Tag: sea

  • ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯನ್ನು ಕಾಪಾಡಿ ರಿಯಲ್ ಹೀರೋ ಆದ ನೌಕಾಪಡೆ ಅಧಿಕಾರಿ

    ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯನ್ನು ಕಾಪಾಡಿ ರಿಯಲ್ ಹೀರೋ ಆದ ನೌಕಾಪಡೆ ಅಧಿಕಾರಿ

    ತಿರುವನಂತಪುರಂ: ಕೇರಳದ ಬೀಚ್‍ನಲ್ಲಿ ಆಡಲು ಹೋಗಿ, ಸಮುದ್ರ ಪಾಲಾಗುತ್ತಿದ್ದ ವ್ಯಕ್ತಿಯೋರ್ವನನ್ನು ನೌಕಾಪಡೆ ಅಧಿಕಾರಿಯೊಬ್ಬರು ಕಾಪಾಡಿದ್ದು, ಅಧಿಕಾರಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಹೌದು, ಏಪ್ರಿಲ್ 5ರ ಸಂಜೆ ಔರಂಗಬಾದ್ ಮೂಲದ ದಿಲೀಪ್ ಕುಮಾರ್ ಸಮುದ್ರದಲ್ಲಿ ಆಡುತ್ತಿರುವಾಗ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದನು. ಆಗ ದಿಲೀಪ್ ಜತೆಯಲ್ಲಿದ್ದವರು, ಆತ ಸಮುದ್ರದಲ್ಲಿ ಕೊಚ್ಚಿಕೊಂಡು ಹೋದ ಬಗ್ಗೆ ಅಳಲು ತೋಡಿಕೊಂಡು ಕಾಪಾಡುವಂತೆ ಸ್ಥಳದಲ್ಲಿದ್ದವರ ಬಳಿ ಮನವಿ ಮಾಡಿದ್ದಾರೆ. ಇದೇ ವೇಳೆಯಲ್ಲಿ ಪತ್ನಿ ಹಾಗೂ ಪುತ್ರಿಯೊಂದಿಗೆ ಲೆಫ್ಟಿನೆಂಟ್ ರಾಹುಲ್ ದಲಾಲ್ ಬೀಚ್‍ಗೆ ಆಗಮಿಸಿದ್ದು, ಗೆಳೆಯರ ಗೋಳು ಗಮನಿಸಿ ಸಮುದ್ರಕ್ಕೆ ಹಾರಿ ವ್ಯಕ್ತಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

    ಈ ಬಗ್ಗೆ ನೌಕಾಪಡೆಯು ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಅಧಿಕಾರಿಯ ಶೌರ್ಯದ ಬಗ್ಗೆ ಪೋಸ್ಟ್ ಮಾಡಿತ್ತು. ನಮ್ಮ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ರಾಹುಲ್ ದಲಾಲ್ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು, ತಮ್ಮ ಜೀವವನ್ನು ಪಣಕ್ಕಿಟ್ಟು ಸಮುದ್ರಕ್ಕೆ ಹಾರಿ, ವ್ಯಕ್ತಿಯನ್ನು ಕಾಪಾಡಿದ್ದಾರೆ. ಆತನನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ಆದರೆ ಸುಮಾರು 20 ನಿಮಿಷಗಳ ಕಾಲ ದಿಲೀಪ್ ಉಸಿರಾಡದೇ, ಪ್ರಜ್ಞೆ ತಪ್ಪಿದ್ದರು. ಆಗ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸಿದ್ದಾರೆ ಎಂದು ಬರೆದು ಫೋಟೋ ಹಾಕಿ ಪೋಸ್ಟ್ ಮಾಡಿದೆ.

    https://www.facebook.com/IndianNavy/posts/872951193059742

    ನೌಕಾ ಸಿಬ್ಬಂದಿಯ ಈ ಶೌರ್ಯ, ಮಾನವೀಯತೆ ಗುಣ ಹಾಗೂ ಜನಪರ ಕಾಳಜಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಲೆಫ್ಟಿನೆಂಟ್ ರಾಹುಲ್ ದಲಾಲ್‍ಗೆ ನೆಟ್ಟಿಗರು ಸಲಾಂ ಹೊಡೆದು ಪೋಸ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ.

