Tag: Satyanarayan Puja

  • ಸತ್ಯನಾರಾಯಣ ದೇವರ ಪ್ರಸಾದದಿಂದ ನಾನು ಜನಿಸಿದ್ದೆ ಎಂದಿದ್ದ ಸರೋಜಾದೇವಿ

    ಸತ್ಯನಾರಾಯಣ ದೇವರ ಪ್ರಸಾದದಿಂದ ನಾನು ಜನಿಸಿದ್ದೆ ಎಂದಿದ್ದ ಸರೋಜಾದೇವಿ

    ನಾನು ಸತ್ಯನಾರಾಯಣ (Satyanarayan Puja) ದೇವರ ಪ್ರಸಾದದಿಂದ (Prasada) ಜನಿಸಿದ್ದೆ. ಈ ಕಾರಣಕ್ಕೆ ನನ್ನ ತಾಯಿಗೆ ನಾನು ಅಂದರೆ ಬಹಳ ಪ್ರೀತಿ ಎಂದು ಬಿ ಸರೋಜಾದೇವಿ(87) ಹೇಳಿದ್ದರು.

    ಹೌದು. ಬಹುಭಾಷಾ ನಟಿಯಾಗಿರುವ ಸರೋಜಾದೇವಿ (B Saroja Devi ) ಅವರು ಇಂದು ವಿಧಿವಶರಾಗಿದ್ದಾರೆ. 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಇವರು ಕನ್ನಡ ಚಿತ್ರರಂಗದಲ್ಲಿ ʼಅಭಿನಯ ಸರಸ್ವತಿʼ ಎಂದೇ ಹೆಸರು ಪಡೆದಿದ್ದರು.

    ಸರೋಜಾದೇವಿ ಅವರ ಬಗ್ಗೆ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಸಾಕ್ಷ್ಯಚಿತ್ರವನ್ನು ತಯಾರಿಸಿತ್ತು. ಈ ಸಾಕ್ಷ್ಯಚಿತ್ರದಲ್ಲಿ ಅವರು ತಮ್ಮ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ:1 ಲಕ್ಷ ಹಣ, ಉಂಗುರ ನೀಡಿ ಕಲಾವಿದರನ್ನು ಸನ್ಮಾನಿಸಿ ಪ್ರಚಾರದಿಂದ ದೂರ ಇರುತ್ತಿದ್ರು : ಗಿರಿಜಾ ಲೋಕೇಶ್

    ಸರೋಜಾದೇವಿ ಹೇಳಿದ್ದೇನು?
    ನನ್ನ ತಾಯಿ ರುದ್ರಮ್ಮ ನಾಲ್ಕನೇಯ ಬಾರಿ ಗರ್ಭವತಿಯಾಗಿದ್ದರು. ಡೆಲಿವರಿ ಸಮಯ ಹತ್ತಿರ ಬಂದಾಗ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ನಮ್ಮ ಮನೆಯ ಹತ್ತಿರದಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು.

    ನನ್ನ ತಾಯಿ ಹೊಟ್ಟೆನೋವಿನಿಂದ ಬಳಲುವುದನ್ನು ನೋಡಿ ನೆರೆ ಮನೆಯವರು ದೊನ್ನೆಯಲ್ಲಿ ಸತ್ಯನಾರಾಯಣ ದೇವರ ಸಜ್ಜಿಗೆ ಪ್ರಸಾದವನ್ನು ನೀಡಿದರು. ಸಜ್ಜಿಗೆ ಪ್ರಸಾದವನ್ನು ತಾಯಿ ಸೇವಿಸಿದ ಕೆಲ ಸಮಯದಲ್ಲಿ ಹೆಣ್ಣು ಮಗುವಿಗೆ ಜನನ ನೀಡಿದರು. ಇದನ್ನೂ ಓದಿ: ಕೆಲಸಕ್ಕೆ ಬಾರದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ನಟಿಯೆಂದು ಹೇಳ್ಕೊತಾರೆ, ಇವ್ರು ಇದನ್ನೆಲ್ಲ ಮಾಡ್ಲೇ ಇಲ್ಲ ರಾಜೇಂದ್ರ ಸಿಂಗ್ ಬಾಬು

    ಮೊದಲ ಮೂರು ಹೆಣ್ಣು ಮಕ್ಕಳೇ  ಆಗಿದ್ದರಿಂದ ಸಂಬಂಧಿಕರು ನಾಲ್ಕನೇಯ ಹೆಣ್ಣು ಮಗುವನ್ನು ಯಾರಿಗಾದರೂ ಕೊಡು ಎಂದು ತಾಯಿಗೆ ಹೇಳಿದ್ದರು. ಆದರೆ ತಾಯಿ ನನ್ನನ್ನು ಯಾರಿಗೆ ಕೊಡಲಿಲ್ಲ. ನನ್ನ ಬಹಳ ಪ್ರೀತಿಯಿಂದ ಸಾಕಿದ್ದರು. ಅಂದು ನನಗೆ ಬಹಳ ಪ್ರೋತ್ಸಾಹ ನೀಡಿದ್ದರಿಂದ ನಾನು ಕಲಾವಿದೆಯಾದೆ ಎಂದು ಹೇಳಿದ್ದರು.

