Tag: school

  • ಶಾಲಾ ಮಕ್ಕಳ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ- ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ ಪ್ರಾಧಿಕಾರ

    ಶಾಲಾ ಮಕ್ಕಳ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ- ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ ಪ್ರಾಧಿಕಾರ

    ನವದೆಹಲಿ: ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳಲು ಆಧಾರ್ ಕಾರ್ಡ್ ಅನ್ನು ಶಿಕ್ಷಣ ಸಂಸ್ಥೆಗಳು ಕೇಳಬಾರದೆಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಎಚ್ಚರಿಕೆ ನೀಡಿದೆ.

    ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಶಾಲಾ ಪ್ರವೇಶಕ್ಕೆ ಆಧಾರ್ ಸಂಖ್ಯೆ ಕಡ್ಡಾಯವಲ್ಲ. ಅಲ್ಲದೇ ಶಾಲೆಗಳೂ ಸಹ ಆಧಾರ್ ಕೊಡಲೇಬೇಕೆಂದು ಕಡ್ಡಾಯಗೊಳಿಸುವಂತಿಲ್ಲ. ಒಂದು ವೇಳೆ ಶಿಕ್ಷಣ ಸಂಸ್ಥೆಗಳು ಈ ರೀತಿ ನಡೆದುಕೊಂಡರೆ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಯುಐಡಿಎಐ ಹೇಳಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಯುಐಡಿಎಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಯ್ ಭೂಷಣ್, ಈಗಾಗಲೇ ಬಹುತೇಕ ಶಾಲೆಗಳಲ್ಲಿ ಮಕ್ಕಳನ್ನು ದಾಖಲುಮಾಡಿಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಹೀಗೆ ಮಾಡುವುದು ತಪ್ಪು ಹಾಗೂ ನ್ಯಾಯಾಂಗ ನಿಂದನೆಯಾಗುತ್ತದೆ. ಅಲ್ಲದೇ ಆಧಾರ್ ಇಲ್ಲವೆಂಬ ಮಾತ್ರಕ್ಕೆ ಯಾವುದೇ ಮಗುವಿನ ಪ್ರವೇಶಕ್ಕೆ ನಿರಾಕರಣೆ ಮಾಡುವಂತಿಲ್ಲವೆಂದು ಹೇಳಿದ್ದಾರೆ.

    ಈಗಾಗಲೇ ದೆಹಲಿಯ 1,500ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ನರ್ಸರಿ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ದಾಖಲೆ ಪ್ರಕ್ರಿಯೆಗಳು ಆರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ಯುಐಡಿಎಐ ಈ ನಿರ್ಧಾರ ತೆಗೆದುಕೊಂಡಿದೆ.

    ಸುಪ್ರೀಂ ಹೇಳಿದ್ದೇನು?
    ಸರ್ಕಾರಿ ಸೌಲಭ್ಯಗಳ ಪಡೆಯಲು `ಆಧಾರ್’ ಬೇಕೋ ಅಥವಾ ಬೇಡವೋ ಎಂಬ ಗೊಂದಲಗಳಿಗೆ ಸೆಪ್ಟೆಂಬರ್ 26ರಂದು ಸುಪ್ರೀಂಕೋರ್ಟ್ ತೆರೆದಿತ್ತು. ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಎ.ಎಂ.ಖಾನ್ವಿಲ್ಕರ್, ಅಶೋಕ್‍ಭೂಷಣ್ ಅವರನ್ನು ಒಳಗೊಂಡಿದ್ದ ಪೀಠ ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಎತ್ತಿ ಹಿಡಿದಿತ್ತು.

    ಆಧಾರ್ ಮೇಲಿನ ದಾಳಿ ಸಂವಿಧಾನದ ಮೇಲೆ ದಾಳಿ ನಡೆಸಿದಂತೆ ಆಗುತ್ತದೆ. ಆಧಾರ್ ವಿಶಿಷ್ಟವಾಗಿರುವುದೇ ಉತ್ತಮವಾಗಿದ್ದು, ಈಗಾಗಲೇ ಆಧಾರ್ ಜನ ಸಾಮನ್ಯ ಬಳಿ ತಲುಪಿದ್ದು, ಅದು ದೇಶದ ಗುರುತಿನ ಪತ್ರವಾಗಿದೆ. ಈಗ ಆಧಾರ್ ವಿರೋಧಿಸಿದರೆ ಕೈಯಲ್ಲಿರುವ ಮಗುವನ್ನ ಎಸೆದಂತೆ. ಆಧಾರ್ ವಿರೋಧಿಸಿದರೆ ಸಂವಿಧಾನವನ್ನೇ ವಿರೋಧಿಸಿದಂತೆ ಎಂದು ಪೀಠ ತಿಳಿಸಿತ್ತು.

    ಯಾವುದಕ್ಕೆ ಆಧಾರ್ ಬೇಕು..?
    1. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯ.
    2. ಪ್ಯಾನ್, ಆದಾಯ ತೆರಿಗೆ (ಐಟಿ ರಿಟರ್ನ್ಸ್), ಆಸ್ತಿ ಖರೀದಿಗೆ ಆಧಾರ್ ಕಡ್ಡಾಯ.
    3. ಪ್ಯಾನ್ ನಂಬರ್ ಗೆ ಅಧಾರ್ ಕಡ್ಡಾಯವಾಗಿ ಲಿಂಕ್ ಮಾಡಲೇಬೇಕು.
    4. ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳಿಗೆ ಆಧಾರ್ ಕಡ್ಡಾಯ ಸಲ್ಲಿಸುವುದು.