  • ಸಮುದ್ರದಲ್ಲಿ ಮುಳುಗಿ 19 ವರ್ಷದ ಮಾಡೆಲ್ ಸಾವು

    ಸಮುದ್ರದಲ್ಲಿ ಮುಳುಗಿ 19 ವರ್ಷದ ಮಾಡೆಲ್ ಸಾವು

    ಕೇಪ್‍ಟೌನ್: 19 ವರ್ಷದ ಬ್ರಿಟಿಷ್ ಮಾಡೆಲ್ ಒಬ್ಬಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

    ಸಿನೀಡ್ ಮೂಡ್ಲಿಯರ್(19) ಮೃತಪಟ್ಟ ಮಾಡೆಲ್. ಸಿನೀಡ್ ಖ್ವಾಜುಲು ನಟಲ್‍ನ ಉಮ್ಲಾಹನಗರದ ರೆಸಾರ್ಟ್‍ನಲ್ಲಿ ತನ್ನ ರಜೆ ದಿನಗಳನ್ನು ಕಳೆಯುತ್ತಿದ್ದಾಗ ಈ ಘಟನೆ ನಡೆದಿದೆ. ಸಿನೀಡ್ ಮೂಲತಃ ಲಂಡನ್‍ನವಳಾಗಿದ್ದು, ಲಂಡನ್ ಮಾಡೆಲಿಂಗ್ ಏಜೆನ್ಸಿಗಾಗಿ ಕೆಲಸ ಮಾಡುತ್ತಿದ್ದಳು.

    ಸಿನೀಡ್ ಮುಳುಗುವ ವೇಳೆ ಕೂಡಲೇ ಧಾವಿಸಿದ ಜೀವರಕ್ಷಕ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದಾರೆ. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾಳೆ ಎಂದು ಸಿನೀಡ್ ತಂದೆ ಬಾಬ್ ಮೂಡ್ಲಿಯರ್ ತಿಳಿಸಿದ್ದಾರೆ.

    ಸಿನೀಡ್ ತನ್ನ ಸ್ನೇಹಿತರ ಜೊತೆ ಸಮುದ್ರದ ಬಳಿ ನಿಂತು ಸೂರ್ಯೋದಯವನ್ನು ವೀಕ್ಷಿಸುತ್ತಿದ್ದಳು. ಆಗ ಅಲ್ಲಿ ಬೀಸಿದ ಭಾರೀ ಅಲೆಗೆ ಆಕೆ ಸಮುದ್ರದಲ್ಲಿ ಬಿದ್ದಿದ್ದಾಳೆ. ಸಮುದ್ರಕ್ಕೆ ಬೀಳುವ ವೇಳೆ ಬಂಡೆಗೆ ತಲೆ ಬಡಿದು ಗಂಭಿರವಾಗಿ ಗಾಯಗೊಂಡಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಎಂದರು.

    ಸಿನೀಡ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಪದವಿಯನ್ನು ಓದುತ್ತಿದ್ದಳು. ಆಕೆ ಮೃತಪಟ್ಟಿದ್ದು ನಮ್ಮ ಕುಟುಂಬದವರಿಗೆ ಒಂದು ದೊಡ್ಡ ಕೆಟ್ಟ ಕನಸು ಎನ್ನಬಹುದು. ಆಕೆ ಮೃತಪಟ್ಟ ವಿಷಯ ತಿಳಿದು ತಕ್ಷಣ ನಾವು ಲಂಡನ್‍ನಿಂದ ದಕ್ಷಿಣ ಆಫ್ರಿಕಾಗೆ ತೆರೆಳಿದ್ದೇವೆ ಎಂದು ಸಿನೀಡ್ ತಂದೆ ಬಾಬ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುರುಡೇಶ್ವರದಲ್ಲಿ ಕೊಚ್ಚಿ ಹೋಗುತ್ತಿದ್ದ ಬಸ್ಸನ್ನು ಮೇಲೆ ತರಲು ಹರಸಾಹಸಪಟ್ಟ ಪ್ರವಾಸಿಗರು!

    ಮುರುಡೇಶ್ವರದಲ್ಲಿ ಕೊಚ್ಚಿ ಹೋಗುತ್ತಿದ್ದ ಬಸ್ಸನ್ನು ಮೇಲೆ ತರಲು ಹರಸಾಹಸಪಟ್ಟ ಪ್ರವಾಸಿಗರು!

    ಕಾರವಾರ: ಸಮುದ್ರದ ದಂಡೆಯ ಮೇಲೆ ನಿಲ್ಲಿಸಿದ್ದ ಪ್ರವಾಸಿ ಬಸ್‍ವೊಂದು ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಬಸ್ಸನ್ನು ಮೇಲೆ ತರಲು ಹರಸಾಹಸ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.

