆ ದಿಗ್ಭಂಧನ – ಪೋಷಕರು ಜಿಲ್ಲಾಡಳಿತದ ಮೊರೆ

    ಕಾರವಾರ: ಕೊರೊನಾ ವೈರಸ್ ಆತಂಕ ಹಿನ್ನೆಲೆಯಲ್ಲಿ ಜಪಾನಿನ ಯುಕೋಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಯುವಕನಿದ್ದ ಹಡಗನ್ನು ತಡೆ ಹಿಡಿದು ಘಟನೆ ನಡೆದಿದ್ದು, ತಮ್ಮ ಮಗನನ್ನು ರಕ್ಷಿಸಿ ಕರೆ ತರುವಂತೆ ಅವರ ಪೋಷಕರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

    ಜಪಾನಿನ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಕಾರವಾರದ ಪದ್ಮನಾಭನಗರದ ಯುವಕ ಅಭಿಷೇಕ್ ಕಳೆದ ಆರು ತಿಂಗಳಿಂದ ಸ್ಟಿವರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಡಗು ಪ್ರವಾಸಿಗರನ್ನು ಕರೆದುಕೊಂಡು ಸಿಂಗಾಪುರ ಹಾಗೂ ಚೀನಾಕ್ಕೆ ಪ್ರವಾಸ ಮುಗಿಸಿ, ಮತ್ತೆ ಚೀನಾಗೆ 2,600 ಜನ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು.

    ಈ ವೇಳೆ ಮೊದಲು 10 ಜನ ನಂತರ 15 ಹೀಗೆ ಒಟ್ಟು 40 ಜನರಿಗೆ ಸೊಂಕು ಹರಡಿತ್ತು. ಈ ಕಾರಣದಿಂದ ಹಡಗನ್ನು ಕಳೆದ ಆರು ದಿನದಿಂದ ಸಮುದ್ರದಲ್ಲೇ ತಡೆ ಹಿಡಿದಿದ್ದು, ದಿಬ್ಭಂದನದಲ್ಲಿ ಇರಿಸಲಾಗಿದೆ. ಹಡಗಿನ ಹೋಟಲೊಂದರಲ್ಲಿ ಸ್ಟಿವರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಭಿಷೇಕ್ ವೈರಸ್‍ನ ಭಯದಿಂದ ಇತ್ತ ಮನೆಗೂ ಬಾರದೆ ಚೈನಾಕ್ಕೂ ಹೋಗದಂತಾಗಿದೆ.

    ಮನೆಯವರಿಗೆ ಸಂಪರ್ಕಿಸಿ ತನ್ನನ್ನು ದೇಶಕ್ಕೆ ಕರೆಸಿಕೊಳ್ಳುವಂತೆ ಅಭಿಷೇಕ್ ತನ್ನ ಪೋಷಕರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಷಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇನ್ನು ಸೋಂಕು ತಗಲದ ತಮ್ಮ ಮಗನನ್ನು ರಕ್ಷಿಸುವಂತೆ ಹಾಗೂ ಮರಳಿ ಭಾರತಕ್ಕೆ ಕರೆ ತರುವಂತೆ ಮನವಿ ಮಾಡಿದ್ದಾರೆ.

  • ಈ ಸಮುದ್ರ ತೀರಗಳು ಮೈಕ್ರೋ ಪ್ಲಾಸ್ಟಿಕ್‍ನಿಂದ ಹೆಚ್ಚು ಮಾಲಿನ್ಯವಾಗಿವೆ

    ಈ ಸಮುದ್ರ ತೀರಗಳು ಮೈಕ್ರೋ ಪ್ಲಾಸ್ಟಿಕ್‍ನಿಂದ ಹೆಚ್ಚು ಮಾಲಿನ್ಯವಾಗಿವೆ

    ದೆಹಲಿ: ಕರ್ನಾಟಕ ಮತ್ತು ಗೋವಾಕ್ಕೆ ಹೋಲಿಸಿಕೊಂಡರೆ ಮಹಾರಾಷ್ಟ್ರದ ಸಮುದ್ರ ತೀರಗಳು ಮೈಕ್ರೋ ಪ್ಲಾಸ್ಟಿಕ್‍ಗಳಿಂದ ಹೆಚ್ಚು ಮಾಲಿನ್ಯವಾಗಿದೆ ಎಂದು ಹೊಸ ಸಂಶೋಧನಾ ವರದಿ ಹೇಳಿದೆ. ಸಮುದ್ರ ತೀರದಲ್ಲಿರುವ ಪ್ಲಾಸ್ಟಿಕ್ ಕೈಗಾರಿಕೆಗಳು ಅತಿಯಾದ ಪ್ರವಾಸೋದ್ಯಮ ಇದಕ್ಕೆಲ್ಲ ಹೊಣೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