    ಯಾವುದಕ್ಕೆ ಬೇಡ..?
    1. ಖಾಸಗಿ ಸಂಸ್ಥೆಗಳು ಆಧಾರ್ ಕೇಳುವಂತಿಲ್ಲ
    2. ಆಧಾರ್ ಮಾಹಿತಿ ಅಥವಾ ದತ್ತಾಂಶವನ್ನು 6 ತಿಂಗಳಕ್ಕೂ ಹೆಚ್ಚಿನ ಕಾಲ ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ.
    3. ಎಲ್ಲ ಬ್ಯಾಂಕ್‍ಗಳಿಗೆ ಆಧಾರ್ ಮಾಹಿತಿ ಕೊಡುವಂತಿಲ್ಲ.
    4. ಸೆಕ್ಷನ್ 7ರ ಪ್ರಕಾರ ಶಾಲೆಗಳ ಪ್ರವೇಶಾತಿ ವೇಳೆ ಆಧಾರ್ ಕೊಡುವ ಅಗತ್ಯವಿಲ್ಲ.
    5. ಸಿಬಿಎಸ್‍ಸಿ, ಯುಜಿಸಿ, ನೀಟ್ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ.
    6. ಸಿಮ್ ಖರೀದಿ, ಪೇಟಿಎಂ, ಫೋನ್ ಪೇ ಸೇರಿದಂತೆ ಡಿಜಿಟಲ್ ಪೇಮೆಂಟ್ ಆ್ಯಪ್ ಗಳಿಗೆ ಕಡ್ಡಾಯವಲ್ಲ.
    7. ಸೆಕ್ಷನ್ 2(ಬಿ) ಅಕ್ರಮ ವಲಸಿಗರಿಗೆ ಆಧಾರ್ ಕೊಡುವಂತಿಲ್ಲ.
    8. ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವ ಅವಶ್ಯಕತೆಯಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಬ್ಲಿಕ್ ಟಿವಿ ಆಯೋಜನೆಯಲ್ಲಿ ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋ-ಇವತ್ತೇ ಕೊನೆ ದಿನ, ಮಿಸ್ ಮಾಡಿಕೊಳ್ಳದೇ ಬನ್ನಿ

    ಪಬ್ಲಿಕ್ ಟಿವಿ ಆಯೋಜನೆಯಲ್ಲಿ ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋ-ಇವತ್ತೇ ಕೊನೆ ದಿನ, ಮಿಸ್ ಮಾಡಿಕೊಳ್ಳದೇ ಬನ್ನಿ

    ಬೆಂಗಳೂರು: ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋ ಆಯೋಜಿಸಿದೆ. ಈ ಎಜುಕೇಷನ್ ಎಕ್ಸ್ ಪೋಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಈ ಎಜುಕೇಶನ್ ಎಕ್ಸ್ ಪೋ ಗೆ ಪೋಷಕರು ಉತ್ತಮ ರೆಸ್ಪಾನ್ಸ್ ಕೊಟ್ಟಿದ್ದಾರೆ. ಎಕ್ಸ್ ಪೋ ಉದ್ಘಾಟನೆಯನ್ನ ಬಿಜಿಎಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಕಾಶ್ ನಾಥ್ ಸ್ವಾಮೀಜಿ, ಗಾರ್ಡನ್ ಸಿಟಿ ಯುನಿವರ್ಸಿಟಿಯ ಚೇರ್ಮನ್ ಡಾ. ವಿ.ಜೆ.ಜೋಸೆಫ್, ಕೆಂಬ್ರಿಡ್ಜ್ ಸಂಸ್ಥೆಯ ಚಕ್ರವರ್ತಿ, ಪಬ್ಲಿಕ್ ಟಿವಿಯ ಸಿಇಓ ಅರುಣ್ ಕುಮಾರ್ ಹಾಗೂ ಪಬ್ಲಿಕ್ ಟಿವಿ ಮಾರ್ಕೆಟಿಂಗ್ ಹೆಡ್ ಹರೀಶ್ ನೆರವೇರಿಸಿದರು.

    ಇಂದು ಈ ಎಜುಕೇಶನ್ ಎಕ್ಸ್ ಪೋಗೆ ಎರಡನೇ ಹಾಗೂ ಕೊನೆ ದಿನ. ಮೊದಲ ದಿನವೇ 1000 ಕ್ಕೂ ಹೆಚ್ವು ಪೋಷಕರು ಎಕ್ಸ್ ಪೋ ಆಗಮಿಸಿ ತಮ್ಮ ಮಕ್ಕಳಿಗೆ ಸೂಕ್ತವಾದ ಶಾಲೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಒಂದು ಜಾಗದಲ್ಲಿ ಇಷ್ಟೊಂದು ಶಾಲೆಗಳ ಬಗ್ಗೆ ಮಾಹಿತಿ ಸಿಗುತ್ತಿದ್ದು ಇದು ಅತ್ಯುತ್ತಮ ಕೆಲಸ ಎಂದು ಪೋಷಕರು ಹೇಳುತ್ತಿದ್ದಾರೆ.

    ಇಂದು ಬೆಳಗ್ಗೆ 9:30 ಯಿಂದ ಸಂಜೆ 6:30 ವರೆಗೂ ಏಕ್ಸ್ ಪೋ ನಡೆಯಲಿದೆ. ಸೆಕೆಂಡ್ ಡೇಯಲ್ಲಿ ಎಕ್ಸ್ ಪೋಗೆ ಬರುವ ಪೋಷಕರಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ಪ್ರೊಫೆಸರ್ ಶ್ರೀಧರ್ ಮೂರ್ತಿ ಅವರು ಉಪನ್ಯಾಸ ನೀಡಲಿದ್ದಾರೆ. ಜೊತೆಗೆ ಮಕ್ಕಳ ಮೇಲೆ ಶಿಕ್ಷಣದ ಜೊತೆ ಮ್ಯೂಸಿಕ್ ಎಷ್ಟು ಪ್ರಭಾವ ಬೀರುತ್ತೆ..? ಮ್ಯೂಸಿಕ್‍ನ ಅಗತ್ಯದ ಬಗ್ಗೆ ವಿಶ್ವನಾಥ್ ಪ್ರಸಾದ್ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಇದರೊಂದಿಗೆ ಮಕ್ಕಳಿಗಾಗಿ ಡ್ರಾಯಿಂಗ್ ಅಂಡ್ ಪೇಂಟಿಂಗ್ ಸ್ಪರ್ಧೆ ಕೂಡ ಇರಲಿದೆ.