    ಶುಕ್ರವಾರ ಬೆಂಗಳೂರಿಂದ ಪ್ರವಾಸಿಗರನ್ನು ಕರೆದುಕೊಂಡು ಬಂದ ಡ್ರೈವರ್ ಬಸ್ ಅನ್ನು ಸಮುದ್ರ ತೀರದಲ್ಲೇ ನಿಲ್ಲಿಸಿದ್ದ. ಆದರೆ ಅಲೆಗಳಿಗೆ ನಿಧಾನವಾಗಿ ಮರಳು ಕೊಚ್ಚಿ ಹೋದಂತೆ ಬಸ್ ಕೂಡ ಸಮುದ್ರ ಕಡೆಗೆ ತೆರಳಿತ್ತು. ಅಷ್ಟರಲ್ಲಿ ಗಮನಿಸಿದ ಡ್ರೈವರ್ ಬಸ್ ಹತ್ತಿ ಹಿಂದೆ ತರುವ ಪ್ರಯತ್ನ ನಡೆಸಿದ್ದರಾದರೂ ಪ್ರಯೋಜನವಾಗಿರಲಿಲ್ಲ.

    ತಕ್ಷಣ ಪ್ರವಾಸಿಗರು ಬಸ್ಸನ್ನು ಹಗ್ಗದಿಂದ ಎಳೆಯಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗದೇ ಇದ್ದಾಗ ಸ್ಥಳೀಯರ ಟ್ರ್ಯಾಕ್ಟರ್‍ಗೆ ಹಗ್ಗ ಕಟ್ಟಿ ಎಳೆಯಲು ಪ್ರಯತ್ನಿಸಿದ್ದರಾದರು ಪ್ರಯೋಜನವಾಗಿರಲಿಲ್ಲ. ಕೊನೆಗೆ ಕ್ರೇನ್ ಮೂಲಕ ಎಳೆದು ಬಸ್ಸನ್ನು ತೆಗೆಯಲಾಯಿತು.

    ಮುರುಡೇಶ್ವರದ ಕಡಲ ತೀರದಲ್ಲಿ ಪಾರ್ಕಿಂಗ್ ಮಾಡಿದ್ದ ಬಹುತೇಕ ಪ್ರವಾಸಿ ಬಸ್‍ಗಳು ಸಾಕಷ್ಟು ಬಾರಿ ಬಿದ್ದಿದ್ದವು. ಆದರೆ ಈ ಬಾರಿ ಬಸ್ ಸಮುದ್ರದಲ್ಲಿ ಕೊಚ್ಚಿ ಹೋಗಿ ಕೆಲ ಕಾಲ ಪ್ರವಾಸಿಗರು ಆತಂಕಕ್ಕೊಳಗಾಗುವಂತೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಸಿರು ಬಣ್ಣಕ್ಕೆ ತಿರುಗಿದೆ ಅರಬ್ಬೀ ಸಮುದ್ರ- ಆತಂಕದಲ್ಲಿ ಮೀನುಗಾರರು

    ಹಸಿರು ಬಣ್ಣಕ್ಕೆ ತಿರುಗಿದೆ ಅರಬ್ಬೀ ಸಮುದ್ರ- ಆತಂಕದಲ್ಲಿ ಮೀನುಗಾರರು

    ಉಡುಪಿ: ಜಿಲ್ಲೆಯ ಕಾಪು- ಪಡುಬಿದ್ರೆ ಸಮುದ್ರ ತೀರದಲ್ಲಿ ಇದ್ದಕ್ಕಿದ್ದಂತೆ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿರೋದು ಸ್ಥಳೀಯರಲ್ಲಿ ಹಾಗೂ ಮೀನುಗಾರರಲ್ಲಿ ಆತಂಕ ಸೃಷ್ಟಿಸಿದೆ.

    ಸದಾ ಆಕಾಶ ನೀಲಿ ಬಣ್ಣದಲ್ಲಿ ಕಂಗೊಳಿಸುವ ಅರಬ್ಬೀ ಸಮುದ್ರ ಏಕಾಏಕಿ ಹಸಿರು ಬಣ್ಣಕ್ಕೆ ತಿರುಗಿದೆ. ಉಡುಪಿ ಜಿಲ್ಲೆಯ ಕಾಪು- ಪಡುಬಿದ್ರೆ ವ್ಯಾಪ್ತಿಯಲ್ಲಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕೇವಲ ಸಮುದ್ರದಲ್ಲಿ ಮಾತ್ರ ನೀರು ಹಸಿರಾಗಿ ಕಾಣದೇ ಬಾಟಲಿಗೆ ತುಂಬಿದರೂ ಕೂಡಾ ನೀರು ಹಸಿರಸಿರಾಗಿಯೇ ಕಾಣಿಸುತ್ತಿದೆ. ಇದರಿಂದ ಮೀನುಗಾರರಲ್ಲಿ ಹಾಗೂ ಸಮುದ್ರ ತೀರಕ್ಕೆ ಬರುವ ಪ್ರವಾಸಿಗರಲ್ಲಿ ಆತಂಕ ಮತ್ತು ಕುತೂಹಲ ಸೃಷ್ಟಿಯಾಗಿದೆ.

