Tag: saudi arabia

  • 3 ತಿಂಗ್ಳ ಹಿಂದೆ ಮೃತಪಟ್ಟ ಮಗನ ಮೃತದೇಹಕ್ಕಾಗಿ ಈಗ್ಲೂ ಕಾಯ್ತಿದ್ದಾರೆ ಅಮ್ಮ!

    3 ತಿಂಗ್ಳ ಹಿಂದೆ ಮೃತಪಟ್ಟ ಮಗನ ಮೃತದೇಹಕ್ಕಾಗಿ ಈಗ್ಲೂ ಕಾಯ್ತಿದ್ದಾರೆ ಅಮ್ಮ!

    ಲಕ್ನೋ: ತಮ್ಮ 25 ವರ್ಷದ ಮಗ ಮೂರು ತಿಂಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದು, ಇನ್ನೂ ಆತನ ಮೃತದೇಹ ತವರಿಗೆ ವಾಪಸ್ಸಾಗಿಲ್ಲ. ಹೀಗಾಗಿ ಸೆಪ್ಟೆಂಬರ್ ತಿಂಗಳಿನಿಂದ ತಾಯಿ, ಮಗನ ಮೃತದೇಹಕ್ಕಾಗಿ ಕಾಯುತ್ತಿರುವ ಮನಕಲಕುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

    ಮೃತನ ಕುಟುಂಬಸ್ಥರು ಅಮೇಥಿ ಜಿಲ್ಲೆಯ ಬಝಾರ್ ಶುಕುಲ್ ಪೊಲೀಸ್ ಠಾಣೆಗೆ ಮಗ ದಿನೇಶ್ ಕುಮಾರ್ ಸಿಂಗ್ ಮೃತದೇಹಕ್ಕಾಗಿ ಪತ್ರಗಳ ಮೇಲೆ ಪತ್ರ ಬರೆದು ಸುಸ್ತಾಗಿದ್ದಾರೆ. ತಾಯಿ ತನ್ನ ಇಬ್ಬರು ನಿರುದ್ಯೋಗಿಗಳಾಗಿರುವ ಗಂಡು ಮಕ್ಕಳ ಜೊತೆ ಮನೆಗೆ ಆಧಾರ ಸ್ತಂಭವಾಗಿದ್ದ ಮಗನ ಮೃತದೇಹವನ್ನು ಕಾಣಲು ನಿದ್ದೆಗೆಟ್ಟು ಕಾಯುತ್ತಿದ್ದಾರೆ.

    2018ರ ಜನವರಿ ತಿಂಗಳಿನಲ್ಲಿ ಸಿಂಗ್ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದನು. ಅಲ್ಲಿ ದಮ್ಮಾಮ್ ನಗರದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದನು. ಸೆಪ್ಟೆಂಬರ್ 23ರಂದು ಸಿಂಗ್ ಗೆಳೆಯನೊಬ್ಬ ಕರೆ ಮಾಡಿ, ಹೃದಯಾಘಾತವಾಗಿ ಮೃತಪಟ್ಟಿರುವುದಾಗಿ ಮಾಹಿತಿ ನಿಡಿದ್ದಾನೆ. ಅಲ್ಲದೇ ಆತನ ಮೃತದೇಹವನ್ನು ತವರಿಗೆ ಕಳುಹಿಸಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿರುವುದಾಗಿಯೂ ಹೇಳಿದ್ದಾನೆ ಅಂತ ದಿನೇಶ್ ತಾಯಿ ಪ್ರಭಾ ದೇವಿ ಕಣ್ಣೀರು ಹಾಕುತ್ತಾ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ನನ್ನ ದುರಾದೃಷ್ಟವೋ ಏನೋ, ಇದೂವರೆಗೂ ನನ್ನ ಮಗನ ಶವವನ್ನು ಕಣ್ಣಾರೆ ನೋಡಲು ತವರಿಗೆ ವಾಪಸ್ಸಾಗಿಲ್ಲ ಅಂತ ಪ್ರಭಾ ಗದ್ಗದಿತರಾದ್ರು.

    ಆತ ಸೌದಿಯಲ್ಲಿ ತಿಂಗಳಿಗೆ 90 ಸಾವಿರ ಸಂಪಾದನೆ ಮಾಡುತ್ತಿದ್ದನು. ಅದರಲ್ಲಿ 50 ಸಾವಿರ ಮನೆಗೆ ಕಳುಹಿಸುತ್ತಿದ್ದನು. ಈ ಮೂಲಕ ಮನೆಗೆ ಆಧಾರಸ್ತಂಭವಾಗಿದ್ದನು. ನನ್ನ ದೊಡ್ಡ ಮಗ ನಿರುದ್ಯೋಗಿಯಾಗಿದ್ದಾನೆ. ಸಣ್ಣ ಮಗ ಇನ್ನೂ ಚಿಕ್ಕವನಾಗಿದ್ದು, ಓದುತ್ತಿದ್ದಾನೆ. ಪತಿ ಕೂಡ ಕೆಲ ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಇದೀಗ ಮಗನನ್ನು ಕಳೆದುಕೊಂಡ ನಾವು ನಿರ್ಗತಿಕರಾಗಿದ್ದೇವೆ ಅಂತ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ದಿನೇಶ್ ಮೃತದೇಹವನ್ನು ತವರಿಗೆ ತರುವಲ್ಲಿ ಪ್ರಯತ್ನಿಸುತ್ತಿದ್ದೆ. ಇದಕ್ಕಾಗಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿಯ ಜೊತೆ ಸೆ. 26ರಂದು ಮನವಿ ಮಾಡಿಕೊಂಡಿದ್ದೇವೆ. ಆದ್ರೆ ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ನಾವು ಸೆ. 28ರಂದು ಸಂಸದ ವರುಣ್ ಗಾಂಧಿಯವರನ್ನು ಸಂಪರ್ಕಿಸಿದ್ದೇವೆ. ಅವರು ವಿದೇಶಾಂಗ ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ ಅಂತ ಮುಕೇಶ್ ಹೇಳಿದ್ದಾರೆ.

    ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೂ ಈ ಬಗ್ಗೆ ತಿಳಿಸಿದ್ದೇವೆ. `ರಿಯಾದ್ ನಲ್ಲಿರುವ ವಿದೇಶಾಂಗ ಸಚಿವರಿಗೆ ಮಾಹಿತಿ ನೀಡಿದ್ದೇವೆ. ಅವರು ಈ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸಿ ಬಳಿಕ ಕ್ರಮಕೈಗೊಳ್ಳಲಿದ್ದಾರೆ’ ಅಂತ ಅಕ್ಟೋಬರ್ 16ರಂದು ನಮಗೊಂದು ಪತ್ರ ಕಳುಹಿಸಿದ್ದಾರೆ. ಆದ್ರೆ ಆ ಬಳಿಕವೂ ದಿನೇಶ್ ಮೃತದೇಹ ತವರಿಗೆ ರವಾನೆಯಾಗುತ್ತಿರುವ ಬಗ್ಗೆ ಯಾವುದೇ ಸುಳೀವು ಸಿಕ್ಕಿರಲಿಲ್ಲ. ಹೀಗಾಗಿ ಮತ್ತೆ ನಾನು ನವೆಂಬರ್ 15ರಂದು ಪತ್ರ ಬರೆದೆ. ಮೃತದೇಹ ರವಾನೆಗೆ ಅವರು ಇನ್ನೂ ಎಷ್ಟು ದಿನ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಸಚಿವಾಲಯ ನಮಗೆ ಭರವಸೆ ನೀಡುತ್ತಲೇ ಇದೆ. ಆದ್ರೆ ಮೃತದೇಹ ಮಾತ್ರ ಇಂದೂ ಮನೆ ಸೇರಿಲ್ಲ. ನಮಗೆ ನಮ್ಮ ಅಣ್ಣನ ಶವ ಮಾತ್ರ ಬೇಕು. ಅಲ್ಲದೇ ಮೃತ ದೇಹ ಕಳುಹಿಸಲು ಯಾಕೆ ತಡಮಾಡುತ್ತಿದ್ದಾರೆ ಎಂಬುದಕ್ಕೆ ಉತ್ತರ ಕೂಡ ನೀಡಬೇಕು ಅಂತ ಮುಕೇಶ್ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೌದಿ ಅರೇಬಿಯಾದಿಂದ ತೈಲ ಉತ್ಪಾದನೆ ಕಡಿತ – ಮತ್ತೆ ದರ ಏರಿಕೆ ಸಾಧ್ಯತೆ

    ಸೌದಿ ಅರೇಬಿಯಾದಿಂದ ತೈಲ ಉತ್ಪಾದನೆ ಕಡಿತ – ಮತ್ತೆ ದರ ಏರಿಕೆ ಸಾಧ್ಯತೆ

    ಅಬುಧಾಬಿ: ಸೌದಿ ಅರೇಬಿಯಾ ಡಿಸೆಂಬರ್ ಬಳಿಕ ತೈಲೋತ್ಪಾದನೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದು, ತೈಲ ದರ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ.

    ಡಿಸೆಂಬರ್ ನಲ್ಲಿ  ದಿನದ ಸರಾಸರಿ ಉತ್ಪಾದನೆಯಲ್ಲಿ 5 ಲಕ್ಷ ಬ್ಯಾರೆಲ್‍ನಷ್ಟು ಕಡಿತಗೊಳಿಸಲು ಸೌದಿ ಅರೇಬಿಯಾ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಬ್ರೆಂಟ್ ಕಚ್ಚಾ ತೈಲ ದರದಲ್ಲಿ ಶೇ.2ರಷ್ಟು ಏರಿಕೆಯಾಗಿದ್ದು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 71.52 ಡಾಲರ್  ತಲುಪಿದೆ.

    ಮಾರುಕಟ್ಟೆಯಲ್ಲಿ ದರವನ್ನು ಸ್ಥಿರಗೊಳಿಸಲು 10 ಲಕ್ಷ ಬ್ಯಾರೆಲ್ ತನಕ ತೈಲ ಉತ್ಪಾದನೆಯನ್ನು ಕಡಿತಗೊಳಿಸಬೇಕಾದ ಅಗತ್ಯವಿದೆ. ಹೀಗಾಗಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಿದ್ದೇವೆ ಎಂದು ಸೌದಿ ಅರೇಬಿಯಾದ ಇಂಧನ ಸಚಿವ ಖಲೀದ್ ಅಲ್ ಫಾಲಿ ಅಬುಧಾಬಿಯಲ್ಲಿ ನಿರ್ಧಾರಕ್ಕೆ ಸಮರ್ಥನೆ ನೀಡಿದ್ದಾರೆ.

    14 ಸದಸ್ಯರನ್ನು ಒಳಗೊಂಡಿರುವ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ(ಒಪೆಕ್) ಸದಸ್ಯ ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾ ಒಂದೇ ಜಾಗತಿಕ ಕಚ್ಚಾ ತೈಲದ ಮೂರನೇ ಒಂದರಷ್ಟನ್ನು ಪೂರೈಸುತ್ತದೆ. ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಒಪೆಕ್ ರಾಷ್ಟ್ರಗಳು ಸಹ ತೈಲ ಉತ್ಪಾದನೆಯನ್ನು ಮುಂದಿನ ವರ್ಷ ಕಡಿತಗೊಳಿಸಬೇಕು ಎಂದು ಖಲೀದ್ ಅಲ್ ಫಾಲಿ ಹೇಳಿದ್ದಾರೆ.

    ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಜಾಸ್ತಿ ಪ್ರಮಾಣದಲ್ಲಿ ತೈಲ ಪೊರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ 1 ತಿಂಗಳಿನಿಂದ ಕಚ್ಚಾ ತೈಲ ದರ ಐದನೇ ಒಂದರಷ್ಟು ಇಳಿಕೆಯಾಗಿದೆ. ಇರಾನ್ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದರೂ ಮಾರುಕಟ್ಟೆಯ ಮೇಲೆ ಅಷ್ಟೊಂದು ಪರಿಣಾಮ ಬೀರದ ಪರಿಣಾಮ ಬೆಲೆ ಕಡಿಮೆಯಾಗಿತ್ತು.

    ಪ್ರತಿದಿನ ಒಟ್ಟು 10 ಲಕ್ಷ ಬ್ಯಾರೆಲ್ ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ಒಪೆಕ್ ರಾಷ್ಟ್ರಗಳು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 6 ರಂದು ವಿಯೆನ್ನಾದಲ್ಲಿ ಒಪೆಕ್ ರಾಷ್ಟ್ರಗಳ ಸಭೆ ನಡೆಯಲಿದ್ದು ಅಲ್ಲಿ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ಕಚ್ಚಾ ತೈಲ ದರ ಶುಕ್ರವಾರ ಬ್ಯಾರೆಲ್‍ಗೆ 70 ಡಾಲರ್ ಗೆ  ಇಳಿದಿದ್ದರೆ, ಸೋಮವಾರ 71  ಡಾಲರ್ ಗೆ ಏರಿಕೆಯಾಗಿತ್ತು.