    ಬಹಳ ದೈವ ಭಕ್ತೆಯಾಗಿದ್ದ ಸರೋಜಾದೇವಿ ಅವರು ಪ್ರತಿನಿತ್ಯ ಬೆಳಗ್ಗೆ ಎದ್ದು ಪೇಪರ್‌ ಓದುತ್ತಿದ್ದರು. ನಂತರ ಸ್ನಾನ ಮಾಡಿ ಪೂಜೆ ಮಾಡಿ ತಿಂಡಿ ತಿನ್ನುತ್ತಿದ್ದರು. ಇಂದು ಸ್ನಾನ ಮಾಡಿ ಪೂಜೆ ಮಾಡಿದ ಬಳಿಕ ಬೆಳಗ್ಗೆ 9 ಗಂಟೆಯ ವೇಳೆಗೆ ಟಿವಿ ಆನ್‌ ಮಾಡಿದ್ದರು. ಈ ವೇಳೆ ಅವರು ತುಂಬಾ ಸುಸ್ತಾಗಿದ್ದರು. ಅರೆಪ್ರಜ್ಞಾವಸ್ಥೆ ಸ್ಥಿತಿಗೆ ಹೋದ ಕೂಡಲೇ ಅವರನ್ನು ಮಲ್ಲೇಶ್ವರದಲ್ಲಿರುವ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಅವರು ಮೃತಪಟ್ಟಿದ್ದರು.

  • ಮದ್ವೆಯಾಗಲು ಹುಡುಗಿ ಸಿಗಲೆಂದು ಮಾಡಿದ ಪೂಜೆ ವಿಫಲ- ಅರ್ಚಕನ ಕಿವಿಯನ್ನೇ ಕಚ್ಚಿದ!

    ಮದ್ವೆಯಾಗಲು ಹುಡುಗಿ ಸಿಗಲೆಂದು ಮಾಡಿದ ಪೂಜೆ ವಿಫಲ- ಅರ್ಚಕನ ಕಿವಿಯನ್ನೇ ಕಚ್ಚಿದ!

    ಭೋಪಾಲ್: ಸತ್ಯನಾರಾಯಣ ಪೂಜೆ ಮಾಡಿದರೂ ಹುಡುಗಿ ಸಿಗಲಿಲ್ಲ ಎಂದು ಪೂಜಾರಿ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

    ರಾಜಸ್ಥಾನದ ಕೋಟಾ ನಿವಾಸಿ ಕುಂಜ್‌ಬಿಹಾರಿ ಶರ್ಮಾ ಹಲ್ಲೆಗೊಳಗಾದ ಅರ್ಚಕ. ಸತ್ಯನಾರಾಯಣ ಪೂಜೆ ವೇಳೆ ಕೆಲವು ತಪ್ಪುಗಳು ನಡೆದಿದೆ ಎಂಬ ಶಂಕೆಯ ಮೇಲೆ ಲಕ್ಷ್ಮಿಕಾಂತ್ ಶರ್ಮಾ (60) ಹಾಗೂ ಮಕ್ಕಳಾದ ವಿಪುಲ್ ಹಾಗೂ ಅರುಣ್ ಸೇರಿ ಥಳಿಸಿ ಅರ್ಚಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

    ಲಕ್ಷ್ಮಿಕಾಂತ್ ಶರ್ಮಾ ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ನಡೆಸಲು ಅರ್ಚಕ ಕುಂಜ್ ಬಿಹಾರಿ ಶರ್ಮಾರನ್ನು ಆಹ್ವಾನಿಸಿದ್ದರು. ಆ ಪ್ರಕಾರವಾಗಿಯೇ ಅರ್ಚಕರು ಪೂಜೆ ಮಾಡಿ ಮನೆಗೆ ತೆರಳಿದ್ದಾರೆ. ಆದರೆ ತಡರಾತ್ರಿ ಲಕ್ಷ್ಮಿಕಾಂತ್ ಶರ್ಮಾ ಹಾಗೂ ಆತನ ಮಗ ವಿಪುಲ್ ಹಾಗೂ ಅರುಣ್ ಅರ್ಚಕನ ಮನೆಗೆ ಬಂದಿದ್ದಾರೆ. ಪೂಜೆ ಸರಿಯಾಗಿಲ್ಲ ಎಂದು ಕೋಪಿಸಿಕೊಂಡು ಆ ಮೂವರು ಸೇರಿ ಅರ್ಚಕರಿಗೆ ಹೊಡೆದಿದ್ದಾರೆ. ಈ ವೇಳೆ ವಿಪುಲ್ ಅರ್ಚಕನ ಕಿವಿಯನ್ನು ಕಚ್ಚಿ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – 20 ಮಂದಿ ನಾಪತ್ತೆ

    ಘಟನೆಗೆ ಸಂಬಂಧಿಸಿ ಅರ್ಚಕನನ್ನು ನೆರೆಹೊರೆಯವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಕುರಿತು ಅರ್ಚಕ ಶರ್ಮಾ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಲಕ್ಷ್ಮಿಕಾಂತ್ ಶರ್ಮಾ ಹಾಗೂ ಆತನ ಮಕ್ಕಳಾದ ವಿಪುಲ್, ಅರುಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಈಗ ಭಾರತಕ್ಕೆ 2ನೇ ಅತಿ ದೊಡ್ಡ ತೈಲ ಪೂರೈಕೆದಾರ

    Live Tv
    [brid partner=56869869 player=32851 video=960834 autoplay=true]