    ಪಬ್ಲಿಕ್ ಟಿವಿ ಆಯೋಜಿಸಿರುವ ಎಕ್ಸ್ ಪೋನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಷ್ಠಿತ 25 ಕ್ಕೂ ಹೆಚ್ಚು ವಿದ್ಯಾಕೇಂದ್ರಗಳು ಒಂದೇ ಸೂರಿನಡಿಯಲ್ಲಿ ತಮ್ಮ ಸಂಸ್ಥೆಯ ಬಗ್ಗೆ ವಿವರಗಳನ್ನ ಪೋಷಕರಿಗೆ ತಿಳಿಸುತ್ತಿದ್ದಾರೆ. ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್‍ನ ಕಾಳಿಂಗ ಹಾಲ್‍ನಲ್ಲಿ ನಡೆಯುತ್ತಿರುವ ಈ ಎಕ್ಸ್ ಪೋಗೆ ಎಲ್ಲರಿಗೂ ಉಚಿತ ಪ್ರವೇಶವಿದೆ. ತಮ್ಮ ಮಕ್ಕಳಿಗಾಗಿ ಪೋಷಕರು ಮಿಸ್ ಮಾಡ್ದೇ ಈ ಎಕ್ಸ್ ಪೋ ಗೆ ಬಂದು ತಮಗೆ ಬೇಕಾದ ಡ್ರೀಮ್ ಸ್ಕೂಲ್ ಬಗ್ಗೆ ಮಾಹಿತಿ ಪಡೆದುಕೊಂಡು, ಅಡ್ಮಿಶನ್ ಕೂಡ ಮಾಡಿಕೊಳ್ಳಬಹುದಾಗಿದೆ. ಮತ್ತೆಕೇ ತಡ ಮಾಡ್ತಿದ್ದೀರಾ ಬನ್ನೀ ಪಬ್ಲಿಕ್ ಟಿವಿ ಆಯೋಜಿಸಿರೋ ಸಾಮಾಜಿಕ ಕಳಕಳಿಯ ಡ್ರೀಮ್ಸ್ ಸ್ಕೂಲ್ ಎಜುಕೇಶನ್ ನಲ್ಲಿ ಭಾಗಿಯಾಗಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಮ ಶಾಲೆಗೆ ಕಳುಹಿಸುತ್ತಿಲ್ಲ- 3ರ ಪೋರಿಯಿಂದ ಪೊಲೀಸ್ ಠಾಣೆಯಲ್ಲಿ ದೂರು!

    ಅಮ್ಮ ಶಾಲೆಗೆ ಕಳುಹಿಸುತ್ತಿಲ್ಲ- 3ರ ಪೋರಿಯಿಂದ ಪೊಲೀಸ್ ಠಾಣೆಯಲ್ಲಿ ದೂರು!

    ಲಕ್ನೋ: ಉತ್ತರಪ್ರದೇಶದ ಗೋರಖ್‍ಪುರ ಜಿಲ್ಲೆಯ ಮೂರು ವರ್ಷದ ಪೋರಿಯೊಬ್ಬಳು ತನ್ನ ತಾಯಿ ಶಾಲೆಗೆ ಕಳುಹಿಸುತ್ತಿಲ್ಲವೆಂದು ಪೊಲೀಸರ ಬಳಿಯೇ ದೂರನ್ನು ನೀಡಿದ್ದಾಳೆ.

    ಸಂತ ಕಬೀರ್ ನಗರದ ಮಕ್ಸೂದ್ ಖಾನ್ ಹಾಗೂ ಅಸ್ಮಾ ಖಾನ್ ದಂಪತಿಯ ಪುತ್ರಿ ಫಾಲಕ್ ತನ್ನ ತಾಯಿಯ ವಿರುದ್ಧವೇ ದೂರನ್ನು ನೀಡಿದ್ದಾಳೆ. ಫಾಲಕ್ ತನ್ನ ತಾಯಿಯ ವಿರುದ್ಧವೇ ದೂರನ್ನ ನೀಡಿದ್ದನ್ನು ಕಂಡ ಪೊಲೀಸರು ಬಾಲಕಿಯ ತೊದಲು ಮಾತಿಗೆ ಮರುಳಾಗಿದ್ದಾರೆ. ಅಲ್ಲದೇ ಆಕೆಯನ್ನು ಖುದ್ದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರವರು ಅವರ ಮನೆಗೆ ಕರೆದುಕೊಂಡು ಹೋಗಿ, ಬಾಲಕಿಯ ಸಮಸ್ಯೆಯನ್ನು ಬಗೆಹರಿಸಿದ್ದಾರೆ.

    ಬಾಲಕಿಯ ತಂದೆ ಮುಂಬಯಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ತಾಯಿಯೊಂದಿಗೆ ಕಬೀರ್‍ನಗರದಲ್ಲಿ ವಾಸವಾಗಿದ್ದಳು. ತಾಯಿ ಯಾವಾಗಲೂ ತನ್ನ 7 ತಿಂಗಳ ತಮ್ಮನ್ನನ್ನು ನೋಡಿಕೊಳ್ಳುತ್ತಾ, ತನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲವೆಂದು ಕೋಪಗೊಂಡು ಮನೆಯ ಹತ್ತಿರವಿರುವ ಪೊಲೀಸ್ ಠಾಣೆಗೆ ಒಬ್ಬಳೇ ಹೋಗಿದ್ದಾಳೆ. ಅಲ್ಲದೇ ದಾರಿಯಲ್ಲಿ ಪೊಲೀಸ್ ಠಾಣೆ ಎಲ್ಲಿದೆ ಎಂದು ಕೇಳುತ್ತಾ, ಸರಿಯಾಗಿ ಪಂಚಪೋಖ್ರಿ ಪೊಲೀಸ್ ಠಾಣೆಗೆ ಹೋಗಿ ದೂರುನ್ನು ನೀಡಿದ್ದಾಳೆ.

    ಈ ಕುರಿತು ಮಾತನಾಡಿದ ಸಬ್ ಇನ್ಸ್‌ಪೆಕ್ಟರ್ ಜಿತೇಂದ್ರ ಯಾದವ್, ಮಕ್ಕಳು ಸಾಮಾನ್ಯವಾಗಿ ಪೊಲೀಸರೆಂದರೆ ಭಯಗೊಳ್ಳುತ್ತಾರೆ. ಆದರೆ ನನ್ನಲ್ಲಿಗೆ ಬಂದ ಬಾಲಕಿ, ನೀವು ನಮ್ಮ ಮನೆಗೆ ಬಂದು ಅಮ್ಮನಿಗೆ ಗದರಿಸಬೇಕು. ಆಕೆ ನನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲ. ಒಣ ಹುಲ್ಲಿನ ಹಾಸಿಗೆ ಮೇಲೆ ಮಲಗಿಸುತ್ತಾಳೆ. ಅಷ್ಟೇ ಅಲ್ಲ ನನ್ನ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಸದಾ 7 ತಿಂಗಳ ತಮ್ಮನ ಕಡೆಗೆ ಕಾಳಜಿ ವಹಿಸುತ್ತಾಳೆ ಎಂದು ದೂರಿದ್ದಳು. ನನ್ನ ಜೀವನದ ಅತಿ ಚಿಕ್ಕ ದೂರುದಾರಳನ್ನು ಕಂಡು ನನಗೆ ರೋಮಾಂಚನವಾಯಿತು ಎಂದು ಹೇಳಿದ್ದಾರೆ.