    ಗೋವಾ ಮೂಲದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಓಷನೊಗ್ರಫಿ (ಎನ್‍ಐಒ) ಎನ್ನುವ ಸಂಸ್ಥೆ ಭಾರತದ ಪಶ್ಚಿಮ ಕರಾವಳಿ ಉದ್ದಕ್ಕೂ ಮ್ಯಾಕ್ರೋ ಮತ್ತು ಮೈಕ್ರೋ ಪ್ಲಾಸ್ಟಿಕ್‍ಗಳ ಮೌಲ್ಯಮಾಪನ ಹಾಗೂ ಸಮೃದ್ಧಿ, ವಿತರಣೆ, ಪಾಲಿಮರ್ ಪ್ರಕಾರ ಮತ್ತು ವಿಷತ್ವ ಎಂಬ ಶೀರ್ಷಿಕೆಯಡಿ ಅಧ್ಯಯನ ನಡೆಸಿದ್ದು, ಇದು ಕಳೆದ ವಾರ ನೆದರ್‍ಲ್ಯಾಂಡ್ ಮೂಲದ ಜರ್ನಲ್ ‘ಚೆಮೋಸ್ಫಿಯರ್’ ನಲ್ಲಿ ಪ್ರಕಟಿಸಲಾಗಿದೆ.

    ಈ ಅಧ್ಯಯನದ ಪ್ರಕಾರ ಕರ್ನಾಟಕ ಮತ್ತು ಗೋವಾಕ್ಕೆ ಹೋಲಿಸಿದರೆ ಮಹಾರಾಷ್ಟ್ರದ ಕಡಲ ತೀರಗಳಲ್ಲಿ ಹೆಚ್ಚಿನ ಉಬ್ಬರವಿಳಿತದ ರೇಖೆಯಲ್ಲಿ ಮ್ಯಾಕ್ರೋ ಮತ್ತು ಮೈಕ್ರೋಪ್ಲಾಸ್ಟಿಕ್ ಮಾಲಿನ್ಯಕಾರಕಗಳು ಹೆಚ್ಚು ಕಂಡುಬರುತ್ತವೆ ಎಂದು ಹೇಳಿದೆ. ಕಡಲ ತೀರದಲ್ಲಿರುವ ಪ್ಲಾಸ್ಟಿಕ್ ಕಾರ್ಖಾನೆಗಳು, ಬಂದರು ಪ್ರದೇಶಗಳು, ಪೆಟ್ರೋಲಿಯಂ ಕೈಗಾರಿಕೆಗಳು ಅತಿಯಾದ ಪ್ರವಾಸೋದ್ಯಮ ಚಟುವಟಿಕೆಯಿಂದ ಮಹಾರಾಷ್ಟ್ರ ಕಡಲ ತೀರಗಳಲ್ಲಿ ಹೇರಳವಾಗಿ ಮ್ಯಾಕ್ರೋ ಮತ್ತು ಮೈಕ್ರೋ ಪ್ಲಾಸ್ಟಿಕ್‍ಗಳನ್ನು ಕಂಡು ಬರುತ್ತಿದೆ ಎಂದು ವರದಿ ಹೇಳಿದೆ.

    ಸಂಶೋಧಕರು ಭಾರತದ ಪಶ್ಚಿಮ ಕರಾವಳಿಯ 10 ಕಡಲ ತೀರಗಳಲ್ಲಿ ಎರಡು ವರ್ಷಗಳ ಕಾಲ ಮ್ಯಾಕ್ರೋ ಮತ್ತು ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದ ಮೌಲ್ಯಮಾಪನ ಮತ್ತು ಸಮುದ್ರ ಜೀವಿಗಳ ಮೇಲೆ ಅವುಗಳ ವಿಷಕಾರಿ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಿದರು. ಈ ಕಡಲ ತೀರಗಳಲ್ಲಿನ ಪ್ಲಾಸ್ಟಿಕ್ ಮಾಲಿನ್ಯ ಕಾರಕಗಳು ಬಿಳಿ, ತಿಳಿ ಹಳದಿ, ಗಾಢ ಕಂದು, ಹಸಿರು, ನೀಲಿ ಮತ್ತು ಕೆಂಪು ಮುಂತಾದ ವಿವಿಧ ಬಣ್ಣಗಳಲ್ಲಿ ಕಂಡು ಬಂದಿವೆ ಎಂದು ಎನ್‍ಐಒ ವಿಜ್ಞಾನಿಗಳಾದ ಡಾ.ಮಹುವಾ ಸಹಾ ಮತ್ತು ಡಾ. ದುಷ್ಮಂತ್ ಮಹಾರಾನ ನೇತೃತ್ವದ ಅಧ್ಯಯನ ತಿಳಿಸಿದೆ.