    ಮೀನುಗಾರರ ಪ್ರಕಾರ, ಸಾಗರದಾಳದ ಪಾಚಿ ಮೇಲಕ್ಕೆ ಬಂದಿರಬಹುದು ಆದರಿಂದ ಸಮುದ್ರದ ನೀರು ಹಸಿರಾಗಿದೆ. ವರ್ಷಕ್ಕೊಮ್ಮೆ ಕರಾವಳಿಯ ಕೆಲವು ಭಾಗದಲ್ಲಿ ಈ ರೀತಿಯಾಗಿ ನೀರು ಕಾಣಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಆದ್ರೆ ಕಡು ಹಸಿರು ಬಣ್ಣಕ್ಕೆ ನೀರು ತಿರುಗಿರುವುದು ಜನರಲ್ಲಿ ಕೊಂಚ ಆತಂಕಕ್ಕೂ ಕಾರಣವಾಗಿದೆ.

    ಸಮುದ್ರದ ನೀರಿನಲ್ಲಿ ನೈಟ್ರೇಟ್ ಮತ್ತು ಪ್ರಾಸ್ಟೈಟ್ ರಾಸಾಯನಿಕ ಇರುತ್ತದೆ. ನದಿ ನೀರಿನಿಂದಲೂ ಈ ಎರಡು ರಾಸಾಯನಿಕ ಸಮುದ್ರಕ್ಕೆ ಸೇರುತ್ತದೆ. ಅದು ನೀರಿನಲ್ಲಿರುವ ಡೈನೋಫ್ಲೈಜಿಲೈಟ್ಸ್ ಎಂಬ ಸೂಕ್ಷ್ಮಾಣು ಜೀವಿಗಳನ್ನು ಸೆಳೆಯುತ್ತದೆ. ಆಗ ಈ ಮೂರು ಒಟ್ಟಾಗಿ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಅಷ್ಟೇ ಅಲ್ಲದೆ ಸಮುದ್ರದಲ್ಲಿ ಈ ರೀತಿ ಬದಲಾವಣೆ ಕಾಣಿಸಿಕೊಂಡಿರುವುದು ಮುಂದಿನ ವರ್ಷದ ಮೀನಿನ ಕ್ಷಾಮಕ್ಕೂ ಕಾರಣವಾಗಬಹುದು ಎಂದು ಹಿರಿಯ ಪರಿಸರ ತಜ್ಞ ಎನ್.ಎ ಮಧ್ಯಸ್ಥ ಪ್ರತಿಕ್ರಿಯಿಸಿದ್ದಾರೆ.

    ಅದೇನೇ ಆದರೂ ಕಡಲಿನ ನೀರು ಹಸಿರಾಗಿರುವುದರಿಂದ ಕರಾವಳಿಯ ಜನ ಭಯಬಿದ್ದಿದ್ದಾರೆ. ಇಲ್ಲಿನ ಕಂಪನಿಗಳಿಂದ ಬಿಟ್ಟ ತ್ಯಾಜ್ಯ ಸಮುದ್ರಕ್ಕೆ ಸೇರಿರುವುದರಿಂದ ಹೀಗಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮೀನುಗಾರಿಕಾ ಇಲಾಖೆ ಈ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಪತ್ತೆಯಾಗಿ 10 ದಿನ ಕಳೆದ್ರೂ ಪತ್ತೆಯಾಗಿಲ್ಲ ಮೀನುಗಾರರು- ಕಡಲಿನಿಂದ್ಲೇ ಅಪಹರಣ ಮಾಡಿದ್ರಾ ಉಗ್ರರು!

    ನಾಪತ್ತೆಯಾಗಿ 10 ದಿನ ಕಳೆದ್ರೂ ಪತ್ತೆಯಾಗಿಲ್ಲ ಮೀನುಗಾರರು- ಕಡಲಿನಿಂದ್ಲೇ ಅಪಹರಣ ಮಾಡಿದ್ರಾ ಉಗ್ರರು!

    ಉಡುಪಿ: ಇಲ್ಲಿನ ಮಲ್ಪೆ ಬಂದರಿನಿಂದ ಆಳಸಮುದ್ರಕ್ಕೆ ಮೀನುಗಾರಿಕೆಗೆ ಹೊರಟಿದ್ದ ಬೋಟ್ ನಾಪತ್ತೆಯಾಗಿ ಇಂದಿಗೆ 10 ದಿನ ಕಳೆದರೂ ಮೀನುಗಾರರು ಪತ್ತೆಯಾಗಿಲ್ಲ. ಅರಬ್ಬೀ ಸಮುದ್ರದ ನಡುವಿನಿಂದ ಬೋಟ್ ಸಮೇತ ಮೀನುಗಾರರನ್ನು ಪಾಕಿಸ್ತಾನದ ಉಗ್ರರು ಅಪಹರಣ ಮಾಡಿರಬಹುದು ಎಂಬ ಗುಮಾನಿ ಶುರುವಾಗಿದೆ.