    ಬಾಲಕಿಯೊಂದಿಗೆ ಆಕೆಯ ಮನೆಗೆ ಹೋಗಿ, ಆಕೆಯನ್ನು ಪ್ರತಿದಿನ ಶಾಲೆಗೆ ಕಳುಹಿಸಿ ಮತ್ತು ಮಗನಂತೆ ಆಕೆಯ ಬಗ್ಗೆ ಕೂಡ ಗಮನಹರಿಸುವಂತೆ ತಾಯಿಯ ಬಳಿ ಹೇಳಿದ್ದೇನೆ. ತಾಯಿಯೂ ಸಹ ಮಗಳನ್ನು ಪ್ರತಿದಿನ ಶಾಲೆಗೆ ಕಳುಹಿಸಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ಪುಟ್ಟ ಮಗುವಿರುವುದರಿಂದ ಫಾಲಕ್ ಕಡೆ ಹೆಚ್ಚಿನ ಗಮನ ನೀಡಲಾಗದೇ ಇರುವುದನ್ನು ಆಕೆಯ ತಾಯಿ ಒಪ್ಪಿಕೊಂಡಿದ್ದಾರೆಂದು ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಫಾಲಕ್, ಪೊಲೀಸ್ ಅಂಕಲ್ ತುಂಬ ಒಳ್ಳೆಯವರು. ನಾನು ಇವತ್ತು ಶಾಲೆಗೆ ಹೋಗಿದ್ದೆ. ನಾನು ಒಂದು ದಿನ ಕೂಡ ಶಾಲೆ ತಪ್ಪಿಸಲು ಬಯಸುವುದಿಲ್ಲ. ನಾನು ಚೆನ್ನಾಗಿ ಓದಿ ಡಾಕ್ಟರ್ ಆಗಬೇಕೆಂದು ಹೇಳಿಕೊಂಡಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

    ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

    ಬಳ್ಳಾರಿ: ಶಾಲೆಯಲ್ಲಿ ನೀಡಿದ ಮಧ್ಯಾಹ್ನದ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಗದ್ದಿಕೇರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಪ್ರೌಢಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ಮಧ್ಯಾಹ್ನ ಬಿಸಿಯೂಟ ಸೇವಿಸುತ್ತಿದಂತೆ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಕೂಡಲೇ ವಿದ್ಯಾಥಿಗಳನ್ನು ಸ್ಥಳೀಯ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಸದ್ಯ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

    ಶಾಲೆಯಲ್ಲಿಯೇ ತಯಾರಿಸಲಾಗಿದ್ದ ಊಟದಲ್ಲಿ ಹಲ್ಲಿ ಬಿದ್ದ ಕಾರಣ ಈ ಅವಘಡ ನಡೆದಿದೆ ಎಂಬ ಮಾಹಿತಿ ಲಭಿಸಿದೆ. ಯಾವುದೇ ಶಾಲೆಯಲ್ಲಿ ಬಿಸಿಯೂಟ ತಯಾರದ ಬಳಿಕ ಶಾಲೆ ಮುಖ್ಯ ಶಿಕ್ಷಕರು ಸೇವಿಸಿದ ಬಳಿಕ ವಿದ್ಯಾರ್ಥಿಗಳು ಸೇವನೆ ಮಾಡಬೇಕು. ಆದರೆ ನಿಯಮವನ್ನು ಶಿಕ್ಷಕರು ಪಾಲಿಸಿಲ್ಲ. ಒಂದೊಮ್ಮೆ ನಿಯಮ ಪಾಲನೆ ಮಾಡಿದ್ದಾರೆ ಇಷ್ಟು ಮಕ್ಕಳು ಆಸ್ವಸ್ಥರಾಗುವುದನ್ನು ತಪ್ಪಿಸುವ ಅವಕಾಶವಿತ್ತು ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟ್ಯಾಂಕರ್ ಚಕ್ರದಡಿ ಸಿಲುಕಿ 13 ವರ್ಷದ ಬಾಲಕಿ ದುರ್ಮರಣ

    ಟ್ಯಾಂಕರ್ ಚಕ್ರದಡಿ ಸಿಲುಕಿ 13 ವರ್ಷದ ಬಾಲಕಿ ದುರ್ಮರಣ

    ಚೆನ್ನೈ: ತನ್ನ ಮಾವನ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮೆಟ್ರೋ ನೀರಿನ ಟ್ಯಾಂಕರ್ ಹರಿದು 13 ವರ್ಷದ ಬಾಲಕಿಯೊಬ್ಬಳು ದುರ್ಮರಣಕ್ಕೀಡಾದ ಘಟನೆ ಚೆನ್ನೈನಲ್ಲಿ ನಡೆದಿದೆ.

    ಈ ಘಟನೆ ಚೆನ್ನೈನ ಕಿಲ್ಪಾಕ್ ಅವಡಿ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ 7.45ರ ಸುಮಾರಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ದುರ್ದೈವಿ ಬಾಲಕಿಯನ್ನು ಜೆಮಿಮಾ ಅಚ್ಚು ಮ್ಯಾಥ್ಯು ಎಂದು ಗುರುತಿಸಲಾಗಿದೆ. ಈಕೆ ಯೂನಿಯನ್ ಕ್ರಿಶ್ಚಿಯನ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು. ಅಲ್ಲದೇ ಈಕೆ ಡಾನ್ಸರ್ ಕೂಡ ಆಗಿದ್ದಳು.