    ಸೌದಿ ಅರೇಬಿಯಾ ತೈಲವೇ ದೊಡ್ಡ ಆರ್ಥಿಕ ಸಂಪನ್ಮೂಲ. ಕೆಲ ದಿನಗಳಿಂದ ತೈಲ ದರ ಇಳಿಕೆಯಾಗುತ್ತಿದೆ. ದರ ಇಳಿಕೆಯಾದರೆ ದೇಶದ ಆದಾಯಕ್ಕೆ ಹೊಡೆತ ಬೀಳುತ್ತದೆ. ಹೀಗಾಗಿ ಉತ್ಪಾದನೆಯನ್ನು ಕಡಿತಗೊಳಿಸಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಸಿ ಆದಾಯವನ್ನು ಹೆಚ್ಚಿಸಲು ಈ ತಂತ್ರಕ್ಕೆ  ಸೌದಿ ಅರೇಬಿಯಾ ಮುಂದಾಗಿದೆ.

    ಸೌದಿ ಅರೇಬಿಯಾ ಈ ನಿರ್ಧಾರಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧ ವ್ಯಕ್ತಪಡಿಸಿದ್ದಾರೆ. ಒಪೆಕ್ ಮತ್ತು ಸೌದಿ ಅರೇಬಿಯಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಿಲ್ಲ ಎನ್ನುವ ಆಶಾವಾದವನ್ನು ನಾನು ಇಟ್ಟುಕೊಂಡಿದ್ದೇನೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

     

     

  • ರಿಯಾದ್‍ಗೆ ಉದ್ಯೋಗಕ್ಕೆ ತೆರಳಿದ್ದ ಭಾರತೀಯ ಮಹಿಳೆ ನಿಗೂಢ ಸಾವು!

    ರಿಯಾದ್‍ಗೆ ಉದ್ಯೋಗಕ್ಕೆ ತೆರಳಿದ್ದ ಭಾರತೀಯ ಮಹಿಳೆ ನಿಗೂಢ ಸಾವು!

    ಹೈದರಾಬಾದ್: ಸೌದಿ ಅರೇಬಿಯಾದ ರಿಯಾದ್‍ನಲ್ಲಿ ಭಾರತದ ಮಹಿಳೆಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.

    ಶಾಹಿನ್(41) ನಿಗೂಢವಾಗಿ ಮೃತಪಟ್ಟ ಮಹಿಳೆ. ಈ ಘಟನೆ ಕುರಿತು ಮೃತಪಟ್ಟ ಮಹಿಳೆಯ ಕುಟುಂಬದವರು ಮಾಲೀಕನೇ ಶಾಹಿನ್ ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಹಾಯವನ್ನು ಕೋರಿದ್ದು ಮೃತ ದೇಹವನ್ನು ಸೌದಿ ಅರೇಬಿಯಾದಿಂದ ವಾಪಸ್ಸು ತರಲು ಮನವಿ ಮಾಡಿಕೊಂಡಿದ್ದಾರೆ.

    ಸೌದಿ ಅರೇಬಿಯಾದಲ್ಲಿ ಉದ್ಯೋಗವಿದ್ದು ತಿಂಗಳಿಗೆ 20 ಸಾವಿರ ಸಂಬಳ ಇದೆ ಎಂದು ಮಧ್ಯವರ್ತಿಯೊಬ್ಬರು ನನ್ನ ತಾಯಿಗೆ ತಿಳಿಸಿದ್ದರು. ಮಧ್ಯವರ್ತಿಯ ಮಾತನ್ನು ನಂಬಿ ದುಬೈನಲ್ಲಿ ಕೆಲಸ ಮಾಡುತ್ತಿದ್ದ ತಾಯಿ ರಿಯಾದ್ ಗೆ ತೆರಳಿದ್ದರು. ಆದರೆ 20 ಸಾವಿರ ಸಂಬಳ ನೀಡದೇ 16 ಸಾವಿರ ಸಂಬಳ ನೀಡುತ್ತಿದ್ದರು ಎಂದು ಮೃತ ಶಾಹಿನ ಮಗಳಾದ ಬಸೀನ ತಿಳಿಸಿದ್ದಾರೆ.

    ತಾಯಿ ಶಾಹಿನ್ ಸೌದಿ ಅರೇಬಿಯಾ ತಲುಪಿದ ನಂತರ ಅವರ ಮಾಲೀಕ ತಾಯಿಯನ್ನು ಮನೆ ಕೆಲಸಕ್ಕೆ ನೇಮಕ ಮಾಡಿ ತನ್ನ ಮಕ್ಕಳನ್ನು ನೋಡಿಕೊಳ್ಳಲು ಹೇಳಿದ್ದಾನೆ. ಈ ನಡುವೆ ತನ್ನ ತಾಯಿಯ ಆರೋಗ್ಯ ಜುಲೈನಿಂದ ಕ್ಷೀಣಿಸಲು ಆರಂಭವಾಯಿತು. ಹೀಗಾಗಿ ತನ್ನ ತಾಯಿ ಭಾರತಕ್ಕೆ ಮರಳಿ ಕಳುಹಿಸಲು ಅವರ ಮಾಲೀಕನೊಂದಿಗೆ ಮನವಿ ಮಾಡಲು ನನ್ನನ್ನು ಕೇಳಿಕೊಂಡರು. ನಾನು ಮಾಲೀಕನನ್ನು ಕೇಳಿದಾಗ ತಾಯಿಯನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದ. ಆದರೆ ಮಾಲೀಕ ತಾಯಿಗೆ ನಿತ್ಯವು ಕಿರುಕುಳವನ್ನು ನೀಡಿ ಬೆದರಿಕೆ ಹಾಕುತ್ತಿದ್ದನು. ಶುಕ್ರವಾರ ಮಾಲೀಕ ಕರೆ ಮಾಡಿ ತಾಯಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದ. ಈ ವೇಳೆ ಮೃತಪಟ್ಟಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಕರೆಯನ್ನು ಕಡಿತಗೊಳಿಸಿದ್ದಾನೆ. ಹೀಗಾಗಿ ಆತನೇ ಕೊಲೆ ಮಾಡಿರಬಹುದು ಎಂದು ಬಸೀನ ಶಂಕೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಡುಪಿಯ ನರ್ಸ್ ಸೌದಿ ಅರೇಬಿಯಾದಲ್ಲಿ ನಿಗೂಢ ಸಾವು

    ಉಡುಪಿಯ ನರ್ಸ್ ಸೌದಿ ಅರೇಬಿಯಾದಲ್ಲಿ ನಿಗೂಢ ಸಾವು

    ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ ನರ್ಸ್ ಸೌದಿ ಅರೇಬಿಯಾದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ.