    ಮಲ್ಪೆಯ ಸರ್ವ ಋತು ಬಂದರಿನಲ್ಲಿ ಕಣ್ಣು ಹಾಯಿಸಿದಷ್ಟೂ ಮೀನುಗಾರಿಕಾ ಬೋಟ್‍ಗಳೇ ಕಾಣುತ್ತವೆ. ಆದರೆ ಕಳೆದ ವಾರದಿಂದ ಇಲ್ಲಿ ನೀರವ ಮೌನ ಆವರಿಸಿದೆ. ಇದಕ್ಕೆ ಕಾರಣ ಮಲ್ಪೆ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಎಂಟು ಮಂದಿ ಮೀನುಗಾರರು ಬೋಟು ಸಮೇತ ನಾಪತ್ತೆಯಾಗಿರುವುದು. ಈ ಸಂಬಂಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

    ನಾಪತ್ತೆಯಾದವರಿಗೆ ಮಂಗಳೂರು, ಗೋವಾದ ಕರಾವಳಿ ಕಾವಲು ಪಡೆ ತೀವ್ರ ಶೋಧ ನಡೆಸುತ್ತಿದ್ದರೂ ಮೀನುಗಾರರು ಮಾತ್ರ ಪತ್ತೆಯಾಗಿಲ್ಲ. ಮೀನುಗಾರಿಕೆಗೆ ತೆರೆಳಿದ್ದ ಬೋಟ್ ಗೆ ಅಳವಡಿಸಿದ್ದ ಜಿಪಿಎಸ್ ಸಂಪರ್ಕಕ್ಕೆ ಸಿಗುತ್ತಿಲ್ಲ. 8 ಮೀನುಗಾರರ ಫೋನ್ ಗಳು ಸ್ವಿಚ್ ಆಫ್ ಆಗಿದ್ದು, ಎಲ್ಲಿ ಏನಾಗಿದೆ ಎಂಬ ಮಾಹಿತಿ ಸಿಗುತ್ತಿಲ್ಲ. ಇದರ ನಡುವೆ ಈಗ ಮೀನುಗಾರರನ್ನು ಪಾಕಿಸ್ತಾನದ ಉಗ್ರರು ಅಪಹರಿಸಿರಬಹುದು ಎಂಬ ಅನುಮಾನ ಸೃಷ್ಟಿಯಾಗಿದೆ.

    ಸಾಮಾನ್ಯವಾಗಿ ಆಳಸಮುದ್ರದ ಮೀನುಗಾರಿಕೆಗೆ ತೆರಳುವ ಬೋಟ್‍ಗಳು ಎರಡು ವಾರಗಳ ಕಾಲ ಸಮುದ್ರದಲ್ಲಿರುತ್ತವೆ. ಸುವರ್ಣ ತ್ರಿಭುಜ ಎಂಬ ಬೋಟಿನಲ್ಲಿ ಡಿಸೆಂಬರ್ 13 ರಂದು ರಾತ್ರಿ 11 ಗಂಟೆ ಸುಮಾರಿಗೆ ಹೊರಟ 8 ಮಂದಿ ಡಿಸೆಂಬರ್ 15ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದರು. ನಂತರ ಸಂಪರ್ಕ ಸಿಗದೆ ನಾಪತ್ತೆಯಾಗಿದ್ದಾರೆ. ಮೀನುಗಾರರ ಮುಖಂಡರ ಪ್ರಕಾರ ಒಂದೋ ನಾಪತ್ತೆಯಾದ ಬೋಟ್ ದರೋಡೆಗೆ ಒಳಗಾಗಿರಬಹುದು. ಇಲ್ಲವೇ ಪಾಕಿಸ್ತಾನ ಗಡಿಯ ಭಯೋತ್ಪಾದಕರು ಬೋಟನ್ನು ಹೈಜಾಕ್ ಮಾಡಿರಬಹುದು ಎಂದು ಶಂಕಿಸಲಾಗಿದೆ.