    ಪ್ಲಾಸ್ಟಿಕ್ ಮಾಲಿನ್ಯಕಾರಕಗಳಿಂದ ಸಮುದ್ರ ಪರಿಸರಕ್ಕೆ ತೊಂದರೆಯಾಗದಂತೆ ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ಆಗಾಗ್ಗೆ ನಡೆಸುವುದರ ಜೊತೆಗೆ ಏಕ ಬಳಕೆಯ ಪ್ಲಾಸ್ಟಿಕ್‍ನಿಂದ ದೂರವಿರಲು ಮತ್ತು ಅದರ ಮರುಬಳಕೆಯನ್ನು ಹೆಚ್ಚಿಸಲು ಸರ್ಕಾರದ ಚೌಕಟ್ಟಿನ ನೀತಿಗಳು ಅಗತ್ಯ ಎಂದು ಸಂಶೋಧಕರು ಸೂಚಿಸಿದ್ದಾರೆ.

  • ಕಿ.ಮೀಗಟ್ಟಲೇ ರಾಶಿರಾಶಿ ಮೀನುಗಳು – ಸಮುದ್ರದಡಕ್ಕೆ ಅಪ್ಪಳಿಸಿತು ‘ಪೆನ್ನಿಸ್ ಫಿಶ್’

    ಕಿ.ಮೀಗಟ್ಟಲೇ ರಾಶಿರಾಶಿ ಮೀನುಗಳು – ಸಮುದ್ರದಡಕ್ಕೆ ಅಪ್ಪಳಿಸಿತು ‘ಪೆನ್ನಿಸ್ ಫಿಶ್’

    – ನೆಲದಡಿಯಿಂದ ಭೂಮಿಗೆ ಬಂತು ‘ಪೆನ್ನಿಸ್ ಫಿಶ್’
    – ಚಂಡಮಾರುತದ ಪ್ರಭಾವದಿಂದ ಭೂಮಿಯಲ್ಲಿ ಪ್ರತ್ಯಕ್ಷ

    ಕ್ಯಾಲಿಫೋರ್ನಿಯಾ: ನೋಡಲು ವಿಶೇಷವಾಗಿ ಕಾಣುವ ‘ಪೆನ್ನಿಸ್ ಫಿಶ್’ ಅಮೆರಿಕದ ಕ್ಯಾಲಿಫೋರ್ನಿಯಾದ ಡ್ರೇಕ್ಸ್ ಬೀಚ್‍ಗೆ ಸಾವಿರಾರು ಸಂಖ್ಯೆಯಲ್ಲಿ ಅಪ್ಪಳಿಸಿದ್ದು, ಅಲ್ಲಿನ ಜನರನ್ನು ಅಚ್ಚರಿಗೊಳಪಡಿಸಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಇವುಗಳನ್ನು ನೋಡಿದ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಮೀನುಗಳಂತೆ ಕಂಡರೂ ಇವು ಮೀನುಗಳಲ್ಲ. ಕೊಬ್ಬುಗಳನ್ನು ತುಂಬಿದ ದೇಹವನ್ನು ಹೊಂದಿದ ಇವುಗಳನ್ನು ‘ಇನ್‍ಕೀಪರ್’ ಹುಳು ಎಂದು ಕರೆಯಲಾಗುತ್ತದೆ. ಈ ಹುಳು ನೋಡಲು ಪುರುಷನ ಮರ್ಮಾಂಗದ ರೀತಿ ಇರುವುದರಿಂದ ಇವುಗಳಿಗೆ ‘ಪೆನ್ನಿಸ್ ಫಿಶ್’ ಎಂಬ ಹೆಸರು ಬಂದಿದೆ.