    ಶಿರ್ವ ಗ್ರಾಮದ ಕುತ್ಯಾರು ನಿವಾಸಿ ಜೋತ್ಸ್ನಾ ನಿಗೂಢವಾಗಿ ಮೃತಪಟ್ಟಿರುವ ನರ್ಸ್. ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯ ಆಸ್ಪತ್ರೆಯಲ್ಲಿ ಜ್ಯೋತ್ಸ್ನಾ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಆರು ವರ್ಷಗಳಿಂದ ನರ್ಸ್ ಆಗಿದ್ದ ಅವರು ಜುಲೈ 19 ರಂದು ಪತಿ ಅಶ್ವಿನ್ ಮಥಾಯಾಸ್ ರೊಂದಿಗೆ ಮಾತನಾಡಿದ್ದರು. ಎರಡು ದಿನಗಳ ಬಳಿಕ ಸಹೋದ್ಯೋಗಿ ಮೂಲಕ ಪತ್ನಿ ಜ್ಯೋತ್ಸ್ನಾ ಸಾವನ್ನಪ್ಪಿರುವ ಮಾಹಿತಿ ಬಂದಿದೆ.

    ಜೋತ್ಸ್ನಾ ಸಾವಿನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸೌದಿ ಅರೇಬಿಯಾದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆಯೂ ಈವರೆಗೆ ಕುಟುಂಬಕ್ಕೆ ಯಾವುದೇ ನಿಖರ ಮಾಹಿತಿ ಕೂಡ ಲಭ್ಯವಾಗಿಲ್ಲ. ಮೃತ ಜೋತ್ಸ್ನಾ ಕುಟುಂಬದವರಿಂದ ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್ ಅವರನ್ನು ಸಂಪರ್ಕಿಸುವ ಪ್ರಯತ್ನ ಕೂಡ ಆಗಿದೆ. ಆದರೆ ಈವರೆಗೆ ಯಾವುದೇ ಪ್ರಗತಿಯಾಗಿಲ್ಲ. ಶಾಸಕರಾದ ಐವನ್ ಡಿಸೋಜಾ ಮತ್ತು ರಘುಪತಿ ಭಟ್ ಸೌದಿ ಅರೇಬಿಯಾದ ಭಾರತೀಯ ರಾಯಭಾರಿಯರನ್ನು ಸಂಪರ್ಕಿಸಿದ್ದು, ಮಾಹಿತಿ ಪಡೆಯುವ ಪ್ರಯತ್ನ ನಡೆದಿದೆ.

    ಸದ್ಯಕ್ಕೆ ಸೌದಿ ಅರೇಬಿಯಾದಿಂದ ಜ್ಯೋತ್ಸ್ನಾ ಮೃತದೇಹ ತರಿಸಲು ವಿಳಂಬವಾಗುತ್ತಿದೆ. ಆಕೆಯ ಸಾವಿಗೆ ಕಾರಣ ಇನ್ನೂ ತಿಳಿದಿಲ್ಲ ಅಂತ ಪತಿ ಅಶ್ವಿನ್ ಮಥಾಯಾಸ್ ಹೇಳಿದ್ದಾರೆ. ಅಶ್ವಿನ್ ಜ್ಯೋತ್ಸ್ನಾಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ಪತಿ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ.

  • ಸೌದಿ ಅರೇಬಿಯಾದಲ್ಲಿ ಬದಲಾವಣೆ ಗಾಳಿ- ವಾಹನ ಚಲಾವಣೆ ಪರವಾನಗಿ ಬಳಿಕ ಮಹಿಳೆಯರಿಗೆ ಕ್ರೀಡಾಂಗಣ ಪ್ರವೇಶ

    ಸೌದಿ ಅರೇಬಿಯಾದಲ್ಲಿ ಬದಲಾವಣೆ ಗಾಳಿ- ವಾಹನ ಚಲಾವಣೆ ಪರವಾನಗಿ ಬಳಿಕ ಮಹಿಳೆಯರಿಗೆ ಕ್ರೀಡಾಂಗಣ ಪ್ರವೇಶ

    ರಿಯಾದ್: ಕ್ರೀಡಾಂಗಣಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ಕುರಿತು ಈ ಹಿಂದೆ ಮಾಹಿತಿ ನೀಡಿದ್ದ ಸೌದಿ ಸರ್ಕಾರ ಶುಕ್ರವಾರ ಮಹಿಳೆಯರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡಿದೆ.

    ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕವಾದ ಆಸನ ವ್ಯವಸ್ಥೆ ಮಾಡಲಾಗಿದ್ದು, ಹಲವು ಮಹಿಳೆಯರು ಕುಟುಂಬ ಸಮೇತರಾಗಿ ಕುಳಿತು ಫುಟ್ ಬಾಲ್ ವಿಕ್ಷೀಸಿದರು.

    ಮಹಿಳೆಯರಿಗೆ ಅತ್ಯಂತ ಹೆಚ್ಚು ಕಟ್ಟುಪಾಡುಗಳನ್ನು ವಿಧಿಸಿದ್ದ ದೇಶ ಎಂದೇ ಕರೆಸಿಕೊಂಡಿದ್ದ ಸೌದಿ ಅರೇಬಿಯಾ, ಕ್ರೀಡಾ ಕ್ಷೇತ್ರದಿಂದ ಮಹಿಳೆಯರನ್ನು ದೂರವೇ ಇಟ್ಟಿತ್ತು. ಆದರೆ ಇದೀಗ ಮಹಿಳೆಯರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡುವ ಐತಿಹಾಸಿಕ ನಿರ್ಧಾರದಿಂದ ಸೌದಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಲಭಿಸಿದೆ.

    ಸೌದಿಯ ರಿಯಾದ್, ಜೆದ್ದಾ, ದಮ್ಮಮ್‍ನ ಮೂರು ಕ್ರೀಡಾಂಗಣಗಳಲ್ಲಿ ಕುಟುಂಬ ಸಮೇತರಾಗಿ ಬರುವವರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಹಿಳೆಯರಿಗಾಗಿಯೇ ಪ್ರತ್ಯೇಕ ರೆಸ್ಟೋರೆಂಟ್, ಕೆಫೆ ಮತ್ತು ವಿಡಿಯೋ ಪರದೆಗಳು, ಪ್ರವೇಶದ್ವಾರ, ಪಾರ್ಕಿಂಗ್ ಗೆ ಸ್ಥಳವನ್ನು ಮೀಸಲಿಡಲಾಗಿತ್ತು. ಪುರುಷರು ಕುಳಿತುಕೊಳ್ಳುವ ಆಸನಗಳು, ಮಹಿಳಾ ಅಭಿಮಾನಿಗಳ ಆಸನ ನಡುವೆ ಗ್ಲಾಸ್ ಪ್ಯಾಲನ್ ಅಳವಡಿಸಲಾಗಿತ್ತು.