    ಈ ಹಿಂದೆ ಇಂತಹ ಅವಘಡ ಸಂಭವಿಸಿದಾಗ ಮೀನುಗಾರರು ಮೊಬೈಲ್ ಮೂಲಕ ಸಂಪರ್ಕ ಮಾಡಿ ಮಾಹಿತಿ ನೀಡುತ್ತಿದ್ದರು. ಈ ಬಾರಿ ಅಂತಹ ಯಾವುದೇ ಸುಳಿವೂ ಇಲ್ಲದೇ ಇರುವುದು ಮೀನುಗಾರರನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೋಷಕರ ಮುಂದೆಯೇ ಸಮುದ್ರಪಾಲಾದ ಕಂದಮ್ಮ

    ಪೋಷಕರ ಮುಂದೆಯೇ ಸಮುದ್ರಪಾಲಾದ ಕಂದಮ್ಮ

    ಮಂಗಳೂರು: ನಗರದ ಬನಶಂಕರಿಯ ದಂಪತಿ ಇಬ್ಬರು ಮಕ್ಕಳೊಂದಿಗೆ ಮಂಗಳೂರಿನ ಉಳ್ಳಾಲದ ಸೋಮೇಶ್ವರ ಕಡಲ ತೀರಕ್ಕೆ ತೆರಳಿದ್ದು ಈ ವೇಳೆ ಮಗು ಸಮುದ್ರದಲ್ಲಿ ಕೊಚ್ಚಿ ಹೋಗಿರುವ ದಾರುಣ ಘಟನೆ ನಡೆದಿದೆ.

    4 ವರ್ಷದ ಮೈತ್ರಿ ಕೇದ್ಕಾರ್ ಸಮುದ್ರ ಪಾಲಾದ ಮಗು ಎಂದು ತಿಳಿದು ಬಂದಿದೆ. ಚಿಂತಾಮಣಿ ಮತ್ತು ಶ್ರದ್ಧಾ ದಂಪತಿ ಉಳ್ಳಾಲದ ಸೋಮೇಶ್ವರ ಕಡಲ ಕಿನಾರೆಯಲ್ಲಿ ಮಕ್ಕಳೊಂದಿಗೆ  ಆಟವಾಡುತ್ತಿದ್ದರು. ಈ ವೇಳೆ ರಕ್ಕಸ ಅಲೆಗಳ ಹೊಡೆತಕ್ಕೆ ದಂಪತಿ ಸೇರಿದಂತೆ 4 ವರ್ಷದ ಮೈತ್ರಿ ಮತ್ತು 6 ವರ್ಷದ ಗಾರ್ಗಿ ಮುಳುಗಿದ್ದಾರೆ.

    ಈ ವೇಳೆ ಈಜು ರಕ್ಷಕ ಮೋಹನ್ ಎಂಬವರು ಚಿಂತಾಮಣಿ-ಶ್ರದ್ಧಾ ಹಾಗೂ ಗಾರ್ಗಿಯನ್ನು ರಕ್ಷಿಸಿದ್ದಾರೆ. ಆದರೆ ಮೈತ್ರಿ ರಕ್ಕಸದ ಅಲೆಗಳ ಮುಂದೆ ಮರೆಯಾಗಿದ್ದಾಳೆ. ಸದ್ಯ ಎಲ್ಲರಿಗೂ ಕೇದ್ರಾರ್ಗೆ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ. ಆದರೆ ಮೈತ್ರಿ ಮಾತ್ರ ಸಮುದ್ರಪಾಲಾಗಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಲ್ಪೆ : ಆಳ ಸಮುದ್ರಕ್ಕೆ ತೆರಳಿದ್ದ 8 ಮೀನುಗಾರರು ನಾಪತ್ತೆ

    ಮಲ್ಪೆ : ಆಳ ಸಮುದ್ರಕ್ಕೆ ತೆರಳಿದ್ದ 8 ಮೀನುಗಾರರು ನಾಪತ್ತೆ

    ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 8 ಮಂದಿ ಮೀನುಗಾರರು ನಾಪತ್ತೆಯಾಗಿದ್ದು, ಕರಾವಳಿ ಕಾವಲು ಪಡೆ ಮೀನುಗಾರರ ಸಂಪರ್ಕಕ್ಕೆ ಪ್ರಯತ್ನ ನಡೆಸುತ್ತಿದೆ.

    ಚಂದ್ರ ಶೇಖರ, ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ಮೀನುಗಾರರು ಬೋಟ್ ಸಮೇತ ನಾಪತ್ತೆಯಾಗಿದ್ದಾರೆ.

    ಸುವರ್ಣ ತ್ರಿಭುಜ ಎಂಬ ಹೆಸರಿನ ಬೋಟ್ ಮೂಲಕ ಡಿ.13 ರಂದು ರಾತ್ರಿ 11 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದ ಇವರು, ಡಿ.15 ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದವರು. ಆದರೆ ಆ ಬಳಿಕ ಬೋಟ್‍ನಲ್ಲಿದ್ದ ಜಿಪಿಎಸ್ ಸಂಪರ್ಕವೂ ಕಳೆದುಕೊಂಡಿದೆ.