    ಈ ಜೀವಿಗಳು ಸಮುದ್ರದ ಆಳದ ಕೆಸರು, ಮರಳಿನಲ್ಲಿ ಜೀವಿಸುತ್ತದೆ. ಆದ್ದರಿಂದ ಮನುಷ್ಯನ ಕಣ್ಣಿಗೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಸುಮಾರು 25 ವರ್ಷಗಳ ಕಾಲ ಸಮುದ್ರದ ಅಡಿಯಲ್ಲಿ ಈ ಜೀವಿಗಳು ವಾಸಿಸುತ್ತವೆ. ಇದನ್ನು ಓದಿ: ಸಮುದ್ರದಲ್ಲಿ ಸಿಕ್ತು ಟನ್ ಗಟ್ಟಲೇ ಅಪರೂಪದ ಕಾರ್ಗಿಲ್ ಮೀನು 

    ಡಿ.6 ರಂದು ಕಾಣಿಸಿಕೊಂಡ ಚಂಡಮಾರುತ ಈ ಹುಳಗಳನ್ನು ಸಮುದ್ರದ ಆಳದಿಂದ ದಡಕ್ಕೆ ತಂದು ಎಸೆದಿದೆ. ಮಣ್ಣಿನ ಅಡಿಯ 1 ಇಂಚಿನ ಆಳದಲ್ಲಿ ಇವು ವಾಸಿಸುತ್ತವೆ. ಆ ವೇಳೆ ‘ಯು’ ಅಕ್ಷರದ ರೀತಿಯಲ್ಲಿ ಕಂಡು ಬರುವುದರಿಂದ ವಿಜ್ಞಾನಿಗಳು ಇವುಗಳನ್ನು ‘ಇನ್‍ಕೀಪರ್’ ಎಂದು ಕರೆದಿದ್ದಾರೆ. ಇವುಗಳಿಗೆ ಚಾಕು ಆಕಾರದ ಅಂಗವಿದ್ದು, ನೀರಲ್ಲಿ ಈಜಲು ಹಾಗೂ ಆಹಾರ ಸೇವಿಸಲು ಇವುಗಳನ್ನು ಬಳಕೆ ಮಾಡಿಕೊಳ್ಳುತ್ತದೆ.

    ಸುಮಾರು 12 ಇಂಚಿನಷ್ಟು ಉದ್ದ ಬೆಳೆಯುವ ಈ ಹುಳಗಳು ಸಮುದ್ರದ ಆಳದಲ್ಲಿ ದೊರೆಯುವ ಬ್ಯಾಕ್ಟೀರಿಯಾ ಅಥವಾ ಸಣ್ಣ ಸಣ್ಣ ಜೀವಿಗಳನ್ನು ಸೇವಿಸುತ್ತವೆ. ಲೋಳೆಯಂತಹ ಪರದೆಯನ್ನು ಬಳಸಿ ತಮಗೇ ಬೇಕಾದ ಆಹಾರವನ್ನು ಸೆರೆಹಿಡಿಯುತ್ತವೆ. ಈ ಜೀವಿಗಳಿಗೆ 300 ದಶಲಕ್ಷ ವರ್ಷಗಳ ಇತಿಹಾಸವಿದೆ ಎಂದು ವಿಜ್ಞಾನಿಗಳು ಪುರಾವೆಗಳನ್ನು ನೀಡಿದ್ದಾರೆ.

    ಇವುಗಳ ಗಾತ್ರ ಹಾಗೂ ಆಕಾರ, ಮೃದವಾದ ದೇಹದ ಕಾರಣದಿಂದ ಸಾಕಷ್ಟು ತೊಂದರೆಗಳನ್ನು ಹೊಂದಿದ್ದು, ವಿಜ್ಞಾನಿಗಳು ಇವುಗಳನ್ನು ನಿಷ್ಕ್ರಿಯ ಜೀವಿಗಳು ಎಂದು ಕರೆಯುತ್ತಾರೆ. ಅಮೆರಿಕ, ಕೊರಿಯಾ, ಜಪಾನ್, ಚೀನಾದ ಸಮುದ್ರ ಭಾಗಗಳಲ್ಲಿ ಇವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಹುಳಗಳನ್ನು ತಿನ್ನಲಾಗುತ್ತದೆ. ಸೇವಿಸಿದವರು ಉಪ್ಪು, ಸಿಹಿ ಎರಡು ರೀತಿಯ ಅನುಭವ ಆಗಿದೆ ಎಂದು ತಿಳಿಸಿದ್ದಾರೆ.