    ಈ ಕುರಿತು ಘಾಬ್ಡಿ ಎಂಬ ಯುವತಿ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ತಾನು ತನ್ನ ತಂದೆ ಹಾಗೂ ಸಹೋದರರೊಂದಿಗೆ ಬಂದಿದ್ದೇನೆ. ತಾನು ಆಲ್ ಆಲಿ ತಂಡದ ಅಭಿಮಾನಿ. ಇಷ್ಟು ದಿನ ನಾವು ಮನೆಯಿಂದಲೇ ಅವರಿಗೆ ಬೆಂಬಲ ನೀಡುತ್ತಿದ್ದೇವು, ಆದರೆ ಇಂದು ಕ್ರೀಡಾಂಗಣದಲ್ಲಿ ಬೆಂಬಲ ನೀಡುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.

    ಕಳೆದ ಜೂನ್ ನಲ್ಲಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದ ಸರ್ಕಾರ ಮಹಿಳೆಯರಿಗೆ ಕಾರು ಚಾಲನೆಗೆ ಪರವಾನಗಿ ನೀಡಿತ್ತು.

  • ತಾಯಿಗಿಂತಲೂ ಹೆಚ್ಚು ಪ್ರೀತಿಸಿದ್ದಕ್ಕೆ ಪತಿಗೆ ಪತ್ನಿಯಿಂದ ವಿಚ್ಛೇದನ!

    ತಾಯಿಗಿಂತಲೂ ಹೆಚ್ಚು ಪ್ರೀತಿಸಿದ್ದಕ್ಕೆ ಪತಿಗೆ ಪತ್ನಿಯಿಂದ ವಿಚ್ಛೇದನ!

    ರಿಯಾದ್: ಪತಿ ನನ್ನನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕೆ ವಿವಾಹ ವಿಚ್ಛೇದನ ಪಡೆಯುವುದನ್ನು ನೋಡಿದ್ದೇವೆ. ಆದರೆ ಸೌದಿ ಅರೇಬಿಯಾದ ಮಹಿಳೆಯೊಬ್ಬರು ತಾಯಿಗಿಂತಲೂ ನನ್ನನ್ನು ಹೆಚ್ಚು ಪ್ರೀತಿಸಿದ್ದಕ್ಕೆ ಪತಿಗೆ ವಿಚ್ಛೇದನ ನೀಡಿದ್ದಾರೆ.

    ಹೌದು, ಕೋರ್ಟ್ ನಲ್ಲಿ ನ್ಯಾಯಾಧೀಶರು ವಿಚ್ಛೇದನ ಪಡೆಯಲು ಕಾರಣ ಕೇಳಿದ ಸಂದರ್ಭದಲ್ಲಿ ಮಹಿಳೆ, ತನ್ನ ಪತ್ನಿಗಾಗಿ ಎಲ್ಲವನ್ನೂ ಮಾಡುವ ಮನುಷ್ಯನನ್ನು ನಾನು ಎಂದಿಗೂ ನಂಬುವುದಿಲ್ಲ. ಏಕೆಂದರೆ ತನ್ನ ಸ್ವಂತ ತಾಯಿಗಾಗಿ ಸಣ್ಣ ಸಹಾಯವನ್ನು ಮಾಡುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ತನ್ನ ಸ್ವಂತ ತಾಯಿಗೆ ಉತ್ತಮ ಮಗನಾಗಿರದೇ ಇದ್ದಲ್ಲಿ ಆತನನ್ನು ನಂಬಲು ಸಾಧ್ಯವಿಲ್ಲ. ಆತ ಭವಿಷ್ಯದಲ್ಲಿ ತನಗೂ ಇದೇ ಸ್ಥಿತಿ ಉಂಟುಮಾಡಬಹುದು ಎಂದು ತಿಳಿಸಿರುವುದಾಗಿ ಸೌದಿ ಮಾಧ್ಯಮ ವರದಿ ಮಾಡಿದೆ.

    ತನ್ನ ತಾಯಿಯನ್ನು ಕೈಬಿಟ್ಟ ರೀತಿಯಲ್ಲಿ ತನ್ನನ್ನು ಭವಿಷ್ಯದಲ್ಲಿ ಬಿಟ್ಟು ಬಿಡುವ ದಿನಕ್ಕಾಗಿ ನಾನು ಕಾಯಲು ಸಿದ್ಧವಿಲ್ಲ ಎಂದು ತಿಳಿಸಿದ್ದಾರೆ. ವಿಚಾರಣೆ ವೇಳೆ ಪತಿ, ನಿನಗಾಗಿ ನನ್ನ ಕುಟುಂಬವನ್ನು ತ್ಯಜಿಸಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪತ್ನಿ, ಈ ಕಾರಣಕ್ಕೆ ನಾನು ನಿನಗೆ ವಿಚ್ಛೇದನ ನೀಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

    ಪತ್ನಿ ಮಾತು ಕೇಳಿ ಶಾಕ್ ಒಳಗಾದ ಪತಿ ತನ್ನ ಪತ್ನಿಗೆ ವಿಚ್ಛೇದನ ನೀಡಲು ನಿರಾಕರಿಸಿದ್ದು, ಆಕೆಗಾಗಿ ಏನು ಬೇಕಾದರು ಮಾಡಲು ಸಿದ್ಧ ಎಂದು ಮನವಿ ಸಲ್ಲಿಸಿದ್ದಾರೆ. ಆದರೆ ಮಹಿಳೆ ಪತಿಯ ಮನವಿಯನ್ನು ತಿರಸ್ಕರಿಸಿದ್ದಾರೆ.

    ಪತಿ ತಾನು ಬಯಸಿದ ವಿದೇಶಿ ಪ್ರವಾಸ ಸೇರಿದಂತೆ, ಎಲ್ಲವನ್ನೂ ಖರೀದಿಸಲು ಹಣ ಖರ್ಚು ಮಾಡಿದ್ದು, ತನ್ನನ್ನು ಸಂತೋಷದಿಂದ ನೋಡಿಕೊಂಡಿದ್ದಾರೆ. ಆದರೆ ನನ್ನ ವಿಚ್ಛೇದನ ನಿರ್ಧಾರ ಮಾತ್ರ ಬದಲಾಗುವುದಿಲ್ಲ ಎಂದು ಪತ್ನಿ ಹೇಳಿದ್ದಾರೆ.