    ಸದ್ಯ ನಾಪತ್ತೆ ಆಗಿರುವ ಮೀನುಗಾರರ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕರಾವಳಿ ಕಾವಲು ಪಡೆಯಿಂದ ಮೀನುಗಾರರ ಸಂಪರ್ಕಕ್ಕೆ ಯತ್ನ ನಡೆಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2003ರಲ್ಲಿ ಮುಳುಗಿದ್ದ ಹಡಗು ಕಾರವಾರದ ಲೈಟ್ ಹೌಸ್‍ನಲ್ಲಿ ಪತ್ತೆ

    2003ರಲ್ಲಿ ಮುಳುಗಿದ್ದ ಹಡಗು ಕಾರವಾರದ ಲೈಟ್ ಹೌಸ್‍ನಲ್ಲಿ ಪತ್ತೆ

    ಕಾರವಾರ: ದುರಂತಕ್ಕೀಡಾಗಿ ಇಬ್ಬರನ್ನು ಬಲಿ ತೆಗೆದುಕೊಂಡು ಸಮುದ್ರದಿಂದ ಮೇಲೆತ್ತಲಾಗದೇ ಅರ್ಧ ಭಾಗವನ್ನು ಬಿಟ್ಟು ಹೋಗಿದ್ದ ಹಡಗು ಈಗ ಕಾರವಾರದ ಲೈಟ್ ಹೌಸ್ ನಲ್ಲಿ ಪತ್ತೆಯಾಗಿದೆ.

    ಸಮುದ್ರದಲ್ಲಿ ಎದ್ದ ಬಿರುಗಾಳಿಗೆ 2003ರಲ್ಲಿ ಓಷನ್ ಇರಾನಿ ಹೆಸರಿನ ಕಚ್ಚಾ ತೈಲ ಹಡಗು ಕಾರವಾರದ ಬಂದರಿಗೆ ಬರುವ ವೇಳೆ ಇಲ್ಲಿನ ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ದ್ವೀಪದ ಕಲ್ಲುಬಂಡೆಗೆ ಅಪ್ಪಳಿಸಿ ಸಮುದ್ರದಲ್ಲಿ ಮುಳುಗಿತ್ತು.

    ಈ ವೇಳೆ ಹದಿನೈದು ಜನರನ್ನು ರಕ್ಷಿಸಿದ್ದು ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ನಂತರ ಹಡಗಿನ ಅರ್ಧ ಭಾಗವನ್ನು ತುಂಡರಿಸಿ ಉಳಿದ ಭಾಗವನ್ನು ಮೇಲೆತ್ತಲಾಗದೆ ಅಲ್ಲಿಯೇ ಬಿಡಲಾಗಿತ್ತು. ಈಗ ಈ ಹಡಗಿನ ಅವಶೇಷಗಳಲ್ಲಿ ಬಲು ಅಪರೂಪದ ಹವಳದ ದಿಬ್ಬಗಳು ಬೆಳೆದಿದ್ದು ಕೋಟಿ ಕೋಟಿಗೆ ಬೆಲೆ ಬಾಳುತ್ತಿದೆ. ಹೀಗಾಗಿ ಇದೀಗ ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

    ಇಂದು ಲೈಟ್ ಹೌಸ್ ಬಳಿ ನೇತ್ರಾಣಿ ಅಡ್ವೆಂಚರ್ ನ ಸಿಬ್ಬಂದಿ ಸ್ಕೂಬಾ ಡೈ ಮಾಡಿದಾಗ ಈ ಹಡಗು ಹಾಗೂ ಹವಳದ ದಿಬ್ಬ ಪತ್ತೆಯಾಗಿದ್ದು ಜನರನ್ನು ಸೆಳೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೋಕರ್ಣ ಸಮುದ್ರದಲ್ಲಿ ಈಜಲು ಹೋಗಿ ಇಬ್ಬರ ಸಾವು

    ಗೋಕರ್ಣ ಸಮುದ್ರದಲ್ಲಿ ಈಜಲು ಹೋಗಿ ಇಬ್ಬರ ಸಾವು

    ಕಾರವಾರ: ಕುಟುಂಬದ ಜೊತೆಗೆ ಪ್ರವಾಸಕ್ಕೆಂದು ಬಂದು ಸಮುದ್ರದಲ್ಲಿ ಈಜಲು ಹೋಗಿ ಇಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮುಖ್ಯ ಕಡಲ ತೀರದಲ್ಲಿ ನಡೆದಿದೆ.