  • ಸಮುದ್ರದಾಳದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

    ಸಮುದ್ರದಾಳದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

    ಕಾರವಾರ: ಮದುವೆ ಎನ್ನುವುದು ಜೀವನದ ಪ್ರಮುಖ ಘಟನೆಯಲ್ಲಿ ಒಂದು. ಈ ವಿವಾಹವನ್ನು ವಾರ್ಷಿಕೋತ್ಸವನ್ನು ವಿಶೇಷವಾಗಿ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿದ ದಂಪತಿ ಸಮುದ್ರದಾಳದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

    ಮುರುಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಕೊಲ್ಲಾಪುರ ಮೂಲದ ಡಾ.ಚೇತನ್ ಮತ್ತು ದೀಪಿಕಾ.ಎಸ್ ರವರು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಮುರುಡೇಶ್ವರ ಸಮುದ್ರದಾಳದಲ್ಲಿ 35 ನಿಮಿಷ ಪರಸ್ಪರ ಹೂವುಗಳನ್ನು ನೀಡಿ ಮೀನುಗಳ ಜೊತೆ ಈಜಾಡಿ ಸಂಭ್ರಮಿಸಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಇದಕ್ಕೆ ಮುರಡೇಶ್ವರದ ನೇತ್ರಾಣಿ ಅಡ್ವೇಂಚರ್ ಸಾಹಸ ಸಂಸ್ಥೆ ವೇದಿಕೆ ಒದಗಿಸಿತ್ತು.

    ಮದುವೆಯಾದ ದಿನದ ಸವಿ ನೆನಪನ್ನು ಮರೆಯದ ರೀತಿ ನೆನಪಿರಬೇಕು ಎಂಬ ಹಂಬಲ ಹೊಂದಿದ್ದ ಈ ಜೋಡಿ ಆಯ್ಕೆ ಮಾಡಿಕೊಂಡಿದ್ದು ಸಮುದ್ರಾಳವನ್ನು. ಆದರೇ ಸಮುದ್ರದಾಳದಲ್ಲಿ ಇಳಿಯಲು ತಾಂತ್ರಿಕ ಪರಿಣಿತಿ ಬೇಕು. ಇವೆಲ್ಲದರ ನಡುವೆ ಹೆಚ್ಚು ಕಮ್ಮಿಯಾದರೂ ಪ್ರಾಣ ಪಕ್ಷಿ ಹಾರಿಹೋಗುವ ಭಯವೂ ಉಂಟು. ಹೀಗಾಗಿ ತಮ್ಮ ಈ ಬಯಕೆಯನ್ನು ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ ಸಂಸ್ಥೆಯ ಗಣೇಶ್ ರವರ ಬಳಿ ಹಂಚಿಕೊಂಡಿದ್ದರು.

    ದಂಪತಿಯ ಆಸೆಯನ್ನು ಈಡೇರಿಸಲು ಮುರುಡೇಶ್ವರದ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿರುವ ನೇತ್ರಾಣಿ ದ್ವೀಪಕ್ಕೆ ಕರೆದೊಯ್ದು ಆಕ್ಸಿಜನ್ ತುಂಬಿದ ಸಿಲಿಂಡರ್ ಅಳವಡಿಸಿ ಸಮುದ್ರದಾಳಕ್ಕೆ ಕರೆದೊಯ್ದರು. ಇಲ್ಲಿ ಒಬ್ಬರಿಗೊಬ್ಬರು ಹೂ ಗುಚ್ಚ ನೀಡುವ ಮೂಲಕ ಸಂತಸದ ಮದುರ ಕ್ಷಣದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ 35 ನಿಮಿಷಕ್ಕೂ ಹೆಚ್ಚುಕಾಲ ಜೋಡಿಯಾಗಿ ಸಮುದ್ರದಾಳದಲ್ಲಿ ಮೀನುಗಳ ಜೊತೆ ಈಜಾಡಿ ಜೋಡಿ ಮೀನಿನಂತೆ ಸಂಚರಿಸಿ ಸಂತಸ ಪಟ್ಟು ಮದುರ ಗಳಿಗೆಯನ್ನು ಜೀವನದ ಮದುರ ಕ್ಷಣವಾಗಿ ದಾಖಲಿಸಿದರು.

  • ಮದ್ಯದ ಬಾಟಲ್‍ನಲ್ಲಿ ಕಲಾಕೃತಿ- ಕುಮಟಾ ಯುವ ಬ್ರಿಗೇಡ್‍ನಿಂದ ಪರಿಸರ ಜಾಗೃತಿ

    ಮದ್ಯದ ಬಾಟಲ್‍ನಲ್ಲಿ ಕಲಾಕೃತಿ- ಕುಮಟಾ ಯುವ ಬ್ರಿಗೇಡ್‍ನಿಂದ ಪರಿಸರ ಜಾಗೃತಿ

    ಕಾರವಾರ: ಸಮುದ್ರ ತೀರದಲ್ಲಿ ಮೋಜು ಮಸ್ತಿ ಮಾಡಿ ಬಿಸಾಡಿದ ಮದ್ಯದ ಬಾಟಲ್‍ನಲ್ಲಿ ಕುಮಟಾ ಯುವ ಬ್ರಿಗೇಡ್ ಕಲಾಕೃತಿ ನಿರ್ಮಾಣ ಮಾಡಿ ಪರಿಸರ ಜಾಗೃತಿ ಮೂಡಿಸಿದ್ದಾರೆ.

    ಕರಾವಳಿಯ ಕಡಲ ತೀರ, ಇಲ್ಲಿನ ಸುಂದರ ಸಮುದ್ರಗಳನ್ನು ನೋಡಲು ರಾಜ್ಯ ಹೊರ ರಾಜ್ಯದ ಜನರು ಇಲ್ಲಿಗೆ ಬರುತ್ತಾರೆ. ಕೆಲವರು ಪ್ರಕೃತಿ ಸೌಂದರ್ಯ ಸವಿಯಲು ಬಂದರೆ, ಕೆಲವರು ಮೋಜು ಮಸ್ತಿ ಮಾಡಲು ಕಡಲ ಕಿನಾರೆಗೆ ಬರುತ್ತಾರೆ. ಹೀಗೆ ಪ್ರವಾಸದ ನೆಪದಲ್ಲಿ ಸಮುದ್ರ ತೀರಕ್ಕೆ ಬಂದು ಮದ್ಯ ಸೇವಿಸಿ ಬಾಟಲ್‍ಗಳನ್ನು ಕಡಲ ಕಿನಾರೆಯಲ್ಲಿಯೇ ಬಿಸಾಡಿ ಹೋಗುತ್ತಾರೆ. ಹೀಗೆ ಬಿಸಾಡಿದ ಮದ್ಯದ ಬಾಟಲ್‍ಗಳು ಸಮುದ್ರ ತೀರದ ಸೌಂದರ್ಯವನ್ನು ಹಾಳು ಮಾಡುವ ಜೊತೆಗೆ ಇಲ್ಲಿನ ಪರಿಸರದ ಜೀವಿಗಳಿಗೂ ತೊಂದರೆ ಉಂಟುಮಾಡುತ್ತವೆ. ಇದಕ್ಕಾಗಿ ಕುಮಟಾ ಯುವ ಬ್ರಿಗೇಡ್ ವತಿಯಿಂದ ಕುಮಟದ ವನ್ನಳ್ಳಿ ಸಮುದ್ರ ತೀರದಲ್ಲಿ ಪ್ರತಿದಿನ ಮದ್ಯದ ಬಾಟಲ್‍ಗಳನ್ನು ಹೆಕ್ಕಿ ಸ್ವಚ್ಛ ಮಾಡುತ್ತಿದ್ದರು.

    ಹೀಗೆ ಹೆಕ್ಕಿದ ಮದ್ಯದ ಬಾಟಲ್‍ಗಳೇ ಸಾವಿರಾರು ಇದ್ದು, ಇದನ್ನು ತ್ಯಾಜ್ಯ ಘಟಕಕ್ಕೆ ರವಾನೆ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಈ ಕಾರಣದಿಂದ ಕುಮಟಾ ಯುವ ಬ್ರಿಗೇಡ್ ಯುವಕರು ವನಳ್ಳಿ ಕಡಲ ತೀರದ ಸುತ್ತಮುತ್ತ ಬಿದ್ದಿರುವ ಮದ್ಯ ಬಾಟಲ್‍ಗಳನ್ನು ತಂದು ಶೇಕರಿಸಿ ಸುಮುದ್ರ ತೀರದಲ್ಲಿ ಮದ್ಯದ ಬಾಟಲ್‍ಗಳಲ್ಲಿ ಕಲಾಕೃತಿ ನಿರ್ಮಿಸುತ್ತಿದ್ದಾರೆ.

    ಕುಡಿದು ಬಿಸಾಡಿದ ಮದ್ಯದ ಬಾಟಲ್‍ನಿಂದ ಇಡೀ ಕಡಲ ತೀರದಲ್ಲಿ ಕಲಾಕೃತಿ ನಿರ್ಮಾಣ ಮಾಡುತಿದ್ದು, ಸಮುದ್ರ ತೀರವನ್ನು ಸ್ವಚ್ಛವಾಗಿಡಿ ಎನ್ನುವ ಸಂದೇಶವನ್ನು ಸಾರಿದ್ದಾರೆ. ಜೊತೆಗೆ ಪರಿಸರ ಜಾಗೃತಿ ಮೂಡಿಸಲು ಯುವ ಬ್ರಿಗೇಡ್ ಹೊರಟಿದ್ದು, ಮೊದಲ ಹಂತವಾಗಿ ಮದ್ಯದ ಬಾಟಲ್‍ಗಳ ಕಲಾಕೃತಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈ ಕಲಾಕೃತಿ ನೋಡಿಯಾದರೂ ಪ್ರವಾಸಿಗರು ಸಮುದ್ರ ತೀರವನ್ನು ಸ್ವಚ್ಛವಾಗಿಡಲಿ ಎಂಬುದು ಬ್ರಿಗೇಡ್ ಟೀಮ್‍ನ ಯುವಕರ ಆಶಯವಾಗಿದೆ.

  • ಕುದಿಯುತ್ತಿದೆ ಸಮುದ್ರದ ನೀರು- ಕಡಲ ತೀರದ ನಿವಾಸಿಗಳಲ್ಲಿ ಆತಂಕ

    ಕುದಿಯುತ್ತಿದೆ ಸಮುದ್ರದ ನೀರು- ಕಡಲ ತೀರದ ನಿವಾಸಿಗಳಲ್ಲಿ ಆತಂಕ

    ಉಡುಪಿ: ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಓಝೋನ್ ಪದರ ಡ್ಯಾಮೇಜ್ ಆಗಿದೆ. ಬಿಸಿಲಿನ ಝಳ ವಿಪರೀತವಾಗಿದೆ. ಈ ನಡುವೆ ಸಮುದ್ರ ತನ್ನ ತಾಪಮಾನ ಮತ್ತು ಮಟ್ಟವನ್ನು ಹೆಚ್ಚಿಸಿಕೊಂಡಿದ್ದು ದೇಶದ ಕರಾವಳಿ ತೀರ ಆತಂಕದಲ್ಲಿದೆ. ಪರಿಸ್ಥಿತಿ ಕೈಮೀರಿದ್ರೆ ನಗರಗಳು ಮುಳುಗೋದು ಗ್ಯಾರೆಂಟಿಯಾಗಿದೆ.

    ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ತಾಪಮಾನ ತಾರಕಕ್ಕೇರಿದೆ. ಕಳೆದ ನೂರು ವರ್ಷದಲ್ಲಿ ಭಾರತದ ತಾಪಮಾನ ಒಂದರಿಂದ ಎರಡು ಸೆಲ್ಸಿಯಸ್‍ ನಷ್ಟು ಹೆಚ್ಚಿದೆ. ತಲೆ ಮೇಲಿನ ಸೂರ್ಯ ಸುಡುತ್ತಿದ್ದಾನೆ. ತಾಪಮಾನ ಭೂಮಿಯಲ್ಲಿ ಮಾತ್ರ ಏರಿಕೆಯಾಗಿದ್ದಲ್ಲ, ಸಮುದ್ರದ ನೀರು ಕೂಡ ಕುದಿಯಲಾರಂಭಿಸಿದೆ.

    ಹವಾಮಾನ ಇಲಾಖೆಯ ತಜ್ಞರ ಸಂಶೋಧನೆಯಲ್ಲಿ ಇದು ಸಾಬೀತಾಗಿದೆ. ಕಳೆದ 50 ವರ್ಷಗಳಲ್ಲಿ 9 ಸೆಂಟೀಮೀಟರ್ ನಷ್ಟು ಸಮುದ್ರದ ಮಟ್ಟ ಏರಿಕೆಯಾಗಿದೆ. ಅಂದರೆ ಕಡಲ ತೀರದಲ್ಲಿರುವ ನಗರವಾಸಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಅರಬ್ಬೀ ಸಮುದ್ರ ಉಡುಪಿ ನಗರಕ್ಕಿಂದ ಏಳೆಂಟು ಮೀಟರ್ ನಷ್ಟು ಕೆಳಗೆ ಇದೆ. ಮಳೆಗಾಲ, ಚಂಡಮಾರುತ ಬಂದಾಗ ಅಂತರ ಕಡಿಮೆಯಾಗುತ್ತದೆ. ಸಮುದ್ರದ ಅಬ್ಬರ ವರ್ಷದಿಂದ ವರ್ಷಕ್ಕೆ ಜಾಸ್ತಿಯಾದ್ರೆ ಒಂದಲ್ಲ ಒಂದು ದಿನ ಕಾರವಾರ, ಉಡುಪಿ- ಮಂಗಳೂರು ನಗರಗಳು ಮುಳುಗೋದು ಪಕ್ಕಾ ಆಗಿದೆ.

    ವರ್ಷದಿಂದ ವರ್ಷಕ್ಕೆ ಒಂದೆರಡು ಮಿಲಿಮೀಟರ್ ಸಮುದ್ರದ ಮಟ್ಟ ಏರಿಕೆಯಾಗಿ ಭೂಮಿಯನ್ನು ಕಬಳಿಸುತ್ತಿದೆ. ಆದರೆ ಕಳೆದ 10 ವರ್ಷದ ಅಂಕಿ ಅಂಶಗಳಲ್ಲಿ ವರ್ಷಕ್ಕೆ 7 ಮಿಲಿ ಮೀಟರ್ ಸಮುದ್ರ ಭೂ ಭಾಗವನ್ನು ಕಬ್ಜ ಮಾಡುತ್ತಿದೆ. ಈ ಬಗ್ಗೆ ರಾಜ್ಯಸಭೆಯಲ್ಲೂ ಚರ್ಚೆಯಾಗಿದೆ. ಸಚಿವ ಬಾಬುಲ್ ಸುಪ್ರಿಯೋ ಸದನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಭೂಮಿಯ ಉಷ್ಣಾಂಶ ಇಳಿಸುವ ಕ್ರಮ ಆಗದಿದ್ದರೆ ಸಮುದ್ರದ ನೀರು ಕರಾವಳಿಯನ್ನು ಮೊದಲು ಆವರಿಸುವ ದಿನ ದೂರವಿಲ್ಲ. ಸಮುದ್ರದ ಮಟ್ಟ ಏರಿಕೆಗೆ ಹಿಮಾಲಯ ಮತ್ತು ಅಂಟಾರ್ಟಿಕಾದಲ್ಲಿ ಹಿಮ ಕರಗಿ ನೀರಾಗುತ್ತಿರುವುದು ಕಾರಣವಂತೆ. ದುಂಡಗಿರುವ ಭೂಮಿಲ್ಲಿ ಸಮುದ್ರ ಒಂದಕ್ಕೊಂದು ಅಂಟಿಕೊಂಡಿರುವುದಿರಿಂದ ಈ ವಿದ್ಯಾಮಾನ ನಡೆಯುತ್ತದೆ ಎಂದು ಪರಿಸರ ವಿಜ್ಞಾನಿ ಎನ್ ಎ ಮಧ್ಯಸ್ಥ ಹೇಳುತ್ತಾರೆ.

    ಅರಬ್ಬೀ ಮತ್ತು ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ಕೂಡ ಹೆಚ್ಚಾಗಿದೆ. ಕರಾವಳಿ ಭಾಗದಲ್ಲಿ ಅಕಾಲಿಕ ಮಳೆ ಜಾಸ್ತಿಯಾಗಿದೆ. ಚಳಿಗಾಲ ಮಾಯವಾಗಿದ್ದು ಬೇಸಿಗೆ ಮತ್ತು ಮಳೆಗಾಲ ಮಾತ್ರ ಕಾಣಿಸುತ್ತಿದೆ. ಪರಿಸರದ ಮೇಲಿನ ದಾಳಿಯನ್ನು ನಾವು ಕಡಿಮೆ ಮಾಡದಿದ್ದರೆ ಮುಂದೊಂದು ದಿನ ಅಪಾಯ ಉಂಟಾಗುವುದರಲ್ಲಿ ಸಂಶಯವೇ ಇಲ್ಲ ಎಂಬಂತಾಗಿದೆ.