    ಮಾಧ್ಯಮ ವರದಿಯ ಪ್ರಕಾರ ಮಹಿಳೆಯೂ ಪತಿ ನೀಡಿದ ವರದಕ್ಷಿಣೆಯನ್ನು ಹಿಂದಿರುಗಿಸಿದ್ದು, ಮಹಿಳೆ ವಾದ ಕೇಳಿದ ನ್ಯಾಯಾಧೀಶರು ವಿಚ್ಛೇದನವಕ್ಕೆ ಒಪ್ಪಿಗೆ ನೀಡಿದ್ದಾರೆ.

  • ಅರ್ಧಕ್ಕೇ ನಿಂತ್ಹೊಯ್ತು ಸೌದಿ ರಾಜನ ‘ಚಿನ್ನದ ಎಸ್ಕಲೇಟರ್’- ವಿಡಿಯೋ ವೈರಲ್

    ಅರ್ಧಕ್ಕೇ ನಿಂತ್ಹೊಯ್ತು ಸೌದಿ ರಾಜನ ‘ಚಿನ್ನದ ಎಸ್ಕಲೇಟರ್’- ವಿಡಿಯೋ ವೈರಲ್

    ಮಾಸ್ಕೋ: ಹೊಳೆಯೋದೆಲ್ಲಾ ಚಿನ್ನ ಅಲ್ಲ ಅಂತ ಮಾತಿದೆ. ಆದ್ರೆ ಇಲ್ಲಿ ಹೊಳೆಯುತ್ತಿದ್ದದ್ದು ಚಿನ್ನವೇ. ಆದ್ರೆ ಸರಿಯಾಗಿ ಕೆಲಸ ಮಾಡ್ತಿರ್ಲಿಲ್ಲ ಅಷ್ಟೇ! ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಕಳೆದ ಬುಧವಾರ ಮಾಸ್ಕೋ ಭೇಟಿಗೆಂದು ಬಂದಿದ್ರು. ಈ ವೇಳೆ ಅವರು ತಮ್ಮ ಖಾಸಗಿ ಪ್ಲೇನ್‍ನಿಂದ ಹೊರಬರುತ್ತಿದ್ದಂತೆ ತೊಂದರೆ ಎದುರಾಯ್ತು.

    ದುಬಾರಿ ಪ್ರಯಾಣ ಮಾಡೋದ್ರಲ್ಲಿ ಫೇಮಸ್ ಆಗಿರೋ ರಾಜ ಪ್ಲೇನ್‍ನಿಂದ ಹೊರಬಂದು ಮಿರಮಿರ ಮಿಂಚುತ್ತಿದ್ದ ಚಿನ್ನದ ಎಸ್ಕಲೇಟರ್ ಮೇಲೆ ನಿಂತ್ರು. ಆದ್ರೆ ಅದ್ಯಾಕೋ ಎಸ್ಕಲೇಟರ್ ಅರ್ಧಕ್ಕೇ ನಿಂತುಹೋಯ್ತು. ಇದರಿಂದ ಸ್ವಲ್ಪ ಸಮಯ ರಾಜ ಹಾಗೂ ಅವರ ಜೊತೆಯಿದ್ದ ಸಿಬ್ಬಂದಿ ಕನ್‍ಫ್ಯೂಸ್ ಆಗಿ ನಿಂತಲ್ಲೇ ನಿಂತಿದ್ರು.

    ನಂತರ ರಾಜ ಕಾಲ್ನಡಿಗೆಯಲ್ಲೇ ಉಳಿದ ಮೆಟ್ಟಿಲುಗಳನ್ನ ಇಳಿದ್ರು. 81 ವರ್ಷದ ಸಲ್ಮಾನ್ ಅವರು ಕೆಳಗಿಳಿಯುತ್ತಿದ್ರೆ ಅವರ ಸಹಾಯಕರು ಗೊಂದಲದಲ್ಲೇ ಹಿಂಬಾಲಿಸಿದ್ರು. ಇದರ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಹಾಸ್ಯಾಸ್ಪದ ಕಮೆಂಟ್‍ಗಳು ಬಂದಿವೆ.

    ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ 4 ದಿನಗಳ ರಷ್ಯಾ ಪ್ರವಾಸದಲ್ಲಿದ್ದಾರೆ. ವಿಶೇಷ ಎಸ್ಕಲೇಟರ್ ಮಾತ್ರವಲ್ಲದೆ ತನ್ನ ಜೊತೆಗೆ 1500 ಜನರನ್ನ ಕರೆತಂದಿದ್ದಾರೆ. ಕಾರ್ಪೆಟ್ ಸೇರಿದಂತೆ ಸ್ವಂತ ಪೀಠೋಪಕರಣ ಹಾಗೂ 800 ಕೆಜಿ ಆಹಾರ ಸಾಮಗ್ರಿಗಳನ್ನ ಸೌದಿಯಿಂದ ಜೊತೆಯಲ್ಲಿ ತಂದಿದ್ದಾರೆ.

    https://twitter.com/RT_com/status/915974579604066305?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fwatch-saudi-king-salman-bin-abdulazizs-gold-escalator-stops-midway-then-this-1759434

    https://twitter.com/Tin_Tin_in_Tibt/status/915999095587819520?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fwatch-saudi-king-salman-bin-abdulazizs-gold-escalator-stops-midway-then-this-1759434

    https://twitter.com/SeeboldHelen/status/916037244103905280?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fwatch-saudi-king-salman-bin-abdulazizs-gold-escalator-stops-midway-then-this-1759434

    https://twitter.com/sukhan85/status/916049111144480769?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fwatch-saudi-king-salman-bin-abdulazizs-gold-escalator-stops-midway-then-this-1759434

  • ಪೆಟ್ರೋಲ್ ಬಂಕ್‍ನಲ್ಲಿ ಇದ್ದಕ್ಕಿದ್ದಂತೆ ಕಾರ್‍ಗೆ ಬೆಂಕಿ- ಮುಂದೇನಾಯ್ತು? ವಿಡಿಯೋ ನೋಡಿ

    ಪೆಟ್ರೋಲ್ ಬಂಕ್‍ನಲ್ಲಿ ಇದ್ದಕ್ಕಿದ್ದಂತೆ ಕಾರ್‍ಗೆ ಬೆಂಕಿ- ಮುಂದೇನಾಯ್ತು? ವಿಡಿಯೋ ನೋಡಿ

    ರಿಯಾದ್: ಪೆಟ್ರೋಲ್ ಬಂಕ್‍ನಲ್ಲಿ ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಥಳದಲ್ಲಿದ್ದವರನ್ನು ಆತಂಕಕ್ಕೀಡುಮಾಡಿದ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