    ಅಂಕೋಲಾ ತಾಲೂಕಿನ ಜಮಗೋಡು ಗ್ರಾಮದ ಪ್ರಮೋದ್ ನಾಯಕ (51) ಹಾಗೂ ಅಮೋಘ ನಾಯಕ (25) ಮೃತ ದುರ್ದೈವಿಗಳು. ಇವರೊಂದಿಗೆ ಸಮುದ್ರಕ್ಕೆ ಇಳಿದಿದ್ದ ಸಂಪತ್ ಮತ್ತು ಸಂಗಮ್ ಎಂಬವರನ್ನು ರಕ್ಷಣೆ ಮಾಡಿ, ಗೋಕರ್ಣ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಆಗಿದ್ದೇನು?:
    ದೀಪಾವಳಿ ಹಬ್ಬ ನಿಮಿತ್ತ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಹಾಗೂ ಪ್ರವಾಸಕ್ಕೆ ಅಂತಾ ಪ್ರಮೋದ್ ನಾಯಕ್ ಹಾಗೂ ಕುಟುಂಬದ ಐವರು ಬಂದಿದ್ದರು. ಈ ವೇಳೆ ಸಮುದ್ರಕ್ಕೆ ಇಳಿದಿದ್ದ ನಾಲ್ವರು ಸಮುದ್ರದ ಸುಳಿಗೆ ಸಿಲುಕಿದ್ದಾರೆ. ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚೀರುತ್ತಿದ್ದ ಧ್ವನಿ ಕೇಳಿಸಿಕೊಂಡ ಸ್ಥಳೀಯರು ಹಾಗೂ ಕಡಲ ರಕ್ಷಣಾ ಸಿಬ್ಬಂದಿ ಸಹಾಯದಿಂದ ಮತ್ತಿಬ್ಬರನ್ನ ರಕ್ಷಣೆ ಮಾಡಿದ್ದಾರೆ. ಮೃತ ದೇಹವನ್ನು ಹೊರಗೆ ತೆಗೆಯಲಾಗಿದ್ದು, ಬದುಕುಳಿದದ್ದ ಸಂಪತ್ ಮತ್ತು ಸಂಗಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಡಗಿನ ಟ್ಯಾಂಕರ್ ಒಡೆದು, ಸಮುದ್ರ ಸೇರಿದ ತೈಲ

    ಹಡಗಿನ ಟ್ಯಾಂಕರ್ ಒಡೆದು, ಸಮುದ್ರ ಸೇರಿದ ತೈಲ

    ಮಂಗಳೂರು: ನಗರದ ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್‍ಎಂಪಿಟಿ) ಬಂದರಿನಲ್ಲಿ ಹಡಗಿನ ಟ್ಯಾಂಕರ್ ಒಡೆದ ಪರಿಣಾಮ ಸುಮಾರು 150 ಲೀಟರಿಗೂ ಅಧಿಕ ಪ್ರಮಾಣದ ತೈಲ ಸಮುದ್ರಕ್ಕೆ ಸೇರಿದೆ.

    ಶ್ರೀಲಂಕಾದ ಕೊಲಂಬೋದಿಂದ ಬಂದಿದ್ದ ಎಂ.ವಿ. ಎಕ್ಸ್‌ಪ್ರೆಸ್‌ ಬ್ರಹ್ಮಪುತ್ರ ಹಡಗಿನ ಟ್ಯಾಂಕರ್ ಒಡೆದ ಪರಿಣಾಮ, 150 ಲೀಟರಿಗೂ ಅಧಿಕ ಪ್ರಮಾಣದ ತೈಲ ಸಮುದ್ರ ಸೇರಿದೆ. ನಗರದ ಎನ್‍ಎಂಪಿಟಿ ಬಂದರಿನಿಂದ ಕಂಟೈನರ್ ಲೋಡ್ ಮಾಡಿ ಹಿಂದಿರುಗುವ ವೇಳೆ ಈ ಅವಘಡ ನಡೆದಿದೆ.

    ಮಾಹಿತಿಗಳ ಪ್ರಕಾರ ಹಡಗನ್ನು ಟಗ್‍ನಲ್ಲಿ ಬಂದರಿನ ಜೆಟ್ಟಿಯಿಂದ ಹೊರಕ್ಕೆ ಒಯ್ಯಲಾಗುತ್ತಿತ್ತು. ಈ ವೇಳೆ ಜೆಟ್ಟಿಯ ಗೋಡೆ ಹಡಗಿನಲ್ಲಿದ್ದ ಟ್ಯಾಂಕರ್ ಗೆ ಬಡಿದ ಪರಿಣಾಮ, ಟ್ಯಾಂಕರ್ ನಿಂದ ತೈಲ ಸೋರಿಕೆಯಾಗಿದೆ. ಕೂಡಲೇ ಎಚ್ಚೆತ್ತ ಹಡಗಿನ ಸಿಬ್ಬಂದಿ ಹಾಗೂ ಸ್ಥಳೀಯರು ಸೋರಿಕೆಯನ್ನು ತಡೆದು, ಸಮುದ್ರದಲ್ಲಿ ತೈಲ ಹರಡದಂತೆ ಕ್ರಮ ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv