Tag: Saurashtra

  • ಬೌಲರ್‌ಗೆ ಎಸೆಯುವ ಬದಲು ಅಂಪೈರ್‌ಗೆ ಎಸೆತ- ಭಾರೀ ಅಪಾಯದಿಂದ ಪಾರು

    ಬೌಲರ್‌ಗೆ ಎಸೆಯುವ ಬದಲು ಅಂಪೈರ್‌ಗೆ ಎಸೆತ- ಭಾರೀ ಅಪಾಯದಿಂದ ಪಾರು

    ರಾಜ್‍ಕೋಟ್: ಬಂಗಾಳ ಮತ್ತು ಸೌರಾಷ್ಟ್ರ ನಡುವ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆನ್-ಫೀಲ್ಡ್ ಅಂಪೈರ್ ಸಿ ಶಂಶುದ್ದೀನ್ ಭಾರೀ ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಗುಜರಾತ್‍ನ ರಾಜ್‍ಕೋಟ್ ಮೈದಾನದಲ್ಲಿ ಸೋಮವಾರದಿಂದ ರಣಜಿ ಟ್ರೋಫಿಯ ಫೈನಲ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಸೌರಾಷ್ಟ್ರ ಬ್ಯಾಟಿಂಗ್ ಮಾಡಿಕೊಂಡು ಮೊದಲ ದಿನದ ಮುಕ್ತಾಯಕ್ಕೆ 80.5 ಓವರ್‌ಗಳಲ್ಲಿ  5 ವಿಕೆಟ್‍ಗೆ 206 ರನ್ ಪೇರಿಸಿತ್ತು. ಈ ಮಧ್ಯೆ ಫಿಲ್ಡೀಂಗ್ ಮಾಡುತ್ತಿದ್ದ ಬಂಗಾಳದ ಆಟಗಾರರೊಬ್ಬರು ಬೌಲರ್ ಕೈಗೆ ಬಾಲ್ ಎಸೆಯುವ ಬದಲು ದೂರಕ್ಕೆ ಎಸೆದಿದ್ದಾರೆ. ಈ ಬಾಲ್ ನೇರವಾಗಿ ಶಂಶುದ್ದೀನ್ ಅವರ ಮರ್ಮಾಂಗಕ್ಕೆ ಬಿದ್ದಿದೆ.

    ಗಂಭೀರವಾಗಿ ಗಾಯಗೊಂಡ ಅಂಪೈರ್ ಸಿ. ಶಂಶುದ್ದಿನ್ ಅವರು ಮಂಗಳವಾರ ರಣಜಿ ಟ್ರೋಫಿಯ ಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಅವರು 2ನೇ ದಿನದಾಟಕ್ಕೆ ಅಲಭ್ಯವಾಗಿದ್ದಾರೆ. ಶಂಶುದ್ದೀನ್ ಅವರ ಬದಲಿಗೆ ಸೋಮವಾರ ಹೆಚ್ಚುವರಿ ಅಂಪೈರ್ ಎಸ್.ರವಿ ಮೈದಾಕ್ಕಿಳಿದಿದ್ದರು. ಯಶ್ವಂತ್ ಬಾರ್ಡೆ ಮೂರನೇ ದಿನದಾಟದ ಅಂಪೈರಿಂಗ್ ನಿರ್ವಹಿಸಿದ್ದರು.

    ಸೌರಾಷ್ಟ್ರವು ಎರಡನೇ ದಿನದಾಟದ ಮುಕ್ತಾಯಕ್ಕೆ 160 ಓವರ್ ಗಳಲ್ಲಿ 8 ವಿಕೆಟ್‍ಗೆ 384 ರನ್ ಗಳಿಸಿದೆ.

  • ಸೋಲಿನ ಸುಳಿಯಲ್ಲಿ ಕರ್ನಾಟಕ – 5 ವಿಕೆಟ್ ಕಿತ್ತ ಉನದ್ಕತ್

    ಸೋಲಿನ ಸುಳಿಯಲ್ಲಿ ಕರ್ನಾಟಕ – 5 ವಿಕೆಟ್ ಕಿತ್ತ ಉನದ್ಕತ್

    ರಾಜ್‍ಕೋಟ್: ನಾಕೌಟ್ ಹಂತಕ್ಕೇರುವ ಕನಸ್ಸಿನಲ್ಲಿದ್ದ ಕರ್ನಾಟಕ ತಂಡ ಸೋಲಿನ ಸುಳಿಗೆ ಸಿಲುಕಿದೆ. ರಾಜ್ ಕೋಟ್ ನಲ್ಲಿ ಸೌರಾಷ್ಟ್ರದ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಹೀನಾಯ ಪ್ರದರ್ಶನ ತೋರಿ ಸೋಲಿನ ಅಂಚಿಗೆ ತಲುಪಿದೆ.

    ಭಾನುವಾರ 13 ರನ್ ಗೆ ಒಂದು ವಿಕೆಟ್ ಕಳೆದುಕೊಂಡು ಇಂದು 3ನೇ ದಿನದ ಆಟ ಪ್ರಾರಂಭ ಮಾಡಿದ ಕರ್ನಾಟಕದ ಬ್ಯಾಟ್ಸ್ ಮನ್ ಗಳು ಸೌರಾಷ್ಟ್ರದ ಬೌಲರ್ ಗಳ ಎದುರು ರನ್ ಹೊಡೆಯಲು ಪರದಾಡಿದರು. ಆರ್. ಸಮರ್ಥ್ ಮತ್ತು ಪ್ರವೀಣ್ ದುಬೆ ಉತ್ತಮ ಪ್ರದರ್ಶನದ ಹೊರತಾಗಿಯೂ ಫಾಲೋ ಆನ್ ಗೆ ಸಿಲುಕಿತು. ಮೊದಲ ಇನ್ನಿಂಗ್ಸ್ ನಲ್ಲಿ 171 ರನ್  ಗಳಿಗೆ ಆಲೌಟ್  ಆಗಿ ಫಾಲೋ ಆನ್ ಪಡೆಯಿತು.

    ಕರ್ನಾಟಕಕ್ಕೆ ಆರ್.ಸಮರ್ಥ್ 63 ರನ್(174 ಎಸೆತ, 8 ಬೌಂಡರಿ) ಮತ್ತು ಪ್ರವೀಣ್ ದುಬೆ ಔಟಾಗದೆ 46 ರನ್(106 ಎಸೆತ, 5 ಬೌಂಡರಿ, 1 ಸಿಕ್ಸರ್) ತಂಡಕ್ಕೆ ಆಸರೆಯಾದರು. ಸೌರಾಷ್ಟ್ರದ ಪರ ಜಯದೇವ್ ಉನದ್ಕತ್ 49 ರನ್ ನೀಡಿ 5 ವಿಕೆಟ್ ಪಡೆದು ಕರ್ನಾಟಕ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಿದರು.

    410 ರನ್‍ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಪ್ರಾರಂಭ ಮಾಡಿರುವ ಕರ್ನಾಟಕ ಎಚ್ಚರಿಕೆಯ ಆಟವಾಡುತ್ತಿದೆ. 3ನೇ ದಿನದಾಟದ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ. ಸಮರ್ಥ್ 14 ರನ್ ಹಾಗೂ ರೋಹನ್ ಕದಂ 16 ರನ್ ಗಳಿಸಿ 4ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಕರ್ನಾಟಕ 380 ರನ್ ಗಳ ಹಿನ್ನಡೆ ಅನುಭವಿಸಿದೆ. ಇನ್ನೊಂದು ದಿನ ಆಟ ಬಾಕಿ ಇದ್ದು ಕರ್ನಾಟಕ ಡ್ರಾ ಮಾಡಿಕೊಳ್ಳಲು ಸಾಹಸ ಪಡಬೇಕಿದೆ.