    ಪೆಟ್ರೋಲ್ ಬಂಕ್‍ನಲ್ಲಿ ನಿಂತಿದ್ದ ಬಿಳಿ ಬಣ್ಣದ ಎಸ್‍ಯುವಿ ಕಾರ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರಿನ ಚಾಲಕಿ ಕೆಳಗಿಳಿದಿದ್ದು, ಕಾರ್‍ನಲ್ಲಿದ್ದ ಮತ್ತೊಬ್ಬ ಮಹಿಳೆ ಕೂಡ ಆತಂಕದಿಂದ ಹೊರಗೆ ಬಂದಿದ್ದಾರೆ. ನಂತರ ಕಾರಿನಿಂದ ಬೆಂಕಿಯ ಜ್ವಾಲೆ ದಟ್ಟವಾಗಿ ಆವರಿಸಿದೆ. ಈ ವೇಳೆ ಕೆಲವರು ಕಾರಿನ ಬೆಂಕಿ ಆರಿಸಲು ದೌಡಾಯಿಸಿದ್ರೆ ಇನ್ನೂ ಕೆಲವರು ತಮ್ಮ ವಾಹನಗಳನ್ನ ಅಲ್ಲಿಂದ ತೆಗೆಯಲು ಓಡಿದ್ದಾರೆ.

    ಅದೃಷ್ಟವಶಾತ್ ಸ್ಥಳದಲ್ಲಿದ್ದ ಕೆಲವರು ಫೈರ್ ಎಕ್ಟಿಂಗ್ವಿಶರ್ ಬಳಸಿ ಕೆಲವೇ ಸೆಕೆಂಡ್‍ಗಳಲ್ಲಿ ಬೆಂಕಿಯನ್ನ ನಂದಿಸಿ, ಕಾರನ್ನು ಅಲ್ಲಿಂದ ತಳ್ಳಿಕೊಂಡು ಬೇರೆಡೆಗೆ ಬಿಟ್ಟಿದ್ದಾರೆ. ಈ ಎಲ್ಲಾ ದೃಶ್ಯ ಪೆಟ್ರೋಲ್ ಬಂಕ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಯಾರಿಗೂ ಯವುದೇ ಅಪಾಯವಾಗಿಲ್ಲ

    ಆದ್ರೆ ಬೆಂಕಿ ನಂದಿಸಿದವರು ತರಾತುರಿಯಲ್ಲಿ ಹೆಚ್ಚಿನ ಎಕ್ಸಿಂಗ್ವಿಶರ್ ಬಳಸಿದ್ದಕ್ಕೆ ವಿಡಿಯೋ ನೋಡಿದವರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. 6 ತಿಂಗಳವರೆಗೆ ಬೆಂಕಿ ನಂದಿಸಬಹುದಾಗಿದ್ದ ಸೌದಿ ಅರೇಬಿಯಾದ ಅಗ್ನಿ ನಿಯಂತ್ರಣ ಸಾಮಥ್ರ್ಯವನ್ನೇ ಖಾಲಿ ಮಡ್ಬಿಟ್ರು ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಅಷ್ಟೂ ಎಕ್ಟಿಂಗ್ವಿಶರ್ ಬಳಸಿ ಸೂರ್ಯನನ್ನೇ ನಂದಿಸಬಹುದಿತ್ತು ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

    https://www.youtube.com/watch?v=1NXeygw1olU

  • ನ್ಯೂಸ್‍ಪೇಪರ್ ಜಾಹಿರಾತಿನಲ್ಲಿ ಪತಿಯಿಂದ ಹೆಂಡ್ತಿಗೆ ತಲಾಖ್

    ನ್ಯೂಸ್‍ಪೇಪರ್ ಜಾಹಿರಾತಿನಲ್ಲಿ ಪತಿಯಿಂದ ಹೆಂಡ್ತಿಗೆ ತಲಾಖ್

    ಹೈದರಾಬಾದ್: ವಾಟ್ಸಪ್‍ನಲ್ಲಿ, ಪೋಸ್ಟ್ ಮೂಲಕ ವಿಚ್ಚೇದನ ನೀಡಿದ ಪ್ರಕರಣಗಳನ್ನ ಈಗಾಗಲೇ ಕೇಳಿದ್ದೀವಿ. ಈಗ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿಯೊಬ್ಬ ಹೈದರಾಬಾದ್‍ನಲ್ಲಿರುವ ತನ್ನ 25 ವರ್ಷದ ಹೆಂಡತಿಗೆ ನ್ಯೂಸ್‍ಪೇಪರ್ ಜಾಹಿರಾತಿನ ಮೂಲಕ ತಲಾಖ್ ನೀಡಿರೋದು ಸುದ್ದಿಯಾಗಿದೆ.

    ಜಾಹಿರಾತಿನ ಮೂಲಕ ವಿಚ್ಚೇದನ ನೀಡಿದ ಮೊಹಮ್ಮದ್ ಮುಶ್ತಾಕುದ್ದೀನ್‍ನನ್ನು ವಂಚನೆ ಅರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

    ಮಾರ್ಚ್ 4ರಂದು ಸ್ಥಳೀಯ ಉರ್ದು ಪತ್ರಿಕೆಯೊಂದರಲ್ಲಿ ತನ್ನ ಪತಿ ವಿಚ್ಚೇದನ ನೀಡಿರುವ ಜಾಹಿರಾತನ್ನು ನೋಡಿ ಮಹಿಳೆ ಶಾಕ್ ಆಗಿದ್ರು. ನಂತರ ಆಕೆಗೆ ಗಂಡನ ಪರ ವಕೀಲರಿಂದ ಕರೆ ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಇದನ್ನೂ ಓದಿ: ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ಮೊಹಮ್ಮದ್ ಮುಶ್ತಾಕುದ್ದೀನ್ ಮಹಿಳೆಯನ್ನ 2015ರಲ್ಲಿ ಮದುವೆಯಗಿ, 5 ತಿಂಗಳ ಬಳಿಕ ಸೌದಿ ಅರೇಬಿಯಾಗೆ ಕರೆದುಕೊಂಡು ಹೋಗಿದ್ದ. ಕಳೆದ ವರ್ಷ ಈ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಎರಡು ತಿಂಗಳ ಹಿಂದೆ ಇಬ್ಬರೂ ಭಾರತಕ್ಕೆ ಬಂದಿದ್ದು, ಗಂಡನೊಂದಿಗೆ ಜಗಳವಾಡಿಕೊಂಡು ಮಹಿಳೆ ತವರು ಮನೆಗೆ ಹೋಗಿದ್ದರು. ಇದಾದ 3 ವಾರಗಳ ಬಳಿಕ ಮುಶ್ತಾಕುದ್ದೀನ್ ಹೆಂಡತಿಗೆ ಒಂದು ಮತನ್ನೂ ತಿಳಿಸದೆ ಸೌದಿ ಅರೇಬಿಯಾಗೆ ಹಿಂದಿರುಗಿದ್ದ. ಎಷ್ಟು ಬಾರಿ ಫೋನ್ ಮಾಡಿದ್ರೂ ಮುಶ್ತಾಕುದ್ದೀನ್ ಪ್ರತಿಕ್ರಿಯಿಸಿರಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ನಂತರ ಆಕೆಯ ಮಾವ ಕೂಡ ಮುಶ್ತಾಕುದ್ದೀನ್ ಸೌದಿ ಅರೇಬಿಯಾಗೆ ಹೋಗಿರೋದಾಗಿ ಹೇಳಿ ಆಕೆಯನ್ನ ಮನೆಗೆ ಸೇರಿಸಿರಲಿಲ್ಲ.