    ಜಿನೋ ಅಲೆಕ್ಸ್ ಅನ್ನೋರು ತಮ್ಮ ಮಗಳನ್ನು ಬೈಕಿನ ಮುಂದೆ ಕುಳ್ಳಿರಿಸಿಕೊಂಡಿದ್ದು, ಜೆಮಿಮಾ ಹಿಂದೆ ಕುಳಿತಿದ್ದಳು. ನ್ಯೂ ಅವಡಿ ರೋಡ್ ಹಾಗೂ ಕನಲಾ ರೋಡ್ ಜಂಕ್ಷನ್ ಬಳಿ ಬೈಕನ್ನು ಓವರ್ ಟೇಕ್ ಮಾಡುವ ಭರದಲ್ಲಿ ಟ್ಯಾಂಕರ್ ಚಾಲಕ ಒಂದೇ ಸಮನೆ ಹಾರ್ನ್ ಮಾಡುತ್ತಿದ್ದನು. ಚಾಲಕನ ಹಾರ್ನ್ ನಿಂದ ಕಿರಿಕಿರಿಯಾಗಿದ್ದರಿಂದ ಜಿನೋ ಟ್ಯಾಂಕರ್ ಗೆ ಮುಂದೆ ಚಲಿಸಲು ದಾರಿ ಮಾಡಿಕೊಟ್ಟರು. ಆದ್ರೆ ಈ ವೇಳೆ ಟ್ಯಾಂಕರ್, ಬೈಕ್ ಗೆ ಹಿಂಬದಿಯಿಂದ ಗುದ್ದಿದ್ದು, ಜಿನೋ ಹಾಗೂ ಅವರ ಮಗಳು ಎಡಗಡೆಗೆ ಬಿದ್ದರೆ ಜೆಮಿಮಾ ಬಲಗಡೆಗೆ ಬಿದ್ದಿದ್ದಾಳೆ. ಹೀಗಾಗಿ ಟ್ಯಾಂಕರ್ ಆಕೆಯ ಮೆಲೆಯೇ ಹರಿದಿದೆ. ಪರಿಣಾಮ ಟ್ಯಾಂಕರ್ ಚಕ್ರದಡಿ ಸಿಲುಕಿದ್ದಾಳೆ.

    ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಜೆಮಿಮಾ ಬಲಗಡೆಗೆ ಬೀಳುತ್ತಿದ್ದಂತೆಯೇ ಆಕೆಯನ್ನ ರಕ್ಷಣೆ ಮಾಡಲು ಜಿನೋ ಪ್ರಯತ್ನಿಸಿದ್ದಾರೆ. ಆದ್ರೆ ಅದಾಗಲೇ ಆಕೆಯ ಮೇಲೆ ಟ್ಯಾಂಕರ್ ಹರಿದಿದೆ ಅಂತ ಕುಟುಂಬದ ಸ್ನೇಹಿತರಾದ ರೋಶನ್ ಥೋಮಸ್ ಹೇಳಿದ್ದಾರೆ.

    ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಯೊಬ್ಬರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜೆಮಿಮಾಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅದಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿದ್ದಾರೆ.

    ಮೃತ ಜೆಮಿಮಾ ತಾಯಿ ಮತ್ತು ತನ್ನ ಮಾವನ ಜೊತೆ ವಾಸವಾಗಿದ್ದಳು. ಜೆಮಿಮಾ ತಂದೆ ಕೇರಳದಲ್ಲಿ ಉದ್ಯೋಗದಲ್ಲಿದ್ದ ಕಾರಣ ಅಲೆಕ್ಸ್ ಆಕೆಯನ್ನು ಪ್ರತಿದಿನ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು.

    ಸ್ಥಳದಲ್ಲಿ ಜನ ಜಮಾಯಿಸುತ್ತಿದ್ದಂತೆಯೇ ಚಾಲಕ ಟ್ಯಾಂಕರ್ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ ಅದು ಸಾಧ್ಯವಾಗಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಟ್ಯಾಂಕರ್ ಚಾಲಕ 23 ವರ್ಷದ ಗೋವಿಂದರಾಜನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲೆಯಲ್ಲಿ ಅವಮಾನ- ಮನೆ ಬಿಟ್ಟು ಹೋದ ವಿದ್ಯಾರ್ಥಿ!

    ಶಾಲೆಯಲ್ಲಿ ಅವಮಾನ- ಮನೆ ಬಿಟ್ಟು ಹೋದ ವಿದ್ಯಾರ್ಥಿ!

    ಚಾಮರಾಜನಗರ: ಶುಲ್ಕ ಕಟ್ಟದ ಹಿನ್ನಲೆಯಲ್ಲಿ ಶಾಲೆಯಲ್ಲಿ ಎಲ್ಲರ ಮುಂದೆ ಅವಮಾನವಾಗಿದ್ದಕ್ಕೆ ಮನನೊಂದ ವಿದ್ಯಾರ್ಥಿ ನಾಲ್ಕು ದಿನಗಳಿಂದ ಮನೆ ಬಿಟ್ಟು ನಾಪತ್ತೆಯಾಗಿದ್ದಾನೆ.

    ಜಿಲ್ಲೆಯ ಕೊಳ್ಳೇಗಾಲದಲ್ಲಿರುವ ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ ಮನೋಜ್ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಶಾಲೆಗೆ ಶುಲ್ಕ ಕಟ್ಟುವುದು ತಡವಾಗಿದ್ದಕ್ಕೆ ಮನೋಜ್ ಮೇಲೆ ಎಂಜಲು ನೀರು ಎರಚಿ ಶಾಲಾ ಆಡಳಿತ ಮಂಡಳಿಯ ಖಜಾಂಚಿ ಎಸ್.ಎನ್.ಪ್ರಸಾದ್ ಅವಮಾನ ಮಾಡಿದ್ದರು. ಶಾಲೆಯಲ್ಲಾದ ಅವಮಾನವನ್ನು ತಾಳಲಾರದೇ ಮನನೊಂದು ಮನೋಜ್ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾನೆ. ಮಗ ಮನೆ ಬಿಟ್ಟು ಹೋಗಿರುವುದಕ್ಕೆ ಕಂಗಲಾಗಿರುವ ಪೋಷಕರು ಕಣ್ಣೀರಿಡುತ್ತಿದ್ದಾರೆ.

    ತಮ್ಮ ಮಗನ ಮೇಲೆ ಹಲ್ಲೆ ಮಾಡಿ ಅವಮಾನ ಮಾಡಿರುವ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಯ ಖಜಾಂಚಿ ಪ್ರಸಾದ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

    ಈಗಾಗಲೇ ಮನೋಜ್‍ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಖಜಾಂಚಿ ಪ್ರಸಾದ್ ವಿರುದ್ಧ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಮ, ಐ ಲವ್ ಯೂ.. ಅಂತ ಬರೆದು 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

    ಅಮ್ಮ, ಐ ಲವ್ ಯೂ.. ಅಂತ ಬರೆದು 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

    ನವದೆಹಲಿ: ಏಳನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನವದೆಹಲಿಯ ಇಂದೇರ್ ಪುರಿ ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಡಿಸೆಂಬರ್ 1 ರಂದು ಸಂಜೆ 3 ಗಂಟೆ ಸುಮಾರಿಗೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 12 ವರ್ಷದ ಬಾಲಕಿ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿಗೆ ಶಾಲೆಯ ಶಿಕ್ಷಕರೇ ಕಾರಣ ಅಂತ ಬಾಲಕಿ ತಾಯಿ ನೇರವಾಗಿ ಆರೋಪಿಸಿರುವುದಾಗಿ ಪೊಲೀಸ್ ಉಪ ಆಯುಕ್ತ ಸಮೀರ್ ಶರ್ಮಾ ತಿಳಿಸಿದ್ದಾರೆ.