    ಸ್ಕೋರ್ ವಿವರ
    ಸೌರಾಷ್ಟ್ರ ಮೊದಲ ಇನ್ನಿಂಗ್ಸ್ – 581/7 ಡಿಕ್ಲೇರ್
    ಕರ್ನಾಟಕ ಮೊದಲ ಇನ್ನಿಂಗ್ಸ್ – 171 ಆಲೌಟ್
    ಕರ್ನಾಟಕ 2ನೇ ಇನ್ನಿಂಗ್ಸ್ – 30/0

  • ಬೌಂಡರಿಗಳ ಸುರಿಮಳೆ – ಟಿ20ಯಲ್ಲಿ ಮೊದಲ ಶತಕ ಸಿಡಿಸಿದ ಚೇತೇಶ್ವರ ಪೂಜಾರ

    ಬೌಂಡರಿಗಳ ಸುರಿಮಳೆ – ಟಿ20ಯಲ್ಲಿ ಮೊದಲ ಶತಕ ಸಿಡಿಸಿದ ಚೇತೇಶ್ವರ ಪೂಜಾರ

    ಇಂದೋರ್: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದ ಟೀಂ ಇಂಡಿಯಾ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಟಿ20 ಮಾದರಿಯಲ್ಲಿ ಮೊದಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಟಿ20 ಪಂದ್ಯದಲ್ಲಿ ಶತಕ ದಾಖಲಿಸಿದ ಮೊದಲ ಸೌರಾಷ್ಟ್ರ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸೌರಾಷ್ಟ್ರ ಪರ ಆಡುತ್ತಿರುವ ಪೂಜಾರ ಕೇವಲ 61 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. 31 ವರ್ಷದ ಪೂಜಾರ ಟೆಸ್ಟ್ ಕ್ರಿಕೆಟ್ ಸ್ಟಾರ್ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದು, ರೈಲ್ವೇಸ್ ತಂಡದ ವಿರುದ್ಧ 16 ಬೌಂಡರಿ, 1 ಸಿಕ್ಸರ್ ನೆರವಿನಿಂದ ಶತಕ ಸಿಡಿಸಿದ್ದಾರೆ. 29 ಎಸೆತಗಳಲ್ಲೇ ಅರ್ಧ ಶತಕ ಗಳಿಸಿದರೆ, ಬಳಿಕ 32 ಎಸೆತದಲ್ಲಿ 50 ರನ್ ಅರಿದು ಬಂದಿತ್ತು.

    ಪಂದ್ಯದಲ್ಲಿ ರಾಬಿನ್ ಉತ್ತಪ್ಪ 31 ಎಸೆತಗಳಲ್ಲಿ 46 ರನ್ ಗಳಿಸಿ ಪೂಜಾರ ಅವರಿಗೆ ಸಾಥ್ ನೀಡಿದರು. ಆದರೆ ಅರ್ಧ ಶತಕದ ಸನಿಹದಲ್ಲಿ ಅಮಿತ್ ಮಿಶ್ರಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. 20 ಓವರ್ ಗಳ ಅಂತ್ಯಕ್ಕೆ ಸೌರಾಷ್ಟ್ರ 3 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತು. ಆಶೀಶ್ ಯಾದವ್ ರೈಲ್ವೇಸ್ ತಂಡದ ಪರ 4 ಓವರ್ ಗಳಲ್ಲಿ 30 ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ಪರಿಣಾಮಕಾರಿ ಬೌಲರ್ ಎನಿಸಿಕೊಂಡರು. ಗೆಲ್ಲಲು 189 ರನ್ ಗುರಿ ಬೆನ್ನತ್ತಿದ ರೈಲ್ವೇಸ್ ತಂಡ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿ ಜಯ ಪಡೆಯಿತು.

    ಪೂಜಾರ ಟಿ20 ಮಾದರಿಯಲ್ಲಿ 58 ಪಂದ್ಯಗಳನ್ನು ಆಡಿದ್ದು, 1,096 ರನ್ ಸಿಡಿಸಿದ್ದಾರೆ. ಈ ಹಿಂದೆ 2016 ರಲ್ಲಿ ಜಮ್ಮು ಕಾಶ್ಮೀರ ತಂಡದ ವಿರುದ್ಧ ಪೂಜಾರ 81 ರನ್ ಗಳಿಸಿದ್ದು ಅವರ ಅಧಿಕ ಮೊತ್ತ ಆಗಿತ್ತು. 2014 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಐಪಿಎಲ್ ನಲ್ಲಿ ಆಡಿದ್ದ ಪೂಜಾರ ಬಳಿಕ ಐಪಿಎಲ್‍ನಲ್ಲಿ ಭಾಗವಹಿಸಿರಲಿಲ್ಲ. ವಿಶ್ವಕಪ್ ಬಳಿಕ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಪೂಜಾರ ಭಾಗವಹಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೆ ಮಿಂಚಿದ ಮಯಂಕ್: ಸೌರಾಷ್ಟ್ರ ಸೋಲಿಸಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ

    ಮತ್ತೆ ಮಿಂಚಿದ ಮಯಂಕ್: ಸೌರಾಷ್ಟ್ರ ಸೋಲಿಸಿ ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ

    ನವದೆಹಲಿ: ಸೌರಾಷ್ಟ್ರ ವಿರುದ್ಧ ಕರ್ನಾಟಕ 41 ರನ್ ಗಳಿಂದ ಜಯಗಳಿಸುವ ಮೂಲಕ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯನ್ನು ಮೂರನೇ ಬಾರಿ ಗೆದ್ದುಕೊಂಡಿದೆ.

    ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಕರ್ನಾಟಕ 45.5 ಓವರ್ ಗಳಲ್ಲಿ 253 ರನ್ ಗಳಿಗೆ ಆಲೌಟ್ ಆಗಿತ್ತು. 254 ರನ್ ರನ್‍ಗಳ ಗುರಿಯನ್ನು ಪಡೆದ ಸೌರಾಷ್ಟ್ರ 46.3 ಓವರ್ ಗಳಲ್ಲಿ 212 ರನ್ ಗಳಿಸಿ ಆಲೌಟ್ ಆಯಿತು.

    ಸರಣಿ ಉದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ್ದ ಮಯಂಕ್ ಅಗರ್ ವಾಲ್ 90 ರನ್(79 ಎಸೆತ, 11 ಬೌಂಡರಿ, 3 ಸಿಕ್ಸರ್), ಪವನ್ ದೇಶಪಾಂಡೆ 49 ರನ್(60 ಎಸೆತ, 4 ಬೌಂಡರಿ, 1 ಸಿಕ್ಸರ್), ರವಿಕುಮಾರ್ ಸಮರ್ಥ್ 48 ರನ್(65 ಎಸೆತ, 1 ಬೌಂಡರಿ, 1 ಸಿಕ್ಸರ್) ಶ್ರೇಯಸ್ ಗೋಪಾಲ್ 31 ರನ್(28 ಎಸೆತ, 6 ಬೌಂಡರಿ) ಸಿಡಿಸಿ ಔಟಾದರು.

    ಸೌರಾಷ್ಟ್ರ ನಾಯಕ ಚೇತೇಶ್ವರ ಪೂಜಾರ 94 ರನ್(127 ಎಸೆತ, 10 ಬೌಂಡರಿ, 1 ಸಿಕ್ಸರ್) ಸಿಡಿಸಿ 9ನೇಯವರಾಗಿ ಔಟಾದರು. ಕರ್ನಾಟಕದ ಪರವಾಗಿ ಕೆ.ಗೌತಮ್ ಮತ್ತು ಕೃಷ್ಣಾ 3 ವಿಕೆಟ್ ಕಿತ್ತರೆ, ಸ್ಟುವರ್ಟ್ ಬಿನ್ನಿ ಮತ್ತು ದೇಶಪಾಂಡೆ ತಲಾ ಒಂದೊಂದು ವಿಕೆಟ್ ಪಡೆದರು.

    2013-14ರಲ್ಲಿ, 2015-16 ರಲ್ಲಿ ಕರ್ನಾಟಕ ಚಾಂಪಿಯನ್ ಆಗಿತ್ತು. ಈಗ ಕರುಣ್ ನಾಯರ್ ನೇತೃತ್ವದಲ್ಲಿ ಮೂರನೇ ಬಾರಿ ಕರ್ನಾಟಕ ಟ್ರೋಫಿಯನ್ನು ಗೆದ್ದುಕೊಂಡಿದೆ.

    27 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ‘ಎ’ ಗುಂಪಿನಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ರಾಜ್ಯ ತಂಡ ಹೈದರಾಬಾದ್ ತಂಡವನ್ನು ಮಣಿಸಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿತ್ತು. ನಾಲ್ಕರ ಘಟ್ಟದಲ್ಲಿ 9 ವಿಕೆಟ್‍ಗಳಿಂದ ಮಹಾರಾಷ್ಟ್ರವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.