    ನಾನು ಏನಾದ್ರೂ ತಪ್ಪು ಮಾಡಿದ್ದರೆ ನನ್ನೊಂದಿಗೆ ಹಾಗೂ ನನ್ನ ಪೋಷಕರೊಂದಿಗೆ ಮಾತನಾಡಬೇಕಿತ್ತು. ಒಂದು ವೇಳೆ ನನ್ನ ತಪ್ಪಿದ್ದಿದ್ದರೆ ಹೇಗೆ ಎಲ್ಲಾ ಸಂಬಂಧಿಕರ ಮುಂದೆ ನನ್ನನ್ನು ಮದುವೆಯದ್ರೋ ಅದೇ ರೀತಿ ಎಲ್ಲರ ಮುಂದೆಯೇ ತಲಾಖ್ ನೀಡಬೇಕಿತ್ತು. ನನ್ನನ್ನು ಭೇಟಿಯಾಗದೆ ಸೌದಿ ಅರೇಬಿಯಾಗೆ ಯಾಕೆ ಓಡಿಹೋದ್ರು? 10 ತಿಂಗಳ ಮಗು ಇದ್ದರೂ ಜಾಹಿರಾತಿನ ಮೂಲಕ ವಿಚ್ಚೇದನ ನೀಡಿದ್ದಾರಲ್ಲಾ ಎಂದು ಮಹಿಳೆ ಅಲವತ್ತುಕೊಂಡಿದ್ದಾರೆ. ಪೊಲೀಸರು ಹೇಳೋ ಪ್ರಕಾರ ಮುಶ್ತಾಕುದ್ದೀನ್ 20 ಲಕ್ಷ ರೂ. ವರದಕ್ಷಿಣೆಗಾಗಿ ಹೆಂತಿಯನ್ನ ಪೀಡಿಸಿದ್ದ ಎನ್ನಲಾಗಿದೆ.

    ಈ ಬಗ್ಗೆ ತನಿಖೆ ಮಾಡಲಾಗುತ್ತಿದ್ದು, ಷರಿಯಾ(ಇಸ್ಲಾಂ ಕಾನೂನು) ಅಡಿ ನ್ಯೂಸ್‍ಪೇಪರ್ ಜಾಹಿರಾತಿನ ಮೂಲಕ ನೀಡಲಾದ ವಿಚ್ಚೇದನ ಮಾನ್ಯವಾಗುತ್ತಾ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

     

    ಇದನ್ನೂ ಓದಿ: ಮದ್ವೆಯಾದ 10 ದಿನದಲ್ಲಿ ತಲಾಖ್ ಕೊಟ್ಟ ಪತಿ ಅರೆಸ್ಟ್

  • ಸೌದಿ ಅರೇಬಿಯಾದಿಂದ 39 ಸಾವಿರ ಪಾಕ್ ಪ್ರಜೆಗಳ ಗಡೀಪಾರು

    ರಿಯಾದ್: ವೀಸಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನೆಲೆಸಿದ್ದಕ್ಕೆ ಸೌದಿ ಅರೇಬಿಯಾ 39 ಸಾವಿರ ಪಾಕಿಸ್ತಾನದ ಪ್ರಜೆಗಳನ್ನು ಗಡೀಪಾರು ಮಾಡಿದೆ.

    ವೀಸಾ ಉಲ್ಲಂಘಿಸಿದ್ದಕ್ಕೆ ಕಳೆದ ನಾಲ್ಕು ತಿಂಗಳಿನಲ್ಲಿ ಸುಮಾರು 39 ಸಾವಿರ ಪಾಕಿಸ್ತಾನ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದು ಸೌದಿ ಅರೇಬಿಯಾದ ಭದ್ರತಾ ಮೂಲಗಳನ್ನು ಆಧಾರಿಸಿ ‘ಸೌದಿ ಗ್ಯಾಜೆಟ್’ ವರದಿ ಮಾಡಿದೆ.

    ಕೆಲ ಪಾಕಿಸ್ತಾನ ಪ್ರಜೆಗಳು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಜೊತೆ ತೊಡಗಿದ್ದ ಹಿನ್ನೆಲೆಯಲ್ಲಿ ಅವರ ದಾಖಲೆ ಪರಿಶೀಲಿಸುವಂತೆ ಭದ್ರತಾ ಅಧಿಕಾರಿಗಳು ಆದೇಶಿಸಿದ್ದಾರೆಂದು ಪತ್ರಿಕೆ ತಿಳಿಸಿದೆ. ಕಳ್ಳತನ, ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ, ನಕಲು ಮತ್ತು ಹಲ್ಲೆಯಂತಹ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಇನ್ನುಳಿದವರನ್ನು ಸ್ವದೇಶಕ್ಕೆ ಕಳುಹಿಸಲಾಗಿದೆ ಎಂದು ಹೇಳಿದೆ.

    ಫೆಬ್ರವರ ಮೊದಲ ವಾರದಲ್ಲಿ ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನೀಡದೇ ಇರಲು ಕುವೈತ್ ನಿರ್ಧರಿಸಿದೆ. ಪಾಕಿಸ್ತಾನ, ಸಿರಿಯಾ, ಇರಾಕ್, ಆಫ್ಘಾನಿಸ್ಥಾನ ಮತ್ತು ಇರಾನ್ ರಾಷ್ಟ್ರಗಳ  ಇಸ್ಲಾಮಿಕ್ ಉಗ್ರಗಾಮಿಗಳ ವಲಸೆ ತಡೆಯಲು ಕುವೈತ್ ವೀಸಾ ನೀಡದೇ ಇರುವ ನಿರ್ಧಾರಕ್ಕೆ ಬಂದಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಆದರೆ ಈ ವರದಿಯನ್ನು ಪಾಕಿಸ್ತಾನ ನಿರಾಕರಿಸಿತ್ತು.