    ಆತ್ಮಹತ್ಯೆಗೂ ಮುನ್ನ ಬಾಲಕಿ ತನ್ನ ಕೈಯಲ್ಲಿ, “ಅಮ್ಮ.. ಐ ಲವ್ ಯೂ.. ನಾನು ಈ ಜಗತ್ತನ್ನೇ ಬಿಟ್ಟು ಹೋಗುತ್ತಿದ್ದೇನೆ” ಅಂತ ಬರೆದುಕೊಂಡಿದ್ದಾಳೆ. ಬಾಲಕಿಗೆ ಶಾಲೆಯಲ್ಲಿ ಟೀಚರ್ ಬೈದಿದ್ದಾರೆ. ಇದರಿಂದ ಆಕೆ ಮನನೊಂದಿದ್ದಳು ಅಂತ ತಾಯಿ ಆರೋಪಿಸಿದ್ದು, ಸದ್ಯ ತಾಯಿಯ ಹೇಳಿಕೆಯ ಕುರಿತು ತನಿಖೆ ನಡೆಸುತ್ತಿರುವುದಾಗಿ ಅಂತ ಶರ್ಮಾ ಹೇಳಿದ್ದಾರೆ.

    ಬಾಲಕಿಯ ತಾಯಿ ತೀಸ್ ಹಜಾರಿ ಕೋರ್ಟ್ ನಲ್ಲಿ ವಕೀಲೆಯಾಗಿದ್ದು, ಕೆಲಸಕ್ಕೆ ಹೋಗುವ ಮೊದಲೇ ನಾನು ಆಕೆಯನ್ನು ಕೊನೆಯ ಬಾರಿ ಜೀವಂತವಾಗಿ ನೋಡಿದ್ದೆ. ಸಂಜೆ 4 ಗಂಟೆ ಸುಮಾರಿಗೆ ನಾನು ಮನೆಗೆ ವಾಪಸ್ ಬಂದು ನೋಡಿದಾಗ ಆಕೆ ಶವವಾಗಿದ್ದಳು ಅಂತ ತಾಯಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಶಾಲೆಯಲ್ಲಿ ಶಿಕ್ಷಕರಿಂದಾಗಿ ನಾನು ಅವಮಾನಿತಳಾಗಿದ್ದೇನೆ ಅಂತ ಆಕೆ ನನ್ನ ಬಳಿ ದೂರಿದ್ದಳು. ನನ್ನ ಮಗಳು ಯಾವ ಟೀಚರ್ ವಿರುದ್ಧ ದೂರು ನೀಡಿದ್ದಳೋ, ಆ ಟೀಚರ್ ಪ್ರತೀ ನಿತ್ಯ ಆಕೆಯನ್ನು ಅವಮಾನಿಸುತ್ತಿದ್ದರಂತೆ. ಅಲ್ಲದೇ ಶುಕ್ರವಾರವೂ ಕೂಡ ಬಯೋಲಾಜಿ ಲ್ಯಾಬ್ ನಲ್ಲಿ ಸುಮಾರು 10 ನಿಮಿಷಗಳ ಕಾಲ ಇತರ ವಿದ್ಯಾರ್ಥಿಗಳ ಮುಂದೆ ಅವಮಾನ ಮಾಡಿದ್ದರಂತೆ. ಇದರಿಂದ ಬೇಸರಗೊಂಡ ಆಕೆ ಶಾಲೆಯ ಬಾತ್ ರೂಮಿನಲ್ಲಿ ಹೋಗಿ ಅತ್ತಿದ್ದಾಳೆ ಅಂತ ಬಾಲಕಿ ಹೇಳಿರುವುದಾಗಿ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

    ಆಕೆ ಹಲವು ಬಾರಿ ಶಾಲೆ ಬದಲಾವಣೆ ಮಾಡುವಂತೆ ನನಗೆ ಒತ್ತಾಯಿಸಿದ್ದಳು. ಆದ್ರೆ ನಾನು, ಇವತ್ತೋ ನಾಳೆಯೋ ಸರಿಹೋಗಬಹುದೆಂದು ಸುಮ್ಮನಾಗಿದ್ದೆ. ಅಲ್ಲದೇ ಈ ವಿಚಾರ ಇಷ್ಟೊಂದು ಮುಂದುವರಿದು, ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುತ್ತಾಳೆ ಅಂತ ಅಂದುಕೊಂಡಿರಲಿಲ್ಲ ಅಂತ ತಾಯಿ ತನ್ನ ಅಳಲು ತೋಡಿಕೊಂಡಿದ್ದಾರೆ.

    ಹುಟ್ಟುಹಬ್ಬಕ್ಕೆ ಮಗಳೇ ಇಲ್ಲ:
    ಡಿಸೆಂಬರ್ 20ರಂದು ಆಕೆಯ ಹುಟ್ಟುಹಬ್ಬವಾಗಿದ್ದು, ಆಕೆಯನ್ನು ಹೊರಗಡೆ ಕರೆದುಕೊಂಡು ಹೋಗಿ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕು ಅಂತ ಯೋಚನೆ ಮಾಡಿದ್ದೆನು. ಆದ್ರೆ ಇದೀಗ ಆಕೆಯೇ ನಮ್ಮನ್ನ ಬಿಟ್ಟು ಹೋಗಿದ್ದಾಳೆ. ಆಕೆ ಒತ್ತಾಯಿಸುವಾಗಲೇ ನಾನು ಅರ್ಥಮಾಡಿಕೊಂಡು ಆಕೆಯನ್ನು ಬೇರೆ ಶಾಲೆಗೆ ಕಳುಹಿಸಬೇಕಿತ್ತು. ನಾನು ತಪ್ಪು ಮಾಡಿದೆ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.

    ಸದ್ಯ ಶಾಲೆಯ ಆಡಳಿತ ಮಂಡಳಿ ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ದೆಹಲಿ ಪೊಲೀಸರಿಗೆ ಸಲ್ಲಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಯಸ್ಸು ಕಳೆದುಕೊಂಡ ನೀರಿನ ಟ್ಯಾಂಕ್ – ಭಯದಲ್ಲೇ ಬದುಕುತ್ತಿರುವ ಗ್ರಾಮಸ್ಥರು

    ಆಯಸ್ಸು ಕಳೆದುಕೊಂಡ ನೀರಿನ ಟ್ಯಾಂಕ್ – ಭಯದಲ್ಲೇ ಬದುಕುತ್ತಿರುವ ಗ್ರಾಮಸ್ಥರು

    ಗದಗ: ಸರ್ಕಾರಿ ಶಾಲಾ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿ ನಿಂತಿರೋ ಯಮರೂಪಿ ನೀರಿನ ಟ್ಯಾಂಕ್‍ನಿಂದಾಗಿ ಗ್ರಾಮಸ್ಥರು ಭಯದಿಂದಲೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ.

    ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿರುವ ನೀರಿನ ಟ್ಯಾಂಕ್ ತನ್ನ ಆಯಸ್ಸು ಕಳೆದುಕೊಂಡಿದ್ದು ಕಬ್ಬಿಣ, ಸಿಮೆಂಟ್ ಉದುರಿ ಬೀಳುತ್ತಿದೆ. ನೀರಿನ ಟ್ಯಾಂಕ್ ಇಂದು ಬೀಳುತ್ತೋ ನಾಳೆ ಬೀಳುತ್ತೋ ಅನ್ನೊ ಭಯದಲ್ಲಿ ಈ ಶಾಲೆಯ ಮಕ್ಕಳು ಶಿಕ್ಷಣ ಪಡೆಯುವಂತಾಗಿದೆ. ಶಾಲಾ ಬಿಸಿಯೂಟದ ಕೋಣೆ ಸಹ ಟ್ಯಾಂಕ್‍ನ ಕೆಳಗಡೆ ಇರುವುದರಿಂದ ಅಲ್ಲಿ ಭಯದಿಂದಲೇ ಭೋಜನ ಸಿದ್ಧಗೊಳ್ಳುತ್ತಿದೆ.

        

    2001ರ ವೇಳೆ ನಿರ್ಮಾಣವಾದ ಈ ಟ್ಯಾಂಕ್, 1 ಲಕ್ಷ ಲೀಟರ್ ನೀರಿನ ಸಂಗ್ರಹ ಸಾಮಥ್ರ್ಯ ಹೊಂದಿದೆ. ಸದ್ಯ ಇದು ಶಿಥಿಲಾವಸ್ಥೆಯಲ್ಲಿದ್ದು, ಕೇವಲ ಶಾಲೆಗೆ ಮಾತ್ರ ಭಯ ಹುಟ್ಟಿಸದೇ ಇಡೀ ಊರಿನ ಜನರನ್ನೂ ಸಹ ಆತಂಕಕ್ಕೀಡು ಮಾಡಿದೆ.

    ತುಂಗಾಭದ್ರಾ ನದಿಯಿಂದ ಇಂದಿಗೂ ಈ ಟ್ಯಾಂಕ್‍ಗೆ ನೀರು ಸರಬರಾಜು ಮಾಡಲಾಗುತ್ತಿದೆ. ನಂತರ ತಿಮ್ಮಾಪೂರ ಗ್ರಾಮದ ಜನರು ಕುಡಿಯೋದಕ್ಕೆ ಈ ನೀರನ್ನೇ ಬಳಸುತ್ತಾರೆ. ವಿಪರ್ಯಾಸ ಅಂದ್ರೆ ಟ್ಯಾಂಕ್ ಮೇಲೆ ಹತ್ತಲು ಇರುವ ಮೆಟ್ಟಿಲು ತುಕ್ಕು ಹಿಡಿದು ಹಾಳಾಗಿವೆ ಆದರಿಂದ ಟ್ಯಾಂಕ್ ಕ್ಲೀನ್ ಮಾಡೋಕೆ ಸಾಧ್ಯವಾಗದೇ ಕಲುಷಿತ ನೀರನ್ನೇ ಆ ಊರಿನ ಜನರು ಕುಡಿಯುವ ಪರಸ್ಥಿತಿ ಎದುರಾಗಿದೆ. ನೀರಿನ ಟ್ಯಾಂಕ್ ದುರಸ್ಥಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇದಕ್ಕೆ ಪರ್ಯಾವಾಗಿ ಇನ್ನೊಂದು ಟ್ಯಾಂಕ್ ನಿರ್ಮಾಣ ಮಾಡುವ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

    ಒಟ್ಟಾರೆಯಾಗಿ ಜೀವಜಲಕ್ಕಾಗಿ ಕೋಟಿ ಕೋಟಿ ಹಣವನ್ನ ಸರ್ಕಾರ ಖರ್ಚು ಮಾಡ್ತಿವೆ. ಆದರೆ ದೇವರು ಕೊಟ್ರು ಪೂಜಾರಿ ಕೊಡೊಲ್ಲ ಅನ್ನೋ ಹಾಗೆ, ಜಿಲ್ಲಾಧಿಕಾರಿಗಳು ಈ ಹಿಂದೆ ಗ್ರಾಮಪಂಚಾಯಿತಿ ಹಾಗೂ ನೀರು ಸರಬರಾಜು ಇಲಾಖೆಗೆ ಸೂಚಿಸಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳದ ಕಾರಣ ಜನ ಮತ್ತು ಮಕ್ಕಳು ಭಯದಿಂದಲೇ ಬದುಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಡ್ಡೆ ಹುಡುಗನ ಜೊತೆ ಹಾಡಹಗಲೇ ಅಪ್ರಾಪ್ತೆಯ ಲವ್ವಿ ಡವ್ವಿ- ಬಸ್ ನಿಲ್ದಾಣದ ಪಕ್ಕದಲ್ಲೇ ವಿದ್ಯಾರ್ಥಿನಿ ಕಿಸ್

    ಪಡ್ಡೆ ಹುಡುಗನ ಜೊತೆ ಹಾಡಹಗಲೇ ಅಪ್ರಾಪ್ತೆಯ ಲವ್ವಿ ಡವ್ವಿ- ಬಸ್ ನಿಲ್ದಾಣದ ಪಕ್ಕದಲ್ಲೇ ವಿದ್ಯಾರ್ಥಿನಿ ಕಿಸ್

    ಚಿಕ್ಕಬಳ್ಳಾಪುರ: ಶಾಲೆಗೆ ಹೋಗುತ್ತಿರುವ ನಿಮ್ಮ ಹದಿಹರೆಯದ ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಎನ್ನುವ ಮಾತಿಗೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಚಿಕ್ಕಬಳ್ಳಾಪುರ ವಿದ್ಯಾರ್ಥಿನಿಯ ವಿಡಿಯೋ ವೈರಲ್ ಆಗಿದೆ.

    ಪಡ್ಡೆ ಯುವಕನೊಬ್ಬ ಅಪ್ರಾಪ್ತ ಬಾಲಕಿ ಜೊತೆ ಹಾಡಹಗಲೇ ಲವ್ವಿ ಡವ್ವಿ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲೇ ಯುವಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯ ಜೊತೆ ಲವ್ವಿ ಡವ್ವಿ ನಡೆಸಿರುವ ವಿಡಿಯೋ ಮೊಬೈಲ್‍ನಲ್ಲಿ ರೆಕಾರ್ಡ್ ಆಗಿದೆ.

    ಶಾಲೆಗೆ ಹೋಗುತ್ತಿರುವ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ತನ್ನ ಪ್ರೇಮಪಾಶಕ್ಕೆ ಸೆಳೆದುಕೊಂಡಿರುವ ಪಡ್ಡೆ ಯುವಕನೊಬ್ಬ ಆಕೆಯನ್ನು ತನ್ನ ಕಾಮತೃಷೆಗೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ. ಶಾಲೆಗೆ ಹೋಗುವುದ್ದಕ್ಕೆ ಅಂತ ಮನೆಯಿಂದ ಬಂದಿರುವ ವಿದ್ಯಾರ್ಥಿನಿ ಬಸ್ ನಿಲ್ದಾಣದ ಪಕ್ಕದಲ್ಲೇ ಪಡ್ಡೆ ಹುಡುಗನ ಜೊತೆ ಮಾತಿಗಿಳಿದಿದ್ದಾಳೆ.

    ಈ ವೇಳೆ ಆಕೆಯ ಕೈ ಮೈ ಮುಟ್ಟಿದ ಯುವಕ ಆಕೆಯನ್ನು ಮುತ್ತು ಕೊಡುವಂತೆ ಪ್ರೇರೇಪಿಸಿದ್ದಾನೆ. ಈ ವೇಳೆ ಅಕ್ಕ-ಪಕ್ಕ ಯಾರು ನೋಡುತ್ತಿಲ್ಲ ಎನ್ನುವುದನ್ನು ಗಮನಿಸಿದ ಅಪ್ರಾಪ್ತ ಬಾಲಕಿ ಯುವಕನ ಜೊತೆ ಮುತ್ತಿನಾಟ ಶುರುವಿಟ್ಟಿಕೊಂಡಿದ್ದಾಳೆ. ಈ ವೇಳೆ ಪರಸ್ಪರರು ಮುತ್ತಿನಾಟ ನಡೆಸಿದ್ದು ಈ ದೃಶ್ಯ ಅಲ್ಲೇ ಕಾರಿನ ಓಳಭಾಗದಲ್ಲಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನ್ ವೆಜ್ ಮಾರಾಟಕ್ಕಿಟ್ಟು ವಿವಾದಕ್ಕೀಡಾಯ್ತು ಶಿವಮೊಗ್ಗದ ಪ್ರತಿಷ್ಠಿತ ಶಾಲೆ

    ನಾನ್ ವೆಜ್ ಮಾರಾಟಕ್ಕಿಟ್ಟು ವಿವಾದಕ್ಕೀಡಾಯ್ತು ಶಿವಮೊಗ್ಗದ ಪ್ರತಿಷ್ಠಿತ ಶಾಲೆ

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯ ಪ್ರತಿಷ್ಠಿತ ಸೈಂಟ್ ಚಾರ್ಲ್ಸ್ ಶಾಲೆಯಲ್ಲಿ ನಾನ್ ವೆಜ್ ಮಾರಾಟಕ್ಕಿಟ್ಟಿದ್ದು, ಇದೀಗ ವಿವಾದಕ್ಕೀಡಾಗಿದೆ.

    ಶಾಲೆಯಲ್ಲಿ ಫನ್ ಫೇರ್ ಹೆಸರಿನಲ್ಲಿ ಮಕ್ಕಳಿಗೆ ನಾನ್ ವೆಜ್ ತಿನ್ನಿಸಲಾಗಿದೆ ಎಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಫನ್ ಫೇರ್ ನಲ್ಲಿ ಮಕ್ಕಳಿಗೆ ನಾನಾ ಬಗೆಯ ಖಾದ್ಯಗಳ ಮಾರಾಟ ಇಟ್ಟುಕೊಳ್ಳಲಾಗಿತ್ತು. ಮಕ್ಕಳು ಮನೆಯಿಂದ ಊಟ ತರುವಂತಿಲ್ಲ. ಈ ಫೆಸ್ಟ್ ನಲ್ಲೇ ಕೊಂಡು ತಿನ್ನಬೇಕು ಎಂದು ಶಾಲಾ ಆಡಳಿತ ಮಂಡಳಿ ಸೂಚಿಸಿತ್ತು.

    ಈ ಫನ್ ಫೇರ್ ನಲ್ಲಿ ಚಿಕನ್ ಕಬಾಬ್ ಸೇರಿದಂತೆ ಇನ್ನಿತರ ನಾನ್ ವೆಜ್ ಆಹಾರವನ್ನು ಮಾರಾಟಕ್ಕೆ ಇಡಲಾಗಿತ್ತು. ಈ ಬಗ್ಗೆ ಕೆಲ ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ನಾನ್ ವೆಜ್ ಆಹಾರವನ್ನು ಶಾಲಾ ಆವರಣದಿಂದ ದೂರ ಸಾಗಿಸಲಾಯಿತು.

    ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರ ಜೊತೆ ಮಾತುಕತೆ ವೇಳೆ ಅವರ ಕೊಠಡಿಯಲ್ಲಿ ಗಾಂಧಿ, ಅಂಬೇಡ್ಕರ್ ಭಾವಚಿತ್ರಗಳು ಇಲ್ಲದ ಬಗ್ಗೆಯೂ ಪೋಷಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಬಿಇಓ ಅವರಿಗೆ ಪೋಷಕರು ದೂರು ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv